Tag: ಸ್ನೇಹ

  • ಅವಳ ಮೂಗಿನ ತುದಿ ಕೋಪ ನಂಗಿಷ್ಟ!

    ಅವಳ ಮೂಗಿನ ತುದಿ ಕೋಪ ನಂಗಿಷ್ಟ!

    ದೆಂತ ವಿಚಿತ್ರ! ಎಲ್ಲ್ರೂ ಪ್ರೀತ್ಸೋ ಹುಡುಗಿಯ ನಗು ಇಷ್ಟ.. ಅವಳ ಮುಂಗುರುಳು ಸರಿಸುವಾಗ ಆ ಕುಡಿ ನೋಟ ಇಷ್ಟ ಅಂತ ಬರೆದ್ರೆ ಇವನೇನು ಅವಳ ಕೋಪ ಇಷ್ಟ ಅಂತಾನೇ ಅಂತ ಆಶ್ಚರ್ಯನಾ?! ನಿಜ ನನಗೆ ಅವಳ ಕೋಪ ತುಂಬಾ ಇಷ್ಟ..! ಅದಕ್ಕೆ ಅವಳಿಗೆ ಆಗಾಗ ಬೇಕು ಅಂತಾನೇ ರೇಗಿಸಿ ಬೇಜಾರು ಮಾಡಿ ಸಿಟ್ಟು ಬರೋ ಹಾಗೇ ಮಾಡ್ತೀನಿ! ಆದ್ರೆ ನನಗೆ ಈ ಥರ ಕೋಪ ಬರಿಸೋ ಚಾನ್ಸ್‌ ತುಂಬಾ ಕಡಿಮೆನೇ ಸಿಕ್ಕಿದ್ದು.. ಯಾಕಂದ್ರೆ ಅವಳಿಗೆ ಕೋಪ ಮೂಗಿನ ಮೇಲೆ ಇರ್ತಿತ್ತು..!

    ಹೌದು ಕಣ್ರೀ..! ಎಲ್ಲಾ ಹುಡುಗಿಯರು ತಮ್ಮ ಮೂಗಿಗೆ ಮೂಗು ಬೊಟ್ಟಿಂದ ಅಲಂಕಾರ ಮಾಡ್ಕೊಂಡಿದ್ರೆ.. ಇವಳು ಕೋಪಾನೇ ಮೂಗಿನ ತುದಿಯಲ್ಲಿಟ್ಟುಕೊಂಡು ಅಲಂಕಾರ ಮಾಡ್ಕೊಂಡಿರ್ತಿದ್ಲು! ಅಷ್ಟು ಕೋಪಿಷ್ಟೇ.. ಕೋಪ ಮಾಡ್ಕೊಂಡಾಗೆಲ್ಲ ಅವಳು ಅಷ್ಟೇ ಮುದ್ದಾಗಿ ಸಹ ಕಾಣ್ತಿದ್ಲು… ಆಗೆಲ್ಲ ಅವಳು ರೇಡಿಯೋ ಆಗಿರೋಳು.. ನಾನು ಕೇಳುಗನಾಗಿ ಇರ್ತಿದ್ದೆ..! ಹೇಳಿದ್ದನ್ನೇ ನೂರು ಸಲ ಹೇಳಿ, ಕೊನೆಗೆ ಯಾಕೆ ಸಿಟ್ಟು ಮಾಡ್ಕೊಂಡಿದ್ದೆ ಅಂತ ಕೇಳಿದ್ರೆ ನನಗೆ ಗೊತ್ತಿಲ್ಲ.. ಮರೆತು ಹೋಯ್ತು ಅಂತ ನಗಾಡೋ ಅಷ್ಟು ಹೊತ್ತಿಗೆ ಈ ಕೋಪ ಕರಗಿದೆ ಅನ್ನೋದು ತಿಳಿತಾ ಇತ್ತು. ಇದನ್ನೂ ಓದಿ: ನೀ ʻಅಮೃತʼಧಾರೆ – ಬಾಡಿದ ಹೃದಯಕುಂಡದಲ್ಲಿ ಒಲವರಳಿಸಿದ ಮಳೆ!

    ಆದ್ರೆ ಮತ್ತೆ ಒಂದು ಮಾತು ಹೇಳೋಳು.. ಏನಂಥ ಗೊತ್ತಾ? ನನಗೆ ಯಾಕೆ ಕೋಪ ಬಂತು ಹೇಳು? ನಿನಗೆ ಗೊತ್ತಿಲ್ವಾ? ಆಹಾ.. ನನಗೆ ಸಿಟ್ಟು ಬಂದಿದ್ದು ಯಾಕೆ ಅಂತಯ ನೆನಪಿರಲ್ಲ ಅಲ್ವಾ? ಅಷ್ಟೊಂದು ಮರೆವಾ ನಿನಗೆ? ನನ್ನನ್ನೂ ಮರೆತು ಬಿಡ್ತೀಯ ಬಿಟ್ರೆ ಅಲ್ವಾ? ಹೀಗೆ ಪುಂಡ ಬೆಕ್ಕಿನ ಥರ ಪುಟ್ಟ ಪುಟ್ಟ ಜಗಳ ಅವಳದ್ದು..!

    ಹಾಗಂತ ಅದೆಲ್ಲ ತುಂಬಾ ಸೀರಿಯಸ್‌ ಆದ ವಿಚಾರಗಳೇನೂ ಅಲ್ಲ.. ಆ ಕೋಪಕ್ಕೆ ಕಾರಣಗಳು ಬೇಕಿರಲಿಲ್ಲ,,! ಯಾಕೆ ಸಿಟ್ಟು ಅಂತ ಕೇಳಿದ್ರೆ… ನನಗೆ ನಿನ್ನ ಹತ್ರ ಮಾತ್ರ ಕೋಪ ಮಾಡ್ಬೇಕು, ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆ ಮಾಡ್ಬೇಕು ಅನ್ಸುತ್ತೆ ಕಣೋ..! ನನ್ನ ಸಿಟ್ಟು.. ನನ್ನ ಇಷ್ಟ..! ಸಿಟ್ಟು ಮಾಡ್ಕಳ್ಳೋಕು ನಾನು ನಿನ್ನ ಕೇಳ್ಬೇಕಾ..? ನಿನ್‌ ಹತ್ರ ಮಾತ್ರ ನಾನು ಚಿಕ್ಕವಳ ಥರ ಆಡ್ಬೇಕು.. ಹಠ ಮಾಡ್ಬೇಕು.. ಸಿಟ್ಟು ಮಾಡ್ಬೇಕು ಅನ್ಸುತ್ತೆ ಗೋಪಾಲ… ಯಾಕೆ ಅಂತ ನೀನೇ ಹೇಳು? ಅವಳ ಪ್ರಶ್ನೆಗೆ ನನಗೂ ಉತ್ತರ ಇರಲಿಲ್ಲ.. ಅದಕ್ಕೆ.. ಅಷ್ಟೇ ತಾನೇ, ನಿನಗೆ ಏನು ಅನ್ಸತ್ತೋ ಹಾಗೆ ಇರು ಪುಟ್ಟ ಅಂತ ಹೇಳ್ಬಿಡ್ತಿದ್ದೆ..! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!

    ಒಮ್ಮೊಮ್ಮೆ ಅನ್ಸೋದು.. ಹೌದಲ್ವಾ ಅವಳು ಪ್ರೀತಿ ಆದ್ರೂ, ಕೋಪ ಆದ್ರೂ ಯಾರನ್ನ ಮಾಡ್ತಾಳೆ.. ನನ್ನ ಬಿಟ್ರೆ ಯಾರಿದಾರೆ ಅವಳಿಗೆ ಅಂತ ತುಂಬಾ ಸಲುಗೆ ಕೊಟ್ಟೆ.. ಅವಳು ಅಷ್ಟೇ ಮಗು ಅಮ್ಮನ ಹತ್ರ ಹಠ ಮಾಡಿದ ಹಾಗೆ ಹಠ ಮಾಡ್ಕೊಂಡು.. ನನ್ನನ್ನೇ ಪ್ರಪಂಚ ಅಂದ್ಕೊಂಡಿದ್ಲು… ಇದೆಲ್ಲ ಸುಮಾರು ಆರೇಳು ವರ್ಷಗಳ ಹಿಂದಿನ ಕತೆ.. ಮೊನ್ನೆ ಮೊನ್ನೆ ಮತ್ತೆ ಸಿಕ್ಕಿದ್ಲು. ದೂರಾಗಿ ಇಷ್ಟು ವರ್ಷ ಆದ್ಮೇಲೂ, ಅದೇ ಕೋಪ.. ಅದೇ ಕಣ್ಣು ಹಾಗೇ..! ಮತ್ತೆ ನಿನ್ನ ಹತ್ರ ಸಿಟ್ಟು ಮಾಡ್ಬೇಕು ಅನ್ನಿಸ್ತಿದೆ ಮಾಡ್ಲಾ? ಹ್ಞೂಂ ಅಂದೆ.. ಅವಳಿಗೆ ಅಳುನೇ ಬಂದು ಹೋಯ್ತು..!

    ಅವಳಿಗೆ ಅವತ್ತು ಯಾಕೆ ಅಳು ಬಂತೋ ಗೊತ್ತಿಲ್ಲ.. ಆದ್ರೆ.. ಇವತ್ತಿಗೂ ಅದೇ ಪ್ರೀತಿ ಅವಳ ಮನಸ್ಸಲ್ಲಿ ಇದೆ.. ಈ ‘ಸುರಗಿ’ ಮರದಿಂದ ಉದುರಿದ ಮೇಲೂ ವರ್ಷಾನೂಗಟ್ಟಲೇ ಅದರ ಘಮ ಉಳಿಯುವ ಹಾಗೆ..! ಹೌದು.. ಅದ್ಯಾವ ಕಾರಣಕ್ಕೆ ನಾವು ದೂರ ಆದ್ವಿ ಅಂತ ಗೊತ್ತಿಲ್ಲ. ಇಬ್ಬರ ಹೃದಯದಲ್ಲೂ ಇವತ್ತಿಗೂ ಅದೇ ಪ್ರೇಮದ ಘಮ ಇದೆ. ನನಗೆ ಅವಳ ಕೋಪದಲ್ಲಿ ಕಂಡಿದ್ದು ಪ್ರೇಮದ ಘಮ.. ಆ ಕೋಪ ಮತ್ತೆ ನನ್ನ ಮೇಲೆ ಪ್ರಯೋಗ ಮಾಡ್ಬೇಕು ಅವಳು. ಪುಟ್ಟ ಮಗು ತನ್ನ ಸಿಟ್ಟನ್ನ ತನ್ನ ಅಮ್ಮನ ಮೇಲೆ ತೋರಿಸೋ ಹಾಗೆ, ಅದನ್ನ ನಾನು ತಾಯಿಯಾಗಿ ಸಂಭ್ರಮಿಸಬೇಕು..!

    ಪ್ರೀತಿ ಅಂದ್ರೆ ಹೀಗೆ ಅಲ್ವಾ..? ನನಗೆ ಏನು ಬೇಕೋ ಅದನ್ನ ಹುಡುಕಿ ಸಂಭ್ರಮಿಸೋದಲ್ಲ. ನಮಗೆ ಸಿಕ್ಕ ಪ್ರೀತಿಯಲ್ಲಿ ಏನಿದಿಯೋ ಅದನ್ನೇ ಹೃದಯಕ್ಕೆ ಇಳಿಸಿಕೊಳ್ಳೋದು.. ಅದ್ಕೆ ಇರಬೇಕು ನನಗೆ ಅವಳ ಮುದ್ದು ಕೋಪ ಇಷ್ಟ ಆಗಿದ್ದು. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

    ಅವಳ ಕೋಪಕ್ಕೊಂದು ಮಾಧುರ್ಯ ಇತ್ತು. ಆ ಕೋಪದಲ್ಲಿ ಅವಳ ನಾಚಿಕೆ ಇತ್ತು. ಮಲ್ಲಿಗೆ ಕನಕಾಂಬರದ ಮಿಶ್ರಣದ ಬಣ್ಣ.. ಸುಗಂಧ ರಾಜನ ಘಮ ಎಲ್ಲವೂ ಇತ್ತು. ಅದೆಲ್ಲ ಮೀರಿದ ವಾತ್ಸಲ್ಯ ಇತ್ತು. ಒಮ್ಮೊಮ್ಮೆ ಅವಳು ಹೇಳ್ತಿದ್ಲು, ನಾನು ಕೋಪ ಮಾಡ್ಕೋತಿನಿ.. ನೀನು ನನ್ನ ಮುದ್ದು ಮುದ್ದು ಮಾತಾಡಿ ಸಮಾಧಾನ ಮಾಡ್ಬೇಕು ಅಂತ. ನಾನು ಸಮಾಧಾನ ಮಾಡ್ಬೇಕು ಅಂತಾನೇ ಕೋಪ ಮಾಡ್ಕೊಳ್ಳೋಳು..! ಅದೊಂಥರ ಕೋಪದ ಚೆಂದದ ಆಟ ಅವಳಿಗೆ..! ಆ ಕೋಪದ ಕೆಂಪು ಮೂಗಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಇದನ್ನ ಓದಿ, ಆ ಸಂಭ್ರಮದಲ್ಲಿ ಚೂರಾದ್ರೂ ಅಳ್ಬೇಕು ಅಂತ ಇಷ್ಟೆಲ್ಲ ನೆನಪನ್ನ ಬರೆದೆ..!!

    – ಗೋಪಾಲಕೃಷ್ಣ

  • ದ್ವೇಷ ಮರೆತು ಮತ್ತೆ ಸ್ನೇಹಿತರಾಗುವುದಾಗಿ ನಂಬಿಸಿ ವ್ಯಕ್ತಿಯ ಬರ್ಬರ ಹತ್ಯೆ

    ದ್ವೇಷ ಮರೆತು ಮತ್ತೆ ಸ್ನೇಹಿತರಾಗುವುದಾಗಿ ನಂಬಿಸಿ ವ್ಯಕ್ತಿಯ ಬರ್ಬರ ಹತ್ಯೆ

    ನವದೆಹಲಿ: ಮತ್ತೆ ಗೆಳೆಯರಾಗುವುದಾಗಿ ಹೇಳಿ ಮದ್ಯಪಾನ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವನನ್ನು ಕರೆದೊಯ್ದು ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಪದೇ ಪದೇ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದ್ದು, ಹತ್ಯೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಆಶಿಶ್ (22) ಹತ್ಯೆಯಾದ ಯುವಕ. ವಿಕಾಸ್ ಮತ್ತು ವಂಶು ಎಂಬ ಯುವಕರು ಈ ಕೊಲೆಯನ್ನು ಮಾಡಿದ್ದು, ಇವರು ಆಶಿಶ್‌ನೊಂದಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿದ್ದರು. ಅಲ್ಲದೇ ಜೂನ್ 24ರಂದು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ತಮ್ಮ ಮನೆಗೆ ಬಂದು ಆಶಿಶ್‌ನೊಂದಿಗೆ ಮತ್ತೆ ಸ್ನೇಹಿತರಾಗುವುದಾಗಿ (Friends) ಹೇಳಿದ್ದಾರೆ. ಬಳಿಕ ಬಾರ್‌ಗೆ (Bar) ಹೋಗೋಣ. ಅಲ್ಲಿ ಬಿಲ್ ನಾವೇ ಕೊಡುತ್ತೇವೆ ಎಂದು ಹೇಳಿದ್ದರು ಎಂದು ಮೃತ ಆಶಿಶ್ ತಂದೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೀಮ್ ಆರ್ಮಿ ಮುಖ್ಯಸ್ಥನ ಮೇಲೆ ದಾಳಿ ಮಾಡಿದ್ದ ನಾಲ್ವರ ಬಂಧನ

    CRIME

    ಮತ್ತೆ ಸ್ನೇಹಿತರಾಗಲು ಬಯಸಿದ್ದನ್ನು ಗಮನಿಸಿದ ಆಶಿಶ್ ತಂದೆ ಅನುಮಾನಗೊಂಡು ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಮೂವರೂ ಸುಮಾರು ಅರ್ಧಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ವಿಕಾಸ್ ಆಶಿಶ್ ಜೊತೆ ಜಗಳ ಮಾಡಿದ್ದಾನೆ. ಇವರಿಬ್ಬರ ಜಗಳಕ್ಕೆ ವಂಶು ಕೂಡಾ ಸೇರಿಕೊಂಡು ಇದ್ದಕ್ಕಿದ್ದಂತೆ ಆಶಿಶ್‌ಗೆ ಚಾಕುವಿನಿಂದ (Knife) ಇರಿದಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಹೊರರಸ್ತೆಯಲ್ಲಿ ಎಮ್ಮೆಯ ತಲೆ ಪತ್ತೆ- ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

    ಚಾಕುವಿನಿಂದ ಇರಿದ ಬಳಿಕ ವಿಕಾಸ್ ಮತ್ತು ವಂಶು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ವಿಡಿಯೋದಲ್ಲಿ ವಿಕಾಸ್ ಹಾಗೂ ವಂಶು ಆಶಿಶ್‌ನ ಬೆನ್ನಿಗೆ ಹಲವು ಬಾರಿ ಇರಿದಿದ್ದು, ಬಳಿಕ ರಸ್ತೆಯಲ್ಲಿ ಆತನನ್ನು ಥಳಿಸಿರುವುದು ಸೆರೆಯಾಗಿದೆ. ಘಟನೆಯಿಂದ ಭೀಕರ ಗಾಯಗೊಂಡಿದ್ದ ಆಶಿಶ್‌ನನ್ನು ಆತನ ತಂದೆ ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಸಾರ್ವಜನಿಕರು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

    ಈ ಹಿನ್ನೆಲೆ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಬಳಿಕ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಆಶಿಶ್ ಮೃತಪಟ್ಟಿದ್ದು, ಆತನ ತಂದೆಯ ಹೇಳಿಕೆಯನ್ನು ತೆಗೆದುಕೊಂಡು ಅದೇ ದಿನ ಸಂಜೆ ವಿಕಾಸ್ ಮತ್ತು ವಂಶುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆ ಜೊತೆ ಕಂಡಕ್ಟರ್ ಸೆಕ್ಸ್- ವೀಡಿಯೋ ವೈರಲ್

    ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಆಶಿಶ್‌ನನ್ನು ಕೊಲೆ ಮಾಡಲು ಒಂದು ದಿನ ಮೊದಲೇ ಯೋಜನೆ ಹಾಕಿಕೊಂಡಿದ್ದೆವು ಎಂದು ಒಪ್ಪಿಕೊಂಡಿದ್ದು, ಆತನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವ ಸಲುವಾಗಿ ಮತ್ತೆ ಸ್ನೇಹಿತರಾಗುವ ನಾಟಕವಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    ತುಮಕೂರು: ನಂಬಿಕೆ ದ್ರೋಹ ಅನ್ನೋದು ಮನುಷ್ಯನ ಹುಟ್ಟುಗುಣ. ಇಂಥ ಮೋಸಗಳಿಗೆ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಒಳಗಾಗುತ್ತಿರುತ್ತಾರೆ. ಅಂಥದ್ದೇ ಒಂದು ಘಟನೆ ತುಮಕೂರಿನಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನವರಾದ ಅಂತರಾಜ್ ಎಂಬವರು ತಮ್ಮ ಪುಟ್ಟ ಕುಟುಂಬದೊಂದಿಗೆ ತುಮಕೂರಿ (Tumakuru) ನಲ್ಲಿ ವಾಸ ಮಾಡುತ್ತಿದ್ದರು. ಜೀವನಕ್ಕಾಗಿ ಒಳ್ಳೆಯ ಸಂಪಾದನೆ ಮಾಡಿ ಬಂಗಲೆ, ಕಾರುಗಳು, ಬೈಕ್‍ಗಳ ಮಾಲೀಕರಾಗಿದ್ರು. ಆದರೆ ಸದ್ಯಕ್ಕೆ ಈ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದೆ.

    ಹೌದು. ಸಿರಿವಂತ ಅಂತರಾಜ್ ತಮ್ಮ ಬಂಗಲೆ ಮಾರಿಕೊಂಡು ಈಗ ನೆಂಟರ ಹಂಗಿನಲ್ಲಿದ್ದಾರೆ. ಐಷಾರಾಮಿ ಕಾರಲ್ಲಿ ಓಡಾಡುತ್ತಿದ್ದವರು ಈಗ ಟ್ರೈನ್ ಟಿಕೆಟ್‍ಗೂ ಪರದಾಡ್ತಿದ್ದಾರೆ. ಅಷ್ಟಕ್ಕೂ ಈ ಕುಟುಂಬದ ಈ ಸ್ಥಿತಿಗೆ ಕಾರಣ ನಂಬಿದ ವ್ಯಕ್ತಿಯೊಬ್ಬ ಮಾಡಿದ ಮಹಾದೋಖಾ. ಒಂದಷ್ಟು ಹಣ ಇಟ್ಕೊಂಡು ಸುಖವಾಗಿದ್ದ ಅಂತರಾಜ್‍ಗೆ ಕೆಲವು ವರ್ಷಗಳ ಹಿಂದೆ ವೈ.ಸಿ ಸಿದ್ದರಾಮಯ್ಯ ಎಂಬವರ ಪರಿಚಯ ಆಗಿತ್ತು.

    ಈ ಪರಿಚಯ ವ್ಯವಹಾರಕ್ಕೆ ತಿರುಗಿ ಅವರ ಸಂಬಂಧಿ ಬಸವರಾಜ್ ಎಂಬವರ ತ್ರಿ ಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸ್ತಾ ಇದ್ದರು. ಮುಂದೆ ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದು ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರಂತೆ. ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ – SC, ST ಸಮುದಾಯಗಳಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್‌

    ಸ್ವತಃ ವೈ.ಸಿ.ಸಿದ್ದರಾಮಯ್ಯರೇ ಅಂತರಾಜ್‍ನನ್ನು ಬೆಂಗಳೂರಿ (Bengaluru) ನಿಂದ ಕರೆದುಕೊಂಡು ಬಂದು ಹೊಟೆಲ್ ಬಾಡಿಗೆಗೆ ಕೊಡಿಸಿದ್ರು. ಬಳಿಕ ಇವರ ಮಾತುಗಳನ್ನ ನಂಬಿದ ಅಂತರಾಜ್ ಕೋಟಿ ಕೋಟಿ ರೂಪಾಯಿ ಬಂಡವಾಳ ಹಾಕಿ ಈ ಹೋಟೆಲ್ (Hotel) ರೆಡಿ ಮಾಡಿಸಿದ್ರಂತೆ. ಆದರೆ ಈಗ ಅಂತರಾಜ್ ಅವರನ್ನೇ ಹೋಟೆಲ್‍ನಿಂದ ಹೊರಹಾಕಿ, ಹಣ ವಾಪಸ್ ನೀಡಲು ಸಾಧ್ಯ ಇಲ್ಲ ಎಂದು ಧಮ್ಕಿ ಹಾಕಿದ್ದಾರಂತೆ. ನಷ್ಟ ಆದ ಸುಮಾರು 1.5 ಕೋಟಿ ರೂಪಾಯಿಯಲ್ಲಿ 70 ಲಕ್ಷ ಕೊಡೋದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದ ವೈ.ಸಿ.ಸಿದ್ದರಾಮಯ್ಯ ಮತ್ತೇ ಉಲ್ಟಾ ಹೊಡೆದಿದ್ದಾರಂತೆ.

    ಸದ್ಯ ಹೊಟೇಲ್‍ಗಾಗಿ ಅಂತರಾಜ್ ಸುಮಾರು 2 ಕೋಟಿ ರೂಪಾಯಿ ಬ್ಯಾಂಕಿನಿಂದ ಸಾಲ ಮಾಡಿದ್ರಿಂದ ಬ್ಯಾಂಕ್‍ನವರು ಅಂತರಾಜ್ ಅವರ ಡುಫ್ಲೆಕ್ಸ್ ಮನೆ, ಮತ್ತೊಂದು 3 ಅಂತಸ್ತಿನ ಮನೆಯನ್ನು ಹರಾಜು ಹಾಕಿದ್ದಾರೆ. ಜೊತೆಗೆ ಎಕ್ಸ್ ಯುವಿ ಕಾರು, ಇನ್ನೋವಾ ಕಾರು ಹಾಗೂ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನೂ ಮಾರಿ ಅಂತರಾಜ್ ಕುಟುಂಬ ಹೋಟೆಲ್ ಮುಂದಿನ ರಸ್ತೆಯಲ್ಲಿ ನ್ಯಾಯಕ್ಕಾಗಿ ಧರಣಿ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿಯೊಂದಿಗೆ ಶಾಲೆಯಲ್ಲೇ ಪಿಟಿ ಟೀಚರ್ ಸೆಕ್ಸ್ – `ಟೀಚರ್ ಆಫ್‌ದಿ ಇಯರ್’ ಗೆದ್ದವಳು ಅರೆಸ್ಟ್

    ವಿದ್ಯಾರ್ಥಿಯೊಂದಿಗೆ ಶಾಲೆಯಲ್ಲೇ ಪಿಟಿ ಟೀಚರ್ ಸೆಕ್ಸ್ – `ಟೀಚರ್ ಆಫ್‌ದಿ ಇಯರ್’ ಗೆದ್ದವಳು ಅರೆಸ್ಟ್

    ವಾಷಿಂಗ್ಟನ್: ವರ್ಷದ ಉತ್ತಮ ಶಿಕ್ಷಕಿ (Teacher of The Year) ಪ್ರಶಸ್ತಿ ಪಡೆದಿದ್ದ ಪಿಟಿ ಶಿಕ್ಷಕಿಯೊಬ್ಬಳು 17 ವರ್ಷದ ವಿದ್ಯಾರ್ಥಿಯೊಂದಿಗೆ (Student) ಲೈಂಗಿಕ ಸಂಬಂಧ ಹೊಂದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶಿಕ್ಷಕಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಅಮೆರಿಕದ ಜೆಂಟ್ರಿ ಇಂಟರ್ ಮೀಡಿಯೇಟ್ ಶಾಲೆಯ (Gentry Intermediate School) ಶಿಕ್ಷಕಿಯಾಗಿರುವ ಲಿಯಾ ಕ್ವೀನ್(43) (Leah Queen) 17ರ ವಿದ್ಯಾರ್ಥಿಯೊಂದಿಗೆ ತಮ್ಮ ಕಚೇರಿಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಳು ಎಂದು ಆರೋಪಿಸಲಾಗಿದ್ದು, ಇದೇ ಸೆಪ್ಟೆಂಬರ್ 15ರಂದು ಬಂಧಿಸಿದ್ದಾರೆ. ಡ್ರಗ್ಸ್ (Drug) ಸೇವಿಸಿದ ಆರೋಪವೂ ಅವಳ ಮೇಲಿದೆ. 12 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. 40 ಲಕ್ಷ ರೂ.ಗಳನ್ನು ಪಾವತಿಸಿದ ನಂತರ, ಲಿಯಾಳನ್ನು ಸೆಪ್ಟೆಂಬರ್ 17 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ಜೆಂಟ್ರಿ ಪೊಲೀಸರು (Police) ಹೇಳುವಂತೆ, 2010ರ ಘಟನೆಯ ಮೇಲೆ ಲಿಯಾಳನ್ನು ಬಂಧಿಸಲಾಯಿತು. ಆಗ ಈಕೆ 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ, ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದರು ಎನ್ನಲಾಗಿದ್ದು, ಇದೀಗ ಈ ವಿಷಯ ಬಹಿರಂಗವಾಗಿದೆ. ಇದನ್ನೂ ಓದಿ: ಜನಪ್ರಿಯ ಬಲೂನ್ ಆಕ್ಟ್ ಕಲಾವಿದ ಶರವಣ ಧನಪಾಲ್ ನಿಧನ

    ಲಿಯಾ ಕ್ವೀನ್ (Leah Queen) ಕಳೆದ 20 ವರ್ಷಗಳಿಂದಲೂ ಜೆಂಟ್ರಿ ಶಾಲೆಯಲ್ಲಿ ಕೆಲಸ ಮಾಡಿದ್ದ ಲಿಯಾ ಟೀಚರ್ ಆಫ್ ದಿ ಇಯರ್ ಪ್ರಶಸ್ತಿಯನ್ನೂ ಪಡೆದಿದ್ದಳು. ಸದ್ಯ ಆಕೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

    ಏನಿದು ಪಿಟಿ ಟೀಚರ್ ಆಟ?
    ಬಾಸ್ಕೆಟ್ ಬಾಲದ ಆಟದ ಮೂಲಕ ವಿದ್ಯಾರ್ಥಿಯೊಂದಿಗೆ ಲಿಯಾ ಸ್ನೇಹ ಬೆಳೆಸಿದ್ದಳು. ಆ ಸಮಯದಲ್ಲಿ ಹುಡುಗನಿಗೆ 17 ವರ್ಷ ವಯಸ್ಸಾಗಿತ್ತು. ನಂತರ ಲಿಯಾ ಮತ್ತು ಹುಡುಗ ಶಾಲೆ ಬಿಟ್ಟ ನಂತರ ಹೊರಗಡೆಯೂ ಕಾಣಿಸಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಸಂವಹನ ನಡೆಸಿದ್ದರು. 2010ರ ಬೇಸಿಗೆ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಅವರು ಬಳಸಿಕೊಂಡಿದ್ದಳು. 17 ವರ್ಷದ ವಿದ್ಯಾರ್ಥಿಯನ್ನು ಲಿಯಾ ತಮ್ಮ ಶಾಲಾ ಕಚೇರಿಯ ಬಾತ್‌ರೂಮ್‌ನಲ್ಲಿ ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಂಡಿದ್ದಳು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

    ಅವಳಿ-ಜವಳಿ ಕಥೆ ಹೇಳಿ 2ನೇ ಮದುವೆಗೆ ಸಿದ್ಧನಾಗಿ ಪೊಲೀಸರ ಬಲೆಗೆ ಬಿದ್ದ

    ಚೆನ್ನೈ: ಅವಳಿ-ಜವಳಿ ಕಥೆ ಹೇಳಿ ಎರಡನೇ ಮದುವೆಯಾಗಲು ಹೋಗಿ ವರ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ಅರುಂಬಕ್ಕಂನ ವಾಲಾಂಡರ್ ಬೆನೆಟ್ ರಾಯನ್ ಎರಡನೇ ಮದುವೆಯಾಗಲು ಭರ್ಜರಿ ಪ್ಲ್ಯಾನ್ ರೂಪಿಸಿದ್ದ. ಅದು ಕೂಡ ಸಿನಿಮೀಯ ಶೈಲಿಯ ಡಬಲ್ ಆ್ಯಕ್ಟಿಂಗ್ ಮೂಲಕ ಎಂಬುದು ವಿಶೇಷ. ಆದರೆ ಈತ ಇದೀ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದನ್ನೂ ಓದಿ:  ದೇವರ ಪೂಜೆ ಬಿಟ್ಟು ಹೋಗಲ್ಲ, ತಾಲಿಬಾನ್ ಉಗ್ರರು ಕೊಂದ್ರೂ ಪರ್ವಾಗಿಲ್ಲ: ಅರ್ಚಕ

    ಆರೋಪಿ ರಾಯನ್‍ಗೆ ಈ ಹಿಂದೆಯೇ ಮದುವೆಯಾಗಿತ್ತು. ಈ ದಂಪತಿಗೆ ಒಂದು ಮಗು ಇದೆ. ಇದಾಗ್ಯೂ 30 ವರ್ಷದ ರಾಯನ್ ತನ್ನ ಸಹೋದ್ಯೋಗಿ 21 ವರ್ಷದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಪ್ರೇಮಕ್ಕೆ ತಿರುಗಿದೆ. ಆದರೆ ಮೊದಲ ಪತ್ನಿ ಹಾಗೂ ಮಗುವಿರುವ ವಿಷಯವನ್ನು ರಾಯನ್ ಆಕೆಯೊಂದಿಗೆ ಮರೆಮಾಚಿದ್ದ. ಅಲ್ಲದೆ ತನ್ನ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದನು. ನಿಶ್ಚಿತಾರ್ಥವನ್ನೂ ಯುವತಿಯ ಕುಟುಂಬದವರು ನಡೆಸಿಕೊಟ್ಟಿದ್ದರು. ಇದೇ ವೇಳೆ ರಾಯನ್ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಪಡೆದುಕೊಂಡಿದ್ದ. ತನ್ನ ಮೊದಲ ಮದುವೆ ವಿಚಾರ ಬಹಿರಂಗವಾದರೂ ಸಂಶಯ ಮೂಡದಂತೆ ಮಾಡಲು ತನಗೆ ಸಹೋದರನೊಬ್ಬನಿದ್ದಾನೆ ಎಂದು ಮೊದಲೇ ಕಥೆ ಕಟ್ಟಿದ್ದ.

    ನಾವಿಬ್ಬರೂ ಅವಳಿ-ಜವಳಿ ಎಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ್ದನು. ಈಗ ಅವನು ದುಬೈನಲ್ಲಿದ್ದಾನೆ ಎಂದು ತಿಳಿಸಿದ್ದ. ಅಷ್ಟೇ ಅಲ್ಲದೆ ಆಕೆಯನ್ನು ಮತ್ತಷ್ಟು ನಂಬಿಸಲು ಬೇರೊಂದು ಹೆಸರಿನಲ್ಲಿ ತನ್ನದೇ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರವನ್ನು ಸಿದ್ಧಪಡಿಸಿದ್ದನು. ಆದರೆ ಮದುವೆಗೆ ಇನ್ನೇನು ದಿನಗಳಿರುವಾಗ ಸಂಬಂಧಿಕರೊಬ್ಬರು ರಾಯನ್‍ಗೆ ಮದುವೆಯಾಗಿರುವ ವಿಚಾರವನ್ನು ಯುವತಿಗೆ ತಿಳಿಸಿದ್ದಾರೆ.

    ಇದರಿಂದ ಸಂಶಯಗೊಂಡ ಯುವತಿ ಪ್ರಶ್ನಿಸಿದಾಗ, ನಕಲಿ ದಾಖಲೆಗಳನ್ನು ಮುಂದಿಟ್ಟಿದ್ದಾನೆ. ಆದರೆ ಆತನ ನಡವಳಿಕೆ ಬಗ್ಗೆ ಮತ್ತಷ್ಟು ಅನುಮಾನಗೊಂಡ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾಳೆ. ಇದರಿಂದ ಕುಪಿತಗೊಂಡ ಆರೋಪಿ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯುವತಿಗೆ ತನ್ನ ಪ್ರಿಯಕರನ ಅಸಲಿಯತ್ತು ಗೊತ್ತಾಗಿದೆ. ಇದೀಗ ಮೋಸ ಹೋದ ಯುವತಿಯ ಕುಟುಂಬ ನೀಡಿದ ದೂರಿನಂತೆ ಅಡಿ ಪೊಲೀಸರು ರಯಾನ್ ಹಾಗೂ ಆತನ ತಾಯಿ ಸೆಲಿನಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ಮಗಳ ಮುಂದೆಯೇ ಮಹಿಳೆಗೆ ಕತ್ತರಿಯಿಂದ ಇರಿದು ಕೊಂದ ಪ್ರಿಯಕರ!

    ಮಗಳ ಮುಂದೆಯೇ ಮಹಿಳೆಗೆ ಕತ್ತರಿಯಿಂದ ಇರಿದು ಕೊಂದ ಪ್ರಿಯಕರ!

    – ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಮಹಿಳೆ
    – ತೀವ್ರ ರಕ್ತಸ್ರಾವವಾಗಿ ಮಗಳ ಎದುರೇ ಉಸಿರು ನಿಲ್ಲಿಸಿದ್ಳು

    ಇಂದೋರ್: ಇಂದಿನ ಕಾಲದ ಯುವಕ-ಯುವತಿಯರು ಸೋಶಿಯಲ್ ಮೀಡಿಯಾಗೆ ಫುಲ್ ಅಡಿಕ್ಟ್ ಆಗಿ ಹೋಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರ ಕೈನಲ್ಲೂ ಒಂದಲ್ಲ ಒಂದು ಮೊಬೈಲ್ ಇದ್ದೇ ಇರುತ್ತದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರೊಂದಿಗೆ ಚಾಟಿಂಗ್, ಡೇಟಿಂಗ್ ಎಂದು ಲೋಕವನ್ನೇ ಮರೆತು ಹೋಗಿರುತ್ತಾರೆ. ಹೀಗೆ ಆನ್‍ಲೈನ್ ನಲ್ಲಿ ಶುರುವಾದ ಪ್ರೀತಿಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಪ್ರಿಯಾ ಅಗರ್‍ವಾಲ್(26) ಎಂಬ ಮಹಿಳೆಯೊಬ್ಬಳು ಪತಿ ಮತ್ತು ಮುದ್ದಾದ ಮಗಳೊಂದಿಗೆ ಇಂದೋರ್ ನಲ್ಲಿ ನೆಲೆಸಿದ್ದಳು. ಆದರೆ ಪ್ರಿಯಾ ಅಗರ್‍ವಾಲ್‍ಗೆ ಆನ್‍ಲೈನ್ ಮೂಲಕ ಕಳೆದ ವರ್ಷ ಸೌರಭ್ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಹೀಗೆ ಚಾಟ್ ಮಾಡುತ್ತಾ, ಮಾಡುತ್ತಾ ಒಬ್ಬರಿಗೊಬ್ಬರು ಬಹಳ ಆತ್ಮೀಯರಾದರು. ಇತ್ತೀಚೆಗೆ ಪ್ರಿಯಾ ಸೌರಭ್ ಜೊತೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸೌರಭ್, ಆಕೆಯನ್ನು ಭೇಟಿ ಮಾಡುವಂತೆ ಕರೆಸಿಕೊಂಡಿದ್ದಾನೆ.

    ಅಂತೆಯೇ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪ್ರಿಯಾ, ಆತನನ್ನು ಭೇಟಿ ಮಾಡಲು ಮಗಳೊಂದಿಗೆ ಗ್ಯಾನಶೀಲ ಸೂಪರ್ ಸಿಟಿ ಬಳಿ ಇರುವ ಖಾಲಿ ಜಾಗಕ್ಕೆ ಬಂದಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಮಾಡುತ್ತಾ ವಿಕೋಪಕ್ಕೆ ತಿರುಗಿ ಸೌರಭ್ ತನ್ನ ಬಳಿ ಇದ್ದ ಕತ್ತರಿಯಿಂದ ಆಕೆಯ ಮೇಲೆ ಎರಡು ಬಾರಿ ಚುಚ್ಚಿದ್ದಾನೆ. ಪರಿಣಾಮ ಮುಖ ಮತ್ತು ಕತ್ತಿಗೆ ಇರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಪ್ರಿಯಾಗೆ ರಕ್ತ ಹರಿಯಲು ಆರಂಭಿಸಿದೆ. ಮಗಳ ಮುಂದೆ ಉಸಿರಾಡಲು ಕೂಡ ಆಗದೇ ಪ್ರಿಯಾ ಸಮೀಪದಲ್ಲಿದ್ದ ಅಂಗಡಿ ಮುಂದೆ ಕುಸಿದಿದ್ದಾಳೆ. ಆದರೂ ಸೌರಭ್ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸ್ಕೂಟರ್ ಹತ್ತಿ ಆರಾಮವಾಗಿ ಸ್ಥಳದಿಂದ ಹೋಗುತ್ತಾನೆ. ಇನ್ನೂ ಈ ವೀಡಿಯೋ ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಧೋನಿ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದ್ರೂ ನಮ್ಮ ಸ್ನೇಹ ಮರೆತಿಲ್ಲ: ಆರ್‌ಪಿ ಸಿಂಗ್

    ಧೋನಿ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದ್ರೂ ನಮ್ಮ ಸ್ನೇಹ ಮರೆತಿಲ್ಲ: ಆರ್‌ಪಿ ಸಿಂಗ್

    – ತನ್ನ ಕ್ರಿಕೆಟ್ ಜೀವನದ ದುರಂತ ಕಥೆ ಬಿಚ್ಚಿಟ್ಟ ಸಿಂಗ್

    ನವದೆಹಲಿ: ಧೋನಿ ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ನಮ್ಮ ಸ್ನೇಹವನ್ನು ಮರೆತಿಲ್ಲ ಎಂದು ಭಾರತದ ಮಾಜಿ ವೇಗಿ ಆರ್‌ಪಿ ಸಿಂಗ್ ಅವರು ಮಾಜಿ ನಾಯಕನನ್ನು ಹಾಡಿ ಹೊಗಳಿದ್ದಾರೆ.

    ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿಯಾಗಿದ್ದ ಆರ್‌ಪಿ ಸಿಂಗ್ ಅವರು, ನಂತರ ಉತ್ತಮ ಪ್ರದರ್ಶನ ತೋರಿದರೂ ತಂಡದಿಂದ ಹೊರಗೆ ಉಳಿದರು. ಆದರೆ ಧೋನಿ ಅವರು ಭಾರತ ತಂಡದ ನಾಯಕನಾಗಿ ಯಶಸ್ಸು ಕಂಡರು ಆತ ನಮ್ಮ ಸ್ನೇಹವನ್ನು ಮರೆತಿಲ್ಲ. ಇಂದು ಕೂಡ ನಮ್ಮ ಜೊತೆ ಬಂದು ಸಮಯ ಕಳೆಯುತ್ತಾರೆ ಎಂದು ಸಿಂಗ್ ಹೇಳಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಆಕಾಶ್ ಚೋಪ್ರಾ ಅವರ ಜೊತೆ ಲೈವ್ ಚಾಟ್‍ಗೆ ಬಂದಿದ್ದ ಆರ್‌ಪಿ ಸಿಂಗ್, ನಾನು ಮತ್ತು ಧೋನಿ ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದೇವು. ನಂತರ ಆತ ಟೀಂ ಇಂಡಿಯಾದ ನಾಯಕನಾದ, ನಾನೂ ತಂಡದಿಂದ ಹೊರಗೆ ಉಳಿದೆ. ಆದರೆ ನಮ್ಮಿಬ್ಬರ ಗೆಳೆತನ ಮಾತ್ರ ಹಾಗೇ ಉಳಿದಿದೆ. ಈಗಲೂ ಕೂಡ ನಾವು ಜೊತೆಯಲ್ಲೇ ಹೊರಗೆ ಹೋಗುತ್ತೇವೆ. ಆದರೆ ನಮಗೆ ಕ್ರಿಕೆಟ್ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ ಎಂದು ಆರ್‌ಪಿ ಸಿಂಗ್ ತಿಳಿಸಿದ್ದಾರೆ.

    ಇದೇ ವೇಳೆ ಸಿಂಗ್ ನಾನು ಧೋನಿ ಬಳಿ ನಾನು ಭಾರತ ತಂಡದಲ್ಲಿ ಸತತವಾಗಿ ಆಡಲು ಏನೂ ಮಾಡಬೇಕು ಎಂದು ಕೇಳಿದ್ದೇನೆ. ಆದರೆ ಧೋನಿ ಸೂಕ್ತವಾದ ಉತ್ತರವನ್ನು ನೀಡಿಲ್ಲ. ನಾನು ಕೇಳಿದಾಗ ಧೋನಿ, ನೀನು ಕಷ್ಟಪಡುತ್ತಿದ್ದೀಯಾ ಆದರೆ ನಿನ್ನ ಬಳಿ ಲಕ್ ಇಲ್ಲ ಅಷ್ಟೇ ಎಂದು ಹೇಳುತ್ತಿದ್ದರು. ನನಗೂ ಕೂಡ ಧೋನಿ ಅವರ ಮಾತು ಸರಿ ಎನಿಸುತ್ತಿತ್ತು ಎಂದು ಆರ್‌ಪಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಆರ್‌ಪಿ ಸಿಂಗ್ ಅವರು 2005ರಲ್ಲಿ ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡಿದರು. ನಂತರ ಧೋನಿ ನಾಯಕತ್ವದಲ್ಲಿ 2007ರ ಟಿ-20 ವಿಶ್ವಕಪ್‍ನಲ್ಲಿ ಭಾರತದ ಪರವಾಗಿ ಅತೀ ಹೆಚ್ಚು ವಿಕೆಟ್ ಪಡೆದಿದ್ದರು. ಜೊತೆಗೆ ನಂತರ 2009ರಲ್ಲಿ ಐಪಿಎಲ್ ಗೆದ್ದ ಡೆಕ್ಕನ್ ಚಾರ್ಜಸ್ ತಂಡದಲ್ಲಿ ಆಡಿದ್ದರು. ಅಲ್ಲಿಯೂ ಕೂಡ ಐಪಿಎಲ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದು ಮಿಂಚಿದ್ದರು. ಇಷ್ಟಾದರೂ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನಗಳಿಸಲು ಆರ್‌ಪಿ ವಿಫಲರಾಗಿದ್ದರು.

