Tag: ಹರಿ ಸಂತೋಷ್

  • ಹರಿ ಸಂತೋಷ್ ಸಾರಥ್ಯದ ಎರಡು ಚಿತ್ರಗಳಿಗೆ ಮುಹೂರ್ತ

    ಹರಿ ಸಂತೋಷ್ ಸಾರಥ್ಯದ ಎರಡು ಚಿತ್ರಗಳಿಗೆ ಮುಹೂರ್ತ

    “ಅಲೆಮಾರಿ” ಚಿತ್ರದೊಂದಿಗೆ ನಿರ್ದೇಶಕನಾಗಿ ಸಿನಿ ಜರ್ನಿ ಆರಂಭಿಸಿ, ಇಲ್ಲಿಯವರೆಗೂ ಹತ್ತು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಹರಿ ಸಂತೋಷ್ (Hari Santhosh), ಸಾರಥ್ಯದ ಎರಡು ಚಿತ್ರಗಳ ಆರಂಭೋತ್ಸವ ಕಾರ್ತಿಕ ಸೋಮವಾರದ ಶುಭದಿನದಂದು ನೆರವೇರಿತು. ಕೆ.ವಿ.ಎನ್ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ವೆಂಕಟ್ ನಾರಾಯಣ್ ಹಾಗೂ ರವಿಕುಮಾರ್ ಪೋಸ್ಟರ್ ಅನಾವರಣ ‌ಮಾಡುವ ಮೂಲಕ ನೂತನ ಚಿತ್ರಗಳಿಗೆ ಚಾಲನೆ ನೀಡಿದರು. ಡಿ.ಎಸ್ ಮ್ಯಾಕ್ಸ್ ನ ದಯಾನಂದ್ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಎರಡು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

    ಮೊದಲು “ಡಿಸ್ಕೋ” (Disco) ತಂಡದ ಸದಸ್ಯರು ಮಾತನಾಡಿದರು . “ಡಿಸ್ಕೋ” ಇದು ನಾಯಕನ ಅಡ್ಡ ಹೆಸರು ಎಂದು ಮಾತು ಆರಂಭಿಸಿದ ನಿರ್ದೇಶಕ ಹರಿ ಸಂತೋಷ್, ವಿಕ್ಕಿ ವರುಣ್ ಈ ಚಿತ್ರದ ನಾಯಕ. ನನ್ನ ಹಾಗೂ ವಿಕ್ಕಿ ವರಣ್ (Vicky Varun) ಕಾಂಬಿನೇಶನ್ ನಲ್ಲಿ “ಕಾಲೇಜ್ ಕುಮಾರ” ಚಿತ್ರದ ನಂತರ ಈ ಚಿತ್ರ ಮೂಡಿಬರುತ್ತಿದೆ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ. ನಮ್ಮ ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಕಲ್ಲೂರ್ ಸಿನಿಮಾಸ್ ಬ್ಯನಾರ್ ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಪ್ರಶಾಂತ್ ಕಲ್ಲೂರ್ ಹಾಗೂ ಹರೀಶ್ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಧ್ರುವ್ ಸಂಗೀತ ನೀಡಲಿದ್ದಾರೆ‌. ಇಂದು ಚಿತ್ರಕ್ಕೆ ಚಾಲನೆ ನೀಡಿದ ಗಣ್ಯರಿಗೆ ಧನ್ಯವಾದ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಹೇಳಿದರು.

    ಇದು ನಾನು ನಾಯಕನಾಗಿ ನಟಿಸುತ್ತಿರುವ ನಾಲ್ಕನೇ ಚಿತ್ರ. ಹಿಂದಿನ ಮೂರು ಚಿತ್ರಗಳೆ ಬೇರೆ ತರಹ.‌ ಇದೇ ಬೇರೆ ತರಹ. ನಾನು ಹೇಗೆ ಇದ್ದಿನೊ ಅದೇ ತರಹ ಪಾತ್ರ ಎನ್ನಬಹುದು. ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಇದು ಹಳ್ಳಿಯಿಂದ ಸಿಟಿಗೆ ಬಂದ ಹುಡುಗನ ಕಥೆ ಅಲ್ಲ. ಹಳ್ಳಿಯನ್ನೇ ಸಿಟಿ‌ ಮಾಡಲು ಹೊರಟ ಹುಡುಗನ ಕಥೆ. ಹರಿ ಸಂತೋಷ್ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ ಎಂದರು ನಾಯಕ ವಿಕ್ಕಿ ವರುಣ್. ಸಹ ನಿರ್ಮಾಪಕರಾದ ಪ್ರಶಾಂತ್ ಕಲ್ಲೂರ್, ಹರೀಶ್ ಹಾಗೂ ಸಂಗೀತ ನಿರ್ದೇಶಕ ಧ್ರುವ್ “ಡಿಸ್ಕೊ” ಚಿತ್ರದ ಬಗ್ಗೆ ಮಾತನಾಡಿದರು.

    ಆನಂತರ “congratulations ಬ್ರದರ್” ಚಿತ್ರತಂಡದವರು ಮಾಧ್ಯಮದ ಮುಂದೆ ಮಾತನಾಡಿದರು. ಎರಡು ವರ್ಷಗಳಿಂದ ನಾವು ಹನ್ನೆರಡು ಜನ ಸ್ನೇಹಿತರು ಸೇರಿ “ಪೆನ್ ಎನ್ ಪೇಪರ್” ಸಂಸ್ಥೆ ಆರಂಭಿಸಿದ್ದೆವು. ಈ ಮೂಲಕ  ಹಲವು ವೆಬ್ ಸಿರೀಸ್ ಗಳಿಗೆ ಹಾಗೂ ಕೆಲವು ಪ್ರೊಡಕ್ಷನ್ ಹೌಸ್ ಗಳಿಗೆ ಕಥೆ ಒದಗಿಸಿಕೊಟ್ಟಿದ್ದೇವೆ. ಈಗ ಇದೇ ತಂಡದಿಂದ ಮೊದಲ ಸಿನಿಮಾ ಮಾಡುತ್ತಿದ್ದೇವೆ. ಅದೇ ಶೀರ್ಷಿಕೆಯಿಂದಲೇ ಗಮನ ಸೆಳೆದಿರುವ “congratulations ಬ್ರದರ್”. ಈ ಚಿತ್ರದ ಕಥೆ ಬರೆಯಲು ಒಂದು ವರ್ಷವಾಯಿತು. ಮಾರ್ನಿಂಗ್ ಶೋ ಆಡಿಯನ್ಸ್ ನ ತಲೆಯಲ್ಲಿಟ್ಟಿಕೊಂಡು ಕಥೆ ಮಾಡಿದ್ದೇವೆ. ನನ್ನ ತಂಡದಲ್ಲಿರುವ  ಪ್ರತಾಪ್ ಗಂಧರ್ವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.  ಪ್ರಶಾಂತ್ ಕಲ್ಲೂರ್ , ಹರೀಶ್ ಹಾಗೂ ರವಿಕುಮಾರ್ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ‌. ಸಂಜನಾ ಈ ಚಿತ್ರದ ನಾಯಕಿ. ಅನುಷಾ ಎಂಬ ಹೊಸ ಹುಡುಗಿಯನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದೇವೆ. ರೊಮ್ಯಾಂಟಿಕ್ ಜಾನರ್ ನ ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ಪ್ರತಾಪ್, ರಕ್ಷಿತ್ ಮುಂತಾದವರು ಚಿತ್ರಕಥೆ ರಚಿಸಿದ್ದಾರೆ ಎಂದು ಕಥೆಗಾರ ಹಾಗೂ ಕ್ರಿಯೇಟಿವ್ ಹೆಡ್ ಹರಿ ಸಂತೋಷ್ ತಿಳಿಸಿದರು.

    ಹಲವು ಧಾರಾವಾಹಿಗಳಿಗೆ ಕೆಲಸ ಮಾಡಿರುವ ನನಗೆ ನಿರ್ದೇಶಕನಾಗಿ ಇದು ಮೊದಲ ಚಿತ್ರ. ನಮ್ಮ ತಂಡದ ಅನೇಕರಿಗೆ ಇದು ಹೊಸ ಹೆಜ್ಜೆ. ಸಾಮಾನ್ಯವಾಗಿ ಹೊಸ ಹೆಜ್ಜೆ ಅಷ್ಟು ಸುಲಭವಾಗಿರುವುದಿಲ್ಲ.‌ ಅದನ್ನು‌ ನಮಗೆ ಹರಿ ಸಂತೋಷ್ ಸುಲಭ ಮಾಡಿಕೊಟ್ಟಿದ್ದಾರೆ. ಹರಿ ಸಂತೋಷ್ ಅವರು ಹೇಳಿದ ಹಾಗೆ ಈ ಚಿತ್ರದ ಕಥೆ, ಚಿತ್ರಕಥೆ ರಚನೆಗೆ ವರ್ಷದ ಸಮಯ ಹಿಡಿಸಿದೆ. ನಮ್ಮ ಕಥೆ ಪೇಪರ್ ನಲ್ಲಿ ಈಗಾಗಲೇ ಗದ್ದಿದೆ. ಪ್ರೇಕ್ಷಕರು ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ. ನಾಳೆಯಿಂದಲೇ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಪ್ರತಾಪ್ ಗಂಧರ್ವ ತಿಳಿಸಿದರು.

    ಕಿರುತೆರೆ ಹಾಗೂ ನಾಟಕಗಳಲ್ಲಿ ನಟಿಸಿರುವ ನನಗೆ ಹಿರಿತೆರೆಯಲ್ಲಿ ನಾಯಕನಾಗಿ ಮೊದಲ ಚಿತ್ರ ಎಂದರು ನಾಯಕ ರಕ್ಷಿತ್ ನಾಗ್. ನಾಯಕಿ ಸಂಜನಾ, ನಟಿ ಅನೂಷ, ಸಂಗೀತ ನಿರ್ದೇಶಕ ಸೂರಜ್ ಜೋಯಿಸ್, ಛಾಯಾಗ್ರಾಹಕ ಗುರು, ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕರಾದ ಪ್ರಶಾಂತ್ ಕಲ್ಲೂರ್, ಹರೀಶ್ ಹಾಗೂ ರವಿಕುಮಾರ್ ಚಿತ್ರಕ್ಕೆ ಪ್ರೋತ್ಸಾಹ ನೀಡುವಂತೆ ಮನವಿ‌ ಮಾಡಿದರು.

  • ಬಾಲಿವುಡ್ ಗೆ ನಿರ್ದೇಶಕ ಹರಿಸಂತು ಎಂಟ್ರಿ : ಜುಲೈನಿಂದ ಲಂಡನ್ ನಲ್ಲಿ ಶೂಟಿಂಗ್

    ಬಾಲಿವುಡ್ ಗೆ ನಿರ್ದೇಶಕ ಹರಿಸಂತು ಎಂಟ್ರಿ : ಜುಲೈನಿಂದ ಲಂಡನ್ ನಲ್ಲಿ ಶೂಟಿಂಗ್

    ಕ್ಷಿಣ ಭಾರತದ ಸಿನಿಮಾ ಮೇಕರ್ ಗಳ  ಕಥಾವಸ್ತು, ಮೇಕಿಂಗ್ ಶೈಲಿ, ಭಾರತೀಯ ಚಿತ್ರರಂಗವನ್ನ ಬೆರಗುಳೊಸ್ತಿದೆ, ಇಂತಹದೊಂದು ಪರ್ವ ಈಗ ಭಾರತೀಯ ಚಿತ್ರರಂಗದಲ್ಲಿ ಬಿರುಗಾಳಿಯಂತೆ ಆವರಿಸಿದೆ. ಇವತ್ತಿಗೆ ಸೌತ್ ಸಿನಿಮಾಗಳಿಂದ ಸ್ಫೂರ್ತಿಗೊಳ್ತಿದೆ ಬಾಲಿವುಡ್. ರಿಮೇಕ್ ಮಾಡೋದಕ್ಕೆ ಮುಗಿಬಿದಿದೆ. ದಕ್ಷಿಣದ ಸಿನಿಮಾಗಳ ಡಬ್ಬಿಂಗ್ ವರ್ಶನ್ ಗೆ ಭಾರಿ ಬೇಡಿಕೆ ಶುರುವಾಗಿದೆ.

    ದಕ್ಷಿಣ ಭಾರತದ ಸಿನಿಮಾ ಮೇಕರ್ ಗಳ ಮೇಕಿಂಗ್ ಶೈಲಿ ಬಾಲಿವುಡ್ ಮಂದಿಯ ನಿದ್ದೆ ಗೆಡೆಸಿದೆ.  ಬಾಹುಬಲಿ, ಕೆ.ಜಿ.ಎಫ್, ಪುಷ್ಪ,ಆರ್,ಆರ್.ಆರ್ ಅಂತ ಸಿನಿಮಾಗಳು ಸಂಚಲ ಸೃಷ್ಟಿಸಿವೆ. ಎಸ್ .ಎಸ್ ರಾಜಮೌಳಿ, ಪ್ರಶಾಂತ್ ನೀಲ್ ಅಂತ ನಿರ್ದೇಶಕರು, ಸಿನಿಮಾ ಅನ್ನೋದು ಭಾಷೆಗಳನ್ನ ಮೀರಿದ ಮಾಧ್ಯಮ ಅದು ಎಲ್ಲಾ ಕಡೆಯೂ ಸಲ್ಲುವಂತಹದ್ದು ಅನ್ನೋದನ್ನ ಸಾರಿ ಹೇಳಿದ್ದಾರೆ.  ಇದನ್ನೂ ಓದಿ: ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

    ಇಂತಹ ಹೊತ್ತಲ್ಲೇ ಕನ್ನಡದ ಖ್ಯಾತ ನಿರ್ದೇಶಕ, ಹಾಂಟಿಂಗ್ ಲವ್ ಸ್ಟೋರಿಗಳ ಫಿಲಂ ಮೇಕರ್ ಹರಿ ಸಂತು, ನೇರವಾಗಿ ಬಾಲಿವುಡ್ ನಲ್ಲಿ ಸಿನಿಮಾ ಮಾಡೋ ಅವಕಾಶ ಪಡೆದಿದ್ದಾರೆ, ದಶಕಗಳ ಹಿಂದೆ ಕನ್ನಡದ ಕೆಲವು ಹಿರಿಯ ನಿರ್ದೇಶಕರು  ಹಿಂದಿ ಸಿನಿಮಾ ಮಾಡಿದ್ದನ್ನ ಬಿಟ್ರೆ, ಇದೀಗ ವರ್ಷಗಳ  ನಂತ್ರ ಹರಿ ಸಂತು ಆ ಸಾಲಿಗೆ ಸೇರ್ತಿದ್ದಾರೆ.

    ಲವ್ ಜಾನರ್ ಸಿನಿಮಾಗಳ ನಿಪುಣ ಹರಿಸಂತಚು ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ಲವ್ ಸ್ಟೋರಿಯನ್ನೇ ಆಯ್ಕೆ ಮಾಡಿಕೊಂಡಿದ್ದು, ಚಿತ್ರಕ್ಕೆ ಪಪ್ಪಿ ಲವ್ ಅನ್ನೋ ಮುದ್ದಾದ ಟೈಟಲ್ ನ ಇಟ್ಟಿದ್ದಾರೆ. ವೆಬ್ ಸೀರಿಸ್ ಗಳಿಂದ ಖ್ಯಾತಿ ಗಳಿಸಿರೋ ತನುಜ್ ವಿರ್ವಾನಿ, ತ್ರಿಧಾ ಚೌಧರಿ, ಸಪ್ನಪಬ್ಬಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದು, ನಿಕೇತ್ ಪಾಂಡೆ  ಬರವಣಿಗೆ ಚಿತ್ರಕ್ಕಿರಲಿದ್ದು, ರಾಜಾರಾಂ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಪ್ರಕರಣ:ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯಗೆ ಜಾಮೀನು

    ಭುವನ್ ಮೂವೀಸ್ ಸುರೇಶ್ ಹಾಗೂ ಪದ್ಮಾವತಿ ಪಿಚ್ಚರ್ಸ್ ಅವಿನಾಶ್ ಡ್ಯಾನಿಯಲ್ ಚಾರ್ಲ್ಸ್ ಯುಕೆ ಮೂಲಕದ ಬ್ಲೂ ಬ್ಲಿಂಗ್ ಪ್ರೊಡಕ್ಷನ್ಸ್ ನ ವಿಪುಲ್ ಶರ್ಮಾ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ, ಜುಲೈ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದ್ದು, ಯುಕೆ ಲಂಡನ್ ನಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯುತ್ತಿರೋದು ವಿಶೇಷ.

    Live Tv

  • ಬಂಪರ್ ಗೂ ಮೊದಲು ‘ಬೈ2ಲವ್’ – ರೊಮ್ಯಾಂಟಿಕ್ ಹೀರೋ ಆದ ನಟ ಧನ್ವೀರ್

    ಬಂಪರ್ ಗೂ ಮೊದಲು ‘ಬೈ2ಲವ್’ – ರೊಮ್ಯಾಂಟಿಕ್ ಹೀರೋ ಆದ ನಟ ಧನ್ವೀರ್

    ಜಾರ್ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಟ ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಭರವಸೆಯ ನಟ ಎನಿಸಿಕೊಂಡಿದ್ದರು. ಬಜಾರ್ ನಲ್ಲಿ ಮಾಸ್ ಪ್ರೇಕ್ಷಕ ಬಳಗವನ್ನು ರಂಜಿಸಿದ್ದ ಧನ್ವೀರ್ ಮಾಸ್ ಹೀರೋ ಆಗಿ ಹೊರಹೊಮ್ಮಿದ್ರು. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಈ ನಟ ಬಂಪರ್ ಸಿನಿಮಾ ಮೂಲಕ ಆಕ್ಷನ್ ಹೀರೋ ಆಗಿ ಮಿಂಚಲು ಸಕಲ ತಯಾರಿ ಕೂಡ ನಡೆಸಿದ್ದರು. ಈಗ ಆಕ್ಷನ್ ಸಿನಿಮಾಗೂ ಮುನ್ನ ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ಬರಲು ಸಜ್ಜಾಗುತ್ತಿದ್ದಾರೆ ಧನ್ವೀರ್.

    ಹೌದು, ಬಂಪರ್ ಸಿನಿಮಾ ನಿರ್ದೇಶಕ ಹರಿ ಸಂತೋಷ್ ಧನ್ವೀರ್ ರನ್ನು ರೊಮ್ಯಾಂಟಿಕ್ ಹೀರೋ ಆಗಿ ತೆರೆ ಮೇಲೆ ತರಲು ಹೊರಟಿದ್ದು, ತಾವೇ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ‘ಬೈ2ಲವ್’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಆದ್ದರಿಂದ ಬಂಪರ್ ಸಿನಿಮಾಗೂ ಮೊದಲು ಧನ್ವೀರ್ ಬೈ 2 ಲವ್ ಪ್ರೇಮ್ ಕಹಾನಿ ಹೇಳಲು ತೆರೆ ಮೇಲೆ ಬರೋದು ಕನ್ಪರ್ಮ್ ಆಗಿದೆ.

    ಚಿತ್ರದಲ್ಲಿ ಧನ್ವೀರ್ ಜೊತೆ ಕಿಸ್ ಸಿನಿಮಾ ಖ್ಯಾತಿಯ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ನಾಯಕಿಯಾಗಿ ನಟಿಸಿದ್ದ ಮುದ್ದು ಮುಖದ ಚೆಲುವೆ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹೊಸ ಚಿತ್ರ ದುಬಾರಿಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ‘ಬೈ2ಲವ್’ ಸಿನಿಮಾದಲ್ಲಿ ಧನ್ವೀರ್ ಗೆ ಜೊತೆಯಾಗಲಿದ್ದಾರೆ.

    ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ `ಬೈ2ಲವ್’ ಟೀಂ. ಕೆವಿಎನ್ ಪ್ರೊಡಕ್ಷನ್ ಬೈ2ಲವ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಈ ರೊಮ್ಯಾಂಟಿಕ್ ಲವ್ ಸಬ್ಜೆಕ್ಟ್ ಸಿನಿಮಾಗಿದೆ.

  • ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

    ಧನ್ವೀರ್ ಬರ್ತ್‍ಡೇಗೆ ಹೊಸ ರಂಗು ತುಂಬಿತು ಬಂಪರ್ ಟೀಸರ್!

    ಗಂಟೆ ಕಳೆಯೋದರೊಳಗೆ ದಾಖಲೆಯ ವೀಕ್ಷಣೆ!

    ಬಜಾರ್ ಖ್ಯಾತಿಯ ಧನ್ವೀರ್ ನಟನೆಯ ಬಂಪರ್ ಚಿತ್ರ ವರ್ಷದ ಹಿಂದೆಯೇ ಸಾಕಷ್ಟು ಸದ್ದು ಮಾಡಿದೆ. ಮೊದಲ ಚಿತ್ರದಲ್ಲಿಯೇ ಮಾಸ್ ಲುಕ್ಕಲ್ಲಿ ಮಿಂಚಿದ್ದ ಧನ್ವೀರ್ ಬಂಪರ್ ಮೂಲಕ ಮತ್ತೊಂದು ಭರ್ಜರಿ ಗೆಟಪ್ಪಿನಲ್ಲಿ ಎಂಟ್ರಿ ಕೊಡುತ್ತಿರೋ ವಿಚಾರವೂ ಈ ಟೈಟಲ್ ಮೂಲಕವೇ ಸ್ಪಷ್ಟವಾಗಿತ್ತು. ಖ್ಯಾತ ಯುವ ನಿರ್ಮಾಪಕ ಸುಪ್ರೀತ್ ನಿರ್ಮಾಣ ಮಾಡಿರೋ ಈ ಚಿತ್ರದ ಮತ್ತಷ್ಟು ಚಿತ್ರಣವೀಗ ಜಾಹೀರುಗೊಂಡಿದೆ. ನಾಯಕ ಧನ್ವೀರ್ ಹುಟ್ಟುಹಬ್ಬಕ್ಕೆ ಗಿಫ್ಟ್ ಎಂಬಂತೆ ಚಿತ್ರತಂಡ ಪರಿಣಾಮಕಾರಿಯಾದ ಟೀಸರ್ ಒಂದನ್ನು ಲಾಂಚ್ ಮಾಡಿದೆ. ಈ ಮೂಲಕ ಹೆಸರಿಗೆ ತಕ್ಕುದಾದ ಕಂಟೆಂಟಿನ ಸಿನಿಮಾ ನೋಡೋ ಭಾಗ್ಯ ಪ್ರೇಕ್ಷಕರಿಗೆ ಸಿಗಲಿರೋದು ಪಕ್ಕಾ ಆಗಿದೆ.

    ಇದು ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಚಿತ್ರ. ಇದರ ಟೀಸರ್ ಬಿಡುಗಡೆಗೊಂಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಡೆದುಕೊಂಡಿರೋ ವೀಕ್ಷಣೆ, ಅದರೊಂದಿಗೆ ಸೃಷ್ಟಿಯಾಗಿರೋ ಕ್ರೇಜ್, ಸಿಕ್ಕಿರೋ ಅಪಾರ ಪ್ರಮಾಣದ ಪ್ರತಿಕ್ರಿಯೆಗಳೆಲ್ಲವೂ ಧನ್ವೀರ್ ಪಾಲಿಗೆ ಈ ಹುಟ್ಟುಹಬ್ಬದ ಸಂಭ್ರಮವನ್ನ ಇಮ್ಮಡಿಸಿದೆ. ಅದರಾಚೆ ನಿಂತು ನೋಡಿದರೂ ಬಂಪರ್ ಟೀಸರ್‍ನದ್ದು ಭರವಸೆ ಮೂಡಿಸುವಂಥಾ ಖದರ್. ಧನ್ವೀರ್ ಮೇಲೆ ಮೊದಲ ಚಿತ್ರದಲ್ಲಿ ಎಂಥಾ ನಿರೀಕ್ಷೆ ಮೊಳೆತುಕೊಂಡಿತ್ತೋ ಅದನ್ನು ಮೀರಿಸುವಂಥ ರಗಡ್ ಕಥಾನಕದ ಹೊಳಹು ಸಲೀಸಾಗಿ ಸಿಕ್ಕಂತಾಗಿದೆ.

    ಧನ್ವೀರ್ ಮೊದಲ ಸಿನಿಮಾದಲ್ಲಿಯೇ ಮಾಸ್ ಹೀರೋ ಆಗಿ ಅವತರಿಸಿದ್ದವರು. ನಟನೆ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡಿದ್ದ ಧನ್ವೀರ್‍ಗೆ ಒಂದೇ ಒಂದು ಸಿನಿಮಾ ಮೂಲಕ ಕುದುರಿಕೊಂಡಿರೋ ಅಭಿಮಾನಿ ಬಳಗ ನಿಜಕ್ಕೂ ಬೆರಗಾಗುವಂತಿದೆ. ಅಂಥಾ ಅಭಿಮಾನಿಗಳೆಲ್ಲ ಧನ್ವೀರ್ ಅವರನ್ನು ಮತ್ತಷ್ಟು ರಿಗಡ್ ಲುಕ್ಕಿನಲ್ಲಿ ನೋಡಲು ಕಾತರಿಸಿದ್ದರು. ಅದನ್ನು ಸಂಪೂರ್ಣವಾಗಿ ತಣಿಸುವಂಥ ಗೆಟಪ್ಪಿನಲ್ಲಿ ಧನ್ವೀರ್ ಕಂಗೊಳಿಸಿದ್ದಾರೆ. ಮಾಸ್ ಮಾತ್ರವಲ್ಲದೆ ಸಖತ್ ಸ್ಟೈಲಿಶ್ ಆಗಿಯೂ ಅವರು ಕಾಣಿಸಿಕೊಂಡಿದ್ದಾರೆ.

    ಕಳೆದ ವರ್ಷವೇ ಧನ್ವೀರ್ ಹುಟ್ಟುಹಬ್ಬದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಪರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಳಿಸಿದ್ದರು. ಆ ದೆಸೆಯಿಂದಲೇ ಭಾರೀ ಸೌಂಡು ಮಾಡಿದ್ದ ಬಂಪರ್ ಕೊರೊನಾ ಕಾಟ ಇಲ್ಲದೇ ಹೋಗಿದ್ದರೆ ಈ ಹೊತ್ತಿಗೆಲ್ಲ ಬಿಡುಗಡೆಯಾಗಿರುತ್ತಿತ್ತೇನೋ. ಆದರೆ, ಕೊರೊನಾದಿಂದ ಕೊಂಚ ಹಿನ್ನಡೆಯಾದರೂ ಬಂಪರ್ ಅನ್ನು ಮಜಬೂತಾಗಿಯೇ ಸಿದ್ಧಗೊಳಿಸಲಾಗಿದೆ. ಅದಕ್ಕೆ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿರೋ ಈ ಟೀಸರ್‍ಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ.