Tag: ಸೋಮನಾಥ ದೇವಾಲಯ

  • ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿದ ಪಾಂಡ್ಯ – ಹಿಗ್ಗಾಮುಗ್ಗಾ ಟ್ರೋಲ್‌ಗೆಳೆದ ಮುಂಬೈ ಫ್ಯಾನ್ಸ್‌

    ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿದ ಪಾಂಡ್ಯ – ಹಿಗ್ಗಾಮುಗ್ಗಾ ಟ್ರೋಲ್‌ಗೆಳೆದ ಮುಂಬೈ ಫ್ಯಾನ್ಸ್‌

    – ಗೆಲುವಿನ ಖಾತೆ ತೆರೆಯಲು ಪ್ರಾರ್ಥನೆ ಸಲ್ಲಿಸಿದ್ರಾ ಹಾರ್ದಿಕ್‌?

    ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಶುಕ್ರವಾರ (ಇಂದು) ಸೋಮನಾಥ ದೇವಸ್ಥಾನಕ್ಕೆ (Somnath Temple) ಭೇಟಿ ನೀಡಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿ, ಕೈಮುಗಿದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಭಕ್ತಿಯಿಂದ ಶಿವನ ಶ್ಲೋಕ ಪಠಿಸಿದ್ದಾರೆ.

    ಹಾರ್ದಿಕ್‌ ಪಾಂಡ್ಯ ಅವರ ಈ ವಿಶಿಷ್ಟ ಕ್ಷಣದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮುಂಬೈ (Mumbai Indians) ತಂಡದ ಅಭಿಮಾನಿಗಳು ಪಾಂಡ್ಯರನ್ನ ಟ್ರೋಲಿಗೆಳೆದಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ ಬೌಂಡರಿ ಆಟದಲ್ಲಿ ಪಂಜಾಬ್‌ಗೆ 3 ವಿಕೆಟ್‌ಗಳ ರೋಚಕ ಜಯ – ತವರಿನಲ್ಲೇ ಟೈಟಾನ್ಸ್‌ಗೆ ಸೋಲು!

    ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2024) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಗುಜರಾತ್‌ ಟೈಟಾನ್ಸ್ ಎದುರು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್, ನಂತರ ಸನ್‌ರೈಸರ್ಸ್‌ ಹೈದರಾಬಾದ್‌ (SRH) ಹಾಗೂ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧವೂ ಸೋಲು ಅನುಭವಿಸಿತ್ತು. ಆರಂಭಿಕ ಮೂರು ಪಂದಗಳಲ್ಲೂ ಸೋತ ಕಾರಣ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯದೇ ಕೊನೇ ಸ್ಥಾನಕ್ಕೆ ಕುಸಿದಿದೆ.

    ಇದರಿಂದಾಗಿ ಪಾಂಡ್ಯ ಅವರನ್ನ ಟ್ರೋಲಿಗೆಳೆದಿರುವ ಕ್ರಿಕೆಟ್‌ ಅಭಿಮಾನಿಗಳು, ಇನ್ನಾದರೂ ಮುಂಬೈ ತಂಡ ಗೆಲ್ಲಲಿ, ನನ್ನನ್ನ ಸಕ್ಸಸ್‌ಫುಲ್‌ ಕ್ಯಾಪ್ಟನ್‌ ಅಂತಾ ಒಪ್ಪಿಕೊಳ್ಳಲಿ ಎಂದು ಪಾಂಡ್ಯ ಪ್ರಾರ್ಥನೆ ಮಾಡಿರಬೇಕು. ಪಾಪ ಗೆಲ್ಲಿಸಿಬಿಡಪ್ಪ ದೇವರೆ ಅಂತಾ ಕಿಚಾಯಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಇನ್ನೂ ಪಾಂಡ್ಯ ನಾಯಕತ್ವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾದ ಮಾಜಿ ಕೋಚ್‌ ರವಿಶಾಸ್ತ್ರಿ, ಮೂರು ಪಂದ್ಯಗಳಲ್ಲೂ ಸೋತಿರುವುದು ಹಾರ್ದಿಕ್‌ ಪಾಂಡ್ಯ ಅವರ ನಾಯಕತ್ವವನ್ನು ಇನ್ನಷ್ಟು ಹದಗೆಡಿಸಿದೆ. ಅವರ ವೃತ್ತಿಜೀವನದಲ್ಲೂ ಇದು ಕಠಿಣ ಹಂತ. ಪಾಂಡ್ಯ ಅವರು ಈಗ ಆಡುತ್ತಿರೋದು ಭಾರತ ಕ್ರಿಕೆಟ್‌ ತಂಡವಲ್ಲ. ಇದು ಫ್ರಾಂಚೈಸಿ ಕ್ರಿಕೆಟ್‌. ಅಧಿಕ ಹಣ ಪಾವತಿಸಿರುತ್ತಾರೆ. ಫ್ರಾಂಚೈಸಿಯ ಮುಖ್ಯಸ್ಥರು ಯಾರನ್ನ ನಾಯಕರನ್ನಾಗಿ ಮಾಡಲು ಬಯಸುತ್ತಾರೋ, ಅವರೇ ನಾಯಕರಾಗುತ್ತಾರೆ. ಪಾಂಡ್ಯ ಉತ್ತಮವಾಗಿ ತಂಡವನ್ನು ನಿರ್ವಹಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಸೂಪರ್‌ ಸಂಡೇ ಮತ್ತೊಂದು ಮ್ಯಾಚ್‌:
    ಇದೇ ಭಾನುವಾರ ಮುಂಬೈ ಇಂಡಿಯನ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಲಿದೆ. ಅಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸೂರ್ಯಕುಮಾರ್‌ ಯಾದವ್‌ ಸಹ ಮುಂಬೈಗೆ ಕಂಬ್ಯಾಕ್‌ ಮಾಡಿದ್ದು, ಗೆಲ್ಲುವ ವಿಶ್ವಾಸ ಹೊಂದಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಉಡೀಸ್‌ -‌ ಬರೋಬ್ಬರಿ 35 ಕೋಟಿ ಮಂದಿ ವೀಕ್ಷಣೆ!

  • ಸೋಮನಾಥ ದೇವಸ್ಥಾನದ ಬ್ರಹ್ಮಕಲಶೋತ್ಸವ – ಸ್ವಯಂಸೇವಕರಿಗೆ ಫೇಸ್ ಶೀಲ್ಡ್ ವಿತರಿಸಿದ ಯು.ಟಿ.ಫರೀದ್ ಫೌಂಡೇಶನ್

    ಸೋಮನಾಥ ದೇವಸ್ಥಾನದ ಬ್ರಹ್ಮಕಲಶೋತ್ಸವ – ಸ್ವಯಂಸೇವಕರಿಗೆ ಫೇಸ್ ಶೀಲ್ಡ್ ವಿತರಿಸಿದ ಯು.ಟಿ.ಫರೀದ್ ಫೌಂಡೇಶನ್

    ಮಂಗಳೂರು: ಉಳ್ಳಾಲ ಕಡಲ ತಡಿಯಲ್ಲಿರುವ ಸೋಮೇಶ್ವರದ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥ ದೇವಸ್ಥಾನವು ಬ್ರಹ್ಮಕಲಶಕ್ಕೆ ಸಜ್ಜುಗೊಂಡಿದೆ. ದೇವಸ್ಥಾನದ ಸ್ವಯಂಸೇವಕರ ಆರೋಗ್ಯದ ಹಿತದೃಷ್ಟಿಯಿಂದ ದಿವಂಗತ ಯು.ಟಿ.ಫರೀದ್ ಫೌಂಡೇಶನ್ ಸುಮಾರು 300 ಫೇಸ್ ಶೀಲ್ಡ್ ನ್ನು ವಿತರಿಸಿ ಸೌಹಾರ್ಧತೆ ಮೆರೆದಿದೆ. ಬ್ರಹ್ಮಕಲಶವು ಸಾರ್ವಜನಿಕ ಕಾರ್ಯಕ್ರಮವನ್ನು ಬದಿಗೊತ್ತಿ ನಿಯಮಿತವಾಗಿ ಸಾಮಾಜಿಕ ಅಂತರದೊಂದಿಗೆ ಸರಳವಾಗಿ ನೆರವೇರಲಿದೆ.

    ಕಾರು ಅಪಘಾತಕ್ಕೊಳಗಾಗಿ ಬೆಂಗಳೂರು ನಿವಾಸದಲ್ಲಿರುವ ಮಂಗಳೂರು ಶಾಸಕರಾದ ಯು.ಟಿ.ಖಾದರ್ ಅವರ ಅನುಪಸ್ಥಿತಿಯಲ್ಲಿ ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಫೇಸ್ ಶೀಲ್ಡ್ ವಿತರಿಸಿದರು.

    ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಡ್ವೋಕೇಟ್ ರವೀಂದ್ರನಾಥ ರೈ, ಕಮಿಟಿ ಸದಸ್ಯರಾದ ಚಂದ್ರಶೇಖರ ಹೊಳ್ಳ, ರಾಮದಾಸ್, ಜಗದೀಶ್ ಉಚ್ಚಿಲ್ ಮೊದಲಾದವರು ಸ್ವೀಕರಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ತಾ.ಪಂ. ಅಧ್ಯಕ್ಷರಾದ ಮಹಮ್ಮದ್ ಮೋನು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಮಹಿಳಾ ಘಟಕದ ಅಧ್ಯಕ್ಷೆ ದೇವಿಕಾ ಪೂಜಾರಿ, ಯುವಕಾಂಗ್ರೆಸ್ ನ ದೀಪಕ್ ಪಿಲಾರ್, ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಶೆಟ್ಟಿ, ಸದಾಶಿವ ಉಳ್ಳಾಲ್, ಕಿಶೋರ್ ಶೆಟ್ಟಿ, ಪುರುಷೋತ್ತಮ ಅಂಚನ್, ರಾಜೇಂದ್ರ ಉಳಿಯ, ಪದ್ಮನಾಭ ಕೊಣಾಜೆ, ಸುರೇಶ್ ಭಟ್ನಾಗರ್, ವಿಶಾಲ್ ಕೊಲ್ಯ, ರಾಮ ಸೋಮೇಶ್ವರ, ಅಚ್ಯುತ ಗಟ್ಟಿ, ಚಾಂದಿನಿ ಕೋಟೆಕಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಇಂಟರ್ ಲಾಕ್, ಮೆಟ್ಟಿಲು ಉದ್ಘಾಟನೆ: ದೇವಸ್ಥಾನ ವಠಾರದಲ್ಲಿ ಇಂಟರ್ ಲಾಕ್ ಹಾಗೂ ಮೆಟ್ಟಿಲು ನಿರ್ಮಾಣಕ್ಕೆ ದೇವಸ್ಥಾನ ಸಮಿತಿಯು ಶಾಸಕರಾದ ಯು.ಟಿ.ಖಾದರ್ ಅವರಲ್ಲಿ ಮನವಿ ಮಾಡಿತ್ತು. ಸೂಕ್ತವಾಗಿ ಸ್ಪಂದಿಸಿದ ಯು.ಟಿ.ಖಾದರ್ ತಮ್ಮ ಶಾಸಕ ನಿಧಿಯಿಂದ ಇಂಟರ್ ಲಾಕ್ ಹಾಗೂ ಮೆಟ್ಟಿಲು ನಿರ್ಮಿಸಿಕೊಟ್ಟಿದ್ದು, ಅದರ ಉದ್ಘಾಟನೆಯು ಈ ಸಂದರ್ಭದಲ್ಲಿ ನಡೆಯಿತು.

  • ಸೋಮನಾಥ ಮಂದಿರದ ಕೆಳಗೆ 3 ಅಂತಸ್ತಿನ ಕಟ್ಟಡ, ಬೌದ್ಧ ಗುಹೆ ಪತ್ತೆ

    ಸೋಮನಾಥ ಮಂದಿರದ ಕೆಳಗೆ 3 ಅಂತಸ್ತಿನ ಕಟ್ಟಡ, ಬೌದ್ಧ ಗುಹೆ ಪತ್ತೆ

    – 12 ಮೀಟರ್ ಕೆಳಗಿನವರೆಗೆ ಅಧ್ಯಯನ

    ಗಾಂಧಿನಗರ: ಗುಜರಾತಿನ ಪ್ರಸಿದ್ಧ ಸೋಮನಾಥ ದೇವಾಲಯದ ಅಡಿಯಲ್ಲಿ ಮೂರು ಮಹಡಿಯ ಕಟ್ಟಡ ಇರೋದು ಪತ್ತೆಯಾಗಿದೆ. ಐಐಟಿ ಗಾಂಧಿನಗರ ಮತ್ತು ನಾಲ್ಕು ಸಂಸ್ಥೆಗಳ ಪುರಾತತ್ವ ತಜ್ಞರು ದೇಗುಲದ ಕೆಳಗಿನ ಕಟ್ಟಡವನ್ನ ಪತ್ತೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಮತ್ತು ದೇವಾಲಯದ ಟ್ರಸ್ಟಿ ಆಗಿರುವ ನರೇಂದ್ರ ಮೋದಿ ಅವರ ಆದೇಶದ ಮೇಲೆ ಈ ಉತ್ಖನನ ನಡೆಸಲಾಗಿತ್ತು. ಒಂದು ವರ್ಷದ ಹಿಂದೆ ದೆಹಲಿಯ ಸಭೆಯಲ್ಲಿ ಪುರಾತತ್ವ ಇಲಾಖೆಗೆ ಉತ್ಖನನ ನಡೆಸುವಂತೆ ಪ್ರಧಾನಿಗಳು ಆದೇಶಿಸಿದ್ದರು.

    ‘ಎಲ್’ ಆಕಾರದಲ್ಲಿರುವ ಕಟ್ಟಡ: ಕಳೆದ ಒಂದು ವರ್ಷದಿಂದ ಅಧ್ಯಯನ ನಡೆಸಿರುವ ಪುರಾತತ್ವ ಇಲಾಖೆ 32 ಪುಟಗಳ ವರದಿಯನ್ನ ಸಿದ್ಧಪಡಿಸಿ ಸೋಮನಾಥ್ ಟ್ರಸ್ಟ್ ಗೆ ನೀಡಿದೆ. ಮಂದಿರದ ಕೆಳಗೆ ‘ಎಲ್’ ಆಕಾರದಲ್ಲಿ ಮತ್ತೊಂದು ಕಟ್ಟಡವಿದೆ. ಸೋಮನಾಥ ದೇವಾಲಯದ ದಿಗ್ವಿಜಯ್ ದ್ವಾರ ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಪ್ರತಿಮೆಯ ಆಸುಪಾಸಿನಲ್ಲಿ ಬೌಧ್ಧ ಗುಹೆಗಳಿವೆ ಎಂದು ಉತ್ಖನನ ತಂಡ ಹೇಳಿದೆ.

    ತಜ್ಷರ ತಂಡ ಸುಮಾರು 5 ಕೋಟಿ ಮೌಲ್ಯದ ಮಶೀನ್ ಬಳಸಿ ಶೋಧನೆ ನಡೆಸಿದೆ. ಭೂಮಿಯ ಕೆಳಗೆ ಅಂದ್ರೆ 12 ಮೀಟರ್ ವರೆಗೆ ಜಿಪಿಆರ್ ಸಹಾಯದಿಂದ ಶೋಧ ನಡೆಸಿದೆ. ದೇವಾಲಯದ ಕೆಳಗೆ ಕಟ್ಟಡವಿದ್ದು, ಅದು ಪ್ರವೇಶ ದ್ವಾರವನ್ನ ಹೊಂದಿದೆ ಎಂದು ತಜ್ಞರ ತಂಡ ಹೇಳಿದೆ.

    ರಾಜರಿಂದ 5 ಬಾರಿ ಜೀರ್ಣೋದ್ಧಾರ: ಮೊದಲಿಗೆ ಇಲ್ಲಿ ಸಣ್ಣ ಮಂದಿರ ಇತ್ತು. ಏಳನೇ ಶತಮಾನದಲ್ಲಿ ವಲ್ಲಭಿಯ ಮೈತ್ರಕ ರಾಜರು ಈ ದೇವಾಲಯವನ್ನ ಜೀರ್ಣೋದ್ಧಾರ ಮಾಡಿದ್ದರು. ತದನಂತರ ಎಂಟನೇ ಶತಮಾನದಲ್ಲಿ ಅರೇಬಿಕ್ ಗವರ್ನರ್ ಜುನೇದ್ ದೇಗುಲವನ್ನ ಧ್ವಂಸಗೊಳಿಸಲು ತನ್ನ ಸೈನ್ಯವನ್ನ ಕಳುಹಿಸಿದ್ದನು. ಕ್ರಿಸ್ತ ಶಕ 815ರಲ್ಲಿ ಪ್ರತಿಹಾರದ ರಾಜ ನಾಗಭಟ್ಟ ಮೂರನೇ ಬಾರಿ ಈ ದೇವಾಲಯವನ್ನು ನಿರ್ಮಿಸಿದರು. ಇದೇ ಅವಶೇಷಗಳ ಮೇಲೆ ಮಾಲ್ವಾ ರಾಜಾ ಬೋಜ ಮತ್ತು ಗುಜರಾತಿನ ಅರಸ ಭೀಮದೇವ ಮಂದಿರವನ್ನ ಪುನರ್ ನಿರ್ಮಾಣ ಮಾಡಿದ್ದರು. 1169ರಲ್ಲಿ ರಾಜಾ ಕುಮಾರ್ ಪಾಲ್ ದೇಗುಲವನ್ನ ಪುನಶ್ಚೇತನಗೊಳಿಸಿದನು.

    ಸದ್ಯದ ದೇವಾಲಯದಲ್ಲಿ ಪಟೇಲರ ಪಾತ್ರ: 1706ರಲ್ಲಿ ಮೊಗಲ್ ಬಾದ್‍ಶಾ ಔರಂಗಜೇಬ್ ಸೋಮನಾಥ ದೇವಾಲಯವನ್ನ ಸಂಪೂರ್ಣವಾಗಿ ಕೆಡವಿದ್ದನು. ಸ್ವತಂತ್ರ ಬಳಿಕ 1947ರಲ್ಲಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ದೇವಸ್ಥಾನದ ನಿರ್ಮಾಣಕ್ಕೆ ಆದೇಶ ನೀಡಿದ್ದರು. 1951ರಲ್ಲಿ ಹೊಸ ಸೋಮನಾಥ ದೇಗುಲ ನಿರ್ಮಾಣವಾಗಿತ್ತು.

  • ರಾಹುಲ್ ಗಾಂಧಿ ಧರ್ಮ ಯಾವುದು? ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ ದೇವಾಲಯ ಭೇಟಿ

    ರಾಹುಲ್ ಗಾಂಧಿ ಧರ್ಮ ಯಾವುದು? ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ ದೇವಾಲಯ ಭೇಟಿ

    ಅಲಹಾಬಾದ್: ಗುಜರಾತ್ ಸೋಮನಾಥ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ ರಾಹುಲ್ ಗಾಂಧಿ ಹಿಂದೂಯೇತರ ಕಾಲಂನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ ಎನ್ನಲಾದ ಸುದ್ದಿ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಈ ವಿಚಾರ ಬಿಜೆಪಿಗೆ ದೊಡ್ಡ ಅಸ್ತ್ರವೇ ಸಿಕ್ಕಿದಂತಾಗಿದ್ದು, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಾಹುಲ್ ಮೊದಲು ತನ್ನ ಧರ್ಮ ಯಾವುದು ಅಂತಾ ಘೋಷಿಸಿಕೊಳ್ಳಲಿ. ನನ್ನ ಪ್ರಕಾರ ಅವರು ಕ್ರಿಶ್ಚಿಯನ್ ಅವರು ಪ್ರತಿ ಭಾನುವಾರ ಚರ್ಚ್‍ಗೆ ಭೇಟಿ ನೀಡುತ್ತಾರೆ ಆರೋಪಿಸಿದ್ದಾರೆ.

    ಈ ಬೆನ್ನಲ್ಲೇ, ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯವರು ಸುಳ್ಳು ದಾಖಲೆ ತೋರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕೆ ಮಾಡಿದೆ.

    ಆಗಿದ್ದು ಏನು?
    ಸೋಮನಾಥ ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಬಳಿಕ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಮನೋಜ್ ತ್ಯಾಗಿ ಪುಸ್ತಕ ನೀಡಿದ್ದಾರೆ. ಈ ಪುಸ್ತಕದಲ್ಲಿ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸದಸ್ಯ ಹಾಗೂ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಆಗಿರುವ ಅಹ್ಮದ್ ಪಟೇಲ್ ಸಹಿ ಹಾಕಿದ್ದಾರೆ.

    ರಾಹುಲ್ ಗಾಂಧಿ ಯಾರು?
    ಭಾರತದ ಮೊದಲ ಪ್ರಧಾನಿ ನೆಹರೂ ಅವರ ತಂದೆ ಮೋತಿಲಾಲ್ ನೆಹರೂ ಅವರು ಮೂಲತಃ ಕಾಶ್ಮೀರಿ ಬ್ರಾಹ್ಮಣರು. ಜವಾಹರ್ ಲಾಲ್ ನೆಹರೂ ಅವರ ಪುತ್ರಿ ಭಾರತದ ಮಾಜಿ ಪ್ರಧಾನಿ ಇಂದಿರಾ ಪ್ರಿಯದರ್ಶಿನಿ ಅವರು ಫಿರೋಜ್ ಅವರನ್ನು ಮದುವೆಯಾದರು. ಫಿರೋಜ್ ಮೂಲತಃ ಪಾರ್ಸಿ ಧರ್ಮಕ್ಕೆ ಸೇರಿದವರಾಗಿದ್ದು ಮದುವೆಯ ಬಳಿಕ ಗಾಂಧಿ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ನಂತರದ ಅವಧಿಯಲ್ಲಿ ಇಂದಿರಾ ಹೆಸರಿನ ಜೊತೆ ಗಾಂಧಿ ಸೇರಿಕೊಂಡಿತು. ಇಂದಿರಾ ಗಾಂಧಿ ಪುತ್ರ ರಾಜೀವ್ ಗಾಂಧಿ ಅವರು ಇಟಲಿ ಮೂಲದ ಸೋನಿಯಾ ಗಾಂಧಿ ಅವರನ್ನು ಪ್ರೀತಿಸಿ ಮದುವೆಯಾದರು. ಸೋನಿಯಾ ಗಾಂಧಿ ಮೂಲತಃ ಕ್ರೈಸ್ತ ಸಮುದಾಯಕ್ಕೆ ಸೇರಿದವರು. ರಾಜೀವ್ ಗಾಂಧಿ ಹಾಗೂ ಸೋನಿಯಾ ಪುತ್ರ ರಾಹುಲ್ ಗಾಂಧಿ.