Tag: ಸೂರಪ್ಪ ಬಾಬು

  • ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    – ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ರಾಜ್ಯಾದ್ಯಂತ ಇಂದು ತೆರೆಕಾಣಬೇಕಿತ್ತು. ಆದರೆ ತಾಂತ್ರಿಕ ದೋಷಗಳಿಂದ ಚಿತ್ರ ಬಿಡುಗಡೆಗೆ ವಿಳಂಬವಾಗಿದ್ದು, ನಾಳೆ ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ.

    ಈ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ನಿರ್ಮಾಪಕ ಸೂರಪ್ಪಬಾಬು ಅವರು, ಕೆಲವು ವಿತರಕರು ಮಾಡಿದ ಮೋಸದಿಂದ ಈ ದಿನ ನನ್ನ ನೆಚ್ಚಿನ ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾವನ್ನು ಬಿಡುಗಡೆಗೊಳಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿದೆ. ಇದರ ಹಿಂದೆ ಹಲವಾರು ಷಡ್ಯಂತರಗಳನ್ನು ಮಾಡಿದ್ದಾರೆ. ಹಾಗಾಗಿ ನನ್ನನ್ನು ಕ್ಷಮಿಸಿ. ಎಂದಿನಂತೆ ನಾಳೆ ಬೆಳಗ್ಗೆ 6 ಗಂಟೆಯಿಂದ ಕಿಚ್ಚನ ಅಭಿಮಾನಿಗಳಿಗೆ ಫ್ಯಾನ್ ಶೋವನ್ನು ಆರಂಭಿಸುತ್ತಿದ್ದೇವೆ. ಇದರಲ್ಲಿ ಯಾವುದೇ ನನ್ನ ತಪ್ಪಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ:  ಊಟದ ವಿಚಾರಕ್ಕೆ ತಾಯಿ, ಮಗನ ಗಲಾಟೆ – ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿ ತಾಯಿ, ಅಕ್ಕನ ಹತ್ಯೆ

    ಈ ವಿಚಾರವಾಗಿ ಸುದೀಪ್ ಅವರೇ ನಿಮಗೆ ಸಂಪೂರ್ಣವಾದ ಸತ್ಯ ತಿಳಿದಿದೆ. ತಮ್ಮ ಅಭಿಮಾನಿಗಳಿಗೆ ರಸದೌತಣ ನೀಡಲು ಎಲ್ಲಾ ರೀತಿಯ ವ್ಯವಸ್ಥೆಗೊಳಿಸುತ್ತಿದ್ದೇನೆ. ನಾಳೆ ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಲಿದೆ. ಎಲ್ಲರೂ ಸಿನಿಮಾ ನೋಡಿ ಹಾರೈಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಸುದೀಪ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೆಲವೊಂದು ವಿಚಾರಗಳಿಂದ ಸಿನಿಮಾದ ಮೊದಲ ಶೋ ವಿಳಂಬವಾಗಿದೆ. ಈ ಬಗ್ಗೆ ಮಾಹಿತಿ ನೀಡುವುದು ನನ್ನ ಕರ್ತವ್ಯವಾಗಿದೆ. ನಾನು ವೈಯಕ್ತಿವಾಗಿ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಇದರಲ್ಲಿ ಥಿಯೇಟರ್ ಮಾಲೀಕ ತಪ್ಪಿಲ್ಲ. ಹೀಗಾಗಿ ಅಲ್ಲಿ ಅಹಿತರ ಘಟನೆಗಳನ್ನು ನಡೆಸಬೇಡಿ. ಚಿತ್ರಮಂದಿರಗಳಿಗೆ ಹಾನಿ ಮಾಡಬೇಡಿ. ಇದು ಅತ್ಯಂತ ವಿಚಿತ್ರ ಸನ್ನಿವೇಶವಾಗಿದೆ. ನಿರ್ಲಕ್ಷ್ಯಕ್ಕಾಗಿ ಕ್ಷಮೆಯಾಚಿಸುತ್ತೇನೆ. ಅಭಿಮಾನಿಗಳು ಕೆಟ್ಟ ರೀತಿಯಲ್ಲಿ ವರ್ತಿಸಬಾರದು. ಸಿನಿಮಾ ಬಿಡಗಡೆಯ ಸಮಯವನ್ನು ನಾನೇ ನೀಡುವೆ, ಕೆಲ ಸಮಸ್ಯೆಗಳಿಂದ ರಿಲೀಸ್ ವಿಳಂಬವಾಗಿದೆ ಎಂದು ಬರೆದುಕೊಂಡಿದ್ದಾರೆ.

  • ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    ಥಿಯೇಟರ್‌ನಲ್ಲಿ ಫುಲ್ ಹೌಸ್ – ಶೀಘ್ರವೇ ಸರ್ಕಾರದ ನಿರ್ಧಾರ ಪ್ರಕಟ

    ಬೆಂಗಳೂರು: ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅವಕಾಶ ಮಾಡಿಕೊಡುವ ಬಗ್ಗೆ ಎರಡು, ಮೂರು ದಿನದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

    ಇಂದು ಚಲನಚಿತ್ರ ನಿರ್ಮಾಪಕರಾದ ಜಯಣ್ಣ, ಸೂರಪ್ಪ ಬಾಬು ಹಾಗೂ ಶ್ರೀಕಾಂತ್ ಅವರು ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಅನುಮತಿ ಕೋರುವ ಸಂಬಂಧ ವಿಧಾನಸೌಧದ ಕೊಠಡಿ 339ರಲ್ಲಿ ಸುಧಾಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರ

    ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅನೇಕ ಚಟುವಟಿಕೆಗೆ ರಿಯಾಯಿತಿ ನೀಡಿದ್ದೇವೆ. ಸಿನಿಮಾಗೆ ಶೇ.50 ರಷ್ಟು ರಿಯಾಯಿತಿ ನೀಡಿದ್ದೇವೆ. ಈಗ ಶೇ.100 ರಷ್ಟು ಬೇಡಿಕೆ ಇಟ್ಟಿದ್ದಾರೆ. ಇವರಿಗೆ ಹೇಗೆ ಸಹಕಾರ ಕೊಡಬೇಕು ಎಂಬುದರ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಈ ಕುರಿತು 2, 3 ದಿನದಲ್ಲಿ ತಾಂತ್ರಿಕ ಸಲಹೆ ಸಮಿತಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ:  ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು

    ನಿರ್ಮಾಪಕ ಸೂರಪ್ಪ ಬಾಬು ಈ ಕುರಿತು ಮಾತನಾಡಿದ್ದು, ಆದಷ್ಟು ಬೇಗ ಈ ವಿಚಾರಕ್ಕೆ ಅನುಮತಿ ಸಿಗುವ ಸಾಧ್ಯತೆ ಇದೆ. ಇದರ ಜೊತೆಗೆ ಇತರೆ ಕೊರೊನಾ ನಿಯಮ ಸಡಿಲಿಕೆ ಬಗ್ಗೆಯು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

     

  • ಯುಟ್ಯೂಬ್‍ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್- ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ

    ಯುಟ್ಯೂಬ್‍ನಲ್ಲಿ ಕೋಟಿಗೊಬ್ಬ-3 ಟೀಸರ್ ಡಿಲೀಟ್- ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಡಿಲೀಟ್ ಆಗಿದ್ದಕ್ಕೆ ನಿರ್ಮಾಪಕ ಸೂರಪ್ಪಬಾಬು ಅವರು ಸ್ಪಷ್ಟನೆ ನೀಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರಪ್ಪ ಅವರು, ಕೋಟಿಗೊಬ್ಬ-3 ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಏಕೆ ಡಿಲೀಟ್ ಆಯ್ತು ಎಂದು ಕೇಳುತ್ತಿದ್ದರು. ಕೊರೊನಾ ವೈರಸ್‍ಗಿಂತ ಇದು ಜಾಸ್ತಿ ಸುದ್ದಿಯಾಗುತ್ತಿತ್ತು. ಪೋಲ್ಯಾಂಡ್‍ನಿಂದ ಶೂಟಿಂಗ್ ಆದ ಬಳಿಕ ಅಲ್ಲಿ ಸಹೋದರರಾದ ಸಂಜಯ್ ಪಾಲ್ ಹಾಗೂ ಅಜಯ್ ಪಾಲ್ ಇದ್ದರು. ಅವರು ಯಾರೆಂಬುದು ನನಗೆ ಗೊತ್ತಿರಲಿಲ್ಲ. ನನಗೆ ಯಾರೋ ಒಬ್ಬರು ಇಬ್ಬರು ಸಹೋದರರನ್ನು ಪರಿಚಯ ಮಾಡಿಸಿ ಅಲ್ಲಿ ಶೂಟಿಂಗ್ ಮಾಡೋಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಅವರು ಇಲ್ಲಿ ಹೋಗುವಾಗ ಆಡಿದ ಮಾತುಗಳನ್ನು ಅಲ್ಲಿ ಏನು ಮಾಡಿಕೊಟ್ಟಿಲ್ಲ. ಅವರಿಗೆ ಸಲ್ಲಬೇಕಾದ ಹಣವನ್ನು ನಮ್ಮ ಖಾತೆ ಮೂಲಕ ಕೊಟ್ಟಿದ್ದು, ಇದಕ್ಕೆ ನನ್ನ ಬಳಿ ದಾಖಲೆ ಇವೆ ಎಂದರು.

    ಯುಟ್ಯೂಬ್‍ನಲ್ಲಿ ಈಗ ಯಾರು ಏನಾದರೂ ದೂರು ನೀಡಿದರೆ ತಕ್ಷಣ ಅದನ್ನು ಡಿಲೀಟ್ ಮಾಡುತ್ತದೆ ಎಂಬುದು ನನಗೆ ನಿನ್ನೆ ಗೊತ್ತಾಗಿದೆ. ಇದರ ವಿರುದ್ಧವಾಗಿ ಆನಂದ್ ಆಡಿಯೋ ಶ್ಯಾಮ್ ಅವರು ಕಾನೂನಿನ ಪ್ರಕಾರ ಕ್ರಮಕೈಗೊಂಡಿದ್ದಾರೆ. ನಿನ್ನೆ, ಮೊನ್ನೆ ಶನಿವಾರ, ಭಾನುವಾರ ಆಗಿದ್ದ ಕಾರಣ ಅದು ವರ್ಕ್ ಆಗಿಲ್ಲ ಎಂಬ ಕಾರಣದಿಂದ ಇಂದು ಸಂಜೆಯೊಳಗೆ ಟೀಸರ್ ಅಪ್ಲೋಡ್ ಆಗುತ್ತದೆ ಎಂದು ನನಗೆ ಭರವಸೆ ಕೊಟ್ಟಿದ್ದಾರೆ. ಯುಟ್ಯೂಬ್ ಎನ್ನುವಂತದ್ದು ಮಶಿನ್ ಆಗಿದ್ದು, ಮನುಷ್ಯರು ಅಲ್ಲಿ ಕೆಲಸ ಮಾಡಲ್ಲ ಎಂದು ಶ್ಯಾಮ್ ಅವರು ತಿಳಿಸಿದ್ದರು. ಮನುಷ್ಯರು ಕೆಲಸ ಮಾಡುವಂತಿದ್ದರೆ ಈ ಸಮಸ್ಯೆಯನ್ನು ಅಲ್ಲಿಯೇ ಹೋಗಿ ಸರಿಪಡಿಸಬಹುದಿತ್ತು. ಆದರೆ ಅದು ಆಗಲ್ಲ ಎಂದು ತಿಳಿಸಿದರು.

    ಪಾಲ್ ಸಹೋದರರಿಂದ ಆದ ಅನ್ಯಾಯವನ್ನು ಪದೇ ಪದೇ ಹೇಳುತ್ತಾ ಕೋರ್ಟ್‍ಗೆ ಹೋಗುತ್ತೇನೆ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ನನ್ನ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ಬ್ಯಾಕ್‍ಮೇಲ್ ಮಾಡಿದ್ದರು ಎಂಬುದು ಈ ಹಿಂದೆಯೇ ದಾಖಲೆಯೊಂದಿಗೆ ತೋರಿಸಿದ್ದೇನೆ. ಬಳಿಕ ನನ್ನ ಸಿಬ್ಬಂದಿಯನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರ ಮೂಲಕ ಕರೆಸಿಕೊಂಡಿದ್ದೇವು. ಪಾಲ್ ಸಹೋದರರ ಮುಖಾಂತರ ನಾವು ಎಲ್ಲಾ ಲೋಕೇಶನ್‍ಗೆ ಹಣ ಕಟ್ಟಿದ್ದೇವೆ. ಆದರೆ ಈಗ ನನ್ನ ಸಂಬಂಧಪಟ್ಟವರಿಂದ ನನಗೆ ದುಡ್ಡು ಬಂದಿಲ್ಲ, ನಮ್ಮ ಲೋಕೇಶನ್ ಬಳಸಿಕೊಂಡಿದ್ದೀರಾ ಎಂದು ಪತ್ರ ಬರೆದು ಕಳುಹಿಸಿದ್ದರು ಎಂದು ಹೇಳಿದರು.

    ಶೂಟಿಂಗ್ ಕಡೆ ದಿನ ಅಂದರೆ 95 ಲಕ್ಷ ರೂ. ಕೊಟ್ಟರೆ ಮಾತ್ರ ನಿಮ್ಮ ತಂಡವನ್ನು ಹೊರಗೆ ಕಳುಹಿಸುತ್ತೇನೆ ಎಂದಿದ್ದ ವ್ಯಕ್ತಿ ಕೊನೆ ಕ್ಷಣದಲ್ಲಿ ಅಕೌಂಟ್ ಎಲ್ಲಾ ನೋಡಿ 45 ಲಕ್ಷ ರೂ. ಕೇಳಿದ್ದಾನೆ. ಇದರಿಂದ ನನ್ನ ಅಕೌಂಟೆಂಟ್ ಹೆದರಿ ನನಗೆ ಕರೆ ಮಾಡಿ ಸರ್ ಹಣ ಕಳುಹಿಸಿಕೊಡಿ ಇವರು ನನ್ನ ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಆಗ ನಾನು ಜಗ್ಗೇಶ್ ಅವರ ಮುಖಾಂತರ ದೂರು ನೀಡಿ ಅಕೌಂಟೆಂಟ್‍ನನ್ನು ಹಾಗೆ ಕರೆದುಕೊಂಡು ಬಂದೇವು. ನನ್ನ ಲೆಕ್ಕದ ಪ್ರಕಾರ ನಾನು ಅವರಿಗೆ 45 ಲಕ್ಷ ರೂ. ಕೊಡುವಂತಿಲ್ಲ. ಆ ಹಣವನ್ನು ನಾನು ಕೋರ್ಟ್‍ನಲ್ಲಿ ಡೆಪಾಸಿಟ್ ಇಟ್ಟು ಕಾನೂನಿನ ಹೋರಾಟ ಕೈಗೊಳ್ಳುತ್ತೇನೆ. ಆ ಹಣ ಕೊಡುವಂತಿದ್ರೆ ನಾನು ಕೊಡುತ್ತೇನೆ ಎಂದು ಸೂರಪ್ಪ ಸ್ಪಷ್ಟನೆ ನೀಡಿದರು.