Tag: ಸೂರ್ಯ ನಮಸ್ಕಾರ

  • ಮುಸ್ಲಿಂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬಾರದು – AIMPLB ವಿರೋಧ

    ಮುಸ್ಲಿಂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬಾರದು – AIMPLB ವಿರೋಧ

    ನವದೆಹಲಿ: ಮಕ್ಕಳು ಸೂರ್ಯ ನಮಸ್ಕಾರ ಮಾಡಬೇಕೆಂಬ ಸರ್ಕಾರದ ಆದೇಶಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ವಿರೋಧಿಸಿದೆ. ಮುಸ್ಲಿಂ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

    ಡಿಸೆಂಬರ್ 29 ರಂದುವಿಶ್ವವಿದ್ಯಾಲಯ ಅನುದಾನ ಆಯೋಗ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷ ಪೂರ್ಣಗೊಳ್ಳುತ್ತಿದ್ದು, ಈ ಪ್ರಯುಕ್ತ ದೇಶಾದ್ಯಂತ 30,000 ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳು ತ್ರಿವರ್ಣ ಧ್ವಜದ ಮುಂದೆ ಸೂರ್ಯ ನಮಸ್ಕಾರ ಮಾಡುವಂತೆ ಸುತ್ತೋಲೆ ಹೊರಡಿಸಿದೆ. ಇದನ್ನೂ ಓದಿ: ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಜ.4-5ರಂದು ರಾಜ್ಯ ಮಟ್ಟದ ಯುವಜನೋತ್ಸವ: ನಾರಾಯಣಗೌಡ

    ಈ ಬಾರಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ ಜನವರಿ 1 ರಿಂದ ಫೆಬ್ರವರಿ 7 ರವರೆಗೆ 30 ರಾಜ್ಯಗಳಿಂದ 30,000 ಸಂಸ್ಥೆಗಳ 3 ಲಕ್ಷ ವಿದ್ಯಾರ್ಥಿಗಳು  75 ಕೋಟಿ  ಸೂರ್ಯ ನಮಸ್ಕಾರ ಮಾಡಲು ಸರ್ಕಾರ ಯೋಜನೆ ರೂಪಿಸಿದೆ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದ್ದಾರೆ.

    ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಲಿದ್ ಸೈಫುಲ್ಲಾ ರಹಮಾನಿ ಅವರು, ಸರ್ಕಾರ ಬಹುಸಂಖ್ಯಾತರ ಚಿಂತನೆ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತಿದೆ. ಇದು ಅಸಂವಿಧಾನಿಕ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!

    ಇಸ್ಲಾಂ ಮತ್ತು ದೇಶದ ಇತರ ಅಲ್ಪಸಂಖ್ಯಾತರು ಸೂರ್ಯನನ್ನು ದೇವರೆಂದು ಪರಿಗಣಿಸುವುದಿಲ್ಲ ಮತ್ತು ಸೂರ್ಯನನ್ನು ಪೂಜಿಸುವುದಿಲ್ಲ. ಆದ್ದರಿಂದ ಅಂತಹ ಸೂಚನೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ದೇಶದ ಜಾತ್ಯತೀತ ಮೌಲ್ಯಗಳನ್ನು ಗೌರವಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರತಿಪಾದಿಸಿದೆ.

  • ವಿಧಾನಸೌಧ ಆವರಣದಲ್ಲಿ ಸೂರ್ಯ ನಮಸ್ಕಾರ

    ವಿಧಾನಸೌಧ ಆವರಣದಲ್ಲಿ ಸೂರ್ಯ ನಮಸ್ಕಾರ

    ಬೆಂಗಳೂರು: ರಥ ಸಪ್ತಮಿ ಪ್ರಯುಕ್ತ ಇದೇ ಮೊದಲ ಬಾರಿಗೆ ವಿಧಾನ ಸೌಧದ ಆವರಣದಲ್ಲಿ ಸಪ್ತ ಸಾಮೂಹಿಕ ಮತ್ತು ಸೂರ್ಯ ನಮಸ್ಕಾರವನ್ನು ಆಯೋಜನೆ ಮಾಡಲಾಗಿತ್ತು. ಪತಂಜಲಿ ಯೋಗ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆವತಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಕಾರ್ಯಕ್ರಮದಲ್ಲಿ ಸಚಿವ ಸಿಟಿ ರವಿ, ಶಾಸಕ ಉದಯ್ ಗರುಡಾಚಾರ್ ಮತ್ತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉಪಸ್ಥಿತರಿದ್ದರು.

    ಮುಂಜಾನೆ ಐದು ಗಂಟೆಯಿಂದಲೇ ಸಾವಿರಾರು ಜನ ಸೂರ್ಯ ನಮಸ್ಕಾರಕ್ಕಾಗಿ ವಿಧಾನಸೌಧಕ್ಕೆ ಆಗಮಿಸಿ 108 ಸೂರ್ಯ ನಮಸ್ಕಾರವನ್ನ ಮಾಡಿದ್ದಾರೆ. ಸಚಿವ ಸಿಟಿ ಅವರು ಕೂಡ ಜನ ಮಧ್ಯೆ 108 ನಮಸ್ಕಾರವನ್ನ ಮಾಡಿದ್ದಾರೆ.

    ಬಳಿಕ ಮಾತನಾಡಿದ ಅವರು, ಯೋಗ ಬದುಕಿನ ಭಾಗ ಆಗಬೇಕು. ಯೋಗ ಮನುಷ್ಯನ ಅಂಧಕಾರವನ್ನು ದೂರ ಮಾಡುತ್ತದೆ. ಆತ್ಮಸಂಧಾನಕ್ಕೂ ಯೋಗ ಉಪಾಯಕಾರಿ ಭಯೋತ್ಪಾದನೆ ಮೂಲಕ ಜಗತ್ತು ಗೆಲ್ಲುವ ಯೋಚನೆ ಮಾಡುತ್ತಿದ್ದಾರೆ. ಭಯೋತ್ಪಾದನೆಯಿಂದ ಕೆಲ ಸಂಸ್ಕೃತಿ ನಾಶ ಮಾಡುವ ಯತ್ನವಾಗುತ್ತಿದೆ. ಆದರೆ ಭಯೋತ್ಪಾದನೆಯಿಂದ ಜಗತ್ತು ಗೆಲ್ಲಲು ಸಾಧ್ಯವಿಲ್ಲ. ನಮ್ಮ ದೇಶ ಸಂಸ್ಕೃತಿ ಸಂಸ್ಕಾರದಿಂದ ಗೆಲ್ಲುತ್ತದೆ. ಜಗದಗಲ ಯೋಗ ಹರಡಿದೆ, ನಮ್ಮ ಪ್ರಾಚೀನ ವಿದ್ಯೆ ನಮ್ಮ ಯೋಗ ಪ್ರತಿ ಮನುಷ್ಯನಿಗೆ ಬದುಕಿನ ಉನ್ನತಿಗೆ ಕಾರಣ ಇಂತಹ ಯೋಗದಿಂದ ಜಗತ್ತಿನೆಲ್ಲೆಡೆ ತಲುಪುತ್ತಿದ್ದೇವೆ. ಪತಂಜಲಿ ಮಹರ್ಷಿ ಎಲ್ಲ ಯೋಗ ಜೋಡಿಸಿ ನಮಗೆ ಕೊಟ್ಟ ವಿದ್ಯೆ ಎಂದರು.

    ಯಾವುದೇ ಪಕ್ಷವಾದರೂ ದೇಶ ಮೊದಲು ಎಂಬುದು ಬರಬೇಕು. ದುಡಿಮೆ ಇಲ್ಲದ ಹಣ, ನೀತಿ ಇಲ್ಲದ ವ್ಯಾಪಾರ, ಶೀಲವಿಲ್ಲದ ಶಿಕ್ಷಣ, ಆತ್ಮ ಸಾಕ್ಷಿಯಿಲ್ಲದ ಭೋಗ, ಮಾನವೀಯತೆ ಇಲ್ಲದ ವಿಜ್ಞಾನದ ಬಗ್ಗೆ ಗಾಂಧೀಜಿ ಹೇಳಿದ್ದರು. ಗಾಂಧೀಜಿ ವಾಕ್ಯ ಪರಿಪಾಲನೆ ಆದರೆ ಸಮಾಜದ ಅನಿಷ್ಠಗಳು ದೂರಾಗುತ್ತವೆ. ತ್ಯಾಗ ಇಲ್ಲದ ಪೂಜೆ ಬಗ್ಗೆಯೂ ಗಾಂಧೀಜಿ ಹೇಳಿದ್ದರು. ಸಪ್ತ ಘಾತಕಗಳನ್ನು ದೂರ ಮಾಡಿ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.

  • ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ ಸಪ್ತ ನಮಸ್ಕಾರ

    ರಥ ಸಪ್ತಮಿ ಪ್ರಯುಕ್ತ ಸಾಮೂಹಿಕ ಸಪ್ತ ನಮಸ್ಕಾರ

    ಬೆಂಗಳೂರು: ರಥ ಸಪ್ತಮಿ ಪ್ರಯುಕ್ತ ಇಂದು 108 ಸೂರ್ಯ ನಮಸ್ಕಾರ ಮತ್ತು ಸಾಮೂಹಿಕ ಸಪ್ತ ನಮಸ್ಕಾರ ಕಾರ್ಯಕ್ರಮ ನಡೆದಿದೆ.

    ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ನಗರದ ಬಸವನಗುಡಿ ಮೈದಾನದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯುತ್ತಿದೆ. ಬೆಳಗಿನ ಜಾವ 5.30ರಿಂದಲೇ ಸಾಮೂಹಿಕ ಸಪ್ತ ನಮಸ್ಕಾರ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಉಪಸ್ಥಿತರಿದ್ರು. ಸಾಮೂಹಿಕ ಸಪ್ತ ನಮಸ್ಕಾರ ಕಾರ್ಯಕ್ರಮ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಪ್ತ ಸಾಮೂಹಿಕ ನಮಸ್ಕಾರ ನಡೆಯುತ್ತಿದೆ.

    ರಥ ಸಪ್ತಮಿ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಯುದುವಂಶದ ಯದುವೀರ್ ದಂಪತಿ ಅರಮನೆ ಆವರಣದಲ್ಲಿ ನಿಲ್ಲಿಸಿದ್ದ 8 ರಥಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಪುತ್ರ ಆದ್ಯವೀರ್ ಜೊತೆ ಆಗಮಿಸಿ ರಥಸಪ್ತಮಿ ಆಚರಣೆ ಮಾಡಿದರು. ಅರಮನೆ ಆವರಣದಲ್ಲಿ ಶ್ರೀ ಭುವನೇಶ್ವರಿ, ಶ್ರೀ ತ್ರಿನೇಶ್ವರ ಸ್ವಾಮಿ ಶ್ರೀ ಲಕ್ಷ್ಮಿರಮಣ ಸ್ವಾಮಿ, ಶ್ರೀ ಮಹಾಲಕ್ಷ್ಮಿ ದೇವಿ, ಶ್ರೀ ಪ್ರಸನ್ನ ಕೃಷ್ಣ, ಶ್ರೀ ವೇದವರಹಸ್ವಾಮಿ, ಶ್ರೀ ಖಿಲ್ಲೆ ವೆಂಕಟರಮಣಸ್ವಾಮಿ ಹಾಗೂ ಶ್ರೀ ಗಾಯಿತ್ರಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಇಟ್ಟು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಸ್ಟೆಲ್ ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ರಾಜಸ್ಥಾನ ಸರ್ಕಾರ

    ಹಾಸ್ಟೆಲ್ ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ರಾಜಸ್ಥಾನ ಸರ್ಕಾರ

    ಜೈಪುರ: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಮೂಡಿಸುವ ಉದ್ದೇಶದಿಂದ ವಸುಂಧರ ರಾಜೇ ನೇತೃತ್ವದ ರಾಜಸ್ಥಾನ ಸರ್ಕಾರ ಹೊಸ ಆದೇಶ ಹೊರಡಿಸಿದೆ.

    ರಾಜ್ಯದ ಸುಮಾರು 800 ಹಾಸ್ಟೆಲ್ ಗಳಲ್ಲಿ 40 ಸಾವಿರ ನಿವಾಸಿಗಳಿದ್ದು, ಪ್ರತಿದಿನ ಬೆಳಗ್ಗೆ 7 ಗಂಟೆಗೆ ರಾಷ್ಟ್ರಗೀತೆ ಹಾಡಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಇದೀಗ ನೋಟೀಸ್ ಜಾರಿಗೊಳಿಸಿದೆ.

    ಬೆಳಗ್ಗಿನ ಪ್ರಾರ್ಥನೆಯ ಜೊತೆಗೆ ರಾಷ್ಟ್ರಗೀತೆ ಹಾಡಬೇಕೆಂದು ಆದೇಶಿಸಲಾಗಿದೆ. ನವೆಂಬರ್ 26ರಿಂದಲೇ ಈ ಹೊಸ ನಿಯಮ ಜಾರಿಯಾಗಿದೆ. ರಾಜ್ಯದ ಹಲವಾರು ವಸತಿ ಶಾಲೆಗಳಲ್ಲಿ ಈಗಾಗಲೇ ಈ ನಿಯಮವನ್ನ ಅನುಸರಿಸುತ್ತಿದ್ದಾರೆ ಅಂತ ಇಲಾಖೆಯ ನಿರ್ದೇಶಕ ಡಾ. ಸಮಿತ್ ಶರ್ಮಾ ಹೇಳಿದ್ದಾರೆ.

    ಕಳೆದ ಅಕ್ಟೋಬರ್ ನಲ್ಲಿ ಜೈಪುರದ ಪುರಸಭೆ ತನ್ನ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಬೆಳಗ್ಗೆ ರಾಷ್ಟ್ರಗೀತೆ ಹಾಗೂ ಸಂಜೆ ವಂದೇ ಮಾತರಂ ಹಾಡುವಂತೆ ಹೇಳಿತ್ತು. ಹಾಡಲು ಇಷ್ಟವಿಲ್ಲದವರು ಪಾಕಿಸ್ತಾನಕ್ಕೆ ಹೋಗಿ ಅಂತ ಅಲ್ಲಿನ ಮೇಯರ್ ಅಶೋಕ್ ಲಾಹೋಟಿ ಹೇಳಿದ್ದರು.

    ಕಳೆದ ವರ್ಷ ರಾಜ್ಯದ ಶಿಕ್ಷಣ ಇಲಾಖೆ ಪ್ರತಿ ಶಾಲೆಯಲ್ಲಿ ಸೂರ್ಯ ನಮಸ್ಕಾರ ಕಡ್ಡಾಯ ಮಾಡಿತ್ತು. ನಂತರ ಅದನ್ನ ಐಚ್ಛಿಕ ಮಾಡಲಾಯ್ತು.