Tag: ಸೈಬರ್ ಕ್ರೈಮ್

  • ಆನ್‍ಲೈನ್‍ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋ ಮಾರಾಟ ಮಾಡ್ತಿದ್ದವ ಅರೆಸ್ಟ್

    ಆನ್‍ಲೈನ್‍ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋ ಮಾರಾಟ ಮಾಡ್ತಿದ್ದವ ಅರೆಸ್ಟ್

    ಬೆಂಗಳೂರು: ಆನ್‍ಲೈನ್‍ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದವನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ಉಡುಪಿ ಮೂಲದ ಯುವಕ ಸೌರವ್ ಶೆಟ್ಟಿ (21) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ಮಾಹಿತಿ ಆಧರಿಸಿ ಸೈಬರ್ ಕ್ರೈಮ್ ನಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸೌರವ್ ಶೆಟ್ಟಿ ಇನ್‍ಸ್ಟಾಗ್ರಾಮ್ ಮೂಲಕ ಅಶ್ಲೀಲ ವಿಡಿಯೋ ಲಿಂಕ್ ರವಾನಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಆರೋಪಿ ಆನ್‍ಲೈನ್ ಸ್ಟೋರೆಜ್‍ನಲ್ಲಿಯೂ ಅಶ್ಲೀಲ ವಿಡಿಯೋಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಈಗ ಆರೋಪಿಯೂ ಈ ಕೃತ್ಯಕ್ಕೆ ಬಳಸುತ್ತಿದ್ದ ಡಿಜಿಟಲ್ ಉಪಕರಣಗಳು ಮತ್ತು ಕ್ಲೌಡ್ ಖಾತೆಯನ್ನು ಸೈಬರ್ ಕ್ರೈಂ ಪೊಲೀಸರು ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.

    ಈ ಆನ್‍ಲೈನ್ ಅಶ್ಲೀಲ ವಿಡಿಯೋ ಮಾರಾಟ ದಂಧೆಯಲ್ಲಿ ಅನ್ಯ ರಾಜ್ಯಗಳ ವ್ಯಕ್ತಿಗಳು ಭಾಗಿಯಾಗಿರುವುದು ತನಿಖೆ ವೇಳೆ ಬೆಳಿಕಗೆ ಬಂದಿದ್ದು, ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

  • ತುಮಕೂರು ಯುವಕನ ಹಣ ಪ್ಯಾಲೆಸ್ಟೈನ್ ನಲ್ಲಿ ಡ್ರಾ!

    ತುಮಕೂರು ಯುವಕನ ಹಣ ಪ್ಯಾಲೆಸ್ಟೈನ್ ನಲ್ಲಿ ಡ್ರಾ!

    ಹಾಸನ: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 13,721 ರೂ ಡ್ರಾ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಮೂಲತಃ ತುಮಕೂರು ಮೂಲದ ಯುವಕ ಕಿರಣ್ ಕುಮಾರ್ ಹಣ ಕಳೆದು ಕೊಂಡ ಯುವಕ. ಕಿರಣ್ ಯಾರಿಗೂ ಎಟಿಎಂ ಪಾಸ್‍ವರ್ಡ್ ನೀಡದೇ ಇದ್ದರೂ ಅವರ ಐಡಿಬಿಐ ಬ್ಯಾಂಕ್ ಖಾತೆಯಿಂದ ಕಳೆದ ಡಿಸೆಂಬರ್ 12ರ ರಾತ್ರಿ, ಸುಮಾರು 13,721 ರೂ. ಹಣ ನಾಪತ್ತೆಯಾಗಿದೆ.

    ಹಾಸನದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಿರಣ್ ಪ್ರಸ್ತುತ ಖರ್ಚಿಗೂ ಹಣ ಇಲ್ಲದೇ ಪರದಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನೋಡುಗರಿಗೆ ಇದು ಸಣ್ಣ ಪ್ರಮಾಣದ ಹಣ ಇರಬಹುದು. ಆದರೆ ನನಗಿದು ದೊಡ್ಡ ಮೊತ್ತ. ಅಷ್ಟಕ್ಕೂ ನಾನು ನನ್ನ ಅಕೌಂಟ್ ಹಾಗೂ ಎಟಿಎಂ ನಂಬರ್ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಆದರೂ ಹಣ ಡ್ರಾ ಆಗಿದೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

    ಹಣ ಡ್ರಾ ಆದ ಕುರಿತು ಬ್ಯಾಂಕ್‍ನ ಮಿನಿಸ್ಟೇಟ್ ಮೆಂಟ್ ತೆಗೆಸಿ ನೋಡಿದರೆ, ದೂರದ ಪ್ಯಾಲೆಸ್ಟೇನ್ ನಲ್ಲಿ ಹಣ ಡ್ರಾ ಮಾಡಲಾಗಿದೆ ಎಂದು ತೋರಿಸುತ್ತಿದೆ. ಈ ಬಗ್ಗೆ ಐಡಿಬಿಐ ಬ್ಯಾಂಗ್ ಗೆ ಹೋಗಿ ಕೇಳಿದರೆ, ಪೊಲೀಸ್ ದೂರು ಕೊಡಿ ಎಂದು ಹೇಳಿದ್ದಾರೆ. ಪೊಲೀಸ್ ಠಾಣೆಗೆ ಹೋದರೆ ಇಂಥ ಕೇಸ್ ಗಳು ಸಾಕಷ್ಟು ಬರುತ್ತವೆ ಎಂದು ಹೇಳುತ್ತಾರೆ. ಹೀಗೆ ಆದರೆ ಬಡವರು ಏನು ಮಾಡಬೇಕು ಎಂದು ಕಿರಣ್ ಅಸಹಾಯಕರಾಗಿ ಪ್ರಶ್ನಿಸಿದ್ದಾರೆ. ಅಲ್ಲದೇ ಇದರ ಹಿಂದೆ ಆನ್ ಲೈನ್ ವಂಚಕರ ಕೈವಾಡವಿದ್ದು, ಹೋದ ಹಣ ವಾಪಸ್ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.