Tag: ಸ್ಟಾರ್ ಸ್ಪೋಟ್ರ್ಸ್ ಕನ್ನಡ

  • ಜಂಟಲ್‍ಮನ್ ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ?

    ಜಂಟಲ್‍ಮನ್ ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ?

    – ಸ್ಟಾರ್ ಸ್ಪೋರ್ಟ್ಸ್ ಕನ್ನಡ ಟ್ವೀಟ್‍ಗೆ ಕನ್ನಡಿಗರು ಫಿದಾ

    ಬೆಂಗಳೂರು: ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ದಿನ ದಿನ ಹೊಸ ಕನ್ನಡ ಟ್ವೀಟ್‍ಗಳನ್ನು ಮಾಡುತ್ತಾ ಕನ್ನಡಿಗರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ.

    ಸ್ಟಾರ್ ಸ್ಪೋರ್ಟ್ಸ್ ವಾಹಿನಿಯೂ ಪ್ರಾದೇಶಿಕ ಭಾಷೆಯಲ್ಲಿ ಕ್ರೀಡೆಯನ್ನು ತೋರಿಸುವ ಮೂಲಕ ಭಾರತದಲ್ಲಿ ಜನಮನ್ನಣೆಗೆ ಪಾತ್ರವಾಗಿದೆ. ಈಗಾಗಲೇ ಕನ್ನಡ, ತಮಿಳು ಮುಂತಾದ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಕ್ರೀಡೆಯನ್ನು ಪ್ರಸಾರ ಮಾಡುತ್ತಿದೆ. ಅಂತಯೇ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಮಾಧ್ಯಮ ಕನ್ನಡದಲ್ಲೇ ಕ್ರೀಡೆಯನ್ನು ತೋರಿಸುವ ಮೂಲಕ ಎಲ್ಲರ ಮನಗೆದ್ದಿದೆ.

    ಈಗ ಮತ್ತೆ ಕನ್ನಡಿಗೆ ಮನಸ್ಸುನ್ನು ಗೆದ್ದಿರುವ ಸ್ಟಾರ್ ಕನ್ನಡ ವಾಹಿನಿ, ನಿನ್ನೆ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದ ಫೋಟೋ ಹಂಚಿಕೊಂಡು ಜಂಟಲ್‍ಮನ್ ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ ಎಂದು ಬರೆದು ರಾಜಸ್ಥಾನ್ ತಂಡದ ನಾಯಕ ಸ್ಟೀವ್ ಸ್ಮಿತ್ ಮತ್ತು ತೆವಾಟಿಯಾ ಅವರ ಫೋಟೋವನ್ನು ಶೇರ್ ಮಾಡಿದೆ. ಈ ಡೈಲಾಗ್ ಕನ್ನಡ ಸೂಪರ್ ಹಿಟ್ ಸಿನಿಮಾ ಸೂರ್ಯವಂಶ ಚಿತ್ರದ್ದಾಗಿದ್ದು, ಈ ದೃಶ್ಯದಲ್ಲಿ ಮುಖ್ಯಮಂತ್ರಿ ಚಂದ್ರು ಮತ್ತು ದೊಡ್ಡಣ್ಣ ಅಭಿನಯಿಸಿದ್ದಾರೆ.

    ಜಂಟಲ್‍ಮನ್ ಹಿಂಗೇ ಹೋದ್ರೆ ಪಾಂಡವಪುರ ಬರುತ್ತಾ ಎಂಬ ಟ್ವೀಟ್ ನೋಡಿ ಫುಲ್ ಖುಷಿಯಾದ ಕನ್ನಡಿಗರು, ಹಿಂಗೇ ಹೋದ್ರೆ ಪಾಂಡವಪುರ ಬರಲ್ಲ ಕೈ ನೋವು ಬರುತ್ತೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕಮೆಂಟ್ ಮಾಡಿ ಪಾಂಡವಪುರ ಯಾಕೆ ಬರುತ್ತದೆ. ಪಾಂಡವಪುರ ಚಕ್ರ ಇದೆಯಾ ಎಂದು ಹಾಸ್ಯಚಟಕಿ ಹಾರಿಸಿದ್ದಾರೆ. ಪಾಂಡವಪುರದವರು ಕಮೆಂಟ್ ಮಾಡಿ ಬನ್ನಿ ನಿಮ್ಮನ್ನು ಪಾಂಡವಪುರ ಸ್ವಾಗತಿಸುತ್ತೇವೆ ಎಂದಿದ್ದಾರೆ.

    ಈ ಹಿಂದೆಯೂ ಕೂಡ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದ ವಾಹಿನಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪೂರನ್ ಅವರ ಫೀಲ್ಡಿಂಗ್ ಮಾಡುತ್ತಿರುವ ಫೋಟೋವನ್ನು ಹಾಕಿ ನನ್ನ ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಸೇವ್ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ ಸ್ಟಾರ್ ಕನ್ನಡ ವಾಹಿನಿ, ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ (ಶೇ ಎಂಥ ಫೀಲ್ಡಿಂಗ್ ಮಾರಾಯರೇ) ಎಂದು ತುಳುವಿನಲ್ಲಿ ಬರೆದು ಟ್ವೀಟ್ ಮಾಡಿತ್ತು.

  • ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವಣ್ಣ – ಕ್ರಿಕೆಟ್ ಬಗ್ಗೆ ರಾಜ್ ಪುತ್ರನ ಮಾತು

    ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವಣ್ಣ – ಕ್ರಿಕೆಟ್ ಬಗ್ಗೆ ರಾಜ್ ಪುತ್ರನ ಮಾತು

    – ಧೋನಿಯನ್ನು ಹೊಗಳಿದ ಹ್ಯಾಟ್ರಿಕ್ ಹೀರೋ

    ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಟಗರಿಗೆ ಹೋಲಿಸಿದ್ದಾರೆ.

    ನಾಳೆಯಿಂದ ಐಪಿಎಲ್ ಹಂಗಾಮ ಆರಂಭವಾಗಲಿದೆ. ಐಪಿಎಲ್ ಆಡಲು ಆರ್‌ಸಿಬಿ ತಂಡ ಕೂಡ ಯುಎಇಯಲ್ಲಿ ಭರ್ಜರಿ ಸಿದ್ಧತೆ ನಡೆಸಿದೆ. ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ಬೆಂಗಳೂರು ತಂಡ ಕಾತುರದಿಂದ ಕಾಯುತ್ತಿದೆ. ಈ ಮಧ್ಯೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಮಾತನಾಡಿರುವ ಶಿವಣ್ಣ ಕೊಹ್ಲಿಯನ್ನು ಹೊಗಳಿದ್ದಾರೆ.

    ಮಾಜಿ ಕ್ರಿಕೆಟ್ ಆಟಗಾರ ಕನ್ನಡಿಗ ವಿಜಯ್ ಭಾರದ್ವಾಜ್ ಅವರ ಜೊತೆ ಶಿವಣ್ಣ ಮಾತನಾಡಿದ್ದಾರೆ. ಎನರ್ಜಿಗೆ ಇನ್ನೊಂದು ಹೆಸರು ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಸ್ಯಾಂಡಲ್‍ವುಡ್ ಟಗರು ಜೊತೆ ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಮಾತುಕತೆ ಎಂದು ಬರೆದು ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಿಡಿಯೋವನ್ನು ಶೇರ್ ಮಾಡಿದೆ.

    ಈ ವಿಡಿಯೋದಲ್ಲಿ ಮಾತನಾಡಿರುವ ಶಿವಣ್ಣ ಕ್ರಿಕೆಟ್ ಎಂಬುದು ಒಂದು ಟ್ರಿಕ್ಕಿ ಗೇಮ್. ಕ್ರಿಸ್ ಗೇಲ್ ಅವರು ಒಂದು ಸೀಸನ್‍ನಲ್ಲಿ ಹೊಡೆದು ಹೊಡೆದು ಸಿಕ್ಸ್ ಗೆ ಬೆಲೆಯೇ ಇಲ್ಲದಂತೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಒಂಥರ ಟಗರು ಇದ್ದಂತೆ, ಆ ಆಟಿಟ್ಯೂಡ್ ಅವರಿಗಿದೆ ಎಂದಿದ್ದಾರೆ. ಜೊತೆಗೆ ತಮ್ಮ ಕ್ರಿಕೆಟ್ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. ಧೋನಿ ನೋಡಲು ಮಾಸ್ ಆಗಿ ಕಾಣುತ್ತಾರೆ. ಆತನಲ್ಲಿ ಶಾಂತಿ ಮತ್ತು ಕ್ರಾಂತಿಯ ಗುಣಗಳು ಎರಡು ಇದೆ ಎಂದು ಹೇಳಿ ಹೊಗಳಿದರು.

    ಇದೇ ವೇಳೆ ಬೌಲರ್ ಗಳಲ್ಲಿ ಪಾಕಿಸ್ತಾನ ವಾಸಿಮ್ ಅಕ್ರಮ್ ಅವರನ್ನು ನೆನಪಿಸಿಕೊಂಡ ಶಿವಣ್ಣ, ಅವರು ಜಿಂಕೆ ರೀತಿಯಲ್ಲಿ ಓಡಿ ಬಂದು ಬೌಲ್ ಮಾಡುತ್ತಾರೆ. ಅವರ ಓಟದ ಶೈಲಿ ಬಹಳ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ನಮ್ಮ ಜೀವನ ಇಷ್ಟೇ ಎಂದು ಸಾಯಬಾರದು, ಹೋರಾಡಬೇಕು. ನಾನು ಯಾವತ್ತು ಇನ್ನೊಬ್ಬರನ್ನು ನೋಡಿ ಹೊಟ್ಟೆ ಉರಿದುಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.

    ಕಳೆದ ಮಾರ್ಚ್ ತಿಂಗಳಿನಲ್ಲೇ ಆರಂಭವಾಗಬೇಕಿದ್ದ ಐಪಿಎಲ್ ಕೊರೊನಾ ಕಾರಣದಿಂದ ನಾಳೆಯಿಂದ ಆರಂಭವಾಗುತ್ತದೆ. ನಾಳೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮೊದಲ ಪಂದ್ಯವನ್ನು ಆಡಲಿವೆ. ನಂತರ ನಮ್ಮ ಬೆಂಗಳೂರು ತಂಡ ಸೆಪ್ಟಂಬರ್ 21ಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ.