Tag: ಸ್ಪರ್ಧಿಗಳು

  • Bigg Boss: ಸ್ಪರ್ಧಿಗಳ ಆಯ್ಕೆ ಹೇಗೆ ನಡೆಯುತ್ತೆ? ಮೋಸ ಮಾಡುವವರೂ ಇದ್ದಾರೆ ಹುಷಾರ್

    Bigg Boss: ಸ್ಪರ್ಧಿಗಳ ಆಯ್ಕೆ ಹೇಗೆ ನಡೆಯುತ್ತೆ? ಮೋಸ ಮಾಡುವವರೂ ಇದ್ದಾರೆ ಹುಷಾರ್

    ಗತ್ತಿನ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada)… ಅನುಮಾನವೇ ಬೇಡ.. ಅತೀ ಹೆಚ್ಚು ಸೀಸನ್ ಮುಗಿಸಿದ, ಹೆಚ್ಚು ಭಾಷೆಗಳಲ್ಲಿ ತಯಾರಾದ, ಸುದೀರ್ಘ 24 ವರ್ಷಗಳ ಇತಿಹಾಸ ಹೊಂದಿರುವ ಈ ಕಾರ್ಯಕ್ರಮಕ್ಕೆ ತನ್ನದೇ ಆದ ವಿಶೇಷತೆ ಇದೆ. ಅಷ್ಟು ಸುಲಭವಾಗಿ ಈ ಕಾರ್ಯಕ್ರಮವನ್ನು ನಡೆಸುವುದು ಕಷ್ಟ ಕಷ್ಟ. ಕೋಟಿ ಕೋಟಿ ಹಣ ಬೇಡುವಂತಹ ಈ ಶೋ ಅತೀ ಶ್ರೀಮಂತ ಶೋಗಳಲ್ಲಿ ಒಂದಾಗಿದೆ.

    ಹೌದು, ಈ ಕಾರ್ಯಕ್ರಮ ಮೊದಲು ಶುರುವಾಗಿದ್ದು, ಡಚ್ ಭಾಷೆಯಲ್ಲಿ. ಹೊರದೇಶದಲ್ಲಿ ‘ಬಿಗ್ ಬ್ರದರ್’ ಹೆಸರಿನಿಂದ ಪ್ರಾರಂಭವಾದ ಈ ಶ್ರೀಮಂತ ಕಾರ್ಯಕ್ರಮ, ನಾನಾ ದೇಶಗಳನ್ನು ಸುತ್ತಿ, ಭಾರತಕ್ಕೆ ಬರುತ್ತಿದ್ದಂತೆಯೇ ತನ್ನ ಹೆಸರಿನ್ನು ಬದಲಾಯಿಸಿಕೊಂಡಿತು. ‘ಬಿಗ್ ಬ್ರದರ್’ ಹೆಸರಿನಲ್ಲಿ 63 ಭಾಷೆಗಳಲ್ಲಿ ನಿರ್ಮಾಣವಾದರೆ, ಭಾರತದಲ್ಲಿ ‘ಬಿಗ್ ಬಾಸ್’ ಆಗಿ ಬದಲಾಯಿತು. ಹಿಂದಿ, ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ, ಮರಾಠಿ, ಕನ್ನಡ  ಹೀಗೆ ಭಾರತದ ಏಳು ಭಾಷೆಗಳಲ್ಲಿ ಇದು ಪ್ರಸಾರವಾಗುತ್ತಿದೆ.

    ಇಂಥದ್ದೊಂದು ಶೋನಲ್ಲಿ ಭಾಗಿಯಾಗಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ದೊಡ್ಮನೆ ಕದ ತಟ್ಟೋಕೆ ಕನಸು ಕಟ್ಟಿಕೊಂಡವರು ಹಲವರು. ಸೂಟ್ ಕೇಸ್ ರೆಡಿ ಮಾಡಿಕೊಂಡು ಕಾದವರು ಅನೇಕರು. ಆದರೆ, ಬಿಗ್ ಬಾಸ್ ಆಯ್ಕೆ (Selection) ಸುಲಭದ್ದಲ್ಲ, ಹಾಗಂತ ಕಠಿಣವೂ ಅಲ್ಲ.  ಬಿಗ್ ಬಾಸ್ ಮನೆಗೆ ಹೋಗಲು ಅರ್ಹತೆಗಳೇನು? ನಾವೂ ಬಿಗ್ ಬಾಸ್ ಮನೆಗೆ ಹೋಗಬಹುದಾ? ಆಯ್ಕೆಯ ಪ್ರಕ್ರಿಯೆ ಹೇಗಿರುತ್ತದೆ? ಯಾರು ಆಯ್ಕೆ ಮಾಡುತ್ತಾರೆ? ಯಾರನ್ನು ಭೇಟಿ ಮಾಡಬೇಕು? ಇಂತಹ ಪ್ರಶ್ನೆಗಳು ಏಳುವುದು ಸಹಜ. ಬಿಗ್ ಬಾಸ್ ಮನೆಗೆ ಹೋಗಲು ನಮಗೂ ಅರ್ಹತೆ ಇದೆಯಾ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ಕನ್ನಡದಲ್ಲಿ ಈವರೆಗೂ ಒಂಬತ್ತು ಸೀಸನ್ ಗಳು ಮುಗಿದಿವೆ. ಹತ್ತನೇ ಸೀಸನ್ ಇನ್ನಷ್ಟೇ ಶುರುವಾಗಬೇಕಿದೆ. ಬಹುತೇಕ ಸೀಸನ್ ಗಳಲ್ಲಿ ವಾಹಿನಿಯು ಸಿಲೆಬ್ರಿಟಿಗಳಿಗೇ ಆದ್ಯತೆ ನೀಡಿದ್ದರೆ, ಕೆಲವು ಸೀಸನ್ ಗಳಲ್ಲಿ ಸಾಮಾನ್ಯರಿಗೂ ಅವಕಾಶ ಕೊಟ್ಟಿದೆ. ಈ ಸಾಮಾನ್ಯರು ಆಯ್ಕೆಯಾಗಿದ್ದು ಮಾತ್ರ ರೋಚಕ. ತಮ್ಮ ತಮ್ಮ ಕ್ಷೇತ್ರಗಳ ಸಾಧನೆಯನ್ನು ವಾಹಿನಿಗೆ ತಿಳಿಸಿ ಎಂದು ಕೇಳಲಾಗಿತ್ತು. ಬಂದ ಅರ್ಜಿಗಳಲ್ಲಿ ವಿಶೇಷ ಅನಿಸಿದವರನ್ನು ವಾಹಿನಿಯೇ ಕಾಂಟ್ಯಾಕ್ಟ್ ಮಾಡಿ, ಅವರನ್ನು ಆಯ್ಕೆ ಮಾಡಲಾಯಿತು.

    ಸಾಧನೆಯಷ್ಟೇ ಆಯ್ಕೆಯ ಮಾನದಂಡವಾ? ಕಂಡಿತಾ ಇಲ್ಲ. ನೀವು ಎಷ್ಟೇ ಸಾಧನೆ ಮಾಡಿದರೂ, ಬಿಗ್ ಬಾಸ್ ತಂಡ ನಡೆಸುವ ಕೆಲ ಪರೀಕ್ಷೆಗಳನ್ನು ಎದುರಿಸಲೇಬೇಕು. ದೊಡ್ಮನೆಯಲ್ಲಿ ನೂರು ದಿನ ಉಳಿಯುವಂತಹ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಇದೆಯಾ ಅಂತ ಪರೀಕ್ಷೆ ಮಾಡಲಾಗತ್ತೆ. ದೊಡ್ಮನೆ ಒಳಗೆ ಹೋಗುವ ಮುನ್ನ ಸೈಕಿಯಾಟಿಸ್ಟ್ ಕೌನ್ಸಲಿಂಗ್ ಮಾಡ್ತಾರೆ. ಜೊತೆಗೆ ನಿಮಗೆ ಕ್ರಿಮಿನಲ್ ಹಿನ್ನೆಲೆ ಏನಾದರೂ ಇದೆಯಾ ಅಂತ ತಿಳಿದುಕೊಳ್ಳಲಾಗುತ್ತೆ. ವೈದ್ಯಕೀಯ ಪರೀಕ್ಷೆ ಮಾಡಲಾಗತ್ತೆ… ಬಿಗ್ ಬಾಸ್ ಶೋ ನಿಯಮಗಳನ್ನು ತಿಳಿಸಲಾಗತ್ತೆ. ಈ ಎಲ್ಲದರಲ್ಲೂ ಪಾಸಾದರೆ ಮಾತ್ರ ಬಿಗ್ ಬಾಸ್ ಮನೆ ಪ್ರವೇಶ ದೊರೆಯುತ್ತದೆ. ನಿಮ್ಮಲ್ಲೂ ಈ ಎಲ್ಲ ಅರ್ಹತೆಗಳು ಇದ್ದರೆ ಟ್ರೈ ಮಾಡಬಹುದು.

    ಒಂದು ವಿಷಯ ನೆನಪಿಡಿ, ಬಿಗ್ ಬಾಸ್ ಹೆಸರಿನಲ್ಲಿ ಹಲವಾರು ಮೋಸಗಳು ನಡೆದಿವೆ. ಮಧ್ಯವರ್ತಿಗಳು ಹಣ ದೋಚಿದ್ದಾರೆ. ಕೆಲವರು ಹಣ ಕೊಟ್ಟು ಮೋಸ ಹೋಗಿದ್ದಾರೆ. ವಾಹಿನಿಯು ಈ ವಿಷಯದಲ್ಲಿ ಯಾವುದೇ ಮಧ್ಯವರ್ತಿಗಳನ್ನು ಇಟ್ಟುಕೊಂಡಿರುವುದಿಲ್ಲ. ಆಯ್ಕೆ ಏನೇ ಇದ್ದರೂ ಅದು ಬಿಗ್ ಬಾಸ್ ತಂಡದಲ್ಲೇ ನಡೆಯುತ್ತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಸ್ಪರ್ಧಿಗಳ ಕಂಪ್ಲೀಂಟ್ ಲಿಸ್ಟ್ ಔಟ್

    ಬಿಗ್ ಬಾಸ್ ಸ್ಪರ್ಧಿಗಳ ಕಂಪ್ಲೀಂಟ್ ಲಿಸ್ಟ್ ಔಟ್

    ಭಾರತೀಯ ಕಿರುತೆರೆಯ ಜಗತ್ತಿನಲ್ಲೇ ಬಿಗ್ ಬಾಸ್ ಹವಾ ಜೋರಾಗಿದೆ. ಹಿಂದಿಯಲ್ಲಿ ಈಗಾಗಲೇ ಬಿಗ್ ಬಾಸ್ (Bigg Boss) ಫಿನಾಲೆ ಮುಗಿಸಿಕೊಂಡಿದೆ. ಇದೀಗ ತಮಿಳಿನಲ್ಲಿ (Tamil) ನಿನ್ನೆಯಿಂದ ಶುರುವಾಗಿದೆ. ಕನ್ನಡದಲ್ಲಿ ಅಕ್ಟೋಬರ್ 8 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ನಿನ್ನೆಯಿಂದ ತಮಿಳಿನಲ್ಲಿ ಬಿಗ್ ಬಾಸ್ ಆರಂಭವಾಗಿದ್ದು, ಸ್ಪರ್ಧಾಳುಗಳ ಕಂಪ್ಲೀಟ್ ಲೀಸ್ ಅನ್ನು ಪ್ರಕಟಿಸಲಾಗಿದೆ.

    ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 7 ಅಕ್ಟೋಬರ್ ಒಂದರಿಂದ ಆರಂಭವಾಗಿದ್ದು, ಈ ಕಾರ್ಯಕ್ರಮವನ್ನು ಕಮಲ್ ಹಾಸನ್ (Kamal Haasan) ನಡೆಸಿಕೊಡುತ್ತಿದ್ದಾರೆ. ಮೊದಲ ಸೀಸನ್ ನಿಂದಲೂ ಇವರೇ ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ಏಳನೇ ಸೀಸನ್‍ ನ ಸ್ಪರ್ಧಿಗಳ (Contestants) ಕಂಪ್ಲೀಟ್ ಲಿಸ್ಟ್ ಹೊರ ಬಿದ್ದಿದೆ.

    ತಮಿಳಿನ ಹಾಸ್ಯ ನಟ ಕೂಲ್ ಸುರೇಶ್, ನಟಿ ಪೂರ್ಣಿಮಾ, ನಟಿ ರವೀನಾ ದಹಾ, ನಟ ಪ್ರದೀಪ್ ಆಂಟೋನಿ, ರಾಪರ್ ನಿಕ್ಸೆನ್, ಕಿರುತೆರೆ ನಟಿ ವಿನುಷಾ ದೇವಿ, ಡ್ಯಾನ್ಸರ್ ಮಣಿಚಂದ್ರ, ಮತ್ತೋರ್ವ ಡ್ಯಾನ್ಸರ್ ಅಕ್ಷಯ ಉದಯಕುಮಾರ್, ನಟಿ ಜೋವಿಕಾ ವಿಜಯ್ ಕುಮಾರ್, ಡಾನ್ಸರ್ ಐಶು, ನಟ ವಿಷ್ಣು ವಿಜಯ್, ನಟಿ ಮಾಯಾ ಕೃಷ್ಣನ್, ನಟ ಸರವಣನ್, ಗಾಯಕ ಯುಗೇಂದ್ರನ್ ವಾಸುದೇವನ್, ಕಿರುತೆರೆ ನಿರೂಪಕಿ ವಿಚಿತ್ರಾ, ಬರಹಗಾರ ಬಾವ ಚೆಲ್ಲದೊರೈ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

     

    ಪೂರ್ಣಿಮಾ ರವಿ ಅವರು ನಯನತಾರಾ ಅವರು 75ನೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಪ್ರದೀಪ್ ಆಂಟೋನಿ ತಮಿಳಿನ ಬಿಗ್ ಬಾಸ್ ಮೂರನೇ ಸೀಸನ್ ನಲ್ಲಿ ಭಾಗಿಯಾಗಿದ್ದರು. ಜೋವಿಕಾ ವಿಜಯಕುಮಾರ್ ಅವರು ನಟಿ ವನಿತಾ ಅವರ ಪುತ್ರಿ. ಐಶು ಅವರ ಸಹೋದರ ಆಮಿರ್ ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು

    ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು

    ವಾರ ಬಿಗ್‍ಬಾಸ್ ಗ್ರಾಂಡ್ ಫಿನಾಲೆ ವೀಕ್ ಆಗಿರುವುದರಿಂದ ಪ್ರತಿದಿನ ದೊಡ್ಮನೆಯಲ್ಲಿ ಟಾಪ್ 5 ಸ್ಪರ್ಧಿಗಳ ವಾಲ್ ಆಫ್ ದಿ ಫ್ರೆಮ್ ಕ್ರಿಯೆಟ್ ಮಾಡಿ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜರ್ನಿಯನ್ನು ಮೆಲುಕು ಹಾಕಲಾಗುತ್ತಿದೆ.

    ಸದ್ಯ ಬಿಗ್‍ಬಾಸ್ 43ನೇ ದಿನ ಗಾರ್ಡನ್ ಏರಿಯಾದಲ್ಲಿ ಜಗಮಗಿಸುವ ಲೈಟ್ ಮಧ್ಯೆ ಮಂಜು ಪಾವಗಡ ಫೋಟೋ ಫ್ರೆಮ್ ಹಾಕಲಾಗಿತ್ತು. ಇದನ್ನು ನೋಡಿ ಮಂಜು ಫುಲ್ ಖುಷ್ ಆಗಿದ್ದಾರೆ. ಬಳಿಕ ನನ್ನ ಜೀವನದಲ್ಲಿ ಬಿಗ್‍ಬಾಸ್ ದೊಡ್ಡ ಇತಿಹಾಸ. ಇದು ದೊಡ್ಡ ವೇದಿಕೆ, ನನಗೆ ಈ ಜಾಗ ಎಂದರೆ ಬಹಳ ಇಷ್ಟ. ಇದು ನನಗೆ ಸುಮಾರು ವರ್ಷದ ಕನಸಾಗಿತ್ತು. ನಾನು ರಂಗಭೂಮಿ ಸಿನಿಮಾರಂಗಕ್ಕೆ ಪ್ರವೇಶಿಸಿ ಸುಮಾರು 9-10 ವರ್ಷವಾಯಿತು. ಮಜಾಭಾರತದಿಂದ ಬಂದು ಇಂದು ಬಿಗ್‍ಬಾಸ್ ಮನೆಗೆ ಬಂದು 110 ದಿನ, 20 ದೊಡ್ಡ ಗಣ್ಯರು, ದೊಡ್ಡ ಹೆಸರಿನಲ್ಲಿ ಗುರುತಿಸಿಕೊಂಡವರು. ಎಲ್ಲರೂ ಸಾಧನೆ ಮಾಡಿರುವವರು ಇಂದು ನನ್ನ ಸ್ನೇಹಿತರಾಗಿದ್ದಾರೆ. ಇಲ್ಲಿ ಬಂದು ಒಬ್ಬೊಬ್ಬರಿಂದ ಒಂದೊಂದು ಬಹಳ ಕಲಿತ್ತಿದ್ದೇನೆ. ಎಲ್ಲರಿಗೂ ಬಹಳ ಧನ್ಯವಾದ ಎಂದು ತಿಳಿಸಿದ್ದಾರೆ.

    ನಂತರ ವೈಷ್ಣವಿ ನೀವಿದ್ದ ಕಡೆ ನಗು ಇರುತ್ತದೆ. ನೀವು ಎಲ್ಲೆ ಇದ್ದರೂ, ಏನೇ ಮಾಡುತ್ತಿದ್ದರೂ ಎಂಗೇಜಿಂಗ್ ಆಗಿರುತ್ತೀರಾ. ಅದರಿಂದ ಎನರ್ಜಿ ಲೆವಲ್ ತುಂಬಾ ಹೈ ಆಗುತ್ತದೆ. ಈ ಮನೆಗೆ ತುಂಬಾ ನೀವು ಅವಶ್ಯಕತೆ, ನೀವು ಟಾಸ್ಕ್ ಆಡುವ ರೀತಿ, ಒಂದು ಟೀಂನನ್ನು ನಿಭಾಯಿಸುವ ರೀತಿ, ನಿಮ್ಮ ಟೀಂನಲ್ಲಿ ಇದ್ದಾಗ ನನಗೆ ಬಹಳ ಖುಷಿಕೊಟ್ಟಿದೆ. ಎಲ್ಲರನ್ನು ಯಾವಾಗಲೂ ನಗಿಸುತ್ತೀರಿ, ನಿಮ್ಮ ನಗು ಇಡೀ ಕರ್ನಾಟಕ ಅಲ್ಲ. ಭಾರತಕ್ಕೆ ಸ್ಪ್ರೆಡ್ ಆಗಲಿ ಎಂದು ವಿಶ್ ಮಾಡುತ್ತಾರೆ.

    ಬಳಿಕ ಪ್ರಶಾಂತ್ ಮಂಜು ಯಾವ ಸೋಲನ್ನು ಒಪ್ಪಿಕೊಳ್ಳದ ವ್ಯಕ್ತಿ, ಚೇರ್ ಟಾಸ್ಕ್‌ನಲ್ಲಿ ಮಂಜು ಆಡಿದ ಮೈಂಡ್ ಗೆ ನಾನು ಯಾವತ್ತು ಮರೆಯಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ. ಮಂಜುಗೆ ಮಾತು ಬರುತ್ತದೆ. ಮಂಜುಗೆ ಮಾತೇ ಬಂಡವಾಳ. ಮಾತಿನಿಂದಲೇ ಅವನು ಮುಂದೆ ಹೋಗಬಹುದು ಒಳ್ಳೆಯದಾಗಲಿ. ಈ ವರ್ಷ ನಿಮಗೆ ಮದುವೆಯಾಗಲಿ, ಯಾವಾಗಲೂ ನಗುತ್ತೀರಿ, ನಗಿಸುತ್ತೀರಿ ಎಂದು ಹಾರೈಸುತ್ತಾರೆ.

    ಮತ್ತೊಂದೆಡೆ ದಿವ್ಯಾ ಉರುಡುಗ ಮಂಜು ಒಬ್ಬ ನಿಜವಾದ ಎಂಟರ್ಟೈನರ್, ಇಲ್ಲಿ ಇರುವವರಲ್ಲಿ ಬಹಳ ಕಂಫರ್ಟ್ ಇರುವ ವ್ಯಕ್ತಿ ಅಂದರೆ ಮಂಜು, ನಾನು ಅವನೊಂದಿಗೆ ತುಂಬಾ ಒಳ್ಳೆಯ ಕಾಲವನ್ನು ಕಳೆದಿದ್ದೇನೆ. ಮಂಜು ನನಗೆ ತುಂಬ ಒಳ್ಳೆಯ ಫ್ರೆಂಡ್. ನಾನು ಅವನೊಂದಿಗೆ ಎಲ್ಲವನ್ನು ಶೇರ್ ಮಾಡಿಕೊಳ್ಳಬಹುದು. ಮಂಜು ಸೇವ್ ಆಗಿದ್ದು, ತುಂಬಾ ಖುಷಿಯಾಗುತ್ತಿದೆ. ನಿನಗೆ ಒಳ್ಳೆಯದಾಗಲಿ ಖುಷಿಯಾಗಿರು ಎಂದು ಹೇಳುತ್ತಾರೆ.

    ನಂತರ ಮಾತನಾಡಿದ ಅರವಿಂದ್, ನನಗೆ ಮಂಜು ಟೈಮಿಂಗ್ ಅಂದರೆ ಬಹಳ ಇಷ್ಟ. ಮಂಜು ಒಳ್ಳೆ ಕಾಂಪಿಟೇಟರ್, ಮುಂದೆ ಆಚೆ ಕೂಡ ನಾವು ಹೀಗೆ ಇರುತ್ತೇವೆ ಎಂದು ಭಾವಿಸುತ್ತೇನೆ. ಗುಡ್ ಲಕ್ ಚೆನ್ನಾಗಿರಿ ಎಂದಿದ್ದಾರೆ.

    ಇನ್ನೂ ದಿವ್ಯಾ ಸುರೇಶ್ ನನ್ನ ಬಿಗ್‍ಬಾಸ್ ಜರ್ನಿ ಮಂಜು ಪಾವಗಡ ಇಲ್ಲದೇ ಇನ್ ಕಂಪ್ಲೀಟ್. ಇಷ್ಟು ದಿನ ನಿನಗೆ ಸ್ಫೂರ್ತಿ ಯಾರು ಅಂದರೆ ನಮ್ಮ ಅಮ್ಮ ಎಂದು ಹೇಳುತ್ತಿದ್ದೆ. ಆದ್ರೆ ಇನ್ನೂ ಮುಂದೆ ನಮ್ಮ ಅಮ್ಮ ಜೊತೆ ಮಂಜು ಪಾವಗಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಿನ್ನ ಜರ್ನಿ ನೋಡಿದರೆ ಜೀರೋಯಿಂದ ಬಿಗ್‍ಬಾಸ್ ತನಕ ಬರುವುದು ಬಹಳ ಕಷ್ಟ. ನೀನು ತುಂಬಾ ಒಳ್ಳೆಯವನು, ಒಳ್ಳೆಯ ಮನಸ್ಸಿದೆ ಯಾವಾಗಲೂ ಖುಷಿಯಾಗಿರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

  • ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಮೊದಲ ಸಂಪಾದನೆ ಎಷ್ಟು ಗೊತ್ತಾ?

    ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳ ಮೊದಲ ಸಂಪಾದನೆ ಎಷ್ಟು ಗೊತ್ತಾ?

    ಣ ಗಳಿಸುವ ಟಾಸ್ಕ್‍ನ್ನು ಬಿಗ್ ಬಾಸ್ ಸ್ಪರ್ಧಿಗಳು ಆಡಿದ್ದಾರೆ. ಇದೇ ವಿಚಾರವಾಗಿ ಕಿಚ್ಚ ಸುದೀಪ್ ಸ್ಪರ್ಧಿಗಳ ಬಳಿ ಪ್ರಶ್ನೆ ಕೇಳಿದ್ದು, ಈ ವೇಳೆ ಸ್ಪರ್ಧಿಗಳ ಮೊದಲ ಸಂಪಾದನೆ ಕುರಿತ ಸೀಕ್ರೇಟ್ ಹೊರ ಬಿದ್ದಿದೆ.

    ಹೌದು ಬಿಗ್ ಬಾಸ್ ಸ್ಪರ್ಧಿಗಳು ತಾವು ಗಳಿಸಿದ ಮೊದಲ ಸಂಪಾದನೆ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳನ್ನು ಈ ಕುರಿತು ಸ್ಪರ್ಧಿಗಳನ್ನು ಪ್ರಶ್ನಿಸಿದ್ದು, ಲೈಫಲ್ಲಿ ನೀವು ಮಾಡಿದ ಹಣದ ಟಾಸ್ಕ್ ಬಗ್ಗೆ ಹೇಳಿ. ಜೀವನದಲ್ಲಿ ಹಣ ಗಳಿಸುವುದು ಒಂದುಕಡೆಯಾದರೆ, ಇದ್ದ ಹಣವನ್ನು ಉಳಿಸುವುದು ಇನ್ನೊಂದು ಟ್ಯಾಲೆಂಟ್, ಎರಡೂ ಕಷ್ಟದ ಕೆಲಸವೇ ಎಂದು ಹೇಳಿದ್ದಾರೆ. ಬಳಿಕ ವೈಷ್ಣವಿ ತಮ್ಮ ಜೀವನದ ಮೊದಲ ಸಂಪಾದನೆ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

    ನೀವು ಮೊದಲ ದುಡಿದ ಸಂಬಳ ಎಷ್ಟು, ಅದನ್ನು ಸಂಪಾದಿಸಲು ಎಷ್ಟು ಸಮಯ ಆಯ್ತು, ಅದನ್ನು ಹೇಗೆ ಖರ್ಚು ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಉತ್ತರಿಸಿದ ವೈಷ್ಣವಿ, ನಾನು ಕ್ಲಾಸಿಕಲ್ ಡ್ಯಾನ್ಸ್ ಮಾಡುತ್ತಿದ್ದೆ, ನನ್ನ ಫಸ್ಟ್ ಶೋಗೆ 1,500 ರೂ.ಚೆಕ್ ನಿಡಿದ್ದರು. ಅದನ್ನು ನಾನು ತಂದೆಗೆ ನೀಡಿದ್ದೆ. ಆಗ 7ನೇ ತರಗತಿಯಲ್ಲಿದ್ದೆ ಎಂದು ಹೇಳಿದ್ದಾರೆ.

    ಬಳಿಕ ಶುಭಾ ಅವರು ನಾನು ಆ್ಯಡ್ ಏಜೆನ್ಸಿಯಲ್ಲಿ ಇಂಟರ್ನ್‍ಶಿಪ್ ಮಾಡಿದೆ, ತಿಂಗಳಿಗೆ 2000 ರೂ. ಸಿಗುತ್ತಿತ್ತು. ಅದು ಪೆಟ್ರೋಲ್‍ಗೇ ಹೊಯಿತು ಎಂದಿದ್ದಾರೆ. ಪ್ರಶಾಂತ್ ಮಾತನಾಡಿ, ಟೆಲಿಕಾಂ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಸಿಕ್ಕಿತು. 3000 ರೂ. ಸಂಬಳ ಸಿಗುತ್ತಿತ್ತು. 2,500 ರೂ. ಮನೆಗೆ ಕೊಡುತ್ತಿದ್ದೆ. 500 ರೂ.ನಾನು ಇಟ್ಟುಕೊಳ್ಳುತ್ತಿದ್ದೆ ಎಂದಿದ್ದಾರೆ.

    ಬಳಿಕ ಶಮಂತ್ ಉತ್ತರಿಸಿ, ನಾನು ಕಾಲೇಜ್ ಆದಮೇಲೆ ಇಂಟರ್‍ಶಿಪ್ ಮಾಡುತ್ತಿದ್ದೆ, ಆಗ ತಿಂಗಳಿಗೆ 3000 ರೂ. ನೀಡಿದ್ದರು. ಅದರಲ್ಲಿ ಮೈಕ್ ಖರೀದಿಸಿದ್ದೆ, ಅದೂ ಇನ್ನು ಹಾಗೇ ಇದೆ ಎಂದಿದ್ದಾರೆ. ಬಳಿಕ ಅರವಿಂದ್ ಮಾತನಾಡಿ, ನನ್ನ ಮೊದಲ ಸಂಬಳ 3,500 ರೂ. ಅದು 3 ತಿಂಗಳಿಗೆ ಒಂದು ಸಲ ನೀಡುತ್ತಿದ್ದರು. 9000ದಲ್ಲಿ ಟಿಡಿಎಸ್ ಕಟ್ ಆಗಿ ಹಣ ಬಂತು ಅದರಲ್ಲಿ, ಅರ್ಧ ದುಡ್ಡಲ್ಲಿ ಬೈಕ್‍ಗೆ ಸ್ಪೇರ್ಸ್ ತೆಗೆದುಕೊಂಡೆ. ಉಳಿದಿದ್ದು, ಚಿಕ್ಕ ಪಾರ್ಟಿ, ಅಮೇಲೆ ಬಟ್ಟೆ ತೆಗೆದುಕೊಂಡೆ ಎಂದಿದ್ದಾರೆ.

    ನಾನು 6ನೇ ತರಗತಿ ಇದ್ದಾಗ ಊರಿಗೆ ಟೆಲಿಫಿಲಂ ಶೂಟಿಂಗ್‍ಗೆ ಸುಮಿತ್ರಾ ಭಾವೆ ಹಾಗೂ ಅವರ ತಂಡ ಬಂದಿತ್ತು. ಇದರಲ್ಲಿ 2 ದಿನ ಚಿಕ್ಕ ಹುಡುಗಿಯ ಪಾತ್ರ ಮಾಡಬೇಕಿತ್ತು. ಅದಕ್ಕೆ ನನ್ನ ಕರೆದುಕೊಂಡು ಹೋಗಿದ್ದರು. ಈ ವೇಳೆ 500ರೂ. ನೀಡಿದ್ದರು. ಅದು ನನ್ನ ಮೊದಲ ಸಂಪಾದನೆ. ಇದರಲ್ಲಿ ನನ್ನ ಕಡೆಯಿಂದ ಮನೆಯವರಿಗೆ ಚಿಕನ್ ತರಲು ಹಣ ನಿಡಿದ್ದೆ ಎಂದಿದ್ದಾರೆ. ಹೀಗೆ ಹಲವರು ತಮ್ಮ ಮೊದಲ ಸಂಪಾದನೆ ಕುರಿತು ತಿಳಿಸಿದ್ದಾರೆ.

  • ನನ್ನ ಫ್ರೆಂಡ್ಸ್, ನನ್ನ ವಸ್ತುಗಳ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್: ಅರವಿಂದ್

    ನನ್ನ ಫ್ರೆಂಡ್ಸ್, ನನ್ನ ವಸ್ತುಗಳ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್: ಅರವಿಂದ್

    ಬಿಗ್‍ಬಾಸ್ ಆರಂಭವಾಗಿ 89 ದಿನ ಕಳೆದಿದೆ. ಸದ್ಯ ದೊಡ್ಮನೆಯಲ್ಲಿರುವ ಸ್ಪರ್ಧಿಗಳು ಇಷ್ಟು ದಿನ ಒಟ್ಟಿಗೆ ಜೊತೆಯಾಗಿರುವುದರಿಂದ ಒಬ್ಬರನ್ನೊಬ್ಬರು ಆತ್ಮೀಯರಾಗಿ, ಸ್ನೇಹಿತರಾಗಿ ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಮನೆಯ ಸದಸ್ಯರ ನಡುವಿನ ಹೊಂದಾಣಿಕೆಯನ್ನು ತಿಳಿದುಕೊಳ್ಳಲು ಬಿಗ್‍ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಈ ಹಿಂದೆ ಬಿಗ್‍ಬಾಸ್ ನೀಡಿದ್ದ ಜೋಡಿ ಟಾಸ್ಕ್ ವೇಳೆ ಜೋಡಿಯಾಗಿದ್ದ ಸ್ಪರ್ಧಿಗಳೇ ಈ ಬಾರಿ ಟಾಸ್ಕ್‌ನಲ್ಲಿ ಕೂಡ ಭಾಗವಹಿಸಬೇಕೆಂದು ಸೂಚಿಸಿದ್ದರು. ಇನ್ನೂ ಚಕ್ರವರ್ತಿ ಚಂದ್ರಚೂಡ್ ಈ ಟಾಸ್ಕ್‍ನನ್ನು ನಿರೂಪಣೆ ಮಾಡುವಂತೆ ಆದೇಶಿಸಿ, ಅವರು ಕೇಳುವ ಪ್ರಶ್ನೆಗಳಿಗೆ ಮನೆಯ ಸದಸ್ಯರು ಒಟ್ಟಿಗೆ ಉತ್ತರಿಸುವಂತೆ ತಿಳಿಸಿದ್ದರು.

    ಬಿಗ್‍ಬಾಸ್ ಮನೆಯ ಕ್ಯೂಟ್ ಪೇರ್ ಎಂದೇ ಫೇಮಸ್ ಆಗಿರುವ ಅರವಿಂದ್ ಹಾಗೂ ದಿವ್ಯಾ ಉರುಡುಗ ಇಬ್ಬರಲ್ಲಿ ಹೆಚ್ಚು ಕಾಂಪ್ರಮೈಸ್ ಆಗುವವರು ಯಾರು ಎಂಬ ಪ್ರಶ್ನೆಗೆ ಅರವಿಂದ್ ಎಂದು ಸೂಚಿಸಿ ನಾನು ಏನಾದರೂ ಹಠ ಮಾಡಿಕೊಂಡು ಕೋಪಿಸಿಕೊಂಡರೆ ಅವರೇ ಕಾಂಪ್ರಮೈಸ್ ಆಗುತ್ತಾರೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಇಬ್ಬರಲ್ಲಿ ಕಳ್ಳತನ ಅಥವಾ ಸುಳ್ಳು ಹೇಳಿದರೆ ಬೇಗ ಸಿಕ್ಕಿ ಬೇಳುವುದು ಯಾರು ಎಂಬ ಪ್ರಶ್ನೆಗೆ ಇಬ್ಬರು ತಮ್ಮ ಹೆಸರುಗಳನ್ನು ಸೂಚಿಸಿಕೊಂಡಿದ್ದಾರೆ. ಇಬ್ಬರಲ್ಲಿ ಯಾರು ಜಾಸ್ತಿ ಪೊಸೆಸಿವ್ ಎಂಬ ಪ್ರಶ್ನೆಗೆ, ಅರವಿಂದ್ ಹೆಚ್ಚು ಪೊಸೆಸಿವ್ ಎಂದು ಇಬ್ಬರು ತಿಳಿಸಿದ್ದಾರೆ. ಇದಕ್ಕೆ ಅರವಿಂದ್ ನನ್ನ ಫ್ರೆಂಡ್ಸ್, ನನ್ನ ವಸ್ತು, ಕಾರುಗಳ ಬಗ್ಗೆ ನಾನು ಜಾಸ್ತಿ ಪೊಸೆಸಿವ್ ಎಂದು ಹೇಳಿದ್ದಾರೆ. ಇನ್ನೂ ಇಬ್ಬರಲ್ಲಿ ಹೆಚ್ಚು ಖರ್ಚು ಮಾಡುವವರು ಯಾರು ಎಂಬ ಪ್ರಶ್ನೆಗೆ ಇಬ್ಬರು ಅರವಿಂದ್ ಹೆಸರನ್ನು ಸೂಚಿಸಿದ್ದಾರೆ. ನಂತರ ಇಬ್ಬರಲ್ಲಿ ಹೆಚ್ಚು ಆಟ್ರಾಕ್ಟಿವ್ ಯಾರು ಎಂಬ ಪ್ರಶ್ನೆಗೆ, ಇಬ್ಬರು ಅರವಿಂದ್ ಎಂದು ಒಂದೇ ಉತ್ತರ ನೀಡಿದ್ದು, ದಿವ್ಯಾ ಉರುಡುಗ ಅವರು ನೋಡಲು ಚೆನ್ನಾಗಿದ್ದಾರೆ, ಆಕರ್ಷಕವಾಗಿ ಕಾಣಲು ಕಾರಣಬೇಡ ನೋಡಿದ ತಕ್ಷಣವೇ ಬಹಳ ಆಟ್ರಾಕ್ಟಿವ್ ಆಗಿ ಕಾಣಿಸುತ್ತಾರೆ ಎಂದು ಉತ್ತರಿಸಿದ್ದಾರೆ.

    ಬಳಿಕ ರಾಗಿ ಮುದ್ದೆ ಹಾಗೂ ಪಿಜ್ಜಾ ಹಟ್ ಕಾಂಬಿನೇಷನ್‍ನಂತೆ ಇರುವ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ, ಇಬ್ಬರಲ್ಲಿ ಯಾರಿಗೆ ಒಳ್ಳೆಯ ಸ್ಮೈಲ್ ಇದೆ, ನಿಮ್ಮಿಬ್ಬರಲ್ಲಿ ಮೊದಲು ಜಗಳ ಆರಂಭಿಸುವವರು ಯಾರು, ವೇಕಪ್ ಸಾಂಗ್ ವೇಳೆ ಬೆಳ್ಳಗ್ಗೆ ಎದ್ದೇಳುವುದಕ್ಕೆ ಕಷ್ಟ ಪಡುವವರು ಯಾರು, ಇನ್ನೂ ಇಬ್ಬರಲ್ಲಿ ಹೆಚ್ಚು ವಾಟ್ಸಾಪ್ ಫಾರರ್ವಡ್ ಮೆಸೇಜ್ ಹೆಚ್ಚು ಕಳುಹಿಸುವವರು ಯಾರು ಎಂಬ ಪ್ರಶ್ನೆಗೆ ಇಬ್ಬರು ಸರಿಯಾದ ಉತ್ತರ ನೀಡಿದ್ದು, ಉಳಿದ 1 ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದಾರೆ.

    ನಂತರ ಬಂದ ಶಮಂತ್ ಹಾಗೂ ಪ್ರಿಯಾಂಕಗೆ ನಿಮ್ಮಿಬ್ಬರಲ್ಲಿ ಹೆಚ್ಚು ಬುದ್ಧಿವಂತರು ಯಾರು ಎಂಬ ಪ್ರಶ್ನೆಗೆ ಇಬ್ಬರು ಅವರವರ ಹೆಸರನ್ನು ಸೂಚಿಸುತ್ತಾರೆ. ಬಳಿಕ ಶಮಂತ್ ಸ್ವಲ್ಪ ಬುದ್ಧಿವಂತನೇ ಹಾಗೇ ದಡ್ಡ ತರನೂ ಕಾಣಿಸುತ್ತಾನೆ ಎಂದು ಪ್ರಿಯಾಂಕ ಹೇಳಿದ್ದಾರೆ. ನಿಮ್ಮಿಬ್ಬರಲ್ಲಿ ಮೊದಲು ಮದುವೆಯಾಗುವವರು ಯಾರು ಎಂಬುದಕ್ಕೆ ಒಟ್ಟಿಗೆ ಪ್ರಿಯಾಂಕರವರು ಎಂದು ತಿಳಿಸಿದ್ದಾರೆ. ಅಲ್ಲದೇ ಶಮಂತ್ ಪ್ರಿಯಾಂಕರವರು ಬೇಗ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಅಡ್ವೈಸ್ ಕೂಡ ಮಾಡಿದ್ದಾರೆ. ಇಬ್ಬರಲ್ಲಿ ರಾಗ ಎಳೆದು ಮಾತನಾಡುವ ಪ್ರಶ್ನೆಗೆ ಪ್ರಿಯಾಂಕ ಎಂದು ಇಬ್ಬರು ಒಟ್ಟಿಗೆ ಹೇಳಿದ್ದಾರೆ. ಉಳಿದ ಪ್ರಶ್ನೆಗಳಿಗೆ ತಪ್ಪಾಗಿ ಉತ್ತರ ನೀಡಿದ್ದಾರೆ.

    ವೈಷ್ಣವಿ ಹಾಗೂ ರಘುಗೆ ಕೇಳಿದ 5 ಪ್ರಶ್ನೆಗಳಲ್ಲಿ ನಾಲ್ಕು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಪ್ರಶಾಂತ್ ಹಾಗೂ ಶುಭಾ ಜೋಡಿ ಕೇಳಿದ 5 ಪ್ರಶ್ನೆಗಳಲ್ಲಿ ಇಬ್ಬರಲ್ಲಿ ಜಗಳ ಆಡುತ್ತಾ ಯಾವುದಕ್ಕೆ ಜಗಳ ಆಡುತ್ತಿದ್ದೇವೆ ಎಂದು ಮರೆತು ಹೋಗುವ ಮತ್ತು ಮತ್ತು ಮನೆಯಲ್ಲಿ ಹೆಚ್ಚಾಗಿ ಟೀ ಕುಡಿಯುವುದು ಯಾರು ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದು, ಉಳಿದ ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ನೀನ್ ಯಾರು ಕೇಳೋಕೆ – ಸಂಬರಗಿ ವಿರುದ್ಧ ಅರವಿಂದ್ ಗರಂ

  • ವೈಷ್ಣವಿ ಉಪ್ಪಿಟ್ಟು, ಶಮಂತ್ ಹಪ್ಪಳ, ಶುಭಾ ತಂಬಿಟ್ಟು: ಮಂಜು

    ವೈಷ್ಣವಿ ಉಪ್ಪಿಟ್ಟು, ಶಮಂತ್ ಹಪ್ಪಳ, ಶುಭಾ ತಂಬಿಟ್ಟು: ಮಂಜು

    ಬಿಗ್‍ಬಾಸ್‍ನ ವಾರದ ಕಥೆ ಕಿಚ್ಚ ಸುದೀಪ್ ಜೊತೆಗೆ ಸಂಚಿಕೆಯಲ್ಲಿ ಮಂಜುರವರಿಗೆ ಮನೆಯಲ್ಲಿರುವ 12 ಸ್ಪರ್ಧಿಗಳನ್ನು 12 ತಿಂಡಿಗಳ ಹೆಸರಿಗೆ ಸೂಚಿಸುವಂತೆ ಸುದೀಪ್ ಸೂಚಿಸಿದ್ದರು. ಅದರಂತೆ ಮಂಜು ಮೊದಲಿಗೆ ವೈಷ್ಣವಿಯವರ ಹೆಸರನ್ನು ಉಪ್ಪಿಟ್ಟಿಗೆ ಸೂಚಿಸಿ, ಕಾರಣ ಬೋರಿಂಗ್, ಅರ್ಜೆಂಟ್‍ಗೆ ಉಪ್ಪಿಟು ಬೇಕಾಗಬಹುದು, ಇಲ್ಲವಾದಲ್ಲಿ ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಪ್ರಶಾಂತ್ ಸಂಬರಗಿ ಚಪಾತಿ, ಯಾವಾಗಲೂ ತಿನ್ನಬೇಕು ಅನಿಸುವುದಿಲ್ಲ. ಆದರೆ ಯಾವಾಗಲಾದರೂ ತಿನ್ನಬೇಕಾಗುತ್ತದೆ ಎಂದು ಹೇಳುತ್ತಾರೆ. ಈ ವೇಳೆ ಸುದೀಪ್ ಚಪಾತಿಗೆ ಅಂತಾನೇ ಯಾವುದು ಇಲ್ಲ. ಆದರೆ ಅದರೊಂದಿಗೆ ಏನು ಸರ್ವ್ ಮಾಡುತ್ತೇವೆ ಅದರ ಮೇಲೆ ಡಿಪೆಂಡ್ ಆಗಿರುತ್ತದೆ. ಅಲ್ಲದೇ ಚಪಾತಿಗೆ ತಟ್ಟಿ, ತಟ್ಟಿ ರುಬ್ಬಿಸಿಕೊಂಡು ಅಭ್ಯಾಸ ಇದೆ ಎಂದು ಹಾಸ್ಯಮಾಡುತ್ತಾರೆ.

    ನಂತರ ಕೇಸರಿ ಬಾತ್ ಪ್ರಿಯಾಂಕ, ನೋಡಲು ಲಕ್ಷಣವಾಗಿದ್ದು ಸುಂದರವಾಗಿದ್ದಾರೆ. ಚೆನ್ನಾಗಿ ಮಾತನಾಡುತ್ತಾರೆ ಎಂದಿದ್ದಾರೆ. ಬಳಿಕ ದಿವ್ಯಾ ಸುರೇಶ್ ಬಿಸಿಬೇಳೆ ಬಾತ್‍ಗೆ ಕಾರಣ ಮೇಲೆ ಬೂಂದಿ ಹಾಕಿಕೊಂಡು ತಿನ್ನಬೇಕು. ಒಂದು ರೀತಿ ತಿನ್ನಲು ಬಿಸಿಬಿಸಿಯಾಗಿ ಚೆನ್ನಾಗಿರುತ್ತದೆ. ಚಕ್ರವರ್ತಿ ಕೇರಳ ಪರೋಟ ಅದು ಒಂದು ರೀತಿ ಲೇಯರ್ ಪರೋಟ ಮೇಲಕ್ಕೆ ಎತ್ತಿದರೆ ಬರುತ್ತಲೇ ಇರುತ್ತದೆ ಎನ್ನುತ್ತಾರೆ. ಆಗ ಸುದೀಪ್ ಲೇಯರ್ ಪರೋಟ ಮುಗಿಯಿತು ಎಂದರೆ ಮೇಲಕ್ಕೆ ಬರುತ್ತಾನೆ ಇರುತ್ತದೆ. ಉದಾಹರಣೆ ವಾದ ಮುಗಿಯಿತು ಎಂದರೆ ಇನ್ನೊಂದು ಬರುತ್ತಲೇ ಇರುತ್ತದೆ ಎಂದು ನಗುತ್ತಾರೆ.

    ರಘು ಒಂದು ರೀತಿ ಡ್ರೈ ಜಾಮೂನ್ ಇದ್ದಂತೆ. ನೋಡಲು ಒರಟಾಗಿ ಚೆನ್ನಾಗಿ ಕಾಣಿಸುವುದಿಲ್ಲ ತಿನ್ನಬೇಕು ಎಂದು ಕೂಡ ಅನಿಸುವುದಿಲ್ಲ. ಆದ್ರೆ ತಿಂದ ನಂತರ ಚೆನ್ನಾಗಿರುತ್ತದೆ. ಇನ್ನೂ ನಿಧಿ ಮೆಣಸಿನ ಕಾಯಿ ಬಜ್ಜಿ ನೋಡಲು ಮೇಲೆ ಕಡಲೆ ಹಿಟ್ಟಿನ ರೀತಿ ಇರುತ್ತದೆ. ಯಾಮಾರಿದರೆ ಒಳಗಡೆ ಮೆಣಸಿನಕಾಯಿ ಭಾರೀ ಘಾಟು. ಅವರ ಪಕ್ಕ ಕೂರುವುದಿರಲಿ ಅಕ್ಕ-ಪಕ್ಕದಲ್ಲಿರುವವರು ಮನೆಯನ್ನೇ ಖಾಲಿ ಮಾಡಿಕೊಂಡು ಹೋಗಿಬಿಡುತ್ತಾರೆ ಎನ್ನುತ್ತಾರೆ.

    ಶುಭ ತಂಬಿಟ್ಟು, ಎಷ್ಟು ಸಲ ಬೆಕಾದರೂ ತಿನ್ನಬಹುದು ಬೇಜಾರಾದಾಗ ಉಗಿಯಬಹುದು. ಅಂದರೆ ಬರೀ ಹಿಟ್ಟು-ಹಿಟ್ಟೆ ಸಿಗುತ್ತದೆ. ತಂಬಿಟ್ಟು ತಿನ್ನಲು ಚೆಂದ, ಉಗಿಯಲು ಕೂಡ ಚೆಂದ ಅಂದಾಗ, ಸುದೀಪ್ ಒಳ್ಳೆ ಟೈಂ ಪಾಸ್ ಸಿರಿಯಸ್ ಊಟ ಕೂಡ ಅಲ್ಲ ಅಂತ ಕೇಳುತ್ತಾರೆ. ಆಗ ಮಂಜು ಊಟನೂ ಅಲ್ಲ. ಸ್ನಾಕ್ಸ್ ಕೂಡ ಅಲ್ಲ ಎಂದು ಹೇಳುತ್ತಾರೆ.

    ಇಡ್ಲಿ ದಿವ್ಯಾ ಉರುಡುಗ ಕಾರಣ ಅದನ್ನು ಬೇಗ ತಿಂದು ಹೋಗಿಬಿಡಬಹುದು. ಇಡ್ಲಿಗೆ ಚಟ್ನಿ ಅಥವಾ ಸಂಬಾರ್ ಇರಬೇಕು ಆಗಲೆ ಅದಕ್ಕೆ ಬೆಲೆ. ಅರವಿಂದ್ ಪೂರಿ, ಕಾರಣ ಅದು ಸಿಂಗಲ್ ಅದಕ್ಕೂ ಏನಾದರೂ ಬೇಕು ಎನ್ನುತ್ತಾರೆ. ಈ ವೇಳೆ ಇಡ್ಲಿ ಹಾಗೂ ಪೂರಿ ಒಳ್ಳೆ ಕಾಂಬಿನೇಷನ್ ಅಲ್ವಾಲ್ಲ ಎಂದು ಸುದೀಪ್ ಪ್ರಶ್ನಿಸಿದಾಗ, ಇಡ್ಲಿಗೂ ಸಾಗು, ಚಟ್ನಿ ಹಾಕಬಹುದು, ಪೂರಿಗೂ ಸಾಗು ಚಟ್ನಿ ಹಾಕಬಹುದು. ಒಂದರಲ್ಲೇ ಎರಡು ನಡೆಯುತ್ತದೆ.

    ಹಪ್ಪಳ ಬಂದು ಶಮಂತ್ ಎಂದಾಗ ಸುದೀಪ್ ಎರಡು ಐಟಂ ಮಧ್ಯೆ ಅದನ್ನು ಎಷ್ಟು ಬಾರಿ ಕೇಳಿದರು ಹಾಕುತ್ತಾರೆ ಎಂದು ಹೇಳುತ್ತಾರೆ. ಈ ವೇಳೆ ಸ್ಪರ್ಧಿಗಳೆಲ್ಲಾ ಹೊಟ್ಟೆ ಬಿರಿಯುವಂತೆ ನಕ್ಕಿದ್ದಾರೆ. ನಂತರ ದಿವ್ಯಾ ಸುರೇಶ್ ಚಕ್ರವರ್ತಿ ಹಾಗೂ ಶಮಂತ್ ಮನೆಮಂದಿ ಎಲ್ಲ ರಾಗಿ ಮುದ್ದೆ, ರಾಗಿ ರೊಟ್ಟಿಗೆ ಮಂಜುರನ್ನು ಹೋಲಿಸಿದ್ದಾರೆ.

  • ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ಕಿಚ್ಚ ಸುದೀಪ್ ಜೊತೆ ಮಾತಾಡಲು ಹೇಗೆಲ್ಲಾ ರೆಡಿ ಆಗ್ತಾರೆ ಸ್ಪರ್ಧಿಗಳು?

    ವೀಕೆಂಡ್ ಬಂತೆಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆಲ್ಲ ಹಬ್ಬ ಎನ್ನುವುದು ತಿಳಿದಿರುವ ವಿಚಾರ. ಆದರೆ ಇದರ ಹಿಂದೆ ವೀಕೆಂಡ್ ಎರಡು ದಿನಗಳಿಗಾಗಿ ದೊಡ್ಮನೆ ಮಂದಿ ಇಷ್ಟೆಲ್ಲಾ ತಯಾರಾಗ್ತಾರಾ, ಇಷ್ಟೆಲ್ಲಾ ಯೋಚಿಸುತ್ತಾರಾ ಎಂಬ ಆಶ್ಚರ್ಯ ಇದೀಗ ಕಾಡತೊಡಗಿದೆ.

    ಹೌದು ಈ ಕುತೂಹಲವನ್ನು ಕಿಚ್ಚ ಸುದೀಪ್ ಅವರು ಈ ಬಾರಿಯ ಸೂಪರ್ ಸಂಡೇಯಲ್ಲಿ ಕೆದಿಕಿದ್ದು, ಎಲ್ಲ ಸ್ಪರ್ಧಿಗಳು ಒಂದೊಂದು ರೀತಿಯ ಉತ್ತರ ನೀಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಕಿಚ್ಚ ಸುದೀಪ್ ಅವರೊಟ್ಟಿಗೆ ಮಾತನಾಡಲು ಸ್ಪರ್ಧಿಗಳು ಇಷ್ಟೆಲ್ಲಾ ತಯಾರಾಗ್ತಾರಾ ಎಂದು ಆಶ್ಚರ್ಯವಾಗುತ್ತಿದೆ. ಎಲ್ಲರೂ ಅವರ ಬಟ್ಟೆ, ಮೇಕಪ್ ಬಗ್ಗೆ ಮಾತನಾಡಿದ್ದು, ಯಾವ್ಯಾವ ರೀತಿ ತಯಾರಾಗುತ್ತಾರೆ ಎಂದು ಹೇಳಿಕೊಂಡಿದ್ದಾರೆ.

    ವೀಕೆಂಡ್‍ನಲ್ಲಿ ಶೋನಲ್ಲಿ ಭಾಗವಹಿಸಲು ಯಾವ ರೀತಿಯ ಬಟ್ಟೆ ಹಾಕೋಬೇಕು, ಹೇರ್ ಸ್ಟೈಲ್ ಯಾವ ರೀತಿ ಇರಬೇಕೆಂದು ಬಹುತೇಕ ಎಲ್ಲರಿಗೂ ಕನ್ಫ್ಯೂಸ್ ಇರುತ್ತದೆ. ಆದರೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಶುಭಾ ಪೂಂಜಾ, ದಿವ್ಯಾ ಸುರೇಶ್ ಎಂದು ಮನೆ ಮಂದಿ ಹೇಳಿದ್ದಾರೆ. ಅಲ್ಲದೆ ಇನ್ನೂ ಅಚ್ಚರಿಯ ರೀತಿಯಲ್ಲಿ ಪ್ರಶಾಂತ್ ಸಂಬರಗಿ ಉತ್ತರಿಸಿದ್ದು, ವೈಷ್ಣವಿ ಹಾಗೂ ದಿವ್ಯಾ ಉರುಡುಗ ಅವರಿಗೆ ಯಾವ ವೀಕೆಂಡ್‍ಗೆ, ಯಾವ ಬಟ್ಟೆ, ಯಾವ ರೀತಿ ಕಾಸ್ಟೂಮ್ ಮಾಡಿಕೊಳ್ಳಬೇಕೆಂಬ ಪಟ್ಟಿ ಅವರ ಕಾಸ್ಟೂಮ್ ಡಿಸೈನರ್ ಇಂದ ಬಂದಿರುತ್ತದೆ. ಅವರಿಗೆ ಕನ್ಫ್ಯೂಸ್ ಆಗಲ್ಲ. ಆದರೆ ಶುಭಾ ಪೂಂಜಾ ಹಾಗೂ ದಿವ್ಯಾ ಸುರೇಶ್ ಹೆಚ್ಚು ಕನ್ಫ್ಯೂಸ್ ಆಗುತ್ತಾರೆ ಎಂದು ಹೇಳಿದ್ದಾರೆ.

    ಹಿಯರಿಂಗ್, ಫಿಂಗರ್, ಹೇರ್ ಸ್ಟೈಲ್, ಬಟ್ಟೆ, ಸ್ಲಿಪ್ಪರ್ ತನಕ ದಿವ್ಯಾ ಸುರೇಶ್ ಅವರಿಗೆ ಕನ್ಫ್ಯೂಶನ್ ಇರುತ್ತದೆ. ಹೀಲ್ಸ್ ಹಾಕ್ಲಾ, ಸ್ಲಿಪ್ಪರ್ ಹಾಕ್ಲಾ, ಶೂ ಹಾಕ್ಲಾ ಎಂದು ಕೇಳುತ್ತಿರುತ್ತಾರೆ ಎಂದು ಹೇಳಿದ್ದಾರೆ. ಒಟ್ನಲ್ಲಿ ವೀಕೆಂಡ್‍ಗೆ ಹೇಗೆ ರೆಡಿ ಆಗ್ತಾರೆ, ಎಷ್ಟೆಲ್ಲಾ ಕಷ್ಟ ಪಡ್ತಾರೆ ಎಂಬ ವಿಚಾರವನ್ನು ಕಿಚ್ಚ ಸುದೀಪ್ ಕೆದಕಿದ್ದಾರೆ. ಅಲ್ಲದೆ ಮುಂದಿನ ಶನಿವಾರ ನಿಮ್ಮಿಷ್ಟದ ಬಟ್ಟೆ ಹಾಕಿಕೊಂಡು ಬನ್ನಿ, ಯಾರು ಚೆನ್ನಾಗಿ ಕಾಣುತ್ತಾರೋ ನೋಡೋಣ ಎಂದು ಸುದೀಪ್ ಹೇಳಿದ್ದಾರೆ.

  • ದೊಡ್ಮನೆಗೆ ಎಂಟ್ರಿ ಕೊಡುವ ಮುನ್ನ ಅಪ್ಪನಿಗೆ ಸ್ಪರ್ಧಿಗಳ ವಿಶ್

    ದೊಡ್ಮನೆಗೆ ಎಂಟ್ರಿ ಕೊಡುವ ಮುನ್ನ ಅಪ್ಪನಿಗೆ ಸ್ಪರ್ಧಿಗಳ ವಿಶ್

    ಬೆಂಗಳೂರು: ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ದೊಡ್ಮನೆ ಸದಸ್ಯರು ಫಾದರ್ಸ್ ಡೇ ಪ್ರಯುಕ್ತ ತಮ್ಮ ಪ್ರೀತಿಯ ಅಪ್ತಂದಿರಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

    ಹೌದು, ಪ್ರತಿಯೊಬ್ಬ ಮಕ್ಕಳ ಮೊದಲ ಹೀರೋ ಅಂದರೆ ಅದು ಅವರ ತಂದೆ. ಮಕ್ಕಳು ಎಷ್ಟೇ ದೊಡ್ಡವರಾದರೂ ಇನ್ನೂ ಅವರನ್ನು ಮಕ್ಕಳಂತೆಯೇ ನೋಡುವುದು ಪೋಷಕರು ಮಾತ್ರ. ಮಕ್ಕಳನ್ನು ಪಾಲಿಸಿ, ಪೋಷಿಸಿ, ಬೆಳೆಸುವುದರಲ್ಲಿ ತಾಯಿಯ ಪಾತ್ರ ಎಷ್ಟು ದೊಡ್ಡದಿರುತ್ತದೇಯೋ ಹಾಗೆಯೇ ತಂದೆ ಪಾತ್ರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಎಲ್ಲಾ ಸಂದರ್ಭದಲ್ಲಿ ಸದಾ ಮಕ್ಕಳ ಬೆನ್ನ ಹಿಂದೆ ಬೆಂಬಲವಾಗಿ ಮೊದಲು ನಿಲ್ಲುವುದು ತಂದೆ ಮಾತ್ರ. ಅಂತಹ ವಿಶ್ವ ತಂದೆಯಂದಿರ ದಿನಾಚರಣೆಯಂದು ಬಿಗ್ ಮನೆ ಸ್ಪರ್ಧಿಗಳು ತಮ್ಮ ತಂದೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Aravind K P (@aravind_kp)

    ಪಂಚರಂಗಿ ಬೆಡಗಿ ನಟಿ ನಿಧಿ ಸುಬ್ಬಯ್ಯರವರು, ತಮ್ಮ ತಂದೆ ಜೊತೆಗಿರುವ ಬಾಲ್ಯದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಿಮ್ಮ ಬಗ್ಗೆ ಯೋಚಿಸದೇ ಒಂದು ದಿನವೂ ಕಳೆಯುವುದಿಲ್ಲ. ನೀವು ಇರಬೇಕಿತ್ತು. ನಾನು ನಿಮ್ಮನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹ್ಯಾಪಿ ಫಾದರ್ಸ್ ಡೇ ಪಪ್ಪಾ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Nidhi Subbaiah (@nidhisubbaiah)

    ವೈಷ್ಣವಿ ಗೌಡ ಕೂಡ ತಮ್ಮ ತಂದೆಯೊಟ್ಟಿಗಿರುವ ಫೋಟೋ ಜೊತೆಗೆ ಹ್ಯಾಪಿ ಫಾದರ್ಸ್ ಡೇ ಅಪ್ಪ, ಎಂದಿಗೂ ನೀವು ನನ್ನ ಸೂಪರ್ ಹೀರೋ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಅರವಿಂದ್ ಕೆಪಿ ಕೂಡ ಬೈಕ್ ಮೇಲೆ ಅವರ ತಂದೆ ಕುಳಿತುಕೊಂಡಿರುವ ಫೋಟೋ ಹಾಕಿ ವಿಶ್ ಮಾಡಿದರೆ, ದಿವ್ಯಾ ಉರುಡುಗ ಕೂಡ ಅವರ ತಂದೆ ಜೊತೆಗಿರುವ ಫೋಟೋ ಜೊತೆಗೆ ಪುಟ್ಟಿಮಗ ನಿಮ್ಮನ್ನು ಬಹಳ ಪ್ರೀತಿಸುತ್ತೇನೆ ಅಪ್ಪಾಜಿ, ಹ್ಯಾಪಿ ಫಾದರ್ಸ್ ಡೇ ಎಂದು ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಲವ್ ಯೂ ಅಪ್ಪಾ – ಯಶ್‍ಗೆ ಐರಾ, ಯಥರ್ವ್ ವಿಶ್

     

    View this post on Instagram

     

    A post shared by Vaishnavi (@iamvaishnavioffl)

     

     

    View this post on Instagram

     

    A post shared by Divya Uruduga (@divya_uruduga)

  • ಗೇಮ್ ಓವರ್ ಎನ್ನುತ್ತಾ ಆಟ ಮುಗಿಸಿದ ಬಿಗ್‍ಬಾಸ್

    ಗೇಮ್ ಓವರ್ ಎನ್ನುತ್ತಾ ಆಟ ಮುಗಿಸಿದ ಬಿಗ್‍ಬಾಸ್

    ಕೊರೊನ ಇರುವ ಕಾರಣದಿಂದಾಗಿ ಶೋ ಎಂಡ್ ಮಾಡುತ್ತಿದ್ದೇವೆ ಎಂದು ಹೇಳಿರುವುದಕ್ಕೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಬೇಸರವಾಗಿದೆ. ಕೊರೊನಾ ಇರುವ ಕಾರಣದಿಂದ ನಮ್ಮ ಪ್ಯಾಮಿಲಿ ಹೇಗೆ ಇದ್ದಾರೆ ಈ ಸುಂದರ ಜರ್ನಿ ಹೀಗೆ ಎಂಡ್ ಆಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.

    ಎಲ್ಲಾ ಸ್ಪರ್ಧಿಗಳು ಒಂದೊಂದು ಕನಸನ್ನು ಕಟ್ಟಿಕೊಂಡು ಬಂದಿದ್ದರು. ಅದೆಲ್ಲವೂ ಅರ್ಧಕ್ಕೆ ನಿಂತಿದೆ. ಹೀಗಾಗಿ ಬಿಗ್‍ಬಾಸ್ ಸ್ಪರ್ಧಿಗಳು ಅವರ ಜರ್ನಿಯನ್ನು ಅರ್ಧಕ್ಕೆ ಮುಗಿಸಿದ್ದಾರೆ. ಬಿಗ್‍ಬಾಸ್ ನಮ್ಮ ಜರ್ನಿ ಮುಂದುವರಿಯುತ್ತಲೇ ಇರುತ್ತದೆ. ಅಪೂರ್ಣವಾದ ನಮ್ಮ ಜರ್ನಿ ಪರಿಪೂರ್ಣವಾಗಿಲ್ಲ ಆದರೆ ಬೇರೆ ಎಲ್ಲಾ ಸೀಜನ್‍ಗಳ ಜರ್ನಿ ಮುಗಿದಿರಬಹುದು ಆದರೆ ನಮ್ಮ ಬಿಗ್‍ಬಾಸ್ ಪ್ರಯಾಣ ಮುಂದುವರೆಯುತ್ತಲೇ ಇರುತ್ತದೆ ಎಂದು ಸ್ಪರ್ಧಿಗಳು ಹೇಳಿದ್ದಾರೆ.

    ಇಲ್ಲಿಂದ ಜೀವನ ಕಟ್ಟಿಕೊಳ್ಳೊಣ ಎಂದು ಬಂದಿದ್ದೆ. ಬೇರೆಯವರು ಹೇಗೊ ನನಗೆ ಗೊತ್ತಿಲ್ಲ. ಭಗವಂತ ನಮಗೆ ಇಟ್ಟನಲ್ಲ… ಇಂತಹ ಜಾಗಕ್ಕೂ ಬಂದರೂ ಬಿಡಲಿಲ್ಲ ಅಲ್ಲವಾ. ಇದಕ್ಕಿಂತಲೂ ಚೆನ್ನಾಗಿರುವ ವೇದಿಕೆ ನನಗೆ ಮುಂದೆ ಸಿಗುತ್ತದೆ ಎಂದು ನಂಬಿಕೆ ಮೇಲೆ ಹೋಗೊಣ ಎಂದು ಹೇಳುತ್ತಾ ಮಂಜು ಪ್ರಿಯಾಂಕ ಬಳಿ ಹೇಳಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಏನೆಲ್ಲಾ ಕನಸು ಕಟ್ಟಿಕೊಂಡಿದ್ದೆ. ನನಗೆ ಮುಂದೆ ಏನು ಅಂತಾನೆ ಗೊತ್ತೇ ಆಗುತ್ತಿಲ್ಲ. ನಮ್ಮ ಮನೆಯವರನ್ನು ಎಲ್ಲಾ ಇಲ್ಲಿಗೆ ಕರೆಸಿದ್ದೇನು. ಅವರೆಲ್ಲ ಹೇಗೆ ಇದ್ದಾರೆ ಎನ್ನುವುದೆ ನನಗೆ ಅರ್ಥವಾಗುತ್ತಿಲ್ಲ ಎಂದು ದಿವ್ಯಾ ಬಳಿ ಹೇಳಿಕೊಂಡಿದ್ದಾರೆ. ಆಗ ದಿವ್ಯಾ ನಾನು ಮನೆಗೆ ಇವಾಗಲೇಹೋಗಬೇಕು ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಆಗ ಮಂಜು ನಾವೆಲ್ಲ ಹೋಗೊದೆ ಈವಾಗ ಎಂದು ಹೇಳುತ್ತಾ ಸಮಾಧಾನ ಮಾಡಿದ್ದಾರೆ.

    ರಘು ಮನೆಯವರಿಗೆಲ್ಲಾ ನೆನಪಿಗಾಗಿ ಅವರ ಬಳಿ ಇರುವ ಕೆಲವು ಬಟ್ಟೆಗಳನ್ನು ಸ್ಪರ್ಧಿಗಳಿಗೆ ಕೊಟ್ಟಿದ್ದಾರೆ. ಕೆಲವರು ನಾವು ಆಚೆ ಸಿಗುವ ಎಂದು ಮಾತನಾಡಿಕೊಂಡಿದ್ದಾರೆ. ಬಿಗ್‍ಬಾಸ್ ಮನೆಯ ಸುದಂರದ ಜರ್ನಿಯಿಂದ ನನಗೆ ಆಚೆ ಹೋಗಲು ಇಷ್ಟ ಇಲ್ಲ.. ಬಿಗ್‍ಬಾಸ್ ಮನೆಯಲ್ಲಿರುವ ರೇಷನ್ ಅಷ್ಟರಲ್ಲಿಯೇ ನಾವು ಇರುತ್ತೇವೆ ಎಂದು ಶುಭಾ ಹೇಳಿದ್ದಾರೆ. ನಿಧಿ ಯಾರು ಯಾವ ದಿನ ಸಿಗಬೇಕು ಎನ್ನುವುದನ್ನು ಹೇಳಿದ್ದಾರೆ. ಸ್ಪರ್ಧಿಗಳಿಗೆ ಮನೆಯನ್ನು ಬಿಟ್ಟುಹೋಗಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆಯಾಗಿ ಬಿಗ್‍ಬಾಸ್ ಮನೆಯಿಂದ ಹೋಗುತ್ತಿರುವುದು ಸ್ಪರ್ಧಿಗಳಿಗೆ ಸಖತ್ ಬೇಸರವನ್ನುಂಟು ಮಾಡಿದೆ. ಈ ಸುದ್ದಿ ಕನಸು ಎಂಬುವಂತೆ ಸ್ಪರ್ಧಿಗಳಿಗಿದೆ. ಗೇಮ್ ಓವರ್ ಎನ್ನುತ್ತಾ ತಮ್ಮ ಆಟವನ್ನು ಮುಗಿಸಿದ್ದಾರೆ.

     

  • ದೊಡ್ಮನೆಯ ಉಪಮುಖ್ಯಮಂತ್ರಿಯಾದ ಅರವಿಂದ್

    ದೊಡ್ಮನೆಯ ಉಪಮುಖ್ಯಮಂತ್ರಿಯಾದ ಅರವಿಂದ್

    ರಾಜಕೀಯದಲ್ಲಿ ಖಾತೆ ಹಂಚಿಕೆ ಸರ್ವೇಸಾಮಾನ್ಯವಾಗಿ ನಡೆಯುತ್ತದೆ. ಆದ್ರೆ ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್‍ರವರು ಮನೆಯ ಸ್ಪರ್ಧಿಗಳಿಗೆ ಯಾವ ಖಾತೆ ಸೂಟ್ ಆಗುತ್ತದೆ ಎಂದು ತಿಳಿಸಿದ್ದಾರೆ.

    ಕಣ್ಮಣಿ ಬಿಗ್‍ಬಾಸ್ ಸಂಪುಟದಲ್ಲಿ ಯಾವ ಖಾತೆ ಯಾರಿಗೆ ಕೊಡಬಹುದು ಎಂದು ಚಕ್ರವರ್ತಿಯವರಿಗೆ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಪ್ರಿಯಾಂಕರಿಂದ ಶುರು ಮಾಡಿದ ಚಕ್ರವರ್ತಿಯವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಿಗೆ ನೀಡುತ್ತೇನೆ ಏಕೆಂದರೆ ಅವರು ತುಂಬಾ ಸಂಸ್ಕøತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ವಸತಿ ಮತ್ತು ಆಹಾರ ಇಲಾಖೆಯನ್ನು ಶುಭಾಗೆ ನೀಡುತ್ತೇನೆ ಕಾರಣ ಇವರು ವಸತಿ ಕಡೆಗೂ ಜಾಸ್ತಿ ಹೋಗುವುದಿಲ್ಲ ಹಾಗೂ ಆಹಾರದ ಕಡೆಗೂ ಜಾಸ್ತಿ ಹೋಗುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಅದು ಅತೀ ದೊಡ್ಡ ಖಾತೆಯಾಗಿರುವುದರಿಂದ ಅದು ಅವರಿಗಿರಲಿ ಎಂದು ಬಯಸುತ್ತೇನೆ.

    ಧರ್ಮದತ್ತಿ ಅಂದರೆ ಧಾರ್ಮಿಕ ಇಲಾಖೆಯನ್ನೇ ವೈಷ್ಣವಿಗೆ ನೀಡುತ್ತೇನೆ. ಜೀವನ ಶೂನ್ಯ, ದೇವಸ್ಥಾನ ಮುಜರಾಯಿ ಇಲಾಖೆಯನ್ನು ನೀಡಬೇಕಾಗುತ್ತದೆ. ಕಂದಾಯ ಇಲಾಖೆಯನ್ನು ನಿಧಿಗೆ ನೀಡುತ್ತೇನೆ. ಅವರ ಮೈಂಡ್ ಯಾವಾಗಲೂ ರೆವೆನ್ಯೂ, ಲೆಕ್ಕಾಚಾರನ್ನೇಲ್ಲಾ ಬಹಳ ಚೆನ್ನಾಗಿ ಮಾಡುತ್ತಾರೆ. ಇನ್ನೂ ಶಮಂತ್‍ಗೆ ಖಾತೆ ಕೊಡದೇ ಸದ್ಯಕ್ಕೆ ಬೀಜ ನಿಗಮ ನಿಯಮಿತ ನೀಡುತ್ತೇನೆ. ಇವನು ಕೃಷಿ, ಬೀಜ ಹೇಗೆ ಹಾಕಬೇಕು, ಹೇಗೆ ಬೆಳೆಸಬೇಕು ಏನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ.

    ರಘುಗೆ ಶೇ. 100 ಅಬಕಾರಿಯನ್ನು ನೀಡುತ್ತೇನೆ. ಬೇರೆ ಚೇಂಜ್ ಮಾಡುವುದಕ್ಕೆ ಹೋಗುವುದಿಲ್ಲ. ಅವರ ಮಾತು, ನಡೆ, ನುಡಿ ಕಣ್ಣೋಟ ಇಲ್ಲದರಲ್ಲಿಯೂ ನಶೆ ತುಂಬಿರುತ್ತದೆ. ಮಂಜುಗೆ ಮನೆಯನ್ನೆಲ್ಲಾ ಸಂಬಾಳಿಸಿ ಯಾವುದಾದರೂ ತಪ್ಪು ನಡೆದರೂ ಸರಿ ಮಾಡಿಕೊಂಡು, ವಾಕಿಂಗ್ ಸ್ಟಿಕ್‍ನಲ್ಲಿ ಏನು ಮಾಡಬೇಕು, ಹಾಲ್‍ನಲ್ಲಿ ಏನು ಮಾಡಬೇಕು, ಎಲ್ಲಿ ಏನು ಮಾಡಬೇಕು ಎಂಬುವುದನ್ನೆಲ್ಲಾ ಬಹಳ ಚೆನ್ನಾಗಿ ನಿಭಾಯಿಸುತ್ತಾರೆ ಹೀಗಾಗಿ ಅವರಿಗೆ ಗೃಹ ಇಲಾಖೆ ಖಾತೆ ನೀಡುತ್ತೇನೆ.

    ದಿವ್ಯಾ ಸುರೇಶ್‍ರವರಿಗೆ ಪ್ರವಾಸೋದ್ಯಮ ನೀಡುತ್ತೇನೆ. ಅವರದ್ದು ಪೂರ್ತಿ ಪ್ರವಾಸವಿರುತ್ತದೆ. ಹುಡುಕಿದರೂ ಕಾಣುವುದಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚಿಗರಿ ಮರಿ ತರ ನಡೆಯುತ್ತಿರುತ್ತದೆ. ನಮ್ಮ ಪ್ರಶಾಂತ್‍ಗೆ ಕಾನೂನು ಮತ್ತು ಸಂಸದೀಯ ಮಂಡಳಿ. ಬೇರೆ ಖಾತೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಕಾನೂನು ಹಾಗೂ ಸಂಸದೀಯ ಮಂಡಳಿ. ಅರವಿಂದ್ ಕೆಪಿಗೆ ಐದರೂ ಖಾತೆ ನೀಡಿ ಉಪಮುಖ್ಯಮಂತ್ರಿ ಮಾಡುತ್ತೇನೆ. ಯಾವಾಗ ಯಾವ ಖಾತೆಗೆ ಬೇಕಾದರೂ ಜಂಪ್ ಆಗಬಹುದು.

    ಕೊನೆಯದಾಗಿ ನನಗೆ ಮಹಿಳಾ ಮತ್ತು ಮಕ್ಕಳಾ ಇಲಾಖೆಯನ್ನು ಕೊಟ್ಟುಕೊಳ್ಳುತ್ತೇನೆ. ನಾನು ಅದರಲ್ಲಿ ಬಹಳ ಎಕ್ಸ್‍ಪರ್ಟ್ ಆಗಿದ್ದೇನೆ. ಮುಖ್ಯಮಂತ್ರಿ ಸ್ಥಾನವನ್ನು ಬಿಗ್‍ಬಾಸ್‍ಗೆ ಬಿಟ್ಟಿದ್ದೇನೆ. ಅವರೊಟ್ಟಿಗೆ ನನಗೆ ಫೈಟ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.