Tag: ಸೂರ್ಯ ಕಿರಣ್

  • ನಟ, ನಿರ್ದೇಶಕ ಸೂರ್ಯ ಕಿರಣ್ ನಿಧನ

    ನಟ, ನಿರ್ದೇಶಕ ಸೂರ್ಯ ಕಿರಣ್ ನಿಧನ

    ಖ್ಯಾತ ನಟ ಹಾಗೂ ನಿರ್ದೇಶಕ ಸೂರ್ಯ ಕಿರಣ್ (Surya Kiran) ನಿಧನರಾಗಿದ್ದಾರೆ. ತೆಲುಗು ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದ ಸೂರ್ಯ ಕಿರಣ್ ಅವರಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    ಕೇವಲ 48ರ ಹರೆಯದ ಸೂರ್ಯ ಕಿರಣ್ ಸಿನಿಮಾ ಮತ್ತು ಕಿರುತೆರೆ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರಾಜು ಬೈ ಮತ್ತು ಸತ್ಯಂ, ಬ್ರಹ್ಮಾಸ್ತ್ರ, ಚಾಪ್ಟರ್ 6 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಜೊತೆಗೆ ಬಿಗ್ ಬಾಸ್ ತೆಲುಗು ಸೀಸನ್ ನಲ್ಲೂ ಇವರು ಭಾಗಿಯಾಗಿದ್ದರು.

     

    ಮೂಲತಃ ಕೇರಳದವರಾದ ಸೂರ್ಯ, ಹುಟ್ಟಿ ಬೆಳೆದದ್ದೆಲ್ಲ ಚೆನ್ನೈನಲ್ಲಿ. ಸಿನಿಮಾ ನಟರಾಗಿ ನೂರಾರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ವೈಯಕ್ತಿಕ ಬದುಕಿನಲ್ಲಿ ಸೋತಿದ್ದರು ಎನ್ನುವ ಮಾಹಿತಿ ಕೂಡ ಇದೆ.

  • Bigg Boss: ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

    Bigg Boss: ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

    ತ್ಯಂ, ಧನ 51, ರಾಜುಭಾಯ್ ಸಿನಿಮಾ ಸೇರಿದಂತೆ ಅನೇಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಸೂರ್ಯ ಕಿರಣ್ (Surya Kiran) 48ನೇ ವಯಸ್ಸಿಗೆ ನಿಧನರಾಗಿದ್ದಾರೆ. ಮಾರ್ಚ್ 11ರಂದು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಸೂರ್ಯ ಕಿರಣ್ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೇನೆ: ನಟ ಸಾಧು ಕೋಕಿಲಾ

    ಕೆಲದಿನಗಳಿಂದ ಅನಾರೋಗ್ಯದಿಂದ ಡೈರೆಕ್ಟರ್ ಸೂರ್ಯ ಕಿರಣ್ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರ ನಿಧನ ತೆಲುಗು ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ. ಸೂರ್ಯ ಕಿರಣ್ ನಿಧನಕ್ಕೆ ಆಪ್ತರು, ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

    ಮಾಸ್ಟರ್ ಸುರೇಶ್ ಎಂಬ ಹೆಸರಿನಲ್ಲಿ 200ಕ್ಕೂ ಹೆಚ್ಚು ಸಿನಿಮಾದಲ್ಲಿ ಬಾಲನಟನಾಗಿ ಸೂರ್ಯ ಕಿರಣ್ ನಟಿಸಿದ್ದಾರೆ. ‘ಸತ್ಯಂ’ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಾಗ ಸೂರ್ಯ ಕಿರಣ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡರು. ತೆಲುಗಿನ ಬಿಗ್ ಬಾಸ್ ಸೀಸನ್ 4ರಲ್ಲಿ (Bigg Boss Telugu 4) ಸೂರ್ಯ ಸ್ಪರ್ಧಿಯಾಗಿದ್ದರು. ಮೊದಲ ಎಲಿಮಿನೇಟ್ ಆಗಿ ಹೊರಬಂದಿದ್ದರು.

    ಕನ್ನಡದ ರವಿಚಂದ್ರನ್, ಜಗ್ಗೇಶ್ ನಟನೆಯ ‘ರಾಮಕೃಷ್ಟ’ (Ramakrishna) ಚಿತ್ರದ ನಾಯಕಿ ಕಲ್ಯಾಣಿ ಅಲಿಯಾಸ್ ಕಾವೇರಿ ಅವರನ್ನು ಸೂರ್ಯ ಕಿರಣ್ ಪ್ರೀತಿಸಿ ಮದುವೆಯಾದರು. ದಾಂಪತ್ಯದಲ್ಲಿ ಮನಸ್ತಾಪ ಉಂಟಾದ ಕಾರಣ ಡಿವೋರ್ಸ್ ಪಡೆದರು.

  • ಬಣ್ಣಬಣ್ಣದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯಕಿರಣ್ ಆಕಾಶದಲ್ಲಿ ಪತನ! – ವಿಮಾನದ ವಿಶೇಷತೆ ಏನು?

    ಬಣ್ಣಬಣ್ಣದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯಕಿರಣ್ ಆಕಾಶದಲ್ಲಿ ಪತನ! – ವಿಮಾನದ ವಿಶೇಷತೆ ಏನು?

    ಬೆಂಗಳೂರು: ನಗರದ ಯಲಹಂಕದಲ್ಲಿ ಏರ್ ಶೋಗೆ ತಯಾರಿ ನಡೆಸುತ್ತಿದ್ದ ವೇಳೆ ಸೂರ್ಯ ಕಿರಣ್ ವಿಮಾನಗಳೆರಡು ಡಿಕ್ಕಿಯಾಗಿ ನೆಲಕ್ಕೆ ಅಪ್ಪಳಿಸಿವೆ.

    ಈ ಘಟನೆಯಲ್ಲಿ ಓರ್ವ ಪೈಲಟ್ ಮೃತಪಟ್ಟಿದ್ದಾರೆ. ಬುಧವಾರದಿಂದ 12ನೇ ಆವೃತ್ತಿಯ ಏರೋ ಇಂಡಿಯಾಗೆ ಚಾಲನೆ ಸಿಗಲಿದ್ದು, ಭಾನುವಾರದವರೆಗೆ ಈ ಶೋ ನಡೆಯಲಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

    ಸೂರ್ಯಕಿರಣ್ ವಿಶೇಷತೆ ಏನು?
    ವೈಮಾನಿಕ ಪ್ರದರ್ಶನದ ವೇಳೆ ಆಗಸದಲ್ಲಿ ತ್ರಿವರ್ಣ ಚಿತ್ತಾರ ಬಿಡಿಸಿ ಬಾನಂಗಳದಲ್ಲಿ ದೇಶ ಭಕ್ತಿಯ ಕಿಚ್ಚು ಮೊಳಗಿಸುವ ವಿಮಾನವೇ ಸೂರ್ಯಕಿರಣ್. ವೈಮಾನಿಕ ಪ್ರದರ್ಶನದ ವೇಳೆ ಸೂರ್ಯಕಿರಣ ಇದ್ರೆ ಇನ್ನಷ್ಟು ಕೌತುಕ ಹೆಚ್ಚಾಗುತ್ತೆ. ಅತ್ಯಂತ ಹೆಚ್ಚು ಆಕರ್ಷಕವಾದ ಸೂರ್ಯ ಕಿರಣ ಪ್ರತಿ ಏರ್ ಶೋನಲ್ಲೂ ಸುಮಾರು ಒಂಬತ್ತು ವಿಮಾನಗಳು ವಜ್ರಾಕಾರದಲ್ಲಿ ಹಾರಾಡುತ್ತಾ, ಬಣ್ಣ ಬಣ್ಣದ ಹೊಗೆಯನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ರಂಗೋಲಿ ಬಿಡಿಸುತ್ತವೆ.

    ಸುಮಾರು 30 ನಿಮಿಷ ಆಗಸದಲ್ಲಿ ಸೂರ್ಯ ಕಿರಣನ ಅಬ್ಬರ ಇರುತ್ತದೆ. ಸಾಮಾನ್ಯವಾಗಿ ಏರ್ ಶೋಗೂ ಮುನ್ನಾ ತಾಲೀಮು ನಡೆಸುವಾಗಲೂ ಜನ ಸೂರ್ಯ ಕಿರಣನನ್ನು ಕಣ್ತುಂಬಿಸಿಕೊಳ್ಳಲು ಆಕಾಶ ನೋಡಲು ಮುಗಿಬೀಳ್ತಾರೆ.

    1996ರಿಂದ ಭಾರತೀಯ ವಾಯುಸೇನೆಯಲ್ಲಿ ಸಕ್ರೀಯವಾಗಿರುವ ಈ ಸೂರ್ಯಕಿರಣ್ ವಿಮಾನ ಪೈಲಟ್‍ಗಳಿಗೆ ತರಬೇತಿ ನೀಡಲು ಬಳಕೆ ಮಾಡಲಾಗುತ್ತದೆ. 5 ಟನ್ ತೂಕವಿರುವ ಸೂರ್ಯಕಿರಣ್ ಜೆಟ್ ವಾಯುಸೇನೆಯ 52 ನೇ ಸ್ಕ್ವಾಡರ್ನ್ ಆಗಿ ಸೇರ್ಪಡೆಯಾಗಿತ್ತು. ಗಂಟೆಗೆ 780 ಕಿಮಿ ವೇಗದ ಹಾರಾಟದಲ್ಲಿ ಸಾಮರ್ಥ್ಯ ಹೊಂದಿರುವ ಸೂರ್ಯಕಿರಣ್ 2006ರ ಮಾರ್ಚ್ 18 ರಂದು ಬೀದರ್ ವಾಯುನೆಲೆಯಲ್ಲಿ ಪತನ ಹೊಂದಿತ್ತು. ಈ ಘಟನೆಯಲ್ಲಿ ಇಬ್ಬರು ಪೈಲಟ್‍ಗಳು ಗಂಭೀರವಾಗಿ ಗಾಯಗೊಂಡಿದ್ದರು.

    https://www.youtube.com/watch?v=S8anwX84c_8

    https://www.youtube.com/watch?v=OOoChcGXCvI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv