Tag: ಸ್ಮಶಾನ

  • ಹೂತಿಟ್ಟ ಶವದ ತಲೆಯನ್ನೇ ಹೊತ್ತೊಯ್ದ ದುಷ್ಕರ್ಮಿಗಳು

    ಹೂತಿಟ್ಟ ಶವದ ತಲೆಯನ್ನೇ ಹೊತ್ತೊಯ್ದ ದುಷ್ಕರ್ಮಿಗಳು

    ಬೆಂಗಳೂರು: ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿಯ ಹೂತಿಟ್ಟ ಶವದ ತಲೆಯನ್ನ ಮಾಟ ಮಂತ್ರ ಮಾಡುವ ಮಾಂತ್ರಿಕರು ಹೊರತೆಗೆದಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಕೆರೆಯ ಸ್ಮಶಾನದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಅರಸಯ್ಯ ಎಂಬವರ ದೇಹದ ತಲೆ ಭಾಗವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ವೇಳೆ ಪೂಜೆಯ ನೆಪದಲ್ಲಿ ಮಾಟಮಂತ್ರವನ್ನ ಮಾಡಿ ಹೊರ ತೆಗೆದಿದ್ದಾರೆ.

    ಕೆಲ ದಿನಗಳ ಹಿಂದೆ ಒಂದು ತಿಂಗಳ ತಿಥಿ ಕಾರ್ಯವನ್ನು ಕುಟುಂಬದವರು ಕೈಗೊಂಡ, ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ ಎಂದು ಅರಸಯ್ಯನವರ ಕುಟುಂಬದವರು ಹೇಳುತ್ತಿದ್ದಾರೆ. ಶತಮಾನದ ಹಳೆಯದಾದ ಸ್ಮಶಾನದಲ್ಲಿ ಈ ರೀತಿಯ ಘಟನೆ ಈ ಹಿಂದೆ ಎಂದೂ ಕೂಡ ನಡೆದಿರಲಿಲ್ಲ, ಇದೀಗ ಈ ಘಟನೆ ನಡೆದಿರುವುದು ಗ್ರಾಮಸ್ಥರಲ್ಲೂ ಭಯದ ಜೊತೆಗೆ ಆತಂಕವನ್ನು ಸೃಷ್ಟಿಸಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

    ಈ ಘಟನೆ ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವೀಟಿ ರಾಧಿಕಾ ಮಧ್ಯರಾತ್ರಿ ಸ್ಮಶಾನದಲ್ಲಿ ಬಿದ್ದಿದ್ಹೇಗೆ ಗೊತ್ತಾ..!

    ಸ್ವೀಟಿ ರಾಧಿಕಾ ಮಧ್ಯರಾತ್ರಿ ಸ್ಮಶಾನದಲ್ಲಿ ಬಿದ್ದಿದ್ಹೇಗೆ ಗೊತ್ತಾ..!

    – ಸ್ಮಶಾನದ ಕೆಲಸಗಾರರು ಬಿಚ್ಚಿಟ್ರು ಮೈನಡುಗಿಸುವ ಸತ್ಯ!

    ಬೆಂಗಳೂರು: ನಟಿ ರಾಧಿಕ ಬೈರಾದೇವಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಶಾಂತಿನಗರ ಸ್ಮಶಾನದ ಗೋರಿಯ ಮೇಲಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟಾಗಿದೆ. ಆದರೆ ಶಾಂತಿನಗರದ ಈ ಸ್ಮಶಾನದಲ್ಲಿ ಕೆಲಸಗಾರರು ಮಾತ್ರ ಹೇಳೋದೆ ಬೇರೆ. ಶಾಂತಿನಗರದ ಸ್ಮಶಾನದಲ್ಲಿ ರಾಧಿಕಾರಿಗೆ ಕಂಟಕ ಬಂದಿದ್ಯಾ? ಒಂದು ಕ್ಷಣ ಮೈನಡುಗಿಸುತ್ತೆ ಸ್ಮಶಾನದೊಳಗಿನ ಕೆಲಸಗಾರರು ಬಿಚ್ಚಿಟ್ಟ ಕತ್ತಲೆಯ ಕಥೆ.

    ಶಾಂತಿನಗರದ ಈ ಸ್ಮಶಾನದ ಹೊರಭಾಗದ ರಸ್ತೆಯಲ್ಲೇ ಜನ ರಾತ್ರಿ ಹೊತ್ತು ಗಾಡಿ ಓಡಿಸೋಕೆ ಭಯ ಪಡ್ತಾರೆ. ಮಧ್ಯರಾತ್ರಿಯ ಕತ್ತಲೆಯಲ್ಲಿ ಸ್ಯಾಂಡಲ್‍ವುಡ್ ಸ್ವೀಟಿ ರಾಧಿಕಾ ಕಾಳಿ ವೇಷ ಹಾಕಿ ಹುಣಸೆಹಣ್ಣಿನ ಮರದ ಕೆಳಗೆ ಬೈರಾದೇವಿ ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿದ್ರು. ಇದೇ ಸಮಯದಲ್ಲಿ ಗೋರಿಯಿಂದ ಬಿದ್ದು ಸ್ಪೈನಲ್ ಕಾರ್ಡ್ ಗೆ ಏಟು ಮಾಡಿಕೊಂಡು ಒಂದೂವರೆ ತಿಂಗಳು ಬೆಡ್ ರೆಸ್ಟ್ ನಲ್ಲಿದ್ದಾರೆ.

    ಸಾಮಾನ್ಯ ಸ್ಮಶಾನದಂತಿದ್ದ ಶಾಂತಿನಗರದಲ್ಲೀಗ ಮಾಟಮಂತ್ರದಂತಹ ಘಟನೆಗಳು ಹೆಚ್ಚಾಗಿದ್ಯಯಂತೆ. ಅಮಾವಾಸ್ಯೆ ಬಂದ್ರೆ ಸಾಕು ನಾಯಿಗಳನ್ನು ಕೊಂದು ಇಲ್ಲಿ ಕ್ಷುದ್ರ ಶಕ್ತಿಯನ್ನು ಅವಾಹನೆ ಮಾಡ್ತಾರಂತೆ. ಇದನ್ನು ದಾಟಿದ್ರೆ ಬೇರೆಯವರಿಗೆ ಅಪಾಯವಾಗುತ್ತೆ. ಅಲ್ಲದೇ ಇತ್ತೀಚೆಗೆ ಸಂಬಂಧಿಕರ ಸ್ಮಶಾನಕ್ಕೆ ಪೂಜೆ ಸಲ್ಲಿಸೋಕೆ ಜನ ಶಾಂತಿನಗರ ಸ್ಮಶಾನದಲ್ಲಿ ಹಿಂದೇಟು ಹಾಕುತ್ತಿದ್ದಾರಂತೆ. ನೆಗೆಟಿವ್ ಎನರ್ಜಿ ಸ್ಮಶಾನದಲ್ಲಿರೋದ್ರಿಂದ ರಾಧಿಕಾಗೆ ತೊಂದರೆಯಾಗಿರಲೂಬಹುದು, ಇದುವರೆಗೆ ಯಾವ ಶೂಟಿಂಗ್ ಸಂದರ್ಭದಲ್ಲೂ ಈ ರೀತಿ ಅನಾಹುತವಾಗಿಲ್ಲ ಅನ್ನೋದು ಕೆಲಸಗಾರರ ಮಾತು.

    ಈ ಸ್ಮಶಾನದಲ್ಲಿ ಎಂಟ್ರಿಯಾಗುತ್ತಲೇ ಕಾಳಿ ದೇವಿಯ ದೇಗುಲವಿದೆ. ಮೂಲವಿಗ್ರಹವಿರುವಾಗ ಇನ್ನೊಂದು ದೇವರ ಸೆಟ್ ಹಾಕಿ ಶೂಟಿಂಗ್ ಮಾಡುವಂತದ್ದು ಅಥವಾ ಸ್ಮಶಾನದ ಅವರಣದಲ್ಲಿ ಗೋರಿಯ ಪಕ್ಕ ಉಪ್ಪು, ಮೆಣಸು ಹಾಕಿ ಮಂತ್ರಪಠನೆ ಮಾಡಿದ್ರಿಂದ ಅನಾಹುತ ಸಂಭವಿಸಿರಬಹುದು. ಇಲ್ಲಿ ಏನೇ ಕೆಲಸ ಮಾಡಿದ್ರೂ ಮೊದಲು ಕಾಳಿಗೆ ಪೂಜೆ ಸಲ್ಲಿಸಲೇಬೇಕು. ಆದರೆ ಸಿನಿಮಾ ಟೀಮ್ ಇದನ್ನು ಮಾಡದೇ ಇದ್ದಿದ್ರಿಂದ ಹೀಗಾಗಿರಬಹುದು ಎಂದು ಸ್ಮಶಾನದ ಸಿಬ್ಬಂದಿ ಪುರಷೋತ್ತಮ್ ಹೇಳುತ್ತಾರೆ.

    ಸ್ಮಶಾನ ಅಂದ್ರೆ ಅಲ್ಲೊಂದು ನೆಗೆಟಿವ್ ಎನರ್ಜಿ ಇರುತ್ತೆ ಅನ್ನುವ ನಂಬಿಕೆ ಸಾಮಾನ್ಯ. ಏನೇ ಆಗಲಿ ಅದಷ್ಟು ಬೇಗ ರಾಧಿಕಾ ಚೇತರಿಸಿಕೊಳ್ಳಲಿ ಅವರ ಆರೋಗ್ಯ ಸುಧಾರಿಸಲಿ ಅಂತಾ ಹಾರೈಸೋಣ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಮಶಾನದಲ್ಲಿ ಪತ್ತೆ ಆಯ್ತು ಕೋಟಿ ಕೋಟಿ ಮೌಲ್ಯದ ಚಿನ್ನ, ವಜ್ರ

    ಸ್ಮಶಾನದಲ್ಲಿ ಪತ್ತೆ ಆಯ್ತು ಕೋಟಿ ಕೋಟಿ ಮೌಲ್ಯದ ಚಿನ್ನ, ವಜ್ರ

    – ಅಗೆದಷ್ಟು ಸಿಕ್ತು ನಗದು, ದಾಖಲೆ

    ಚೆನ್ನೈ: ತಮಿಳುನಾಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರತಿಷ್ಠಿತ ಆಭರಣ ಮಳಿಗೆಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಚಿನ್ನ, ವಜ್ರ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

    ಚೆನ್ನೈ ಹಾಗೂ ಕೊಯಮತ್ತೂರಿಲ್ಲಿ ಶರವಣ ಗ್ರೂಪ್ ಮಳಿಗೆಗಳು ಮತ್ತು ರಿಯಾಲ್ಟಿ ಕಂಪನಿಗಳಾದ ಲೋಟಸ್ ಗ್ರೂಪ್ ಹಾಗೂ ಜಿಸ್ಕ್ವೇರ್ ಗಳ ಮಳಿಗೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಒಂದು ವಾರಕ್ಕೂ ಹೆಚ್ಚು ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಸ್ಥಳಗಳಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.

    ಸಂಸ್ಥೆಗಳಿಗೆ ಸೇರಿದ ಸಂಪತ್ತನ್ನು ತಮಿಳುನಾಡಿನ ವಿವಿಧ ಪ್ರದೇಶಗಳ ಸಮಾಧಿಗಳಲ್ಲಿ ಬಚ್ಚಿಡಲಾಗಿದ್ದು, ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಸುಮಾರು 433 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸೀಜ್ ಮಾಡಿದ್ದಾರೆ. ಅಲ್ಲದೇ ಸ್ಮಶಾನದಲ್ಲಿ ಅಗೆದು ಅವುಗಳಲ್ಲಿ ಬಚ್ಚಿಟ್ಟಿದ್ದ ನಗದು, ದಾಖಲೆಗಳು, ಚಿನ್ನ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಒಟ್ಟಾರೆ 25 ಕೋಟಿ ರೂ. ನಗದು ಹಣ, 12 ಕೆ.ಜಿ ಚಿನ್ನ ಮತ್ತು 626 ಕ್ಯಾರೆಟ್ ವಜ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಶರವಣ ಸ್ಟೋರ್ಸ್ ಮಾಲೀಕ ಯೋಗರತ್ನಂ ಪಾಂಡುರಾಯ್, ಅವರ ಸಹವರ್ತಿ ಹಾಗೂ ಲೋಟಸ್ ಮತ್ತು ಜಿಸ್ಕ್ವೇರ್ ಗ್ರೂಪ್‍ಗಳ ಮಾಲೀಕ ರಾಮಜಯಂ ಅಲಿಯಾಸ್ ಬಾಲ ಮತ್ತು ಅವರ ಸಹವರ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಮಶಾನದಲ್ಲಿ 80 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ

    ಸ್ಮಶಾನದಲ್ಲಿ 80 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ

    – ಸೆಕ್ಸ್‌ಗೆ ನಿರಾಕರಿಸಿದಕ್ಕೆ ಕಾಮುಕರಿಂದ ಹಲ್ಲೆ, ರಕ್ತಸ್ರಾವದಿಂದ ವೃದ್ಧೆ ಸಾವು

    ಬೆಂಗಳೂರು: ಸ್ಮಶಾನದ ಗೇಟ್ ಕಾಯುತ್ತಿದ್ದ 80 ವರ್ಷದ ವೃದ್ಧೆಯ ಮೇಲೆ ಯುವಕ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯ ಎನ್‍ಜಿಆರ್ ಲೇಔಟ್‍ನಲ್ಲಿ ನಡೆದಿದೆ.

    ಬೊಮ್ಮನಹಳ್ಳಿಯ ಎನ್‍ಜಿಆರ್ ಲೇಔಟ್‍ನ ನಿವಾಸಿ ಯಲ್ಲಮ್ಮ (80) ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ. ಅತ್ಯಾಚಾರ ಎಸಗಿದ್ದ ಹರೀಶ್‍ನನ್ನು (19) ಬೊಮ್ಮನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ.

    ಆಗಿದ್ದೇನು?:
    ರೂಪೇನ ಅಗ್ರಹಾರದ ಎನ್‍ಜಿಆರ್ ಬಡಾವಣೆಯ ಸ್ಮಶಾನದ ಕಾವಲು ಕಾಯುವ ಕೆಲಸ ಮಾಡುತ್ತಿದ್ದ ಯಲ್ಲಮ್ಮ ಅಲ್ಲಿನ ರೂಮ್ ಒಂದರಲ್ಲಿ ವಾಸವಾಗಿದ್ದರು. ಹರೀಶ್ ಹಾಗೂ ಆತನ ಕೆಲ ಸ್ನೇಹಿತರು ಶನಿವಾರ ಸಂಜೆ ಯಲ್ಲಮ್ಮ ವಾಸವಿದ್ದ ರೂಮ್‍ಗೆ ಹೋಗಿದ್ದಾರೆ. ಈ ವೇಳೆ ವೃದ್ಧೆ ಯಲ್ಲಮ್ಮ ಮುಖಕ್ಕೆ ಕಟ್ಟಿಗೆಯಿಂದ ಹೊಡೆದು, ಎದೆ ಭಾಗವನ್ನು ಕಚ್ಚಿದ್ದಾರೆ. ಅಷ್ಟೇ ಅಲ್ಲದೆ ಗುಪ್ತಾಂಗಕ್ಕೂ ಗಾಯ ಮಾಡಿ ಅತ್ಯಾಚಾರ ಎಸಗಿದ್ದಾರೆ.

    ಸ್ಮಶಾನದಲ್ಲಿ ಕುರಿ ಕಟ್ಟಲು ಹೋಗಿದ್ದ ಮಹಿಳೆಯೊಬ್ಬರಿಗೆ ಯಲ್ಲಮ್ಮ ವಾಸವಿದ್ದ ರೂಮ್‍ನಿಂದ ಧ್ವನಿ ಕೇಳಿದೆ. ತಕ್ಷಣವೇ ಅಲ್ಲಗೆ ಹೋಗಿ ಬಾಗಿಲು ತೆರೆಯುತ್ತಿದ್ದಂತೆ ವೃದ್ಧೆ ಯಲ್ಲಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಚೀರಿಕೊಂಡಿದ್ದಾರೆ. ರೂಮ್ ಒಳಗಿದ್ದ ಹರೀಶ್ ಹಾಗೂ ಕೆಲ ಯುವಕರು ಇರುವುದನ್ನು ನೋಡಿ ಗಾಬರಿಯಿಂದ ಓಡಿ ಹೋಗಿ ಸ್ಥಳೀಯರಿಗೆ ಹಾಗೂ ವೃದ್ಧೆಯ ಮಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳೀಯರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ಈ ಕುರಿತು ಸ್ಥಳೀಯರು ಕರೆ ಮಾಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೊಮ್ಮನಹಳ್ಳಿ ಠಾಣಾ ಪೊಲೀಸರು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.

    ಈ ಕುರಿತು ಮೃತ ವೃದ್ಧೆಯ ಸಂಬಂಧಿಕರು ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಹರೀಶ್‍ನನ್ನು ವಶಕ್ಕೆ ಪಡೆದು, ಇತರರಿಗಾಗಿ ಶೋಧ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ದೇಹದಾನ ಮಾಡಲು ಮುಂದಾದ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಗ್ರಾಮಸ್ಥರು

    ದೇಹದಾನ ಮಾಡಲು ಮುಂದಾದ ಪ್ರಿಯಾಂಕ್ ಖರ್ಗೆ ಕ್ಷೇತ್ರದ ಗ್ರಾಮಸ್ಥರು

    -ಕಚೇರಿ ನವೀಕರಣಕ್ಕೆ ಲಕ್ಷ ಖರ್ಚು ಮಾಡುವ ಸಚಿವರೇ ಇಲ್ಲಿ ನೋಡಿ

    ಕಲಬುರಗಿ: ಮರಣದ ನಂತರವು ಪರರಿಗೆ ನಮ್ಮ ದೇಹ ಉಪಯೋಗವಾಗಲಿ ಅಂತಾ ದೇಹದಾನ ಮಾಡುವದನ್ನು ನೋಡಿದ್ದೇವೆ. ಆದರೆ ಕಲಬುರಗಿ ಜಿಲ್ಲೆಯ ಭಂಕುರ ಗ್ರಾಮದಲ್ಲಿ ಮರಣದ ನಂತರ ಗ್ರಾಮದಲ್ಲಿ ಹೂಳಲು ಸ್ಥಳವಿಲ್ಲದ ಕಾರಣ ದೇಹದಾನ ಮಾಡಿದ್ದಾರೆ. ದುರಂತ ಅಂದರೆ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರದ ಜನರ ಕಥೆ.

    ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಂಕುರ ಗ್ರಾಮದ ನಿವಾಸಿಗಳು ದೇಹದಾನ ಮಾಡಲು ಮುಂದಾಗುತ್ತಿದ್ದಾರೆ. ಈ ಗ್ರಾಮದಲ್ಲಿ ಈಗಾಗಲೇ 20ಕ್ಕೂ ಅಧಿಕ ಜನ ಅವರ ದೇಹವನ್ನು ಕಲಬುರಗಿಯ ಎಮ್‍ಆರ್‍ಎಂಸಿ ಮೆಡಿಕಲ್ ಕಾಲೇಜಿಗೆ ದಾನ ಮಾಡಿದ್ದಾರೆ. ಇಲ್ಲಿನ ಜನ ಈ ರೀತಿ ನಿರ್ಧಾರ ಕೈಗೊಳ್ಳುವುದಕ್ಕೆ ಪ್ರಮುಖ ಕಾರಣವೆಂದ್ರೆ ಈ ಗ್ರಾಮದಲ್ಲಿ ಕೇವಲ 33 ಗುಂಟೆ ಸ್ಮಶಾನವಿದೆ. ಹೀಗಾಗಿ ಯಾರಾದ್ರು ಮೃತಪಟ್ಟರೆ ಅವರ ದೇಹ ಹೂಳಲು ಸ್ಥಳವಿಲ್ಲ. ಆದ್ದರಿಂದ ದೇಹದಾನ ಮಾಡಲು ಇಲ್ಲಿನ ಗ್ರಾಮಸ್ಥರು ಮುಂದಾಗಿದ್ದು, ಈಗಾಗಲೇ ಭಂಕುರ ಗ್ರಾಮದಲ್ಲಿ 20 ಕ್ಕು ಹೆಚ್ಚು ಜನ ದೇಹದಾನ ಮಾಡಿದ್ದಾರೆ.

    ಈ ಸಮಸ್ಯೆ ಬಗೆಹರಿಸುವಂತೆ ಕ್ಷೇತ್ರದ ಶಾಸಕ ಹಾಗು ಸಚಿವ ಪ್ರಿಯಾಂಕ್ ಖರ್ಗೆ ಅವರ ಬಳಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಈ ಸಮಸ್ಯೆ ಕುರಿತು 2015ರಲ್ಲಿಯೇ ವಿಧಾನ ಪರಿಷತ್‍ನಲ್ಲಿ ಮೋಟಮ್ಮ ಸದನದ ಗಮನ ಸಹ ಸೆಳೆದಿದ್ದಾರೆ. ಇಷ್ಟಾದ್ರು ಸಹ ಇಲ್ಲಿಯವರೆಗೆ 10 ಸಾವಿರ ಜನಸಂಖ್ಯೆಯಿರುವ ಗ್ರಾಮಕ್ಕೆ ಇರುವ 33 ಗುಂಟೆ ಸ್ಮಶಾನ ಭೂಮಿಯಲ್ಲಿಯೇ, ಹೂತಿರುವ ಹೆಣ ತೆಗೆದು ಬೇರೆಯವರನ್ನು ಅದೇ ಸ್ಮಶಾನ ಭೂಮಿಯಲ್ಲಿ ಹೂಳುತ್ತಿದ್ದಾರೆ. ಈ ಸಮಸ್ಯೆ ಅರಿತ ಇನ್ನು ಕೆಲವರು ಬೇರೆಯವರಿಗೆ ತಮ್ಮ ದೇಹ ಪ್ರಯೋಜನವಾಗಲಿ ಅಂತಾ ಸಹ ದೇಹದಾನ ಮಾಡಿದ್ದಾರೆ.

    ತಮ್ಮ ಕಚೇರಿ ನವೀಕರಣಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಸಚಿವ ಪ್ರಿಯಾಂಕ್ ಖರ್ಗೆ, ಕ್ಷೇತ್ರದಲ್ಲಿನ ಜನರ ಈ ಗಂಭೀರ ಸಮಸ್ಯೆಗೆ ಇಲ್ಲಿಯವರೆಗೆ ಪರಿಹಾರ ನೀಡದಿರುವುದು ನಿಜಕ್ಕು ದುರಂತವೇ ಸರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸತ್ತರೆ ಇಲ್ಲಿ ಸಾಲ ಕಟ್ಟಿಟ್ಟ ಬುತ್ತಿ – ಬಡವರು ಸತ್ತರೂ ಕಷ್ಟ

    ಸತ್ತರೆ ಇಲ್ಲಿ ಸಾಲ ಕಟ್ಟಿಟ್ಟ ಬುತ್ತಿ – ಬಡವರು ಸತ್ತರೂ ಕಷ್ಟ

    ಮೈಸೂರು: ಸಾವು ಪ್ರತಿ ಮನೆಯಲ್ಲೂ ದು:ಖದ ಕಡಲ ಸೃಷ್ಟಿಸುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಇಲ್ಲೊಂದು ಸಮುದಾಯದಲ್ಲಿ ಸಾವು ಬರೀ ದು:ಖದ ಕಡಲ ಸೃಷ್ಟಿಸುವ ಜೊತೆಗೆ ಸಾಲದ ಹೊರೆಯನ್ನು ಸೃಷ್ಟಿಸುತ್ತದೆ. ಸಾವು ಆಯ್ತು ಎಂಬ ನೋವು ಒಂದು ಕಡೆ, ಸಾವು ಸೃಷ್ಟಿಸೋ ಸಾಲದ ನೋವು ಮತ್ತೊಂದು ಕಡೆ.

    ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿನ ಕ್ರೈಸ್ತ ಧರ್ಮದ ಪ್ರೊಟೆಸ್ಟಂಟ್ ಸಮುದಾಯದವರು ಈ ರೀತಿಯ ತೊಂದರೆಯನ್ನು ಎದುರಿಸುತ್ತಿದ್ದಾರೆ. ಬಹುತೇಕರು ಬಡತನ ರೇಖೆಗಿಂತಾ ಕೆಳಗೆ ಇದ್ದಾರೆ. ಇವರ ಮನೆಯಲ್ಲಿ ಸಾವು ಸಂಭವಿಸಿದರೆ ಕನಿಷ್ಟ ಪಕ್ಷ 50 ಸಾವಿರ ರೂಪಾಯಿ ಸಾಲ ಅವರ ಬೆನ್ನಿಗೆ ಬೀಳೋದು ನಿಶ್ಚಿತ. ಸಾಲಕ್ಕೆ ಬಡ್ಡಿ ಎಲ್ಲಾ ಸೇರಿ ಬಿಟ್ಟರೆ ಸಾಲದ ಬೆಟ್ಟ ಲಕ್ಷ ರೂಪಾಯಿಯನ್ನೆ ಮುಟ್ಟುತ್ತದೆ.

    ಈ ಸಮುದಾಯಕ್ಕೆ ಟಿ. ನರಸೀಪುರ ವ್ಯಾಪ್ತಿಯಲ್ಲಿ ಸ್ಮಶಾನವಿಲ್ಲ. ಪ್ರೊಟೆಸ್ಟಂಟ್ ಸಮುದಾಯದವರು ಯಾರಾದರೂ ಸತ್ತರೆ ಅವರನ್ನು ಹೂಳುವುದಕ್ಕೆ 40 ಕಿ.ಮೀ. ದೂರ ಇರುವ ಮೈಸೂರಿಗೆ ತರಬೇಕು. ಮೈಸೂರಿನಲ್ಲಿನ ಕ್ರೈಸ್ತ ಸಮುದಾಯದ ಸ್ಮಶಾನದಲ್ಲಿ 12 ಸಾವಿರ ರೂಪಾಯಿ ಹಣ ನೀಡಬೇಕು. ಇದರ ಜೊತೆಗೆ ಶವ ತರಲು ವಾಹನ, ಸಂಬಂಧಿಕರು, ಮನೆಯವರು ಎಲ್ಲರೂ ಮೈಸೂರಿಗೆ ಬರುವುದಕ್ಕೆ ವಾಹನದ ವ್ಯವಸ್ಥೆ ಮಾಡಬೇಕು. ಟಿ. ನರಸೀಪುರದಿಂದ ಮೈಸೂರಿಗೆ ಶವ ತಂದು ಸಂಸ್ಕಾರ ಮಾಡಿ ವಾಪಾಸ್ ಹೋಗುವುದಕ್ಕೆ ಕನಿಷ್ಟ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಹೇಳಿ ಕೇಳಿ ಈ ಸಮುದಾಯದಲ್ಲಿ ಇರುವವರಲ್ಲಿ ಬಹುತೇಕರು ಬಡವರು. ಇವರ ಬಳಿ ಅಷ್ಟು ಹಣ ಇರೋದಿಲ್ಲ. ಹೀಗಾಗಿ 50 ಸಾವಿರ ರೂಪಾಯಿಯನ್ನು ಬಡ್ಡಿಗೆ ಸಾಲಕ್ಕೆ ತಂದು ಶವ ಸಂಸ್ಕಾರದ ಕಾರ್ಯ ಮಾಡುತ್ತಿದ್ದಾರೆ.

    ಕ್ರೈಸ್ತ ಸಮುದಾಯದ ಬೇರೆ ಪಂಗಡದ ಸ್ಮಶಾನದಲ್ಲಿ ಇವರಿಗೆ ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಇನ್ನೂ ಹಿಂದೂ ಧರ್ಮದ ಸ್ಮಶಾನಗಳಲ್ಲೂ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಮೈಸೂರಿಗೆ ಬರಲೇಬೇಕಾದ ಅನಿವಾರ್ಯತೆ ಇದೆ. ಇದರಿಂದ ತಮಗೆ ಪ್ರತ್ಯೇಕವಾಗಿ ಒಂದು ಸ್ಮಶಾನ ಭೂಮಿ ಮಂಜೂರು ಮಾಡಿ ಅಂತಾ ಸಮುದಾಯದ ಮುಖಂಡ ಅಲೆಕ್ಸ್ ಸೇರಿದಂತೆ ಗ್ರಾಮಸ್ಥರು ಕೇಳುತ್ತಿದ್ದಾರೆ.

    ಪ್ರೊಟೆಸ್ಟಂಟ್ ಸಮುದಾಯದ ನೂರಕ್ಕೂ ಅಧಿಕ ಕುಟುಂಬದವರು ಟಿ. ನರಸೀಪುರ ಪಟ್ಟಣದಲ್ಲಿ ವಾಸವಾಗಿದ್ದು, ಪ್ರಾರ್ಥನೆಗೆ ಚರ್ಚ್ ಕೂಡ ಇಲ್ಲ. ಹೀಗಾಗಿ ಮನೆಗಳಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ನಮಗೆ ಚರ್ಚ್ ಬೇಡ ಕನಿಷ್ಟ ಪಕ್ಷ ಸ್ಮಶಾನ ಭೂಮಿಯಾದರೂ ಕೊಡಿ ಅಂತಾ ಜನಪ್ರತಿನಿಧಿಗಳನ್ನು ಮೈಸೂರು ಜಿಲ್ಲಾಡಳಿತವನ್ನು ಕೇಳುತ್ತಿದ್ದಾರೆ.

    ಈ ಸಮುದಾಯಕ್ಕೆ ಶೀಘ್ರವೆ ಸ್ಮಶಾನ ಭೂಮಿ ನೀಡೋಕೆ ಮೈಸೂರು ಜಿಲ್ಲಾಡಳಿತ ಮುಂದಾಗಬೇಕಿದೆ. ಇಲ್ಲದೆ ಇದ್ದರೆ ಸಾವಿನ ನೋವಿನ ಜೊತೆ ಸಾಲದ ನೋವು ಈ ಕುಟುಂಬಗಳನ್ನು ಕಾಡುವುದು ಮುಂದುವರಿಯುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಮಶಾನಕ್ಕೆ ಮೃತದೇಹ ಕೊಂಡ್ಯೊಯಲು ರಸ್ತೆ ಇಲ್ದೇ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ರು

    ಸ್ಮಶಾನಕ್ಕೆ ಮೃತದೇಹ ಕೊಂಡ್ಯೊಯಲು ರಸ್ತೆ ಇಲ್ದೇ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ರು

    ಚಿಕ್ಕಬಳ್ಳಾಪುರ: ಮಹಿಳೆಯ ಮೃತದೇಹವನ್ನ ಸ್ಮಶಾನಕ್ಕೆ ಕೊಂಡ್ಯೊಯಲು ರಸ್ತೆಯಿಲ್ಲದೆ ಮೃತರ ಸಂಬಂಧಿಕರು ನಡು ರಸ್ತೆಯಲ್ಲೇ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಮನಕಲಕುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ರೊಪ್ಪಾರ್ಲಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ 35 ವರ್ಷದ ಉಮಾ ಎಂಬ ಮಹಿಳೆ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಹೀಗಾಗಿ ಸಂಬಂಧಿಕರು ಅಂತಿಮ ಕಾರ್ಯ ನಡೆಸಲು ಗ್ರಾಮದ ಹೊರವಲಯದಲ್ಲಿರುವ ಸ್ಮಶಾನಕ್ಕೆ ಮೃತದೇಹ ಕೊಂಡ್ಯೊಯಲು ತೆರಳಿದ್ದರು. ಆದರೆ ಸ್ಮಶಾನಕ್ಕೆ ತೆರಳುವ ದಾರಿಯನ್ನೇ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಮಾಲೀಕ ರಘುನಾಥ್ ಒತ್ತುವರಿ ಮಾಡಿಕೊಂಡು ವರ್ಷಗಳಿಂದ ಇದ್ದ ರಸ್ತೆಗೆ ಮುಳ್ಳಿನ ತಂತಿಬೇಲಿ ನಿರ್ಮಿಸಿದ್ದ.

    ಇದರಿಂದ ಹಲವು ಗಂಟೆಗಟ್ಟಲೇ ನಡುರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳಿಗೆ ಸಂಪರ್ಕ ಮಾಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ಕೊನೆಗೆ ಮೃತಳ ಸಂಬಂಧಿಕರೇ ಮುಳ್ಳು ತಂತಿ ಬೇಲಿಯನ್ನು ಕಿತ್ತು ಹಾಕಿ ಸ್ಮಶಾನಕ್ಕೆ ಮೃತದೇಹ ಕೊಂಡೊಯ್ದಿದ್ದಾರೆ. ಸ್ಮಶಾನಕ್ಕೆ ಉತ್ತಮವಾದ ರಸ್ತೆಯಿಲ್ಲದ ಪರಿಣಾಮ, ಕಲ್ಲುಮುಳ್ಳು-ಹಳ್ಳಗಳ ಹಾದಿಯಲ್ಲೇ ಹರಸಾಹಸ ಪಟ್ಟ ಸಂಬಂಧಿಕರು ಸ್ಮಶಾನಕ್ಕೆ ತೆರಳಿ ಅಂತ್ಯಕ್ರಿಯೆ ನೇರವೇರಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ವರದಿಗಾರರು ತಾಲೂಕು ಅಧಿಕಾರಿಗಳನ್ನು ಸಂಪರ್ಕಿಸಿದ ವೇಳೆ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬರೆಹರಿಸುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೆವ್ವದ ಭಯ ಹೋಗಿಸಲು ಸ್ಮಶಾನದಲ್ಲೇ ಮಲಗಿದ ಶಾಸಕ!

    ದೆವ್ವದ ಭಯ ಹೋಗಿಸಲು ಸ್ಮಶಾನದಲ್ಲೇ ಮಲಗಿದ ಶಾಸಕ!

    ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪಲಕೋಳೆಯ ಜನರಲ್ಲಿ ದೆವ್ವದ ಭಯ ಹೋಗಿಸಲು ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡುರವರು ಸ್ಮಶಾನದಲ್ಲೇ ಮಲಗಿದ್ದಾರೆ.

    ಪಶ್ಚಿಮ ಗೋದಾವರಿಯ ಪಲಕೋಳೆ ಎಂಬಲ್ಲಿರುವ ಸ್ಮಶಾನದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ತೆಲಂಗಾಣ ಸರ್ಕಾರ 3 ಕೋಟಿ ರೂಪಾಯಿ ಬಿಡುಗಡೆಗೊಳಿಸಿತ್ತು. ಹೀಗಾಗಿ ಸ್ಮಶಾನದಲ್ಲಿ ಅಭಿವೃದ್ಧಿ ಹಾಗೂ ಕಟ್ಟಡ ನಿರ್ಮಾಣ ಕಾರ್ಯವನ್ನು ಶಾಸಕ ನಾಯ್ಡುರವರು ಹಮ್ಮಿಕೊಂಡಿದ್ದರು. ಆದರೆ ಯಾವೊಬ್ಬ ಊರಿನವರು ಕಾಮಗಾರಿಗೆ ಬರಲು ಸಿದ್ಧರಿರಲಿಲ್ಲ. ರುದ್ರಭೂಮಿಯಲ್ಲಿ ದಿನನಿತ್ಯ ಹೆಣ ಸುಡುತ್ತಾರೆ, ಅಲ್ಲಿ ಭೂತ ಪ್ರೇತಗಳು ಇವೆ ಎಂಬ ಭಯದಿಂದ ದೂರ ಸರಿದಿದ್ದರು.

    ಜನರಲ್ಲಿದ್ದ ಭಯವನ್ನು ಹೋಗಲಾಡಿಸಲು ಶಾಸಕ ನಾಯ್ಡುರವರು ಸ್ಮಶಾನದಲ್ಲೇ ಮಲಗುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಜೂನ್ 22ರಿಂದ ಮೂರು ದಿನಗಳ ಕಾಲ ಸ್ಮಶಾನದಲ್ಲೇ ಫೋಲ್ಡಿಂಗ್ ಕಾಟ್ ಮತ್ತು ಸೊಳ್ಳೆ ಪರದೆ ಸಹಾಯದಿಂದ ಮಲಗಿದ್ದಾರೆ. ನಿರಂತರವಾಗಿ ಮೂರು ದಿನ ಸ್ಮಶಾನದಲ್ಲೇ ಬೀಡುಬಿಟ್ಟಿದ್ದ ಶಾಸಕರು ಜನರಿಗೆ, ಸ್ಮಶಾನದ ಒಳಗಾಗಲೀ ಅಥವಾ ಹೊರಗಾಗಲೀ ಯಾವುದೇ ಭೂತ-ಪ್ರೇತಗಳಿಲ್ಲ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಶಾಸಕರ ಧೈರ್ಯಕ್ಕೆ ಮೆಚ್ಚಿದ ಊರಿನವರು, ಯಾವುದೇ ಭೂತ-ಪ್ರೇತಗಳು ಇಲ್ಲವೆಂದು ತಿಳಿದು, ಕಾಮಗಾರಿಗೆ ಬರುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರವರು ಶಾಸಕ ನಿಮ್ಮಲ ರಾಮ ನಾಯ್ಡುರವರ ಮೂಢನಂಬಿಕೆ ವಿರುದ್ಧ ನಡೆಸಿರುವ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಶವ ಸುಡುವ ಕಾಯಕವೇ ಜೀವನಾಧಾರ- ಬಡವರ ಶವಕ್ಕೆ ಶುಲ್ಕ ತಗೋತ್ತಿಲ್ಲ ತುಮಕೂರಿನ ಯಶೋದಮ್ಮ

    ಶವ ಸುಡುವ ಕಾಯಕವೇ ಜೀವನಾಧಾರ- ಬಡವರ ಶವಕ್ಕೆ ಶುಲ್ಕ ತಗೋತ್ತಿಲ್ಲ ತುಮಕೂರಿನ ಯಶೋದಮ್ಮ

    ತುಮಕೂರು: ಶವಗಳನ್ನು ಸುಡುವುದೇ ಇವರ ಕಾಯಕ. ಈ ಹಣದಿಂದಲೇ ಜೀವನ ನಡೆಸುವ ಯಶೋದಮ್ಮ, ಆದ್ರೆ ಸ್ಮಶಾನಕ್ಕೆ ಬರುವ ಬಡವರ ಶವಗಳಿಗೆ ಮಾತ್ರ ಹಣ ಪಡೆಯದೇ ಮಾನವೀಯತೆಗೆ ಹೆಸರಾಗಿದ್ದಾರೆ.

    ತುಮಕೂರು ನಗರ ನಿವಾಸಿಯಾದ ಯಶೋದಮ್ಮ ಕಳೆದು ಮೂರು-ನಾಲ್ಕು ವರ್ಷಗಳಿಂದ ಗಾರ್ಡನ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಜನರು ಶವ ಸಂಸ್ಕಾರಕ್ಕಾಗಿ ಕಟ್ಟಿಗೆ, ಸೀಮೆ ಎಣ್ಣೆ ಎಲ್ಲ ಸೇರಿ ಸುಮಾರು 2500-3000 ರೂ. ಹಣವನ್ನು ಯಶೋದಮ್ಮವರಿಗೆ ನೀಡ್ತಾರೆ. ಆದ್ರೆ ಬಡವರ ಶವಗಳು ಬಂದಾಗ ಮಾತ್ರ ಯಶೋದಮ್ಮ ಯಾವುದೇ ಶುಲ್ಕವನ್ನು ಪಡೆದುಕೊಳ್ಳಲ್ಲ.

    ಈ ಹಣವನ್ನೇ ಯಶೋದಮ್ಮ ತಮ್ಮಿಬ್ಬರ ಮಕ್ಕಳ ಓದಿಗೂ ಹಾಗು ಜೀವನಾಧಾರಕ್ಕೂ ಬಳಸುತ್ತಾರೆ. ಯಶೋದಮ್ಮರ ಪತಿ ಗೂಳಯ್ಯ 15 ವರ್ಷಗಳಿಂದ ಶವ ಸುಡುವ ಕಾಯಕ ಮಾಡಿಕೊಂಡು ಬಂದಿದ್ರು. ನಾಲ್ಕು ವರ್ಷದ ಹಿಂದೆ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ರು. ಸದ್ಯ ಪತಿಯ ಕಾಯಕವನ್ನೇ ಯಶೋದಮ್ಮ ಮುಂದುವರಿಸಿಕೊಂಡು ಬಂದಿದ್ದಾರೆ. ಯಶೋದಮ್ಮ ಅವರಿಗೆ ಆರ್ಯವೈಶ್ಯ ಬ್ಯಾಂಕ್ ಗೌರವಧನವಾಗಿ ತಿಂಗಳಿಗೆ 1,000 ರೂ ನೀಡುತ್ತಿದೆ.

    https://www.youtube.com/watch?v=AedkUiZOyEU

  • ಅನೈತಿಕ ತಾಣವಾಗ್ತಿದೆ ಹೇರೋಹಳ್ಳಿ ಸ್ಮಶಾನ – ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಡಂಪ್ ಆಗ್ತಿದೆ ತ್ಯಾಜ್ಯ

    ಅನೈತಿಕ ತಾಣವಾಗ್ತಿದೆ ಹೇರೋಹಳ್ಳಿ ಸ್ಮಶಾನ – ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಡಂಪ್ ಆಗ್ತಿದೆ ತ್ಯಾಜ್ಯ

    ಬೆಂಗಳೂರು: ರಾಜ ಆಗಲಿ, ಸೇವಕ ಆಗಲಿ, ಸತ್ತ ಮೇಲೆ ಬೇಕಿರೋದು ಮೂರಡಿ ಆರಡಿ ಜಾಗ. ಆ ಜಾಗ ಈಗ ಬಿಬಿಎಂಪಿ ನಿರ್ಲಕ್ಷ್ಯದಿಂದ ಗಾಂಜಾ ಹೋಡೆಯೋ ಸ್ಥಳವಾಗಿದೆ. ಇದೆಲ್ಲೋ ದೂರದ ಊರಿನ ಸುದ್ದಿ ಅಲ್ಲ ರಾಜಧಾನಿ ಬೆಂಗಳೂರಿನ ಸ್ಮಶಾನದ ಸುದ್ದಿಯಾಗಿದೆ. ಇಲ್ಲಿನ 5 ಎಕರೆ ಜಾಗ, ಈಗ ಬಿಬಿಎಂಪಿ ಡಂಪಿಂಗ್ ಯಾರ್ಡ್ ಆಗಿದೆ.

    ಯಶವಂತಪುರ ಕ್ಷೇತ್ರದ ಹೇರೋಹಳ್ಳಿ ಗ್ರಾಮ ವಾರ್ಡ್ ನಂಬರ್ 72ರಲ್ಲಿ 5 ಎಕರೆ ಸ್ಮಶಾನ ಜಾಗ ಇದೆ. 2009ರಲ್ಲಿ ಇದನ್ನು ಬಿಬಿಎಂಪಿ ಸುಪರ್ದಿಗೆ ನೀಡಲಾಗಿತ್ತು. ಈ ಜಾಗ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕದ್ದು-ಮುಚ್ಚಿ ಗಾಂಜಾ ಸೇದೋಕೆ ಅಂತಾನೇ ಇಲ್ಲಿಗೆ ಯುವಕರು ಬರ್ತಿದ್ದಾರೆ.

    ಅಷ್ಟೇ ಅಲ್ಲದೇ ಬಿಬಿಎಂಪಿ ನಿರ್ಲಕ್ಷ್ಯದಿಂದ ಇದು ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ. ಬಿಬಿಎಂಪಿ ನಿರ್ಮಿಸಿದ್ದ ಸುತ್ತಲಿನ ಕಾಂಪೌಂಡ್ ನ್ನು ಡಂಪ್ ಮಾಡೋಕೆ ಸುಲಭ ಆಗಲಿ ಎಂದು ತೆರವು ಮಾಡಿದ್ದಾರೆ. ದಿನಕ್ಕೆ ಸುಮಾರು 10 ರಿಂದ 20 ಗಾಡಿಗಳಲ್ಲಿ ಕಸ ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಇಲ್ಲಿ ಓಡಾಡೋಕು ಹಿಂಸೆಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಇನ್ನು ಈ ಸ್ಮಶಾನದಲ್ಲೂ ದೊಡ್ಡ ರಾಜಕೀಯ ನಡೆದಿದೆ. ಕುರುಬ ಜನಾಂಗದವರನ್ನು ಓಲೈಸಿಕೊಳ್ಳಲು ಇಲ್ಲಿ ಕಾಂಗ್ರೆಸ್ ನವರು ಕನಕ ಭವನ ನಿರ್ಮಾಣ ಮಾಡಿದ್ದಾರೆ. ಜೊತೆ ಕೆಂಪೇಗೌಡ ನಿರ್ಮಾಣಕ್ಕೆ ಪಿಲ್ಲರ್ ಕೂಡ ಹಾಕಿದ್ದಾರೆ. ಗ್ರಾಮಸ್ಥರು ಕೋರ್ಟ್‍ನಲ್ಲಿ ದಾವೆ ಹೂಡಿರುವುದರಿಂದ ಇದಕ್ಕೆ ಕೋರ್ಟ್ ತಡೆಯಾಜ್ಞೆ ತಂದಿದೆ.