Tag: ಸೈಕಲ್ ರಿಕ್ಷಾ ಚಾಲಕ

  • ಬಡ ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ತೆರಿಗೆ ಕಟ್ಟುವಂತೆ ಐ.ಟಿ ನೋಟಿಸ್!

    ಬಡ ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ತೆರಿಗೆ ಕಟ್ಟುವಂತೆ ಐ.ಟಿ ನೋಟಿಸ್!

    ಮಥುರಾ: ಉತ್ತರ ಪ್ರದೇಶದ ಬಡ ಸೈಕಲ್ ರಿಕ್ಷಾ ಚಾಲಕರೊಬ್ಬರಿಗೆ ಬರೋಬ್ಬರಿ 3 ಕೋಟಿ ರೂ. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿ ನೀಡಿರುವ ಅಚ್ಚರಿದಾಯಕ ಘಟನೆ ನಡೆದಿದೆ. ಈ ವಿಚಾರವಾಗಿ ಸೈಕಲ್ ರಿಕ್ಷಾ ಚಾಲಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಹೆಸರಿನ ಸೈಕಲ್ ರಿಕ್ಷಾ ಚಾಲಕ ಹೆದ್ದಾರಿ ಪೊಲೀಸ್ ಠಾಣೆಯಲ್ಲಿ ವಂಚನೆಯಾಗಿದೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ದಂಪತಿಯ ಹನಿಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಈ ಕುರಿತು ಪ್ರತಾಪ್ ಸಿಂಗ್ ಅವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, `ಬ್ಯಾಂಕ್‍ನವರು ಐ.ಟಿ ರಿಟರ್ನ್ ದಾಖಲೆ ಕೇಳಿದ್ದರಿಂದ ಜನ್ ಸುವಿಧಾ ಕೇಂದ್ರದಲ್ಲಿ ಪಾನ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿದ್ದೆ. ನಂತರ ಸಂಜಯ್ ಸಿಂಗ್ ಎಂಬವರು ಪಾನ್‍ಕಾರ್ಡ್‍ವೊಂದರ ನಕಲು ಪ್ರತಿಯನ್ನು ನೀಡಿದ್ದರು. ನಾನು ಅನಕ್ಷರಸ್ಥನಾದ್ದರಿಂದ ಮೂಲ ಪಾನ್‍ಕಾರ್ಡ್ ಹಾಗೂ ನನಗೆ ದೊರೆತ ನಕಲು ಪ್ರತಿಯ ವ್ಯತ್ಯಾಸ ತಿಳಿಯಲಿಲ್ಲ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಆದರೆ 3,47,54,896 ರೂ. ತೆರಿಗೆ ಪಾವತಿಸುವಂತೆ ಐಟಿ ಇಲಾಖೆಯಿಂದ ನೋಟಿಸ್ ಬಂದಿದೆ. ಆ ಬಗ್ಗೆ ವಿಚಾರಿಸಿದಾಗ ಯಾರೋ ನಿಮ್ಮನ್ನು ಯಾಮಾರಿಸಿ ಜಿಎಸ್‍ಟಿ ಸಂಖ್ಯೆ ಪಡೆದಿದ್ದಾರೆ. 2018-2019ರಲ್ಲಿ ಅವರ ವಹಿವಾಟು 43,44,36,201 ರೂ. ಆಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದರಲ್ಲದೆ, ಎಫ್‍ಐಆರ್ ದಾಖಲಿಸುವಂತೆ ಸಲಹೆ ನೀಡಿದರು ಎಂದು ರಿಕ್ಷಾ ಚಾಲಕ ತನಗಾದ ವಂಚನೆ ಕುರಿತು ಹೇಳಿಕೊಂಡಿದ್ದಾರೆ.

    ದೂರು ಕುರಿತು ಪ್ರತಿಕ್ರಿಯಿಸಿರುವ ಠಾಣೆ ಅಧಿಕಾರಿ (ಎಸ್‍ಎಚ್‍ಒ) ಅಂಜು ಕುಮಾರ್, ಸದ್ಯ ಪ್ರತಾಪ್ ಸಿಂಗ್ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿಲ್ಲ. ಸಮಸ್ಯೆ ಕುರಿತು ಗಮನಹರಿಸಲಾಗುವುದು ಎಂದು ತಿಳಿಸಿದ್ದಾರೆ.