Tag: ಸೌಂದರ್ಯ ಜಗದೀಶ್

  • Interview- ಸ್ನೇಹಿತ್ ನಂತಹ ಮಗನ ಪಡೆಯೋಕೆ ಪುಣ್ಯ ಮಾಡಿದ್ದೀವಿ, ಅವನು ಚಿನ್ನ : ಸೌಂದರ್ಯ ಜಗದೀಶ್

    Interview- ಸ್ನೇಹಿತ್ ನಂತಹ ಮಗನ ಪಡೆಯೋಕೆ ಪುಣ್ಯ ಮಾಡಿದ್ದೀವಿ, ಅವನು ಚಿನ್ನ : ಸೌಂದರ್ಯ ಜಗದೀಶ್

    ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish)  ಅವರ ಮಗ, ನಟ ಸ್ನೇಹಿತ್ ಮೇಲೆ ಎರಡನೇ ಬಾರಿ ಎಫ್.ಐ.ಆರ್ (FIR) ದಾಖಲಾಗಿದೆ. ಅವರ ಮನೆ ಹತ್ತಿರದ ವ್ಯಕ್ತಿಗಳಿಂದಲೇ ಈ ರೀತಿ ಪದೇ ಪದೇ ದೂರು ದಾಖಲಾಗುತ್ತಿದೆ. ಸ್ನೇಹಿತ್  (Snehith) ಈ ಬಾರಿಯೂ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದದಿಂದ ಬೈದರು ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಮತ್ತೆ ದೂರು ದಾಖಲಾಗಿದೆ. ಈ ಕುರಿತು ಸೌಂದರ್ಯ ಜಗದೀಶ್ ಅವರು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

    ಪದೇ ಪದೇ ನಿಮ್ಮ ಮಗನೇ ಟಾರ್ಗೆಟ್ ಆಗ್ತಿರೋದು ಯಾಕೆ?

    ಅದು ನಮಗೂ ಕೂಡ ಗೊತ್ತಾಗುತ್ತಿಲ್ಲ. ಅವನು ಓದುತ್ತಿರುವ ಹುಡುಗ. ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದಾನೆ. ಅಂಥ ಹುಡುಗನ ಮೇಲೆ ಈ ರೀತಿ ಪದೇ ಪದೇ ದೂರು ನೀಡಿದರೆ, ಅವನ ಬಗ್ಗೆ ಸಮಾಜ ಏನನ್ನುಕೊಳ್ಳೋದು ಬೇಡ.  ಟಾರ್ಗೆಟ್ ಮಾಡುತ್ತಿರುವವರ ಉದ್ದೇಶ ಏನು ಅಂತಾನೇ ಅರ್ಥ ಆಗ್ತಿಲ್ಲ. ನನ್ನ ಮಗ ಒಳ್ಳೆಯವನು. ಅವನು ಯಾರ ತಂಟೆಗೂ ಹೋಗುವುದಿಲ್ಲ.

    ಸ್ನೇಹಿತ್ ಜೊತೆ ಬೌನ್ಸರ್ ಇರೋದು ಯಾಕೆ? ಅವರಿಗೆ ಜೀವ ಭಯ ಏನಾದರೂ ಇದೆಯಾ?

    ಅವನ ಜೊತೆ ಯಾವ ಬೌನ್ಸರೂ ಇರೋದಿಲ್ಲ. ರಕ್ಷಿತ್ ಅಂತ ಕಾರು ಡ್ರೈವರ್ ಇರ್ತಾನೆ. ರಕ್ಷಿತ್ ಇಲ್ಲದೇ ಇರೋ ವೇಳೆಯಲ್ಲಿ ಅವನೊಬ್ಬನೇ ಕಾಲೇಜಿಗೆ ಕಾರು ತಗೆದುಕೊಂಡು ಹೋಗುತ್ತಾನೆ. ಫ್ಯಾಮಿಲಿ ಎಲ್ಲಿಗಾದರೂ ಟ್ರೀಪ್ ಗೆ ಹೋದರೆ, ಮನೆಯಲ್ಲಿ ಕೆಲಸ ಮಾಡುವವರನ್ನೂ ಕರೆದುಕೊಂಡು ಹೋಗುತ್ತೇವೆ. ಈಗ ಅವನ ಜೊತೆ ಯಾರೂ ಇರುವುದಿಲ್ಲ. ಇದನ್ನೂ ಓದಿ:ಐಶ್ವರ್ಯ ಪಿಸ್ಸೆಗೆ ಐ ಲವ್‌ ಯೂ ಎಂದ ಸೈಕ್‌ ನವಾಜ್

     

    ಮಗನ ಮೇಲೆ ಎಫ್.ಐ.ಆರ್ ದಾಖಲೆ ಆದರೆ, ಅವರ ಭವಿಷ್ಯ ಹಾಳಾಗಲ್ವೆ?

