Tag: ಹಾರಾಜು

  • ಸಂಸದರನ್ನ ಹುಬ್ಬಳ್ಳಿಯಲ್ಲಿ  ಹರಾಜು ಹಾಕ್ತೀವಿ ಕೊಳ್ಳುವವರು ಕೊಳ್ಳಬಹುದು: ವಾಟಾಳ್

    ಸಂಸದರನ್ನ ಹುಬ್ಬಳ್ಳಿಯಲ್ಲಿ ಹರಾಜು ಹಾಕ್ತೀವಿ ಕೊಳ್ಳುವವರು ಕೊಳ್ಳಬಹುದು: ವಾಟಾಳ್

    – ಕೋವಿಡ್‍ನಿಂದ ವಿದ್ಯಾರ್ಥಿ, ಶಿಕ್ಷಕ ಸತ್ತರೆ ಒಂದು ಕೋಟಿ ಕೊಡಬೇಕು
    – ಇತ್ತೀಚೆಗೆ ಎಲ್ಲರೂ ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದಾರೆ

    ರಾಯಚೂರು: ಸರ್ಕಾರ ಪ್ರವಾಹ ಪರಸ್ಥಿತಿಯನ್ನು ವೈಮಾನಿಕ ಸಮೀಕ್ಷೆ ಮಾಡಿ ಕೈತೊಳೆದುಕೊಂಡಿದೆ. ಉತ್ತರ ಕರ್ನಾಟಕದ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ಮಾನವೀಯತೆಯಿಲ್ಲ ಅಂತ ರಾಯಚೂರಿನಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

    ರಾಯಚೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ವಾಟಾಳ್ ನಾಗರಾಜ್ ಸರ್ಕಾರ ಹಾಗೂ ವಿವಿಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಎಲ್ಲರೂ ಹೆಲಿಕಾಪ್ಟರ್ ರಾಜಕಾರಣಿಗಳಾಗಿದ್ದಾರೆ. ಯಡಿಯೂರಪ್ಪನವರ ಬಳಿ ಹೆಲಿಕಾಪ್ಟರ್ ಇದೆ. ಜೆಡಿಎಸ್, ಕಾಂಗ್ರೆಸ್ಸಿನವರು ಹೆಲಿಕಾಪ್ಟರಿನಲ್ಲೇ ಬರುತ್ತಾರೆ. ಇನ್ನು ಮುಂದೆ ಕಾರಲ್ಲಿ ಕೆಳಗಡೆ ಓಡಾಡಲು ಆಗದ ರೋಗ ಬಂದಿದೆ ಅಂತ ವೈದ್ಯರು ಸರ್ಟಿಫಿಕೇಟ್ ಕೊಡಬೇಕು. ಹೆಲಿಕಾಪ್ಟರಿನಲ್ಲಿ ಓಡಾಡುವವರಿಗಾಗಿ ಈ ಹೊಸ ನಿರ್ಣಯವಾಗಬೇಕಿದೆ ಎಂದರು.

    ಕರ್ನಾಟಕವನ್ನು ಕೇಂದ್ರ ಸರ್ಕಾರ ಗುಲಾಮರ ರೀತಿ ನೋಡುತ್ತಿದೆ. ಪ್ರಧಾನಿ ಮೋದಿ ಎಲ್ಲಾ ಕಡೆ ಹೋಗುತ್ತಾರೆ ಕರ್ನಾಟಕಕ್ಕೆ ಬರಲ್ಲ. ನಮ್ಮ ಎಂಪಿಗಳು ದನಕಾಯುತ್ತಿದ್ದಾರಾ? ಯಾಕೆ ಪ್ರಧಾನಿಯನ್ನು ಕರೆದುಕೊಂಡು ಬರುತ್ತಿಲ್ಲ ಅಂತ ಪ್ರಶ್ನಿಸಿದರು. ಸದಾನಂದಗೌಡ ಸತ್ತರೂ ನಗ್ತಾರೆ, ಬದುಕಿದರೂ ನಗ್ತಾರೆ ಅವರ ನಗುವೆ ಒಂದು ವಿಚಿತ್ರ ಎಂದರು. ಪ್ರವಾಹ ಪೀಡಿತ ಜಿಲ್ಲೆಗಳಿಗೆ 50 ಸಾವಿರ ಕೋಟಿ ಪರಿಹಾರ ನೀಡಬೇಕು ಅಂತ ಆಗ್ರಹಿಸಿದರು. ಅ.29 ರಂದು ಎಂಪಿಗಳನ್ನ ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಮುಂದೆ ಹರಾಜು ಹಾಕಿ ಪ್ರತಿಭಟನೆ ಮಾಡುತ್ತೇವೆ. ಕೊಳ್ಳುವವರು ಬಂದು ಕೊಳ್ಳಬಹುದು, ವಿನೂತನ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.

    ಚುನಾವಣೆಯಲ್ಲಿ ನಾನು ಗೆಲ್ಲಲೇ ಬೇಕು ಗೆದ್ದರೆ ವಿಧಾನಪರಿಷತ್ತಿನಲ್ಲಿ ಧ್ವನಿ ಭಾರೀ ಜೋರಾಗುತ್ತೆ ಅಂತ ಶಿಕ್ಷಕರ ಮತಯಾಚಿಸಿದರು. ಪ್ರೌಢಶಾಲಾ ಶಿಕ್ಷಕರಿಗೆ, ಪಿಯು ಉಪನ್ಯಾಸಕರಿಗೆ ಬಡ್ತಿ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಇಟ್ಟುಕೊಂಡು ನವೆಂಬರ್ 1 ರಿಂದ ಒಂದು ವರ್ಷದವರೆಗೆ ಹೋರಾಟ ಮಾಡುವುದಾಗಿ ಹೇಳಿದರು. ಕೊರೊನಾ ಸಮಯದಲ್ಲಿ ಕಾಲೇಜು ತೆರೆಯಲು ನನ್ನ ವಿರೋಧವಿದೆ. ಆನ್‍ಲೈನ್ ಒಂದು ಬೋಗಸ್, ಖಾಸಗಿ ಸಂಸ್ಥೆಗಳ ಹಣ ವಸೂಲಿ ವಿರುದ್ಧ ಹೋರಾಟ ಮಾಡುತ್ತೇವೆ. ಕಾಲೇಜು ಆರಂಭಿಸುವುದು ಬೇಡ ಶೂನ್ಯ ವರ್ಷ ಅಂತ ತೀರ್ಮಾನ ಮಾಡಬೇಕು. ಕೋವಿಡ್‍ನಿಂದ ವಿದ್ಯಾರ್ಥಿ, ಶಿಕ್ಷಕ ಸತ್ತರೆ ಒಂದು ಕೋಟಿ ಕೊಡಬೇಕು ಅಂತ ವಾಟಾಳ್ ನಾಗರಾಜ್ ಒತ್ತಾಯಿಸಿದರು.

  • 2.55 ಕೋಟಿಗೆ ಮಾರಾಟವಾಯ್ತು ಗಾಂಧಿ ಕನ್ನಡಕ – ಏನಿದರ ವಿಶೇಷತೆ?

    2.55 ಕೋಟಿಗೆ ಮಾರಾಟವಾಯ್ತು ಗಾಂಧಿ ಕನ್ನಡಕ – ಏನಿದರ ವಿಶೇಷತೆ?

    ಲಂಡನ್: ಮಹಾತ್ಮ ಗಾಂಧಿಜೀ ಅವರು ಧರಿಸುತ್ತಿದ್ದರು ಎಂದು ಹೇಳಲಾದ ಚಿನ್ನ ಲೇಪಿತ ಕನ್ನಡಕವನ್ನು ಬ್ರಿಟನ್‍ನಲ್ಲಿ 2.55 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.

    ಕಳೆದ ನಾಲ್ಕು ವಾರದ ಹಿಂದೆ ಈ ಕನ್ನಡ ನಮಗೆ ಸಿಕ್ಕಿದೆ. ಇದನ್ನು ಮಾರಾಟ ಮಾಡಿದವರು, ನಮ್ಮ ತಂದೆಯ ಚಿಕ್ಕಪ್ಪನಿಗೆ ಸ್ವತಃ ಗಾಂಧಿಜೀಯರೆ ಈ ಕನ್ನಡಕವನ್ನು ಗಿಫ್ಟ್ ಆಗಿ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಅಸಾಮಾನ್ಯ ವಸ್ತುವಿಗಾಗಿ ಬಿಡ್ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದೆ.

    https://www.instagram.com/p/CEKTZfgnCwt/

    ಈ ಕನ್ನಡಕವನ್ನು ಮಾರಾಟ ಮಾಡುವವರು ಕೇವಲ 14 ಲಕ್ಷ ಮೂಲ ಬೆಲೆಯನ್ನು ಇಟ್ಟಿದ್ದರು. ಆದರೆ ಈ ಕನ್ನಡಕ ಹಾರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 2.55 ಕೋಟಿ ರೂ.ಗೆ ಮಾರಾಟವಾಗಿದೆ. ನೈಋತ್ಯ ಇಂಗ್ಲೆಂಡ್‍ನ ದಕ್ಷಿಣ ಗ್ಲೌಸೆಸ್ಟರ್‍ಶೈರ್ ನಲ್ಲಿರುವ ಮ್ಯಾಂಗೋಟ್ಸ್ ಫೀಲ್ಡ್ ನ ಅನಾಮಾಧೇಯ ವೃದ್ಧರೊಬ್ಬರು ಈ ಕನ್ನಡಕವನ್ನು ಖರೀದಿ ಮಾಡಿದ್ದಾರೆ. ಜೊತೆಗೆ ಅವರ ಮಗಳ ಕೈಯಿಂದ ಹಣವನ್ನು ಕೊಡಿಸಿದ್ದಾರೆ ಎಂದು ವರದಿಯಾಗಿದೆ.

    https://www.instagram.com/p/CEKBgSinGtc/

    ಈ ಕನ್ನಡಕವು ಇಂಗ್ಲೆಂಡ್‍ನ ಉದ್ಯಮಿಯೊಬ್ಬರ ಮನೆಯಲ್ಲಿ ಸಿಕ್ಕಿದ್ದು, ಅವರು ಹೇಳಿರುವ ಮಾಹಿತಿ ಪ್ರಕಾರ 1910 ಮತ್ತು 1930ರ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಚಿಕ್ಕಪ್ಪನಿಗೆ ಈ ಕನ್ನಡಕವನ್ನು ಸ್ವತಃ ಗಾಂಧಿಜೀಯವರೆ ಕೊಟ್ಟಿದ್ದರು ಎಂದು ಅವರ ತಂದೆ ಉದ್ಯಮಿಗೆ ಹೇಳಿದ್ದರಂತೆ. ಹೀಗಾಗಿ ಇದನ್ನು ಅವರು ಮಾರಾಟ ಮಾಡಿದ್ದಾರೆ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ತಿಳಿಸಿದೆ.

    ಕನ್ನಡಕದ ವಿಶೇಷತೆ:
    ಈ ಕನ್ನಡಕವನ್ನು ಗಾಂಧಿಜೀಯವರು 1920ರಲ್ಲಿ ಬಳಸಿದ್ದು ಎನ್ನಲಾಗಿದೆ. ಇದು ಚಿನ್ನ ಲೇಪಿತ ವೃತ್ತಾಕಾರದ ರಿಮ್ಡ್ ಕನ್ನಡಕವಾಗಿದೆ. ಇದರಲ್ಲಿರುವ ಲೇನ್ಸ್ ದುಬಾರಿ ಬೆಲೆಯಾದ್ದಗಿದ್ದು, ಇದರ ಸುತ್ತ ಚಿನ್ನದ ಲೇಪನದ ತಂತಿಯನ್ನು ಅಳವಡಿಸಲಾಗಿದೆ. ಜೊತೆಗೆ ಇದರಿಲ್ಲಿರುವ ನೋಸ್ ಬಾರ್ ಗಳಲ್ಲೂ ಕೂಡ ಚಿನ್ನದ ಲೇಪಿನವಿದೆ ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ಮಾಹಿತಿ ನೀಡಿದೆ.

    ಗಾಂಧಿಜೀಯವರು ಸೌತ್ ಆಫ್ರಿಕಾದಲ್ಲಿ ಇದ್ದ ಸಮಯದಲ್ಲಿ ಇದನ್ನು ಉಡುಗೊರೆಯಾಗಿ ಕೊಟ್ಟಿರಬಹುದು. ಗಾಂಧಿಜೀಯವರು ತಾವು ಉಪಯೋಗಿಸಿದ ಮತ್ತು ತಮಗೆ ಬೇಡವಾದ ವಸ್ತುಗಳನ್ನು ಹಾಳು ಮಾಡದೆ. ಅವುಗಳನ್ನು ತಮ್ಮ ಆಪ್ತರಿಗೆ ಮತ್ತು ತಮಗೆ ಸಹಾಯ ಮಾಡಿದವರೆಗೆ ಉಡುಗೊರೆಯಾಗಿ ನೀಡುತ್ತಿದ್ದರು ಎಂದು ಈಸ್ಟ್ ಬ್ರಿಸ್ಟಲ್ ಬಿಡ್ ಹೌಸ್ ವಿವರಣೆಯಲ್ಲಿ ತಿಳಿಸಿದೆ.