Tag: ಸೋಮಶೇಖರ್ ರೆಡ್ಡಿ

  • ವಿಜಯನಗರ ಜಿಲ್ಲೆ ಅಧಿಕೃತ – ಭೂಮಿ ತಾಯಿಗೆ ನಮಸ್ಕರಿಸಿದ ಸಚಿವ ಆನಂದ್ ಸಿಂಗ್

    ವಿಜಯನಗರ ಜಿಲ್ಲೆ ಅಧಿಕೃತ – ಭೂಮಿ ತಾಯಿಗೆ ನಮಸ್ಕರಿಸಿದ ಸಚಿವ ಆನಂದ್ ಸಿಂಗ್

    – ಇದು ಹಠ ಅಲ್ಲ, ಈ ಭಾಗದ ಕನಸು
    – ಹೊಸಪೇಟೆಯಲ್ಲಿ ಸಂಭ್ರಮಾಚರಣೆ

    ವಿಜಯನಗರ: ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಉದಯವಾಗಿದ್ದು, ಹೊಸಪೇಟೆಗೆ ಬಂದಿಳಿದ ಸಚಿವ ಆನಂದ್ ಸಿಂಗ್ ಭೂಮಿ ತಾಯಿಗೆ ನಮಸ್ಕರಿಸಿದರು. ಸಚಿವರನ್ನ ಅದ್ಧೂರಿಯಾಗಿ ಬರಮಾಡಿಕೊಂಡ ಹೊಸಪೇಟೆ ಜನತೆ ಶಿಳ್ಳೆ, ಚಪ್ಪಾಳೆ ಹಾಕಿ ಕುಣಿದು ಕುಪ್ಪಳಿಸಿದರು.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಬಳ್ಳಾರಿ ವಿಭಜನೆಯಾಗಿದೆ ಆದ್ರೆ ನಮ್ಮ ಮಧ್ಯೆ ಇರೋ ಭಾವನಾತ್ಮಕ ಸಂಬಂಧ ಕೆಡೋದಿಲ್ಲ. ವಿಜಯನಗರ ಜಿಲ್ಲೆಯಲ್ಲಿ ಈ ಹಿಂದೆ ಬಳ್ಳಾರಿ ಇತ್ತು. ರಾಜ್ಯದ ಅದೆಷ್ಟೋ ಗಡಿಗಳಲ್ಲಿ ಬಹಳ ಜಿಲ್ಲೆಗಳಿವೆ. ಭಾಷೆ ಪ್ರಭಾವ ಹೆಚ್ಚಿರಬಹುದು ಆದ್ರೆ ರಾಜ್ಯದ ಊರನ್ನು ಹೇಗೆ ಬಿಟ್ಟು ಕೊಡುತ್ತೇವೆ. ವಿಜಯನಗರ ಜಿಲ್ಲೆ ನನ್ನ ಹಠವಲ್ಲ ಈ ಭಾಗದ ಜನರ ಕನಸು. ವಿಜಯನಗರ ಜಿಲ್ಲೆ ಮಾಡಲು ಸಹಕಾರ ಮಾಡಿದ ಎಲ್ಲ ಜನಪ್ರತಿನಿಧಿಗಳಿಗೆ ಧನ್ಯವಾದಗಳನ್ನ ಸಲ್ಲಿಸಿದರು.

    ಬಳ್ಳಾರಿ ಜಿಲ್ಲೆ ವಿಭಜನೆ ಆಗಿ, ನೂತನ ವಿಜಯನಗರ ಜಿಲ್ಲೆ ಇಂದಿನಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ವಿಜಯನಗರ ಜಿಲ್ಲೆ ಬಗ್ಗೆ ಇಂದು ರಾಜ್ಯ ಸರ್ಕಾರ ಅಧಿಕೃತವಾಗಿ ರಾಜ್ಯ ಗೆಜೆಟ್‍ನಲ್ಲಿ ಪ್ರಕಟಿಸಿದೆ. ವಿಜಯನಗರಕ್ಕೆ ಹೊಸಪೇಟೆ ಜಿಲ್ಲಾ ಕೇಂದ್ರವಾಗಿರಲಿದೆ. ನೂತನ ಜಿಲ್ಲೆಯ ವ್ಯಾಪ್ತಿಗೆ ಆರು ತಾಲೂಕುಗಳು ಬಂದಿವೆ. ಬಳ್ಳಾರಿ ಜಿಲ್ಲೆಯಲ್ಲಿ ಐದು ತಾಲೂಕುಗಳು ಉಳಿದುಕೊಂಡಿವೆ. ಡಿಸೆಂಬರ್ 14ರಂದು ಕರಡು ಗೆಜೆಟ್ ಹೊರಡಿಸಿದ್ದ ರಾಜ್ಯ ಸರ್ಕಾರ, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಿ ಕೆಲವು ಸಣ್ಣಪುಟ್ಟ ಮಾರ್ಪಾಡುಗಳೊಂದಿಗೆ ರಾಜ್ಯ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಹೌದು ಇವತ್ತು ಅದು ಕ್ಲಿಯರ್ ಆಗಿದೆ.. ವಿರೋಧ ಏನು ಇಲ್ಲ ಎಂದಿದ್ದಾರೆ. ಈ ಬೆನ್ನಲ್ಲೇ ಹೊಸಪೇಟೆಯಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಇತ್ತ ಬಳ್ಳಾರಿಯಲ್ಲಿ ಪ್ರತಿಭಟನೆಗಳು ನಡೆದಿವೆ. ಇದು ಬಳ್ಳಾರಿ ಜಿಲ್ಲೆಗೆ ಮಾಡಿದ ಅಪಮಾನ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ವಿಜಯನಗರ ಜಿಲ್ಲೆಗೆ 6 ತಾಲೂಕುಗಳು: ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ. ಹರಪನಹಳ್ಳಿ

    ವಿಜಯನಗರ ಗಡಿ ಸರಹದ್ದು ರಚನೆ
    ಪೂರ್ವ: ಚಿತ್ರದುರ್ಗ, ಬಳ್ಳಾರಿ ಜಿಲ್ಲೆ
    ಪಶ್ಚಿಮ: ಗದಗ, ಹಾವೇರಿ ಜಿಲ್ಲೆ
    ಉತ್ತರ : ಕೊಪ್ಪಳ ಜಿಲ್ಲೆ
    ದಕ್ಷಿಣ: ದಾವಣಗೆರೆ ತಾಲೂಕು, ಹರಿಹರ ತಾಲೂಕು

    ಬಳ್ಳಾರಿ ಜಿಲ್ಲೆಗೆ 5 ತಾಲೂಕುಗಳು: ಬಳ್ಳಾರಿ, ಸಂಡೂರು, ಕಂಪ್ಲಿ, ಕುರುಗೋಡು, ಸಿರುಗುಪ್ಪ

    ಬಳ್ಳಾರಿ ಜಿಲ್ಲೆ ಗಡಿ ಸರಹದ್ದು ರಚನೆ
    ಪೂರ್ವ: ಆಂಧ್ರಪ್ರದೇಶ ರಾಜ್ಯ
    ಪಶ್ಚಿಮ: ನೂತನ ವಿಜಯನಗರ ಜಿಲ್ಲೆ
    ಉತ್ತರ: ರಾಯಚೂರು ಜಿಲ್ಲೆ
    ದಕ್ಷಿಣ: ಆಂಧ್ರಪ್ರದೇಶ ರಾಜ್ಯ

  • ರಾಮುಲು-ರೆಡ್ಡಿ ಬಳಗದಲ್ಲಿ ಮೂಡಿದ ಬಿರುಕು

    ರಾಮುಲು-ರೆಡ್ಡಿ ಬಳಗದಲ್ಲಿ ಮೂಡಿದ ಬಿರುಕು

    ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿ ರೆಡ್ಡಿಗಳ ಮೂಲಕ ದೇಶದಲ್ಲಿಯೇ ಗುರುತಿಸಿಕೊಳ್ಳುವಂತಾಗಿತ್ತು. ಆದರೆ ದಿನೇ ದಿನೇ ರೆಡ್ಡಿಗಳ ಪಾರುಪತ್ಯ ಜಿಲ್ಲೆಯಲ್ಲಿ ಕಡಿಮೆಯಾದಂತೆ ಕಾಣಿಸುತ್ತಿದೆ. ಅದರಲ್ಲೂ ಅಖಂಡ ಬಳ್ಳಾರಿ ಜಿಲ್ಲೆ ಇಬ್ಭಾಗವಾದ ಮೇಲಂತೂ ಈ ಸಂಶಯ ರಾಜಕೀಯ ವಲಯದಲ್ಲಿ ಮತ್ತಷ್ಟು ಜೋರಾಗಿದೆ. ಇದೆಲ್ಲದರ ನಡುವೆಯೂ ಸಚಿವ ರಾಮುಲು, ರೆಡ್ಡಿ ಬ್ರದರ್ಸ್ ಜೊತೆಗಿದ್ದರೆ ಯಾರು ಏನು ಮಾಡಿಕೊಳ್ಳಲು ಆಗಲ್ಲ ಎಂಬ ಮಾತಿತ್ತು. ಆದರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರೆಡ್ಡಿ ಬ್ರದರ್ಸ್ ಮತ್ತು ರಾಮುಲು ನಡುವೆ ಬಿರುಕು ಉಂಟಾಗಿದೆ.

    ಈ ಹಿಂದೆ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿದ್ದ ಸಚಿವ ರಾಮುಲು ತಮ್ಮ ನಡೆ ಬದಲಿಸಿದ್ದಾರೆ. ರಾಮುಲು ವಿಜಯನಗರ ಜಿಲ್ಲೆ ರಚನೆ ಪರ ಬ್ಯಾಟ್ ಬೀಸಿದ ಪರಿಣಾಮ ಬಳ್ಳಾರಿಯಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಸಚಿವ ಆನಂದ್ ಸಿಂಗ್ ಜೊತೆ ರಾಮುಲು ರಾಜಕೀಯ ಒಪ್ಪಂದಕ್ಕೆ ಒಳಗಾಗಿ ನೂತನ ಜಿಲ್ಲೆ ರಚನೆಗೆ ಕೈ ಜೋಡಿಸಿದರು ಎಂಬ ಆರೋಪ ಕೇಳಿ ಬಂದಿದೆ. ಇದುವೇ ರೆಡ್ಡಿ ಬ್ರದರ್ಸ್ ಮುನಿಸಿಗೆ ಕಾರಣ ಎಂಬ ಮಾತು ಕೇಳಿ ಬಂದಿದೆ.

    ಒಂದು ವೇಳೆ ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿ ರಾಮುಲು ತಮ್ಮ ನಿಲುವನ್ನ ಬದಲಿಸಿದಿದ್ದರೇ ರೆಡ್ಡಿ ಬ್ರದರ್ಸ್ ಕುಟುಂಬದ ಅಸಮಾಧಾನಕ್ಕೆ ಕಾರಣವಾಗುತ್ತಿರಲಿಲ್ಲ. ವಿಜಯನಗರ ಜಿಲ್ಲೆ ರಚನೆಯಿಂದ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿ ಪಾರುಪತ್ಯ ಪೂರ್ತಿ ತೆರೆಮರೆಗೆ ಸರಿಯುತ್ತಿರುವುದರಿಂದ ರೆಡ್ಡಿ ಬ್ರದರ್ಸ್ ಸಿಟ್ಟಾಗಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿರುವ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬಳ್ಳಾರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಸೇರ್ಪಡೆ ವಿಚಾರವನ್ನ ವಿರೋಧಿಸಿದ್ದಾರೆ. ಇದು ಈಗ ರಾಜಕೀಯ ಚರ್ಚೆಗೆ ಕಾರಣವಾಗಿದೆ.

    ಮೊಳಕಾಲ್ಮೂರು ಶಾಸಕರಾಗಿರುವ ರಾಮುಲು ತಮ್ಮ ವಿಧಾನಸಭಾ ಕ್ಷೇತ್ರವನ್ನ ಬಳ್ಳಾರಿಗೆ ಸೇರಿಸಿ, ಜಿಲ್ಲೆಯ ಉಸ್ತುವಾರಿ ಪಡೆಯಬೇಕೆಂಬ ಹಂಬಲ ಹೊಂದಿದ್ದಾರೆ ಎನ್ನಲಾಗಿದೆ. ಇತ್ತ ಆಡಳಿತ ಪಕ್ಷದ ಸೋಮಶೇಖರ್ ರೆಡ್ಡಿ ವಿರೋಧ ವ್ಯಕ್ತಪಡಿಸಿರುವುದು ರಾಮುಲು ಅವರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಸರ್ಕಾರ, ಸಚಿವ ಆನಂದ ಸಿಂಗ್ ಆಶಯದಂತೆ ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜಿಸಿದೆ. ಸರ್ಕಾರದ ಈ ನಿರ್ಧಾರ ರೆಡ್ಡಿ ಸೋದರರು ಮತ್ತು ಶ್ರೀರಾಮುಲು ಗೆಳೆತನದಲ್ಲಿ ಬಿರುಕು ಮೂಡಿಸಿದೆ.

  • ಸಿಎಂ ಮೊಂಡುತನ ಮಾಡಿ ಜಿಲ್ಲೆ ರಚಿಸಿದ್ರೆ ನಾನೇನು ಮಾಡ್ಲಿ: ರೆಡ್ಡಿ ಪ್ರಶ್ನೆ

    ಸಿಎಂ ಮೊಂಡುತನ ಮಾಡಿ ಜಿಲ್ಲೆ ರಚಿಸಿದ್ರೆ ನಾನೇನು ಮಾಡ್ಲಿ: ರೆಡ್ಡಿ ಪ್ರಶ್ನೆ

    – ಜಿಲ್ಲೆಯ ಜನರೇ ಬಿಜೆಪಿಗೆ ತಕ್ಕ ಪಾಠ ಕಳಿಸ್ತಾರೆ

    ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲ ಇಲ್ಲ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಖಡಕ್ಕಾಗಿ ತಿಳಿಸಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಿಎಂ ತಾತ್ವಿಕ ಒಪ್ಪಿಗೆ ವಿಚಾರದ ಕುರಿತ ಪ್ರಶ್ನಿಸಿದಾಗ ಸೋಮಶೇಖರ ರೆಡ್ಡಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲೆ ರಚನೆಗೆ ನನ್ನ ಬೆಂಬಲವಿಲ್ಲ. ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಳ್ಳಬಾರದಿತ್ತು. ಈ ಜಿಲ್ಲೆಯ ಜನರು, ವಿಜಯನಗರ ಜಿಲ್ಲೆ ರಚನೆಯ ವಿರೋಧಿಸಿ ಹೋರಾಟ ಮಾಡಿದರೆ ಅವರೊಂದಿಗೆ ನಾನೂ ನಿಲ್ಲುವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಷಣೆ- ಸಂಪುಟ ಅಸ್ತು

    ಬಳ್ಳಾರಿ ಜಿಲ್ಲೆ ವಿಭಜನೆಯಾದ್ರೆ ಜಿಲ್ಲೆಯಲ್ಲಿ ಬಿಜೆಪಿ ಎರಡು ಹೋಳಾಗುತ್ತದೆ. ಈ ಜಿಲ್ಲೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ. ವಿಜಯನಗರ ಜಿಲ್ಲೆ ಬೇಡ ಬೇಡ ಅಂತ ಎಷ್ಟು ಬಾರಿ ಸಿಎಂ ಬಿಎಸ್‍ವೈ ಅವರಿಗೆ ಹೇಳಬೇಕು. ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಿ ಹೇಳಿದ್ದೇವೆ. ಇನ್ನೆಷ್ಟು ಬಾರಿ ಹೇಳಬೇಕು. ಡಿವೈಡ್ ಆಗಲೇಬೇಕು ಎಂದು ಡಿಸೈಡ್ ಆದರೆ ನಾವೇನು ಮಾಡಬೇಕು. ರಾಜ್ಯ ಸರ್ಕಾರ ಮೊಂಡುತನಕ್ಕೆ ಬಿದ್ರೆ ನಾವೇನು ಮಾಡಬೇಕು. ನಾನಂತೂ ಇನ್ನೊಂದು ಬಾರಿ ಸಿಎಂಗೆ ಹೇಳಲ್ಲ. ಯಾರಾದರೂ ಈ ಬಗ್ಗೆ ಹೋರಾಟ ಮಾಡಿದರೆ ಅವರಿಗೆ ನಾನು ಬೆಂಬಲ ಕೊಡುತ್ತೇನೆ ಎಂದರು.

    ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿದರೆ ಜನರೇ ಬಿಜೆಪಿ ತಕ್ಕ ಪಾಠ ಕಲಿಸುತ್ತಾರೆ. ಜನರು ಈ ಬಗ್ಗೆ ಹೋರಾಟ ಮಾಡುತ್ತಾರೆ. ನನಗೆ ಪಕ್ಷ ಮುಖ್ಯ ಅಲ್ಲ, ನನಗೆ ಜನರೇ ಮುಖ್ಯ. ಜನರು ಹೋರಾಟ ಮಾಡಿದರೆ ನಾನೂ ಜನರ ಪರವಾಗಿ ಹೋರಾಟಕ್ಕೆ ಇಳಿಯುವೆ ಎಂದು ತಿಳಿಸಿದರು. ಇದನ್ನೂ ಓದಿ: ವಿಜಯನಗರ ಪ್ರತ್ಯೇಕ ಜಿಲ್ಲೆ ನಿರ್ಧಾರ ಸ್ವಾಗತಾರ್ಹ: ಆನಂದ್ ಸಿಂಗ್

  • ಆಂಜನೇಯ ಅನುಗ್ರಹ ಮಾಡಿದಾಗ ಮಂತ್ರಿ ಆಗುವೆ- ಸೋಮಶೇಖರ್ ರೆಡ್ಡಿ

    ಆಂಜನೇಯ ಅನುಗ್ರಹ ಮಾಡಿದಾಗ ಮಂತ್ರಿ ಆಗುವೆ- ಸೋಮಶೇಖರ್ ರೆಡ್ಡಿ

    ಬಳ್ಳಾರಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆಂಜನೇಯ ಸ್ವಾಮಿ ಅನುಗ್ರಹ ಮಾಡಿದಾಗ ಮಂತ್ರಿಯಾಗುತ್ತೇನೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟುಹಬ್ಬದ ಹಿನ್ನೆಲೆ ನಗರದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಆಂಜನೇಯ ಸ್ವಾಮಿ ಅನುಗ್ರಹ ನೀಡಿದಾಗ ಆಗುತ್ತೇನೆ. ನಾನು ಮಂತ್ರಿ ಸ್ಥಾನ ಕೊಡಿ ಎಂದು ಕೇಳಲ್ಲ. ದೇವರ ಅನುಗ್ರಹ ಇದ್ದರೆ ಮಂತ್ರಿ ಆಗುವೆ. ಪಕ್ಷವೇ ನನಗೆ ಮಂತ್ರಿ ಸ್ಥಾನ ಕೊಟ್ಟರೆ ಆಗುತ್ತೇನೆ. ಆನಂದ್ ಸಿಂಗ್ ಅವರು ಸಹೋದರನ ರೀತಿ ಇದ್ದಾರೆ. ಹೀಗಾಗಿ ನನಗೆ ಸಚಿವ ಸ್ಥಾನದ ಅಗತ್ಯವಿಲ್ಲ ಎಂದರು.

    ದೇಶಾದ್ಯಂತ ಪ್ರಧಾನಿ ಮೋದಿ ಅವರ 70ನೇ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಳ್ಳಾರಿ ನಗರ ಬಿಜೆಪಿ ಯುವ ಮಾರ್ಚಾ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ನೂರಾರು ಜನ ಬಿಜೆಪಿ ಕಾರ್ಯಕರ್ತರು ರಕ್ತದಾನ ಮಾಡಿ ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

    ಯುವಕರು ರಕ್ತದಾನ ಮಾಡಿ ರೋಗಿಗಳ ಜೀವನ ಉಳಿಸಲು ಮುಂದಾಗಿದ್ದಾರೆ. ಯುವಕರು ದೇಶಕ್ಕೆ ಆಪತ್ತು ಬಂದಾಗ ದೇಶದ ರಕ್ಷಣೆಗೆ ಮುಂದಾಗಬೇಕು. ರಕ್ತದಾನ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

  • ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿರೋದು ಬೇಸರವಿದೆ: ಸೋಮಶೇಖರ್ ರೆಡ್ಡಿ

    ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿರೋದು ಬೇಸರವಿದೆ: ಸೋಮಶೇಖರ್ ರೆಡ್ಡಿ

    – ಸಿಎಂ ನಿರ್ಧಾರ ಸಂತಸ ತಂದಿದೆ
    – ಸಚಿವ ಆನಂದ್ ಸಿಂಗ್‍ಗೆ ಮನವಿ

    ಬಳ್ಳಾರಿ: ಆರೋಗ್ಯ ಸಚಿವ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಇರೋದು ಬೇಸರವಿದೆ. ಇದು ಕೇವಲ ನನ್ನ ಬೇಡಿಕೆ ಅಲ್ಲ, ಬದಲಿಗೆ ನಮ್ಮ ವಾಲ್ಮೀಕಿ ಸಮುದಾಯದ ಬೇಡಿಕೆ ಎಂದು ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡಬೇಕು ಎನ್ನುವ ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಡಿಸಿಎಂ ಸ್ಥಾನವನ್ನು ರಾಮುಲು ಅವರಿಗೆ ನೀಡಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದರು.

    ಆನಂದ್ ಸಿಂಗ್ ಅವರಿಗೆ ನೀಡಿದರೂ ನಾನು ಸಂತೋಷ ಪಡುವೆ. ಲಕ್ಷ್ಮಣ ಸವದಿ ಜಿಲ್ಲಾ ಉಸ್ತುವಾರಿ ಆಗಿ ಮುಂದುವರಿದರೂ ನಮಗೆ ಸಂತೋಷ. ಆದರೆ ಹೆಚ್ಚು ದಿನಗಳ ಕಾಲ ಲಕ್ಷ್ಮಣ ಸವದಿ ಜಿಲ್ಲೆಯಲ್ಲಿ ಇರಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಜಿಲ್ಲಾ ವಿಭಜನೆಯ ಬಗ್ಗೆ ಸಿಎಂ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೆವೆ. ಸಿಎಂ ಜಿಲ್ಲೆ ವಿಭಜನೆ ಮಾಡಲ್ಲ ಎಂಬ ಹೇಳಿಕೆ ನಮಗೆ ಸಂತಸ ತಂದಿದೆ ಎಂದಿದ್ದಾರೆ.

    ಬಳ್ಳಾರಿಯ ಜಿಲ್ಲೆ ವಿಭಜನೆ ಮಾಡುವುದು ಸರಿಯಲ್ಲ. ಈ ಹಿಂದಿನಿಂದಲೂ ವಿಭಜನೆಗೆ ನಮ್ಮ ವಿರೋಧ ಇದೆ. ಹೀಗಾಗಿ ಜಿಲ್ಲಾ ವಿಭಜನೆ ಬೇಡ ಎಂದಿದ್ದೆವೆ. ಈಗಲೂ ನಾನು ಸಚಿವ ಆನಂದ್ ಸಿಂಗ್ ಅವರಲ್ಲಿ ಜಿಲ್ಲೆ ವಿಭಜನೆ ಮಾಡದೆ ನಾವೆಲ್ಲ ಅಣ್ಣ-ತಮ್ಮಂದಿರ ಹಾಗೆ ಇರಬೇಕು ಎಂದು ಮನವಿ ಮಾಡುತ್ತೇನೆ ಎಂದರು.

  • ಸಾಯೋವಾಗ ಒಂದು ಕಿವಿಯಲ್ಲಿ ಗಂಧದ ಗುಡಿ ಹಾಡು ಕೇಳಿಸಬೇಕು: ಸೋಮಶೇಖರ್ ರೆಡ್ಡಿ

    ಸಾಯೋವಾಗ ಒಂದು ಕಿವಿಯಲ್ಲಿ ಗಂಧದ ಗುಡಿ ಹಾಡು ಕೇಳಿಸಬೇಕು: ಸೋಮಶೇಖರ್ ರೆಡ್ಡಿ

    ಬಳ್ಳಾರಿ: ನಾನು ಸಾಯುವಾಗ ಒಂದು ಕಿವಿಯಲ್ಲಿ ವರನಟ ಡಾ.ರಾಜಕುಮಾರ್ ಅಭಿನಯದ ಗಂಧದಗುಡಿ ಹಾಡು ಕೇಳಿಸಬೇಕು. ಇನ್ನೊಂದು ಕಿವಿಯಲ್ಲಿ ಹನುಮಾನ್ ಚಾಲೀಸಾ ಕೇಳಿಸಬೇಕು ಎಂದು ಈಗಾಗಲೇ ನನ್ನ ಮಗನಿಗೆ ಹೇಳಿರುವುದಾಗಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೆಡ್ಡಿಗಳು ಎಂದರೇ ನಾವು ಪಕ್ಕದ ಆಂಧ್ರ ಪ್ರದೇಶದವರು ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಅಪಟ್ಟ ಕನ್ನಡಿಗ. ನಾನು ಇದೇ ನೆಲದಲ್ಲಿ ಹುಟ್ಟಿದವ. ನಾನು ಈ ನಾಡು ನುಡಿಯನ್ನು ಪ್ರೀತಿಸುವೆ ಎಂದಿದ್ದಾರೆ.

    ನಮ್ಮ ತಂದೆ ಪೊಲೀಸ್ ಕೆಲಸದಲ್ಲಿ ಇದ್ದರು. ಆಗ ನಾವು ಬಳ್ಳಾರಿಗೆ ಬಂದೇವೂ. ನಮ್ಮ ತಂದೆ ನಿವೃತ್ತಿ ಬಳಿಕ ನಮ್ಮ ತಂದೆ ಆಂಧ್ರಪ್ರದೇಶದಕ್ಕೆ ಹೋಗೋಣ ಎಂದರು. ಆದರೆ ನಮ್ಮ ತಾಯಿಯವರು ಬಳ್ಳಾರಿಯಲ್ಲಿಯೇ ನಾವು ಇರಬೇಕು ಎಂದು ಹಟ ಹಿಡಿದರು. ಆದ್ದರಿಂದ ನಾವು ಬಳ್ಳಾರಿಯಲ್ಲಿ ಉಳಿದೆವು. ನಾವು ಆಂಧ್ರ ಪ್ರದೇಶದವರಲ್ಲಾ, ಅಪ್ಪಟ ಕನ್ನಡಿಗ. ನಾನು 10 ವರ್ಷ ಆಂಧ್ರಪ್ರದೇಶದಲ್ಲಿದ್ದ ಸಂದರ್ಭದಲ್ಲಿ ಮೊದಲು ನೋಡಿದ ಸಿನಿಮಾ ಗಂಧದ ಗುಡಿ. ನಾನು ಎಲ್ಲೇ ಹೋದರೂ 2-3 ದಿನಗಳಲ್ಲಿ ವಾಪಸ್ ಬಳ್ಳಾರಿಗೆ ಹೋಗೋಣ ಎನಿಸುತ್ತದೆ ಎಂದರು ತಿಳಿಸಿದರು.

    ಕೆಲವರು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಆದರೆ ಈ ಬಗ್ಗೆ ನೀವು ತಲೆ ಕೆಡಿಸಿಕೊಳ್ಳ ಬೇಡಿ. ನಾವು ಆಂಧ್ರ ರೆಡ್ಡಿಗಳು ಅಲ್ಲ, ಕರ್ನಾಟಕದ ರೆಡ್ಡಿಗಳು. ನಮ್ಮ ಗಡಿ ಜಿಲ್ಲೆ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ತಂಟೆ ತೆಗೆಯುತ್ತಿದೆ. ಅವರಿಗೆ ನಾವು ತಕ್ಕ ಪಾಠ ಕಲಿಸಬೇಕು. ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಈ ಬಗ್ಗೆ ಹೋರಾಟಕ್ಕೂ ನಾನು ಸಿದ್ಧ ಎಂದು ತಿಳಿಸಿದರು.

  • ಜಮೀರ್ ಅಹ್ಮದ್ ಓರ್ವ ಪ್ರಚಾರ ಪ್ರಿಯ, ಬಳ್ಳಾರಿಗೆ ಬರಲಿ: ಸೋಮಶೇಖರ್ ರೆಡ್ಡಿ

    ಜಮೀರ್ ಅಹ್ಮದ್ ಓರ್ವ ಪ್ರಚಾರ ಪ್ರಿಯ, ಬಳ್ಳಾರಿಗೆ ಬರಲಿ: ಸೋಮಶೇಖರ್ ರೆಡ್ಡಿ

    ಬೆಂಗಳೂರು: ಸೋಮವಾರ ಮಾಜಿ ಸಚಿವ ಜಮೀರ್ ಅಹ್ಮದ್ ನಮ್ಮ ಮನೆಗೆ ಬರುವುದಾದರೆ ಬರಲಿ, ನಾನು ಬೇಡ ಎನ್ನಲ್ಲ ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

    ಜಮೀರ್ ಅಹ್ಮದ್ ಒಬ್ಬ ಪ್ರಚಾರ ಪ್ರಿಯ ನಾಯಕ. ಹೀಗಾಗಿ ನಾಳೆ ನಮ್ಮ ಮನೆಗೆ ಬರುತ್ತೆನೆ ಎಂದಿದ್ದಾರೆ. ಬೇಕಿದ್ರೆ ಜಮೀರ್ ಅಹ್ಮದ್ ಬಳ್ಳಾರಿಗೆ ಬರಲಿ ಅದಕ್ಕೆ ನಾನು ಬೇಡ ಅನ್ನಲ್ಲ. ನಾನು ದೇಶದ್ರೋಹಿಗಳ ಬಗ್ಗೆ ಮಾತನಾಡಿದ್ದೇನೆ. ಆದರೆ ನನ್ನ ಹೇಳಿಕೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

    ಸಿಎಎ ಪರವಾದ ಬಹಿರಂಗ ಸಭೆಯಲ್ಲಿ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಾಕಾರಿ ಭಾಷಣ ಖಂಡಿಸಿ ಜಮೀರ್ ಅಹ್ಮದ್ ಸವಾಲ್ ಹಾಕಿ ಬಳ್ಳಾರಿಗೆ ಬಂದು ಪ್ರತಿಭಟನೆ ಮಾಡುತ್ತೇನೆ ಎಂದು ಸವಾಲ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಸೋಮವಾರ ಬಳ್ಳಾರಿಗೆ ತೆರಳುತ್ತಿದ್ದಾರೆ.

  • ಎದೆ ತಟ್ಟಿ ಪಂಥಾಹ್ವಾನ ಕೊಟ್ಟ ಜಮೀರ್

    ಎದೆ ತಟ್ಟಿ ಪಂಥಾಹ್ವಾನ ಕೊಟ್ಟ ಜಮೀರ್

    ಬೆಂಗಳೂರು: ಸಿಎಎ ಹಾಗೂ ಎನ್ ಆರ್ ಸಿ ಸಂಬಂಧ ಪ್ರತಿಭಟನಾ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ಶಾಸಕ ಸೋಮಶೇಖರ್ ರೆಡ್ಡಿಗೆ ಮಾಜಿ ಸಚಿವ ಜಮೀರ್ ಅಹಮ್ಮದ್ ಎದೆ ತಟ್ಟಿ ಪಂಥಾಹ್ವಾನ ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಜಮೀರ್ ಅಹಮ್ಮದ್ ಇವತ್ತು ಸೋಮವಾರ ಮುಂದಿನ ಸೋಮವಾರದ ಒಳಗೆ ಸೋಮಶೇಖರ್ ರೆಡ್ಡಿಯನ್ನ ಬಂಧಿಸಬೇಕು. ಅವರ ಶಾಸಕ ಸ್ಥಾನವನ್ನ ವಜಾಗೊಳಿಸಬೇಕು. ಇಲ್ಲಾ ಅಂದರೆ ಮುಂದಿನ ಸೋಮವಾರ ನಾನೇ ಬಳ್ಳಾರಿಗೆ ಹೋಗಿ ಸೋಮಶೇಖರ್ ರೆಡ್ಡಿ ಮನೆ ಮುಂದೆ ಧರಣಿ ಕೂರುತ್ತೇನೆ ಎಂದು ಏಕವಚನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದರು.

    ನಾನು ಬಳ್ಳಾರಿಗೆ ಬರುತ್ತೇನೆ ತಾಕತ್ತಿದ್ದರೆ ಏನು ಮಾಡ್ತಿಯೋ ಮಾಡ್ಕೋ. ನೀನು ಖಡ್ಗ ತರ್ತಿಯೋ ಏನು ತರ್ತಿಯೋ ತಗೊಂಡು ಬಾ. ನಾವೇನು ಕೈಗೆ ಬಳೆ ತೊಟ್ಟುಕೊಂಡು ಕೂತಿಲ್ಲ. ನೀನು ಉಫ್ ಅನ್ನೋದಾದರೆ ಮೊದಲು ನನಗೆ ಅನ್ನು. ನೀನು ಖಡ್ಗ ಬೀಸೋದಾದರೆ ನನಗೆ ಮೊದಲು ಬೀಸು ಆಮೇಲೆ ಸಮುದಾಯದ ವಿಷಯಕ್ಕೆ ಬಾ.. ಮಿಸ್ಟರ್ ಸೋಮಶೇಖರ್ ರೆಡ್ಡಿ I Am Coming ಎಂದು ಸವಾಲೆಸೆದರು. ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ಮಾಡಿದ್ದಾರೆ.

    ಸೋಮಶೇಖರ್ ರೆಡ್ಡಿಗೆ ಮಾನ ಮರ್ಯಾದೆ ಇಲ್ಲಾ. 2013 ರಲ್ಲಿ ಹೇಡಿ ತರ ಹೆದರಿ ಚುನಾವಣೆಗೆ ನಿಂತಿಲ್ಲ ಅವನು ಜಮೀರ್ ಅಹ್ಮದ್ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

  • ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಾಂಗ್ರೆಸ್ ದೂರು

    ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕಾಂಗ್ರೆಸ್ ದೂರು

    ಚಿಕ್ಕಬಳ್ಳಾಪುರ: ಕೋಮು ಸಾಮರಸ್ಯ ಕದಡುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಶಾಸಕ ಸೋಮಶೇಖರ್ ರೆಡ್ಡಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

    ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದು. ಎನ್.ಆರ್.ಸಿ ಹಾಗೂ ಸಿಎಎ ವಿರುದ್ಧದ ಹೋರಾಟ ಧರ್ಮಾತೀತವಾಗಿದ್ದರೂ, ಮುಸ್ಲಿಂ ಜನಾಂಗವನ್ನು ಗುರಿಯಾಗಿಸಿ ಸೋಮಶೇಖರ್ ರೆಡ್ಡಿ ಮಾತನಾಡಿದ್ದಾರೆ. ಇದು ಬಿಜೆಪಿಯ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

    ಶಾಸಕ ಸೋಮಶೇಖರ್ ರೆಡ್ಡಿ ಅವರು ಕೋಮು ಸಾಮರಸ್ಯ ಕದಡುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದು ಸಂವಿಧಾನ ಬಾಹಿರ, ಕಾನೂನು ಬಾಹಿರ ಕೃತ್ಯ. ಪೊಲೀಸರು ಈಗಾಗಲೇ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕಿತ್ತು. ಆದರೆ ಯಾವುದೇ ಕ್ರಮಕೈಗೊಂಡಿಲ್ಲ. ಸೋಮಶೇಖರ ರೆಡ್ಡಿ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ದೂರು ಸಲ್ಲಿಸಲಾಗಿದೆ.

    ಇತ್ತ ತಮ್ಮ ಹೇಳಿಕೆ ಕುರಿತು ಟೀಕೆ ವ್ಯಕ್ತವಾಗುತ್ತಿದ್ದರೂ ಕೂಡ, ತಮ್ಮ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ. ನನ್ನ ಮಾತಿಗೆ ನಾನು ಈಗಲೂ ಬದ್ಧ. ದೇಶದ ಆಸ್ತಿಯನ್ನು ನಷ್ಟ ಮಾಡುತ್ತಿರುವ ಬಗ್ಗೆ ನಾನು ಮಾತನಾಡಿದ್ದೇನೆ ಅಷ್ಟೇ. ಯಾರೋ ಹೇಳಿದ ಮಾತು ಕೇಳಿ ಪ್ರತಿಭಟನೆ ನಡೆಸದಂತೆ ಹೇಳಿದ್ದೆ. ಎಲ್ಲರೂ ಪಟ್ಟಿಗೆ ಇರೋಣ, ಪ್ರತಿಭಟನೆ ಮಾತ್ರ ನಾನು ವಿರೋಧ ಮಾಡುತ್ತೇನೆ. ಅದರಲ್ಲೂ ಶಾಂತಿಯಿಂದ ಪ್ರತಿಭಟನೆ ನಡೆಸುವವರ ಪರ ನಾನು ಇದ್ದೇನೆ ಎಂದರು.

  • ಸೋಮಶೇಖರ್ ರೆಡ್ಡಿ ಯೂ ಟರ್ನ್

    ಸೋಮಶೇಖರ್ ರೆಡ್ಡಿ ಯೂ ಟರ್ನ್

    ಬೆಂಗಳೂರು: ಸಿಎಎ ಸಂಬಂಧ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಾಗ್ದಾಳಿ ನಡೆಸಿದ್ದ ಶಾಸಕ ಸೋಮಶೇಖರ್ ರೆಡ್ಡಿ ಈಗ ಯು ಟರ್ನ್ ಹೊಡೆದಿದ್ದಾರೆ. ಬಳ್ಳಾರಿಯಲ್ಲಿ ಶ್ರೀರಾಮುಲು ಸಮ್ಮುಖದಲ್ಲಿ ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿದ ವಿಡಿಯೋ ಈಗ ವೈರಲ್ ಆಗಿದೆ.

    ಬಳ್ಳಾರಿಯಲ್ಲಿ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮುಖಂಡರು ಹಾಗೂ ಸೋಮಶೇಖರ್ ರೆಡ್ಡಿ ನಡುವೆ ಶ್ರೀರಾಮುಲು ಸಂಧಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಸೋಮಶೇಖರ್ ಪ್ರಚೋದನಾಕಾರಿ ಹೇಳಿಕೆ ತಪ್ಪು: ಡಿಸಿಎಂ ಅಶ್ವಥ್ ನಾರಾಯಣ್

    ಶ್ರೀರಾಮುಲು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ, ಆತಂಕ ಬೇಡ. ದೇಶದಲ್ಲಿರುವರಿಗೆ ಯಾವುದೇ ದಾಖಲೆ ಕೇಳಲ್ಲ. ಅಕ್ರಮವಾಗಿ ಬಂದವರಿಗೆ ಮಾತ್ರ ದಾಖಲೆ ಕೇಳುತ್ತಾರೆ. ನೀವು ಹಿರಿಯರು, ಇದನ್ನು ಮನವರಿಕೆ ಮಾಡಬೇಕು ಎಂದು ಮುಸ್ಲಿಂ ಧರ್ಮಗುರುವೊಬ್ಬರೊಂದಿಗೆ ಮಾತಾಡಿದ್ದಾರೆ. ಇದನ್ನೂ ಓದಿ: ಸೋಮಶೇಖರ್ ರೆಡ್ಡಿ ಶಾಸಕತ್ವ ಸ್ಥಾನ ಅಮಾನತ್ತಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟ

    ಅದಕ್ಕೆ ಮುಸ್ಲಿಂ ಧರ್ಮಗುರು ಜನರ ಮನಸ್ಸು ಕಲುಷಿತವಾಗುವಂತೆ ಬಿಂಬಿತವಾಗಿದೆ. ನಿಮ್ಮ ಶರೀರ ರೋಗಗ್ರಸ್ತವಾಗಿಲ್ಲ. ನಿಮ್ಮ ಮನಸ್ಸುಗಳು ರೋಗಗ್ರಸ್ಥವಾಗಿದೆ ಎಂದು ಸೋಮಶೇಖರ್ ರೆಡ್ಡಿ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ:  ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ರಾಯಚೂರಿನಲ್ಲಿ ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ಶಾಸಕ ಸೋಮಶೇಖರ್ ರೆಡ್ಡಿ ನಾವು 130 ಕೋಟಿ ಜನರನ್ನೂ ಭಾರತೀಯರು ಎಂದು ಹೇಳುತ್ತೇವೆ. ಹಿಂದೂಗಳು ಬೇರೆ, ಮುಸ್ಲಿಮರು ಬೇರೆ ಎಂದಿಲ್ಲ ಎಂದು ಸಮಜಾಯಿಶಿ ನೀಡಿದ್ದಾರೆ. ಜನರಲ್ಲಿ ಪ್ರತಿದಿನ ಗೊಂದಲ ಮೂಡಿಸುತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಒಳ್ಳೆಯ ಆಡಳಿತ ನಡೆಸುವುದನ್ನು ಸಹಿಸಲಾರದವರು ಮಾಡುತ್ತಿರುವ ಅಪಪ್ರಚಾರ. ಒಂದೆರಡು ದಿನ ಈ ವಿಚಾರದಲ್ಲಿ ಮೌನವಾದರೆ ಎಲ್ಲವೂ ಸರಿಹೋಗುತ್ತೆ ಎಂದು ರಾಮುಲು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಮುಸ್ಲಿಂ ಧರ್ಮಗುರು ಈಗ ನಿಮಗಾಗಿರುವುದು ದೇಹಕ್ಕೆ ಆಗಿರುವ ರೋಗವಲ್ಲ. ನಿಮ್ಮ ಮನಸ್ಸಿಗೆ ಅಂಟಿರುವ ರೋಗ ಎಂದಿದ್ದಾರೆ. ಶ್ರೀರಾಮುಲು, ಸೋಮಶೇಖರ ರೆಡ್ಡಿ ಇಬ್ಬರು ಗುರುಗಳೇ ನೀವು ಸತ್ಯವನ್ನು ಜನರಿಗೆ ಹೇಳಿ ಎಂದು ಕೇಳಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.