Tag: ಸೋನಾಲ್ ಮಾಂಟೆರೊ

  • ಕೂಲ್ ಕೂಲ್ ಪ್ರದೇಶದಲ್ಲಿ ಕನ್ನಡದ ಹಾಟ್ ಹಾಟ್ ನಟಿಯರು

    ಕೂಲ್ ಕೂಲ್ ಪ್ರದೇಶದಲ್ಲಿ ಕನ್ನಡದ ಹಾಟ್ ಹಾಟ್ ನಟಿಯರು

    ಚಂದನವನದ ಚೆಂದದ ತಾರೆಯರು ಹಾಲಿಡೇ ಎಂಜಾಯ್ ಮಾಡಲು ನಾನಾ ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಬೇಸಿಗೆ ಬಿಸಿಯನ್ನು ಕಳೆಯಲೆಂದೇ ಅವರು ಕೂಲ್ ಕೂಲ್ ಪ್ರದೇಶಕ್ಕೆ ಹಾರಿ, ಪ್ರಕೃತಿಯೊಂದಿಗೆ ಬೆರೆತಿದ್ದಾರೆ. ರಿಲ್ಯಾಕ್ಸೇಷನ್‌ಗಾಗಿ ದೂರದ ಊರಿನಲ್ಲಿ ಬೀಡು ಬಿಟ್ಟಿರೋ ನಟಿಮಣಿಯರು ಅಲ್ಲಿನ ಕ್ಷಣಗಳನ್ನು ಹಿಡಿದಿಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಗಂಡ್ ಹೈಕ್ಳ ನಿದ್ದೆಕೆಡಿಸಿದ್ದಾರೆ. ಕೂಲ್ ಕೂಲ್ ಪ್ರದೇಶದಲ್ಲಿ ಪಯಣ ಬೆಳೆಸಿರುವ ನಟಿಯರು ಯಾರು? ಅವರು ಎಲ್ಲಿದ್ದಾರೆ ಎನ್ನುವ ಕಂಪ್ಲೀಟ್ ಸ್ಟೋರಿ ಇದು.

    ಬೇಸಿಗೆ ಬಂತು ಅಂದ್ರೆ ಸಾಕು ಎಲ್ಲರಿಗೂ ನೆನಪಾಗೋದು ರಜಾ ಮಜಾ ಅಷ್ಟೇ. ಬೇಸಿಗೆ ಶುರುವಾಗುತ್ತಿದ್ದಂತೆ ಹಾಲಿಡೇ ಟ್ರೀಪ್ ಪ್ಲ್ಯಾನ್‌ ಶುರುವಾಗುತ್ತದೆ. ಅದೇ ರೀತಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಛಾಪು ಮೂಡಿಸಿರೋ ನಟಿಯರಾದ ಅನುಪಮ ಗೌಡ, ನೇಹಾ ಗೌಡ, ಸೋನಾಲ್, ನಮೃತಾ ಗೌಡ, ಕಾರುಣ್ಯ ರಾಮ್ ಸೇರಿದಂತೆ ಹಲವು ನಟಿಮಣಿಯರು ಹಾಲಿಡೇಯಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಸದ್ಯ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

    ಟಿವಿ ಪರದೆಯ ಕ್ವೀನ್ ಅನುಪಮ ಗೌಡ, ಬಿಗ್ ಬಾಸ್, ನಮ್ಮಮ್ಮ ಸೂಪರ್ ಸ್ಟಾರ್ ಶೋ ಮೂಲಕ ಸದ್ದು ಮಾಡಿದವರು. ಇದೀಗ ಕೆಲಸದ ಮಧ್ಯೆ ಕೊಂಚ ಫ್ರೀ ಮಾಡಿಕೊಂಡು ಗೋವಾ ಟ್ರೀಪ್‌ಗೆ ಹೋಗಿದ್ದಾರೆ. ಅನುಪಮಾಗೆ ಜತೆಗೆ ಸ್ನೇಹಿತೆಯರಾದ ನಟಿ ನೇಹಾ ಗೌಡ, ಇಶಿತಾ ವರ್ಷ ಕೂಡ ಸಾಥ್ ನೀಡಿದ್ದಾರೆ.

     

    View this post on Instagram

     

    A post shared by Anupama Anandkumar (@anupamagowda)

    ಕಿರುತೆರೆ ನಟಿ ಅನುಪಮಾ ಗೌಡ ಗೋವಾದ ಸುಂದರ ತಾಣದಲ್ಲಿ ರಿಲ್ಯಾಕ್ಸ್ ಮಾಡುತ್ತಾ, ಬೆಸ್ಟ್ ಫ್ರೆಂಡ್ಸ್ ನೇಹಾ,ಇಶಿತಾ ಜೊತೆಗಿನ ಫೋಟೋ ಶೇರ್ ಮಾಡಿ, 6 ತಿಂಗಳ ಹಳೆಯ ಟ್ರಿಪ್ ಫ್ಲ್ಯಾನ್, ಕೊನೆಗೂ ಗೋವಾ ಪ್ಲ್ಯಾನ್‌ ಪೂರ್ಣವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by namratha (@namratha__gowdaofficial)

    ಸ್ಮಾಲ್ ಸ್ಕ್ರೀನ್‌ನಲ್ಲಿ ಒನ್ ಆಫ್ ದಿ ಫೇಮಸ್ ನಟಿ ನಮೃತಾ ಗೌಡ `ನಾಗಿಣಿ 2′ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಶಿವಾನಿ ಪಾತ್ರಧಾರಿಯಾಗಿ ಸೈ ಎನಿಸಿಕೊಂಡವರು. ಸೀರಿಯಲ್‌ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸ್ನೇಹಿತೆಯ ಜತೆ ಥೈಲ್ಯಾಂಡ್‌ಗೆ ಹೋಗಿದ್ದಾರೆ. ಸಖತ್ ಹಾಟ್ ಫೋಟೋಶೂಟ್‌ನಿಂದ ಗಂಡ್ ಹೈಕ್ಳ ನಿದ್ದೆಗೆಡಿಸಿದ್ದಾರೆ. ಈ ಸದ್ಯ ಈ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ.

    `ರಾಬರ್ಟ್’ ಖ್ಯಾತಿಯ ನಟಿ ಸೋನಾಲ್ ಮಾಂಟೆರೊ ಸದ್ಯ ಸರೋಜಿನಿ ನಾಯ್ಡು ಬಯೋಪಿಕ್ ಮೂಲಕ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದಾರೆ. ಕನ್ನಡದ `ಗಾಳಿಪಟ 2′, `ಬನಾರಸ್’, `ಬುದ್ಧಿವಂತ 2′ ಸೇರಿದಂತೆ ಸಾಲು ಸಾಲು ಚಿತ್ರಗಳು ಸೋನಾಲ್ ಕೈಯಲ್ಲಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟ್‌ನಿಂದ ಬ್ಯುಸಿಯಿದ್ದ ಸೋನಾಲ್, ಕೆಲಸಕ್ಕೆ ಬ್ರೇಕ್ ಹಾಕಿ ಕಜಕಿಸ್ತಾನಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ತಾಯಿಯ ಜತೆ ಕಜಕಸ್ತಾನ ಸುಂದರ ತಾಣಗಳಿಗೆ ಭೇಟಿ ನೀಡಿರೋ ಫೋಟೋಸ್, ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ತುಂಡುಡುಗೆ ತೊಟ್ಟು ಟ್ರೋಲ್ ಆದ ಸಮಂತಾ

    ಸ್ಯಾಂಡಲ್‌ವುಡ್ ನಟಿಮಣಿಯರು ಬೇಸಿಗೆ ಕಾಲದಲ್ಲಿ ಭೇಟಿ ಕೊಟ್ಟಿರೋ ಟ್ರಾವೆಲ್ ಸ್ಟೋರಿ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ನೆಚ್ಚಿನ ನಟಿಯರ ಖುಷಿ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

  • ಬದಾಮಿಯಲ್ಲಿ ಬೀಡು ಬಿಟ್ಟಿತ್ತು ಯೋಗರಾಜ್ ಭಟ್‌ & ಟೀಮ್

    ಬದಾಮಿಯಲ್ಲಿ ಬೀಡು ಬಿಟ್ಟಿತ್ತು ಯೋಗರಾಜ್ ಭಟ್‌ & ಟೀಮ್

    ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ ಗರಡಿ ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೂರ್ಯ ನಾಯಕನಾಗಿ ನಟಿಸುತ್ತಿರುವ, ಸೋನಾಲ್ ಮಾಂಟೆರೊ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಈ ಸುಂದರ ತಾಣದಲ್ಲಿ “ಗರಡಿ” ಚಿತ್ರದ ಟೈಟಲ್ ಸಾಂಗ್ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಕರ್ನಾಟಕ ರಾಜ್ಯದ ಮಂತ್ರಿಗಳು, ನಟರು, ನಿರ್ಮಾಪಕರೂ ಆಗಿರುವ ಕೌರವ ಬಿ.ಸಿ.ಪಾಟೀಲ್ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಗರಡಿ ಮನೆಯಲ್ಲಿ ತರಭೇತಿ ಪಡೆದಿರುವ ಸಾಕಷ್ಟು ಕುಸ್ತಿಪಟುಗಳು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.  ಬರೀ ಹಾಡಿನ ಚಿತ್ರೀಕರಣವಷ್ಟೇ ಅಲ್ಲದೇ ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಕೌರವ ಬಿ‌.ಸಿ.ಪಾಟೀಲ್ ಮುಂತಾದವರ ಅಭಿನಯದಲ್ಲಿ ಮಾತಿನ ಭಾಗದ ಚಿತ್ರೀಕರಣ ಸಹ ನಡೆದಿದೆ. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    ಬಹಳ ದಿನಗಳ ನಂತರ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ವಿ.ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸೂರ್ಯ, ಸೋನಾಲ್ ಮಾಂಟೆರೊ, ಕೌರವ ಬಿ.ಸಿ.ಪಾಟೀಲ್, ರವಿಶಂಕರ್, ಎಸ್.ಟಿ.ಸೋಮಶೇಖರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ(ಟಗರು), ರವಿಚೇತನ್, ತೇಜಸ್ವಿನಿ ಪ್ರಕಾಶ್ ಮುಂತಾದವರು “ಗರಡಿ” ಚಿತ್ರದ ತಾರಾಬಳಗದಲ್ಲಿದ್ದಾರೆ.