Tag: ಸೂಟ್ ಕೇಸ್

  • ಕಲ್ಲಿನಿಂದ ಜಜ್ಜಿ ಯುವಕನ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿ ಬಿಸಾಕಿದ ಗೆಳೆಯರು..!

    ಕಲ್ಲಿನಿಂದ ಜಜ್ಜಿ ಯುವಕನ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿ ಬಿಸಾಕಿದ ಗೆಳೆಯರು..!

    ಹೈದರಾಬಾದ್: ಕಳೆದ ಶುಕ್ರವಾರ ನಾಪತ್ತೆಯಾಗಿದ್ದ ಆಟೋ ಚಾಲಕನ ಮೃತದೇಹ ರಾಜೇಂದ್ರ ನಗರದಲ್ಲಿ ರಸ್ತೆ ಬದಿಯಲಿದ್ದ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ.

    ಮೃತ ದುರ್ದೈವಿಯನ್ನು ಮೊಹಮ್ಮದ್ ಇಲಿಯಾಜ್ ಅಲಿಯಾಸ್ ರಿಯಾಜ್(24) ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಚಂದ್ರಯನಗುತ್ತದಲ್ಲಿರುವ ತನ್ನ ನಿವಾಸದಿಂದ ಹೊರ ಬಂದವನು ಮತ್ತೆ ಮನೆಗೆ ಹಿಂದಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಶನಿವಾರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    ಕ್ರಿಮಿನಲ್ ಬ್ಯಾಗ್ರೌಂಡ್ ಇರುವ ರಿಯಾಜ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ತನಿಖೆ ನಡೆಸಲು ಆರಂಭಿಸಿದ್ದಾರೆ.

    ಇತ್ತ ರಿಯಾಜ್ ಕುಟುಂಬಸ್ಥರು ಕೂಡ ಮಗನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಾಜೇಂದ್ರನಗರ ವ್ಯಾಪ್ತಿಯಲ್ಲಿ ರಿಯಾಜ್ ಆಟೋ ಸಿಕ್ಕಿದೆ. ಹೀಗಾಗಿ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಶುಕ್ರವಾರ ರಾತ್ರಿ ಇಬ್ಬರೊಂದಿಗೆ ರಿಯಾಜ್ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಆ ಇಬ್ಬರನ್ನು ಸೈಯದ್ ಹಾಗೂ ಫಿರೋಜ್ ಎಂದು ಕುಟುಂಬಸ್ಥರು ಗುರುತು ಹಿಡಿದಿದ್ದಾರೆ.

    ಈ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಆಗ ಇಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ರಿಯಾಜ್ ನನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿಸಿ ರಸ್ತೆ ಬದಿ ಎಸೆದು ಹೋಗಿರುವುದಾಗಿ ಆರೋಪಿಗಳು ಪೊಲೀಸರ ಬಳಿ ತಿಳಿಸಿದ್ದಾರೆ.

    ಆರೋಪಿಗಳ ಹೇಳಿಕೆ ಆಧರಿಸಿ ಅವರೊಂದಿಗೆ ಪೊಲೀಸರು ಕೂಡ ಸೂಟ್ ಕೇಸ್ ಇದ್ದ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಸೂಟ್ ಕೇಸ್ ತೆರೆದು ನೋಡಿದಾಗ ರಿಯಾಜ್ ಮೃತದೇಹ ಪೀಸ್ ಪೀಸ್ ಆಗಿತ್ತು. ಆರೋಪಿಗಳು ರಿಯಾಜ್ ನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳು ಕೂಡ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದು, ರಿಯಾಜ್ ಮನೆಯ ಆಸು-ಪಾಸು ಮನೆಯವರಾಗಿದ್ದಾರೆ. ಸೈಯದ್ ಸಹೋದರಿಗೆ ರಿಯಾಜ್ ತಮಾಷೆ ಮಾಡುತ್ತಿದ್ದನು. ಇದೇ ವಿಚಾರ ಕೊಲೆ ಕಾರಣ ಎಂಬುದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.

    ಶುಕ್ರವಾರ ರಿಯಾಜ್ ಹಾಗೂ ಆರೋಪಿಗಳು ಕಂಠಪೂರ್ತಿ ಕುಡಿದಿದ್ದರು. ಬಳಿಕ ಮೂವರು ಕೂಡ ರಿಕ್ಷಾದಲ್ಲಿ ತೆರಳಿದ್ದಾರೆ. ಹೀಗೆ ಹೋಗುತ್ತಿದ್ದಾಗ ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಸೈಯದ್ ಹಾಗೂ ಫಿರೋಜ್, ರಿಯಾಜ್ ನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿ ರಸ್ತೆ ಬಿಸಾಕಿ ಹೋಗಿದ್ದಾರೆ.

  • ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!

    ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!

    – ಸ್ನೇಹಿತನಿಂದ್ಲೇ ಬ್ಯಾಂಕ್ ಅಧಿಕಾರಿಯ ಕಗ್ಗೊಲೆ
    – ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದು ಹೇಗೆ?

    ಮುಂಬೈ: ಬ್ಯಾಂಕ್ ಅಧಿಕಾರಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದು ಬಳಿಕ 12 ಪೀಸ್ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ ವಿಲಕ್ಷಣ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಸುಶೀಲ್ ಕುಮಾರ್ (31) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತ ಚಾಲ್ರ್ಸ್ ನಡಾರ್(41) ಹಾಗೂ ಆತನ ಪತ್ನಿ ಸಲೋಮಿ(31)ಯನ್ನು ಬಂಧಿಸಲಾಗಿದೆ.

    ರಾಯ್‍ಗಢ ಜಿಲ್ಲೆಯ ನುಲ್ಹಾ ಸಮೀಪದ ರೈಲ್ವೇ ನಿಲ್ದಾಣದ ಬಳಿ ಸುಶೀಲ್ ಮೃತದೇಹ ದೊರಕಿದೆ. ಎರಡು ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿಸಿ ಬಿಸಾಕಲಾಗಿತ್ತು. ಬ್ಯಾಂಕ್ ಸಿಬ್ಬಂದಿಯಾಗಿರುವ ಸುಶೀಲ್, ಡಿಸೆಂಬರ್ 12ರಿಂದ ಗಾಂದಿನಗರದಲ್ಲಿರುವ ತಕ್ಷಶಿಲಾ ಕಟ್ಟಡದಿಂದ ನಾಪತ್ತೆಯಾಗಿದ್ದನು.

    ನಾನು ಕಚೇರಿಯ ಸಹೋದ್ಯೋಗಿಗಳ ಜೊತೆ ಟ್ರಿಪ್ ಗೆ ಹೋಗುತ್ತಿದ್ದೇನೆ. ಭಾನುವಾರ ಸಂಜೆ ವಾಪಸ್ ಬರುವುದಾಗಿ ಸುಶೀಲ್ ತನ್ನ ತಾಯಿಯ ಬಳಿ ಹೇಳಿ ಹೋಗಿದ್ದಾನೆ. ಆದರೆ ಮಗ ಮನೆಗೆ ವಾಪಸ್ ಬರದೇ ಇರುವುದರಿಂದ ಆತಂಕಗೊಂಡ ತಾಯಿ, ಸೋಮವಾರದಿಂದ ಮಗನನ್ನು ಹುಡುಕಲು ಆರಂಭಿಸಿದ್ದಾರೆ. ಮಗ ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯ ಬಳಿಯೂ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ ಸುಶೀಲ್ ಎಲ್ಲಿದ್ದಾನೆ ಎಂಬ ಬಗ್ಗೆ ಕಚೇರಿಯಲ್ಲಿದ್ದ ಸಿಬ್ಬಂದಿಗೂ ತಿಳಿಯದಾಗಿತ್ತು. ಹೀಗಾಗಿ ಕೊನೆಗೆ ತಾಯಿ ಡಿಸೆಂಬರ್ 14ರಂದು ವೊರ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ತಾಯಿ ನೀಡಿದ ದೂರು ಸ್ವೀಕರಿಸಿ ಪೊಲೀಸರು ಸುಶೀಲ್ ಹುಡುಕಾಟ ಆರಂಭಿಸಿದ್ದಾರೆ. ಈ ಮಧ್ಯೆ ಪೊಲೀಸರಿಗೆ ಗುರುವಾರ ಬೆಳಗ್ಗೆ ಸುಶೀಲ್ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸುಶೀಲ್ ಪೋಷಕರನ್ನು ಕರೆಸಿದ್ದಾರೆ. ಅಂತೆಯೇ ಶವ ತಮ್ಮ ಮಗನದ್ದು ಎಂದು ಗುರುತು ಹಿಡಿದರು.

    ಇತ್ತ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಬುಧವಾರ ಎರಡು ಸೂಟ್ ಕೇಸ್ ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸೂಟ್ ಕೇಸ್ ತೆರೆದು ನೋಡಿದಾಗ ಅದರಲ್ಲಿ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸೂಟ್ ಕೇಸ್ ಮೇಲಿದ್ದ ಸ್ಟಿಕ್ಕರ್ ಮೂಲಕ ಇಡೀ ಪ್ರಕರಣವನ್ನು ಭೇದಿಸುವ ಪ್ರಯತ್ನ ಮಾಡಿದೆವು. ಸ್ಟಿಕ್ಕರ್ ಸಹಾಯದಿಂದ ಸೂಟ್ ಕೇಸ್ ಮಾರಾಟ ಮಾಡಿದವನ ಬಳಿ ಹೋದೆವು. ಆಗ ಆತ ಹೌದು ತನ್ನ ಅಂಗಡಿಯಿಂದಲೇ ಈ ಸೂಟ್ ಕೇಸ್ ಖರೀದಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಮುಂದಿನ ತನಿಖೆಗೆ ಸಹಾಯ ಕೂಡ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

    ಶವ ಸಿಕ್ಕ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಸ್ನೇಹಿತ ನಡಾರ್ ನನ್ನು ಗುರುತಿಸಲಾಗಿದೆ. ಬುಧವಾರ ತಡರಾತ್ರಿ ನಡಾರ್ ಹಾಗೂ ಆತನ ಪತ್ನಿ ನೆರಲ್ ನಲ್ಲಿರುವ ನಿವಾಸದಿಂದ ಏನನ್ನೋ ಎತ್ತಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ.

    ಮುಂಬೈನ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಶೀಲ್ ಹಾಗೂ ಸಲೋಮಿ ಪರಿಚಯವಾಗಿದೆ. ಡಿಸೆಂಬರ್ 12ರಂದು ರಾತ್ರಿ ಸುಶೀಲ್ ನಡಾರ್ ಮನೆಗೆ ಬಂದಿದ್ದಾನೆ. ಅಲ್ಲದೆ ಈ ವೇಳೆ ನಡಾರ್ ಪತ್ನಿಯ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದಾನೆ. ಈ ಸಿಟ್ಟಿನಿಂದಲೇ ಪತಿ ಹಾಗೂ ಪತ್ನಿ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ದೇಹವನ್ನು 12 ಪೀಸ್ ಗಳನ್ನಾಗಿ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಗುರುವಾರ ರಾತ್ರಿ ಬಿಸಾಕಿದ್ದಾರೆ. ಮೃತದೇಹದಲ್ಲಿ ಬಲಕೈ ಮಿಸ್ ಆಗಿದೆ.

    ಸದ್ಯ ಘಟನೆಗೆ ಸಂಬಂಧಿಸಿದಂತೆ ಈ ಇಬ್ಬರನ್ನು ಇಂದು ಕೋರ್ಟಿಗೆ ಹಾಜರುಪಡಿಸಲಾಗಿದೆ.

  • ಮುಸ್ಲಿಂ ಯುವಕನ ಜೊತೆ ಮದ್ವೆಗೆ ವಿರೋಧ- ತಂದೆಯಿಂದ್ಲೇ ಮಗಳು ಪೀಸ್ ಪೀಸ್

    ಮುಸ್ಲಿಂ ಯುವಕನ ಜೊತೆ ಮದ್ವೆಗೆ ವಿರೋಧ- ತಂದೆಯಿಂದ್ಲೇ ಮಗಳು ಪೀಸ್ ಪೀಸ್

    – ಕೆಲ ಭಾಗಗಳನ್ನಷ್ಟೇ ಸೂಟ್‍ಕೇಸ್‍ನಲ್ಲಿ ತುಂಬಿದ
    – ಶವ ಬಿಸಾಡಲು ಹೋಗಿ ಸಿಕ್ಕಿಬಿದ್ದ

    ಮುಂಬೈ: ಇತ್ತೀಚೆಗಷ್ಟೇ ಪಾಪಿ ಮಗಳೊಬ್ಬಳು ತನ್ನ ತಂದೆಯನ್ನು ಕೊಲೆಗೈದು ಸೂಟ್ ಕೇಸ್‍ನಲ್ಲಿ ತುಂಬಿ ನದಿಗೆ ಎಸೆದ ಪ್ರಕರಣದ ಬೆನ್ನಲ್ಲೇ ಇದೀಗ ತಂದೆಯೇ ಮಗಳನ್ನು ಕೊಂದ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

    22 ವರ್ಷದ ಮಗಳನ್ನು ಕೊಲೆಗೈದ 47 ವರ್ಷದ ಪಾಪಿ ತಂದೆಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. ಮುಸ್ಲಿಂ ಯುವಕನೊಂದಿಗಿನ ಪ್ರೇಮವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಅರವಿಂದ್ ತಿವಾರಿ ತನ್ನ ಮಗಳಾದ ಫ್ರಿನ್ಸಿಯನ್ನು ಹೊಡೆದು ಕೊಂದು ಬಳಿಕ ಆಕೆಯ ಶವವನ್ನು ಸೂಟ್ ಕೇಸಿನಲ್ಲಿ ತುಂಬಿ ಬಿಸಾಡಲೆಂದು ಶನಿವಾರ ರಾತ್ರಿ ಆಟೋದಲ್ಲಿ ತೆರಳುತ್ತಿದ್ದನು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

    ಮೃತ ದುರ್ದೈವಿ ಯುವತಿ ಪದವೀಧರೆಯಾಗಿದ್ದು, 6 ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶಕ್ಕೆ ಸಮೀಪವಿರುವ ಜೌನ್ಪುರ್ ಸಿಟಿಯಿಂದ ಬಂದಿದ್ದಳು. ಅಲ್ಲದೆ ಆಕೆ ಕೆಲಸ ಮಾಡುತ್ತಿರುವ ಭಂದೂಪ್ ಕಂಪನಿಯಲ್ಲಿ ಸಹೋದ್ಯೋಗಿಯ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಯುವಕ ಮುಸ್ಲಿಂ ಆಗಿದ್ದು, ಮದುವೆಯಾಗಲು ರೆಡಿಯಾಗಿದ್ದಳು. ಆದರೆ ಈ ವಿಚಾರ ತಿಳಿದ ತಂದೆ, ಆತನ ಜೊತೆಗಿನ ಮದುವೆಯನ್ನು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ತಂದೆ, ಮಗಳನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರಿಗೆ ಇದೂವರೆಗೂ ಆಕೆಯ ದೇಹದ ಪೂರ್ತಿ ಭಾಗ ಸಿಗಲಿಲ್ಲ. ಹೀಗಾಗಿ ಅದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

    ಆರೋಪಿ ತಿವಾರಿ ಮಲಾಡ್ ನಲ್ಲಿರುವ ಟ್ರಾವೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರ ಪ್ರಕಾರ, ಮುಸ್ಲಿಂ ಯುವಕನೊಂದಿಗಿನ ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ತನ್ನ ಮಗಳ ಜೊತೆ ಕ್ಯಾತೆ ತೆಗೆದಿದ್ದನು. ತನಿಖೆಯ ಸಂದರ್ಭದಲ್ಲಿಯೂ ಆತ, ನನಗೆ ನನ್ನ ಮಗಳು ಬೇರೆ ಸಮುದಾಯದ ಯುವಕನೊಂದಿಗೆ ಸಂಬಂಧ ಬೆಳೆಸಿರುವುದು ಇಷ್ಟವಾಗಿರಲಿಲ್ಲ. ಆದರೆ ಆಕೆ ಮಾತ್ರ, ತಾನು ಅತನನ್ನೇ ಮದುವೆಯಾಗುವುದೆಂದು ಹಠ ಹಿಡಿದಿದ್ದಳು. ಇದರಿಂದ ಸಿಟ್ಟಿಗೆದ್ದು ಆಕೆಯನ್ನು ಕೊಲೆ ಮಾಡಲು ತೀರ್ಮಾನ ಮಾಡಿದೆ ಎಂದು ಪೊಲೀಸರ ಬಳಿ ತಿಳಿಸಿದ್ದಾನೆ.

    ತಿವಾರಿ ಹಾಗೂ ಮೃತ ಮಗಳು ತಿಟ್ ವಾಲಾದ ಇಂದಿರಾ ನಗರದಲ್ಲಿರುವ ಪ್ರದೇಶದಲ್ಲಿ ವಾಸವಾಗಿದ್ದರು. ಮೃತ ಪ್ರಿನ್ಸಿಯ ತಾಯಿ ಹಾಗೂ ಮೂವರು ಸಹೋದರಿಯರು ಉತ್ತರಪ್ರದೇಶ ಜೌನ್ಪುರದಲ್ಲಿ ವಾಸವಾಗಿದ್ದಾರೆ. ಇತ್ತ ತಂದೆ ಜೊತೆ ವಾಸವಾಗಿದ್ದ ಪ್ರಿನ್ಸಿ, ಶುಕ್ರವಾರ ರಾತ್ರಿ ಮುಸ್ಲಿಂ ಯುವಕನ ಜೊತೆ ಮದುವೆಯ ಪ್ರಸ್ತಾಪವನ್ನು ಅಪ್ಪನ ಮುಂದಿಟ್ಟಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ತಂದೆ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಮಗೆ ಇದೂವರೆಗೂ ಆರೋಪಿ ಹೇಗೆ ತನ್ನ ಮಗಳನ್ನು ಕೊಲೆಗೈದಿದ್ದಾನೆ ಎಂಬುದು ತಿಳಿದುಬಂದಿಲ್ಲ. ಆದರೆ ಕೊಲೆಯ ನಂತರ ಆತ ಮಗಳ ದೇಹದ ಭಾಗಗಳನ್ನು ಕತ್ತರಿಸಿದ್ದಾನೆ. ನಂತರ ಸೂಟ್ ಕೇಸಿನಲ್ಲಿ ತುಂಬಿದ್ದಾನೆ. ಹೀಗಾಗಿ ಆತ ತುಂಬಿಸಿದ ಭಾಗಗಳಷ್ಟೇ ನಮಗೆ ದೊರೆತಿದ್ದು, ದೇಹದ ಇತರ ಭಾಗಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹಿರಿಯ ಇನ್ಸ್ ಪೆಕ್ಟರ್ ನಿತಿನ್ ಠಾಕ್ರೆ ವಿವರಿಸಿದ್ದಾರೆ.

    ಮಗಳ ಕತ್ತರಿಸಿದ ದೇಹದೊಂದಿಗೆ ತಂದೆ ರಿಕ್ಷಾದಲ್ಲಿ ತಿಟ್ ವಾಲಾ ರೈಲ್ವೆ ನಿಲ್ದಾಣದತ್ತ ತೆರಳಿದ್ದಾನೆ. ಅಲ್ಲಿಂದ ಆತ ಕಲ್ಯಾಣ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದು, ಮತ್ತೆ ಆಟೋ ಹಿಡಿದುಕೊಂಡು ಭಿವಾಂಡಿ ಪ್ರದೇಶಕ್ಕೆ ತೆರಳಿ, ಅಲ್ಲಿ ಮೃತ ದೇಹವನ್ನು ಬಿಸಾಕುವ ಯೋಜನೆ ಹಾಕಿಕೊಂಡಿದ್ದನು. ಈ ಮಧ್ಯೆ ಆಟೋ ಚಾಲಕ ಸೂಟ್ ಕೇಸಿನಲ್ಲಿ ಏನಿದೆ ತುಂಬಾ ವಾಸನೆ ಬರುತ್ತಿದೆಯಲ್ವಾ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಭಯಭೀತನಾದ ತಿವಾರಿ, ಸೂಟ್ ಕೇಸನ್ನು ಆಟೋದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

    ಇದರಿಂದ ಸಂಶಯಗೊಂಡ ಆಟೋ ಚಾಲಕ, ಇತರ ಆಟೋ ಡ್ರೈವರುಗಳಿಗೆ ಮಾಹಿತಿ ನೀಡುತ್ತಾರೆ. ಇತ್ತ ಕೂಡಲೇ ಸ್ಥಳೀಯ ಮಹಾತ್ಮ ಫುಲೆ ಪೊಲೀಸ್ ಠಾಣೆಗೂ ಮಾಹಿತಿ ರವಾನಿಸುತ್ತಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸೂಟ್ ಕೇಸ್ ತೆರೆದು ನೋಡಿದಾಗ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿವೆ. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಿಕೊಳ್ಳುತ್ತಾರೆ.

    ಪ್ರಕರಣವನ್ನು ಕೈಗೆತ್ತಿಗೊಂಡ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ಆರಂಭಿಸಿದ್ದು, ರೈಲ್ವೆ ನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಈ ಮೂಲಕ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

    ನಂತರ ಆರೋಪಿ ಮನೆಗೆ ತೆರಳಿ ಮಗಳ ಬಗ್ಗೆ ಕೇಳಿದ್ದಾರೆ. ಮೊದಲು ಏನೇನೂ ಸಬೂಬು ಹೇಳಿದ ತಿವಾರಿ ಕೊನೆಗೆ ತನ್ನ ತಪ್ಪನ್ನು ಪೊಲಿಸರ ಮುಂದೆ ಒಪ್ಪಿಕೊಂಡನು. ಸದ್ಯ ಪೊಲೀಸರು ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

  • ರಾಷ್ಟ್ರೀಯ ಹೆದ್ದಾರಿ ಬಳಿ ಸೂಟ್ ಕೇಸ್‍ನಲ್ಲಿ ತುಂಬಿದ್ದ ಮಹಿಳೆಯ ಶವ ಪತ್ತೆ

    ರಾಷ್ಟ್ರೀಯ ಹೆದ್ದಾರಿ ಬಳಿ ಸೂಟ್ ಕೇಸ್‍ನಲ್ಲಿ ತುಂಬಿದ್ದ ಮಹಿಳೆಯ ಶವ ಪತ್ತೆ

    ಚಂಡೀಘಡ: ಹರಿಯಾಣದ ರೆವಾರಿ ಜಿಲ್ಲೆಯ ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಟ್ ಕೇಸ್‍ವೊಂದರಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.

    ಬಾವಲ್ ಪಟ್ಟಣಕ್ಕೆ ಸಮೀಪದ ಓಧಿ ಹಳ್ಳಿಯ ಬಳಿಯ ಒಂದು ಹಳ್ಳದಲ್ಲಿ ಭಾನುವಾರ ಸಂಜೆ ಸೂಟ್ ಕೇಸ್ ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯೊಬ್ಬರ ದೇಹವಿತ್ತು. ಆದರೆ ಅವರ ಗುರುತು ಪತ್ತೆಯಾಗಿಲ್ಲ. ಮೃತದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಪ್ರಕರಣವನ್ನು ಕೊಲೆ ಎಂದು ಪರಿಗಣಿಸಲಾಗಿದೆ. ಬಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ. ಆದ್ದರಿಂದ ಮೃತದೇಹವನ್ನು ಬಾವಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

    ಮಹಿಳೆಯನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಕೆ ಸಾವನ್ನಪ್ಪಿದ ನಂತರ ಆರೋಪಿಗಳು ಆಕೆಯನ್ನು ಸೂಟ್‍ಕೇಸ್ ನಲ್ಲಿ ಇಟ್ಟು ಬಿಸಾಕಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಕುಮಾರ್ ಹೇಳಿದ್ದಾರೆ.

    ಭಾನುವಾರ ಬೆಳಗ್ಗೆ ಚಕ್ರಗಳನ್ನು ಹೊಂದಿದ್ದ ಸೂಟ್‍ಕೇಸ್ ಓಧಿ ಗ್ರಾಮದ ಬಳಿ ರಸ್ತೆಬದಿಯ ಹಳ್ಳದಲ್ಲಿ ಬಿದ್ದಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಆದರೆ ಸೂಟ್‍ಕೇಸನ್ನು ಯಾರೂ ಮುಟ್ಟಿರಲಿಲ್ಲ. ಸಂಜೆಯವರೆಗೂ ಕಾದು ನೋಡಿದ್ರೂ ಯಾರೂ ಸೂಟ್‍ಕೇಸ್ ತೆಗೆದುಕೊಳ್ಳಲು ಬರಲಿಲ್ಲ. ಬಳಿಕ ಗ್ರಾಮಸ್ಥರು ಸಂಜೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ತಿಳಿದ ಬಾವಲ್ ಪೊಲೀಸ್ ತಂಡ ಸ್ಥಳಕ್ಕೆ ಹೋಗಿದ್ದಾರೆ. ನಂತರ ಸೂಟ್ ಕೇಸ್ ತೆರೆದು ನೋಡಿದಾಗ ಮಹಿಳೆಯ ದೇಹ ಪತ್ತೆಯಾಗಿದೆ. ಮೃತ ಮಹಿಳೆ ಸುಮಾರು ಐದು ಅಡಿ ಎತ್ತರವಿದ್ದು, ನೈಟಿ ಧರಿಸಿದ್ದರು.

    ಅಪರಿಚಿತ ಮೃತದೇಹ ಮತ್ತು ಸೂಟ್ ಕೇಸ್ ಬಗ್ಗೆ ಹರಿಯಾಣ, ದೆಹಲಿ ಮತ್ತು ರಾಜಸ್ಥಾನದ ಹತ್ತಿರದ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ. ಬಾವಾಲ್, ರೆವಾರಿ ನಗರದಿಂದ 14 ಕಿ.ಮೀ ಮತ್ತು ಗುರ್ಗಾಂವ್ ನಿಂದ 60 ಕಿ.ಮೀ. ದೂರದಲ್ಲಿದೆ. ಈ ಪ್ರಕರಣವನ್ನು ಕೊಲೆ ಎಂದು ಪರಿಗಣಿಸಿ, ಆರೋಪಿಗಾಗಿ ಶೋಧಕಾರ್ಯ ಮಾಡಲಾಗುತ್ತಿದೆ ಎಂದು ಕುಮಾರ್ ಹೇಳಿದ್ದಾರೆ.

  • 7ರ ಬಾಲಕನನ್ನು ಕೊಂದು 1 ತಿಂಗ್ಳು ಸೂಟ್‍ಕೇಸ್ ನಲ್ಲಿಟ್ಟು ಕೊಠಡಿಯಲ್ಲೇ ಕಾಲ ಕಳೆದ ಐಎಎಸ್ ಆಕಾಂಕ್ಷಿ!

    7ರ ಬಾಲಕನನ್ನು ಕೊಂದು 1 ತಿಂಗ್ಳು ಸೂಟ್‍ಕೇಸ್ ನಲ್ಲಿಟ್ಟು ಕೊಠಡಿಯಲ್ಲೇ ಕಾಲ ಕಳೆದ ಐಎಎಸ್ ಆಕಾಂಕ್ಷಿ!

    ನವದೆಹಲಿ: ಐಎಎಸ್ ಆಕಾಂಕ್ಷಿಯೊಬ್ಬ 7 ವರ್ಷದ ಬಾಲಕನನ್ನು ಕೊಂದು ಒಂದು ತಿಂಗಳಿಗಿಂತಲೂ ಅಧಿಕ ಕಾಲ ಮನೆಯ ಸೂಟ್ ಕೇಸ್ ನಲ್ಲಿ ಹುದುಗಿಸಿಟ್ಟ ಆಘಾತಕಾರಿ ಘಟನೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಆಶಿಶ್ ಎಂದು ಗುರುತಿಸಲಾಗಿದ್ದು, ಈತ ಖಾಸಗಿ ಶಾಲೆಯೊಂದರಲ್ಲಿ 1 ನೇತರಗತಿಯಲ್ಲಿ ಓದುತ್ತಿದ್ದನು. ಬಾಲಕನನ್ನು ಉತ್ತರ ದಿಲ್ಲಿಯ ಸ್ವರೂಪ್ ನಗರದ ನಿವಾಸಿ ಭಾರತೀಯ ಆಡಳಿತಾತ್ಮಕ ಸೇವೆಯ ಆಕಾಂಕ್ಷಿ ಅವದೇಶ್ ಸಖ್ಯಾ ಕೊಲೆ ಮಾಡಿದ್ದಾನೆ.

    ಏನಿದು ಘಟನೆ?: ಬಾಲಕ ಆಶಿಶ್ ಜನವರಿ 7ರಂದು ತನ್ನ ಚಿಕ್ಕಮ್ಮನ ಮನೆಗೆ ಹೋದವನು ಮತ್ತೆ ವಾಪಸ್ ಬರಲೇ ಇಲ್ಲ. ಹೀಗಾಗಿ ಪೋಷಕರು ತಮ್ಮ ಮಗ ನಾಪತ್ತೆಯಾಗಿರೋ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣ ದಾಖಲಿಸಿಕೊಂಡ ಬಳಿಕ ಪೊಲೀಸರು ಅನೇಕರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಈ ವೇಳೆ ಸಖ್ಯನ ಮೇಲೆ ಅನುಮಾನಗೊಂಡ ಪೊಲೀಸರು ಆತನ ಮನೆಗೆ ರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಅವರ ಮೂಗಿಗೆ ವಾಸನೆ ಬಡಿದಿದೆ. ಕೂಡಲೇ ಪೊಲೀಸರು ಸಖ್ಯನನ್ನು ಪ್ರಶ್ನಿಸಿದಾಗ, ಕೋಣೆಯಲ್ಲಿ ಇಲಿ ಸತ್ತು ಬಿದ್ದಿರುವುದಾಗಿ ಹೇಳಿ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ್ದಾನೆ.

    ತಪ್ಪೊಪ್ಪಿಕೊಂಡ ಆರೋಪಿ: ಸಖ್ಯ ಹೇಳಿಕೆಯಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು, ಆತನ ಮನೆಯಲ್ಲಿ ಶೋಧ ಆರಂಭಿಸಿದ್ದಾರೆ. ಈ ವೇಳೆ ಆತನ ಮಲಗುತ್ತಿದ್ದ ಕೋಣೆಯ ಬೆಡ್ ಕೆಳಗೆ ಸೂಟ್ ಕೇಸ್ ಒಂದು ಪತ್ತೆಯಾಗಿದೆ. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಶವವಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಸಖ್ಯನನ್ನು ವಿಚಾರಣೆಗೊಳಪಡಿಸಿದಾಗ ತಾನು ಬಾಲಕನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಕೊಲೆಗೆ ಕಾರಣವೇನು?: ಬಾಲಕ ಆಶಿಶ್ ನನ್ನ ಜೊತೆ ಕ್ಲೋಸ್ ಆಗಿದ್ದನು. ಆದ್ರೆ ನನ್ನನ್ನು ಭೇಟಿಯಾಗಲು ಫೋಷಕರು ಆತನನ್ನು ಬಿಡುತ್ತಿರಲಿಲ್ಲ. ಹೀಗಾಗಿ ಬಾಲಕನ ಪೋಷಕರ ಮೇಲಿನ ಸಿಟ್ಟಿಗೆ ಆತನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಬಾಲಕನನ್ನು ಕೊಲೆಗೈದು ಒಂದು ತಿಂಗಳುಗಿಂತಲೂ ಅಧಿಕ ದಿನವಾಗಿದ್ದು, ಆ ದಿನದಂದಲೇ ಆರೋಪಿ ಬಾಲಕನ ಶವವನ್ನು ಪೆಟ್ಟಿಗೆಯಲ್ಲಿ ತುಂಬಿಸಿ ಮನೆಯಲ್ಲಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ವಾಸನೆ ಬರುತ್ತಿರುವ ಕುರಿತು ನೆರೆಮನೆಯವರು ಕೇಳಿದಾಗ ಇಲಿ ಸತ್ತಿರುವುದಾಗಿ ಹೇಳಿ ಮನೆ ತುಂಬಾ ಸುಗಂಧ ದ್ರವ್ಯಗಳನ್ನು ಹಚ್ಚಿ, ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದನು ಎಂಬುದಾಗಿ ವರದಿಯಾಗಿದೆ.

    ಬಾಲಕ ವಾಸಿಸುತ್ತಿದ್ದ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದು, ಸಖ್ಯ ಬಾಲಕನನ್ನು ಅಪಹರಿಸಿರುವ ದೃಶ್ಯ ಸೆರೆಯಾಗಿದೆ. ಇನ್ನು ಮೃತ ಬಾಲಕನ ಪೋಷಕರಿಗೆ ಆರೋಪಿ ಸಖ್ಯನ ಪರಿಚಯವಿದ್ದು, ತನಿಖೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ.