Tag: ಸ್ವಚ್ಛ ಭಾರತ

  • ಜಪಾನ್ ನ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭತ್ತದಲ್ಲಿ ಸ್ವಚ್ಛ ಭಾರತ ಲಾಂಛನ ರಚಿಸಿದ ದಾವಣಗೆರೆಯ ರೈತ

    ಜಪಾನ್ ನ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭತ್ತದಲ್ಲಿ ಸ್ವಚ್ಛ ಭಾರತ ಲಾಂಛನ ರಚಿಸಿದ ದಾವಣಗೆರೆಯ ರೈತ

    ದಾವಣಗೆರೆ: ಜಪಾನ್ ನಲ್ಲಿ ಪ್ರವಾಸಿಗರನ್ನು ಸೆಳೆಯಲು ಮಾಡುವ ರೈಸ್ ಆರ್ಟ್ ಕಲೆಯ ಮಾದರಿಯಲ್ಲಿ ಭಾರತದ ದೇಶಿ ಭತ್ತದ ತಳಿ ಬಳಸಿ ಜನರಿಗೆ ಸ್ವಚ್ಛತೆ ಹಾಗೂ ಶೌಚಾಲಯದ ಮಹತ್ವ ಸಾರುವ ಸ್ವಚ್ಛ ಭಾರತ ಮಿಷನ್ ನ ಲಾಂಛನ ರಚಿಸುವ ಮೂಲಕ ಜಿಲ್ಲೆಯ ಪ್ರಗತಿಪರ ರೈತ ಈಗ ಎಲ್ಲರ ಗಮನ ಸೆಳೆದಿದ್ದಾರೆ.

    ಜಿಲ್ಲೆಯ ಕುಂಬಳೂರು ಗ್ರಾಮದಲ್ಲಿ ರೈತ ಅಂಜನೇಯ ರಚಿಸಿರುವ ಪ್ಯಾಡಿ ಆರ್ಟ್‍ಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಚ್ಛತೆಯ ಬಗ್ಗೆ ಹೀಗೆ ಭತ್ತದ ಗದ್ದೆಯಲ್ಲೂ ಜಾಗೃತಿ ಮೂಡಿಸಬಹುದು ಎಂಬುದನ್ನ ರೈತ ಅಂಜನೇಯ ತೋರಿಸಿಕೊಡುವ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.

    ಅಂಜನೇಯ ಅವರು ಸಿದ್ದಸಣ್ಣ ಹಾಗೂ ಡಾಂಬರ ಸಾಳಿ ಎಂಬ ಎರಡು ದೇಶಿ ತಳಿಯ ಭತ್ತವನ್ನ ಬಳಸಿ ಸ್ವಚ್ಛ ಭಾರತ ಮಿಷನ್ ಲಾಂಛನವನ್ನ ಮಾಡಿದ್ದಾರೆ. ಗಾಂಧೀಜಿ ಕನ್ನಡಕವಿರುವ ಸ್ವಚ್ಛ ಭಾರತ ಮಿಷನ್ ಲೋಗೋ ಮಾಡಿದ್ದು, ಅದೇ ರೀತಿ ಸಿದ್ದ ತಳಿಯ ಹಸಿರು ಹಾಸಿನ ಮಧ್ಯೆ ಡಾಂಬರ್ ಸಾಳಿ ಬತ್ತದ ತಳಿ ಬಳಸಿ ಕಪ್ಪು ಬಣ್ಣದ ಕನ್ನಡಕದ ಚಿತ್ರ ಕಾಣುವಂತೆ ಮಾಡಿದ್ದಾರೆ. ಈ ವಿಚಾರ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಕೂತುಹಲ ಮೂಡಿಸಿದೆ. ಅಷ್ಟೇ ಅಲ್ಲದೆ ರೈತ ಆಂಜನೇಯ ಕಾರ್ಯಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವಥಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾವಯವ ಕೃಷಿ ಮಾಡುವಲ್ಲಿ ನನಗೆ ತಂದೆ, ತಾಯಿ, ಪತ್ನಿ ಹಾಗೂ ಮಕ್ಕಳು ಕೈ ಜೋಡಿಸಿದ್ದಾರೆ. 2006 ರಿಂದಲೂ ಮೂರು ಮುಕ್ಕಾಲು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದೆ. ಇಂದಿಗೂ ಇಲ್ಲಿ ಯಾವುದೇ ರಾಸಯನಿಕ ಗೊಬ್ಬರ ಬಳಸದೆ ಸ್ವಾವಲಂಬಿ ರೈತನಾಗಿದ್ದೇನೆ. ಅಲ್ಲದೇ ಜಪಾನ್ ನಲ್ಲಿ ಟೂರಿಂಗ್ ಗಾಗಿ ಭತ್ತದ ಗದ್ದೆಯಲ್ಲಿ ಚಿತ್ರಗಳನ್ನು ಮೂಡಿಸುತ್ತಾರೆ. ಆದರೆ ಅಲ್ಲಿ ಕೇವಲ 8 ಬಣ್ಣದ ಭತ್ತದ ತಳಿಗಳು ಮಾತ್ರ ಇವೆ. ನಮ್ಮ ದೇಶದಲ್ಲಿ 13 ಬಣ್ಣದ ವಿವಿಧ ತಳಿಯ ಭತ್ತದ ತಳಿಗಳಿವೆ ಎಂದು ಅಂಜನೇಯ ತಿಳಿಸಿದ್ದಾರೆ.

    ಅಂಜನೇಯ ನಶಿಸಿ ಹೋಗುತ್ತಿರುವ ದೇಶಿ ಭತ್ತದ ತಳಿಗಳ ಶೋಧಕರಾಗಿದ್ದು, ಅಪರೂಪದ ತಳಿಗಳನ್ನ ಹುಡುಕಿ ಅಭಿವೃಧ್ದಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಸಾವಯವ ರೈತ ಸ್ವಚ್ಛ ಭಾರತ ಮಿಷನ್ ಲೋಗೋ ಬಳಸಿ ಸ್ವಚ್ಛತೆಗೆ ಮಾದರಿಯಾಗಿ ತಮ್ಮ ಹೊಲದಲ್ಲಿ ಗಾಂಧೀಜಿ ಕನ್ನಡಕದ ಚಿತ್ರ ಮೂಡುವಂತೆ ಮಾಡಿ ಎಲ್ಲರ ಮನಗೆದ್ದಿದ್ದಾರೆ. ಯುವ ರೈತನ ಕಾರ್ಯಕ್ಕೆ ಜಿಲ್ಲೆಯ ರೈತರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

  • ನಿನ್ನೆ ಮೈಸೂರಿನಾದ್ಯಂತ ಮೋದಿಮಯ-ಇಂದು ಮಹಾರಾಜ ಕಾಲೇಜು ಮೈದಾನವೆಲ್ಲ ಕಸಮಯ

    ನಿನ್ನೆ ಮೈಸೂರಿನಾದ್ಯಂತ ಮೋದಿಮಯ-ಇಂದು ಮಹಾರಾಜ ಕಾಲೇಜು ಮೈದಾನವೆಲ್ಲ ಕಸಮಯ

    ಮೈಸೂರು: ಸೋಮವಾರ ನಗರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದರಿಂದ ಮಹಾರಾಜ ಕಾಲೇಜು ಮೈದಾನದ ಮೋದಿಮಯವಾಗಿತ್ತು. ಆದ್ರೆ ಇಂದು ಅದೇ ಮೈದಾನವೆಲ್ಲ ಕಸಮಯವಾಗಿದೆ.

    ಮಹರಾಜ ಕಾಲೇಜು ಮೈದಾನದ ತುಂಬೆಲ್ಲಾ ರಾಶಿ ರಾಶಿ ನೀರಿನ ಪ್ಯಾಕೇಟ್ ಗಳು ಎಲ್ಲೆಂದರಲ್ಲಿ ಬಿದ್ದಿವೆ. ಕಾರ್ಯಕ್ರಮದ ಆಯೋಜಕರು ಅಗತ್ಯಕ್ಕಿಂತ ಹೆಚ್ಚಿನ ನೀರಿನ ಪ್ಯಾಕೇಟ್ ತರಿಸಿದ್ದರಿಂದ ಮೈದಾನದ ತುಂಬೆಲ್ಲಾ ಬಿದ್ದಿವೆ. ವ್ಯರ್ಥವಾಗಿ ಬಿದ್ದಿರುವ ಪ್ಯಾಕೇಟ್ ಗಳನ್ನು ವಿದ್ಯಾರ್ಥಿಗಳು ಶೇಖರಣೆ ಮಾಡಿ ಮೈದಾನ ಸ್ವಚ್ಛಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಅರಮನೆ ಮೈದಾನದಲ್ಲಿ ಕಸದ ರಾಶಿ- ಇದೇನಾ ಮೋದಿ ಕನಸಿನ ಸ್ವಚ್ಛ ಭಾರತ?

    ಫೆಬ್ರವರಿ 04ರಂದು ಬೆಂಗಳೂರಿಗೆ ಪ್ರಧಾನಿಗಳು ಆಗಮಿಸಿದ್ದ ವೇಳೆಯೂ ಕಾರ್ಯಕ್ರಮದ ಬಳಿಕ ಅರಮನೆ ಮೈದಾನವೆಲ್ಲಾ ಕಸದಿಂದ ತುಂಬಿತ್ತು. ಈಗ ಮೈಸೂರಿನಲ್ಲಿ ಇದೇ ಕೆಲಸ ಪುನಾರವರ್ತಿತವಾಗಿದೆ. ಸಮಾವೇಶದ ಬಳಿಕ ಬಿಜೆಪಿ ಮುಖಂಡರು ಮೈದಾನದತ್ತ ತಿರುಗಿಯೂ ನೋಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೋದಿ ಅವರ ಕನಸಿನ ಸ್ವಚ್ಛ ಭಾರತಕ್ಕೆ ರಾಜ್ಯ ಬಿಜೆಪಿ ನಾಯಕರು ಮರೆತು ಬಿಟ್ರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

    ಇದನ್ನೂ ಓದಿ: ಸ್ವಚ್ಛ ಭಾರತಕ್ಕೆ ಅವಮಾನ: ಸಾರ್ವಜನಿಕ ಸ್ಥಳದಲ್ಲಿ ಕೇಂದ್ರ ಕೃಷಿ ಸಚಿವರ ಸೂಸು

  • ಅರಮನೆ ಮೈದಾನದಲ್ಲಿ ಕಸದ ರಾಶಿ- ಇದೇನಾ ಮೋದಿ ಕನಸಿನ ಸ್ವಚ್ಛ ಭಾರತ?

    ಅರಮನೆ ಮೈದಾನದಲ್ಲಿ ಕಸದ ರಾಶಿ- ಇದೇನಾ ಮೋದಿ ಕನಸಿನ ಸ್ವಚ್ಛ ಭಾರತ?

    ಬೆಂಗಳೂರು: ಸ್ಟೇಜ್ ಮೇಲೆ ಸ್ವಚ್ಛ ಭಾರತದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡೋ ಬಿಜೆಪಿ ಸ್ವಚ್ಛತೆಯನ್ನೇ ಮರೀತಾ ಅನ್ನೋ ಪ್ರಶ್ನೆ ಎದ್ದಿದೆ.

    ಭಾನುವಾರದಂದು ಅರಮನೆ ಮೈದಾನದಲ್ಲಿ ಬಿಜೆಪಿ ಪರಿರ್ವತನಾ ಸಮಾರೋಪ ಸಮಾರಂಭ ನಡೆಸಿದ್ದು, ಸಮಾವೇಶ ಮುಗಿಸಿದ ನಂತರ ಬಿಜೆಪಿ ನಾಯಕರು ಸ್ವಚ್ಛ ಭಾರತ ಮರೆತು ಹೊರಟಿದ್ದಾರೆ. ಅರಮನೆ ಮೈದಾನದ ತುಂಬಾ ರಾಶಿ ರಾಶಿ ಕಸ ಬಿದ್ದಿದೆ. ಮೈದಾನದ ತುಂಬಾ ಎಲ್ಲಿ ನೋಡಿದ್ರೂ ಕಸವೋ ಕಸ.

    ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನ ಸಂಪೂರ್ಣ ಕೇಸರಿಮಯವಾಗಿತ್ತು. ಮೈದಾನದಾದ್ಯಂತ ಜನಸಾಗರವೇ ಸೇರಿತ್ತು. ಆದ್ರೆ ಪ್ರಧಾನಿ ಮೋದಿ ರ್ಯಾಲಿಯಿಂದಾಗಿ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ದಂಪತಿಯೊಬ್ಬರ ಬೀಗರೂಟ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

    ಅರಮನೆ ಮೈದಾನದ ದಿ ರಾಯಲ್ ಸೆನೆಟ್‍ನಲ್ಲಿ ನಿನ್ನೆ ಬೀಗರೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ ಮೋದಿ ಸಮಾವೇಶ ಹಿನ್ನೆಲೆಯಲ್ಲಿ ಬೀಗರ ಊಟವನ್ನು ಫೆಬ್ರವರಿ 11ಕ್ಕೆ ಮುಂದೂಡಿದ್ದಾರೆ.

    ಈ ಬಗ್ಗೆ ದಿ ರಾಯಲ್ ಸೆನೆಟ್ ಮುಂದೆ ಬೋರ್ಡ್ ಕೂಡಾ ಹಾಕಿದ್ದಾರೆ. ಆಹ್ವಾನದ ಮೇರೆಗೆ ಬೀಗರ ಊಟಕ್ಕೆ ಬಂದಿದ್ದ ಸಂಬಂಧಿಕರು ಬೇರೆ ದಾರಿ ಇಲ್ಲದೇ ವಾಪಸ್ ಹೋದ್ರು.

  • ಸ್ವಚ್ಛ ನಗರಿ ಎಂದು ಕರೆಸಿಕೊಂಡ ಕೋಲಾರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆ!

    ಸ್ವಚ್ಛ ನಗರಿ ಎಂದು ಕರೆಸಿಕೊಂಡ ಕೋಲಾರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆ!

    ಕೋಲಾರ: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡುವುದಕ್ಕೂ ಮೊದಲೇ ಕೋಲಾರ ಸ್ವಚ್ಛ ನಗರಿ ಎಂದು ಹೆಸರು ಮಾಡಿತ್ತು.

    ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸಿ ಎಲ್ಲಾ ಜಿಲ್ಲೆಗಳಿಗೂ ಬಂಗಾರದ ನಾಡು ಮಾದರಿಯಾಗಿತ್ತು. ಆದರೆ ಕೋಲಾರ ನಗರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆಯೇ ಶಾಪವಾಗಿ ಪರಿಣಮಿಸಿದೆ. ರಾಜ್ಯದ ಶೇ.98ರಷ್ಟು ನಗರಸಭೆ ಮತ್ತು ಪುರಸಭೆಗಳು ಸರ್ಕಾರದ ಅನುದಾನದಿಂದ ಘನತ್ಯಾಜ್ಯ ಘಟಕಗಳನ್ನು ಸ್ಥಾಪಿಸಿವೆ.

    ಕೋಲಾರ ಜಿಲ್ಲಾ ಕೇಂದ್ರದಲ್ಲಿರುವ ನಗರಸಭೆಗೆ ಇನ್ನೂ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೋಲಾರ ನಗರದಲ್ಲಿ ಜನಸಂಖ್ಯೆ 2 ಲಕ್ಷ ದಾಟಿದೆ. 35 ವಾರ್ಡ್‍ಗಳಲ್ಲಿ ದಿನಕ್ಕೆ 64 ಟನ್ ಕಸ ಸಂಗ್ರಹಣೆಯಾಗುತ್ತಿದೆ. ಹಬ್ಬ ಹರಿದಿನಗಳಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಕನಿಷ್ಟ 15 ರಿಂದ 20 ಟನ್ ನಷ್ಟು ಕಸ ಬೀಳುತ್ತದೆ.

    ನಗರದಲ್ಲಿ ಕಸ ವಿಲೇವಾರಿಗೆ ಜಾಗವಿಲ್ಲದೆ ರಸ್ತೆಗಳಲ್ಲಿ, ಹೊರವಲಯದ ಪಾಳು ಬಾವಿಗಳಲ್ಲಿ ಕಸ ಹಾಕುವ ಪರಿಸ್ಥಿತಿ ಎದುರಾಗಿದೆ. ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಮಾತ್ರ ಶೀಘ್ರವೇ ಕ್ರಮ ಕೈಗೊಳುತ್ತೀವಿ ಎಂದು ಸಾಗ ಹಾಕುತ್ತಿದ್ದಾರೆ.

  • ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

    ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

    ದಾವಣಗೆರೆ: ಪಾಳು ಬಿದ್ದ ಪುಷ್ಕರಣಿಯನ್ನು ಅಧಿಕಾರಿಗಳೊಂದಿಗೆ ಸೇರಿ ಸ್ವಚ್ಛತೆ ಮಾಡಿ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಅಶ್ವತಿ ತೋರಿಸಿಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಕೊಣಚಗಲ್ಲು ಗ್ರಾಮದ ಐತಿಹಾಸಿಕ ಪುಷ್ಕರಣಿಯು ಹಲವು ವರ್ಷಗಳಿಂದ ಪಾಳು ಬಿದ್ದು, ಯಾವುದಕ್ಕೂ ಉಪಯೋಗವಾಗುವುದಿಲ್ಲ ಎನ್ನುವಂತಿತ್ತು. ಇದನ್ನ ಅರಿತ ಸಿಇಒ ಅಶ್ವತಿ ಮಂಗಳವಾರ ಬೆಳ್ಳಂಬೆಳಗ್ಗೆ ಸ್ವತಃ ಅವರೇ ಕೈಯಲ್ಲಿ ಪೆÇರಕೆ, ಕುಡಗೋಲು ಹಿಡಿದುಕೊಂಡು ತನ್ನ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನು ಜೊತೆಗೂಡಿಸಿಕೊಂಡು ಪುಷ್ಕರಣಿ ಸ್ವಚ್ಛ ಮಾಡಿದ್ದಾರೆ.

    ಸ್ವಚ್ಛಗೊಳಿಸಿದ ನಂತರ ಸ್ವಚ್ಛತೆಯ ಬಗ್ಗೆ ಜನರಿಗೆ ತಿಳುವಳಿಕೆಯನ್ನು ಸಹ ನೀಡಿ, ಸ್ವಚ್ಛತೆಯನ್ನು ಕಾಪಾಡುವಂತೆ ಮನವಿಯನ್ನು ಮಾಡಿಕೊಂಡರು. ಇದೇ ವೇಳೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರು ಇನ್ನು ಮುಂದೆ ಪುಷ್ಕರಣಿಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ಸಹ ನೀಡಿದರು.

    ಅಶ್ವತಿ ಅವರು ಈ ರೀತಿಯ ಹಲವು ಜನಪ್ರಿಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಶೌಚಾಲಯಕ್ಕಾಗಿ ಗುದ್ದಲಿ ಹಿಡಿದಿದ್ರು ಜಿ.ಪಂ. CEO- ಗ್ರಾ.ಪಂ. ಸಿಬ್ಬಂದಿಯಿಂದಲೇ ಗೋಲ್ಮಾಲ್ !

  • ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

    ಬಯಲಲ್ಲಿ ಶೌಚಾಲಯ ಮಾಡಿದ್ದಕ್ಕೆ ಶಿಕ್ಷಕ ಅಮಾನತು!

    ಭೋಪಾಲ್: ಬಯಲಿನಲ್ಲಿ ಶೌಚಾಲಯ ಮಾಡಿದ್ದಕ್ಕೆ ಮಧ್ಯಪ್ರದೇಶದ ಸರ್ಕಾರಿ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆಯು ಅಮಾನತು ಮಾಡಿದೆ.

    ಅಶೋಕ್ ನಗರ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿ ಆದಿತ್ಯಾ ನಾರಾಯಣ ಮಿಶ್ರಾ ಅವರು ಈ ಅದೇಶವನ್ನು ಹೊರಡಿಸಿ ಬುಡೇರಾ ಶಾಲೆಯ ಶಿಕ್ಷಕರನ್ನು ಅಮಾನತು ಮಾಡಿದ್ದಾರೆ. ಬಯಲಿನಲ್ಲಿ ಶೌಚಾಲಯ ನಡೆಸಿ ಸರ್ಕಾರಿ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸ್ವಚ್ಛ ಭಾರತದ ಅಭಿಯಾನದ ಅಡಿಯಲ್ಲಿ ಎಲ್ಲಾ ಶಾಲಾ ಶಿಕ್ಷಕರಿಗೂ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಶಿಕ್ಷಕ ಬಯಲು ಶೌಚಕ್ಕೆ ತೆರಳುವುದನ್ನು ನೋಡಿದವರು ಜಿಲ್ಲೆಯ ಅಧಿಕಾರಿಗಳಿಗೆ ವರದಿ ನೀಡಿದ್ದರು. ಈ ವರದಿಯನ್ನು ಅಧರಿಸಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಅಧಿಕಾರಿ ಮಿಶ್ರಾ ತಿಳಿಸಿದ್ದಾರೆ.

    ಇದೇ ವರ್ಷ ಜೂನ್ ತಿಂಗಳಿನಲ್ಲಿ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ವೀರ್ ಪುರ್ ಪಂಚಾಯತ್ ಅಧಿಕಾರಿಗಳು ಬಯಲು ಶೌಚ ಮಾಡಿದ 13 ಕುಟುಂಬಗಳಿಗೆ 4 ಲಕ್ಷ ರೂ.ಗಳನ್ನು ದಂಡವಾಗಿ ವಿಧಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ್ ಅಭಿಯಾನವನ್ನು 2014ರ ಅಕ್ಟೋಬರ್ 02 ರಂದು ಆರಂಭಿಸಿದ್ದು, 2019 ರ ವೇಳೆಗೆ ಬಯಲು ಶೌಚಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

  • ಪ್ರಧಾನಿ ಮೋದಿ ಬರ್ತ್‍ಡೇಯಂದು ಸಾರ್ವಜನಿಕರಿಗೆ ಸಿಗಲಿದೆ ಬಂಪರ್ ಸೇವೆ!

    ಪ್ರಧಾನಿ ಮೋದಿ ಬರ್ತ್‍ಡೇಯಂದು ಸಾರ್ವಜನಿಕರಿಗೆ ಸಿಗಲಿದೆ ಬಂಪರ್ ಸೇವೆ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯುವರು ಇದೇ ಭಾನುವಾರ 67ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮಂತ್ರಿಗಳು ಮತ್ತು ಸಂಸದರು ದೇಶದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಿದ್ದಾರೆ.

    ಈ ಕುರಿತು ಈಗಾಗಲೇ ಎಲ್ಲ ಸಂಸದರಿಗೂ ಸೂಚನೆಗಳನ್ನು ನೀಡಲಾಗಿದ್ದು, ಕೇವಲ ಪ್ರಚಾರಕ್ಕಾಗಿ ಈ ಕಾರ್ಯದಲ್ಲಿ ಭಾಗವಹಿಸದೇ, ಉತ್ತಮ ಉದ್ದೇಶ ಸಾಧನೆಗಾಗಿ ಕೈ ಜೋಡಿಸುವಂತೆ ತಿಳಿಸಲಾಗಿದೆ.

    ಮಂಗಳವಾರ ರಾತ್ರಿ ನಡೆದ ಬಿಜೆಪಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಗೊಂಡಿದ್ದು, ಈ ಸ್ವಚ್ಛತಾ ಕಾರ್ಯಕ್ರಮಕ್ಕೆ `ಸೇವಾ ದಿವಸ್’ ಎಂದು ಹೆಸರಿಡಲಾಗಿದೆ. ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಭಾರತದ ಪ್ರಮುಖ ಸ್ಥಳಗಳಾದ ಇಂಡಿಯಾ ಗೇಟ್, ಜುಹೂ ಬೀಚ್,  15 ಪ್ರವಾಸಿ ಸ್ಥಳ, ಸ್ಲಂಗಳಲ್ಲಿ ಈ ಸ್ವಚ್ಛತಾ ಕಾರ್ಯ ನಡೆಯಲಿದೆ.

    ಮೋದಿ ಜನ್ಮ ದಿನಕ್ಕೆ ಎರಡು ದಿನಗಳ ಮೊದಲು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೆಪ್ಟೆಂಬರ್ 15 ರಂದು ತಮ್ಮ ಜನ್ಮ ಭೂಮಿಯಾದ ಕಾನ್ಪುರ್‍ಗೆ ಭೇಟಿ ನೀಡಲಿದ್ದು, ಅಂದೇ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

    2014 ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಅವರ ಜನ್ಮ ದಿನದಂದು ಸ್ವಚ್ಛ ಭಾರತ ಅಭಿಯಾನವನ್ನು ಮೋದಿ ಆರಂಭಿಸಿದ್ದರು. ಸಂಸದರ ಸ್ವಚ್ಛತಾ ಕಾರ್ಯ ಫೋಟೊ ಫ್ರೇಮ್‍ಗಳಿಗೆ ಸೀಮಿತವಾಗಬಾರದು ಎನ್ನುವ ಸಲಹೆಗಳು ಬಂದಿದೆ.

  • ನಿಮ್ಮ ಮನೆಯಲ್ಲಿ ಟಾಯ್ಲೆಟ್ ಇಲ್ವಾ.. ಹಾಗಾದ್ರೆ ನಿಮಗೆ ಈ ಸೌಲಭ್ಯ ಸಿಗಲ್ಲ

    ನಿಮ್ಮ ಮನೆಯಲ್ಲಿ ಟಾಯ್ಲೆಟ್ ಇಲ್ವಾ.. ಹಾಗಾದ್ರೆ ನಿಮಗೆ ಈ ಸೌಲಭ್ಯ ಸಿಗಲ್ಲ

    ಕೊಪ್ಪಳ: ನಿಮ್ಮ ಮನೆಯಲ್ಲಿ ಟಾಯ್ಲೆಟ್ ಇಲ್ಲ ಅಂದ್ರೆ ಈಗ್ಲೆ ಕಟ್ಟಿಕೊಳ್ಳಿ ಇಲ್ಲವಾದ್ರೆ ನಿಮ್ಮ ಮನೆಗೆ ವಿದ್ಯುತ್ ಕಟ್ ಆಗಲಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಓ ಸೂಚನೆ ಮೇರೆಗೆ ಹೀಗೊಂದು ಫರ್ಮಾನು ಹೊರಡಿಸಲಾಗಿದೆ.

     

    ಕೊಪ್ಪಳ ಜಿಲ್ಲೆಯನ್ನು ಅಕ್ಟೋಬರ್ 2 ರೊಳಗೆ ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡೋ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಸರ್ಕಸ್ ಮಾಡ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 1.61 ಲಕ್ಷ ಶೌಚಾಲಯಗಳು ನಿರ್ಮಾಣಗೊಂಡಿವೆ. ಇನ್ನೂ 58 ಸಾವಿರ ಮನೆಗಳಲ್ಲಿ ಶೌಚಾಲಯ ಇಲ್ಲ.

     

    ಹೀಗಾಗಿ ಬೇಗ ಟಾಯ್ಲೆಟ್ ಕಟ್ಟಿಕೊಳ್ಳಿ. ಇಲ್ಲ ಅಂದ್ರೆ ಕತ್ತಲ ಜೀವನಕ್ಕೆ ರೆಡಿಯಾಗಿ ಅಂತಾ ಜಿಲ್ಲಾ ಪಂಚಾಯ್ತಿ ಸಿಇಓ ಖಡಕ್ ಆದೇಶ ಮಾಡಿದ್ದಾರೆ. ಆದರೆ ನೀರಿಲ್ಲ, ಅದಿಲ್ಲ, ಇದಿಲ್ಲ ಅಂತಾ ಜನ ಸಬೂಬು ಹೇಳುತ್ತಿದ್ದಾರೆ.

  • ರಾಯಚೂರು: ಸಾಮೂಹಿಕ ವಿವಾಹದಲ್ಲಿ ಸ್ವಚ್ಛ ಭಾರತ ಅಭಿಯಾನ

    ರಾಯಚೂರು: ಸಾಮೂಹಿಕ ವಿವಾಹದಲ್ಲಿ ಸ್ವಚ್ಛ ಭಾರತ ಅಭಿಯಾನ

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ನವಲಕಲ್ ನಲ್ಲಿ ಹಮ್ಮಿಕೊಂಡಿರುವ 171 ಜೋಡಿಗಳ ಸಾಮೂಹಿಕ ವಿವಾಹದಲ್ಲಿ ರಾಯಚೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕುರ್ಮಾರಾವ್ ಸ್ವಚ್ಛ ಭಾರತ್ ಅಭಿಯಾನ ನಡೆಸಿದರು.

    ಅಧಿಕಾರಿಗಳು ನವ ದಂಪತಿಗಳಿಗೆ ಮನವಿ ಪತ್ರ ನೀಡಿ ಶುಭ ಹಾರೈಸುವ ಜೊತೆಗೆ ಕುಟುಂಬದ ಆರೋಗ್ಯ, ಗೌರವ ಹಾಗೂ ಸ್ವಚ್ಛತೆಗಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಮನವಿ ಮಾಡಿದರು.

    ವಿಧಾನ ಪರಿಷತ್ ಸದಸ್ಯ ಎನ್. ಎಸ್.ಬೋಸರಾಜು ತಮ್ಮ 70ನೇ ವರ್ಷದ ಹುಟ್ಟು ಹಬ್ಬ ನಿಮಿತ್ತ ನವಲಕಲ್ ಬೃಹನ್ಮಠದಲ್ಲಿ ಸಾಮೂಹಿಕ ವಿವಾಹವನ್ನು ಹಮ್ಮಿಕೊಂಡಿದ್ದರು. ನವ ಜೋಡಿಗಳು ಸೇರಿದಂತೆ ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿಗಳೇ ನವ ದಂಪತಿಗಳಿಗೆ ಮನವಿ ಪತ್ರ ಹಂಚಿದ್ದಾರೆ. ಬಯಲು ಶೌಚ ಮುಕ್ತ ಗ್ರಾಮ ನಮ್ಮ ಧ್ಯೇಯವಾಗಿರಲಿ ಅಂತ ವಿವಾಹ ಕಾರ್ಯಕ್ರಮದಲ್ಲಿ ಅಭಿಯಾನ ನಡೆಸಲಾಯಿತು.

    ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಕೆ.ಶಿವನಗೌಡ ನಾಯಕ್, ರಾಯಚೂರು ಸಂಸದ ಬಿ.ವಿ.ನಾಯಕ್, ಶಾಸಕರಾದ ಎನ್.ಎಸ್.ಬೋಸರಾಜು, ಹಂಪಯ್ಯನಾಯಕ್, ಡಾ.ಶಿವರಾಜ್ ಪಾಟೀಲ್ ಸೇರಿ ಇತರರು ಭಾಗವಹಿಸಿದ್ದರು.

     

  • ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ- ಈ ಬಾರಿ ಮೈಸೂರಿಗೆ ಎಷ್ಟನೇ ಸ್ಥಾನ?

    ಭಾರತದ ಅತ್ಯಂತ ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ- ಈ ಬಾರಿ ಮೈಸೂರಿಗೆ ಎಷ್ಟನೇ ಸ್ಥಾನ?

    ನವದೆಹಲಿ: ಭಾರತದ 25 ಅತ್ಯಂತ ಸ್ಚಚ್ಛ ನಗರಗಳ ಪಟ್ಟಿಯನ್ನು ಇಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಪ್ರಕಟಿಸಿದ್ದಾರೆ. ಸ್ವಚ್ಛ್ ಸರ್ವೇಕ್ಷಣ್-2017ರ ಭಾಗವಾಗಿ ಸ್ವಚ್ಛ ನಗರಗಳನ್ನ ಪಟ್ಟಿ ಮಾಡಲಾಗಿದ್ದು, 73 ನಗರಗಳಿಂದ ಸುಮರು 37 ಲಕ್ಷ ಮಂದಿ ಇದಕ್ಕೆ ಓಟ್ ಮಾಡಿದ್ದಾರೆ.

    ಈ ಬಾರಿ ಮಧ್ಯಪ್ರದೇಶದ ಇಂದೋರ್ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನ ಕೂಡ ಇದೇ ರಾಜ್ಯದ ಭೋಪಾಲ್ ನಗರಕ್ಕೆ ಸಿಕ್ಕಿದೆ. ಇನ್ನು ಆಂಧ್ರಪ್ರದೇಶದ ವಿಶಾಖಪಟ್ಟಣ ಮೂರನೇ ಸ್ಥಾನದಲ್ಲಿದೆ. ಗುಜರಾತ್‍ನ ಸೂರತ್ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷ ಅತ್ಯಂತ ಸ್ವಚ್ಛ ನಗರಗಳಲ್ಲಿ ಮೊದಲನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ 5 ನೇ ಸ್ಥಾನಕ್ಕೆ ಇಳಿದಿದೆ.

    ಟಾಪ್ 10 ಅತ್ಯಂತ ಸ್ವಚ್ಛ ನಗರಗಳು:
    1. ಇಂದೋರ್- ಮಧ್ಯಪ್ರದೇಶ
    2. ಭೋಪಾಲ್- ಮಧ್ಯಪ್ರದೇಶ
    3. ವಿಶಾಖಪಟ್ಟಣ – ಆಂಧ್ರಪ್ರದೇಶ
    4. ಸೂರತ್ – ಗುಜರಾತ್
    5. ಮೈಸೂರು – ಕರ್ನಾಟಕ
    6. ತಿರುಚಿರಾಪಳ್ಳಿ – ತಮಿಳುನಾಡು
    7. ನವದೆಹಲಿ ಪುರಸಭೆ
    8. ನವೀ ಮುಂಬೈ – ಮಹಾರಾಷ್ಟ್ರ
    9. ತಿರುಪತಿ – ಆಂಧ್ರಪ್ರದೇಶ
    10. ವಡೋದರಾ – ಗುಜರಾತ್

    ಅತ್ಯಂತ ಸ್ಚಚ್ಛ ನಗರಗಳ ಪಟ್ಟಿ ಮಾಡಲು ನಡೆಸಿದ ಸಮೀಕ್ಷೆಯಲ್ಲಿ ಜನರಿಗೆ ಹಲವು ಪ್ರಶ್ನೆಗಳ ಮೇಲೆ ಓಟ್ ಮಾಡಲು ಕೇಳಲಾಗಿತ್ತು. ಸರ್ಕಾರದ ಮಾಹಿತಿಯ ಪ್ರಕಾರ ಜನರು ತಮ್ಮ ನಗರಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ಸುಧಾರಣೆಯಾಗಿದೆ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

    ಜನರು ನೀಡಿದ ಪ್ರತಿಕ್ರಿಯೆಯ ಜೊತೆಗೆ ಒಂದು ಪ್ರದೇಶದ ಸ್ವಚ್ಛತಾ ಕಾರ್ಯ ಮತ್ತು ನೈರ್ಮಲ್ಯತೆಯ ಬಗ್ಗೆ ಅಲ್ಲಿನ ಸ್ಥಳೀಯ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ಸ್ವಚ್ಛ ನಗರಗಳ ಪಟ್ಟಿಯನ್ನ ಸಿದ್ಧಪಡಿಸಲಾಗಿದೆ.

    2019ರೊಳಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಗುರಿಯನ್ನು ಸಕಾರಗೊಳಿಸಲು ತೆಗೆದುಕೊಳ್ಳಲಾಗಿರುವ ಪ್ರಮುಖ ಹೆಜ್ಜೆಗಳಲ್ಲಿ ಈ ಸಮೀಕ್ಷೆಯೂ ಒಂದಾಗಿದೆ. ಬಯಲು ಶೌಚ ಮುಕ್ತವಾಗಲು ಭಾರತಕ್ಕೆ ಸರಿಸುಮಾರು 11.1 ಕೋಟಿ ಶೌಚಾಲಯಗಳ ಅಗತ್ಯವಿದ್ದು, ಈವರೆಗೆ ಸರ್ಕಾರ 3 ಕೋಟಿ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.