Tag: ಸ್ಮಾರ್ಟ್‍ಫೋನ್

  • ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ

    ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ ಮಾರಾಟ ನಿಷೇಧ

    ಬರ್ಲಿನ್‌: ಜರ್ಮನಿಯಲ್ಲಿ ಒನ್‌ಪ್ಲಸ್‌ ಫೋನ್‌ (OnePlus Phones) ಮಾರಾಟವನ್ನು ನಿಷೇಧಿಸಲಾಗಿದೆ. ದೇಶದಲ್ಲಿ ಪೇಟೆಂಟ್ ಸಮಸ್ಯೆಗಳ (Patent Dispute) ಕಾನೂನು ವಿವಾದದಿಂದಾಗಿ ಜರ್ಮನ್ (Germany) ಅಧಿಕಾರಿಗಳು ಒನ್‌ಪ್ಲಸ್‌ ಉತ್ಪನ್ನಗಳನ್ನು ನಿಷೇಧಿಸಿದ್ದಾರೆ.

    ವೈರ್‌ಲೆಸ್ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿ ಕಂಪನಿಯಾದ ಇಂಟರ್‌ಡಿಜಿಟ್‌ ಮತ್ತು ಒನ್‌ ಪ್ಲಸ್‌ ಮಧ್ಯೆ 5ಜಿ ಮತ್ತು ಮೊಬೈಲ್‌ ತಂತ್ರಜ್ಞಾನ ವಿಚಾರವಾಗಿ ತಿಕ್ಕಾಟ ನಡೆಯುತ್ತಿದೆ.
    ಇದನ್ನೂ ಓದಿ: ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯ ಅಸಾಂವಿಧಾನಿಕ – ತಾರತಮ್ಯ ನಡೆದರೆ ಆಯಾ ರಾಜ್ಯಗಳೇ ಹೊಣೆ: ಸುಪ್ರೀಂ

    5ಜಿಯಲ್ಲಿ ತನ್ನ ಪೇಟೆಂಟ್‌ ಅನ್ನು ಒನ್‌ಪ್ಲಸ್‌ ಉಲ್ಲಂಘಿಸಿದೆ ಎಂದು ಇಂಟರ್‌ಡಿಜಿಟ್‌ ಆರೋಪಿಸಿದೆ. ನಿಷೇಧದಿಂದಾಗಿ ಒನ್‌ಪ್ಲಸ್‌ ಓಪನ್‌, ಒನ್‌ಪ್ಲಸ್‌ 12, ಒನ್‌ ಪ್ಲಸ್‌ 11 ಫೋನ್‌ಗಳ ಮಾರಾಟವನ್ನು ಆನ್‌ಲೈನ್‌ ಸ್ಟೋರ್‌ನಿಂದಲೇ ತೆಗೆಯಲಾಗಿದೆ. ಸದ್ಯ ಜರ್ಮನಿಯಲ್ಲಿ ಒನ್‌ಪ್ಲಸ್‌ ಪ್ಯಾಡ್‌ 2 ಮತ್ತು ಒನ್‌ ಪ್ಲಸ್‌ ವಾಚ್‌ 2 ಮಾತ್ರ ಆನ್‌ಲೈನ್‌ ಸ್ಟೋರ್‌ನಲ್ಲಿ ಲಭ್ಯವಿದೆ. ಈ ಎರಡೂ ಉತ್ಪನ್ನಗಳಿಗೆ ಸೆಲ್ಯುಲಾರ್ ಬೆಂಬಲದ ಅಗತ್ಯ ಇಲ್ಲದ ಕಾರಣ ಇವುಗಳಿಗೆ ನಿಷೇಧ ಅನ್ವಯವಾಗುವುದಿಲ್ಲ.

    ಈ ಹಿಂದೆ ನೋಕಿಯಾ ಕಂಪನಿಯ ಜೊತೆಗೆ ಒನ್‌ ಪ್ಲಸ್‌ ಸಂಘರ್ಷ ಇತ್ತು.ಇದರಿಂದಾಗಿ ಒನ್‌ಪ್ಲಸ್‌ ಮೇಲೆ ಜರ್ಮನಿಯಲ್ಲಿ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು. ವಿವಾದ ಪರಿಹಾರವಾದ ನಂತರ ಒನ್‌ಪ್ಲಸ್‌ ಜರ್ಮನಿ ಮಾರುಕಟ್ಟೆಗೆ ಎಂಟ್ರಿಕೊಟ್ಟಿತ್ತು.

     

  • ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್‌ ತಪ್ಪಿಸಲು ಏನು ಮಾಡ್ಬೇಕು?

    ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್‌ ತಪ್ಪಿಸಲು ಏನು ಮಾಡ್ಬೇಕು?

    ಇಡೀ ಭೂಮಿ ಈ ಮೊದಲು ವೆಪನ್‌ ವಾರ್‌, ಆ ನಂತರ ಬಯೋ ವಾರ್‌ ನೋಡಿತ್ತು. ಈಗ ಸೈಬರ್‌ ವಾರ್‌ ಶುರುವಾಗಿದೆ. ಇತ್ತೀಚೆಗಷ್ಟೇ ಲೆಬನಾನ್‌, ಸಿರಿಯಾ ದೇಶಗಳಲ್ಲಿ ಸಂಭವಿಸಿದ ಪೇಜರ್‌ (Pager), ವಾಕಿಟಾಕಿ, ಸೋಲಾರ್‌ ಪ್ಯಾನಲ್‌ನಂತಹ ಉಪಕರಣಗಳ ಸ್ಫೋಟ ವಿಶ್ವದಾದ್ಯಂತ ಎಚ್ಚರಿಕೆ ಸಂದೇಶ ರವಾನಿಸಿದೆ. ನಾವು ಬಳಸುವ ಎಲೆಕ್ಟ್ರಾನಿಕ್ ಡಿವೈಸ್‌, ಅದರಲ್ಲೂ ವಿಶೇಷವಾಗಿ ಮೊಬೈಲ್‌ ಫೋನ್‌ನಂತಹ ಸಂವಹನ ಸಾಧನಗಳು ಎಷ್ಟು ಸೇಫ್ ಎಂಬ ಪ್ರಶ್ನೆ ಹುಟ್ಟುಹಾಕಿದೆ? ಒಂದು ಮಿಸೈಲ್‌ ಸ್ಫೋಟಗೊಳಿಸಿದಾಗ ಆಗುವ ಹಾನಿಗಿಂತ ಸ್ಮಾರ್ಟ್‌ಫೋನ್‌ನಿಂದ ಆಗುವ ಹಾನಿಯೇ ಹೆಚ್ಚಿರುತ್ತದೆ. ಅದಕ್ಕಾಗಿಯೇ ಈ ಯುಗವನ್ನು ʻಇನ್‌ಫರ್ಮೇಶನ್‌ ಏಜ್‌ʼ (Information Age) ಎಂದು ಕರೆದಿದ್ದಾರೆ.

    ಪೇಜರ್‌ ಸ್ಫೋಟ ಸಂಭವಿಸಿದ ಬಳಿಕ ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್‌ (Smart Phone Hacking) ಮಾಡಿ ಸ್ಫೋಟಿಸಬಹುದು ಎಂಬ ವದಂತಿಗಳು ಎದ್ದಿವೆ. ಹ್ಯಾಕ್ ಮಾಡಿ ಸ್ಫೋಟಿಸಲು ಸಾಧ್ಯವೇ? ನಮ್ಮ ಶತ್ರುರಾಷ್ಟ್ರಗಳು ಹೀಗೆ ಮಾಡಿದರೆ ನಮ್ಮ ಗತಿಯೇನು? ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…..

