Tag: ಸ್ತ್ರೀ

  • ಸ್ತ್ರೀಯರಿಗೆ ಕಾಡುತ್ತಿದೆ PCOD ಸಮಸ್ಯೆ – ಲಕ್ಷಣ ಏನು? ಆಹಾರ ಕ್ರಮ ಹೇಗಿರಬೇಕು?

    ಸ್ತ್ರೀಯರಿಗೆ ಕಾಡುತ್ತಿದೆ PCOD ಸಮಸ್ಯೆ – ಲಕ್ಷಣ ಏನು? ಆಹಾರ ಕ್ರಮ ಹೇಗಿರಬೇಕು?

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಿಂದ ಸ್ತ್ರೀಯರು (Women) ತಮ್ಮ ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯೌವನದಿಂದ ವೃದ್ಧಾಪ್ಯದವರೆಗೂ ಹೆಣ್ಣು ಹಲವಾರು ಬದಲಾವಣೆಗಳಿಗೆ ಒಳಗಾಗುತ್ತಾಳೆ. ಅದರ ಹಿಂದೆ ಇರುವುದೇ ಹಾರ್ಮೋನ್ (Hormones). ಈ ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾದರೆ ಒಂದರ ಹಿಂದೊಂದು ಸಮಸ್ಯೆಯ ಸುಳಿಗೆ ಹೆಣ್ಣು ಸಿಲುಕಿ ಒದ್ದಾಡುತ್ತಾಳೆ.

    ಹೌದು. ಇತ್ತೀಚಿನ ದಿನಗಳಲ್ಲಿ ಹರೆಯದ ಹೆಣ್ಣುಮಕ್ಕಳನ್ನು ಬಾಧಿಸುತ್ತಿರುವ ಸಮಸ್ಯೆಗಳಲ್ಲಿ ಪಿಸಿಓಡಿ ಕೂಡ ಒಂದು. ಅಪರಿಪಕ್ವವಾದ ಅಂಡಾಣು ಗರ್ಭಾಶಯದ ಎರಡೂ ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿಸಿಓಡಿ ಎಂದು ಕರೆಯುತ್ತಾರೆ.

    ಏನಿದು ಪಿಸಿಓಡಿ?: ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (PCOD) ಒಂದು ಹಾರ್ಮೋನ್ ಸ್ಥಿತಿ. ಹಾರ್ಮೋನುಗಳ ಅಸಮತೋಲನದಿಂದಾಗಿ ಪಿಸಿಓಡಿ ಕಂಡುಬರುತ್ತದೆ. ಇದು ಹೆರಿಗೆಯ ವಯಸ್ಸಿನ ಅಂದರೆ 12 ರಿಂದ 45 ವರ್ಷದವರೆಗಿನ ಸುಮಾರು 5 ರಿಂದ 10% ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಇದು ಸುಮಾರು 9% ರಿಂದ 22% ಭಾರತೀಯ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಚೀನಾ ಮತ್ತು ಶ್ರೀಲಂಕಾದಲ್ಲಿ ಈ ಸಂಖ್ಯೆಗಳು 2% ರಿಂದ 7% ರಷ್ಟಿವೆ. ಪಿಸಿಓಡಿ, ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (PCOS) ಎಂದೂ ಸಹ ಕರೆಯಲ್ಪಡುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಮಧುಮೇಹ, ಸ್ಥೂಲಕಾಯತೆ, ಹೃದ್ರೋಗಗಳು ಮತ್ತು ಅಧಿಕ ಕೊಲೆಸ್ಟ್ರಾಲ್‍ನಂತಹ ಹೆಚ್ಚಿನ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು.

    ಸಾಮಾನ್ಯವಾಗಿ ಮಹಿಳೆಯರಲ್ಲಿ 28-30 ದಿನಗಳ ಅವಧಿಗೊಮ್ಮೆ ಋತುಚಕ್ರವಾಗುವುದನ್ನು ಕಾಣಬಹುದು. ಮುಟ್ಟಾದ 11-14 ನೇ ದಿನಗಳ ಮಧ್ಯೆ ಯಾವುದಾದರು ಅಂಡಕೋಶದಿಂದ ಅಂಡಾಣುವು ಬಿಡುಗಡೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಬಲ ಅಥವಾ ಎಡ ಅಂಡಾಶಯದಿಂದ ಒಂದು ಅಂಡಾಣು ಬಿಡುಗಡೆಯಾಗುತ್ತಿರುತ್ತದೆ ಮತ್ತು ಗರ್ಭ ಧರಿಸಲು ಸಿದ್ಧವಾಗಿರುತ್ತದೆ. ಆದರೆ ಯಾರಲ್ಲಿ ಪಿಸಿಒಡಿ ಸಮಸ್ಯೆ ಇರುತ್ತದೋ ಅವರಲ್ಲಿ ಅಂಡಕೋಶದಿಂದ ಅಂಡಾಣುಗಳು ಬಿಡುಗಡೆಯಾಗದೇ ಅಲ್ಲಿಯೇ ಅಪರಿಪಕ್ವವಾದ ಅಂಡಾಣುಗಳು ನೀರಿನ ಗುಳ್ಳೆಗಳಂತೆ ಅಂಡಕೋಶದ ಒಳ ಪದರ ಮೇಲೆ ಉಳಿದು ಹೋಗುತ್ತದೆ.

     

    ಲಕ್ಷಣಗಳು: ಪ್ರತಿ ತಿಂಗಳ ಋತುಚಕ್ರದಲ್ಲಿ ಏರುಪೇರು ಉಂಟಾಗುತ್ತದೆ. ಋತುಚಕ್ರ ಸರಿಯಾಗಿ ಆದರೂ ಅಂಡಾಣುಗಳು ಅಂಡಕೋಶದಿಂದ ಬಿಡುಗಡೆಯಾಗದಿರುವುದು. ಸಾಮಾನ್ಯವಾಗಿ ಋತುಚಕ್ರದ ಸಂದರ್ಭದಲ್ಲಿ 4-5 ದಿನ ರಕ್ತಸ್ರಾವ ಆಗುತ್ತದೆ. ಆದರೆ ಇಲ್ಲಿ ರಕ್ತಸ್ರಾವು ಹೆಚ್ಚಿನ ದಿನಗಳವರೆಗೆ ಇರುವುದು. ಎರಡು ಋತುಚಕ್ರದ ಮಧ್ಯೆ ಮತ್ತೆ ರಕ್ತಸ್ರಾವ ಕಾಣಿಸಿಕೊಳ್ಳುವುದು. ಋತುಚಕ್ರ ಕಾಣಿಸಿಕೊಂಡಾಗ ಅತಿ ತೀವ್ರವಾದ ನೋವು ಕಾಣಿಸಿಕೊಳ್ಳುವುದು. ಈ ಸಮಸ್ಯೆ ಇರುವ ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಕೂಡ ತೊಡಕು ಉಂಟಾಗುವುದು.

    ಬಹಳ ತಿಂಗಳಾದರೂ ಋತುಚಕ್ರ ಕಾಣಿಸಿಕೊಳ್ಳದಿರುವುದು. ತೂಕ ಹೆಚ್ಚಾಗುವುದು, ಕೂದಲು ಉದುರುವುದು, ಮುಖದ ಮೇಲೆ, ಶರೀರದ ಮೇಲೆ ಅಧಿಕವಾಗಿ ಕೂದಲು ಕಾಣಿಸಿಕೊಳ್ಳುವುದು ಹಾಗೂ ಬಂಜೆತನ ಇವು ಪಿಸಿಓಡಿ ಲಕ್ಷಣಗಳಾಗಿವೆ.

    ಪಿಸಿಓಡಿ ಬರಲು ಕಾರಣಗಳೇನು?: ಹಾರ್ಮೋನ್ ಅಸಮತೋಲನ, ಅಸಮರ್ಪಕ ಜೀವನಶೈಲಿ, ಅಧಿಕ ಒತ್ತಡ, ವ್ಯಾಯಾಮದ ಕೊರತೆ ಹಾಗೂ ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ತಿನ್ನುವುದು ಕೂಡ ಪಿಸಿಓಡಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿರುತ್ತದೆ.

    ಮುಂಜಾಗ್ರತೆ ಏನು?: ಜೀವನ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು. ಸರಿಯಾದ ವ್ಯಾಯಾಮದಿಂದ ಹಾರ್ಮೋನ್‍ಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಹಾಗೂ ಸಮತೋಲನ ಆಹಾರ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರ ಉಳಿದುಕೊಳ್ಳಬಹುದು.

    ಆಹಾರ ಕ್ರಮ ಹೇಗಿರಬೇಕು?: ನೈಸರ್ಗಿಕ, ಸಂಸ್ಕರಿಸದ ಆಹಾರ, ಪಾಲಕ್, ಕೇಲ್ ಮತ್ತು ಇತರ ಎಲೆಗಳ ತರಕಾರಿಗಳು, ಬ್ರೊಕೊಲಿ ಮತ್ತು ಹೂಕೋಸು, ಬೀಜಗಳು ಮತ್ತು ದ್ವಿದಳ ಧಾನ್ಯಗಳು, ಮೀನು, ಕಾಳುಗಳನ್ನು ಸೇವಿಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೀರೋ ಮೇಕಪ್‍ನಲ್ಲಿ ಸಹಜ ಸುಂದರಿ ‘ಸ್ತ್ರೀ’ ಪಲ್ಲವಿ..!

    ಜೀರೋ ಮೇಕಪ್‍ನಲ್ಲಿ ಸಹಜ ಸುಂದರಿ ‘ಸ್ತ್ರೀ’ ಪಲ್ಲವಿ..!

    ಬೆಂಗಳೂರು: ಫೋಟೋಶೂಟ್ ಅಂದ್ರೆ ಇತ್ತೀಚಿನ ದಿನಗಳಲ್ಲಿ ಮಣಭಾರದ ಮೇಕಪ್ ಹಾಕಿಕೊಂಡು ಮಾಡ್ಬೇಕು ಅನ್ನೋ ಭಾವನೆ ಎಲ್ಲರದು. ಇದರ ನಡುವೆಯೇ ಕೆಲವರು ತೀರಾ ವಿಭಿನ್ನವಾಗಿ ನಿಲ್ಲುತ್ತಾರೆ. ಈ ಮೇಕಪ್, ಲಿಪ್‍ಸ್ಟಿಕ್ ಸಹವಾಸ ಇಲ್ಲದೆಯೂ ಫೋಟೋ ಶೂಟ್ ಮಾಡಿಸ್ಕೊಂಡು ನಾವು ಚೆನ್ನಾಗಿ ಕಾಣಿಸ್ಬಹುದು. ನ್ಯಾಚುರಲ್ ಲೈಟಲ್ಲಿ ಬೆಂಗಳೂರಿನ ಕೆಆರ್ ಮಾರ್ಕೆಟ್‍ನಲ್ಲಿ ಮಾಡಿಸಿದ ಈ ಫೋಟೋ ಶೂಟೊಂದು ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಾರಪ್ಪಾ ಈ ಸಹಜ ಸುಂದರಿ ಎಂದರೆ, ಈಕೆಯ ಹೆಸರು ಪಲ್ಲವಿ ರಾಜು. ಈಗಾಗಲೇ ಮಂತ್ರಂ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೊಂದಷ್ಟು ಫಿಲಂಗಳ ಸಾಲು ಸಾಲೇ ಇವರ ಮುಂದಿದೆ.

    ಯಾವುದೇ ಕೃತಕತೆಯಿಲ್ಲದ ಸಹಜ ಸುಂದರಿಯಾಗಿ ಕಾಣಿಸಿಕೊಂಡು ಮಾಡಿದ ಫೋಟೋಶೂಟ್‍ಗೆ ಪಲ್ಲವಿ ರಾಜು ಹೆಸರಿಟ್ಟಿದ್ದು ‘ಸ್ತ್ರೀ’. ಈ ಫೋಟೋ ನೋಡಿ ಅವರ ಫ್ರೆಂಡ್ಸ್, ಅಭಿಮಾನಿಗಳು ಯಾವ ಮೂವಿ ಫೋಟೋಶೂಟ್ ಇದು, ‘ಸ್ತ್ರೀ’ ಅನ್ನೋದು ನಿಮ್ಮ ಹೊಸ ಮೂವಿ ಹೆಸರಾ ಎಂದು ಕೇಳ್ತಿದ್ದಾರಂತೆ. ಈ ಫೋಟೋಶೂಟ್ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಲ್ಲವಿರಾಜು, ನಾನು ಹಿಂದೆ ಗ್ಲಾಮರ್ ಶೂಟ್ ಮಾಡಿದ್ದೆ, ಮಾಡರ್ನ್ ಶೂಟ್ ಮಾಡಿದ್ದೆ. ಆದರೆ ಹಲವಾರು ದಿನಗಳಿಂದ ಜೀರೋ ಮೇಕ್ ಅಪ್ ಶೂಟ್ ಮಾಡ್ಬೇಕು ಎಂಬ ಆಸೆಯಿತ್ತು.

    ಇದೇ ವೇಳೆ ಮಡಿಕೇರಿಯಲ್ಲಿ ಯುವತಿಯೊಬ್ಬಳು ಹೇರ್ ಸ್ಟ್ರೇಟನಿಂಗ್ ಮಾಡಿಸಲು ಹೋದ ಬಳಿಕ ಕೂದಲು ಉದುರಲು ಶುರುವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆಯಿತು. ಇದು ನನ್ನ ಮನಸಿನ ಮೇಲೆ ಪ್ರಭಾವ ಬೀರಿತು. ಹೀಗಾಗಿ ನಾನು ಮೇಕಪ್ ಯಾವುದೂ ಇಲ್ಲದೆಯೂ ನಾವು ಸುಂದರವಾಗಿ ಕಾಣಿಸಬಹುದು. ಮೇಕಪ್ ಇದ್ರೆ ಮಾತ್ರ ಜೀವನವಲ್ಲ. ಅದಿಲ್ಲದೆಯೂ ನಾವು ಸುಂದರವಾಗಿ ಕಾಣಿಸಬಹುದು ಎಂದು ಎಲ್ಲರಿಗೂ ತೋರಿಸಬೇಕಿತ್ತು. ಈ ವೇಳೆ ನನ್ನ ಮನಸಲ್ಲಿ ಬಂದಿದ್ದೇ ‘ಸ್ತ್ರೀ’ ಎಂಬ ಕಾನ್ಸೆಪ್ಟ್.

    ಈ ಕಾನ್ಸೆಪ್ಟನ್ನು ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಹಿಡಿದುಕೊಟ್ಟವರು ಫೋಟೋಗ್ರಾಫರ್ ಸತೀಶ್ ಗೋದಿಕಟ್ಟಿ. ಬೆಂಗಳೂರಿನ ಕೆಆರ್ ಮಾರ್ಕೆಟ್‍ನಲ್ಲಿ ನಾವು 4 ಜನ ಸೇರಿ ಈ ಫೋಟೋಶೂಟ್ ಮುಗಿಸಿದ್ವಿ. ಈ ಫೋಟೋ ನೋಡಿದ ಮೇಲೆ ಸಿನೆಮಾ ಮಾಡಬಹುದು ಎಂಬ ಆಫರ್‍ಗಳೂ ಬಂದಿವೆ. ನಗುವಿನ ಫೋಟೋ ಎಲ್ಲರ ಮನಸೆಳೆದಿದೆ. ಔಟರ್ ಅಪಿಯರೆನ್ಸ್ ಗಿಂತ ಜೀರೋ ಮೇಕಪ್‍ಗೆ ನಾವು ಹೆಚ್ಚು ಆದ್ಯತೆ ನೀಡಿದೆವು. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಫೋಟೋ ಚೆನ್ನಾಗಿ ಬಂದಿದೆ ಎಂದು ಹೇಳಿದರು ಪಲ್ಲವಿ ರಾಜು.

