Tag: ಸ್ವಿಜಲ್ರ್ಯಾಂಡ್

  • ಚಳಿಯ ಭಯವಿದ್ದರೂ ವಿದೇಶ ಪ್ರಯಾಣಕ್ಕೆ ಓಕೆ ಎಂದ ಬಿಎಸ್‍ವೈ

    ಚಳಿಯ ಭಯವಿದ್ದರೂ ವಿದೇಶ ಪ್ರಯಾಣಕ್ಕೆ ಓಕೆ ಎಂದ ಬಿಎಸ್‍ವೈ

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿದೇಶ ಪ್ರಯಾಣಕ್ಕೆ ಕೊನೆಗೂ ಒಪ್ಪಿಗೆ ಸಿಕ್ಕಿದೆ. ಚಳಿಯ ಭಯದಿಂದ ಪ್ರವಾಸಕ್ಕೆ ಹಿಂದೆ ಮುಂದೆ ನೋಡುತ್ತಿದ್ದ ಬಿಎಸ್‍ವೈ ಅವರೇ ಸ್ವತಃ ಪ್ರಯಾಣಕ್ಕೆ ನಿನ್ನೆ ಒಪ್ಪಿಗೆ ಸೂಚಿಸಿದ್ದಾರೆ.

    ಸ್ವಿಜರ್ಲ್ಯಾಂಡ್ ದಾವೋಸ್‍ನಲ್ಲಿ ಜನವರಿ 21ರಿಂದ 24ರ ತನಕ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಸಿಎಂ ಯಡಿಯೂರಪ್ಪ ರಾಜ್ಯದ ಪರವಾಗಿ ಭಾಗವಹಿಸಲಿದ್ದಾರೆ. ಸಿಎಂ ಬಿಎಸ್‍ವೈರೊಂದಿಗೆ ತೆರಳಿರುವ 13 ಮಂದಿ ತಂಡ ಕೂಡ ಸದ್ಯ ಅಂತಿಮವಾಗಿದೆ.

    ಬಿಎಸ್‍ವೈ ವಿದೇಶ ಪ್ರವಾಸಕ್ಕೆ 13 ಜನ ತಂಡ ಫಿಕ್ಸ್ ಆಗಿದ್ದು, ಅಧಿಕೃತ ಅಧಿಕಾರಿಗಳಲ್ಲದ ಗುಂಪಿನಲ್ಲಿ ಮೂವರು ಪ್ರಯಾಣ ಬೆಳಸಲಿದ್ದಾರೆ. ಸಿಎಂ ಬಿಎಸ್‍ವೈ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸಿಎಂ ರಾಜಕೀಯ ಸಲಹೆಗಾರ ಕೂಡ ವಿದೇಶಕ್ಕೆ ತೆರಳಲಿದ್ದಾರೆ. ಉಳಿದಂತೆ ಅಧಿಕೃತ ಗ್ರೂಪ್‍ನಲ್ಲಿ ಮೂವರು ಐಎಎಸ್ ಅಧಿಕಾರಿಗಳು ಸೇರಿ ಆಪ್ತ ಕಾರ್ಯದರ್ಶಿಗಳು, ವಿವಿಧ ಅಧಿಕಾರಿಗಳು ಸೇರಿದಂತೆ 10 ಮಂದಿ ವಿದೇಶ ಪ್ರಯಾಣ ಮಾಡಲಿದ್ದಾರೆ. ಜ.19ರಂದು ಮಧ್ಯರಾತ್ರಿ ಸ್ವಿಜರ್ಲ್ಯಾಂಡ್‍ಗೆ ಬಿಎಸ್‍ವೈ ನೇತೃತ್ವದ 13 ಜನರ ತಂಡ ಪ್ರಯಾಣ ಬೆಳಸಲಿದ್ದು, ಜ.26ರ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

    ವಿಶ್ವ ಆರ್ಥಿಕ ಸಮ್ಮೇಳನಕ್ಕೆ ದೇಶದ ಮೂವರು ಮುಖ್ಯಮಂತ್ರಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಮಧ್ಯಪ್ರದೇಶದ ಸಿಎಂ ಕಮಲನಾಥ್ ಮತ್ತು ಕರ್ನಾಟಕದ ಸಿಎಂ ಯಡಿಯೂರಪ್ಪಗೆ ಆಹ್ವಾನವಿದೆ. ಆದರೆ ಚಳಿಯ ಕಾರಣ ನೀಡಿ ಯಡಿಯೂರಪ್ಪ ವಿದೇಶಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು ಎನ್ನಲಾಗಿತ್ತು. ಬಿಜೆಪಿ ಅಧಿಕಾರ ಇರುವ ರಾಜ್ಯಯೊಂದಕ್ಕೆ ಮಾತ್ರ ಆಹ್ವಾನ ನೀಡಲಾಗಿದ್ದು, ಇಂತಹ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಿಗೆ ಗೈರು ಹಾಜರಾದರೆ ಬೇರೆ ಅರ್ಥ ಬರುತ್ತದೆ ಎಂದು ದಾವೋಸ್‍ಗೆ ತೆರಳಲು ಸಿಎಮ ತೀರ್ಮಾನಿಸಿದ್ದಾರೆ ಎಂಂದು ಆಪ್ತ ಮೂಲಗಳು ತಿಳಿಸಿವೆ.