Tag: ಹಸ್ತಮೈಥುನ

  • ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

    ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್

    ಮುಂಬೈ: ಒಬ್ಬ ವ್ಯಕ್ತಿ ಮತ್ತೊಬ್ಬರ ಎದುರು ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ ಎಂದು ಮುಂಬೈನ ವಿಶೇಷ ನ್ಯಾಯಾಲಯ ಹೇಳಿದ್ದು, ಈ ಸಂಬಂಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 60 ವರ್ಷದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಿದೆ.

    ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಧೀಶ ಪ್ರಿಯಾ ಬಣಕಾರ್ ಅವರು, ಆಗಸ್ಟ್ 29 ರಂದು ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದರು. ಗುರುವಾರ ಈ ತೀರ್ಪು ನೀಡಿದ್ದಾರೆ.

     

    ನಾಲ್ಕು ವರ್ಷದ ಬಾಲಕ ತನ್ನ ಮನೆಯ ಸಮೀಪವಿರುವ ಆರೋಪಿಯ ಟೈಲರಿಂಗ್ ಅಂಗಡಿಗೆ ಹೋದಾಗ, ಆರೋಪಿ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸುತ್ತಿರುವುದನ್ನು ನೋಡಿದನು ಎಂಬುದು ಪ್ರಕರಣವಾಗಿದೆ. ಇದನ್ನೂ ಓದಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ವಜ್ರಕುಮಾರ್ ಇನ್ನಿಲ್ಲ

    ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ದೂರಿನ ಪ್ರಕಾರ ಆರೋಪಿ ತನ್ನ ಖಾಸಗಿ ಅಂಗವನ್ನು ಬಾಲಕನಿಗೆ ತೋರಿಸಿದ್ದಾನೆ. ಆದರೆ ಬಾಲಕನನ್ನು ಅಂಗಡಿಗೆ ಕರೆದಿಲ್ಲ, ಬಾಲಕನ ಬಳಿಯೂ ಹೋಗಿಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ. ಈ ಕೃತ್ಯವನ್ನು ಬಾಲಕ ಆಕಸ್ಮಿಕವಾಗಿ ನೋಡಿದ್ದು ನಿಜ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

    court order law

     

    ಆರೋಪಿಯ ಅಂಗಡಿ ಚಿಕ್ಕದಾಗಿದ್ದು, ದಾರಿಹೋಕರು ಈತನ ಕೃತ್ಯವನ್ನು ನೋಡಿರಬಹುದು. ಹೀಗಾಗಿ ಆತ ಮರೆಮಾಚಿ ಹಸ್ತಮೈಥುನ ಮಾಡುತ್ತಿದ್ದ ಎಂದು ಹೇಳಲಾಗದು. ಬಾಲಕ ಈತನ ಕೃತ್ಯವನ್ನು ನೋಡಿದಾಗ, ಅದನ್ನು ಮರೆಮಾಚದೇ ಏನನ್ನೋ ವಿವರಿಸಲು ಹೇಳಲು ಯತ್ನಿಸಿದ್ದಾನೆ ಎಂದು ನ್ಯಾಯಾಲಯ ತಿಳಿಸಿದೆ.

    ಹಸ್ತಮೈಥುನ ಒಂದು ಲೈಂಗಿಕ ಕ್ರಿಯೆಯಾಗಿದೆ. ಒಬ್ಬ ವ್ಯಕ್ತಿ ಮತ್ತೋರ್ವ ವ್ಯಕ್ತಿಯ ಎದುರು ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ವ್ಯಕ್ತಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಆಮ್ ಆದ್ಮಿ ಪಕ್ಷದ ಶಾಸಕಿ ಮೇಲೆ ಎಲ್ಲರೆದುರು ಹಲ್ಲೆ ನಡೆಸಿದ ಪತಿ

    ಬಾಲಕನ ಮೇಲೆ, ಆತನ ಕುಟುಂಬಸ್ಥರ ಮೇಲೆ ಮತ್ತು ಸಮಾಜದ ಮೇಲೂ ಇಂತಹ ಘಟನೆಗಳು ಪರಿಣಾಮಕಾರಿಯಾಗಿದೆ. ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮಕ್ಕಳು ಸುರಕ್ಷಿತರಾಗಿರುವುದಿಲ್ಲ ಮತ್ತು ಸಮಾಜದಲ್ಲಿ ಆತಂಕಕಾರಿ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಖಂಡಿತವಾಗಿಯೂ, ಇಂತಹ ಘಟನೆಯು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತದೆ. ಸಂತ್ರಸ್ತರ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಹಾಗೆಯೇ ಉಳಿದುಬಿಡುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌

    ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌

    ಬರ್ನ್: 20 ವರ್ಷದ ಯುವಕನೊಬ್ಬ ತೀವ್ರವಾಗಿ ಹಸ್ತಮೈಥುನ ಮಾಡಿ ಶ್ವಾಸಕೋಶ ತೊಂದರೆಗೆ ಸಿಲುಕಿಕೊಂಡಿದ್ದಾನೆ.

    ಸ್ವಿಟ್ಜರ್ಲ್ಯಾಂಡ್ ನಿವಾಸಿ 20 ವರ್ಷದ ಯುವಕ ಹಸ್ತಮೈಥುನವನ್ನು ಹೆಚ್ಚು ಮಾಡಿಕೊಂಡ ಪರಿಣಾಮ ಆತನಿಗೆ ಮಲಗುವಾಗ ಉಸಿರಾಟ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೇ ಹಠಾತ್ ಆಗಿ ಯುವಕನಿಗೆ ತೀಕ್ಷ್ಣವಾದ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದಾನೆ. ಈ ಹಿನ್ನೆಲೆ ಎಕ್ಸ್‌ರೇ ಮಾಡಿಸಿಕೊಂಡಾಗ ವೈದ್ಯರೇ ಶಾಕ್ ಆಗಿದ್ದಾರೆ. ಎಕ್ಸ್‌ರೇಯಲ್ಲಿ ಯುವಕನ ಶ್ವಾಸಕೋಶದಲ್ಲಿ ಗಾಯವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    20-year-old Swiss man hospitalised after tearing his lung from masturbating | Viral News: ಲೈಂಗಿಕ ತೃಪ್ತಿ ಪಡೆಯಲು ಹೋಗಿ 20ರ ಯುವಕನ ಶ್ವಾಸಕೋಶವೇ ಹರಿಯಿತು– News18 Kannada

    ಪರೀಕ್ಷೆಯ ನಂತರ, ರೋಗಿಯ ಮುಖ ಊದಿಕೊಂಡಿದೆ ಎಂದು ವೈದ್ಯರು ಗಮನಿಸಿದ್ದಾರೆ. ಈ ವೇಳೆ ಅವನು ಉಸಿರಾಡುವಾಗ ಮತ್ತು ಹೊರಗೆ ಬಿಡುವಾಗ ಶಬ್ದಗಳ ಏರಿಪೇರು ಆಗುತ್ತಿರುವುದನ್ನು ಗಮನಿಸಿದ್ದಾರೆ.

    ಎಲ್ಲ ಪರೀಕ್ಷಗಳ ನಂತರ ಯುವಕನಿಗೆ ಎದೆಯ ಕ್ಷ-ಕಿರಣವು ನ್ಯುಮೋಮೆಡಿಯಾಸ್ಟಿನಮ್(pneumomediastinum) ಎಂಬ ಅಪರೂಪದ ಕಾಯಿಲೆಯನ್ನು ಹೊಂದಿದ್ದಾನೆ ಎಂದು ಬಹಿರಂಗಪಡಿಸಿದರು. ಇದರಿಂದ ಮನುಷ್ಯನ ಗಾಳಿಯ ಚೀಲಗಳು ಹಾನಿಗೊಳಗಾಗಿದ್ದು, ಅವನಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅಗತ್ಯವಿದೆ ಎಂದು ವಿವರಿಸಿದರು. ಶ್ವಾಸಕೋಶಗಳು ಅಥವಾ ಅನ್ನನಾಳಕ್ಕೆ ದೈಹಿಕ ಆಘಾತದಿಂದ ನ್ಯುಮೋಮೆಡಿಯಾಸ್ಟಿನಮ್ ಉಂಟಾಗಬಹುದು ಎಂದು ವೈದ್ಯರು ವಿವರಿಸಿದರು. ಇದನ್ನೂ ಓದಿ: ದೇವಸ್ಥಾನದ ಮೇಲೆ ದಾಳಿ ಮಾಡಿದ್ದು ಖಂಡನೀಯ: ಮುತಾಲಿಕ್ 

    Looking into the Future of X-ray Technology

    ಈ ರೀತಿಯ ಗಾಯವು ಯುವಕರಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚು. ಇದರಿಂದ ತೀವ್ರವಾದ ಆಸ್ತಮಾ ದಾಳಿ, ಶ್ರಮದಾಯಕ ವ್ಯಾಯಾಮ ಅಥವಾ ವಾಂತಿ ಬರುತ್ತೆ. ಪ್ರಸ್ತುತ ಯುವಕನನ್ನು ಅಬ್ಸರ್‌ವೇಷನ್‌)ದಲ್ಲಿ ಇಡಲಾಗಿದೆ. ಅದೃಷ್ಟವಶಾತ್ ಯುವಕ ಶೀಘ್ರವೇ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು.

  • ಹಸ್ತಮೈಥುನದ ವೀಡಿಯೋ ಕಳುಹಿಸಿ ಯುವತಿಯನ್ನು ಮಂಚಕ್ಕೆ ಕರೆದ ಎಂಬಿಎ ವಿದ್ಯಾರ್ಥಿ ಅರೆಸ್ಟ್

    ಹಸ್ತಮೈಥುನದ ವೀಡಿಯೋ ಕಳುಹಿಸಿ ಯುವತಿಯನ್ನು ಮಂಚಕ್ಕೆ ಕರೆದ ಎಂಬಿಎ ವಿದ್ಯಾರ್ಥಿ ಅರೆಸ್ಟ್

    ಲಕ್ನೋ: ಆರೋಪಿಯೊಬ್ಬ ಹಸ್ತಮೈಥುನದ ವೀಡಿಯೋವೊಂದನ್ನು ಯುವತಿಗೆ ವಾಟ್ಸಪ್‍ನಲ್ಲಿ ಕಳುಹಿಸಿ ಆಕೆಯನ್ನು ಲೈಂಗಿಕ ಸಂಬಂಧಕ್ಕೆ ಕರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ನೋಯ್ದಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಮಾಧ್ಯಮಗಳ ವರದಿ ಪ್ರಕಾರ ಆರೋಪಿ ಮತ್ತು ಯುವತಿ ಸುಮಾರು ಎರಡು ವರ್ಷಗಳಿಂದ ಪರಿಚಿತರು. ಆರೋಪಿಯ ವರ್ತನೆ ಇಷ್ಟವಾಗದ ಕಾರಣ ಆಕೆ ಇತ್ತೀಚೆಗೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದಾದ ನಂತರ, ಮಾರ್ಚ್ 19 ರಂದು, ಆರೋಪಿಯು ಜಿಮ್‍ನಲ್ಲಿ ಆಕೆಗೆ ನನ್ನ ಜೊತೆ ಲೈಂಗಿಕ ಸಂಬಂಧ ಬೆಳೆಸಲು ಒಂದು ಅವಕಾಶ ನೀಡು ಎಂದು ಪೀಡಿಸುತ್ತಿದ್ದನು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

    ಹಂತ-3 ಪೊಲೀಸ್ ಠಾಣೆಯ ಉಸ್ತುವಾರಿ ವಿವೇಕ್ ತ್ರಿವೇದಿ ಅವರ ಪ್ರಕಾರ, ಯುವತಿಯು ಆರೋಪಿಯ ವಿರುದ್ಧ ಭಾನುವಾರ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಇಬ್ಬರ ನಡುವೆ ಮತ್ತೆ ಮಾತುಕತೆ ಆರಂಭವಾದಾಗ ಯುವಕ ತನ್ನೊಂದಿಗೆ ದೈಹಿಕ ಸಂಬಂಧ ಹೊಂದುವ ಆಸೆ ವ್ಯಕ್ತಪಡಿಸಿದ್ದಾಗಿ ಸಂತ್ರಸ್ತೆ ಅದರಲ್ಲಿ ಹೇಳಿದ್ದರು. ಆದರೆ ಯುವತಿ ನಿರಾಕರಿಸಿದ್ದಾಳೆ. ಇದರ ನಂತರ, ಮಾರ್ಚ್ 21 ರಂದು, ಮಧ್ಯಾಹ್ನ 2:40ರ ಸುಮಾರಿಗೆ ಆರೋಪಿಯು ವಾಟ್ಸಾಪ್‍ನಲ್ಲಿ ಅಶ್ಲೀಲ ವೀಡಿಯೊವನ್ನು ಆಕೆಗೆ ಕಳುಹಿಸಿದ್ದಾನೆ. ಸಂತ್ರಸ್ತೆ ತನ್ನ ದೂರಿನಲ್ಲಿ, ನಾನು ಸಂದೇಶವನ್ನು ತೆರೆದಾಗ, ಅದು ಅವನ ಹಸ್ತಮೈಥುನದ ವೀಡಿಯೊವಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ

    ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲೆ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ) ಮತ್ತು 509 (ಮಹಿಳೆಯ ವಿನಯವನ್ನು ಅವಮಾನಿಸುವ ಉದ್ದೇಶ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಎಸ್‍ಎಚ್‍ಒ, ಆರೋಪಿಯನ್ನು ಹಿಡಿಯಲು ತಂಡವನ್ನು ರಚಿಸಿದ್ದರು. ಸೋಮವಾರ ಬೆಳಗ್ಗೆ ಸೆಕ್ಟರ್ 61 ರ ರಿಂಗ್ ಕ್ರಾಸ್‍ರೋಡ್‍ನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತನಿಖೆಯ ವೇಳೆ ಆರೋಪಿ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದ ವಿಚಾರ ತಿಳಿದು ಬಂದಿದೆ.

  • ಹೊಟ್ಟೆನೋವು ಎಂದು ಬಂದವನ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್

    ಹೊಟ್ಟೆನೋವು ಎಂದು ಬಂದವನ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್

    – ಚಾರ್ಜರ್ ಒಳಹೋದ ಕಥೆ ಕೇಳಿ ಬೆಚ್ಚಿಬಿದ್ದ ವೈದ್ಯರು

    ದಿಶ್ಪೂರ್: ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯ ಮೂತ್ರಕೋಶದಲ್ಲಿ ಮೊಬೈಲ್ ಚಾರ್ಜರ್ ಇರುವುದನ್ನು ಕಂಡು ವೈದ್ಯರೇ ದಂಗಾಗಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ಗುವಾಹಟಿಯಲ್ಲಿರುವ ಆಸ್ಪತ್ರೆಯೊಂದಕ್ಕೆ ಬಂದ 30 ವರ್ಷದ ವ್ಯಕ್ತಿ ನನಗೆ ಹೊಟ್ಟೆನೋವು ಇದೆ ಎಂದು ದಾಖಲಾಗಿದ್ದಾನೆ. ಆದರೆ ನಾನು ಗೊತ್ತಿಲ್ಲದೇ ಮಿಸ್ ಆಗಿ ಮೊಬೈಲ್ ಹೆಡ್ ಫೋನ್ ಅನ್ನು ನುಂಗಿದ್ದೇನೆ ಎಂದು ಹೇಳಿದ್ದಾನೆ. ಆದರೆ ಅವನಿಗೆ ವೈದ್ಯರು ಎಂಡೋಸ್ಕೋಪಿ ಮಾಡಿದ್ದು, ಇದರಲ್ಲಿ ವೈಯರ್ ಇರುವುದು ಕಂಡು ಬಂದಿಲ್ಲ.

    ಈ ವಿಚಾರದ ಬಗ್ಗೆ ಮಾತನಾಡಿರುವ ವೈದ್ಯ ವಲಿಯಲ್ ಇಸ್ಲಾಂ, ಮೊದಲಿಗೆ ಆತ ನಮಗೆ ಹೆಡ್ ಫೋನ್ ನುಂಗಿರುವುದಾಗಿ ಹೇಳಿದ. ನಾವು ಈ ಕಾರಣದಿಂದ ಎಂಡೋಸ್ಕೋಪಿ ಮಾಡಿದವು. ಆದರೆ ಅವನ ಹೊಟ್ಟೆಯಲ್ಲಿ ಆದೂ ಕಾಣಿಸಿಕೊಳ್ಳಲಿಲ್ಲ. ನಂತರ ನಾವು ಅವನನ್ನು ಎಕ್ಸ್-ರೇ ಗೆ ಒಳಪಡಿಸಿದೆವು. ಈ ವೇಳೆ ಅವನ ಮೂತ್ರಕೋಶದಲ್ಲಿ 2 ಮೀಟರ್ ಉದ್ದದ ಮೊಬೈಲ್ ಚಾರ್ಚರ್ ಇರುವುದು ಕಂಡು ಬಂತು ಎಂದು ಹೇಳಿದ್ದಾರೆ.

    ರೋಗಿ ನಮಗೆ ಮೊದಲಿಗೆ ಸುಳ್ಳು ಹೇಳಿದ್ದಾನೆ. ಆತ ಮಿಸ್ ಆಗಿ ಹೆಡ್ ಫೋನ್ ಅನ್ನು ನುಂಗಿಲ್ಲ. ಆದರೆ ಆತನಿಗೆ ಹಸ್ತಮೈಥುನ ಮಾಡಿಕೊಳ್ಳುವ ಅಭ್ಯಾಸವಿದೆ. ಈ ಅಭ್ಯಾಸ ಅತೀರೇಕಕ್ಕೆ ತಿರುಗಿ ಆತ ಕೇಬಲ್ ಅನ್ನು ತನ್ನ ಮರ್ಮಾಂಗದ ಮೂಲಕ ತೂರಿಸಿಕೊಂಡಿದ್ದಾನೆ. ಹೀಗಾಗಿ ಅದು ಮೂತ್ರಕೋಶಕ್ಕೆ ಹೋಗಿ ಸೇರಿಕೊಂಡಿದೆ. ನನ್ನ 25 ವರ್ಷದ ಈ ವೃತ್ತಿಯಲ್ಲಿ ಇದೇ ಮೊದಲ ಬಾರಿಗೇ ಈ ರೀತಿಯ ವಿಚಿತ್ರ ಪ್ರಕರಣವನ್ನು ನೋಡುತ್ತಿದ್ದೇನೆ ಎಂದು ಇಸ್ಲಾಂ ತಿಳಿಸಿದ್ದಾರೆ.

    ವೈದ್ಯರ ಹೇಳುವ ಪ್ರಕಾರ, ರೋಗಿಯು ತನ್ನ ಮರ್ಮಾಂಗ ಮೂಲಕ ಕೇಬಲ್ ಮತ್ತು ಇತರ ವಸ್ತುಗಳನ್ನು ಲೈಂಗಿಕ ಆನಂದಕ್ಕಾಗಿ ಹಾಕಿಕೊಳ್ಳುವ ಅಭ್ಯಾಸವನ್ನು ಹೊಂದಿದ್ದಾನೆ. ಈ ಸಂದರ್ಭದಲ್ಲಿ ಲೈಂಗಿಕ ಸುಖ ನಿಯಂತ್ರಣ ತಪ್ಪಿ ಕೇಬಲ್ ಅವನ ಮೂತ್ರಕೋಶವನ್ನು ತಲುಪಿದೆ. ಈಗ ನಾವು ಆಪರೇಷನ್ ಮಾಡಿ ಕೇಬಲ್ ಅನ್ನು ಹೊರಗೆ ತೆಗೆದಿದ್ದು, ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ.

    ಮೂತ್ರನಾಳದ ಮೂಲಕ ವಸ್ತುಗಳನ್ನು ಮತ್ತು ದ್ರವವನ್ನು ಹಾಕಿಕೊಳ್ಳುವುದು ಕೂಡ ಒಂದು ರೀತಿಯ ಹಸ್ತಮೈಥುನ. ಈ ವ್ಯಕ್ತಿ ಈ ರೀತಿಯ ಹಸ್ತಮೈಥುನಕ್ಕೆ ದಾಸನಾಗಿದ್ದು, ಈ ರೀತಿ ಮಾಡಿಕೊಂಡಿದ್ದಾನೆ. ಕೇಬಲ್ ದೇಹ ಸೇರಿದ ಐದು ದಿನದ ಬಳಿಕ ವೈದ್ಯರ ಬಳಿ ಬಂದಿದ್ದಾನೆ. ಜೊತೆಗೆ ನಾನು ಬಾಯಿಯಿಂದ ಹೆಡ್ ಫೋನ್ ನುಂಗಿದೆ ಎಂದು ಪದೇ ಪದೇ ಹೇಳಿದ್ದಾನೆ. ಆದರೆ ಆತ ನಮ್ಮ ಬಳಿ ಯಾಕೆ ಸುಳ್ಳು ಹೇಳಬೇಕು ಎಂದು ಡಾ. ಇಸ್ಲಾಂ ಕಳವಳ ವ್ಯಕ್ತಪಡಿಸಿದ್ದಾರೆ.

  • ಮೆಟ್ರೋ ಎಸ್ಕಲೇಟರ್ ನಲ್ಲೇ ಮಹಿಳೆಯ ಮುಂದೆ ಹಸ್ತಮೈಥುನ ಮಾಡ್ದ

    ಮೆಟ್ರೋ ಎಸ್ಕಲೇಟರ್ ನಲ್ಲೇ ಮಹಿಳೆಯ ಮುಂದೆ ಹಸ್ತಮೈಥುನ ಮಾಡ್ದ

    ಚಂಡೀಗಢ್: ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ಬರುತ್ತಿದ್ದ 29 ವರ್ಷದ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹರಿಯಾಣದ ಗುರುಗ್ರಾವ್‍ನಲ್ಲಿ ನಡೆದಿದೆ.

    ಈ ಘಟನೆ ಹುಡಾ ಸಿಟಿ ಸೆಂಟರ್ ಮೆಟ್ರೋ ನಿಲ್ದಾಣದ ಎಸ್ಕಲೇಟರ್ ನಲ್ಲಿ ನಡೆದಿದೆ. ಈ ಕುರಿತು ಗುರುಗಾಂವ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಈ ಘಟನೆ ಜೂನ್ 14 ಸುಮಾರು ರಾತ್ರಿ 9.25ಕ್ಕೆ ನಡೆದಿದೆ. ಈ ಬಗ್ಗೆ ಮಹಿಳೆ ತನ್ನ ಟ್ವಿಟ್ಟರ್‌ನಲ್ಲಿ ಬರೆದುಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ದೆಹಲಿ ಮೂಲದ ಮಹಿಳೆ ಗುರುಗ್ರಾಮ್‍ನಲ್ಲಿ ತನ್ನ ಸ್ನೇಹಿತೆಯನ್ನು ಭೇಟಿಯಾಗಲು ಬಂದಿದ್ದರು. ಮಹಿಳೆ ಇಂಟೀರಿಯರ್ ಡಿಸೈನರ್ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 14 ರಂದು ಮೆಟ್ರೋ ನಿಲ್ದಾಣದ ಮಾಲ್‍ನಲ್ಲಿ ಶಾಪಿಂಗ್ ಮುಗಿಸಿ ಎಸ್ಕಲೇಟರ್ ಮೂಲಕ ಕೆಳಗೆ ಬರುತ್ತಿದ್ದರು. ಆಗ ಆಕೆಯ ಹಿಂದೆ ವ್ಯಕ್ತಿಯೊಬ್ಬ ಬರುತ್ತಿದ್ದನು. ಇದನ್ನು ಗಮನಿಸಿದ ಮಹಿಳೆ ಹಿಂದೆ ತಿರುಗಿ ನೋಡಿದ್ದಾರೆ. ಆಗ ಆತ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಇದನ್ನು ಕಂಡು ದಂಗಾದ ಮಹಿಳೆ ಆತನ ಕಪಾಳಕ್ಕೆ ಹೊಡೆದು ಬೈದಿದ್ದಾರೆ. ಅಷ್ಟೇ ಅಲ್ಲದೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಮಹಿಳೆ ಕಿರುಚಾಟದಿಂದ ಭಯಗೊಂಡ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಹಿಳೆಯ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ನಾನು ಮನೆಗೆ ಬಂದು ಗುರುಗ್ರಾಮ್ ಪೊಲೀಸರಿಗೆ ಫೇಸ್‍ಬುಕ್ ಖಾತೆ ಮೂಲಕ ಮೆಸೇಜ್ ಮಾಡಿದೆ. ಆದರೆ ಪೊಲೀಸರು ಯಾವುದೇ ರೀತಿಯ ಉತ್ತರವನ್ನು ನೀಡಲಿಲ್ಲ. ನಂತರ ದೆಹಲಿ ಮೆಟ್ರೋ ರೈಲು ನಿಗಮಕ್ಕೆ (ಡಿಎಂಆರ್​ಸಿ)ಗೆ ಮೆಸೇಜ್ ಮಾಡಿದ್ದೆ. ಅವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ವ್ಯಕ್ತಿ ಹಸ್ತಮೈಥುನ ಮಾಡುತ್ತಿರುವುದು ಸೆರೆಯಾಗಿದೆ ಎಂದು ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದಾರೆ. ಅದರ ಆಧಾರದ ಮೇರೆಗೆ ಐಪಿಸಿ ಸೆಕ್ಷನ್‍ಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಸಾಕ್ಷ್ಯಗಳಿಗಾಗಿ ಡಿಎಂಆರ್​ಸಿಯೊಂದಿಗೆ ಚರ್ಚೆ ಮಾಡಲಾಗಿದೆ. ಆದರೆ ಆರೋಪಿಯನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಸುಭಾಷ್ ಬೊಕೆನ್ ಹೇಳಿದ್ದಾರೆ.

  • 25 ವರ್ಷದ ಟೆಕ್ಕಿಯ ಮುಖ ಮಿರರಲ್ಲಿ ನೋಡುತ್ತಾ ಕಾರ್ ಡ್ರೈವ್ ಮಾಡ್ತಾ ಚಾಲಕನ ಹಸ್ತಮೈಥುನ!

    25 ವರ್ಷದ ಟೆಕ್ಕಿಯ ಮುಖ ಮಿರರಲ್ಲಿ ನೋಡುತ್ತಾ ಕಾರ್ ಡ್ರೈವ್ ಮಾಡ್ತಾ ಚಾಲಕನ ಹಸ್ತಮೈಥುನ!

    ಹೈದರಾಬಾದ್: ಟೆಕ್ಕಿಯೊಬ್ಬಳು ಉಬರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಸ್ತಮೈಥುನ ಮಾಡಿಕೊಂಡ ಚಾಲಕನನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. 26 ವರ್ಷ ದಾದಿ ಪ್ರೇಮ್ ಕುಮಾರ್ ಬಂಧಿತ ಚಾಲಕ.

    ಏನಾಗಿತ್ತು?: ದೆಹಲಿ ಮೂಲದ 25 ವರ್ಷದ ಟೆಕ್ಕಿಯೊಬ್ಬಳು ತನ್ನ ಕುಟುಂಬದವರ ಜೊತೆ ದೀಪಾವಳಿ ಆಚರಿಸಿಕೊಳ್ಳಲು ಹೊರಟಿದ್ದಳು. ಇದಕ್ಕಾಗಿ ಆಕೆ ಉಬರ್ ಟ್ಯಾಕ್ಸಿ ಬುಕ್ ಮಾಡಿದ್ದಳು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ತೆರಳುತ್ತಿದ್ದ ಕಾರು ಹೊರ ವರ್ತುಲ ರಸ್ತೆಗೆ ಬರುತ್ತಿದ್ದಂತೆಯೇ ಚಾಲಕ ಪ್ರೇಮ್ ಕುಮಾರ್ ಕಾರಿನ ವೇಗಕ್ಕೆ ಕಡಿವಾಣ ಹಾಕಿದ್ದಾರೆ.

    ಕಾರಿನ ವೇಗವನ್ನು ಇಳಿಸಿದ ಚಾಲಕ ಕಾರಿನಲ್ಲಿದ್ದ ರಿಯರ್ ಮಿರರ್ ನಲ್ಲಿ ಯುವತಿಯನ್ನು ನೋಡುತ್ತಾ ಹಸ್ತಮೈಥುನ ಆರಂಭಿಸಿದ್ದಾನೆ. ಚಾಲಕನ ಅಸಭ್ಯ ವರ್ತನೆಯಿಂದ ಸಿಟ್ಟಿಗೆದ್ದ ಯುವತಿ ಕಾರು ನಿಲ್ಲಿಸುವಂತೆ ಕೂಗಾಡುತ್ತಾಳೆ. ಆದರೂ ಆತ ಕಾರನ್ನು ನಿಲ್ಲಿಸದೆ ಮುಂದಕ್ಕೆ ಹೋಗುತ್ತಾನೆ. ಈ ವೇಳೆ ಯುವತಿ ಮೊಬೈಲ್ ನಲ್ಲಿ ಚಾಲಕನ ಫೋಟೋ ತೆಗೆಯುತ್ತಾಳೆ. ಬಳಿಕ ಅದನ್ನು ಫೇಸ್ ಬುಕ್ ನಲ್ಲಿ ಹಾಕುತ್ತಾಳೆ.

    ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಯುವತಿ ದೂರು ನೀಡಲು ಮುಂದಾಗುತ್ತಾಳೆ. ಆದರೆ ಘಟನೆ ಹೈದರಾಬಾದ್ ನಲ್ಲಿ ನಡೆದಿದ್ದರಿಂದ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ತಕ್ಷಣ ಆಕೆ ಆನ್ ಲೈನ್ ಮೂಲಕ ದೂರು ದಾಖಲಿಸಿದ್ದಾಳೆ. ದೂರು ಸ್ವೀಕರಿಸುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರಿನ ಚಾಲಕ ಹಾಗೂ ಮಾಲೀಕನಾಗಿದ್ದ ಹಫೀಜ್ ಪೇಟೆಯ ದಾದಿ ಪ್ರೇಮ್ ಕುಮಾರ್ ನನ್ನು ಬಂಧಿಸಿದ್ದಾರೆ. ಕಾರಿನ ಚಾಲಕ ಅಂದು ರಜೆ ಹಾಕಿದ್ದರಿಂದ ಪ್ರೇಮ್ ಕುಮಾರನ್ನೇ ಅಂದು ಕಾರು ಚಾಲನೆ ಮಾಡಿದ್ದಾನೆ.

    ಪೊಲೀಸರ ತನಿಖೆ ವೇಳೆ ಈ ಕಾರು ಉಬರ್ ಸಂಸ್ಥೆಯ ಜೊತೆ ನೋಂದಣಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೂ ಉಬರ್ ಈ ಕಾರಿಗೆ ಹೇಗೆ ಅವಕಾಶ ಕೊಟ್ಟಿತು ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಉಬರ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಧಪುರ ಡಿಸಿಪಿ ವಿಶ್ವಪ್ರಸಾದ್ ಹೇಳಿದ್ದಾರೆ.

  • ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

    ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

    ಹೈದರಬಾದ್: ಮಹಿಳೆಯ ಮುಂದೆಯೇ ಹಸ್ತಮೈಥುನ ಮಾಡಿಕೊಂಡಿದ್ದ ಉಬರ್ ಕ್ಯಾಬ್ ಡ್ರೈವರ್ ನನ್ನು ಸೈಬಾರಾಬಾದ್ ಪೊಲೀಸರು ಬಂಧಿಸಿದ್ದಾರೆ.

    ಕೊಂದಾಪುರ ಗಚಿಬೌಲಿ ಬಡಾವಣೆಯ ಮಹಿಳಾ ನಿವಾಸಿ, ಅಕ್ಟೋಬರ್ 19 ರಂದು ಬೆಳಗ್ಗೆ ದೆಹಲಿಗೆ ಹೊರಡಲು ಬುಕ್ ಮಾಡಿದ್ದ ಕಾರಿನಲ್ಲಿ ಡ್ರೈವರ್ ಈ ಕೃತ್ಯ ಎಸಗಿದ್ದ. ಈ ಕೃತ್ಯವನ್ನು ನೋಡಿದ್ದ ಮಹಿಳೆ ದೆಹಲಿಯ ಸಫರ್ ಜಂಗ್ ಠಾಣೆಯಲ್ಲಿ ದೂರು ನೀಡಿದ್ದರು.

    ಏನಿದು ಪ್ರಕರಣ?
    ಅಕ್ಟೋಬರ್ 19 ರಂದು ಹೈದರಬಾದ್ ವಿಮಾನ ನಿಲ್ದಾಣಕ್ಕೆ ತೆರಳಲು ಮಹಿಳೆಯೊಬ್ಬರು ಉಬರ್ ಕಾರನ್ನು ಬುಕ್ ಮಾಡಿದ್ದರು. ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಉಬರ್ ಡ್ರೈವರ್ ಕಾರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಕಾರನ್ನು ನಿಲ್ಲಿಸಿ ಹಸ್ತಮೈಥುನ ಮಾಡಿದ್ದ. ಈ ವೇಳೆ ಕೃತ್ಯವನ್ನು ಪೊಲೀಸರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ ಬಳಿಕ ಆತ ಮಹಿಳೆಯನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದ.

    ಮಹಿಳೆಯು ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆ 1091 ಸಹಾಯವಾಣಿಗೆ ಕರೆ ಮಾಡಿ ಸಫರ್ ಜಂಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ  ಕೇಸ್ ವರ್ಗಾವೆಣೆಯಾಗಿ  ಸೈಬಾರಾಬಾದ್ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಡ್ರೈವರ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

    ಡಿಸಿಪಿ ಮಧಪುರ್ ಅವರು ಡ್ರೈವರ್‍ನನ್ನು ಬಂಧಿಸಿಲು ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಈಗ ಡ್ರೈವರ್ ನನ್ನು ಬಂಧಿಸಲಾಗಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿದೆ. ಡ್ರೈವರ್‍ನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

    ತನಗಾದ ಅನ್ಯಾಯವನ್ನು ಮಹಿಳೆ ಫೇಸ್‍ಬುಕ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಮಹಿಳೆಯ ಆರೋಪದ ಅಡಿ ಉಬರ್ ಕ್ಯಾಬ್ ಸಂಸ್ಥೆಯು ಡ್ರೈವರ್ ನನ್ನು ವಜಾ ಮಾಡಿದೆ.

    ಈ ಘಟನೆಯ ಬಳಿಕ ಡ್ರೈವರ್ ನನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಮತ್ತೆ ಡ್ರೈವರ್ ಕ್ಷಮೆಯಾಚಿಸಿದರೂ ಆತನನ್ನು ಸೇವೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಉಬರ್ ತಿಳಿಸಿದೆ.

  • ಮುಂಬೈ ರೈಲಿನಲ್ಲಿ ಬೆಂಗ್ಳೂರು ಮೂಲದ ಯುವತಿ ಮುಂದೆ ಹಸ್ತಮೈಥುನ!

    ಮುಂಬೈ ರೈಲಿನಲ್ಲಿ ಬೆಂಗ್ಳೂರು ಮೂಲದ ಯುವತಿ ಮುಂದೆ ಹಸ್ತಮೈಥುನ!

    ಮುಂಬೈ: ಸ್ಥಳೀಯ ರೈಲಿನಲ್ಲಿ 22 ವರ್ಷದ ಯುವತಿಯೊಬ್ಬಳ ಎದುರು ವ್ಯಕ್ತಿಯೊಬ್ಬ ಹಸ್ತ ಮೈಥುನ ಮಾಡಿಕೊಂಡಿರುವ ಘಟನೆ ಜೂನ್ 15 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಹೇಯ ಕೃತ್ಯದ ಕುರಿತು ಬೆಂಗಳೂರು ಮೂಲದ ಯುವತಿ ಕೂಡಲೇ ರೈಲ್ವೆ ಹೆಲ್ಪ್‍ಲೈನ್‍ಗೆ ಕಾಲ್ ಮಾಡಿ ತಿಳಿಸಿದ್ದಾರೆ. ಆದರೆ ಅಲ್ಲಿಯ ಅಧಿಕಾರಿಗಳು ಯಾವುದೇ ಗಂಭೀರತೆ ಇಲ್ಲದೆ ಹಾಸ್ಯದದ ಮೂಲಕ ನಕ್ಕು ಫೋನ್ ಕರೆ ಸ್ಥಗಿತಗೊಳಿಸಿದ್ದಾರೆ.

    ಈ ಘಟನೆಯ ಕುರಿತು ಫೇಸ್‍ಬಕ್‍ನಲ್ಲಿ ಸವಿವರವಾಗಿ ಬರೆದುಕೊಂಡಿದ್ದು ಪೋಸ್ಟ್ ವೈರಲ್ ಆಗಿದೆ. ಇದೀಗ ವಿಚಾರ ತಿಳಿದ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.

    ರೈಲ್ವೆ ಸಚಿವ ಸುರೇಶ್ ಪ್ರಭು ಅವರು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು ಆರೋಪಿಯನ್ನು ಶೀಘ್ರ ವಶಕ್ಕೆ ಪಡೆಯಲು ಸೂಚಿಸಿದ್ದಾರೆ.

    ದಾದರ್ ಮೂಲದ ರೈಲಿನಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಅಂಗವಿಕಲರ ಕಂಪಾರ್ಟ್‍ಮೆಂಟ್ ನಲ್ಲಿದ್ದ ವ್ಯಕ್ತಿ ಮಹಿಳೆಯರ ಕಂಪಾರ್ಟ್ ಮೆಂಟ್ ಬಳಿ ಬಂದು ಹಸ್ತಮೈಥುನ ಮಾಡಿರುವುದಾಗಿ ಯುವತಿ ವಿವರವಾಗಿ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾಳೆ. ಮಾತ್ರವಲ್ಲದೆ ಹೆಲ್ಪ್ ಲೈನ್ ನಂಬರ್ ಗಳು ನಿಜವಾಗಿಯೂ ಉಪಯೋಗಕ್ಕೆ ಬರುತ್ತಾವೋ ಎಂದು ಪ್ರಶ್ನಿಸಿದ್ದಾಳೆ.

    ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ಮಹಿಳೆಯನ್ನು ಟಚ್ ಮಾಡಿ ಹಸ್ತಮೈಥುನ ಮಾಡ್ತಿದ್ದ ಉದ್ಯಮಿ ಅರೆಸ್ಟ್!