    ಪಲ್ಲವಿರಾಜುಗೆ ಚಿತ್ರರಂಗ ಹೊಸದಲ್ಲ. ಈಗಾಗಲೇ ಅವರು ‘ಮಂತ್ರಂ’ ಮೂವಿಯಲ್ಲಿ ನಟಿಸಿದ್ದಾರೆ. ಮೂವಿಯಲ್ಲೂ ನಾನು ರಿಯಾಲಿಟಿ ಹೆಚ್ಚಿರಲು ಟ್ರೈ ಮಾಡ್ತೀನಿ. ಇದುವರೆಗೆ ಕಮರ್ಷಿಯಲ್ ಫಿಲ್ಮ್ ಮಾಡಿಲ್ಲ ಎಂದ ಪಲ್ಲವಿರಾಜು ಈಗ ಫುಲ್ ಬ್ಯುಸಿಯಾಗಿದ್ದಾರೆ. ಇವರ ಅಭಿನಯದ ರವಿ ಹಿಸ್ಟರಿ ಎಂಬ ಸಿನೆಮಾ ಅಕ್ಟೋಬರ್ ಫಸ್ಟ್ ಅಥವಾ ಸೆಕೆಂಡ್ ವೀಕಲ್ಲಿ ರಿಲೀಸ್ ಆಗ್ತಿದೆ. ಈ ಸಿನೆಮಾದಲ್ಲಿ ನಾನು ಪೊಲೀಸ್ ಪಾತ್ರ ಮಾಡ್ತಾ ಇದೀನಿ.

    ಇನ್ನೊಂದು ಸಿನೆಮಾ ಸಾಲಿಗ್ರಾಮ ದೀಪಾವಳಿಗೆ ರಿಲೀಸ್ ಆಗುತ್ತಿದೆ. ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ಪ್ರತಾಪ್ ನಾರಾಯಣ್ ಇರುವ ‘ಉತ್ತಮರು’ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿಕ್ಸನ್ ಎಂಬ ಕನ್ನಡ, ತಮಿಳು ಭಾಷೆಯ ಮೂವಿಯಲ್ಲಿ ಆಕ್ಟ್ ಮಾಡ್ತಿದೀನಿ. ತಮಿಳಲ್ಲಿ ನಿಕ್ಸನ್ ನನ್ನ ಫಸ್ಟ್ ಮೂವಿ. ಇದರ ಸಾಂಗ್ ಶೂಟ್ ಬಾಕಿಯಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಇದರ ಚಿತ್ರೀಕರಣ ನಡೆಯಲಿದೆ. ರತ್ನ ಮಂಜರಿ ಎಂಬ ಮೂವಿ ಕೂಡಾ ಬರ್ತಾ ಇದೆ. ಎನ್‍ಆರ್ ಐ ಕನ್ನಡಿಗರು ಈ ಚಿತ್ರದ ಪವರ್. ಜೊತೆಗೆ ಯುಎಸ್ ಟೆಕ್ನೀಶಿಯನ್ ವರ್ಕ್ ಮಾಡ್ತಿದ್ದಾರೆ ಎಂದರು ಪಲ್ಲವಿ. ಸದ್ಯ ಸಹಜ ಸುಂದರಿಯಾಗಿ ಕಾಣಿಸಿರೋ ಪಲ್ಲವಿರಾಜು ಎಲ್ಲರ ಮನಸೆಳೆದಿರೋದಂತೂ ಸತ್ಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಶ್ರದ್ಧಾ ಕಪೂರ್, ರಾಜಕುಮಾರ್ ಸ್ತ್ರೀ ಭರ್ಜರಿ ಕಲೆಕ್ಷನ್: 2 ವಾರದಲ್ಲಿ ಎಷ್ಟು ಕಲೆಕ್ಷನ್?