    ಈ ವಿಚಾರವಾಗಿಯೂ ಲೈವ್‍ನಲ್ಲಿ ಮಾತನಾಡಿರುವ ಆರ್‌ಪಿ ಸಿಂಗ್, ನಾನು ಐಪಿಎಲ್ ಮತ್ತು ಟಿ-10 ವಿಶ್ವಕಪ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆಯಲಿಲ್ಲ. ಐಪಿಎಲ್‍ನ ಮೂರು ಅವೃತ್ತಿಯಲ್ಲಿ ನಾನು ಬೆಸ್ಟ್ ಬೌಲರ್ ಆಗಿದ್ದೆ. ಅದರೂ ನನಗೆ ಚಾನ್ಸ್ ಸಿಗಲಿಲ್ಲ. ಬಹುಶಃ ಆಯ್ಕೆಗಾರರಿಗೆ ಮತ್ತು ತಂಡದ ನಾಯಕನಿಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ ಅನಿಸುತ್ತದೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಭಾರತದ ಪರ 14 ಟೆಸ್ಟ್ ಮತ್ತು 58 ಏಕದಿನ ಪಂದ್ಯಗಳನ್ನು ಆಡಿದ್ದ ಆರ್‌ಪಿ ಸಿಂಗ್ ಟೆಸ್ಟ್ ನಲ್ಲಿ 40 ಮತ್ತು ಏಕದಿನದಲ್ಲಿ 69 ವಿಕೆಟ್ ಪಡೆದಿದ್ದರು. ಅಂತಯೇ 10 ಟಿ-20 ಪಂದ್ಯಗಳನ್ನು ಆಡಿದ್ದ ಸಿಂಗ್ ಅಲ್ಲಿಯೂ ಕೂಡ 15 ವಿಕೆಟ್ ಪಡೆದಿದ್ದರು. ಭಾರತ ಪರ 2011ರಲ್ಲಿ ಕೊನೆಯ ಪಂದ್ಯವನ್ನು ಆಡಿದ್ದ ಆರ್‌ಪಿ ಸಿಂಗ್ ಅವರು 2018ರಲ್ಲಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು.

  • ಹೆಣ್ಣು ಮಗುವಿಗೆ ಜನ್ಮ ನೀಡಿದ ದ್ರೌಪದಿ ಪಾತ್ರಧಾರಿ ಸ್ನೇಹ

    ಹೆಣ್ಣು ಮಗುವಿಗೆ ಜನ್ಮ ನೀಡಿದ ದ್ರೌಪದಿ ಪಾತ್ರಧಾರಿ ಸ್ನೇಹ

    ಚೆನ್ನೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ `ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಿದ ನಟಿ ಸ್ನೇಹ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ನಟಿ ಸ್ನೇಹ ಇಂದು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ನೇಹ ಹಾಗೂ ಅವರ ಪತಿ ಪ್ರಸನ್ನ ಅವರಿಗೆ ಇದು ಎರಡನೇ ಮಗುವಾಗಿದ್ದು, ಈ ವಿಷಯವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

     

    View this post on Instagram

     

    Its a girl❤❤

    A post shared by Sneha Prasanna (@realactress_sneha) on

    ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸ್ನೇಹ ಅವರು ಸಾಂಪ್ರದಾಯಿಕವಾಗಿ ತಮ್ಮ ಸೀಮಂತ ಕಾರ್ಯಕ್ರಮವನ್ನು ಮಾಡಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ನೇಹ ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

    ಮೇ 11, 2012ರಲ್ಲಿ ಸ್ನೇಹ ತಮ್ಮ ಗೆಳೆಯ ಪ್ರಸನ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2009ರಲ್ಲಿ ‘ಅಚಮಂಡು ಅಚಾಮುಂಡು’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ಬಳಿಕ ಇಬ್ಬರು ರಿಲೇಶಿನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ನಂತರ ಇಬ್ಬರು ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದರು.

    ಮದುವೆಯಾಗಿ ಮೂರು ವರ್ಷಗಳ ನಂತರ ಸ್ನೇಹ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ‘ವಿಹಾನ್’ ಎಂದು ನಾಮಕರಣ ಮಾಡಿದ್ದರು. ಈಗ ಸ್ನೇಹ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ.

  • ಲಿಂಕ್ಡ್‌ಇನ್‌ ಸ್ನೇಹಿತನಿಂದ ಮಹಿಳೆಗೆ 1 ಕೋಟಿ ರೂ. ಪಂಗನಾಮ

    ಲಿಂಕ್ಡ್‌ಇನ್‌ ಸ್ನೇಹಿತನಿಂದ ಮಹಿಳೆಗೆ 1 ಕೋಟಿ ರೂ. ಪಂಗನಾಮ

    ಹೈದರಾಬಾದ್: ಉದ್ಯೋಗಿಗಳ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ ಮೂಲಕ ಸ್ನೇಹಿತನಾಗಿದ್ದ ವ್ಯಕ್ತಿಯೋರ್ವ ಹೈದರಾಬಾದಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ 1 ಕೋಟಿ ರೂಪಾಯಿಗೂ ಅಧಿಕ ಹಣ ಪಡೆದು ಪಂಗನಾಮ ಹಾಕಿದ್ದಾನೆ.

    ಕಳೆದ ಮೇ ತಿಂಗಳಲ್ಲಿ ಲಿಂಕ್ಡ್‌ಇನ್‌ ಮೂಲಕ ಅನಾಮಿಕ ವ್ಯಕ್ತಿಯೊಂದಿಗೆ ವಂಚನೆಗೊಳಗಾದ ಮಹಿಳೆ ಸ್ನೇಹ ಬೆಳೆಸಿಕೊಂಡಿದ್ದರು. ಮೊದಲು ಲಿಂಕ್ಡ್‌ಇನ್‌ ಮೂಲಕ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಮಹಿಳೆ ಸ್ವೀಕರಿಸಿದರು. ತಾನು ಪೈಲಟ್, ಬ್ರಿಟಿಷ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಆರೋಪಿ ಮಹಿಳೆ ಜೊತೆ ಸ್ನೇಹ ಬೆಳೆಸಿದ್ದನು. ಕೆಲ ದಿನಗಳವರೆಗೆ ಚಾಟಿಂಗ್ ಮಾಡಿದ ಬಳಿಕ ಇಬ್ಬರು ತಮ್ಮ ಫೋನ್ ನಂಬರ್ ಹಂಚಿಕೊಂಡಿದ್ದರು. ಹೀಗೆ ಇಬ್ಬರ ನಡುವೆ ಸ್ನೇಹ ಗಟ್ಟಿಯಾಯ್ತು, ಚಾಂಟಿಂಗ್ ಕೂಡ ಹೆಚ್ಚಾಯಿತು.

    ಹೀಗೆ ಒಂದು ದಿನ ಆಕೆಗೆ ಐಫೋನ್, ರೊಲೆಕ್ಸ್ ವಾಚ್, ದುಬಾರಿ ಪರ್ಫ್ಯೂಮ್ ಗಳು ಮತ್ತು ಕೆಲ ಬ್ರಿಟನ್ ಕರೆನ್ಸಿಗಳನ್ನು ಗಿಫ್ಟ್ ಆಗಿ ಪಾರ್ಸೆಲ್ ಕಳುಹಿಸುತ್ತೇನೆ. ಅದಕ್ಕೆ ಮೊದಲು ಹಣ ಬೇಕು ಎಂದು ಸುಳ್ಳು ಹೇಳಿ ಆರೋಪಿ ಮಹಿಳೆಯಿಂದ 7 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದನು. ನಂತರ ಮತ್ತೆ ವಾಟ್ಸಾಪ್‍ನಲ್ಲಿ ಆರೋಪಿ ನನ್ನ ತಂದೆಗೆ ಕ್ಯಾನ್ಸರ್ ಇದೆ ಆಸ್ಪತ್ರೆಯಲ್ಲಿದ್ದಾರೆ, ತುರ್ತಾಗಿ ಹಣ ಬೇಕಿತ್ತು ಎಂದು ಮಹಿಳೆ ಬಳಿ ಸಹಾಯ ಕೋರಿದ್ದ. ಆತನ ಮಾತನ್ನು ನಂಬಿ ಮಹಿಳೆ 11 ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 94 ಲಕ್ಷ ರೂಪಾಯಿ ವರ್ಗಾಯಿಸಿದ್ದರು.

    ಬಳಿಕ ಆರೋಪಿ ಮಹಿಳೆಗೆ ಸಂಪರ್ಕಿಸಿಲ್ಲ. ಅಷ್ಟೇ ಅಲ್ಲದೆ ಹಲವು ದಿನಗಳು ಕಳೆದರೂ ಮಹಿಳೆಗೆ ಯಾವುದೇ ಪಾರ್ಸೆಲ್ ಬಂದಿರಲಿಲ್ಲ. ಆಗ ಆಕೆಗೆ ತಾನು ಮೋಸ ಹೋಗಿರುವುದು ಅರಿವಾಗಿ, ಸೈಬರ್ ಕ್ರೈಂ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಹಿಂದೂ ಯುವಕ ಮುಸ್ಲಿಂ ಯುವತಿಯರ ಜೊತೆ ಇದ್ದಿದ್ದಕ್ಕೆ ಥಳಿತ!

    ಹಿಂದೂ ಯುವಕ ಮುಸ್ಲಿಂ ಯುವತಿಯರ ಜೊತೆ ಇದ್ದಿದ್ದಕ್ಕೆ ಥಳಿತ!

    – ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗೂಂಡಾಗಿರಿ
    – 20 ಮುಸ್ಲಿಂ ಯುವಕರ ವಿರುದ್ಧ ಎಫ್‍ಐಆರ್ ದಾಖಲು

    ಮಂಡ್ಯ: ಹಿಂದೂ ಯುವಕ ತನ್ನ ಕಾಲೇಜಿನ ಮುಸ್ಲಿಂ ಸ್ನೇಹಿತೆಯರ ಜೊತೆ ಇದ್ದ ಎಂಬ ಕಾರಣಕ್ಕೆ ಮುಸ್ಲಿಂ ಯುವಕರು ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ್ದಾರೆ. ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

    ಮಂಡ್ಯದ ನಾಗಮಂಗಲ ತಾಲೂಕಿನ ನೆಲ್ಲಿಗೆರೆ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಅ. 9ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಗಮಂಗಲದ ಪದವಿ ಕಾಲೇಜುವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಶಾಂತ್ ಮೇಲೆ 20 ಮಂದಿ ಮುಸ್ಲಿಂ ಯುವಕರು ಹಲ್ಲೆ ನಡೆಸಿ, ನೈತಿಕ ಪೊಲೀಸ್‍ಗಿರಿ ಪ್ರದರ್ಶಿಸಿದ್ದಾರೆ. ತನ್ನ ಕಾಲೇಜಿನ ಮುಸ್ಲಿಂ ಯುವಕ-ಯುವತಿಯರ ಜೊತೆ ಪ್ರಶಾಂತ್ ಸ್ನೇಹ ಬೆಳೆಸಿದ್ದನು. ಹೀಗೆ ಅ. 9ರಂದು ಪ್ರಶಾಂತ್ ಓರ್ವ ಹಿಂದೂ ಯುವತಿ ಸೇರಿ ಮೂವರು ಗೆಳತಿಯರ ಜೊತೆ ಒಂದೇ ಕಾರಿನಲ್ಲಿ ತೆರಳುತ್ತಿದ್ದನು. ಅವರಲ್ಲಿ ಇಬ್ಬರು ಮುಸ್ಲಿಂ ಯುವತಿಯರೂ ಇದ್ದರು. ಇದನ್ನು ಕಂಡ ಆರೋಪಿ ಇದ್ರಿಷ್ ಮತ್ತು 20 ಮಂದಿ ಮುಸ್ಲಿಂ ಯುವಕರು ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.

    ಮುಸ್ಲಿಂ ಯುವತಿಯೊಂದಿಗೆ ಯಾಕೆ ಇದ್ದೀಯಾ ಎಂದು ಪ್ರಶಾಂತ್‍ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಎಲ್ಲರೂ ಸೇರಿಕೊಂಡು ಪ್ರಶಾಂತ್ ಮತ್ತು ಮುಸ್ಲಿಂ ಯವತಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ಬಳಿಕ ಹಿಂದೂ ಯುವಕನಿಗೆ ಹೊಡೆದಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ.

    ವಿಡಿಯೋದಲ್ಲಿ ನಾವೆಲ್ಲ ಸ್ನೇಹಿತರು ನಮ್ಮನ್ನ ಬಿಟ್ಟುಬಿಡಿ ಎಂದು ಪ್ರಶಾಂತ್ ಹಾಗೂ ಯುವತಿ ಬೇಡಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ವಿದ್ಯಾರ್ಥಿಗಳು ಎಷ್ಟೇ ಬೇಡಿಕೊಂಡರೂ ಬಿಡದೇ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಹೀಗೆ ನೈತಿಕ ಪೋಲಿಸ್ ಗೂಂಡಾಗಿರಿ ನಡೆಸಿರುವ ವಿಡಿಯೋ ವೈರಲ್ ಆದ ಬಳಿಕ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ವೇಳೆ ತಮ್ಮ ಕಾಲೇಜಿನ ಮುಸ್ಲಿಂ ಪ್ರೇಮಿಗಳಿಗೆ ಸಹಾಯ ಮಾಡಲು ಕಾರಿನಲ್ಲಿ ಸ್ನೇಹಿತರೆಲ್ಲ ತೆರಳುತ್ತಿದ್ದೆವು ಈ ವೇಳೆ ಘಟನೆ ನಡೆದಿದೆ ಎಂದು ಪ್ರಶಾಂತ್ ಹಾಗೂ ಮುಸ್ಲಿಂ ಯುವತಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಎಸ್‍ಎಸ್‍ಪಿ ಶೋಭರಾಣಿ ತನಿಖೆ ಕೈಗೊಂಡಿದ್ದು, ಆರೋಪಿ ಇದ್ರಿಷ್ ಸೇರಿ 20 ಜನರ ವಿರುದ್ಧ ಎಫ್‍ಐಆರ್ ದಾಖಲು ಮಾಡಿ, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=awDAVE6wU1Y