    ನಮಗೂ ಅದೇ ಯೋಚನೆ. ಓದುವ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ದೂರು ದಾಖಲಿಸುವವರೂ ಯೋಚನೆ ಮಾಡಬೇಕು. ನಾವು ಯಾವತ್ತೂ ಒಬ್ಬರ ತಂಟೆಗೆ ಹೋದವರಲ್ಲ, ನಮ್ಮ ಮಗನನ್ನೂ ಹಾಗೆಯೇ ಬೆಳೆಸಿದ್ದೇವೆ. ಅವನಾಯಿತು, ಅವನ ಓದು, ಜಿಮ್ ಆಯಿತು ಅಷ್ಟೇ ಇರುವಂತಹ ಹುಡುಗ. ಅಂಥವನ ಮೇಲೆ ನಿರಂತರ ತೊಂದರೆ ಮಾಡಲಾಗುತ್ತಿದೆ. ಹೀಗೆ ಮಾಡಿದರೆ ಕಂಡಿತಾ ಭವಿಷ್ಯ ಹಾಳಾಗತ್ತೆ.

    ಒಂದು ವರ್ಷದ ಹಿಂದಿನ ಪ್ರಕರಣ ಏನಾಗಿದೆ?

    ಕೇಸ್ ನಡೆತಾ ಇದೆ. ಆದರೆ, ಈ  ಪ್ರಕರಣದಿಂದ ಸ್ನೇಹಿತ್ ಮತ್ತು ನನ್ನ ಪತ್ನಿಯನ್ನು ಕೈ ಬಿಡಲಾಗಿದೆ. ದೂರು ಕೊಟ್ಟವರೇ ಈ ಘಟನೆ ನಡೆದಾಗ ಸ್ನೇಹಿತ್ ಮತ್ತು ನನ್ನ ಪತ್ನಿ ಇರಲಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಬಿ ರಿಪೋರ್ಟ್‌ ಆಗಿದೆ.

     

    ಮಹಿಳೆ ನಿಂದನೆ ಮಾಡುವಂತಹ ಘಟನೆ ನಡೆದದ್ದು ಹೇಗೆ? ನಿಮ್ಮ ಗಮನಕ್ಕೆ ಬಂದಿದ್ದು ಯಾವಾಗ?

    ಸೆಪ್ಟೆಂಬರ್ 26 ರಂದು ನಮ್ಮ ಗಮನಕ್ಕೆ ಬಂತು. ವಿಷಯ ಕೇಳಿದ ತಕ್ಷಣವೇ ಶಾಕ್ ಆದೆ. ದೂರಿನಲ್ಲಿ ಬರೆದ ಅಂಶಗಳನ್ನು ನೋಡಿ ಅಸಹ್ಯ ಅನಿಸಿತು. ಇಷ್ಟೊಂದು ಕೆಳಮಟ್ಟಕ್ಕೆ ಅವರು ಇಳಿಯಬಾರದಿತ್ತು. ನನ್ನ ಮಗ ಯಾವತ್ತೂ ಅಂತ ಭಾಷೆಯನ್ನು ಬಳಸಲ್ಲ. ಮತ್ತು ಆ ಘಟನೆ ನಡೆದಾಗ ಅವನು ಆ ಸ್ಥಳದಲ್ಲೂ ಇರಲಿಲ್ಲ. ನನ್ನ ಮಗ ಎಲ್ಲಿದ್ದ ಅಂತ ಹೇಳೋದಕ್ಕೆ ನಮ್ಮ ಹತ್ತಿರ ವಿಡಿಯೋ ಸಾಕ್ಷಿಗಳಿವೆ.

     

    ಸ್ನೇಹಿತ್ ಈಗ ಏನ್ ಮಾಡ್ತಿದ್ದಾರೆ?

    ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾನೆ. ಅವನ ಪಾಡಿಗೆ ಅವನು ಓದಿಕೊಂಡು ಇದ್ದವನಿಗೆ ಈ ರೀತಿ ತೊಂದರೆ ಮಾಡುತ್ತಿದ್ದಾರೆ.

    ಮತ್ತೆ ಸಿನಿಮಾ ರಂಗಕ್ಕೆ ಬರುವ ತಯಾರಿ ಮಾಡ್ಕೋತಿದ್ದಾರಾ?

    ಓದು ಮುಗಿಯಲಿ ಅಂತ ಕಾಯುತ್ತಿದ್ದೇವೆ. ಇನ್ನೂ ಎರಡು ವರ್ಷ ಬಿಟ್ಟು ಸಿನಿಮಾ ರಂಗಕ್ಕೆ ನಾಯಕನಟನಾಗಿ  ಲಾಂಚ್ ಮಾಡುವ ಉದ್ದೇಶವಿದೆ. ಓದಿನ ಜೊತೆ ಜೊತೆಗೆ ಅವನು ನಟನಾಗಲು ಏನೆಲ್ಲ ತಯಾರಿ ಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ‘ಸೀರೆ ಬಿಚ್ಚಿ ಹೊಡಿತೀನಿ’ ಎಂದು ಮಹಿಳೆಗೆ ಅವಾಜ್: ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಕೇಸ್

    ‘ಸೀರೆ ಬಿಚ್ಚಿ ಹೊಡಿತೀನಿ’ ಎಂದು ಮಹಿಳೆಗೆ ಅವಾಜ್: ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಕೇಸ್

    ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagdish) ಅವರ ಪುತ್ರ, ಅಪ್ಪು ಪಪ್ಪು ಸಿನಿಮಾ ಖ್ಯಾತಿಯ ನಟ ಸ್ನೇಹಿತ್ (Snehith) ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ.  ಈ ಹಿಂದೆ ಎದುರು ಮನೆ ನಿವಾಸಿ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎನ್ನುವ ಕಾರಣಕ್ಕಾಗಿ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಹೊತ್ತು ಸ್ಟೇಶನ್ ಮೆಟ್ಟಿಲು ಹತ್ತಿದ್ದರು. ಇದೀಗ ಮತ್ತೆ ಮಹಿಳೆಯೊಬ್ಬರಿಗೆ ನಿಂದಿಸಿದ ಕಾರಣಕ್ಕಾಗಿ ಎಫ್.ಐ.ಆರ್ ದಾಖಲಾಗಿದೆ.

    ಸೆಪ್ಟಂಬರ್ 24 ರಂದು ಸ್ನೇಹಿತ್ ನ ಎದುರು ಮನೆಯ ಮಹಿಳೆ ಅನ್ನಪೂರ್ಣ (Annapurna)  ತನ್ನ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ತನ್ನ ಜಾಗ್ವಾರ್ (Jaguar) ಕಾರಿನಲ್ಲಿ  ಬಂದ ಸ್ನೇಹಿತ್, ಮಹಿಳೆಯ ಕಾರಿಗೆ ಡಿಕ್ಕಿ ಹೊಡೆಯುವಂತೆ ಬಂದು ಚಮಕ್ ಕೊಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಅನ್ನಪೂರ್ಣ ಮತ್ತು ಅವರ ಪತಿ ಈ ವಿಚಾರಕ್ಕೆ ಪ್ರಶ್ನಿಸಿದ್ದಾರೆ. ತನ್ನನ್ನು ಪ್ರಶ್ನಿಸಿದರು ಎನ್ನುವ ಕಾರಣಕ್ಕಾಗಿ ಕೋಪಗೊಂಡ ಸ್ನೇಹಿತ್ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:`ಜೂನಿಯರ್’ ಆಗಿ ಸಿನಿರಸಿಕರನ್ನು ಗೆಲ್ಲಲು ಬಂದ್ರು ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ

    ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದು, ಅನ್ನಪೂರ್ಣ ಗೆ ಸೀರೆ ಬಿಚ್ಚಿ ಹೊಡಿತಿನಿ, ಇಲ್ಲಿಂದ ಹೋಗ್ತಾ ಇರು ಅಂತಾ ಸ್ನೇಹಿತ್ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಮಹಿಳೆಯರ ಪತಿಗೆ ಕಾರಿನಲ್ಲೇ ಹಲ್ಲೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಈ‌ ಹಿಂದೆ ಕೂಡ ಮನೆ ಬಳಿ‌ ಕಾರು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಗಲಾಟೆ ನಡೆದು ಸ್ನೇಹಿತ್ ಮೇಲೆ ಎಫ್.ಐಆರ್ (FIR) ದಾಖಲಾಗಿತ್ತು. ನಿರ್ಮಾಪಕರೊಬ್ಬರ ಮಧ್ಯಸ್ಥಿಕೆಯಲ್ಲಿ ಪ್ರಕರಣ ರಾಜಿಯಾಗಿತ್ತು.  ಮನೆಯ ಮುಂಭಾಗ ಕಾರು ಕ್ಲೀನ್ ಮಾಡುವ ವೇಳೆ ಜಾತಿ ನಿಂದೆ ಮಾಡಿ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ ಅಂತಾ ಪ್ರತಿ ದೂರು ದಾಖಲಿಸಿದ್ದರು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಎರಡು ಕಡೆಯವರಿಂದ ದೂರು ದಾಖಲಾಗಿ ಆನಂತರ ರಾಜಿ ಮಾಡಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಜಾಮೀನು

    ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಜಾಮೀನು

    ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಪತ್ನಿ ರೇಖಾ ಜಗದೀಶ್, ಪುತ್ರ ಸ್ನೇಹಿತ್‍ಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

    ಕಸ ಹಾಕುವ ವಿಚಾರಕ್ಕೆ ಸೌಂದರ್ಯ ಜಗದೀಶ್ ಕುಟುಂಬಕ್ಕೂ ಹಾಗೂ ಮಾಜಿ ಮೇಯರ್ ಪುತ್ರಿ ಮಂಜುಳ ಪುರುಷೋತ್ತಮ ನಡುವೆ ಗಲಾಟೆ ನಡೆದಿದ್ದು, ಮಂಜುಳ ಪುರುಷೋತ್ತಮ್ ಅವರ ಮನೆ ಕೆಲಸದಾಕೆ ಅನುರಾಧ ಹಾಗೂ ಅವರ ತಾಯಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಸೌಂದರ್ಯ ಜಗದೀಶ್ ಕುಟುಂಬಸ್ಥರು, ಬೌನ್ಸರ್ ಸೇರಿ ಹಲ್ಲೆ ಮಾಡಿರುವುದಾಗಿ ಮಂಜುಳಾ ಪುರುಷೋತ್ತಮ್ ತಿಳಿಸಿದ್ದರು. ಹೀಗಾಗಿ ಕಸ ಗಲಾಟೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್

    ಪ್ರಕರಣ ಬಳಿಕ ನಾಪತ್ತೆ ಆಗಿದ್ದ ಆರೋಪಿಗಳು ಬಳಿಕ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 46ನೇ ಸಿಟಿ ಸಿವಿಲ್ ಕೋರ್ಟ್‍ನಿಂದ ರೇಖಾ ಜಗದೀಶ್, ಸ್ನೇಹಿತ್, ಅಲ್ಲದೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ನಿರೀಕ್ಷಣಾ ಜಾಮೀನು ದೊರೆತಿದೆ. ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವ ಕೋರ್ಟ್ 30 ದಿನಗಳೊಳಗಾಗಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

  • ಸೌಂದರ್ಯ ಜಗದೀಶ್ ಕುಟುಂಬಸ್ಥರಿಂದ ಹಲ್ಲೆ ಪ್ರಕರಣ- ಮನೆ ಸೆಕ್ಯೂರಿಟಿ ಗಾರ್ಡ್ ಅರೆಸ್ಟ್

    ಸೌಂದರ್ಯ ಜಗದೀಶ್ ಕುಟುಂಬಸ್ಥರಿಂದ ಹಲ್ಲೆ ಪ್ರಕರಣ- ಮನೆ ಸೆಕ್ಯೂರಿಟಿ ಗಾರ್ಡ್ ಅರೆಸ್ಟ್

    ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮನೆಯ ಸೆಕ್ಯೂರಿಟಿಯನ್ನು ಅರೆಸ್ಟ್ ಮಾಡಿದ್ದಾರೆ.

    ಬಾಲಾಜಿ ಅರೆಸ್ಟ್ ಆದ ಸೆಕ್ಯೂರಿಟಿ. ಮನೆಗೆ ನುಗ್ಗಿ ಹಲ್ಲೆ ನಡೆಸಲು ಪ್ರಚೋದನೆ ಮತ್ತು ಸಹಾಯದ ಹಿನ್ನೆಲೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸೆಕ್ಯೂರಿಟಿ ಬಾಲಾಜಿಯನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಕೇಸ್ – ಪತ್ನಿ ರೇಖಾ, ಪುತ್ರ ಸ್ನೇಹಿತ್‍ಗೆ ಪೊಲೀಸರಿಂದ ನೋಟಿಸ್

    ಇತ್ತ ಎಫ್‍ಐಆರ್ ದಾಖಲಾದರೂ ಆರೋಪಿಗಳು ನಾಪತ್ತೆಯಾಗಿದ್ದಾರೆ. ನಿರ್ಮಾಪಕನ ಕಿರಿಕ್ ಮಗ, ಪತ್ನಿ ಹಾಗೂ ಬೌನ್ಸರ್ ಗಳು ಇನ್ನೂ ಪೊಲಿಸರ ಕೈಗೆ ಸಿಕ್ಕಿಲ್ಲ. ಹೀಗಾಗಿ ಮಹಾಲಕ್ಷ್ಮೀ ಲೇ ಔಟ್ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ರಾತ್ರಿಯೆಲ್ಲಾ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕಳೆದ ರಾತ್ರಿ 1 ಗಂಟೆವರೆಗೂ ಬೌನ್ಸರ್ ಗಳ ಮನೆಯನ್ನು ಪೊಲೀಸರು ಜಾಲಾಡಿದ್ದಾರೆ. ಬಾಗಲಗುಂಟೆ, ಕೊಡಿಗೇಹಳ್ಳಿಯಲ್ಲಿ ಬೌನ್ಸರ್ ಮನೆ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಮನೆಗೆ ಹೋಗಿಲ್ಲ. ಬೌನ್ಸರ್ ಮನೆಯವರಿಂದ ಮಾಹಿತಿ ಪಡೆದಿದ್ದಾರೆ. ಆದರೆ ಮನೆಯಲ್ಲಿ ಬೌನ್ಸರ್ ಗಳು ಸಿಗದೇ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ಠಾಣೆ ಮೆಟ್ಟಿಲೇರಿದ ಕಸ ಫೈಟ್ – ಪ್ರೊಡ್ಯೂಸರ್ ಪುತ್ರ, ಪತ್ನಿ ವಿರುದ್ಧ FIR

    ಮಂಜುಳಾ ಪುರುಷೋತ್ತಮ್ ಅವರ ಕುಟುಂಬಕ್ಕೆ ಕ್ಷಮೆ ಕೇಳತ್ತೇನೆ. ಇನ್ನು ಮುಂದೆ ನಮ್ಮ ಮನೆ ಕೆಲಸದವರು ಮಂಜುಳ ಅವರ ಕೆಲಸದವರ ಜೊತೆ ಜಗಳವಾಡದಂತೆ ನೋಡಿ ಕೊಳ್ಳುತ್ತೇನೆ. ನನ್ನ ಮಗ ಸ್ನೇಹಿತ್ ಹಾಗೂ ಪತ್ನಿ ರೇಖಾ ಜಗಳ ಬಿಡಸಲು ಹೋಗಿದ್ದರು. ಅವರು ಯಾರ ಮೇಲೂ ಹಲ್ಲೆ ಮಾಡಲು ಹೋಗಿಲ್ಲ. ಈ ಘಟನೆಯಿಂದ ನಮ್ಮಿಬ್ಬರ ಕುಟುಂಬಕ್ಕೆ ಬಹಳ ನೋವಾಗಿದೆ. ಹೆಣ್ಣು ಮಗಳೊಬ್ಬಳಿಗೆ ಹಾಗೂ ಅವರ ತಾಯಿಗೆ ನೋವಾಗಿರುವ ವಿಷಯ ತಿಳಿದು ನನಗೆ ನೋವಾಗಿದೆ. ನಿರ್ಮಾಪಕ ಸೌಂದರ್ಯ ಜಗದೀಶ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

  • ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್- ಸಿಸಿಬಿ ವಿಚಾರಣೆಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಹಾಜರು

    ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್- ಸಿಸಿಬಿ ವಿಚಾರಣೆಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಹಾಜರು

    – ಸಿಸಿಬಿ ವಿಚಾರಣೆ ಎದುರಿಸಿದ ಕಾಂಗ್ರೆಸ್ ಪರಿಷತ್ ಸದಸ್ಯ ಪುತ್ರ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ನಿರ್ಮಾಪಕ ಸೌಂದರ್ಯ ಜಗದೀಶ್ ಮತ್ತು ಕಾಂಗ್ರೆಸ್ ಪರಿಷತ್ ಸದಸ್ಯ ಯುಬಿ ವೆಂಕಟೇಶ್ ಪುತ್ರ ವಿ.ಗಣೇಶ್ ರಾವ್ ಸಹ ಸಿಸಿಬಿ ವಿಚಾರಣೆಗೆ ಆಗಮಿಸಿದ್ದರು.

    ನೋಟಿಸ್ ಹಿನ್ನೆಲೆ ನಿರ್ಮಾಪಕ ಸೌಂದರ್ಯ ಜಗದೀಶ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೌಂದರ್ಯ ಜಗದೀಶ್ ಪತ್ನಿ, ಡ್ರಗ್ಸ್ ಪ್ರಕಜರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಪತಿ ನಿರ್ಮಾಣದ ರಾಮ್ ಲೀಲಾ ಚಿತ್ರದಲ್ಲಿ ನಟಿ ಸಂಜನಾ ಗಲ್ರಾನಿ ನಟಿಸಿದ್ದರು. ಸಿನಿಮಾದ ನಟನೆಗಾಗಿ ಸಂಜನಾಗೆ ನೀಡಿದ ಸಂಭಾವನೆ ಕೇಳಿದರು. ಸಂಜನಾಗೆ ಸಂಭಾವನೆ ಚೆಕ್ ಅಥವಾ ನಗದು ಮೂಲಕ ನೀಡಿದ್ರಾ ಎಂದು ಚಿತ್ರದ ಕುರಿತು ಮಾಹಿತಿ ಕೇಳಿದ್ದರು. ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ಸೌಂದರ್ಯ ಜಗದೀಶ್ ಬೆಂಗಳೂರಿನ ಓರಿಯನ್ ಮಾಲ್ ಬಳಿ ಜೆಟ್ ಲಾಗ್ ಹೆಸರಿನ ಪಬ್ ಹೊಂದಿದ್ದಾರೆ. ಈ ಪಬ್ ನಲ್ಲಿ ವೀರೇನ್ ಖನ್ನಾ ಮತ್ತು ವೈಭವ್ ಜೈನ್ ಪಾರ್ಟಿ ಆಯೋಜಿಸುತ್ತಿದ್ದರು ಎಂದು ತಿಳಿದು ಬಂದಿದೆ. ಜೆಟ್ ಲಾಗ್ ನಲ್ಲಿ ನಡೆದ ಪಾರ್ಟಿಗಳ ಮಾಹಿತಿ ಪಡೆದುಕೊಳ್ಳಲು ಸಿಸಿಬಿ ಸೌಂದರ್ಯ ಜಗದೀಶ್ ಅವರಿಗೆ ನೋಟಿಸ್ ನೀಡಿತ್ತು ಎಂದು ಮೂಲಗಳು ತಿಳಿಸಿವೆ. ಆದ್ರೆ ಸೌಂದರ್ಯ ಜಗದೀಶ್, ಜೆಟ್ ಲಾಗ್ ಕುರಿತು ಏನು ಕೇಳಿಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ಹೆಂಡ್ತಿಗೆ ಫೋನ್ ಮಾಡ್ಬೇಕು ಅಂತ ಲವ್ವರ್‌ಗೆ ಕಾಲ್ – ತಗ್ಲಾಕ್ಕೊಂಡ ವೈಭವ್

    ರಾಯಲ್ ಮೀನಾಕ್ಷಿ ಮಾಲ್ ಮಾಲೀಕರಾಗಿರುವ ವಿ.ಗಣೇಶ್ ರಾವ್ ತಮ್ಮ ಒಡೆತನದ ಫ್ಲ್ಯಾಟ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ಜೇಡ್ ಶ್ರೀ ಸುಬ್ರಮಣ್ಯ ಸೇರಿದಂತೆ ಹಲವರೊಂದಿಗೆ ಸೇರಿ ಗಣೇಶ್ ರಾವ್ ಪಾರ್ಟಿ ಆಯೋಜಿಸುತ್ತಿದ್ದರು. ಈಗಾಗಲೇ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಜೊತೆಯಲ್ಲಿಯೂ ಗಣೇಶ್ ರಾವ್ ಹಣಕಾಸಿನ ವ್ಯವಹಾರ ನಡೆಸಿದ್ದರು ಎಂಬ ಮಾಹಿತಿ ಸಿಸಿಬಿ ಲಭ್ಯವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ ಹಿನ್ನೆಲೆ ಗಣೇಶ್ ರಾವ್ ಇಂದು ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಗಣೇಶ್ ರಾವ್ ವಿಚಾರಣೆಗೆ ಅಂತ್ಯವಾಗಿದ್ದು, ಸಿಸಿಬಿ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜೈಲಿನಲ್ಲಿ ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!