    ಶ್ರದ್ಧಾ ಕಪೂರ್, ರಾಜಕುಮಾರ್ ಸ್ತ್ರೀ ಭರ್ಜರಿ ಕಲೆಕ್ಷನ್: 2 ವಾರದಲ್ಲಿ ಎಷ್ಟು ಕಲೆಕ್ಷನ್?

    ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹಾಗೂ ರಾಜ್‍ಕುಮಾರ್ ಅಭಿನಯದ ಸ್ತ್ರೀ ಸಿನಿಮಾ ಇದೀಗ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು ಎರಡೇ ವಾರದಲ್ಲಿ 82.29 ಕೋಟಿ ರೂ. ಹಣ ಸಂಗ್ರಹಿಸಿದೆ.

    ಎರಡು ವಾರದಲ್ಲಿ ಒಟ್ಟು 82.08 ಕೋಟಿ ರೂ. ಹಣ ಕಲೆಕ್ಷನ್ ಮಾಡಿದ್ದು, ನೂರು ಕೋಟಿ ಕಲೆಕ್ಷನ್‍ನತ್ತ ದಾಪುಗಾಲು ಇಡುತ್ತಿದೆ ಎಂದು ಚಲನ ಚಿತ್ರ ಮಾರುಕಟ್ಟೆ ವಿಶ್ಲೇಷಕ ತರುಣ್ ಅದರ್ಶ್ ಟ್ವೀಟ್ ಮಾಡಿದ್ದಾರೆ.

    ಮೊದಲ ವಾರದಲ್ಲಿ ಒಟ್ಟು 60.39 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸ್ತ್ರೀ ಎರಡನೇ ವಾರಾಂತ್ಯದಲ್ಲಿ ಒಟ್ಟು 21.90 ಕೋಟಿ ರೂ. ಶುಕ್ರವಾರ 4.39 ಕೋಟಿ ರೂ. ಶನಿವಾರ 7.63 ಕೋಟಿ ರೂ. ಮತ್ತು ಭಾನುವಾರ 9.88 ಕೋಟಿ ರೂ. ಒಟ್ಟು 82.29 ಕೋಟಿ ರೂ. ಪಡೆದು 100 ಕೋಟಿ ರೂ. ನತ್ತ ಹೆಜ್ಜೆ ಇಡುತ್ತಿದೆ.

    ಸ್ತ್ರೀ ಹಾರರ್ ಸಿನಿಮಾವಾಗಿದ್ದು, ಕಾಮಿಡಿಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ರಾಜ್‍ಕುಮಾರ್ ರಾವ್, ಶ್ರದ್ಧಾ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಪಂಕಜ್ ತ್ರಿಪಾಠಿ, ಅಪಾರಶಕ್ತಿ ಖುರಾನ ಮತ್ತು ಅಭಿಷೇಕ್ ಬ್ಯಾನರ್ಜಿ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

    ನಗರ ಪ್ರದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ನಾಳೆ ಬಾ (ದೆವ್ವ, ಭೂತ ಮನೆಯೊಳಗೆ ಪ್ರವೇಶಿಸುವುದನ್ನು ತಟ್ಟುವುದನ್ನು ಬಾಗಿಲ ಮೇಲೆ ಬರೆಯುವ) ನಂಬಿಕೆ ಕುರಿತ ಸಂಗತಿಗೆ ಈ ಚಿತ್ರದಲ್ಲಿ ಕಾಮಿಡಿ ಸ್ಪರ್ಶ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv