Tag: ಸೆಲ್ಫಿ. ಫೋಟೋ

  • ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವಕನಿಗೆ ಗೂಸಾ ಕೊಟ್ಟ ಹರ್ಯಾಣ ಸಿಎಂ – ವಿಡಿಯೋ ನೋಡಿ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವಕನಿಗೆ ಗೂಸಾ ಕೊಟ್ಟ ಹರ್ಯಾಣ ಸಿಎಂ – ವಿಡಿಯೋ ನೋಡಿ

    ಚಂಡೀಗಢ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಯುವಕನೊಬ್ಬನಿಗೆ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗೂಸಾ ಕೊಟ್ಟಿದ್ದಾರೆ.

    ಹರ್ಯಾಣದ 10 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿದೆ. ಹೀಗಾಗಿ ಕರ್ನಾಲ್‍ನಲ್ಲಿ ಇಂದು ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನ ಕಾರ್ಯಕ್ರಮ ಆಯೋಜಿಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಯುವಕನೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.

    ಬಿಜೆಪಿ ಕಾರ್ಯಕರ್ತನೊಬ್ಬ ಮನೋಹರ್ ಲಾಲ್ ಖಟ್ಟರ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾನೆ. ಬಳಿಕ ಅವರ ಜೊತೆಗೆ ಸೆಲ್ಫಿ ಫೋಟೋ ತೆಗೆದುಕೊಳ್ಳುವ ಸಲುವಾಗಿ ಮೊಬೈಲ್ ಹಿಡಿಯುತ್ತಾನೆ. ಈ ವೇಳೆ ಏಕಾಏಕಿ ಕೋಪಗೊಂಡ ಸಿಎಂ ಯುವಕನ ಕೈಗೆ ಹೊಡೆದು, ಹಿಂದಕ್ಕೆ ತಳ್ಳುತ್ತಾರೆ. ಮನೋಹರ್ ಲಾಲ್ ಖಟ್ಟರ್ ಅವರ ವರ್ತನೆಯಿಂದ ಮುಜುಗುರಕ್ಕೆ ಒಳಗಾದ ಯುವಕ ಕಾರ್ಯಕ್ರಮದಿಂದ ಹೊರ ನಡೆದಿದ್ದಾನೆ.

    ಈ ದೃಶ್ಯವನ್ನು ಸ್ಥಳದಲ್ಲಿದ್ದ ಸುದ್ದಿಗಾರರು ಹಾಗೂ ಸ್ಥಳೀಯರು ವಿಡಿಯೋ ಕ್ಯಾಮೆರಾ, ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮನೋಹರ್ ಲಾಲ್ ಖಟ್ಟರ್ ಅವರು, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ, ಸುಳ್ಳು ದೂರುಗಳು ಹೆಚ್ಚುತ್ತಿವೆ ಎಂಬ ವಿವಾದತ್ಮಕ ಹೇಳಿಕೆ ನೀಡಿ, ರಾಜ್ಯದ ಹಾಗೂ ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಪಂಚಕುಲ ಜಿಲ್ಲೆಯ ಕಾಲ್ಕಾ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಮಾಡಿದ್ದ ಅವರು, ಹೆಚ್ಚಿನ ಸಂಖ್ಯೆಯ ಅತ್ಯಾಚಾರ ಪ್ರಕರಣಗಳನ್ನು ಮಹಿಳೆಯರು ಪರಿಚಿತರ ವಿರುದ್ಧ ದಾಖಲಿಸುತ್ತಾರೆ. ಅದರಲ್ಲೂ ಸುಳ್ಳು ಆರೋಪಗಳೇ ಹೆಚ್ಚಾಗಿರುತ್ತದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿಲ್ಲ. ಆದರೇ ಹಿಂದೆ ಎಂದೋ ನಡೆದ ಘಟನೆಗಳು ಹಾಗೂ ಇಂದು ನಡೆಯುತ್ತಿರುವ ಘಟನೆಗಳನ್ನು ಮುಂದಿಟ್ಟುಕೊಂಡು ಬೇಕಂತಲೇ ಸುಳ್ಳು ಅತ್ಯಾಚಾರ ಕೇಸ್‍ಗಳನ್ನು ಕೆಲವರು ದಾಖಲಿಸುತ್ತಾರೆ. ಆದ್ದರಿಂದ ಇಂತಹ ಘಟನೆಗಳಿಗೆ ಸಂಬಂಧಪಟ್ಟ ದೂರುಗಳು ಹೆಚ್ಚಾಗುತ್ತಿದೆಯೇ ಹೊರತು ಪ್ರಕರಣಗಳಲ್ಲ ಎಂದು ಹೇಳಿಕೆ ನೀಡಿದ್ದರು.

  • ಸೆಲ್ಫಿ ಫೋಟೋ ಡಿಲೀಟ್ ಮಾಡಲು ಒಪ್ಪದ ಪ್ರಿಯಕರನನ್ನೇ ಅಪಹರಿಸಿದ ಪ್ರಿಯತಮೆ!

    ಸೆಲ್ಫಿ ಫೋಟೋ ಡಿಲೀಟ್ ಮಾಡಲು ಒಪ್ಪದ ಪ್ರಿಯಕರನನ್ನೇ ಅಪಹರಿಸಿದ ಪ್ರಿಯತಮೆ!

    ಚೆನ್ನೈ: ಸೆಲ್ಫಿ ಫೋಟೋ ಡಿಲೀಟ್ ಮಾಡಲು ಒಪ್ಪದ ಪ್ರಿಯಕರನನ್ನೇ ಪ್ರೇಮಿಯೊಬ್ಬಳು ಅಪಹರಿಸಿ, ಲೂಟಿ ಮಾಡಿಸಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

    ನವೀನ್ ಅಹ್ಮದ್ ಅಪಹರಣವಾಗಿದ್ದ ಪ್ರಿಯಕರ. ಅಮೆರಿಕ ಮೂಲದ ಮಹಿಳೆ ನಾಲ್ಕು ಜನರಿಗೆ ಸುಪಾರಿ ಕೊಟ್ಟು ನವೀನ್ ಅಹ್ಮದ್‍ನನ್ನು ಅಪಹರಣ ಮಾಡಿಸಿ, ಲೂಟಿ ಮಾಡಿದ್ದಳು.

    ಅಮೆರಿಕ ಮೂಲದ ಮಹಿಳೆ ಹಾಗೂ ನವೀನ್ ಅಹ್ಮದ್ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರೂ ಚೆನ್ನೈನ ಅಣ್ಣಾ ನಗರ ಪ್ರದೇಶದ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ಆಗ ನವೀನ್ ಗೆಳತಿಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಇದರಿಂದಾಗಿ ಕೋಪಗೊಂಡ ಮಹಿಳೆ ಆತನ ಜೊತೆಗೆ ಇರುವ ಸೆಲ್ಫಿ ಫೋಟೋವನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಇದಕ್ಕೆ ನವೀನ್ ಒಪ್ಪಲಿಲ್ಲ. ಹೀಗಾಗಿ ಪರಸ್ಪರ ಜಗಳ ಮಾಡಿಕೊಂಡಿದ್ದು ನವೀನ್ ಅಹ್ಮದ್ ಮಹಿಳೆಯ ತಲೆಗೆ ಹೆಲ್ಮೆಟ್ ನಿಂದ ಹೊಡೆದಿದ್ದಾನೆ.

    ತನ್ನ ಮೇಲೆ ಹಲ್ಲೆ ನಡೆಸಿದ್ದಕ್ಕೆ ನವೀನ್ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಗೆಳೆಯರನ್ನು ಪರಿಚಯ ಮಾಡಿಕೊಂಡಿದ್ದಳು. ಅವರ ಸಹಾಯದಿಂದ ನವೀನ್‍ನನ್ನು ಅಪಹರಿಸಲು ಪ್ಲಾನ್ ರೂಪಿಸಿದ್ದಳು. ಅದರಂತೆ ನಾಲ್ವರು ಯುವಕರು ನವೀನ್‍ನನ್ನು ಅಪಹರಿಸಿ ಜಾಫರ್ ಖಾನ್‍ಪೇಟೆಗೆ ಹೊತ್ತುಯ್ದಿದ್ದಾರೆ. ಬಳಿಕ ಐಪ್ಯಾಡ್, ವಾಚ್ ಹಾಗೂ ಬೆಲೆ ಬಾಳುವ ವಸ್ತುವನ್ನು ದೋಚಿ ಆತನನ್ನು ಇಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

    ನವೀನ್ ಬೆಳಗ್ಗೆ ಎದ್ದು ನೋಡಿದಾಗ ಅಲ್ಲಿ ಯಾರೂ ಇರಿಲಿಲ್ಲ. ತಕ್ಷಣವೇ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಮೊಬೈಲ್ ಮೂಲಕ ಮನೆಗೆ ಕರೆ ಮಾಡಿ, ಘಟನೆ ವಿವರಿಸಿದ್ದಾನೆ. ನವೀನ್ ಈ ಸಂಬಂಧ ಟಿಪಿ ಚತ್ರಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

  • ಸೆಲ್ಫಿಗಾಗಿ ತುಂಬಿ ಹರಿಯುತ್ತಿರುವ ನದಿ ಸೇತುವೆ ಕೆಳಭಾಗಕ್ಕೆ ಇಳಿದು ಯುವಕರ ದುಸ್ಸಾಹಸ

    ಸೆಲ್ಫಿಗಾಗಿ ತುಂಬಿ ಹರಿಯುತ್ತಿರುವ ನದಿ ಸೇತುವೆ ಕೆಳಭಾಗಕ್ಕೆ ಇಳಿದು ಯುವಕರ ದುಸ್ಸಾಹಸ

    ಮೈಸೂರು: ಸೆಲ್ಫಿಗಾಗಿ ಇಬ್ಬರು ಯುವಕರು ದುಸ್ಸಾಹಸಕ್ಕೆ ಕೈ ಹಾಕಿದ ಘಟನೆ ಜಿಲ್ಲೆಯ ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸ ರೈಲ್ವೆ ಸೇತುವೆ ಬಳಿ ನಡೆದಿದೆ.

    ಸೆಲ್ಫಿ ತೆಗೆದುಕೊಳ್ಳಲು ಜೀವವನ್ನೇ ಪಣಕ್ಕಿಟ್ಟಿದ್ದ ಇಬ್ಬರು ಯುವಕರು ಸೇತುವೆಯ ನಿಷೇಧಿತ ಸ್ಥಳಕ್ಕೆ ತಲುಪಿ ಅಪಾಯಕ್ಕೆ ಆಹ್ವಾನ ಒಡ್ಡಿದ್ದರು. ಸದ್ಯ ಯುವಕರು ಸೆಲ್ಫಿಗಾಗಿ ಸೇತುವೆಯ ಕೆಳಭಾಗಕ್ಕೆ ಇಳಿದು ಪೋಸ್ ಕೊಡುತ್ತಿರುವ ವಿಡಿಯೋ ಮೊಬೈಲ್ ಒಂದರಲ್ಲಿ ಸೆರೆಯಾಗಿದೆ.

    ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ. ಪ್ರವಾಹದಂತೆ ರಭಸವಾಗಿ ಹರಿಯುತ್ತಿರುವ ವೇಳೆ ಯುವಕರು ಸೇತುವೆಯಿಂದ ಸುಮಾರು 15 ಅಡಿ ಕೆಳಕ್ಕೆ ಇಳಿದಿದ್ದಾರೆ. ಯುವಕರು ಇಳಿದಿರುವ ಸ್ಥಳ ನಿಷೇಧಿತ ಪ್ರದೇಶವಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಾಜಿ ಕಟ್ಟಿಕೊಂಡ ಯುವಕರು ಸೇತುವೆಯಿಂದ ಹಾರಿದ್ದ ಪ್ರಕರಣ ಇನ್ನೂ ಮಾಸುವ ಮೊದಲೇ ಯುವಕರ ದುಃಸ್ಸಾಹಸ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

    ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಜುಲೈ 26 ರಂದು ಮಂಗಳೂರಿನ ಟೆಕ್ಕಿ ಕಿರಣ್ ಕೋಟ್ಯಾನ್, ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದು, ನದಿಯಲ್ಲಿ ಕೊಚ್ಚಿಹೋಗಿದ್ದರು. ಕೊಚ್ಚಿಹೋಗಿದ್ದ ಕಿರಣ್ ಮೃತದೇಹ 15 ದಿನಗಳ ಬಳಿಕ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews