Tag: ಹವ್ಯಾಸ

  • ಸೈಕಲ್ ದಿನಾಚರಣೆ- ಸಂಗ್ರಹಿಸಿದ ಸೈಕಲ್‌ಗಳ ಫೋಟೋ ಮೂಲಕ ಪೊಲೀಸ್ ಅಧಿಕಾರಿ ವಿಶ್

    ಸೈಕಲ್ ದಿನಾಚರಣೆ- ಸಂಗ್ರಹಿಸಿದ ಸೈಕಲ್‌ಗಳ ಫೋಟೋ ಮೂಲಕ ಪೊಲೀಸ್ ಅಧಿಕಾರಿ ವಿಶ್

    ಕೋಲಾರ: ಶನಿವಾರ ವಿಶ್ವ ಸೈಕಲ್  ದಿನಾಚರಣೆಯಾಗಿದ್ದು (World Bicycle Day) , ಅಪರೂಪದ ಸೈಕಲ್‌ಗಳನ್ನು ಸಂಗ್ರಹಿಸುವ ಪೊಲೀಸ್ ಅಧಿಕಾರಿಯೊಬ್ಬರು ಸಂಗ್ರಹ ಮಾಡಿದ ಸೈಕಲ್‌ಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿಭಿನ್ನ ರೀತಿಯಲ್ಲಿ ಶುಭಾಶಯ (Wish) ತಿಳಿಸಿದ್ದಾರೆ.

    ಹಣವಂತರು ಶ್ರೀಮಂತರ ಹಳೇಯ ಕಾರುಗಳನ್ನು ಸಂಗ್ರಹ ಮಾಡುವಂತೆ ಕೋಲಾರದ (Kolar) ಡಿಎಆರ್ ಎಎಸ್‌ಐ ಬಾಬಣ್ಣ ಎಂದೆ ಕರೆಯಲ್ಪಡುವ ಪೊಲೀಸ್ ಅಧಿಕಾರಿ (Police Officer) ಹವ್ಯಾಸ (Hobby) ಎಂಬಂತೆ ವಿಶಿಷ್ಟ ಸೈಕಲ್‌ಗಳನ್ನು ಸಂಗ್ರಹ ಮಾಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸಗಳು ಇರುವುದು ಸಹಜ. ಆದರೆ ಇವರಿಗೆ ಹಳೇಯ ಹಾಗೂ ವಿಭಿನ್ನ ಸೈಕಲ್‌ಗಳನ್ನು ಸಂಗ್ರಹ ಮಾಡುವುದು ಹವ್ಯಾಸವಾಗಿದೆ. ಇದನ್ನೂ ಓದಿ: ಒಡಿಶಾ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ: ಸಿಎಂ ಸಿದ್ದರಾಮಯ್ಯ

    ಕೋಲಾರ ಜಿಲ್ಲಾ ಪೊಲೀಸರಲ್ಲಿ ಫೋಟೋಗ್ರಾಫರ್ ಆಗಿರುವ ಎಎಸ್‌ಐ ಸುರೇಂದ್ರ ಬಾಬು ಅವರನ್ನು ಎಲ್ಲರೂ ಪ್ರೀತಿಯಿಂದ ಬಾಬಣ್ಣ ಎಂದೇ ಕರೆಯುತ್ತಾರೆ. ಬಡವರ ಹಾಗೂ ಮಧ್ಯಮ ವರ್ಗದ ರಥವಾಗಿದ್ದ ಹಳೇಯ ಬೈಸಿಕಲ್ ಸಂಗ್ರಹ ಮಾಡುವುದು ಇವರ ಹವ್ಯಾಸವಾಗಿದೆ. ಇವರು ಅತ್ಯಮೂಲ್ಯ ಹಳೇಯ ಸೈಕಲ್‌ಗಳು, ಭಾರತ್ ರಾಬಿನ್ ಹುಡ್, ಇಂಗ್ಲೆಂಡ್ ರಾಬಿನ್ ಹುಡ್, ಭಾರತ ರ‍್ಯಾಲಿ, ಇಂಗ್ಲೆಂಡ್ ರ‍್ಯಾಲಿ, ಬಿಎಸ್‌ಎ ಮತ್ತು ಅಟ್ಲಾಸ್ ಒಂದಕ್ಕಿಂತ ಒಂದು ಹೆಚ್ಚು ಎಂಬಂತೆ ಬೈಸಿಕಲ್‌ಗಳನ್ನು ಸಂಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ: ಹೆಚ್‌.ಆರ್.ರಂಗನಾಥ್‌

    ಸುಮಾರು 40 ರಿಂದ 90ರ ದಶಕದ ಸೈಕಲ್‌ಗಳು ಇವರ ಬಳಿಯಿದ್ದು, ಇವುಗಳನ್ನು ಕಂಡಾಗ ಹಳಬರಿಗಂತೂ ತಾವು ಸೈಕಲ್ ಸವಾರಿ ಮಾಡಿದ ನೆನಪುಗಳು ಮರುಕಳಿಸುವುದು ಗ್ಯಾರಂಟಿ ಎಂದರೆ ಸುಳ್ಳಾಗಲಾರದು. ಇದನ್ನೂ ಓದಿ: ಒಡಿಶಾ ರೈಲು ದುರಂತ: ಉನ್ನತ ಮಟ್ಟದ ತನಿಖೆಗೆ ಲಾಲೂ ಪ್ರಸಾದ್ ಯಾದವ್ ಒತ್ತಾಯ

  • ನಿಮ್ಮ ಜೀವನಶೈಲಿ ಉತ್ತಮವಾಗಿರಬೇಕೆ? ನಿತ್ಯ ಹೀಗೆ ಮಾಡಿ..

    ನಿಮ್ಮ ಜೀವನಶೈಲಿ ಉತ್ತಮವಾಗಿರಬೇಕೆ? ನಿತ್ಯ ಹೀಗೆ ಮಾಡಿ..

    ಪ್ರತಿಯೊಬ್ಬರೂ ಜೀವನದಲ್ಲಿ ಆರೋಗ್ಯ, ಸಂತೋಷ, ನೆಮ್ಮದಿಯಿಂದ ಇರಬೇಕು ಅಂತಾ ಬಯಸುತ್ತಾರೆ. ಆದರೆ ಈ ಒತ್ತಡದ ಆಧುನಿಕ ಜೀವನ ವಿಧಾನದಿಂದ ಒಂದಿದ್ದರೆ ಮತ್ತೊಂದು ಇರಲ್ಲ ಎನ್ನುವಂತಾಗಿದೆ. ಕೆಲವರಿಗೆ ಜೀವನದಲ್ಲಿ ಎಲ್ಲಾ ಇದ್ದರೂ ನೆಮ್ಮದಿ ಇರಲ್ಲ. ಇನ್ನೂ ಕೆಲವರಿಗೆ ಖುಷಿಯ ಜೀವನ ಎಂಜಾಯ್‌ ಮಾಡಲು ಆರೋಗ್ಯವೇ ಇರಲ್ಲ.

    ನಿಮ್ಮ ಜೀವನಶೈಲಿ ಉತ್ತಮವಾಗಿರಬೇಕೆ? ಪ್ರತಿನಿತ್ಯ ಕೆಲವು ಆರೋಗ್ಯಕರ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ನಿತ್ಯ ನೀವು ಹೀಗೆ ಮಾಡಿದರೆ ನಿಮಗೆ ಖಂಡಿತವಾಗಿ ದೈಹಿಕ ಮತ್ತು ಮಾನಸಿಕವಾಗಿ ವಿಶೇಷ ಅನುಭೂತಿ ಸಿಗುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಬೆಳಗ್ಗೆ ಎದ್ದು ಒಂದು ಲೋಟ ನೀರು ಕುಡಿಯಿರಿ
    ನಿತ್ಯ ಬೆಳಗ್ಗೆ ಎದ್ದಾಕ್ಷಣ ಮಿಸ್‌ ಮಾಡದೇ ಒಂದು ಲೋಟ ನೀರು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್‌ ಮಾಡುತ್ತದೆ. ದೇಹದಲ್ಲಿನ ಕಲ್ಮಶಗಳು ಹೊರಗೆ ಹೋಗಲು ನೆರವಾಗುತ್ತದೆ.

    ನಿತ್ಯ ಒಮ್ಮೆ ಏನನ್ನಾದರೂ ಬರೆಯಿರಿ
    ಪ್ರತಿದಿನ ಒಮ್ಮೆ ಏನನ್ನಾದರೂ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ. ಕನಿಷ್ಠಪಕ್ಷ 5 ನಿಮಿಷ ನಿಮಗೆ ತೋಚಿದ್ದನ್ನು ಗೀಚಿ. ನಿಮ್ಮ ಭಾವನೆ ಅಥವಾ ನಿಮ್ಮ ಕೆಲಸದ ವೇಳಾಪಟ್ಟಿ ಹೀಗೆ ಏನನ್ನಾದರೂ ಬರೆಯಿರಿ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದಿರಿ
    ನೀವು ದಿನ ಬಳಸುವ ವಸ್ತುಗಳನ್ನು ನಿಗದಿತ ಸ್ಥಳಗಳಲ್ಲಿ ಇಟ್ಟುಕೊಳ್ಳಿ. ಅವುಗಳನ್ನು ಎಲ್ಲೆಂದರಲ್ಲಿ ಅಸ್ತವ್ಯಸ್ತವಾಗಿ ಬಿಸಾಡಬೇಡಿ. ತುರ್ತು ಸಂದರ್ಭದಲ್ಲಿ ವಸ್ತುಗಳು ನಿಮ್ಮ ಕೈಗೆ ಥಟ್‌ ಅಂತಾ ಸಿಗಬೇಕಾದರೆ ಈ ವಿಧಾನ ಸಹಕಾರಿಯಾಗಿದೆ.

    ಧ್ಯಾನ ಅಥವಾ ಪ್ರಾರ್ಥನೆ ಮಾಡಿ
    ಪ್ರತಿದಿನ ಧ್ಯಾನ ಅಥವಾ ಪ್ರಾರ್ಥನೆ ಮಾಡುವ ಹವ್ಯಾಸ ರೂಢಿಸಿಕೊಳ್ಳಿ. ಮನೆಯ ಪ್ರಶಾಂತ ವಾತಾವರಣದಲ್ಲಿ ಒಂದೆರಡು ನಿಮಿಷ ಧ್ಯಾನ, ಪ್ರಾರ್ಥನೆ ಮಾಡಿ. ಇದು ನಿಮ್ಮ ಮನಸ್ಸಿನ ಒತ್ತಡ ದೂರಾಗಿಸುತ್ತದೆ.

    ಸ್ನೇಹಿತರೊಂದಿಗೆ ಮಾತನಾಡಿ
    ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ಭಾವನೆ, ಆಲೋಚನೆಗಳನ್ನು ಹಂಚಿಕೊಳ್ಳಿ. ಬಾಂಧವ್ಯದ ಮೌಲ್ಯ ಅರಿಯಲು ಈ ವಿಧಾನ ನಿಮಗೆ ತುಂಬಾ ಸಹಕಾರಿಯಾಗಿದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಪುಸ್ತಕ ಓದಿ
    ನಿತ್ಯ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ದಿನಕ್ಕೆ ಇಷ್ಟು ಪುಟ ತಪ್ಪದೇ ಓದಬೇಕು ಎಂಬ ಧ್ಯೇಯ ಇರಬೇಕು. ಜ್ಞಾನ ಸಂಪಾದನೆಗೆ ಪುಸ್ತಕ ಓದು ಅತ್ಯವಶ್ಯ.

    ಕೃತಜ್ಞ, ದಯೆ ಮನೋಭಾವ ಇರಲಿ
    ನಿಮಗೆ ಸಹಾಯ ಮಾಡುವ, ನಿಮ್ಮ ಒಳಿತನ್ನೇ ಬಯಸುವವರಿಗೆ ಕೃತಜ್ಞರಾಗಿರಿ. ಅಲ್ಲದೇ ಇತರರ ಮೇಲೆ ದಯೆ ಮನೋಭಾವ ಬೆಳೆಸಿಕೊಳ್ಳಿ. ಇದು ಉತ್ತಮ ಜೀವನಶೈಲಿಯ ಸಕಾರಾತ್ಮಕ ಗುಣಗಳಲ್ಲಿ ಒಂದು.

    Live Tv
    [brid partner=56869869 player=32851 video=960834 autoplay=true]

  • ನಾನು ಮೂರೇ ಮೂರು ಧಾರಾವಾಹಿ ನೋಡೋದು: ಅಂಬಿ

    ನಾನು ಮೂರೇ ಮೂರು ಧಾರಾವಾಹಿ ನೋಡೋದು: ಅಂಬಿ

    ಬೆಂಗಳೂರು: ಇವಾಗ ನಗರದ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದೇನೆ. ನಾನು ಯಾವಾಗಲು ಜನರೊಂದಿಗೆ ಸಮಯ ಕಳೆಯುವಂತಹ ವ್ಯಕ್ತಿ. ಆದ್ರೆ ಫ್ಲ್ಯಾಟ್ ನಲ್ಲಿ ಅಕ್ಕಪಕ್ಕದವರು ಜನ ಬಂದರೆ ಯಾರದು? ಗಲಾಟೆ ಅಂತ ಹೇಳ್ತಾರೆ. ಹಾಗಾಗಿ ಮನೆಯಲ್ಲಿ ಒಬ್ಬನೇ ಕುಳಿತಾಗ ನಾಗಿಣಿ, ಸಿಂಧೂರ ಮತ್ತು ಹರ ಹರ ಮಹಾದೇವ ಮೂರು ಧಾರಾವಾಹಿಗಳನ್ನು ನೋಡುತ್ತೇನೆ ಎಂದು ಅಂಬರೀಶ್ ಪಬ್ಲಿಕ್ ಟಿವಿ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

    ಮೊದಲೆಲ್ಲಾ ಒಂದೆರೆಡು ವಾಹಿನಿಗಳು ಇರುತ್ತಿತ್ತು. ಇವಾಗ ಚಾನೆಲ್ ಚೇಂಜ್ ಮಾಡುತ್ತಾ ಕುಳಿತರೆ ಸಾಕು 24 ಗಂಟೆ ಕಳೆದು ಹೋಗುತ್ತದೆ. ನನ್ನ ಸಿನಿಮಾಗಳನ್ನು ಎಂದು ಮನೆಯಲ್ಲಿ ನೋಡಲ್ಲ. ಗಾಲ್ಫ್, ಟೆನ್ನಿಸ್ ಮ್ಯಾಚ್ ಬಂದರೆ ರಾತ್ರಿ ಎನ್ನದೇ ಪೂರ್ಣವಾಗಿ ನೋಡುತ್ತೇನೆ. ಇನ್ನು ನಾನು ಮ್ಯಾಚ್, ಧಾರಾವಾಹಿ ನೋಡುತ್ತಾ ಕುಳಿತರೆ ಪತ್ನಿಗೆ ಬೇಜಾರು ಆಗಬಾರದು ಆಕೆಗೊಂದು ಬೇರೆ ಟಿವಿ ಕೊಡಿಸಿದ್ದೇನೆ ಎಂದು ಹೇಳಿ ಅಂಬಿ ನಕ್ಕರು.

    ನನ್ನ ಜನಗಳೊಂದಿಗೆ ಇರಬೇಕು. ಅವರ ಜೊತೆಯೇ ನನ್ನ ಸಮಯವನ್ನು ಕಳೆಯಬೇಕು ಎಂದು ಇಷ್ಟಪಡುವ ವ್ಯಕ್ತಿ. ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು ಬಂದ ಬಳಿಕ ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚು ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇನೆ. ನಾನು ವಾಸವಾಗಿರುವ ಫ್ಲ್ಯಾಟ್ ಗೂ ಹೆಚ್ಚಿನ ಜನರನ್ನು ಕರೆಸಿಕೊಳ್ಳುವಂತಿಲ್ಲ. ಹೆಚ್ಚು ಜನರು ಸೇರಿದರೆ ನೆರೆಹೊರೆಯವರಿಗೆ ತೊಂದರೆ ಆಗುತ್ತೆ. ಒಂದು ರೀತಿ ಜೈಲಿನಲ್ಲಿ ಇದ್ದಂತೆ ಆಗುತ್ತಿದೆ. ಸಮಯ ಸಿಕ್ಕಾಗ ಗಾಲ್ಫ್ ಆಡಲು ಹೋಗುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ಅಂಬಿಯ ಅಪಾಯದ ಭವಿಷ್ಯ ನುಡಿದಿದ್ದ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ

    ಈಗಿನ ಕಾಲದ ಮಕ್ಕಳಿಗೆ ಏನು ಹೇಳೊದಕ್ಕೆ ಆಗಲ್ಲ. ನೀನು ಡಾಕ್ಟರ್ ಆಗು, ಎಂಜಿನೀಯರ್, ನಟನಾಗು ಎಂದು ಹೇಳೋದು ಕಷ್ಟ. ಇನ್ನು ಮದುವೆ ವಿಚಾರವಾಗಿ ಸಲಹೆ ನೀಡುವುದು ಕಷ್ಟ ಆಗುತ್ತೆ. ತಮಗೆ ಇಷ್ಟವಾದ್ರೆ ಯಾರನ್ನು ಬೇಕಾದರು ಮದುವೆ ಆಗಬಹುದು. ನನ್ನ ಮಗ ಇಂಡಸ್ಟ್ರಿಯಲ್ಲಿ ದೊಡ್ಡ ಹೀರೋ ಆಗಬೇಕು ಅಂತಾ ಎಂದು ನಾನು ಮತ್ತು ಸುಮಲತಾ ಆಸೆ ಪಟ್ಟಿಲ್ಲ. ನನ್ನ ಜೀವನವೇ ಬೇರೆಯಾಗಿದ್ದು ಸಿನಿಮಾ ಮತ್ತು ರಾಜಕೀಯದಲ್ಲಿಯೂ ನಾನಿದ್ದೇನೆ. ಹಾಗಾಗಿ ಈ ಎರಡರಲ್ಲಿ ಅವನಿಗೆ ಇದನ್ನೇ ಆಯ್ಕೆ ಮಾಡಿಕೊ ಅಂತ ಹೇಳಲು ಸಾಧ್ಯವಿಲ್ಲ. 21ನೇ ಶತಮಾನದಲ್ಲಿ ಯಾರಿಗೂ ಏನು ಹೇಳೊಂಗಿಲ್ಲ. ಅವರಿಗೆ ಇಷ್ಟ ಬಂದಿದ್ದನ್ನ ಮಾಡಲು ಬಿಡಬೇಕು. ಒಂದು ವೇಳೆ ಮಕ್ಕಳು ಇಷ್ಟಪಡುವ ವಲಯ ಅಥವಾ ಕೆಲಸದ ಬಗ್ಗೆ ನಮಗೆ ಗೊತ್ತಿದ್ದರೆ, ಅವರಿಗೆ ಸಲಹೆ ನೀಡಬಹುದು ಎಂದು ಹೇಳಿದ್ದರು. ಇದನ್ನೂ ಓದಿ: ಯಶ್, ಧ್ರುವ ಸರ್ಜಾಗೆ ಖಡಕ್ ವಾರ್ನಿಂಗ್ ನೀಡಿದ್ದ ಅಂಬಿ

    ನಮ್ಮ ತಂದೆಗೆ ನಾನು ಡಾಕ್ಟರ್ ಆಗಬೇಕೆಂದ ಆಸೆ ಇತ್ತು. ಆದ್ರೆ ನಾನು ಆ್ಯಕ್ಟರ್ ಆದೆ. ಇಂದು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದ್ದರಿಂದ ನನ್ನ ಹೆಸರಿನ ಮುಂದೆ ಡಾಕ್ಟರ್ ಅಂತಾ ಬಂದಿದೆ. ಒಂದು ವೇಳೆ ನಾನು ಡಾಕ್ಟರ್ ಆಗಿದ್ದರೆ, ಹೇಗಿರ್ತಿದ್ದೆ ಎಂಬುದನ್ನು ನನ್ನ ಪತ್ನಿ ಚೆನ್ನಾಗಿ ಹೇಳುತ್ತಾಳೆ. ನಾನು ಹೇಳಬಹುದಿತ್ತು, ಆದ್ರೆ ನನಗೆ ತುಂಬಾ ನಾಚಿಕೆ ಆಗುತ್ತೆ. ನಿಮಗೆ ಯಾವತ್ತಾದರೂ ಆಕೆ ಸಿಕ್ಕರೆ ಕೇಳಿ ಉತ್ತರ ಪಡೆದುಕೊಳ್ಳಿ ಅಂತಾ ಅಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv