Tag: ಸೈಕ್ಲಿಸ್ಟ್

  • Commonwealth Games: ಪದಕಗೆಲ್ಲೋ ತವಕದಲ್ಲಿದ್ದ ಭಾರತದ ಮೀನಾಕ್ಷಿಗೆ ಅಪಘಾತ – ಆಂಗ್ಲರ ಪಾಲಾದ ಚಿನ್ನ

    Commonwealth Games: ಪದಕಗೆಲ್ಲೋ ತವಕದಲ್ಲಿದ್ದ ಭಾರತದ ಮೀನಾಕ್ಷಿಗೆ ಅಪಘಾತ – ಆಂಗ್ಲರ ಪಾಲಾದ ಚಿನ್ನ

    ಬರ್ಮಿಂಗ್‌ಹ್ಯಾಮ್: ಪದಕ ಗೆಲ್ಲುವ ತವಕದಲ್ಲಿದ್ದ ಭಾರತದ ಸೈಕ್ಲಿಸ್ಟ್ ಮೀನಾಕ್ಷಿ ಅಪಘಾತಕ್ಕೀಡಾದ್ದರಿಂದ ಗೆಲುವಿನ ಸನಿಹದಲ್ಲಿದ್ದ ಚಿನ್ನದ ಪದಕ ಆಂಗ್ಲರ ಪಾಲಾಯಿತು.

    ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 10 ಕಿಮೀ ಸ್ಕ್ರ್ಯಾಚ್‌ ರೇಸ್‌ನಲ್ಲಿ ಭಾರತೀಯ ಸೈಕ್ಲಿಸ್ಟ್ ಮೀನಾಕ್ಷಿ ಅಪಘಾತಕ್ಕೀಡಾಗಿದ್ದರಿಂದ ಅವರು ಸ್ಪರ್ಧೆಯಿಂದ ಕಾಲ್ಕಿತ್ತರು. ಇದೇ ರೇಸ್‌ನಲ್ಲಿ ಇಂಗ್ಲೆಂಡ್‌ನ ಪ್ರತಿಸ್ಪರ್ಧಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: Commonwealth Games: ಟಾಪ್-10 ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ

    ಅಪಘಾತಕ್ಕೀಡಾದ್ದರಿಂದ ಬೈಸಿಕಲ್‌ನಿಂದ ಕೆಳಗೆ ಬಿದ್ದ ಮೀನಾಕ್ಷಿ ಬ್ಯಾಂಕಿಂಗ್ ಟ್ರ್ಯಾಕ್‌ಗೆ ಜಾರಿದರು. ಈ ವೇಳೆ ಮೀನಾಕ್ಷಿ ಅವರನ್ನ ಹಿಂದಿಕ್ಕಲು ಬರುತ್ತಿದ್ದ ನ್ಯೂಜಿಲೆಂಡ್‌ನ ಬ್ರಯೋನಿ ಬೋಥಾ ಸಹ ಅಪಘಾತಕ್ಕೀಡಾಗಿ ಮೀನಾಕ್ಷಿ ಅವರ ಮೇಲೆಯೇ ಸೈಕಲ್ ಹತ್ತಿಸಿ ಕೆಳಗೆಬಿದ್ದರು. ಮೀನಾಕ್ಷಿ ಅವರಿಗೆ ಪೆಟ್ಟಾಗಿದ್ದರಿಂದ ಸ್ಪರ್ಧೆಯಿಂದ ಹೊರಬರಬೇಕಾಯಿತು. ನ್ಯೂಜಿಲೆಂಡ್‌ನ ಬ್ರಯೋನಿ ಬೋಥಾ ಕೂಡ ಅಪಘಾತಕ್ಕೆ ಸಿಲುಕಿದರು. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

    ಅಪಘಾತದ ನಂತರ ವೈದ್ಯರು ಸ್ಥಳಕ್ಕೆ ಧಾವಿಸಿ ಇಬ್ಬರು ಸವಾರರನ್ನು ರೇಸ್‌ನಿಂದ ಹೊರಗೆ ಕರೆತಂದರು. ಮೀನಾಕ್ಷಿ ಅವರನ್ನ ಸ್ಟ್ರೆಚರ್‌ ಮೇಲೆ ಕರೆದುಕೊಂಡು ಹೋಗಲಾಯಿತು. ನಂತರ ಈ ಸ್ಪರ್ಧೆಯಲ್ಲಿ ಇಂಗ್ಲೆಂಡ್‌ನ ಲಾರಾ ಕೆನ್ನಿ ಚಿನ್ನ ಗೆದ್ದರು.

    ಸದ್ಯ ಮೀನಾಕ್ಷಿ ಅಪಘಾತದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಕ್ರೀಡಾಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇದು ಲೀ ವ್ಯಾಲಿ ವೆಲೋ ಪಾರ್ಕ್‌ನಲ್ಲಿ ನಡೆದ 2ನೇ ಅಪಘಾತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೈಕ್ಲಿಂಗ್ ವೇಳೆ ಹೃದಯಾಘಾತ – ಸೈಕ್ಲಿಸ್ಟ್ ಸಾವು!

    ಸೈಕ್ಲಿಂಗ್ ವೇಳೆ ಹೃದಯಾಘಾತ – ಸೈಕ್ಲಿಸ್ಟ್ ಸಾವು!

    ಹುಬ್ಬಳ್ಳಿ: ಹವ್ಯಾಸಿ ಸೈಕ್ಲಿಸ್ಟ್ ಒಬ್ಬರು ಸೈಕಲ್ ರೈಡ್ ಮಾಡುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಏನಿದು ಘಟನೆ?: ಹುಬ್ಬಳ್ಳಿಯ ಬಸನಗೌಡ ಶಿವಳ್ಳಿ (35) ಎಂಬುವವರೇ ಮೃತ ಸೈಕ್ಲಿಸ್ಟ್. ಶಿವಳ್ಳಿ ಅವರು ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಸದಸ್ಯರಾಗಿದ್ದರು. ಹುಬ್ಬಳ್ಳಿ ಬೈಸಿಕಲ್ ಕ್ಲಬ್ 200 ಕಿ.ಮೀ. ಸೈಕಲ್ ಓಡಿಸುವ ಗುರಿ ಇಟ್ಟುಕೊಂಡು 35 ಸೈಕ್ಲಿಸ್ಟ್‍ಗಳು ಹುಬ್ಬಳ್ಳಿಯಿಂದ ಶಿಗ್ಗಾವಿಗೆ, ಹುಬ್ಬಳ್ಳಿಯಿಂದ ಕಿತ್ತೂರಿಗೆ ಹೋಗಿ ಬರುವ ಯೋಜನೆ ಹಾಕಿಕೊಂಡಿದ್ದರು. ಇದನ್ನೂ ಓದಿ: ಅಟ್ಲಾಂಟಾ ಮೃಗಾಲಯದ ಗೊರಿಲ್ಲಾಗಳಲ್ಲಿ ಕೊರೊನಾ ಸೋಂಕು ದೃಢ

    ಶಿವಳ್ಳಿ ಅವರು ಸೈಕಲ್ ಪ್ರಯಾಣಕ್ಕೆ ಹೆಸರು ನೋಂದಾಯಿಸಿಕೊಂಡಿರಲಿಲ್ಲ. ಆದರೆ, ಸ್ನೇಹಿತರನ್ನು ಬೀಳ್ಕೊಡಲು ಆಗಮಿಸಿದ್ದರು. ಹುಬ್ಬಳ್ಳಿಯ ಹೊರ ವಲಯದ ಕೆಲ ಕಿಲೋಮೀಟರ್ ವರೆಗೆ ಬಿಟ್ಟು ಬರುವುದಾಗಿ ಹೇಳಿ ಸ್ನೇಹಿತರೊಂದಿಗೆ ಸೈಕಲ್ ಏರಿ ಹೊರಟಿದ್ದರು. ಆದರೆ, ಮಧ್ಯದಲ್ಲಿ ಬಿಟ್ಟು ಬಾರದೇ ಶಿಗ್ಗಾವಿವರೆಗೆ ತೆರಳಿದ್ದರು. ಅಲ್ಲಿ ಹಣ್ಣು ತಿಂದು ಕೆಲಕಾಲ ಸ್ನೇಹಿತರೊಂದಿಗೆ ಹರಟೆ ಹೊಡೆದಿದ್ದಾರೆ. ಇದನ್ನೂ ಓದಿ:   ಗುಜರಾತ್ ಮುಂದಿನ ಸಿಎಂ ಯಾರು?- ಪಟೇಲ್ ಸಮುದಾಯಕ್ಕೆ ಮಣೆ ಹಾಕುವ ಚಿಂತನೆ

    ಶಿಗ್ಗಾವಿಯಿಂದ 3 ಕಿ.ಮೀ. ಮುಂದೆ ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಸೈಕಲ್ ರೈಡರ್ ತಂಡದಲ್ಲಿದ್ದ ವೈದ್ಯರು ಪರೀಕ್ಷೆ ಮಾಡಿದಾಗ ಹೃದಯಾಘಾತದಿಂದ ಶಿವಳ್ಳಿ ಅವರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಇದನ್ನೂ ಓದಿ:  ವಿಜಯಪುರದ ಕುವರಿಗೆ ರಾಷ್ಟ್ರೀಯ ಪ್ರಶಸ್ತಿ

    ಮೃತ ಬಸನಗೌಡ ಶಿವಳ್ಳಿ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.