Tag: ಸೈಬರ್ ಸೆಕ್ಯೂರಿಟಿ

  • ಬ್ಯಾಂಕ್‍ನಲ್ಲಿಟ್ಟ ದುಡ್ಡು ಸೇಫ್ ಅಲ್ಲ- ಸದ್ದಿಲ್ಲದೆ ಜನರ ಹಣ ಅಕೌಂಟ್‍ನಿಂದ ಮಾಯ!

    ಬ್ಯಾಂಕ್‍ನಲ್ಲಿಟ್ಟ ದುಡ್ಡು ಸೇಫ್ ಅಲ್ಲ- ಸದ್ದಿಲ್ಲದೆ ಜನರ ಹಣ ಅಕೌಂಟ್‍ನಿಂದ ಮಾಯ!

    – ಸೈಬರ್ ಸೆಕ್ಯೂರಿಟಿಯಿಂದ ಆರ್‍ಬಿಐಗೆ ಎಚ್ಚರಿಕೆ ರವಾನೆ

    ಬೆಂಗಳೂರು: ಸ್ಕಿಮರ್ ಜಾಲದ ಬೆನ್ನಲ್ಲೆ ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ಬ್ಯಾಂಕ್‍ನಲ್ಲಿ ಇಟ್ಟ ದುಡ್ಡು ಸೇಫ್ ಅಲ್ಲ ಎಂದು ಸೈಬರ್ ಸೆಕ್ಯೂರಿಟಿಯಿಂದ ಆರ್‍ಬಿಐಗೆ ಎಚ್ಚರಿಕೆ ರವಾನಿಸಲಾಗಿದೆ.

    ಹೌದು. ಎಟಿಎಂಗೆ ದತ್ತಾಂಶಗಳನ್ನು ಕದಿಯುವ ಸ್ಕಿಮರ್ ಆಳವಡಿಸಿ ಜನರ ದುಡ್ಡನ್ನು ಕದಿಯವ ಖತರ್‍ನಾಕ್‍ಗಳನ್ನು ಪೊಲೀಸರು ಹಿಡಿದ ಬೆನ್ನಲ್ಲೆ ಬ್ಯಾಂಕ್‍ನ ಇಂಟರ್‍ನೆಟ್‍ಗೆ ಕನ್ನ ಹಾಕುವ ಟೀಮ್ ಬಗ್ಗೆ ಬೆಳಕಿಗೆ ಬಂದಿದೆ.

    ಬ್ಯಾಂಕುಗಳಲ್ಲಿರುವ ನಿಮ್ಮ ಆಕೌಂಟ್ ಡೀಟೈಲ್ಸ್ ತಿಳಿದುಕೊಂಡು ಕನ್ನ ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಸೈಬರ್ ಸಂಸ್ಥೆಯ ಸಹಾಯ ಯಾಚಿಸಿವೆ. ಇಂಟರ್ನಲ್ ಮಾಹಿತಿ ಸೋರಿಕೆಯಾಗ್ತಿರೋದು ಬ್ಯಾಂಕುಗಳಿಂದಾನೆ ಅನ್ನೋದು ಇನ್ನೊಂದು ಸ್ಫೋಟಕ ಸತ್ಯ.

    ಬ್ಯಾಂಕ್ ಡೇಟಾ ಲೀಕ್ ಹೇಗೆ?: ಬ್ಯಾಂಕ್ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವರಿಗೆ ಪೆನ್‍ಡ್ರೈವ್ ಅಥವಾ ಯಾವುದಾದರೂ ಸಿಡಿಯನ್ನು ನೀಡಲಾಗುತ್ತದೆ. ಇದನ್ನು ಬ್ಯಾಂಕ್ ಸಿಬ್ಬಂದಿಗಳು ಕಚೇರಿಯ ಕಂಪ್ಯೂಟರ್‍ಗೆ ಹಾಕಿದ ತಕ್ಷಣ ವೈರಸ್ ಆಟ್ಯಾಕ್ ಆಗಿ ಮಾಹಿತಿ ಲೀಕ್ ಆಗುತ್ತದೆ.

    ಇತ್ತೀಚೆಗೆ ಬ್ಯಾಂಕ್ ಸಿಬ್ಬಂದಿಗಳ ಇ-ಮೇಲ್‍ಗಳಿಗೆ ವೈರಸ್ ಇರುವ ಲಿಂಕ್‍ಗಳನ್ನು ಕಳಿಸಲಾಗುತ್ತಿದೆ. ಈ ಲಿಂಕ್‍ಗಳನ್ನು ಕಚೇರಿ ಕಂಪ್ಯೂಟರ್‍ನಲ್ಲಿ ಒಪನ್ ಮಾಡಿದರೆ ಅಕೌಂಟ್ ಡೀಟೈಲ್ಸ್ ಕಳ್ಳರ ಪಾಲಾಗುತ್ತದೆ. ಇದರಿಂದ ಅದೆಷ್ಟೋ ಜನರ ದುಡ್ಡು ಸದ್ದಿಲ್ಲದೆ ಅಕೌಂಟ್‍ನಿಂದ ಮಾಯವಾಗಿದೆ.

    ಇದಕ್ಕಾಗಿ ಸೈಬರ್ ಸೆಕ್ಯೂರಿಟಿ ಸಂಸ್ಥೆಯವರು ಆರ್‍ಬಿಐಗೆ ಪತ್ರ ಬರೆದಿದ್ದು, ಇದರ ಬಗ್ಗೆ ಗಮನ ಹರಿಸಿ, ಒಂದು ಕಮಿಟಿ ರಚನೆ ಮಾಡಿ. ಎಟಿಎಂಗೆ ವಿಸಿಟ್ ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಅಂತಾ ಹೇಳಿದ್ದಾರೆ.

  • ವನ್ನಾಕ್ರೈ ಸೈಬರ್ ದಾಳಿಯ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್

    ವನ್ನಾಕ್ರೈ ಸೈಬರ್ ದಾಳಿಯ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್

    ಬೆಂಗಳೂರು: ವನ್ನಾಕ್ರೈ ಸೈಬರ್ ದಾಳಿಗೆ ಭಾರತ ಸೇರಿ ವಿಶ್ವವೇ ತತ್ತರಿಸುತ್ತಿದ್ದರೆ, ಈಗ ಇದೇ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಲು ಹಾಕರ್ಸ್ ಮುಂದಾಗಿದ್ದಾರೆ.

    ಹೌದು. ವನ್ನಾಕ್ರೈ ಸೈಬರ್ ದಾಳಿಯಿಂದ ಪಾರಾಗೋದು ಹೇಗೆ ಎಂದು ಇಮೇಲ್ ಗಳಿಗೆ ಮಾಲ್ವೇರ್‍ಗಳ ಲಿಂಕ್ ಕಳುಹಿಸಿ ಹ್ಯಾಕರ್ಸ್ ಗ್ರಾಹಕರ ಕಂಪ್ಯೂಟರ್ ಗಳಿಂದ ದಾಖಲೆಗಳನ್ನು ಕದಿಯುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಈ ಕೆಳಗಿನ ಲಿಂಕ್ ಡೌನ್‍ಲೋಡ್ ಮಾಡಿ ಕಂಪ್ಯೂಟರ್ ಸುರಕ್ಷಿತವಾಗಿಡಿ ಎನ್ನುವ ಸಂದೇಶವಿರುವ ಯಾವುದೇ ಮೇಲ್ ಗಳನ್ನು ಓಪನ್ ಮಾಡದೇ ಇರುವುದು ಉತ್ತಮ ಎಂದು ಸೈಬರ್ ಸೆಕ್ಯೂರಿಟಿ ಸಂಸ್ಥೆಗಳು ಜನರಿಗೆ ಈಗ ಎಚ್ಚರಿಕೆ ನೀಡಿವೆ.

    ರಾನ್ಸಸಂವೇರ್ ಗಿಂತ ಇದು ಭಿನ್ನ ಹೇಗೆ?
    ರಾನ್ಸಸಂವೇರ್ ಕುತಂತ್ರ ಸಾಫ್ಟ್ ವೇರ್ ಬಳಸಿ ಕಂಪ್ಯೂಟರ್ ಸಿಸ್ಟಂ ಅನ್ನು ಲಾಕ್ ಮಾಡಿ ಇಷ್ಟೇ ಪ್ರಮಾಣದ ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ ನೀಡಬೇಕು. ಇಲ್ಲದೇ ಇದ್ದಲ್ಲಿ ಈ ದಾಖಲೆಗಳನ್ನು ಡಿಲೀಟ್ ಮಾಡುತ್ತೇವೆ ಎಂದು ಹೇಳಿ ಬೆದರಿಕೆ ತಂತ್ರವನ್ನು  ಹಾಕರ್ಸ್ ಗಳು ಮಾಡುತ್ತಿದ್ದಾರೆ. ಆದರೆ ಈ ಹ್ಯಾಕರ್ಸ್ ಗಳು ಹಣದ ಬೇಡಿಕೆ ಇಡುವುದಿಲ್ಲ. ಬದಲಾಗಿ ಮಾಲ್ವೇರ್ ಕಳುಹಿಸಿ ಕಂಪ್ಯೂಟರ್ ನಲ್ಲಿದ್ದ ದಾಖಲೆಯನ್ನು ಕದಿಯುತ್ತಾರೆ.

    ಇದನ್ನೂ ಓದಿ: ಏನಿದು ವನ್ನಾಕ್ರೈ ಸೈಬರ್ ದಾಳಿ? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ? ಯಾವ ದೇಶದಲ್ಲಿ ಏನಾಗಿದೆ?

    ಇದನ್ನೂ ಓದಿ: ಶಿವಮೊಗ್ಗದಲ್ಲೂ Ransomware ಸೈಬರ್ ದಾಳಿ- 600 ಡಾಲರ್ ಹಣಕ್ಕೆ ಬೇಡಿಕೆ