    ಸದ್ಯಕ್ಕಿರುವ ತಂತ್ರಜ್ಞಾನದಲ್ಲಿ ನಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಕೆಲವರ ವಾದ, ಆದ್ರೆ ಕ್ಷಣಕ್ಕೊಮ್ಮೆ ಕಸದಂತೆ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ ಹಣ ಕಳೆದುಕೊಂಡವರನ್ನು ನೋಡಿದಾಗ ಹ್ಯಾಕಿಂಗ್‌ ಇದೇ ಎಂಬ ಅನುಭವವೂ ಆಗುತ್ತದೆ. ಹಾಗಾಗಿಯೇ ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್‌ಗಳು ಹಾಗೂ ಅವುಗಳನ್ನು ಬಳಸುವ ನಾವುಗಳು ಸಹ ಮುಂದೆ ಒಂದು ದಿನ ನಮ್ಮ ಶತ್ರು ರಾಷ್ಟ್ರದ ತಂತ್ರಜ್ಞರ ವಿಕೃತಿಗೆ ಬಲಿಯಾಗಲಿದ್ದೇವೆಯೇ ಎಂಬಿತ್ಯಾದಿ ಆತಂಕಗಳು ಮೂಡಿದೆ. ಇದಕ್ಕೆ ವಿಜ್ಞಾನಿಗಳು, ತಂತ್ರಜ್ಞರ ವಾದ ಏನಿದೆ? ಎಂಬುದನ್ನು ಮುಂದೆ ನೋಡಿ…

    ಸಾಮಾನ್ಯವಾಗಿ ಪೇಜರ್‌ಗಳಲ್ಲಿ ಬಳಕೆಯಾಗುವುದು ಲೀಥಿಯಂ ಅಯಾನ್ ಬ್ಯಾಟರಿಗಳು (Lithium Ion Battery), ಕಡಿಮೆ ಅವಧಿಯಲ್ಲಿ ಬೇಗನೇ ಚಾರ್ಜ್ ಆಗುವಂಥವು. ಹೆಚ್ಚು ಕಾಲ ಚಾರ್ಚ್ ಅನ್ನು ಹಿಡಿದಿಟ್ಟುಕೊಳ್ಳುವಂಥ ಸಾಮರ್ಥ್ಯವಿರುವ ಈ ಬ್ಯಾಟರಿಗಳನ್ನು ಪೇಜ‌ರ್‌ಗಳಲ್ಲಿ ಮಾತ್ರವಲ್ಲ ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಎಲ್ಲಾ ಬ್ಯಾಟರಿ ಆಧಾರಿತ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಸಲಾಗುತ್ತಿದೆ. ಬ್ಯಾಟರಿಗಳ ಇತಿಹಾಸದಲ್ಲೇ ಇವು ಈಗ ಅತ್ಯಂತ ಸುಧಾರಿತ ಬ್ಯಾಟರಿಗಳು. ಇವೇ ಬ್ಯಾಟರಿಗಳು ನಮ್ಮ ಸ್ಮಾರ್ಟ್ ಫೋನಿನಲ್ಲೂ ಇವೆ. ಪೇಜರ್‌ಗಳಿಗಿಂತ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸಂಖ್ಯೆಯಲ್ಲಿ ಬಳಕೆಯಲ್ಲಿವೆ ಹಾಗೂ ಅವು ರೇಡಿಯೋ ತರಂಗಗಳನ್ನು ಮೀರಿದ ಮೊಬೈಲ್ ನೆಟ್‌ವರ್ಕ್‌ ತರಂಗಗಳನ್ನು ಬಳಸುವುದರಿಂದ ಅವು ಹೆಚ್ಚು ಸಕ್ರಿಯವಾಗಬಲ್ಲದು. ಆದರೆ, ಇದಕ್ಕೂ ಹ್ಯಾಕರ್‌ಗಳ ಕಾಟ ಈಗಾಗಲೇ ಆರಂಭವಾಗಿದೆ. ಆದರೆ, ಆ ಹ್ಯಾಕ‌ರ್‌ಗಳು ಕೇವಲ ನಿಮ್ಮ ಮಾಹಿತಿ ಕದಿಯಲು (ಪೆಗಾಸಸ್ ಹಗರಣ) ಮತ್ತು ಹಣ ಕದಿಯಲು ಬಳಸುತ್ತಿದ್ದಾರೆ. ಕೆಲವು ದೇಶಗಳಲ್ಲಿ ಮೊಬೈಲ್ ಫೋನ್ ನಲ್ಲಿರುವ ಕ್ಯಾಮೆರಾಗಳನ್ನೇ ಸಿಸಿಟಿವಿ ಕ್ಯಾಮೆರಾಗಳಂತೆ ಅನ್ಯ ದೇಶದ ಹ್ಯಾಕ‌ರ್ ಗಳು ಬಳಸಿದ್ದೂ ಉಂಟು. 2018ರಲ್ಲಿ ಭಾರೀ ಸದ್ದು ಮಾಡಿದ್ದ ʻಇರುಂಬುತಿರೈʼ ತಮಿಳು ಚಿತ್ರ ಇದಕ್ಕೆ ಕನ್ನಡಿ ಹಿಡಿದಿತ್ತು.

    ಹ್ಯಾಕರ್‌ಗಳ ವಿಚಾರ ಪಕ್ಕಕ್ಕಿಟ್ಟು ಯೋಚಿಸಿದರೂ ಮೊಬೈಲ್ ಫೋನ್‌ಗಳು ಸಹಜ ಬಳಕೆಯಲ್ಲಿದ್ದಾಗಲೇ ಹೀಟ್ ಆಗಿ ಸ್ಫೋಟಗೊಂಡಿರುವ ಉದಾಹರಣೆಗಳೂ ಇವೆ. ಈಗ ನಮ್ಮ ಮುಂದಿನ ಪ್ರಶ್ನೆಯೇನೆಂದರೆ, ವೈರಸ್ ಮೂಲಕ ನಮ್ಮ ಮೊಬೈಲ್ ಸ್ಫೋಟಗೊಳಿಸಲು ಸಾಧ್ಯವೇ ಎಂಬುದು. ಇದಕ್ಕೆ ಉತ್ತರ ಹೌದು, ಈಗಲ್ಲದಿದ್ದರೂ ಮುಂದೊಂದು ದಿನ ಅದು ಸಾಧ್ಯವಾಗಬಹುದು ಎನ್ನುತ್ತಾರೆ ಕೆಲವರು.

    ಜ್ಯೂಸ್‌-ಜಾಕಿಂಗ್‌ ಅಂದ್ರೆ ಏನು?

    ಕೆಲ ದಿನಗಳ ತಿಂಗಳುಗಳ ಹಿಂದೆ ಭಾರತ ಸರ್ಕಾರ ಸಾರ್ವಜನಿಕರ ಡೇಟಾ ಕದಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಜ್ಯೂಸ್‌ ಜಾಕಿಂಗ್‌ ದಂಧೆ ಹುಟ್ಟಿಕೊಡ್ಡಿಂದು ಅದರಿಂದ ಪಾರಾಗಲು ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಜ್ಯೂಸ್‌ ಜಾಕಿಂಗ್‌ ಅಂದರೆ ಇದು ಸೈಬರ್‌ ದಾಳಿಯ ಒಂದು ತಂತ್ರ. ವೈರಸ್‌ ಇರುವ ಯುಎಸ್‌ಬಿ ಸ್ಟೇಷನ್‌ಗಳಲ್ಲಿ ಚಾರ್ಜಿಂಗ್‌ ಉಪಕರಣ ಬಳಸುವುದರಿಂದ, ಬಳಕೆದಾರರು ʻಜ್ಯೂಸ್‌-ಜಾಂಕಿಂಗ್‌ʼ ಎನ್ನುವ ಸೈಬರ್‌ ದಾಳಿಗೆ ತುತ್ತಾಗುವ ಸಾಧ್ಯತೆ ಇದೆ. ಸೈಬರ್‌ ಖದೀಮರು ಬಳಕೆದಾರರ ದತ್ತಾಂಶಗಳನ್ನು (ಡೇಟಾ) ಕದಿಯಲು ಅಥವಾ ತಮ್ಮ ಉಪಕರಣಗಳಿಗೆ ಸಂಪರ್ಕಿಸಿರುವ ಮಾಲ್‌ವೇರ್‌ಗಳನ್ನು (ವೈರಸ್‌) ಬಳಕೆದಾರರ ಸಾಧನಗಳಲ್ಲಿ ಇನ್‌ಸ್ಟಾಲ್‌ ಮಾಡಲು ಈ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಬಳಸುತ್ತಾರೆ. ಈ ಬಗ್ಗೆ ಬಳಕೆದಾರರಿಗೆ ಸಣ್ಣ ಅನುಮಾನವೂ ಬಾರದಂತೆ ನೋಡಿಕೊಳ್ಳುತ್ತಾರೆ. ಈ ರೀತಿ ಸ್ಟೇಷನ್‌ಗಳಲ್ಲಿ ಮೊಬೈಲ್‌ಗಳನ್ನು ಚಾರ್ಜ್‌ಗೆ ಹಾಕಿದಾಗ ಸೈಬರ್‌ ಕಳ್ಳರು ಮೊಬೈಲ್‌ಗಳಿಂದ ಸುಲಭವಾಗಿ ಡೇಟಾಗಳನ್ನ ಎಗರಿಸುತ್ತಾರೆ. ಅಥವಾ ಸಂಪರ್ಕಿತ ಉಪಕರಣಗಳಲ್ಲಿ ಮಾಲ್‌ವೇರ್‌ ಅಥವಾ ransomware ಅನುಷ್ಟಾನಗೊಳಿಸುತ್ತಾರೆ. ಇದರಿಂದ ನಿಮ್ಮ ಪಾಸ್‌ವರ್ಡ್‌ ಲಾಕ್‌ ಓಪನ್‌ ಮಾಡಬಹುದು. ಬಳಿಕ ಡೇಟಾಗಳನ್ನ ಅಪಾಯಕಾರಿ ಕೃತ್ಯಗಳಿಗೆ ಬಳಸುವ ಸಾಧ್ಯತೆಗಳೂ ಇರುತ್ತವೆ ಎಂದೂ ಸಹ ಹೇಳಲಾಗಿದೆ. ಈ ಬಗ್ಗೆ ಸರ್ಕಾರ ಎಚ್ಚರಿಕೆ ನೀಡಿತ್ತು. ಅನಗತ್ಯ ವೈರಸ್‌ ಇನ್‌ಸ್ಟಾಲ್‌ ಮಾಡುವ ಮೂಲಕ ಬ್ಯಾಟರಿ ಓವರ್‌ ಹೀಟ್‌ ಆದ್ರೆ ಮಾತ್ರ ಸ್ಫೋಟಿಸಬಹುದೇ ಹೊರತು, ಸ್ಫೋಟಕವನ್ನು ಬಳಸಿ ಮಾಡಲು ಸಾಧ್ಯವಿಲ್ಲ ಎಂದು ವರದಿಗಳು ಹೇಳಿವೆ.

    ಸುರಕ್ಷಿತವಾಗುವುದು ಹೇಗೆ?

    * ಎಲೆಕ್ಟ್ರಿಕಲ್ ವಾಲ್ ಔಟ್‌ಲೆಟ್‌ಗಳಿಗೆ (ಗೋಡೆಗಳಿಗೆ ಅಳವಡಿಸಿದ ಪ್ಲಗ್‌ ಪಾಯಿಂಟ್‌) ಗಳಿಂದ ಚಾರ್ಜ್‌ ಮಾಡುವುದಕ್ಕೆ ಆದ್ಯತೆ ನೀಡಿ.
    * ಇಲ್ಲದಿದ್ದರೆ ವೈಯಕ್ತಿಕ ಕೇಬಲ್‌ ಅಥವಾ ಪವರ್‌ ಬ್ಯಾಂಕ್‌ಗಳನ್ನು ಜೊತೆಯಲ್ಲೇ ಕೊಂಡು ಹೋಗಿ.
    * ನಿಮ್ಮ ಮೊಬೈಲ್‌ ಅನ್ನು ಲಾಕ್‌ ಮಾಡಿ ಮತ್ತು ಅಪರಿಚಿತ ಸಾಧನಗಳೊಂದಿಗೆ ಪೇರಿಂಗ್‌ ಮಾಡಲಾಗದಂತೆ ಆಯ್ಕೆಯಲ್ಲಿ ಡಿಸೆಬಲ್‌ ಮಾಡಿ
    * ಚಾರ್ಜ್‌ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಆಗಿರುವಂತೆ ನೋಡಿಕೊಳ್ಳಿ.
    * ಒಂದು ವೇಳೆ ಸೈಬರ್‌ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಾಗ ಅಂತಗ ಘಟನೆಗಳನ್ನು www.cybercrime.gov.in ವೆಬ್‌ಸೈಟ್‌ ಮೂಲಕ ದೂರು ನೀಡಿ, ಅಥವಾ ಸಹಾಯವಾಣಿ 1930ಗೆ ಕರೆ ಮಾಡಿ.

    ಕುತಂತ್ರಾಂಶಗಳಿವೆ ಎಚ್ಚರಿಕೆ

    ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ. ನಮ್ಮ ಕೆಲಸದಲ್ಲಿ ಸಹಾಯಮಾಡಲು ತಂತ್ರಾಂಶಗಳು (ಸಾಫ್ಟ್‌ವೇರ್) ಇರುವ ಹಾಗೆ ನಮಗೆ ತೊಂದರೆ ಕೊಡುವ ವೈರಸ್, ವರ್ಮ್ ಮುಂತಾದ ಕುತಂತ್ರಾಂಶಗಳು (ಮಾಲ್‌ವೇರ್) ಕೂಡ ಇವೆ. ಇವುಗಳಿಂದ ಪಾರಾಗಲು ನಿಮ್ಮ ಕಂಪ್ಯೂಟರ್ ಹಾಗೂ ಮೊಬೈಲಿನಲ್ಲಿ ಉತ್ತಮ ಆಂಟಿವೈರಸ್ ಹಾಕಿಕೊಳ್ಳಿ. ಯಾರೋ ಹೇಳಿದರೆಂದು ಸಿಕ್ಕಸಿಕ್ಕ ಆಪ್‌ಗಳನ್ನು, ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಬೇಡಿ. ಹಾಗೆಯೇ ಅಪರಿಚಿತರಿಂದ ಬರುವ ಮೆಸೇಜ್ ಅಥವಾ ಇಮೇಲ್‌ನಲ್ಲಿರುವ ಕೊಂಡಿಗಳ ಮೇಲೂ ಕ್ಲಿಕ್ ಮಾಡಬೇಡಿ, ಅದರಿಂದಲೂ ವೈರಸ್ ಬರಬಹುದು!

    ಪಬ್ಲಿಕ್‌ ವೈಫೈ ಬಳಸುವ ಮುನ್ನ ಎಚ್ಚರ!

    ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಸೌಲಭ್ಯ ಒದಗಿಸುವ ಅಭ್ಯಾಸ ಇದೀಗ ವ್ಯಾಪಕವಾಗುತ್ತಿದೆ. ಇಂತಹ ಸಂಪರ್ಕಗಳನ್ನು ಯಾರುಬೇಕಾದರೂ ಉಪಯೋಗಿಸಬಹುದಾದ್ದರಿಂದ ಅಲ್ಲಿ ಕುತಂತ್ರಿಗಳಿರುವ ಸಾಧ್ಯತೆ ಖಂಡಿತಾ ಇರುತ್ತದೆ. ಹಾಗಾಗಿ ಅಲ್ಲಿ ಹಣಕಾಸು ವ್ಯವಹಾರ, ಖಾಸಗಿ ಮಾಹಿತಿಯ ರವಾನೆ ಮುಂತಾದವನ್ನು ಮಾಡದಿರುವುದು ಒಳ್ಳೆಯದು. ಇನ್ನು ನಮ್ಮ ಮನೆಗಳಲ್ಲಿ ವೈ-ಫೈ ಸಂಪರ್ಕ ಇರುತ್ತದಲ್ಲ, ಅದನ್ನು ಸದೃಢ ಪಾಸ್‌ವರ್ಡ್ ಮೂಲಕ ಸುರಕ್ಷಿತಗೊಳಿಸಿಕೊಳ್ಳುವುದು ಅತ್ಯಗತ್ಯ. ಹಾಗೆಯೇ ಬೇರೆಯವರಿಂದ ಅದರ ದುರುಪಯೋಗ ಆಗದಂತೆ ನೋಡಿಕೊಳ್ಳಲು ನಮ್ಮ ಪಾಸ್‌ವರ್ಡ್ ಅನ್ನು ಜೋಪಾನ ಮಾಡಿಕೊಳ್ಳುವುದೂ ಅನಿವಾರ್ಯ.

  • ಶೀಘ್ರವೇ ಭಾರತದಲ್ಲಿ ಪಿಕ್ಸೆಲ್ ಫೋನ್‌ ತಯಾರಿಸಲಿದೆ ಗೂಗಲ್‌

    ಶೀಘ್ರವೇ ಭಾರತದಲ್ಲಿ ಪಿಕ್ಸೆಲ್ ಫೋನ್‌ ತಯಾರಿಸಲಿದೆ ಗೂಗಲ್‌

    ನವದೆಹಲಿ: ಗೂಗಲ್ (Google) ಕಂಪನಿಯೂ ತನ್ನ ಪಿಕ್ಸೆಲ್ (Pixel) ಸ್ಮಾರ್ಟ್‌ಫೋನ್‌ಗಳನ್ನು (Smartphone) ಮುಂದಿನ ತ್ರೈಮಾಸಿಕದಿಂದ ಭಾರತದಲ್ಲಿ (India) ತಯಾರಿಸಲಿದೆ ಎಂದು ವರದಿಯಾಗಿದೆ.

    ಭಾರತದಲ್ಲಿ ದುಬಾರಿ ಫೋನುಗಳ ಮಾರಾಟ ಏರಿಕೆಯಾಗುತ್ತಿರುವ ಬೆನ್ನಲ್ಲೇ ಈಗ ಗೂಗಲ್‌ ಪಿಕ್ಸೆಲ್‌ ಫೋನ್‌ಗಳನ್ನು ಭಾರತದಲ್ಲಿ ಉತ್ಪಾದನೆ ಮಾಡಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಬಂಧನಕ್ಕೆ ವಾರಂಟ್ ಹೊರಡಿಸಬೇಕಾಗುತ್ತೆ – ಶ್ರೀರಾಮುಲುಗೆ ಹೈಕೋರ್ಟ್ ಎಚ್ಚರಿಕೆ

    ಕಳೆದ ವರ್ಷದ ಗೂಗಲ್ ಫಾರ್ ಇಂಡಿಯಾ ಈವೆಂಟ್‌ನಲ್ಲಿ ಭಾರತದಲ್ಲಿ ಫೋನ್‌ ಉತ್ಪಾದನೆ ಮಾಡುವ ಯೋಜನೆ ಪ್ರಕಟಿಸಿತ್ತು. ವರದಿ ಪ್ರಕಾರ ಪಿಕ್ಸೆಲ್‌ ಮಾದರಿಯಲ್ಲಿ ಹೈ ಎಂಡ್‌ ಫೋನ್‌ ಆಗಿರುವ ಪಿಕ್ಸೆಲ್‌ 8 ಪ್ರೊ ಭಾರತದಲ್ಲಿ ಉತ್ಪಾದನೆಯಾಗುವ ಮೊದಲ ಫೋನ್‌ ಎನ್ನಲಾಗುತ್ತಿದೆ.  ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ BMRCL ನಿಂದ ಗುಡ್‌ನ್ಯೂಸ್‌

    ಗೂಗಲ್‌ನ ಇಂಡಿಯಾದ ಪಿಕ್ಸೆಲ್ ಫೋನ್‌ ಉತ್ಪಾದನೆಯು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ. ಈ ಮೊದಲು ಚೀನಾದಲ್ಲಿ ಪಿಕ್ಸೆಲ್‌ ಫೋನ್‌ ತಯಾರಾಗುತ್ತಿತ್ತು. ಅಮೆರಿಕ (USA) ಮತ್ತು ಚೀನಾ (China) ನಡುವೆ ನಡೆಯುತ್ತಿರುವ ತಾಂತ್ರಿಕ ಯುದ್ಧದ ನಂತರ ಗೂಗಲ್‌ ವಿಯೆಟ್ನಾಂನಲ್ಲಿ ಫೋನ್‌ ತಯಾರಿಸುತ್ತಿತ್ತು.

    ಭಾರತದಲ್ಲಿ ತಯಾರಾಗಲಿರುವ ಫೋನುಗಳನ್ನು ದೇಶದ ಒಳಗಡೆ ಮಾರಾಟ ಮಾಡುತ್ತದೋ ಅಥವಾ ವಿದೇಶಕ್ಕೆ ರಫ್ತು ಮಾಡುತ್ತದೋ ಎನ್ನುವುದು ತಿಳಿದು ಬಂದಿಲ್ಲ.

  • ಸ್ಮಾರ್ಟ್‍ಫೋನ್ ಖರೀದಿಸಿದ್ರೆ ಬಿಯರ್ ಫ್ರೀ – ಆಫರ್ ನೀಡಿದ್ದ ಅಂಗಡಿ ಮಾಲೀಕ ಅರೆಸ್ಟ್

    ಸ್ಮಾರ್ಟ್‍ಫೋನ್ ಖರೀದಿಸಿದ್ರೆ ಬಿಯರ್ ಫ್ರೀ – ಆಫರ್ ನೀಡಿದ್ದ ಅಂಗಡಿ ಮಾಲೀಕ ಅರೆಸ್ಟ್

    ಲಕ್ನೋ: ಸ್ಮಾರ್ಟ್‍ಫೋನ್ (Smartphones) ಖರೀದಿಸಿದರೆ 2 ಬಿಯರ್ (Beer) ಟಿನ್‍ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದ ಅಂಗಡಿ ಮಾಲೀಕನನ್ನು (Shopkeeper) ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶದ (Uttar Pradesh) ಚೌರಿ ರಸ್ತೆಯಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿರುವ ರಾಜೇಶ್ ಮೌರ್ಯ ಬಂಧಿತ (Arrest) ವ್ಯಕ್ತಿ. ಈತ ಸ್ಮಾರ್ಟ್‍ಫೋರ್ನ್ ಖರಿದಿಸುವವರಿಗೆ 2 ಟಿನ್ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದ. ಅಷ್ಟೇ ಅಲ್ಲದೇ ಈ ಬಗ್ಗೆ ಪೋಸ್ಟರ್, ಕರಪತ್ರ ಹಾಗೂ ಪ್ರಕಟಣೆಗಳನ್ನು ಹಾಕಿ ಪ್ರಚಾರ ಮಾಡಿದ್ದನು.

    ಪ್ರಚಾರದ ಸುದ್ದಿ ಹರಡುತ್ತಿದ್ದಂತೆ ಅಂಗಡಿಯ ಮುಂದೆ ಜನರು ಸಾಲುಗಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದನ್ನೂ ಓದಿ: 5ರ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ – ನಗ್ನವಾಗಿಸಿದ್ದನ್ನು ನೋಡಿ ಕಾಮುಕನನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

    ಸಾರ್ವಜನಿಕರ ಶಾಂತಿ ಕದಡುತ್ತಿರುವ ಕಾರಣಕ್ಕಾಗಿ ಉತ್ತರ ಪ್ರದೇಶ ಪೊಲೀಸರು ರಾಜೇಶ್ ಮೌರ್ಯನನ್ನು ಬಂಧಿಸಿದ್ದಾರೆ. ಜೊತೆಗೆ ರಾಜೇಶ್ ಮೌರ್ಯನ ಅಂಗಡಿಯನ್ನು ಸೀಲ್ ಮಾಡಲಾಗಿದೆ. ಇದನ್ನೂ ಓದಿ: ಸಿಬಿಐ ಬೆನ್ನಲ್ಲೇ ಇಡಿ ಸಂಕಷ್ಟ – ತಿಹಾರ್ ಜೈಲಿನಲ್ಲಿ Manish Sisodia ವಿಚಾರಣೆ