Tag: ಸ್ಟಿವ್ ಸ್ಮಿತ್

  • ಡಿಆರ್‌ಎಸ್‌ ತೆಗೆದುಕೊಳ್ಳದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ ಸ್ಮಿತ್‌

    ಡಿಆರ್‌ಎಸ್‌ ತೆಗೆದುಕೊಳ್ಳದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ ಸ್ಮಿತ್‌

    ಅಹಮದಾಬಾದ್‌: ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ (World Cup Cricket) ಆಸ್ಟ್ರೇಲಿಯಾದ (Australia) ಸ್ಟಿವ್‌ ಸ್ಮಿತ್‌ (Steve Smith) ಡಿಆರ್‌ಎಸ್‌ ತೆಗೆದುಕೊಳ್ಳದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ನಡೆದಿದ್ದಾರೆ.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಬುಮ್ರಾ (Jasprit Bumrah) ಎಸೆದ 7ನೇ ಓವರ್‌ನ ಕೊನೆಯ ಎಸೆತ ಪಿಚ್‌ಗೆ ಬಿದ್ದು ಸ್ಮಿತ್‌ ಪ್ಯಾಡ್‌ಗೆ ಬಡಿಯಿತು. ಬುಮ್ರಾ ವಿಶ್ವಾಸದಿಂದ ಎಲ್‌ಬಿಡಬ್ಲ್ಯೂಗೆ (LBW) ಮನವಿ ಮಾಡಿದ್ದು ಅಂಪೈರ್‌ ಔಟ್‌ ತೀರ್ಪು ನೀಡಿದರು.

    ಈ ವೇಳೆ ಸ್ಮಿತ್‌ ನಾನ್‌ ಸ್ಟ್ರೈಕ್‌ನಲ್ಲಿದ್ದ ಟ್ರಾವಿಸ್‌ ಹೆಡ್‌ ಬಳಿ ಡಿಆರ್‌ಎಸ್‌ (DRS) ಕೇಳಬೇಕಾ? ಬೇಡವಾ ಎಂಬುದರ ಬಗ್ಗೆ ಚರ್ಚೆ ನಡೆಸಿದರು. ಇದಕ್ಕೆ ಹೆಡ್‌ ಬೇಡ ಎಂಬರ್ಥದ ಸಿಗ್ನಲ್‌ ನೀಡಿದರು. ಹೆಡ್‌ ಕಡೆಯಿಂದ ಬೇಡ ಎಂಬ ಸಂದೇಶ ಬಂದ ಕೂಡಲೇ ಸ್ಮಿತ್‌ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು.

    ನಂತರ ರಿಪ್ಲೇ ನೋಡಿದಾಗ ಪಿಚ್ಚಿಂಗ್‌ ಔಟ್‌ಸೈಡ್‌ ಆಫ್‌ ಆಗಿದ್ದರೆ ಇಂಪ್ಯಾಕ್ಟ್‌ ಔಟ್‌ಸೈಡ್‌ ಇತ್ತು. ಒಂದು ವೇಳೆ ಡಿಆರ್‌ಎಸ್‌ ತೆಗೆದುಕೊಂಡಿದ್ದರೆ ಸ್ಮಿತ್‌ ಔಟಾಗುತ್ತಿರಲಿಲ್ಲ.

    ಸ್ಮಿತ್‌ 9 ಎಸೆತ ಎದುರಿಸಿ 4 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಡೇವಿಡ್‌ ವಾರ್ನರ್‌ 7 ರನ್‌, ಮಿಷೆಲ್‌ ಮಾರ್ಶ್‌ 15 ರನ್‌ಗಳಿಸಿ ಔಟಾಗಿದ್ದಾರೆ.

  • ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

    ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

    ಮುಂಬೈ: ಚೆಂಡು ವಿರೂಪಗೊಳಿಸುವ ಪ್ರಕರಣದಲ್ಲಿ ಸಿಲುಕಿ ಆಸೀಸ್ ತಂಡದ ನಾಯಕತ್ವ ಸ್ಥಾನ ಕಳೆದುಕೊಂಡಿದ್ದ ಸ್ಮಿತ್, ಇಂಡಿಯನ್ ಪ್ರೀಮಿಯರ್ ಲೀಗ್‍ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ಸ್ಥಾನವನ್ನು ಕಳೆದುಕೊಂಡಿದ್ದಾರೆ.

    ಈ ಕುರಿತು ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರು ಸ್ಪಷ್ಟನೆ ನೀಡಿದ್ದು, ಟೀಂ ಇಂಡಿಯಾ ಆಟಗಾರರ ರಹಾನೆ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿರುವುದಾಗಿ ತಿಳಿಸಿದ್ದಾರೆ.

    ಕೇಪ್‍ಟೌನ್‍ನಲ್ಲಿ ನಡೆದಿರುವ ಘಟನೆ ಕ್ರಿಕೆಟ್ ಪ್ರಪಂಚವನ್ನು ತಲ್ಲಣಗೊಳಿಸಿದೆ. ನಾವು ಬಿಸಿಸಿಐ, ಐಸಿಸಿ ಹಾಗೂ ಸ್ಮಿತ್ ರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಅಧಿಕಾರಿ ಝಬಿನ್ ಭರೂಚಾ ಮಾಹಿತಿ ನೀಡಿದ್ದಾರೆ.

    ತಂಡದ ಹಿತಾದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲು ತಯಾರಿ ನಡೆಸಲು ಇದು ಸಹಕಾರಿಯಾಗಿರುತ್ತದೆ. ಅಲ್ಲದೇ ನಮ್ಮ ತಂಡ ಕ್ರಿಕೆಟ್ ಮೌಲ್ಯ ಹಾಗೂ ಗೌರವವನ್ನು ಉಳಿಸಲು ಪ್ರಯತ್ನಿಸುತ್ತದೆ. ರಹಾನೆ ರಾಯಲ್ಸ್ ಕುಟುಂಬ ಸದಸ್ಯರಾಗಿದ್ದು, ತಂಡದ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅರಿತುಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ನೀತಿ ವಿರುದ್ಧ ಹರ್ಭಜನ್ ಕಿಡಿ

    ಐಪಿಎಲ್ ನಲ್ಲಿ ಫಿಕ್ಸಿಂಗ್ ಆರೋಪದಡಿ 2 ವರ್ಷ ನಿಷೇಧಕ್ಕೆ ಒಳಗಾಗಿದ್ದ ರಾಜಸ್ಥಾನ ರಾಯಲ್ಸ್ ತಂಡ 11ನೇ ಅವೃತ್ತಿಯ ಐಪಿಎಲ್‍ಗೆ ಕಮ್ ಬ್ಯಾಕ್ ಮಾಡಿತ್ತು. ಇನ್ನು 2008 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅಜಿಂಕ್ಯಾ ರಹಾನೆ, 2011 ರಿಂದ 2015 ರವರೆಗೆ ರಾಯಲ್ಸ್ ತಂಡದ ಪರ ಆಡಿದ್ದರು. ಇದನ್ನೂ ಓದಿ: ಚೆಂಡನ್ನು ವಿರೂಪಗೊಳಿಸಿದ್ದು ಯಾಕೆ? ಸ್ಪಿತ್ ಹೇಳಿದ್ದು ಏನು?