Tag: ಸ್ಟಾರ್ ಹೋಟೆಲ್

  • ಪ್ರವಾಸಕ್ಕೆ ಬಂದು ಸ್ಟಾರ್ ಹೋಟೆಲ್‍ನಲ್ಲಿ ಚಿನ್ನ ಕಳೆದುಕೊಂಡ ದಂಪತಿ

    ಪ್ರವಾಸಕ್ಕೆ ಬಂದು ಸ್ಟಾರ್ ಹೋಟೆಲ್‍ನಲ್ಲಿ ಚಿನ್ನ ಕಳೆದುಕೊಂಡ ದಂಪತಿ

    – ದಿಂಬಿನ ಬಳಿ ಇಟ್ಟಿದ್ದ 50 ಗ್ರಾಂ ಚಿನ್ನದ ಚೈನ್, ಎರಡು ಲಾಕೆಟ್ ಮಾಯ

    ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರವಾಸಕ್ಕೆ ಬಂದ ಗುಜರಾತ್ ದಂಪತಿಯ ಚಿನ್ನ ಕಳುವಾಗಿರುವ ಘಟನೆ ಅಶೋಕ ಹೋಟೆಲ್‍ನಲ್ಲಿ ನಡೆದಿದೆ.

    ಗುಜರಾತ್ ಕುಶಾಂಗ್ರ ಶರ್ಮ ದಂಪತಿ ಡಿಸೆಂಬರ್ 28 ರಂದು ದಿ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ತಂಗಿದ್ದರು. ರಾತ್ರಿ ಊಟಕ್ಕೆ ರೂಂನಿಂದ ಹೊರಬಂದಿದ್ದರು. ಈ ವೇಳೆ 50 ಗ್ರಾಂ ಚಿನ್ನದ ಚೈನ್, ಎರಡು ಲಾಕೆಟ್, ರುದ್ರಾಕ್ಷ ಚೈನ್ ಅನ್ನು ದಿಂಬಿನ ಬಳಿ ಇಟ್ಟು ಬಂದಿದ್ದರು. ಕತ್ತಲ್ಲಿ ಚೈನ್ ಇಲ್ಲದೆ ಇರುವುದು ಗಮನಕ್ಕೆ ಬರುತ್ತಿದ್ದಂತೆ ದಂಪತಿ ವಾಪಸ್ ರೂಂಗೆ ಹೋಗಿ ನೋಡಿದಾಗ, ಆಭರಣಗಳು ಕಳುವಾಗಿರುವುದು ಗೊತ್ತಾಗಿದೆ.

    ಹೋಟೆಲ್ ಮ್ಯಾನೇಜ್‍ಮೆಂಟ್‍ನವರ ಜೊತೆ ಇಡೀ ರೂಮ್ ಪೂರ್ತಿ ತಡಕಾಡಿದರೂ ಚಿನ್ನಾಭರಣ ಪತ್ತೆಯಾಗಿಲ್ಲ. ಹೀಗಾಗಿ ಕುಶಾಂಗ್ರ ಶರ್ಮ ಅಶೋಕ ಹೋಟೆಲ್ ಹೌಸ್ ಕೀಪಿಂಗ್ ಸಿಬ್ಬಂದಿ ಚಿನ್ನಾಭರಣ ಕದ್ದಿರಬಹುದು ಅಂತ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಸ್ಟಾರ್ ಹೋಟೆಲ್‍ಗಳಲ್ಲೇ ಈ ರೀತಿ ಆಗುತ್ತೆ ಅಂದ್ರೆ, ಬೇರೆ ಹೋಟೆಲ್‍ಗಳ ಕಥೆಯೇನು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಪೊಲೀಸರು ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

  • ಅತಿಥಿ ಗೃಹವಿದ್ರೂ ಸ್ಟಾರ್ ಹೋಟೆಲ್‍ಗಳಲ್ಲಿ ಗಣ್ಯರಿಗೆ ರೂಮ್ ಬುಕ್- 4 ವರ್ಷಗಳಲ್ಲಿ ಸರ್ಕಾರಕ್ಕೆ ಲಾಸ್ ಆಗಿದ್ದೆಷ್ಟು ಗೊತ್ತಾ?

    ಅತಿಥಿ ಗೃಹವಿದ್ರೂ ಸ್ಟಾರ್ ಹೋಟೆಲ್‍ಗಳಲ್ಲಿ ಗಣ್ಯರಿಗೆ ರೂಮ್ ಬುಕ್- 4 ವರ್ಷಗಳಲ್ಲಿ ಸರ್ಕಾರಕ್ಕೆ ಲಾಸ್ ಆಗಿದ್ದೆಷ್ಟು ಗೊತ್ತಾ?

    ಬೆಂಗಳೂರು: ರಾಜ್ಯಕ್ಕೆ ಬರೋ ಗಣ್ಯರಿಗೆಂದೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅದ್ಧೂರಿ ಅತಿಥಿ ಗೃಹವಿದೆ. ಆದ್ರೆ ಅಧಿಕಾರಿಗಳು ಮಾತ್ರ ಆ ಗೆಸ್ಟ್ ಹೌಸ್ ಬದಲಿಗೆ ಸ್ಟಾರ್ ಹೋಟೆಲ್‍ಗಳಲ್ಲೇ ಅತಿಥಿಗಳಿಗೆ ಸತ್ಕಾರ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟುಮಾಡ್ತಿದ್ದಾರೆ.

    ಕುಮಾರ ಕೃಪ ಅತಿಥಿ ಗೃಹ ರಾಜ್ಯಕ್ಕೆ ಆಗಮಿಸುವ ಗಣ್ಯರ ಆತಿಥ್ಯಕ್ಕೆಂದು ಸರ್ಕಾರ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಅದ್ಧೂರಿ ಗೆಸ್ಟ್‍ಹೌಸ್. ಅತ್ಯುತ್ತಮ ಸೌಕರ್ಯ ಹೊಂದಿರುವ ಈ ಅತಿಥಿ ಗೃಹದ ಉಪಯೋಗ ಮಾತ್ರ ಶೂನ್ಯ. ಯಾಕಂದ್ರೆ ನಮ್ಮ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸುವ ಗಣ್ಯರಿಗೆ ಸ್ಟಾರ್ ಹೋಟೆಲ್‍ಗಳನ್ನೇ ಬುಕ್ ಮಾಡ್ತಿದ್ದಾರೆ. ಇದರಿಂದಾಗಿ ಕಳೆದ 4 ವರ್ಷಗಳಲ್ಲಿ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವೃಥಾ ಖರ್ಚಾಗಿದೆ.

    ಕುಮಾರ ಕೃಪ ಅತಿಥಿ ಗೃಹದಲ್ಲಿ ಯಾವ ಸ್ಟಾರ್ ಹೋಟೆಲ್‍ಗಳಿಗೂ ಕಮ್ಮಿಯಿಲ್ಲದ 12 ವಿವಿಐಪಿ ರೂಂಗಳು ಇವೆ. 26 ಸಾಮಾನ್ಯ ರೂಂಗಳಿವೆ. ಆದ್ರೂ ತಾಜ್‍ವೆಸ್ಟ್ ಎಂಡ್, ದಿ ಕ್ಯಾಪಿಟಲ್, ಐಟಿಸಿ ಗಾರ್ಡೇನೀಯ, ಲಲಿತ ಮಹಲ್, ವಿಂಡ್ಸರ್ ಮ್ಯಾನರ್ ಸ್ಟಾರ್ ಹೋಟೆಲ್‍ಗಳಲ್ಲೇ ರೂಂ ಬುಕ್ ಮಾಡಿ, ಲಕ್ಷಾಂತರ ರೂಪಾಯಿ ಬಿಲ್ ಪಾವತಿಸಲಾಗಿದೆ. ಸಾಮಾಜಿಕ ಹೋರಾಟಗಾರ ಮರಿಲಿಂಗೇಗೌಡ ಮಾಲೀ ಪಾಟೀಲ್ ಆರ್‍ಟಿಐ ಅಡಿ ಈ ಎಲ್ಲಾ ಮಾಹಿತಿಯನ್ನ ಪಡೆದಿದ್ದಾರೆ.

    ಜೊತೆಗೆ ಅತಿಥಿಗೃಹದ ನಿರ್ವಹಣೆಗೂ ಕೋಟ್ಯಂತರ ರೂಪಾಯಿ ಹಣವನ್ನು ಸರ್ಕಾರ ವ್ಯಯಿಸುತ್ತಿದೆ. ಆದ್ರೂ ಅಧಿಕಾರಿಗಳು ದುಡ್ಡು ಹೊಡೆಯಲು ಗಣ್ಯರಿಗೆ ಸ್ಟಾರ್ ಹೋಟೆಲ್‍ಗಳಲ್ಲಿ ರೂಂ ಬುಕ್ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡ್ತಿದ್ದಾರೆ. ನಮ್ ತೆರಿಗೆ ದುಡ್ಡಲ್ಲಿ ಈ ತರಾದ ಶೋಕಿ ಎಷ್ಟು ಸರಿ ಅನ್ನೋದು ಜನಸಾಮಾನ್ಯರ ಪ್ರಶ್ನೆ.