Tag: ಸೋಮವಾರ

  • ವಾರದ ಕೆಟ್ಟದಿನ ಸೋಮವಾರ – ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಅಧಿಕೃತ ಘೋಷಣೆ

    ವಾರದ ಕೆಟ್ಟದಿನ ಸೋಮವಾರ – ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಅಧಿಕೃತ ಘೋಷಣೆ

    ನವದೆಹಲಿ: ವೀಕೆಂಡ್ ಮುಗಿದ ನಂತರ ಬರುವ ಸೋಮವಾರವನ್ನು ಯಾಕಾದರೂ ಬರುತ್ತೋ ಎಂದು ಶಪಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಇದೀಗ ಅಚ್ಚರಿ ಎನ್ನುವಂತೆ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ (Guinness World Record) ಸಂಸ್ಥೆಯೂ ಅಧಿಕೃತವಾಗಿ ಸೋಮವಾರವನ್ನು (Monday)  ಕೆಟ್ಟ ದಿನವೆಂದು ಘೋಷಿಸಿದೆ.

    ಬಹಳಷ್ಟು ಜನರಿಗೆ ಸೋಮವಾರವು ನೀರಸ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಟ್ವೀಟ್ ಮಾಡಿ, ವಾರದ (Week) ಅತ್ಯಂತ ಕೆಟ್ಟ ದಿನದ ದಾಖಲೆಯನ್ನು ನಾವು ಸೋಮವಾರ ಅಧಿಕೃತವಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕಾಲ್ಕೆರೆಯುತ್ತಾ ಜಗಳಕ್ಕೆ ಬಂದವನನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದ ಸಹ ಪ್ರಯಾಣಿಕ

    ಈ ಪೋಸ್ಟ್‌ನ್ನು 4 ಲಕ್ಷಕ್ಕೂ ಅಧಿಕ ಜನರು ಲೈಕ್ ಹಾಗೂ ಕಾಮೆಂಟ್ ಮಾಡಿದ್ದು, ನೆಟ್ಟಿಗರು ವಿಭಿನ್ನ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿ ಈ ಕಾರಣಕ್ಕಾಗಿಯೇ ನಾನು ಸೋಮವಾರ ರಜೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ. ಇನ್ನೋರ್ವ ನೀವು ಸಾಕಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂದು ಹೇಳಿದ್ದಾನೆ. ಇದನ್ನೂ ಓದಿ: 7 ತಿಂಗಳು ಕಳೆದರೂ ಸ್ಮಾರ್ಟ್, ಹೈಟೆಕ್ ಮೀನು ಮಾರುಕಟ್ಟೆಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

    Live Tv
    [brid partner=56869869 player=32851 video=960834 autoplay=true]

  • ಸೋಮವಾರ ಉಳಿದ ಜಿಲ್ಲೆಗಳಿಗೆ ಲಾಕ್ ಶಾಕ್?

    ಸೋಮವಾರ ಉಳಿದ ಜಿಲ್ಲೆಗಳಿಗೆ ಲಾಕ್ ಶಾಕ್?

    ಬೆಂಗಳೂರು: ಇಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಮಂಗಳವಾರದಿಂದ ಒಂದು ಲಾಕ್‍ಡೌನ್ ಆಗಲಿವೆ. ಇದೇ ರೀತಿ ಸೋಮವಾರ ಉಳಿದ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸುವ ಸಾಧ್ಯತೆಗಳಿವೆ.

    ಸೋಮವಾರ ಜಿಲ್ಲಾಧಿಕಾರಿಗಳ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಸಭೆಯಲ್ಲಿ ಜಿಲ್ಲೆಯ ಸ್ಥಿತಿ ಗತಿಗಳ ಬಗ್ಗೆ ಮಾಹಿತಿಯನ್ನು ಮುಖ್ಯಮಂತ್ರಿಗಳು ಪಡೆಯಲಿದ್ದಾರೆ. ಜಿಲ್ಲಾಧಿಕಾರಿಗಳು ನೀಡುವ ವರದಿ ಆಧರಿಸಿ ಸೋಮವಾರ ಸಂಜೆ ಲಾಕ್‍ಡೌನ್ ಘೋಷಣೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.

    ಹೆಚ್ಚು ಕೊರೊನಾ ಪ್ರಕರಣಗಳಿರುವ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಬಹುದು. ಹಾಗೆ ಅಂತರ್ ಜಿಲ್ಲಾ ಪ್ರವೇಶಕ್ಕೂ ನಿರ್ಬಂಧ ಹೇರಬಹುದು. ಹಾಗೆ ಸೋಂಕು ಕಡಿಮೆ ಇರೋ ಜಿಲ್ಲೆಗಳಲ್ಲಿ ಹಾಫ್ ಲಾಕ್‍ಡೌನ್ ಅಥವಾ ಸೀಲ್‍ಡೌನ್ ತಂತ್ರಗಳನ್ನು ಬಳಸಬಹುದು. ಸದ್ಯಕ್ಕೆ ಎರಡು ಜಿಲ್ಲೆಗಳಿಗೆ ಬೀಗ ಹಾಕಲಾಗಿದ್ದು, ಸೋಮವಾರ ರಾಜ್ಯ ಸರ್ಕಾರ ಪ್ರಕಟಿಸುವ ನಿರ್ಧಾರದತ್ತ ಎಲ್ಲರ ಚಿತ್ತವಿದೆ.

  • ಸೋಮವಾರ ಎಲ್ಲದ್ದಕ್ಕೂ ಇತಿಶ್ರೀ

    ಸೋಮವಾರ ಎಲ್ಲದ್ದಕ್ಕೂ ಇತಿಶ್ರೀ

    ಬೆಂಗಳೂರು: ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿದ ರಾಜ್ಯಸರ್ಕಾರ ಸೋಮವಾರಕ್ಕೆ ವಿಶ್ವಾಸ ಮತಯಾಚನೆಯನ್ನು ಮುಂದೂಡಿದಿದೆ. ಈ ಮೂಲಕ ದೋಸ್ತಿ ಸರ್ಕಾರಕ್ಕೆ ಇನ್ನು ಎರಡು ದಿನ ಜೀವದಾನ ಸಿಕ್ಕಿದೆ. ಸೋಮವಾರ 11 ಗಂಟೆಗೆ ಸದನವನ್ನು ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್, ಎಲ್ಲದ್ದಕ್ಕೂ ಸೋಮವಾರವೇ ಇತಿಶ್ರೀ ಹಾಡಲಾಗುವುದು ಎಂದು ಹೇಳಿದ್ದಾರೆ.

    2ನೇ ದಿನವಾದ ಇಂದು ಕೂಡ ನಡೆಸಿದ್ದು ಬರೀ ಕಾಲಹರಣ. ಸಮಯ ಮುಂದೂಡಿಕೆಗೆ ನಾಟಕದ ಮೇಲೆ ನಾಟಕ. ಒಮ್ಮೆ ಸ್ಪೀಕರ್‍ಗೂ, ಮಗದೊಮ್ಮೆ ಸಿಎಂಗೂ ಪತ್ರ ಬರೆದಿದ್ದ ರಾಜ್ಯಪಾಲರು ಇವತ್ತು ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಯಾಚನೆ ಮುಗಿಸಬೇಕು ಎಂದು ಗುರುವಾರ ಆದೇಶಿಸಿದ್ದರು. ಬೆಳಗ್ಗೆ ಕಲಾಪ ಆರಂಭವಾದಾಗ ರಾಜಭವನದ ವಿಶೇಷಾಧಿಕಾರಿ ಸದನಕ್ಕೆ ಆಗಮಿಸಿದ್ದರು.

    ಮಧ್ಯಾಹ್ನ 1:30 ಆದರೂ ವಿಶ್ವಾಸಮತ ಪ್ರಕ್ರಿಯೆ ಮುಗಿಯ ಕಾರಣ ರಾಜ್ಯಪಾಲರಿಗೆ ವರದಿ ನೀಡಿದರು. ವರದಿ ಆಧರಿಸಿ ಇವತ್ತು ಕಲಾಪ ಮುಗಿಯುವುದರ ಒಳಗಡೆ ವಿಶ್ವಾಸಮತ ಮುಗಿಸಲೇಬೇಕು ಅಂತ ಮುಖ್ಯಮಂತ್ರಿಗೆ ರಾಜ್ಯಪಾಲರು ಮತ್ತೊಂದು ಆದೇಶ ಪ್ರಕಟಿಸಿದರು.

    ರಾಜ್ಯಪಾಲರ ಎರಡನೇ ಲವ್‍ಲೆಟರ್ ನೋವು ತಂದಿದೆ ಅಂತ ಸಿಎಂ ಹೇಳಿದರು. ಆದರೆ ಸಂಜೆಯಾದರೂ ಮುಗಿಯದ ಲಕ್ಷಣ ಕಾಣಲಿಲ್ಲ. ದೋಸ್ತಿ ಪಕ್ಷದ ಶಾಸಕರೆಲ್ಲರೂ ಸೋಮವಾರಕ್ಕೆ ಕಲಾಪ ಮುಂದೂಡಿ, ನಾವು ನಮ್ಮ ಕ್ಷೇತ್ರದ ಸಮಸ್ಯೆ ಆಲಿಸಬೇಕು ಅಂತ ಪ್ರಸ್ತಾಪ ಮುಂದಿಟ್ಟರು.

    ಮುಖ್ಯಮಂತ್ರಿ ಅವರಂತೂ, ನಾನು ಇನ್ನಷ್ಟು ಮಾತನಾಡೋದಿದೆ. ಸೋಮವಾರ ವಿಶ್ವಾಸಮತ ಮುಗಿಸಿಬಿಡೋಣ ಎಂದರು. ಇದಕ್ಕೆ ಸಿದ್ದರಾಮಯ್ಯ ಕೂಡ ದನಿಗೂಡಿಸಿದರು. ಆದರೆ ಬಿಜೆಪಿ ಶಾಸಕರು ಯಾವುದೇ ಕಾರಣಕ್ಕೂ ಮುಂದೂಡಬೇಡಿ. ಇವತ್ತೇ ವಿಶ್ವಾಸಮತ ಪ್ರಕ್ರಿಯೆ ಮುಗಿಸಿಬಿಡಿ. ಇಲ್ಲದಿದ್ದರೆ, ವಿಶ್ವಾಸಮತ ಪ್ರಕ್ರಿಯೆ ಬಗ್ಗೆ ಅನುಮಾನ ಬರಲಿದೆ ಅಂತ ಸಂಶಯ ವ್ಯಕ್ತಪಡಿಸಿದರು.

    ಯಡಿಯೂರಪ್ಪ ಮಾತನಾಡಿ, ಇವತ್ತು ಎಷ್ಟು ಹೊತ್ತಾದರೂ ಸರಿ. ನಾವು ಮಾತಾಡಲ್ಲ. ಅವರೇ ಎಷ್ಟು ಹೊತ್ತಾದರೂ ಮಾತಾಡಲಿ. ನಾವ್ಯಾರೂ ಮಾತಾಡಲ್ಲ. ರಾಜ್ಯಪಾಲರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದರು. ಆದರೆ ಲೇಟಾಗ್ತಿದೆ. ಒಂದು ವಾರ ಆಗಿದೆ. ನಾವು ಮನೆಗೆ ಹೋಗಬೇಕು. ನಮ್ಮನ್ನ ಬಿಟ್ಟುಬಿಡಿ ಎಂದು ದೋಸ್ತಿ ಪಕ್ಷದ ಶಾಸಕರು ಗಲಾಟೆ ಎಬ್ಬಿಸಿದ್ರು. ಡಿಪ್ಯೂಟಿ ಸ್ಪೀಕರ್ ಸುಮ್ನೇ ಕೂತ್ಕೋಳ್ರಿ ಅಂದ್ರು ಬಿಡ್ಲಿಲ್ಲ. ಮತ್ತೆ ಬಂದ ಸ್ಪೀಕರ್ ರಮೇಶ್‍ಕುಮಾರ್ ಕೊನೆಗೆ ಸೋಮವಾರಕ್ಕೆ ಕಲಾಪ ಮುಂದೂಡಿದರು.