Tag: ಸುಮಲತಾ ಅಂಬರೀಶ್

  • ನಿಖಿಲ್ ಫಸ್ಟ್, ಸುಮಲತಾ ಲಾಸ್ಟ್- ಇವಿಎಂನಲ್ಲಿ ಅಭ್ಯರ್ಥಿಗಳ ಸ್ಥಾನ ಇಂತಿದೆ

    ನಿಖಿಲ್ ಫಸ್ಟ್, ಸುಮಲತಾ ಲಾಸ್ಟ್- ಇವಿಎಂನಲ್ಲಿ ಅಭ್ಯರ್ಥಿಗಳ ಸ್ಥಾನ ಇಂತಿದೆ

    ಮಂಡ್ಯ: ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ ಈ ಕೆಳಕಂಡಂತೆ ಸ್ಥಾನ ನೀಡಲಾಗಿದೆ. ಮೊದಲ ಹೆಸರು ಮುಖ್ಯಮಂತ್ರಿ ಮಗ ನಿಖಿಲ್ ಕುಮಾರಸ್ವಾಮಿಯದ್ದಾದ್ರೆ ಕಡೆಯವರಲ್ಲಿ 2ನೇಯವರಾಗಿ ಸುಮಲತಾ ಅಂಬರೀಶ್ ಹೆಸರಿದೆ.

    ಸುಮಲತಾ ಅಂಬರೀಶ್ ಹೆಸರಿನ ಮೊದಲಿಗೆ ಮತ್ತು ನಂತರದಲ್ಲಿ ಕೊನೆಯವರಾಗಿ ಇನ್ನಿಬ್ಬರು ಸುಮಲತಾ ಹೆಸರಿನ ಪಕ್ಷೇತರ ಅಭ್ಯರ್ಥಿಗಳು ಇದ್ದಾರೆ. ಇವಿಎಂನಲ್ಲಿ ಈ ಬಾರಿ ಅಭ್ಯರ್ಥಿಗಳ ಫೋಟೋವು ಇರುವುದರಿಂದ ಮತದಾರರಿಗೆ ಅಷ್ಟೊಂದು ಗೊಂದಲ ಆಗುವ ಸಾಧ್ಯತೆ ಇಲ್ಲ.

    ಕ್ರಮ ಸಂಖ್ಯೆ- ಅಭ್ಯರ್ಥಿ-  ಪಕ್ಷ – ಚಿಹ್ನೆ

    1. ನಿಖಿಲ್ ಕೆ- ಜೆಡಿಎಸ್ – ತೆನೆ ಹೊತ್ತ ಮಹಿಳೆ

    2. ನಂಜುಂಡಸ್ವಾಮಿ – ಬಿಎಸ್‍ಪಿ – ಆನೆ

    3. ಗುರುಲಿಂಗಯ್ಯ – ಐಎನ್‍ಸಿಪಿ – ಕಬ್ಬು ಬೆಳೆಗಾರ

    4. ಡಿ ಸಿ ಜಯಶಂಕರ –  ಐಎನ್‍ಪಿ – ಚಪಾತಿ ರೋಲರ್

    5. ಸಿ ಪಿ ದಿವಾಕರ್ –  ಉತ್ತಮ ಪ್ರಜಾಕೀಯ ಪಾರ್ಟಿ  – ಆಟೋ ರಿಕ್ಷಾ

    6. ಸಂತೋಷ್ ಹೆಚ್‍ಪಿ – ಇಂಜಿನಿಯರ್ಸ್ ಪಾರ್ಟಿ – ಟ್ರಾಕ್ಟರ್ ಚಲಾಯಿಸುವ ರೈತ

    7. ಅರವಿಂದ್ – ಪ್ರೇಮಾನಂದ್  ಪಕ್ಷೇತರ – ಮೈಕ್

    8. ಕೌಡ್ಲೆ ಚನ್ನಪ್ಪ – ಪಕ್ಷೇತರ – ಏಸಿ

    9. ತುಳಸಪ್ಪ ದಾಸರ – ಪಕ್ಷೇತರ – ಹೆಲ್ಮೆಟ್

    10. ಹೆಚ್ ನಾರಾಯಣ – ಪಕ್ಷೇತರ – ಸಿಸಿಟಿವಿ

    11. ಎನ್‍ಸಿ ಪುಟ್ಟರಾಜು – ಪಕ್ಷೇತರ – ಟಿವಿ

    12. ಪ್ರೇಮಕುಮಾರ ವಿ.ವಿ – ಪಕ್ಷೇತರ – ತೆಂಗಿನ ತೋಟ

    13. ಮಂಜುನಾಥ್ ಬಿ – ಪಕ್ಷೇತರ – ಅಲ್ಮೇರಾ

    14. ಜಿ.ಮಂಜುನಾಥ್ – ಪಕ್ಷೇತರ – ವಜ್ರ

    15. ಲಿಂಗೇಗೌಡ ಎಸ್ ಹೆಚ್ – ಪಕ್ಷೇತರ – ವಿಷಲ್

    16. ಸಿ.ಲಿಂಗೇಗೌಡ – ಪಕ್ಷೇತರ – ಚಪ್ಪಲಿ

    17. ಎಂ ಎಲ್ ಶಶಿಕುಮಾರ್ – ಪಕ್ಷೇತರ – ಸಿತಾರ್

    18. ಸತೀಶ್‍ಕುಮಾರ್ ಟಿ ಎನ್ – ಪಕ್ಷೇತರ – ಕಂಪ್ಯೂಟರ್

    19. ಸುಮಲತಾ – ಪಕ್ಷೇತರ – ತಳ್ಳುಗಾಡಿ

    20. ಎ ಸುಮಲತಾ – ಪಕ್ಷೇತರ – ಕಹಳೆ ಊದುತ್ತಿರುವ ವ್ಯಕ್ತಿ

    21. ಎಂ ಸುಮಲತಾ – ಪಕ್ಷೇತರ – ಬೇಬಿ ವಾಕರ್

    22. ಸುಮಲತಾ ಪಿ – ಪಕ್ಷೇತರ – ಬ್ಯಾಟ್

  • ರೆಬೆಲ್ ಸ್ಟಾರ್ ಪತ್ನಿ ವಿರುದ್ಧ ಜಿಲ್ಲಾಧಿಕಾರಿ ಗರಂ

    ರೆಬೆಲ್ ಸ್ಟಾರ್ ಪತ್ನಿ ವಿರುದ್ಧ ಜಿಲ್ಲಾಧಿಕಾರಿ ಗರಂ

    ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ವಿರುದ್ಧ ಜಿಲ್ಲಾಧಿಕಾರಿ ಮಂಜುಶ್ರೀ ಗರಂ ಆಗಿದ್ದಾರೆ. ತನ್ನ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕೊಟ್ಟಿರುವ ಡೆಡ್ ಲೈನ್ ಇಂದಿಗೆ ಕೊನೆಯಾಗುತ್ತದೆ.

    ಸಾಕ್ಷ್ಯ ಕೊಡಿ, ಇಲ್ಲಾಂದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ಅಲ್ಲದೆ 24 ಗಂಟೆಯಲ್ಲಿ ಆರೋಪ ಸಾಬೀತುಪಡಿಸುವಂತೆಯೂ ಸೂಚನೆ ನೀಡಿದ್ದರು.


    ಆರೋಪವೇನು?
    ಇಷ್ಟು ದಿನ ವಾದ-ವಿವಾದಗಳು ರಾಜಕಾರಣಿಗಳ ನಡುವೆ ಇತ್ತು. ಆದ್ರೆ ಇದೀಗ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಸುಮಲತಾ ಮಧ್ಯೆ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ ಅಂತಾನೆ ಹೇಳಬಹುದು. ಯಾಕಂದ್ರೆ ಜಿಲ್ಲಾಧಿಕಾರಿಯವರು ಮುಖ್ಯಮಂತ್ರಿಗಳ ಮನೆಗೆ ಹೋಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ಅವರ ಅನುಕೂಲಕ್ಕೆ ತಕ್ಕಂತೆ ಅವರು ಕೆಲಸ ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಸುಮಲತಾ ಆರೋಪ ಮಾಡಿದ್ದರು. ಇದರಿಂದ ಸಿಟ್ಟುಗೊಂಡಿರುವ ಜಿಲ್ಲಾಧಿಕಾರಿಯವರು, ನಾನು ಇಷ್ಟು ವರ್ಷ ಯಾವುದೇ ರೀತಿಯ ಲೋಪ ಇಲ್ಲದೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದೀಗ ನಿಮ್ಮ ಆರೋಪದಿಂದ ನನ್ನ ಕರ್ತವ್ಯಕ್ಕೆ ಅವಮಾನ ಮಾಡಿದಂತಿದೆ. ಹೀಗಾಗಿ ನೀವು ಒಂದು ದಿನದೊಳಗಡೆ ಉತ್ತರ ನೀಡಬೇಕು. ಇಲ್ಲವೆಂದಲ್ಲಿ ಮುಂದಿನ ಕ್ರಮ ಜರಗಿಸುತ್ತೇವೆ ಎಂದು ಡಿಸಿ ನೋಟಿಸ್ ನೀಡಿದ್ದರು.

    ಅಲ್ಲದೆ ನಿಖಿಲ್ ನಾಮಪತ್ರ ಪ್ರಕ್ರಿಯೆಯಲ್ಲಿಯೂ ದೋಷ ಇದೆ. ಅದನ್ನು ಮುಚ್ಚಾಕುವ ಪ್ರಯತ್ನವನ್ನು ಕೂಡ ಜಿಲ್ಲಾಧಿಕಾರಿಗಳು ಮಾಡುತ್ತಿದ್ದಾರೆ ಎಂಬುದಾಗಿಯೂ ಸುಮಲತಾ ಆರೋಪ ಮಾಡಿದ್ದರು.

    ಒಟ್ಟಿನಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಸುಮಲತಾ ಅವರು ಸುದ್ದಿಗೋಷ್ಠಿ ನಡೆಸಲಿದ್ದು, ಡಿಸಿ ನೋಟಿಸ್ ಗೆ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

  • ಮಂಡ್ಯ ಚುನಾವಣೆಯಲ್ಲಿ ‘ಕಹಳೆ’ ಊದಲಿದ್ದಾರೆ ಸುಮಲತಾ!

    ಮಂಡ್ಯ ಚುನಾವಣೆಯಲ್ಲಿ ‘ಕಹಳೆ’ ಊದಲಿದ್ದಾರೆ ಸುಮಲತಾ!

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯ ಚುನಾವಣೆಯಲ್ಲಿ ‘ಕಹಳೆ’ ಊದಲಿದ್ದಾರೆ. ಚುನಾವಣಾ ಆಯೋಗ ಸುಮಲತಾ ಅವರಿಗೆ ಕಹಳೆ ಊದುತ್ತಿರುವ ರೈತನ ಚಿಹ್ನೆಯನ್ನು ನೀಡಿದೆ.

    ಕಬ್ಬಿನ ಗದ್ದೆ ಮುಂದೆ ರೈತ, ತೆಂಗಿನ ತೋಟ, ಕಹಳೆ ಊದುತ್ತಿರುವ ರೈತನ ಚಿಹ್ನೆಗಳನ್ನು ಸುಮಲತಾ ಅವರು ಆಯ್ಕೆ ಮಾಡಿಕೊಂಡಿದ್ದರು. ಈಗ ಆಯೋಗ ಸುಮಲತಾ ಅವರು ಕೇಳಿದ್ದ ಕಹಳೆ ಊದುತ್ತಿರುವ ರೈತನ ಚಿತ್ರವನ್ನು ನೀಡಿದೆ.

    ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನ 4 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸುಮಲತಾ ಅಂಬರೀಶ್, ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ, ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಗ್ರಾಮದ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

    ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡಲು ಸುಮಲತಾ ಎಂಬ ಹೆಸರಿನ ಮಹಿಳೆಯರನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಮಂಡ್ಯದಲ್ಲಿ ಕೇಳಿಬರತೊಡಗಿವೆ. ಇದರಿಂದ ಸುಮಲತಾ ಅಂಬರೀಶ್ ಅವರಿಗೆ ಬೀಳುವ ಮತಗಳನ್ನು ವಿಭಜನೆಯಾಗಿ, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಈ ತಂತ್ರ ಮಾಡಲಾಗಿದೆ ಎನ್ನಲಾಗುತ್ತಿದೆ.

  • ಏಪ್ರಿಲ್ 2ರಿಂದ ಸುಮಲತಾ ಪರ ನಿರಂತರ ಪ್ರಚಾರಕ್ಕೆ ‘ಜೋಡೆತ್ತು’ ರೆಡಿ!

    ಏಪ್ರಿಲ್ 2ರಿಂದ ಸುಮಲತಾ ಪರ ನಿರಂತರ ಪ್ರಚಾರಕ್ಕೆ ‘ಜೋಡೆತ್ತು’ ರೆಡಿ!

    ಬೆಂಗಳೂರು: ಸ್ಟಾರ್ ಕದನವಾಗಿರುವ ಮಂಡ್ಯ ಲೋಕಸಭಾ ಚುನಾವಣೆಗೆ ಏಪ್ರಿಲ್ 2 ರಿಂದ ಮತ್ತಷ್ಟು ರಂಗು ಬರಲಿದ್ದು, ನಟ ದರ್ಶನ್ ಹಾಗು ನಟ ಯಶ್ ಅವರು ಸುಮಲತಾ ಅವರ ಪರ ನಿರಂತರ ಪ್ರಚಾರ ನಡೆಸಲಿದ್ದಾರೆ.

    ದರ್ಶನ್ ಮತ್ತು ಯಶ್ ಇಬ್ಬರೂ ಕೂಡ ಏಕಕಾಲದಲ್ಲಿ ಬೇರೆ ಬೇರೆ ತಾಲೂಕುಗಳಲ್ಲಿ ಪ್ರಚಾರ ನಡೆಸಲಿದ್ದು, ದರ್ಶನ್ 12 ದಿನ ಪ್ರಚಾರ ಮಾಡಿದರೆ, ಯಶ್ ಕೂಡ 13 ದಿನ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 16 ರಂದು ನಡೆಯುವ ಸಮಾವೇಶದಲ್ಲಿ ಇಬ್ಬರೂ ಒಟ್ಟಿಗೆ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪ್ರಚಾರ ನಡೆಯುವ ಅವಧಿಯಲ್ಲೂ ಮಾಸ್ಟರ್ ಪ್ಲಾನ್ ಮಾಡಲಾಗಿದ್ದು, ಪ್ರತಿ ದಿನ ಕ್ಷೇತ್ರದ ಮೂರು ಭಾಗಗಳಲ್ಲಿ ದರ್ಶನ್, ಯಶ್, ಸುಮಲತಾ ಅವರು ಪ್ರಚಾರ ನಡೆಸಲಿದ್ದಾರೆ. ಪ್ರತಿದಿನ ಮಂಡ್ಯ ಲೋಕಸಭಾ ಕ್ಷೇತ್ರದ ಬೇರೆ ಬೇರೆ ಸ್ಥಳಗಳಲ್ಲಿ ಪ್ರಚಾರ ಕಾರ್ಯ ನಡೆಯಲಿದೆ.

    ಸುಮಲತಾ: ಏ.2 ಮದ್ದೂರು, ಏ.3 ಮದ್ದೂರು ಮತ್ತು ಮಂಡ್ಯ, ಏ.4 ಮಂಡ್ಯ, ಏ.5 ಶ್ರೀರಂಗಪಟ್ಟಣ, ಏ.6 ಮತ್ತು 7 ಯುಗಾದಿ, ಏ.8 ನಾಗಮಂಗಲ, ಏ.9 ಶ್ರೀರಂಗಪಟ್ಟಣ ಮತ್ತು ಪಾಂಡವರಪುರ, ಏ.10 ಪಾಂಡವಪುರ, ಏ.11 ನಾಗಮಂಗಲ ಮತ್ತು ಕೆಆರ್ ಪೇಟೆ, ಏ.12 ಕೆಆರ್ ಪೇಟೆ, ಏ.13 ಕೆಆರ್ ನಗರ, ಏ.14 ಕೆಆರ್ ನಗರ ಮತ್ತು ಮಳವಳ್ಳಿ, ಏ.15 ಮಳವಳ್ಳಿ, ಏ.16 ರ‍್ಯಾಲಿ.

    ದರ್ಶನ್: ಏ.2 ಮಂಡ್ಯ, ಏ.3 ಕೆಆರ್ ಪೇಟೆ, ಏ.4 ನಾಗಮಂಗಲ, ಏ.5, ಏ.6 ಮತ್ತು 7 ಯುಗಾದಿ, ಏ.8 ಮಂಡ್ಯ ಮತ್ತು ಮದ್ದೂರು, ಏ.9 ಮದ್ದೂರು, ಏ.10 ಕೆಆರ್ ನಗರ, ಏ.11 ಕೆಆರ್ ನಗರ ಮತ್ತು ಮಳವಳ್ಳಿ, ಏ.12 ಮಳವಳ್ಳಿ, ಏ.13 ಶ್ರೀರಂಗಪಟ್ಟಣ, ಏ.14 ಶ್ರೀರಂಗಪಟ್ಟಣ ಮತ್ತು ಪಾಂಡವಪುರ, ಏ.15 ಪಾಂಡವಪುರ, ಏ.16 ರ‍್ಯಾಲಿ.

    ಯಶ್: ಏ.2 ಶ್ರೀರಂಗಪಟ್ಟಣ, ಏ.3 ಶ್ರೀರಂಗಪಟ್ಟಣ, ಏ.4 ಪಾಂಡವಪುರ, ಏ.5 ಮಳವಳ್ಳಿ, ಏ.6 ಮತ್ತು 7 ಯುಗಾದಿ, ಏ.8 ಮಳವಳ್ಳಿ, ಏ.9 ಮಂಡ್ಯ, ಏ.10 ಮಂಡ್ಯ ಮತ್ತು ಮದ್ದೂರು, ಏ.11 ಮದ್ದೂರು, ಏ.12 ನಾಗಮಂಗಲ, ಏ.13 ನಾಗಮಂಗಲ, ಏ.14 ಕೆಆರ್ ಪೇಟೆ, ಏ.15 ಕೆಆರ್ ಪೇಟೆ ಮತ್ತು ಮಂಡ್ಯ, ಏ.16 ರ‍್ಯಾಲಿ.

  • ಸುಮಲತಾಗೆ ಸಚಿವ ಪುಟ್ಟರಾಜು ಸವಾಲು

    ಸುಮಲತಾಗೆ ಸಚಿವ ಪುಟ್ಟರಾಜು ಸವಾಲು

    ಮಂಡ್ಯ: ದಿವಂಗತ ಅಂಬರೀಶ್ ಹೆಸರು ಹೇಳಲ್ಲ ಹೇಳಲ್ಲ ಎನ್ನುತ್ತಲೇ ಅಂಬಿ ಹೆಸರು ಜಪವಾಗುತ್ತಿದ್ದು, ಇದೀಗ ಸಚಿವ ಪುಟ್ಟರಾಜು ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸವಾಲೆಸೆದಿದ್ದಾರೆ.

    ಅಂಬಿಗೆ ನಾನೇನು ಮಾಡಿದ್ದೇನೆ ಎಂಬುದನ್ನು ಸುಮಲತಾ ಹೇಳಿಕೊಳ್ಳಲಿ. ಅಂಬರೀಶ್ ಸಮಾಧಿ ಬಳಿ ಪೂಜೆ ಮಾಡಲು ಹೋದಾಗ ಪುಟ್ಟರಾಜು ಅವರು ರಾಜಕೀಯವಾಗಿ ಕುಟುಂಬಕ್ಕೆ ಏನೇನು ಸಹಾಯ ಮಾಡಿದ್ದಾರೆ ಎಂಬುದನ್ನು ಅಂಬರೀಶ್ ಅಣ್ಣನ ಮುಂದೆ ಕೇಳಿಕೊಳ್ಳಲಿ ಎಂದು ಸಚಿವರು ಸುಮಲತಾಗೆ ಚಾಲೆಂಜ್ ಮಾಡಿದ್ದಾರೆ.

    ನಾನು ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇನೆ. ಹಾಗೆಯೇ ರಾಮನಗರದಲ್ಲಿ ಸೋತ ಬಳಿಕ ಅವರನ್ನು ನಾನೇ ಮಂಡ್ಯಕ್ಕೆ ಕರೆತಂದಿದ್ದೇನೆ. ಅಲ್ಲದೇ ಮುಂದೆ ನೀವು ಇಲ್ಲೇ ಎಂಪಿ ಅಭ್ಯರ್ಥಿ ಆಗಬೇಕು ಎಂದು ಮಾಡಿದ್ದೀನಿ. ರಾಜಕೀಯ ಪ್ರವೇಶ ಮಂಡ್ಯದಿಂದಲೇ ಮಾಡಬೇಕು ಎಂದು ಹೇಳಿದ್ದೆ ಅಂದ್ರು.

    ಅಂಬರೀಶ್ ಅವರ ರಾಜಕೀಯ ಏಳಿಗೆಗಾಗಿ ನಾನು ಶ್ರಮವಹಿಸಿದ್ದೇನೆ. ನನ್ನ ಆತ್ಮಾಭಿಮಾನದ ಬಗ್ಗೆ ಸುಮಲತಾ ಪ್ರಶ್ನೆ ಮಾಡೋದು ಬೇಡ ಎಂದು ಪುಟ್ಟರಾಜು, ಸುಮಲತಾ ವಿರುದ್ಧ ಗರಂ ಆಗಿದ್ದಾರೆ.

    ಈ ಹಿಂದೆ ಸುಮಲತಾ ಅವರು ಕೂಡ ಅಂಬರೀಶ್ ಹೆಸರನ್ನು ಬಿಟ್ಟು ಪ್ರಚಾರ ಮಾಡಲಿ. ಸುಮಲತಾ ಅಂಬರೀಶ್ ನಲ್ಲಿ ಅಂಬರೀಶ್ ಹೆಸರನ್ನು ಬೇರ್ಪಡಿಸಲು ಯಾರಿಂದಲೂ ಆಗಲ್ಲ ಎಂದು ಹೇಳಿದ್ದರು.

  • ಐಟಿ ರೈಡ್ ಮಾಹಿತಿ ಸುಳಿವು ಬಿಜೆಪಿ ಬೆಂಬಲ ಅಭ್ಯರ್ಥಿಗೆ ಗೊತ್ತಾಗಿದ್ದು ಹೇಗೆ – ಸಿಎಂ ಎಚ್‍ಡಿಕೆ ಗಂಭೀರ ಆರೋಪ

    ಐಟಿ ರೈಡ್ ಮಾಹಿತಿ ಸುಳಿವು ಬಿಜೆಪಿ ಬೆಂಬಲ ಅಭ್ಯರ್ಥಿಗೆ ಗೊತ್ತಾಗಿದ್ದು ಹೇಗೆ – ಸಿಎಂ ಎಚ್‍ಡಿಕೆ ಗಂಭೀರ ಆರೋಪ

    ಬೆಂಗಳೂರು: ರಾಜ್ಯದಲ್ಲಿ ಇಂದು ಹಲವೆಡೆ ನಡೆದಿರುವ ಐಟಿ ಅಧಿಕಾರಿಗಳ ದಾಳಿಯ ಬಗ್ಗೆ ಮಂಡ್ಯ ಬಿಜೆಪಿ ಬೆಂಬಲ ಅಭ್ಯರ್ಥಿಗೆ ಮಾಹಿತಿ ಹೇಗೆ ಲಭಿಸಿತ್ತು ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದು, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದ ಐಟಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಿನ್ನೆ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲ ಅಭ್ಯರ್ಥಿ ಮಧ್ಯಾಹ್ನ ಐಟಿ ದಾಳಿಯ ಬಗ್ಗೆ ಮಾತನಾಡಿ ಕೆಲವೇ ಕ್ಷಣಗಳಲ್ಲಿ ಐಟಿ ದಾಳಿಯಾಗುತ್ತೆ ಎಂದು ಹೇಳಿದ್ದಾರೆ. ಇತ್ತ ಸಂಜೆಯಾಗುತ್ತಿದಂತೆ ಕೇಂದ್ರದ ಐಟಿ ಅಧಿಕಾರಿಗಳು ದಾಳಿಗೆ ಸಿದ್ಧರಾಗುತ್ತಾರೆ. ಅವರಿಗೆ ಈ ಬಗ್ಗೆ ಮಾಹಿತಿ ಹೇಗೆ ಲಭಿಸಿತ್ತು ಎಂದು ಪ್ರಶ್ನೆ ಮಾಡಿದರು.

    ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಇಂತಹ ದಾಳಿಗೆ ಹೆದುರುವವರು ನಾವಲ್ಲಾ. ಐಟಿ ದಾಳಿಯ ಬಗ್ಗೆ ನಮ್ಮ ವಿರೋಧವಿಲ್ಲ. ಕೆಲವೇ ಕೆಲವು ಪಕ್ಷದ ಮುಖಂಡರು, ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡುತ್ತಿರುವುದು ಸರಿಯಲ್ಲ. ಆದರೆ ಬಿಜೆಪಿ ನಾಯಕರ ಮನೆ ಮೇಲೆ ಏಕೆ ದಾಳಿ ನಡೆದಿಲ್ಲ. ಅವರೆಲ್ಲಾ ಸಾಚಗಳಾ? ಐಟಿ ಇಲಾಖೆಯ ಅಧಿಕಾರಿಯೊಬ್ಬರು ಮುಂಬೈನಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸಂಪಾದನೆ ಮಾಡಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಐಟಿ ಅಧಿಕಾರಿಗಳು ಬಿಜೆಪಿಯ ಏಜೆಂಟ್ ಆಗಿ ಕೆಲಸ ಮಾಡುವುದನ್ನು ಬಿಡಬೇಕು ಎಂದು ತಮ್ಮ ವಾಗ್ದಾಳಿಯನ್ನು ಮುಂದುವರಿಸಿದರು.

    ಸುಮಲತಾ ಹೇಳಿದ್ದೇನು?
    ಯಾರು ಸಾವಿರ ಕೋಟಿ, ಕೋಟಿ ಹಣ ಮಾಡಿಕೊಂಡಿದ್ದಾರೆ ಎಂಬುವುದರ ಬಗ್ಗೆ ಕೇಂದ್ರಕ್ಕೆ ಗೊತ್ತಿದೆ. ಅವರಿಗೆ ತಕ್ಕ ನ್ಯಾಯ ಸಿಗುತ್ತೆ. ಸ್ವಲ್ಪ ಕಾದು ನೋಡೋಣ ಎಂದು ಮಂಡ್ಯದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಸುಮಲತಾ ಹೇಳಿದ್ದರು.

  • ಸುಮಲತಾ ಗೆದ್ದ ಬಳಿಕ ಬಿಜೆಪಿ ಸೇರುತ್ತಾರೆ: ರಮೇಶ ಜಿಗಜಿಣಗಿ

    ಸುಮಲತಾ ಗೆದ್ದ ಬಳಿಕ ಬಿಜೆಪಿ ಸೇರುತ್ತಾರೆ: ರಮೇಶ ಜಿಗಜಿಣಗಿ

    – ನಮ್ಮ ಮೇಲೆ ಆರೋಪ ಮಾಡಿದವರು ಹಾಳಾಗಿ ಹೋಗುತ್ತಾರೆ

    ವಿಜಯಪುರ: ಮಂಡ್ಯದಲ್ಲಿ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಗೆಲ್ಲುತ್ತಾರೆ. ಬಳಿಕ ನಮ್ಮ ಪಕ್ಷಕ್ಕೆ ಸೇರುತ್ತಾರೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕದೇ ಸುಮಲತಾ ಅವರಿಗೆ ಬೆಂಬಲ ನೀಡಲಾಗುತ್ತದೆ ಎಂದು ಹೇಳಿದರು.

    ಈ ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಹಾಕಿ ಕೈ ಸುಟ್ಟುಕೊಂಡಿದ್ದೇವೆ. ಹೀಗಾಗಿ ಈ ಬಾರಿ ಅಭ್ಯರ್ಥಿಯನ್ನು ಹಾಕುವ ವಿಚಾರದಿಂದ ನಾಯಕರು ದೂರ ಸರಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಣಕ್ಕೆ ಇಳಿದ ಸುಮಲತಾ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅಲೆ, ಕೇಂದ್ರ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಸಾಧನೆಗಳಿಂದಾಗಿ ಈ ಬಾರಿಯೂ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ವಿಜಯಪುರ ಕ್ಷೇತ್ರದ ಪ್ರಚಾರಕ್ಕೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಕ್ಷೇತ್ರಗಳನ್ನು ಒಳಗೊಂಡಂತೆ ಒಂದು ಕಡೆ ಬೃಹತ್ ಸಮಾವೇಶ ಮಾಡಲು ಪಕ್ಷದ ರಾಜ್ಯ ನಾಯಕರು ಮುಂದಾಗಿದ್ದಾರೆ. ಈ ಸಮಾವೇಶಕ್ಕೆ ಪ್ರಧಾನಿ ಮೋದಿ ಆಗಮಿಸಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು.

    ಐಟಿ ದಾಳಿಯ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಾಯಕ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ಮೇಲೆ ಆರೋಪ ಮಾಡುವವರು ಹಾಳಾಗಿ ಹೋಗುತ್ತಾರೆ. ಐಟಿ ದಾಳಿಯನ್ನು ಮಾಡುವಂತೆ ನಾವು ಹೇಳಿಲ್ಲ ಎಂದು ತಿಳಿಸಿದರು.

  • ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಷಣ ನೋಡಿದ್ರೆ ನೋವಿನ ಛಾಯೆ ಕಾಣ್ತಿಲ್ಲ: ಸಿಎಂ ಎಚ್‍ಡಿಕೆ

    ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಷಣ ನೋಡಿದ್ರೆ ನೋವಿನ ಛಾಯೆ ಕಾಣ್ತಿಲ್ಲ: ಸಿಎಂ ಎಚ್‍ಡಿಕೆ

    ಮಂಡ್ಯ: ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಭಾಷಣ ಮಾಡಿದ ವಿಡಿಯೋವನ್ನು ಮಾಧ್ಯಮಗಳಲ್ಲಿ ತೋರಿಸಲಾಗಿದೆ. ಅದನ್ನು ನೋಡಿದರೆ ಅವರಲ್ಲಿ ಯಾವುದೇ ನೋವಿನ ಛಾಯೆ ಕಾಣುತ್ತಿಲ್ಲ. ಜಿಲ್ಲೆಯ ಜನರು ಅನುಭವಿಸುತ್ತಿರುವ ನೋವಿನ ಛಾಯೆಯು ಅವರ ಮುಖದಲ್ಲಿ ಇಲ್ಲ. ಕೇವಲ ನಾಟಕೀಯ ಸಿನಿಮಾ ಡೈಲಾಗಷ್ಟೇ ಎಂದು ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರ ಹೆಸರನ್ನು ಪ್ರಸ್ತಾಪ ಮಾಡದೆಯೇ ವಾಗ್ದಾಳಿ ನಡೆಸಿದ್ದಾರೆ.

    ಮಂಡ್ಯದ ಮಾದೇಗೌಡರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಮಂಡ್ಯ ರಾಜಕೀಯದಲ್ಲಿ ಮಾದೇಗೌಡರು ಅತ್ಯಂತ ಹಿರಿಯ ರಾಜಕಾರಣಿ. ನಮ ತಂದೆಯ ಸಮಕಾಲೀನರಾಗಿ ರಾಜಕೀಯ ಮಾಡಿದ್ದಾರೆ. ಅವರು ಕಾಂಗ್ರೆಸ್ ನಲ್ಲಿದ್ದು, ಆಶೀರ್ವಾದ ಪಡೆಯಲು ಬಂದಿದ್ದೇನೆ. ಅವರಿಂದ ಕೂಡ ಸಲಹೆ ಪಡೆದಿದ್ದು, ನಿಖಿಲ್ ಕೂಡ ಮಾದೇಗೌಡರ ಆಶೀರ್ವಾದ ಪಡೆದು ಹೋಗಿದ್ದಾನೆ. ಅವರು ಕೂಡ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ ಎಂದರು.

    ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾರ ಪಾಲಹಳ್ಳಿಯ ಭಾಷಣ ನೋಡಿದ್ದೇನೆ. ಯಾವುದೇ ನೋವಿನ ಛಾಯೆಗಳು ಕಾಣುತ್ತಿಲ್ಲ. ನಾಟಕ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ಹಣ ತಗೊಂಡು ಮಜಾ ಮಾಡಿ, ವೋಟ್ ಮಾತ್ರ ನನಗೆ ಹಾಕಿ ಹೇಳಿದ್ದಾರೆ. ಜಿಲ್ಲೆಯ ಜನರಿಗೆ ಅದನ್ನು ಸದುಪಯೋಗ ಪಡಿಸಿಕೊಳ್ಳಲಿ ಎಂದು ಹೇಳುತ್ತಿದ್ದಾರೆ. ಆದರೆ ರೈತರು ಆತ್ಮಹತ್ಯೆ ಮಾಡಿಕೊಂಡ ವೇಳೆ ನೊಂದ ಜನರಿಗೆ ನಾನು ಆರ್ಥಿಕ ಸಹಾಯ ಮಾಡಿದ್ದೇನೆ ವಿನಃ ಮಜಾ ಮಾಡಲು ದುಡ್ಡು ಕೊಟ್ಟಿಲ್ಲ. ಅವರ ಸಂಕಷ್ಟ ನೋಡಿ ಹಣ ಕೊಟ್ಟಿದ್ದೀನಿ. ಅವರು ಇನ್ನೊಬ್ಬರು ಹಣ ಪಡೆದು ಮಜಾ ಮಾಡಿಕೊಂಡು ಬರುವ ಸಂಸ್ಕೃತಿಯಿಂದ ಬಂದಿದ್ದಾರೆ ಎಂದರು.

    ಮಜಾ ಮಾಡುವ ಸಂಸ್ಕೃತಿ:
    ಜಿಲ್ಲೆಯ ಜನತೆ ಬಳಿ ಡ್ರಾಮಾಗಳು ನಡೆಯಲ್ಲ. ಕೆ ಆರ್ ಪೇಟೆ ಕಾರ್ಯಕ್ರಮ ಮಾಡಿದ್ದಾರಲ್ಲ, ಯಾವ ಹೋಟೆಲ್ ನಲ್ಲಿ ಇದ್ದುಕೊಂಡು ದುಡ್ಡು ಕೊಟ್ಟಿದ್ದಾರೆ. ಪಾಲಹಳ್ಳಿಯಲ್ಲೂ ಕೂಡ ಹಣ ಕೊಟ್ಟಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಜಿಲ್ಲೆ ಜನರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಜನರು ಇವರಿಗೆ ಮತ ಹಾಕುತ್ತಾರೆ? ಮೈ ಶುಗರ್ ಬಾಕಿ ಬಿಡುಗಡೆಗೆ ಹಣ ಕೊಡೋದಕ್ಕೆ ಮುಂದಾಗಿದ್ದೆ, ಅದಕ್ಕೆ ಚುನಾವಣಾ ಆಯೋಗ ಬೇಡ ಅಂತು. ನಾನು ರೈತರ ಕಷ್ಟಕ್ಕೆ ಸ್ಪಂದಿಸಲು ದುಡ್ಡು ಬಿಡುಗಡೆ ಮಾಡಿ ಎಂದು ಹೇಳಿದ್ದೇನೆ. ಸಂಕಷ್ಟದಲ್ಲಿ ಇರುವವರಿಗೆ ನೆರವು ಕೊಟ್ಟು ಕುತಂತ್ರದ ರಾಜಕೀಯದಲ್ಲಿ ಇದುವರೆಗೂ ಬಂದಿದ್ದೇನೆ.

    ಅನುಕಂಪದ ಹೆಸರಿನಲ್ಲಿ ಮತ ಕೇಳಲು ಬಂದಿದ್ದಾರೆ. ನನ್ನ ಜೋಡೆತ್ತು ಹೇಳಿಕೆಯನ್ನು ತಿರುಚಿದ್ದಾರೆ ಅಷ್ಟೇ. ಅಲ್ಲದೇ ಅವರ ಫೋನ್ ಕದ್ದಾಲಿಕೆ ಮಾಡಲು ನಾನು ಯಾರಿಗೂ ಹೇಳಿಲ್ಲ. ಬಿಜೆಪಿಗೆ ಹೇಳಿ ಮೋದಿ ಕೈಯಿಂದ ತನಿಖೆ ಮಾಡಿಸಲಿ. ನಾನು ಯಾರಿಗೂ ಕೂಡ ಫೋನ್ ಕದ್ದಾಲಿಕೆಗೆ ಅವಕಾಶ ನೀಡಿಲ್ಲ. ಸಿಎಂ ಮಗ ಗೆದ್ದರೆ ಮಾತ್ರ ಅಭಿವೃದ್ಧಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪಕ್ಷದ ಕಾರ್ಯಕರ್ತರ ನಿರ್ಧಾರದಿಂದ ನಿಖಿಲ್ ನಿಲ್ಲಿಸಿದ್ದೇವೆ. ನಾನು ಎಲ್ಲೂ ಕೂಡ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಅವರು ನಾಮಿನೇಷನ್ ಸಲ್ಲಿಸಿದ ಸಂದರ್ಭದಲ್ಲಿ ಒಂದು ಗಂಟೆ ಕರೆಂಟ್ ಕಟ್ ಆಗಿತ್ತು. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಟ್ರಾನ್ಸ್‍ಫರಮ್ ಕೆಟ್ಟಿತ್ತು ಎಂದು ಉತ್ತರ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

  • ಟೀಕೆಗಳಿಗೆ ‘ಯಜಮಾನ’ನ ಪ್ರತಿಕ್ರಿಯೆ

    ಟೀಕೆಗಳಿಗೆ ‘ಯಜಮಾನ’ನ ಪ್ರತಿಕ್ರಿಯೆ

    ಬೆಂಗಳೂರು: ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣೆ ಪ್ರಚಾರಕ್ಕೆ ಧಮುಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಕೆಲವು ಟೀಕೆಗಳು ವ್ಯಕ್ತವಾಗಿವೆ. ಈ ಎಲ್ಲ ಟೀಕೆಗಳಿಗೆ ನಗು ನಗುತ್ತಲೇ ಡಿ ಬಾಸ್ ಪ್ರತಿಕ್ರಿಯೆ ನೀಡಿದ್ದಾರೆ.

    ಮನೆಯ ಮೇಲೆ ಕಲ್ಲು ಹೊಡೆದಿದ್ದಕ್ಕೆ ಏನೆಂದು ಪ್ರತಿಕ್ರಿಯೆ ನೀಡಲಿ. ಸಿಎಂ ಕುಮಾರಸ್ವಾಮಿ ಅವರು ಏನೇ ಮಾತನಾಡಿದರು ನಾನು ಕೋಪ, ಬೇಜಾರು ಮಾಡಿಕೊಳ್ಳಲ್ಲ ಎಂದು ಈ ಹಿಂದೆ ಹೇಳಿದ್ದೇನೆ. ಮನೆಯಲ್ಲಿ ದರ್ಶನ್ ಎಂದು ಹೆಸರಿಟ್ಟರು. ಎಲ್ಲರಿಗೂ ಒಂದೊಂದು ಸ್ಟಾರ್ ಪಟ್ಟವನ್ನು ಕೊಟ್ಟಾಗ ನನಗೆ ಚಾಲೆಂಜಿಂಗ್ ಸ್ಟಾರ್ ಎಂದು ಕರೆದರು. ಇಂದು ನಾಡಿನ ಜನತೆಯೇ ನನ್ನನ್ನು ಡಿ ಬಾಸ್ ಎಂದು ಕರೆಯುತ್ತಿದ್ದಾರೆ. ಡಿ-ಬಾಸ್ ಎಂಬುವುದು ಅಭಿಮಾನಿಗಳು ಪ್ರೀತಿಯಿಂದ ನೀಡಿದ ಭಿಕ್ಷೆ. ಈ ಭಿಕ್ಷೆಯನ್ನು ಕೊನೆಯವರೆಗೂ ಇಟ್ಟುಕೊಳ್ಳುತ್ತೇನೆ ಎಂದು ಡಿ ಬಾಸ್ ಯಾರು ಎಂಬ ಸಿಎಂ ಪ್ರಶ್ನೆಗೆ ಉತ್ತರ ನೀಡಿದರು.

    ಚುನಾವಣೆಗೆ ಸ್ಫರ್ಧೆ ಮಾಡಿಲ್ಲ, ಕೇವಲ ಸುಮಲತಾರ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಏಪ್ರಿಲ್ 2ರಂದು ಮಂಡ್ಯಕ್ಕೆ ತೆರಳಿ ಸುಮಲತಾರ ಪರವಾಗಿ ಪ್ರಚಾರ ಮಾಡುತ್ತೇನೆ. ಈ ಮೊದಲು ಅಪ್ಪಾಜಿ ಪರ ಪ್ರಚಾರ ಮಾಡಿದಾಗ ಇಷ್ಟೊಂದು ಮಾತುಗಳು ಕೇಳಿರಲಿಲ್ಲ. ಇಂದು ಒಂದು ಕೈ ನಮ್ಮ ಮೇಲೆ ಇಲ್ಲ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರು.

    ಟ್ವಿಟ್ಟರ್‍ನಲ್ಲಿ ಮನವಿ:
    ಈ ಚುನಾವಣೆ ಸಮಯದಲ್ಲಿ ಆಪಾದನೆಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ನಾನು ಬೇಜಾರು, ಕೋಪ ಏನು ಮಾಡ್ಕೊಳಲ್ಲ ಅಂತ ಮೊದಲೇ ಹೇಳಿದ್ದೇನೆ. ಅದೇ ರೀತಿ ನನ್ನ ಪ್ರೀತಿಯ ಅಭಿಮಾನಿಗಳು ಸಹ ಏನೇ ಹೇಳಿದರೂ ಅದರ ವಿರುದ್ಧ ಪೋಸ್ಟ್ ಮಾಡುವುದಾಗಲಿ, ವಿಡಿಯೋಗಳಾಗಲಿ ಮಾಡುವ ಗೋಜಿಗೆ ಹೋಗಬೇಡಿ. ಅವೆಲ್ಲದಕ್ಕೂ ಕಿವಿ ಕೊಡದೆ ಶಾಂತಿ ಕಾಪಾಡಿಕೊಂಡು ಆರಾಮಾಗಿರಬೇಕಾಗಿ ನಿಮ್ಮ ನಲ್ಮೆಯ ದಾಸ ಕಳಕಳಿಯ ವಿನಂತಿ ಎಂದು ದರ್ಶನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

  • ಯಾವ ಜೋಡೆತ್ತು ಗೆಲ್ಲುತ್ತೆ ಅನ್ನೋದು ಗೊತ್ತಾಗುತ್ತೆ: ಸುಮಲತಾ ಅಂಬರೀಶ್

    ಯಾವ ಜೋಡೆತ್ತು ಗೆಲ್ಲುತ್ತೆ ಅನ್ನೋದು ಗೊತ್ತಾಗುತ್ತೆ: ಸುಮಲತಾ ಅಂಬರೀಶ್

    ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಯಾವ ಜೋಡುತ್ತೆಗಳು ಗೆಲ್ಲುತ್ತವೆ ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನನ್ನ ಜೋಡೆತ್ತುಗಳ ಮುಂದೆ ಮೈತ್ರಿಯ ಎತ್ತುಗಳು ಏನು ಅಲ್ಲ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಅಂಬರೀಶ್ ಅವರಿಗೆ ಪ್ರೀತಿ ನೀಡಿದ ಜನರನ್ನು ಬಿಟ್ಟು ನಾನು ಎಲ್ಲಿಯೂ ಹೋಗಲ್ಲ. ಸುಮಲತಾ ಒಂಟಿ ಹೆಣ್ಣಲ್ಲ, ಅಂಬರೀಶ್ ಮೇಲಿನ ಪ್ರೀತಿಯಿಂದ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕಿಲ್ಲ. ಕ್ಷೇತ್ರದ ರೈತ ಸಂಘಗಳು ನನಗೆ ಬೆಂಬಲವನ್ನು ನೀಡಿವೆ. ಚುನಾವಣೆ ಅಖಾಡದಲ್ಲಿ ಸುಮಲತಾ ಹೆಸರಿನ ನೂರು ಅಭ್ಯರ್ಥಿಗಳನ್ನು ಹಾಕಿಕೊಳ್ಳಲಿ. ಸುಮಲತಾ ಹೆಸರಿನ ಮೂವರ ನಾಮಪತ್ರ ಹಾಕಿಸಿರೋದು ರಾಜಕೀಯ ಅಲ್ಲ ಕುತಂತ್ರ. ಈ ಕುತಂತ್ರದಿಂದ ಗೆಲ್ಲಬಹುದು ಲೆಕ್ಕ ಹಾಕಿದ್ದರೆ ಅದು ಕೇವಲ ಭ್ರಮೆ. ನಿಮ್ಮ ಈ ಕುತಂತ್ರಗಳಿಗೆ ಮಂಡ್ಯದ ಜನರ ಉತ್ತರ ನೀಡುವ ಕಾಲ ಬಂದಿದೆ. ಅವಶ್ಯವಿದ್ದರೆ ನಿಮ್ಮ ಅಭ್ಯರ್ಥಿಯ ಹೆಸರನ್ನು ಸಮಲತಾ ಎಂದು ಬದಲಿಸಿಕೊಳ್ಳಲಿ. ಇಂತಹ ಬೆದರಿಕೆಗಳಿಗೆ ನಾವು ಹೆದರಲ್ಲ ಎಂದು ಹೇಳುವ ಮೂಲಕ ಸಿಎಂ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ಮಂಡ್ಯದವರನ್ನು ದಡ್ಡರನ್ನಾಗಿ ಮಾಡ್ಬೇಡಿ, ಮುದಿ ಎತ್ತುಗಳನ್ನು ಸಂತೆಗೆ ಕಳಿಸ್ತೀವಿ: ಸಿಎಂಗೆ ಟಾಂಗ್ ವಿಡಿಯೋ

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಬ್ಬರನ್ನೊಬ್ಬರು ಬೈದುಕೊಂಡು ಓಡಾಡುತ್ತಿದ್ದವರು ಇಂದು ಜೊತೆಯಾಗಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಯಾರು ಕಳ್ಳೆತ್ತು? ಯಾರು ಉಳುಮೆ ಮಾಡುವ ಎತ್ತು ಎಂಬುದನ್ನು ಮಂಡ್ಯದ ಜನರು ಕೆಲವೇ ದಿನಗಳಲ್ಲಿ ಉತ್ತರ ನೀಡಲಿದ್ದಾರೆ. ಈ ರೀತಿಯ ನಿಮ್ಮ ಹೇಳಿಕೆಯಿಂದ ಯಶ್, ದರ್ಶನ್ ಹೆದರಿಕೊಳ್ಳಲ್ಲ. ನಿಮ್ಮ ಮಾತುಗಳಿಂದ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವ ಸ್ಫೂರ್ತಿ ಬಂದಿದೆ. ಶೂಟಿಂಗ್ ಶೆಡ್ಯೂಲ್ ಮುಗಿದ ನಂತರ ಏಪ್ರಿಲ್ 1 ಅಥವಾ 2ರಿಂದ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ

    ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ, ಅಕ್ಕಿಹೆಬ್ಬಾಳು, ಆಲಂಬಾಡಿ ಕಾವಲ್ ಭಾಗದಲ್ಲಿ ಸುಮಲತಾ ಅಂಬರೀಶ್ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಈ ವೇಳೆ ಪುತ್ರ ಅಭಿಷೇಕ್ ಹಾಗೂ ಕೆಲ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಸುಮಲತಾರಿಗೆ ಸಾಥ್ ನೀಡಿದರು.