Tag: ಸ್ವಾತಂತ್ರ್ಯ ಹೋರಾಟಗಾರ

  • ಚಿಲ್ರೇ ಮಾತುಗಳನ್ನು ಆಡಿ ನಿಮ್ಮ ಮರ್ಯಾದೆಯನ್ನು ನೀವೇ ಕಳ್ಕೊಬೇಡಿ: ಸಿದ್ದರಾಮಯ್ಯ ವಿರುದ್ಧ ದೊರೆಸ್ವಾಮಿ ಗರಂ

    ಚಿಲ್ರೇ ಮಾತುಗಳನ್ನು ಆಡಿ ನಿಮ್ಮ ಮರ್ಯಾದೆಯನ್ನು ನೀವೇ ಕಳ್ಕೊಬೇಡಿ: ಸಿದ್ದರಾಮಯ್ಯ ವಿರುದ್ಧ ದೊರೆಸ್ವಾಮಿ ಗರಂ

    ಬೆಂಗಳೂರು: ಚುನಾವಣೆಗೂ ಮುನ್ನ ದೇವೇಗೌಡರ ನಿವಾಸಕ್ಕೆ ತೆರಳಿ ಕೋಮುವಾದಿಗಳ ಜೊತೆ ಕೈ ಜೋಡಿಸಬೇಡಿ ಎಂದು ಮನವಿ ಮಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರು ಈಗ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಗುಡುಗಿದ್ದಾರೆ.

    ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿರುವ ದೊರೆಸ್ವಾಮಿಯವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನವರೇ ಚಿಲ್ರೇ ಮಾತುಗಳನ್ನು ಆಡಿ ನಿಮ್ಮ ಮರ್ಯಾದೆಯನ್ನು ನೀವೆ ಕಳ್ಕೊಬೇಡಿ. ಮಾಜಿ ಮುಖ್ಯಮಂತ್ರಿಗಳಾಗಿ ಈ ರೀತಿ ಹೇಳಿಕೆ ನೀಡಬಾರದು, ಸ್ವಲ್ಪ ವಿವೇಕ ಇರಿಸಿಕೊಳ್ಳಬೇಕು.  ಹಾದಿ ಬೀದಿಯಲ್ಲಿ ಹೋಗುವವರ ರೀತಿ ಮಾತನಾಡಬಾರದು, ತಾಳ್ಮೆಯಿಂದ ಇರೋದನ್ನು ಕಲಿಯಿರಿ ಎಂದು ಗುಡುಗಿದರು.

    ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾದ ನೀವೇ ಹೀಗೆ ಉಡಾಫೆಯಿಂದ ಮಾತನಾಡಿದರೇ, ನಿಮ್ಮ ಶಾಸಕರು ಕುಣಿದು ಕುಪ್ಪಳಿಸಿ ಇನ್ನಷ್ಟು ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು. ಮೈತ್ರಿ ಸರ್ಕಾರ ಅಂದ ಮೇಲೆ ಅಸಮಧಾನ ಇರುತ್ತೆ. ಇದನ್ನು ಕೂತು ಮಾತನಾಡಿ ಬಗೆಹರಿಸಿಕೊಳ್ಳಬೇಕೇ ಹೊರತು ಈ ರೀತಿ ರಂಪಾಟ ಮಾಡಬಾರದು ಎಂದು ತಿಳಿಸಿದರು.

    ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಚುನಾವಣಾ ಪ್ರಚಾರದ ವೇಳೇ ಅಧಿಕಾರಕ್ಕೆ ಬರಲ್ಲ ಅನ್ನೋ ಧೈರ್ಯದಿಂದ ರೈತರ ಸಾಲಮನ್ನಾ ಮಾಡ್ತಿನಿ ಅಂತ ಭರವಸೆ ಕೊಟ್ಟಿದ್ರು, ಆದ್ರೇ ಈಗ ಅವ್ರೇ ಮುಖ್ಯಮಂತ್ರಿಯಾಗಿದ್ದಾರೆ. ಮಾತಿಗೆ ತಪ್ಪಿದ್ರೇ ಮರ್ಯಾದೆ ಪ್ರಶ್ನೆ ಅಂತಾ ಸಾಲಮನ್ನಾ ನಿರ್ಧಾರ ಕೈಗೊಂಡಿದ್ದಾರೆ. ಆದ್ದರಿಂದ ಅವರು ಬಜೆಟ್ ಮಂಡನೆ ಮಾಡಲೇಕು, ಇದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

    ಕರ್ನಾಟಕ ಚುನಾವಣೆಗೂ ಮುನ್ನ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಪ್ರಕಾಶ್ ರೈ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ವೇಳೆ ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ಕೈ ಜೋಡಿಸಬೇಡಿ ಎಂದು ಮನವಿ ಮಾಡಿದ್ದರು.

