Tag: ಹಕ್ಕಿ

  • ಪಕ್ಷಿ ಬಡಿದು ಎಂಜಿನ್‌ಗೆ ಬೆಂಕಿ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ಪಕ್ಷಿ ಬಡಿದು ಎಂಜಿನ್‌ಗೆ ಬೆಂಕಿ – ತುರ್ತು ಭೂಸ್ಪರ್ಶ ಮಾಡಿದ ವಿಮಾನ

    ವಾಷಿಂಗ್ಟನ್: ವಿಮಾನ (Flight) ಹಾರಾಟ ನಡೆಸುತ್ತಿದ್ದ ವೇಳೆ ಪಕ್ಷಿ (Bird) ಬಡಿದ ಪರಿಣಾಮ ಎಂಜಿನ್‌ನಲ್ಲಿ ಬೆಂಕಿ (Fire) ಕಾಣಿಸಿಕೊಂಡು ವಿಮಾನವನ್ನು ತುರ್ತು ಭೂಸ್ಪರ್ಶ (Emergency Landing) ಮಾಡಿರುವ ಘಟನೆ ಅಮೆರಿಕದಲ್ಲಿ (America) ನಡೆದಿದೆ.

    ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಅಮೆರಿಕನ್ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್‌ಆಫ್ ಆದ ಕೆಲವೇ ಹೊತ್ತಿನಲ್ಲಿ ಅದರ ಎಂಜಿನ್‌ನಲ್ಲಿ ಬೆಂಕಿ ಗೋಚರಿಸಿಕೊಂಡಿದೆ. ಈ ಹಿನ್ನೆಲೆ ವಿಮಾನವನ್ನು ತಕ್ಷಣವೇ ಕೊಲಂಬಸ್‌ನ ಜಾನ್ ಗ್ಲೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ.

    ವರದಿಗಳ ಪ್ರಕಾರ ಬೋಯಿಂಗ್ 737 ಫ್ಲೈಟ್ 1958 ಕೊಲಂಬಸ್‌ನಿಂದ ಫೀನಿಕ್ಸ್‌ಗೆ ಹೊರಟಿತ್ತು. ವಿಮಾನ ಟೇಕ್‌ಆಫ್ ಆಗುತ್ತಿದ್ದಂತೆ ಹಕ್ಕಿ ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆ ಆವರಿಸುತ್ತಿದ್ದಂತೆಯೇ ಎಚ್ಚೆತ್ತ ಪೈಲಟ್‌ಗಳು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ಸದ್ಯ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಗಾಯಗೊಂಡಿಲ್ಲ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಏ.26 ಕ್ಕೆ ರಾಜ್ಯಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಂಟ್ರಿ

    ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಬಳಿಕ ಎಲ್ಲಾ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಯಿತು. ವಿಮಾನಕ್ಕೆ ಹಕ್ಕಿ ಬಡಿದಿರುವ ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

  • ಆಕಾಶ ಏರ್‌ಗೆ ಬಡಿದ ಹಕ್ಕಿ – ತಪ್ಪಿದ ದುರಂತ, ವಿಮಾನದ ಮೂತಿಗೆ ಹಾನಿ

    ಆಕಾಶ ಏರ್‌ಗೆ ಬಡಿದ ಹಕ್ಕಿ – ತಪ್ಪಿದ ದುರಂತ, ವಿಮಾನದ ಮೂತಿಗೆ ಹಾನಿ

    ನವದೆಹಲಿ: ಇತ್ತೀಚೆಗಷ್ಟೆ ಪ್ರಾರಂಭವಾಗಿದ್ದ ಆಕಾಶ ಏರ್ (Akasa Air) ವಿಮಾನವೊಂದಕ್ಕೆ (Plane) ಹಕ್ಕಿಯೊಂದು (Bird) ಬಡಿದಿರುವ ಘಟನೆ ಗುರುವಾರ ಬೆಳಗ್ಗೆ ನಡೆಸಿದೆ. ಅದೃಷ್ಟವಶಾತ್ ಅನಾಹುತ ತಪ್ಪಿದ್ದು, ವಿಮಾನದ ಮೂತಿಗೆ ಸ್ವಲ್ಪ ಮಟ್ಟದ ಹಾನಿಯಾಗಿದೆ.

    ಇಂದು ಬೆಳಗ್ಗೆ ಅಹಮದಾಬಾದ್‌ನಿಂದ (Ahmedabad) ಹೊರಟಿದ್ದ ಆಕಾಶ ಏರ್ ವಿಮಾನ ಬೋಯಿಂಗ್ 738 ಮ್ಯಾಕ್ಸ್ 8 ಭೂಮಿಯಿಂದ ಸುಮಾರು 1,900 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಸಂದರ್ಭ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ದೆಹಲಿಯಲ್ಲಿ (Delhi) ವಿಮಾನ ಇಳಿದ ಬಳಿಕ ಅದಕ್ಕೆ ಹಕ್ಕಿ ಬಡಿದಿರುವುದು ಗಮನಕ್ಕೆ ಬಂದಿದೆ. ಇದರಿಂದ ವಿಮಾನದ ಮೂತಿಗೆ ಹಾನಿಯಾಗಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ತಿಳಿಸಿದೆ. ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ಚಿತ್ರಮಂದಿರಕ್ಕೆ ಮುತ್ತಿಗೆ – ಗಂಧದ ಗುಡಿ ಸಿನಿಮಾ ಪ್ರದರ್ಶನಕ್ಕೆ ಪಟ್ಟು

    ಈ ಹಿಂದೆ ಅಕ್ಟೋಬರ್ 14 ರಂದು ಬೆಂಗಳೂರಿನಿಂದ ಹೊರಟಿದ್ದ ಆಕಾಶ ಏರ್ ವಿಮಾನಕ್ಕೆ ಹಕ್ಕಿ ಬಡಿದ ಪರಿಣಾಮ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ ಭರ್ಜರಿ ಪೋಸ್ ಸೆರೆಹಿಡಿದ ಸಿಎಂ ಬೊಮ್ಮಾಯಿ!

    Live Tv
    [brid partner=56869869 player=32851 video=960834 autoplay=true]

  • ಹಕ್ಕಿ ಡಿಕ್ಕಿಯಾಗಿ 185 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ!

    ಹಕ್ಕಿ ಡಿಕ್ಕಿಯಾಗಿ 185 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ!

    ಪಾಟ್ನಾ: ಸುಮಾರು 185 ಮಂದಿ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಗೊಂಡ ಘಟನೆ ಇಂದು ನಡೆದಿದೆ.

    ವಿಮಾನ ದೆಹಲಿಗೆ ಹೊರಟಿತ್ತು. ಆದರೆ ಟೇಕಾಫ್ ಆಗುತ್ತಿದ್ದಂತೆಯೇ ಎಡ ಬದಿಯ ಎಂಜಿನ್‍ಗೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನ ಟೇಕಾಫ್ ಆಗುತ್ತಿರುವುದನ್ನು ಸ್ಥಲೀಯರು ವೀಡಿಯೋ ಮಾಡಿದ್ದರು. ಈ ವೇಳೆ ಬೆಂಕಿ ಕಾಣಿಸಿರುವುದು ಬೆಳಕಿಗೆ ಬಂದಿದೆ. ಕೂಡಲೆ ವಿಮಾನವು ನಿಲ್ದಾಣಕ್ಕೆ ಹಿಂದಿರುಗಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಟೇಕ್-ಆಫ್ ಸಮಯದಲ್ಲಿ ಹಕ್ಕಿಗೆ ಪೆಟ್ಟಾಗಿದೆ ಎಂದು ಪೈಲಟ್‍ಗಳು ಶಂಕಿಸಿದ್ದಾರೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಮೂಲಗಳು ತಿಳಿಸಿವೆ.

    ಘಟನೆ ಬಗ್ಗೆ ಪ್ರಯಾಣಿಕರು ಪ್ರತಿಕ್ರಿಯಿಸಿ, ವಿಮಾನ ಟೇಕ್-ಆಫ್ ಆದ ಕೂಡಲೇ ಅದರೊಳಗಿದ್ದ ನಮಗೆ ಭಯ ಆರಂಭವಾಯಿತು. ಅಲ್ಲದೆ ಲೈಟ್ ಗಳು ಆಫ್ ಆಗುತ್ತಿದ್ದಂತೆಯೇ ಆದ ಭಯ ಅಷ್ಟಿಷ್ಟಲ್ಲ ಎಂದು ಹೇಳಿದರು.

    ಈ ಸಂಬಂಧ ಪಾಟ್ನಾ ಡಿಎಂ ಚಂದ್ರಶೇಖರ್ ಸಿಂಗ್ ಮಾತನಾಡಿ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಸ್ಥಳೀಯರು ಮೊದಲು ಗಮನಿಸಿದ್ದಾರೆ. ನಂತರ ಅವರು ಜಿಲ್ಲಾ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ದೆಹಲಿಗೆ ಹೊರಟಿದ್ದ ವಿಮಾನವು ಪಾಟ್ನಾ ವಿಮಾನ ನಿಲ್ದಾಣಕ್ಕೆ ಮರಳಿತು. ಎಲ್ಲಾ 185 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಮಾಹಿತಿ ನಿಡಿದರು.

    ಸ್ಪೈಸ್ ಜೆಟ್ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಿದೆ ಎಂದು ಪಾಟ್ನಾ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ಯಾವ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ದೆಹಲಿಗೆ ಅವರ ಪ್ರಯಾಣವನ್ನು ಪರ್ಯಾಯ ವಿಮಾನದ ಮೂಲಕ ವ್ಯವಸ್ಥೆಗೊಳಿಸಲಾಗುತ್ತಿದೆ. ಬೆಂಕಿಗೆ ಕಾರಣವೇನು ಎಂಬುದು ತನಿಖೆಯ ವಿಷಯವಾಗಿದೆ ಎಂದು ಅವರು ಹೇಳಿದರು.

    Live Tv

  • ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ತಿರುವನಂತಪುರಂ: ಕೇರಳದ ಆಲಪ್ಪುಳದ ಕುಟ್ಟನಾಡ್ ಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣ ದೃಢಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ವಾರ ಆಲಪ್ಪುಳ ಜಿಲ್ಲೆಯ ಕೋಟ್ಟನಾಡ್‍ನಲ್ಲಿ ರೈತರೊಬ್ಬರು ಸಾಕಿದ್ದ ಸಾವಿರಾರು ಬಾತುಕೋಳಿಗಳು ಮತ್ತು ಸ್ಥಳೀಯ ಹಕ್ಕಿಗಳು ಸತ್ತ ಹಿನ್ನೆಲೆ ಅಧಿಕಾರಿಗಳು ಭೋಪಾಲ್‍ನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‍ಗೆ ಮಾದರಿಗಳನ್ನು ಕಳುಹಿಸಿದ್ದರು. ಇದೀಗ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿದೆ.

    ಹೀಗಾಗಿ ಹಕ್ಕಿ ಜ್ವರ ಹರಡದಂತೆ ರೋಗ ಪೀಡಿತ ಪ್ರದೇಶದಲ್ಲಿರುವ ಬಾತುಕೋಳಿಗಳನ್ನು ಕೊಲ್ಲಲು ಪಶುವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಇದೀಗ ಪ್ರಕರಣ ಪತ್ತೆಯಾದ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು ಮತ್ತು ಇತರ ಪಕ್ಷಿಗಳನ್ನು ನಾಶಗೊಳಿಸಲು ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ಸೋಂಕು ಹರಡುವುದನ್ನು ತಡೆಗಟ್ಟಲು 12 ಕಿ.ಮೀ. ದೂರದಲ್ಲಿರುವ ಬಾತುಕೋಳಿಗಳು, ಕೋಳಿಗಳು, ಮೊಟ್ಟೆಗಳು, ಗೊಬ್ಬರ ಮತ್ತು ಇತರ ಹಕ್ಕಿಗಳ ಚಲನೆಯ ಮೇಲೆ ನಿರ್ಬಂಧ ಹೇರಲಾಗಿದೆ. ಈ ವರ್ಷ ಕೇರಳದಲ್ಲಿ ಎರಡನೇ ಬಾರಿಗೆ ಹಕ್ಕಿ ಜ್ವರ ದೃಢಪಟ್ಟಿದೆ. ಇದನ್ನೂ ಓದಿ: ರಾವತ್, ಸೇನಾಧಿಕಾರಿಗಳ ಮರಣ ಸಂಭ್ರಮಿಸಿದ ಕಿಡಿಗೇಡಿಗಳ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ

  • ಕೊಕ್ಕರೆ ಬೆಳ್ಳೂರಿನಲ್ಲಿ 6 ಹೆಜ್ಜಾರ್ಲೆ ಸಾವು – ರಂಗನತಿಟ್ಟಿನಲ್ಲಿ ಹಕ್ಕಿ ಜ್ವರದ ಭೀತಿ

    ಕೊಕ್ಕರೆ ಬೆಳ್ಳೂರಿನಲ್ಲಿ 6 ಹೆಜ್ಜಾರ್ಲೆ ಸಾವು – ರಂಗನತಿಟ್ಟಿನಲ್ಲಿ ಹಕ್ಕಿ ಜ್ವರದ ಭೀತಿ

    ಮಂಡ್ಯ: ದೇಶದ ನಾನಾ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇದೀಗ ಸಕ್ಕರೆ ನಾಡಿನ ಪ್ರಸಿದ್ಧ ಪಕ್ಷಿಧಾಮದಲ್ಲಿ ಕೊಕ್ಕರೆಗಳು ನಿಗೂಢ ಸಾನ್ನಪ್ಪಿದೆ. ಅಲ್ಲದೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ.

    ರಾಜಸ್ಥಾನ, ಮಧ್ಯಪ್ರದೇಶದ, ಹಿಮಾಚಲ ಪ್ರದೇಶದ, ಗುಜರಾತ್ ಕೇರಳ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ನಡುವೆ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪಕ್ಷಿಧಾಮದಲ್ಲಿ ಹೆಜ್ಜಾರ್ಲೆ ಪ್ರಬೇಧದ ಕೊಕ್ಕರೆಗಳು ಸಾವನ್ನಪ್ಪಿದ್ದು, ಜನರ ಆತಂಕಕ್ಕೆ ಕಾರಣವಾಗಿದ್ದರೆ, ಮತ್ತೊಂದು ಪ್ರಸಿದ್ಧ ಪಕ್ಷಿಧಾಮದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ಕೊಕ್ಕರೆ ಬೆಳ್ಳೂರಿನಲ್ಲಿ ಕಳೆದ 20 ದಿನಗಳಿಂದ 6 ಹೆಜ್ಜಾರ್ಲೆ ಸಾವನ್ನಪ್ಪಿದೆ. ಅಂದಹಾಗೆ ವಿಶಿಷ್ಟ ಪಕ್ಷಧಾಮವಾಗಿದ್ದು, ಮಾನವರ ನಡುವೇಯೇ ಬದುಕುವ ಹಕ್ಕಿಗಳು ಜೀವಿಸುತ್ತಿರುವ ಸುಂದರ ಪ್ರಾಕೃತಿಕ ಸ್ಥಳ. ಸಾಮಾನ್ಯವಾಗಿ ಚಳಿಗಾಲದಲ್ಲಿ ದೇಶ ಹಾಗೂ ವಿದೇಶಗಳಿಂದ ವಿವಿಧ ಪ್ರಭೇದದ ಪಕ್ಷಿಗಳು ಸಂತಾನೋತ್ಪತಿಗಾಗಿ ಬರುತ್ತವೆ. ಅದ್ರಲ್ಲಿ ಹೆಜ್ಜಾರ್ಲೆ ಹಾಗೂ ಪೇಂಟೆಡ್ ಸ್ಟ್ರೋಕ್ ಹೆಚ್ಚು ಬರುತ್ತವೆ. ಇಲ್ಲಿನ ನಿವಾಸಿಗಳೂ ಕೂಡ ಪಕ್ಷಿಗಳ ಬಗ್ಗೆ ಬಹಳ ಕಾಳಜಿಹೊಂದಿದ್ದು, ಅವುಗಳ ರಕ್ಷಣೆ ಮಾಡುತ್ತಿದ್ದಾರೆ. ಈ ನಡವೆ ದೇಶದ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹೊತ್ತಲ್ಲೇ ಕೊಕ್ಕರೆಗಳು ಸಾವನ್ನಪ್ಪುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಎಚ್ಚೇತ್ತುಕೊಳ್ಳಬೇಕಿದೆ.

    ಸಾವನ್ನಪ್ಪಿರುವ 6 ಹೆಜ್ಜಾರ್ಲೆಗಳ ಮರಣೋತ್ತರ ಪರೀಕ್ಷೆ ನಡೆಸಿರುವ ಕೊಕ್ಕರೆ ಬೆಳ್ಳೂರು ಪಶುವೈದ್ಯರು, ಸ್ಯಾಂಪಲ್ ಗಳನ್ನು ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ 5 ಸ್ಯಾಂಪನ್ ರಿಪೋರ್ಟ್ ವೈದ್ಯರ ಕೈಸೇರಿದ್ದು, ಜಂತು ಹುಳು ಸಮಸ್ಯೆಯಿಂದ ಪಕ್ಷಿಗಳು ಸಾವನ್ನಪಿರುವುದು ದೃಢಪಟ್ಟಿದೆ. ಮಂಗಳವಾರ ಮೃತಪಟ್ಟಿರುವ ಪಕ್ಷಿಯ ಸ್ಯಾಂಪಲ್ ರಿಪೋರ್ಟ್ ಬರಬೇಕಿದ್ದು, ಹಕ್ಕಿ ಜ್ವರದ ಚಿಹ್ನೆಗಳು ಇಲ್ಲಿದಿರುವುದರಿಂದ ಆತಂಕಪಡುವ ಅವಶ್ಯಕತೆ ಇಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.

    ಇತ್ತ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲೂ ಸಹ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಕೇರಳದಲ್ಲಿ ಹೀಗಾಗಲೇ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಇದು ಈ ಭಾಗಕ್ಕೂ ಸಗ ಹರಡುವ ಸಾಧ್ಯತೆ ಇದೆ. ಹೀಗಾಗಿ ಇಂದು ಡಿಸಿಎಫ್ ಪ್ರಶಾಂತ್‍ಕುಮಾರ್ ಪಕ್ಷಿ ಧಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ರಂಗನತಿಟ್ಟು ಪಕ್ಷಿಧಾಮದ್ಯಾಂತ ಹೈಪರ್ ಕ್ಲೋರೈಡ್‍ನ್ನು ಸಹ ಸಿಂಪಡಣೆ ಮಾಡಲಾಗಿದೆ. ಮುಂದುವರಿದು ಪ್ರತಿ ವಾರ ಪಕ್ಷಿಗಳ ಸ್ಯಾಂಪಲ್‍ನ್ನು ಸಂಗ್ರಹ ಮಾಡಿ ಲ್ಯಾಬ್‍ಗೆ ಸಹ ಕಳಿಸಿಕೊಡಲಾಗುವುದು ಎಂದು ಡಿಸಿಎಫ್ ಪ್ರಶಾಂತ್‍ಕುಮಾರ್ ತಿಳಿಸಿದ್ದಾರೆ.

    ಸದ್ಯ ದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದೆ ಸಮಯದಲ್ಲೇ ಕೊಕ್ಕರೆ ಬೆಳ್ಳೂರಿನಲ್ಲಿ ಕೊಕ್ಕರೆಗಳು ಸಾವನ್ನಪ್ಪಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಇನ್ನೊಂಡೆ ರಂಗನತಿಟ್ಟು ಪಕ್ಷಿಧಾಮದ ಅಧಿಕಾರಿಗಳಿಗೆ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳಿಗೂ ಸಹ ಮುಂದಾಗಿದ್ದಾರೆ.

  • ಮೂರು ಹಕ್ಕಿಗಳ ಸಾವು – ಆತಂಕದಲ್ಲಿ ಶಿವಮೊಗ್ಗ ಜನತೆ

    ಮೂರು ಹಕ್ಕಿಗಳ ಸಾವು – ಆತಂಕದಲ್ಲಿ ಶಿವಮೊಗ್ಗ ಜನತೆ

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಯ ಜೊತೆಯಲ್ಲೇ ಶಿವಮೊಗ್ಗದ ಜನತೆಗೆ ಹಕ್ಕಿಜ್ವರದ ಭೀತಿ ಎದುರಾಗಿದೆ. ನಗರದ ಬಿ.ಎಚ್.ರಸ್ತೆಯಲ್ಲಿರುವ ಸರಕಾರಿ ಡಯಟ್ ಕಾಲೇಜಿನಲ್ಲಿ ಇಂದು ಮೂರು ಹಕ್ಕಿಗಳು ಮೃತಪಟ್ಟಿದ್ದು ಕಾಲೇಜಿನ ಸುತ್ತಮುತ್ತಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಪಾಂಡು ಎರಾನ್ ಎಂಬ ಜಾತಿಗೆ ಸೇರಿದ ಮೂರು ಹಕ್ಕಿಗಳು ಕಾಲೇಜಿನ ಆವರಣದಲ್ಲೇ ಸತ್ತು ಬಿದ್ದಿವೆ. ಹಕ್ಕಿಗಳು ಮೃತಪಟ್ಟಿರುವ ಬಗ್ಗೆ ಕಾಲೇಜಿನ ಸಿಬ್ಬಂದಿ ಪಶು ವೈದ್ಯರಿಗೆ ತಿಳಿಸಿದ ನಂತರ ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯರು ಹಕ್ಕಿಗಳ ಮೃತದೇಹ ಪರಿಶೀಲನೆ ನಡೆಸಿದ್ದಾರೆ.

    ಈ ಹಕ್ಕಿಗಳು ಸಹಜ ರೀತಿಯಲ್ಲಿ ಮೃತಪಟ್ಟಿವೆ. ಈ ಬಗ್ಗೆ ನಾಗರೀಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಮೃತ ಹಕ್ಕಿಗಳನ್ನು ಲ್ಯಾಬ್‍ನಲ್ಲಿ ಪರೀಕ್ಷೆಗೆ ಒಳಪಡಿಸುತ್ತೇವೆ. ಈಗಾಗಿ ವರದಿ ಬಂದ ನಂತರ ಈ ಹಕ್ಕಿಗಳು ಜ್ವರದಿಂದ ಮೃತಪಟ್ಟಿದ್ದ, ಅಥವಾ ಇಲ್ಲವೋ ಎಂಬುದನ್ನು ವರದಿ ಬಂದ ನಂತರ ತಿಳಿಸುವುದಾಗಿ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಜಯಪ್ರಕಾಶ್ ತಿಳಿಸಿದ್ದಾರೆ.

  • ನೋಡುಗರನ್ನು ಆಕರ್ಷಿಸುತ್ತಿರುವ ಹಕ್ಕಿಗಳ ಗೂಡಿನ ವಿನ್ಯಾಸ

    ನೋಡುಗರನ್ನು ಆಕರ್ಷಿಸುತ್ತಿರುವ ಹಕ್ಕಿಗಳ ಗೂಡಿನ ವಿನ್ಯಾಸ

    ಕೋಲಾರ: ಬರದ ನಾಡು, ಚಿನ್ನದ ಬೀಡು ಕೋಲಾರದಲ್ಲಿ ಗೀಜಗ ಗೂಡಿನ ಸುಂದರ ಸೊಬಗಿನ ಅಂದ ನೋಡಲು ಎರಡು ಕಣ್ಣುಗಳು ಸಾಲದಾಗಿವೆ. ಬಣ್ಣ ಬಣ್ಣದ ಗೀಜಗ ಪಕ್ಷಿಗಳು ನೀರಿಲ್ಲದ ಬರಿದಾಗಿರುವ ಕೆರೆಗಳಲ್ಲಿ ಬೆಳೆದಿರುವ ಜಾಲಿ ಮರಗಳಲ್ಲಿ ತಮ್ಮದೆ ಕನಸಿನ ಗೂಡು ಕಟ್ಟಿಕೊಂಡು ಆನಂದವಾಗಿವೆ.

    ತಾವೆ ನಿರ್ಮಿಸಿಕೊಂಡಿರುವ ಗೂಡಿನಲ್ಲಿ ಕದ್ದು ಮುಚ್ಚಿ ಹಾಡುತ್ತಿರುವ ಬಣ್ಣ ಬಣ್ಣದ ಹಕ್ಕಿ ಸದ್ದು, ಸುಂದರವಾದ ಗೂಡಿನ ವಿನ್ಯಾಸ ನೋಡುಗರನ್ನು ಆಕರ್ಷಿಸುತ್ತಿದೆ. ಕೆಲವು ಪಕ್ಷಿಗಳು ಬೆಳಗ್ಗೆ ಆಹಾರ ಅರಸಿ ಹೊರಟರೆ ಮತ್ತೆ ಸಂಜೆ ಗೂಡು ಸೇರಿಕೊಳ್ಳುತ್ತವೆ. ಅವುಗಳು ಗೂಡು ಸೇರಿಕೊಳ್ಳುತ್ತಿದ್ದಂತೆ ಖುಷಿಯಾಗಿ ಉಳಿದ ಪಕ್ಷಿಗಳೆಲ್ಲ ಗಜಿ ಬಿಜಿ ಎಂದು ಮಾಡುವ ಸದ್ದು, ಅವುಗಳೊಂದಿಗೆ ಮರಿಗಳ ಸಂತೋಷದ ಕ್ಷಣಗಳು ನೋಡುವ ಕಣ್ಣುಗಳಿಗೆ ಮುದ ನೀಡುವುದಲ್ಲದೆ, ಅವುಗಳ ಸದ್ದು ಕಿವಿಗೆ ಸಂಗೀತದ ಮಾದರಿಯ ಆನಂದ ನೀಡುತ್ತದೆ.

    ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಜಮ್ಮನಹಳ್ಳಿ ಕೆರೆ, ಕೋಲಾರಮ್ಮ, ಜಿಲ್ಲೆಯ ಅನೇಕ ಕೆರೆಗಳಲ್ಲಿ ಗೀಜಗ ಪಕ್ಷಿಗಳ ಗೂಡು ನಿರ್ಮಿಸಿಕೊಂಡಿವೆ. ಗೀಜಗ ಪಕ್ಷಿಗಳು ಗೂಡು ನಿರ್ಮಾಣ ಮಾಡುವುದು, ಅವುಗಳ ಸಲುಗೆ, ಪ್ರೀತಿ ಎಲ್ಲಾ ಅದ್ಭುತವಾದ ದೃಶ್ಯಗಳು ಹೊಸ ಪ್ರಪಂಚದ ನಿಸರ್ಗದ ಕೊಡುಗೆ ಎಂದರೆ ತಪ್ಪಲ್ಲ.

    ಸದ್ಯ ಮರಗಳಿಲ್ಲದೆ, ಕೆರೆ ಕುಂಟೆಗಳೆಲ್ಲಾ ಒಣಗಿದ್ದು ಪಕ್ಷಿಗಳನ್ನು ನೋಡಲು ರಂಗನತಿಟ್ಟುನಂತಹ ಪಕ್ಷಿಧಾಮಗಳಿಗೆ ತೆರಳಬೇಕಿದೆ. ನಗರ ಪ್ರದೇಶಗಳಲ್ಲಿ ಸಣ್ಣ-ಪುಟ್ಟ ಪಕ್ಷಿಗಳಾದ ಗೀಜಗ, ಗುಬ್ಬಚ್ಚಿಗಳನ್ನು ಅಥವಾ ಸಣ್ಣ ಪ್ರಾಣಿ ಪಕ್ಷಿ ಸಂಕುಲವನ್ನು ಪರದೆಯ ಮೇಲೆ ನೋಡುವಂತಹ ಪರಿಸ್ಥಿತಿ ಬಂದೊದಗಿದೆ.

  • ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನಿಲ್ಲಿಸಿದ ಹಕ್ಕಿ: ವಿಡಿಯೋ

    ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನಿಲ್ಲಿಸಿದ ಹಕ್ಕಿ: ವಿಡಿಯೋ

    ಬೀಜಿಂಗ್: ತಾಯಿ ಹಕ್ಕಿಯೊಂದು ತನ್ನ ಮೊಟ್ಟೆಯನ್ನು ಉಳಿಸಿಕೊಳ್ಳಲು ಟ್ರ್ಯಾಕ್ಟರ್ ನಿಲ್ಲಿಸಿದ ಅಪರೂಪದ ದೃಶ್ಯ ಚೀನಾದಲ್ಲಿ ನಡೆದಿದೆ.

    ಹಕ್ಕಿ ಟ್ರ್ಯಾಕ್ಟರ್ ನಿಲ್ಲಿಸಿದ ಮನಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಡೆದಿದ್ದೇನು?
    ವ್ಯಕ್ತಿ ಟ್ರ್ಯಾಕ್ಟರಿನಲ್ಲಿ ತನ್ನ ಜಮೀನಿಗೆ ಹೋಗುತ್ತಿದ್ದನು. ಈ ವೇಳೆ ದಾರಿ ಮಧ್ಯೆ ತಾಯಿ ಹಕ್ಕಿ ತನ್ನ ರೆಕ್ಕೆಯನ್ನು ಬಿಚ್ಚಿ ಟ್ರ್ಯಾಕ್ಟರ್ ಅನ್ನು ನಿಲ್ಲಿಸಲು ಪ್ರಯತ್ನಿಸಿದೆ. ಹಕ್ಕಿಯನ್ನು ನೋಡಿದ ಚಾಲಕ ತಕ್ಷಣ ಟ್ರ್ಯಾಕ್ಟರ್ ನಿಲ್ಲಿಸಿ ಹಕ್ಕಿ ಬಳಿ ಬಂದಿದ್ದಾನೆ. ಬಳಿಕ ತನ್ನ ಬಳಿಯಿದ್ದ ನೀರಿನ ಬಾಟಲಿಯನ್ನು ಹಕ್ಕಿಯ ಹತ್ತಿರ ಇಟ್ಟಿದ್ದಾನೆ.

    ಚಾಲಕ ಟ್ರ್ಯಾಕ್ಟರ್ ನಿಲ್ಲಿಸುವ ಮೂಲಕ ಹಕ್ಕಿ ಇನ್ನೂ ಜನಿಸದ ಮರಿಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. ತಾಯಂದಿರು ತಮ್ಮ ಮಕ್ಕಳನ್ನು ಜನಿಸುವ ಮೊದಲೇ ಪ್ರೀತಿಸುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

    ಈ ವಿಡಿಯೋವನ್ನು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‍ವರ್ಕ್ (ಸಿಟಿಜಿಎನ್) ಬುಧವಾರ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿಕೊಂಡಿದೆ. ಅಲ್ಲದೆ ತಾಯಿ ಹಕ್ಕಿ ತನ್ನ ಮೊಟ್ಟೆಗಳನ್ನು ರಕ್ಷಿಸಲು ಟ್ರ್ಯಾಕ್ಟರ್ ನಿಲ್ಲಿಸಿದೆ ಎಂದು ಬರೆದು ಟ್ವೀಟ್ ಮಾಡಿದೆ.

    ಈ ಮನಕಲಕುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೂ 30 ಸಾವಿರಕ್ಕೂ ಹೆಚ್ಚು ವ್ಯೂ ಬಂದಿದ್ದು, 1,200ಕ್ಕೂ ಹೆಚ್ಚೂ ಲೈಕ್ಸ್ ಬಂದಿದೆ. ಅಲ್ಲದೆ ಈ ವಿಡಿಯೋ ನೋಡಿ ಹಲವರು ಭಾವುಕರಾಗಿ ಕಮೆಂಟ್ ಮಾಡುತ್ತಿದ್ದಾರೆ.

  • ಆಹಾರವೆಂದು ಭಾವಿಸಿ ಮರಿಗೆ ಸಿಗರೇಟ್ ತುಂಡು ತಿನಿಸಿದ ಹಕ್ಕಿ

    ಆಹಾರವೆಂದು ಭಾವಿಸಿ ಮರಿಗೆ ಸಿಗರೇಟ್ ತುಂಡು ತಿನಿಸಿದ ಹಕ್ಕಿ

    ಫ್ಲೋರಿಡಾ: ಮನುಷ್ಯನ ಸ್ವಾರ್ಥಕ್ಕೆ ಸ್ವರ್ಗದಂತಿದ್ದ ಪ್ರಕೃತಿ ಈಗಾಗಲೇ ನರಕವಾಗುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕೆ ನಿಸರ್ಗವನ್ನು ಬಳಸಿಕೊಂಡು ನಾಶ ಮಾಡುತ್ತಿರುವುದಕ್ಕೆ ಹಕ್ಕಿಯೊಂದು ತನ್ನ ಮರಿಗೆ ಆಹಾರವೆಂದು ಭಾವಿಸಿ ಸಿಗರೇಟ್ ತಿನಿಸುತ್ತಿರುವ ಫೋಟೋ ನೋಡುಗರ ಮನಕಲಕುವಂತಿದ್ದು, ಮನುಷ್ಯನ ಸ್ವರ್ಥಕ್ಕೆ ಮೂಕ ಪ್ರಾಣಿ-ಪಕ್ಷಿಗಳು ದುಸ್ಥಿತಿಗೆ ತಲುಪಿರುವುದಕ್ಕೆ ಇದು ಉದಾಹರಣೆಯಾಗಿದೆ.

    ಮನುಷ್ಯನ ತಪ್ಪಿಗೆ ಒಂದಲ್ಲ ಒಂದು ದಿನ ಪ್ರಕೃತಿ ಶಿಕ್ಷೆ ಕೊಟ್ಟೇ ಕೊಡುತ್ತದೆ. ಆದರೆ ಅದರ ಪರಿಣಾಮ ಮನುಷ್ಯನಿಗಿಂತ ಮೊದಲು ಮೂಕ ಪ್ರಾಣಿ-ಪಕ್ಷಿಗಳು ಅನುಭವಿಸುತ್ತಿರುವುದು ವಿಪರ್ಯಾಸ. ಇತ್ತೀಚಿಗೆ ನ್ಯಾಷನಲ್ ಆಡೊನಾನ್ ಸೊಸೈಟಿಯ ಸ್ವಯಂಸೇವಕ ಮತ್ತು ಛಾಯಾಗ್ರಾಹಕರಾಗಿರುವ ಕರೆನ್ ಮೇಸನ್ ಅವರು ಕ್ಲಿಕ್ಕಿಸಿರುವ ಚಿತ್ರವೊಂದು ಈಗ ಭಾರಿ ಚರ್ಚೆಯಲ್ಲಿದೆ. ಮಾನವ ಭೂಮಿ ಮೇಲೆ ಬದಕುವ ಜೀವಿಗಳ ಪಾಲಿಗೆ ಎಂತಹ ಅಪಾಯವನ್ನು ತಂದೊಡ್ಡಿದ್ದಾನೆ ಎನ್ನುವುದನ್ನು ಈ ಚಿತ್ರ ಸ್ಪಷ್ಟವಾಗಿ ತೋರಿಸುತ್ತದೆ.

    ಕೆಲವು ದಿನಗಳ ಹಿಂದೆ ಫ್ಲೋರಿಡಾದ ಸೆಂಟ್ ಪೆಟಿಸ್ ಬೀಚ್‍ನಲ್ಲಿ ಕರೆನ್ ಹೋಗಿದ್ದಾಗ ಈ ಚಿತ್ರವನ್ನು ಸೆರೆಹಿಡಿದಿದ್ದರು. ಬೀಚ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತಾಯಿ ಹಕ್ಕಿಯೊಂದು ಮರಿಗೆ ಆಹಾರವಾಗಿ ಸಿಗರೇಟ್ ತುಂಡನ್ನು ತಿನ್ನಿಸುತ್ತಿರುವುದು ಕಂಡು ಅದರ ಫೋಟೋವನ್ನು ಕರೆನ್ ಕ್ಲಿಕ್ಕಿಸಿದ್ದಾರೆ. ಅಂದರೆ ಆಹಾರವೆಂದು ಭಾವಿಸಿ ನೇರವಾಗಿ ವಿಷವನ್ನು ಮರಿಗೆ ತಾಯಿ ಹಕ್ಕಿ ಉಣ್ಣಿಸುತ್ತಿರುವುದು ನಿಜಕ್ಕೂ ಮಾನವ ಯಾವ ಸ್ಥಿತಿಗೆ ಪ್ರಕೃತಿಯನ್ನು ತಂದು ನಿಲ್ಲಿಸಿದ್ದಾನೆ ಎಂಬುದು ತಿಳಿಯುತ್ತದೆ.

    ಈ ಬಗ್ಗೆ ಮಾತನಾಡಿದ ಕರೆನ್ ಅವರು, ಬೀಚ್‍ನಲ್ಲಿ ತಾಯಿ ಹಕ್ಕಿ ಮರಿಗೆ ಏನೋ ವಿಚಿತ್ರವಾದ ವಸ್ತುವನ್ನು ತಿನಿಸುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ಹಕ್ಕಿ ಮೀನನ್ನು ತಿನಿಸುತ್ತಿರಲಿಲ್ಲ ಹೀಗಾಗಿ ನಾನು ಅದರ ಫೋಟೋ ತೆಗೆದೆ. ಆಗ ನಾನು ಹಕ್ಕಿ ಸಿಗರೇಟ್ ತಿನಿಸುತ್ತಿದೆ ಎನ್ನುವುದು ಗೊತ್ತಾಗಲಿಲ್ಲ. ಬಳಿಕ ಮನೆಗೆ ಬಂದು ಫೋಟೋಗಳನ್ನು ನೋಡಿದಾಗ ಹಕ್ಕಿ ಮರಿಗೆ ಸಿಗರೇಟ್ ತುಂಡನ್ನು ತಿನ್ನಿಸುತ್ತಿರುವುದನ್ನ ನೋಡಿ ಅಚ್ಚರಿಯಾಯ್ತು ಎಂದು ಆತಂಕ ವ್ಯಕ್ತಪಡಿಸಿದರು.

    ಅಲ್ಲದೆ ಬಳಿಕ ಈ ಆಘಾತಕಾರಿ ಫೋಟೋವನ್ನು ತಾವು ವೈಲ್ಡ್‍ಲೈಫ್ ಗ್ರೂಪ್‍ಗಳಿಗೆ ಕಳುಹಿಸಿದೆ. ಅಲ್ಲದೆ ಈ ಬಗ್ಗೆ ಜಾಗೃತಿ ಮೂಡಿಸಲು ಫೇಸ್‍ಬುಕ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹರಿಬಿಟ್ಟೆ ಎಂದು ಕರೆನ್ ತಿಳಿಸಿದರು.

    ಪ್ಲಾಸ್ಟಿಕ್ ತ್ಯಾಜ್ಯ ಜಗತ್ತನ್ನು ಬಾಧಿಸುತ್ತಿರುವ ಬಹುದೊಡ್ಡ ಸಮಸ್ಯೆ. ಅದರ ಜತೆಗೆ ಇನ್ನೊಂದು ತ್ಯಾಜ್ಯ ವಸ್ತು ನಮ್ಮ ಸಮುದ್ರ ತೀರಗಳಲ್ಲಿ ರಾಶಿ ಬೀಳುತ್ತಿದೆ. ಅದರಲ್ಲೂ ಬೀಚ್‍ಗೆ ಬಂದ ಮಂದಿ ಬಳಸಿ ಬಿಸಾಡುವ ಸಿಗರೇಟ್ ತುಂಡುಗಳು ಜಲಚರ ಮತ್ತು ಇತರ ಜೀವಿಗಳ ಪಾಲಿಗೆ ಬಹುದೊಡ್ಡ ಅಪಾಯವನ್ನು ಸೃಷ್ಟಿಸುತ್ತಿದೆ.

    ಪ್ರತಿವರ್ಷ 5.5 ಟ್ರಿಲಿಯನ್ ಫಿಲ್ಟರ್ ಸಿಗರೇಟ್ ಅನ್ನು ಪರಿಸರದಲ್ಲಿ ಎಸೆಯಲಾಗುತ್ತದೆ ಎಂದು ಸ್ಯಾನ್ ಡಿಯಾಗೋ ಸ್ಟೇಟ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಅಭಿಯಾನದಿಂದ ತಿಳಿದಿದೆ. ಪ್ಲಾಸ್ಟಿಕ್ ಸ್ಟ್ರಾಗಳಿಗಿಂತ, ಸಿಗರೇಟ್ ತುಂಡುಗಳು ನಮ್ಮ ಸಾಗರಗಳಿಗೆ ದೊಡ್ಡ ಅಪಾಯವಾಗಿದೆ ಎಂದು ವರದಿ ಕೂಡ ಹೇಳುತ್ತದೆ.

    ಒಂದೆಡೆ ಪ್ಲಾಸ್ಟಿಕ್, ಇ ತ್ಯಾಜ್ಯ ಸಮುದ್ರವನ್ನು ಕಲುಷಿತಗೊಳಿಸುತ್ತಿದೆ. ಚಿರತೆ, ಹುಲಿ, ಆನೆಗಳಂತಹ ಕಾಡು ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುತ್ತಿವೆ. ಮಾನವನ ಅಟ್ಟಹಾಸಕ್ಕೆ ಲಕ್ಷಾಂತರ ಜೀವಿಗಳು ಸುಳಿವು ಇಲ್ಲದಂತೆ ಅಳಿದು ಹೋಗಿವೆ. ಇನ್ನಾದರು ಮಾನವ ಇನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುವುದನ್ನು ಬಿಟ್ಟಿ, ಅದರ ಉಳಿವಿಗಾಗಿ ಶ್ರಮಿಸಬೇಕಿದೆ.