    ಮೈತ್ರಿ ಸರ್ಕಾರದಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಉಜಿರೆಯ ಶಾಂತಿವನದಲ್ಲಿ ದಿನಕ್ಕೊಂದು ನೀಡುತ್ತಿರುವ ಹೇಳಿಕೆಗಳು ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿವೆ.

    https://www.youtube.com/watch?v=boGqlmT4_ok

  • ಪ್ರಧಾನಿ ಮೋದಿಯನ್ನು ಮುಗ್ಸಿಬಿಡಿ- ಕರ್ನಾಟಕದ ಜನತೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕರೆ

    ಪ್ರಧಾನಿ ಮೋದಿಯನ್ನು ಮುಗ್ಸಿಬಿಡಿ- ಕರ್ನಾಟಕದ ಜನತೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕರೆ

    ಬೆಂಗಳೂರು: ಪ್ರಧಾನಿ ಮೋದಿಯನ್ನು ಮುಗಿಸಿಬಿಡಿ ಹೀಗಂತ ಕರ್ನಾಟಕದ ಜನರಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಕರೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತಾನಾಡಿದ ದೊರೆಸ್ವಾಮಿ ಅವರು, ಕರ್ನಾಟಕದಲ್ಲಿ ಮೋದಿ ಪಕ್ಷಕ್ಕೆ ಮತವನ್ನು ಕೊಡಬೇಡಿ, ಸರ್ವಾಧಿಕಾರಿ ಧೋರಣೆ, ನೀಚತನದ ಮಾತನ್ನಾಡುವ ಮೋದಿಯನ್ನು ಮುಗಿಸಿ, ಸೋಲುನುಣಿಸಬೇಕು. ಆತ ಮಾಡೋದೆಲ್ಲ ತಪ್ಪು ಕೆಲ್ಸ ಅಂತಾ ಏಕವಚನದಲ್ಲಿಯೇ ಅಂತಾ ಕಿಡಿಕಾರಿದ್ರು.

    ಕರ್ನಾಟಕ ಬಿಜೆಪಿಯಲ್ಲಿ ಲೀಡರ್‍ಗಳೇ ಇಲ್ಲ. ಕರ್ನಾಟಕ ವರ್ಸಸ್ ಮೋದಿ ಅನ್ನುವಂತಾಗಿದೆ. ಯಡಿಯೂರಪ್ಪ ಒಬ್ಬ ಡಮ್ಮಿ ಕ್ಯಾಂಡಿಡೇಟ್ ಅಂತಾ ಲೇವಡಿ ಮಾಡಿದ್ದಾರೆ.

    ಅತಂತ್ರ ಸರ್ಕಾರ ನಿರ್ಮಾಣವಾದ್ರೇ, ಜೆಡಿಎಸ್ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈಜೋಡಿಸಬಾರದು ಅಂತಾ ಈಗಾಗಲೇ ದೇವೇಗೌಡರಿಗೆ ಹೇಳಿದ್ದೇನೆ. ಮೂವತ್ತು ನಲವತ್ತು ಇಟ್ಕೊಂಡು ವ್ಯವಹಾರ ಮಾಡಬೇಡಿ. ಪದೇ ಪದೇ ನಿಮ್ಮ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಕುಡಿಕೆ ಗಂಜಿ ಆಸೆಗೆ ಬಿದ್ದು ಆತ್ಮ ಮಾರಿಕೊಳ್ಳಬೇಡಿ ಅಂತಾ ಹೇಳಿದ್ದೇನೆ. ಅವರು ನನ್ನ ಮಾತು ಕೇಳ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು.

    ದೇಶದ ಒಳಿತಿಗಾಗಿ ಜೆಡಿಎಸ್ ಕಾಂಗ್ರೆಸ್ ಜೊತೆಗಿನ ಭಿನ್ನಾಬಿಪ್ರಾಯ ಮರೆತು ಕೈಜೋಡಿಸಬೇಕು. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿಯಾಗಬೇಕು ಅಂದ್ರು.