Tag: ಸುನೀಲ್ ಆಚಾರ್ಯ

  • ಸುನೀಲ್ ಆಚಾರ್ಯರ ಮೊದಲ ಕನಸಿನಂಥಾ ರಾಂಧವ!

    ಸುನೀಲ್ ಆಚಾರ್ಯರ ಮೊದಲ ಕನಸಿನಂಥಾ ರಾಂಧವ!

    ಬೆಂಗಳೂರು: ಈ ಕಲೆ, ಅದರ ಮೇಲಿನ ವ್ಯಾಮೋಹದ ಸೆಳೆತ ಸಮ್ಮೋಹಕವಾದದ್ದು. ಅದು ಎಲ್ಲೋ ಇದ್ದವರನ್ನೂ ಕೂಡಾ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮಾಯೆಯಂಥಾದ್ದು. ಅದಕ್ಕೆ ಚಿತ್ರರಂಗದಲ್ಲಿ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಬದುಕಿನ ಅನಿವಾರ್ಯತೆಗೆ ಸಿಕ್ಕು ಎಲ್ಲೋ ಕಳೆದು ಹೋದವರನ್ನು ಕೂಡಾ ಸಿನಿಮಾ ಮಾಯೆ ತನ್ನ ಕೇಂದ್ರಕ್ಕೆ ಹೇಗಾದರೂ ಸೆಳೆದುಕೊಂಡು ಬಿಡುತ್ತದೆ. ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಆಗಸ್ಟ್ 23ರಂದು ಬಿಡುಗಡೆಗೆ ರೆಡಿಯಾಗಿರುವ ರಾಂಧವ ಚಿತ್ರದ ನಿರ್ದೇಶಕ ಸುನೀಲ್ ಆಚಾರ್ಯ ಕೂಡಾ ಅದೇ ಸಾಲಿನಲ್ಲಿ ಸಾಗಿ ಬಂದವರು.

    ತಮ್ಮ ತಂದೆಯ ಬಟ್ಟೆ ಅಂಗಡಿ ಉದ್ಯಮವನ್ನು ನೋಡಿಕೊಳ್ಳುತ್ತಲೇ ಅದರಲ್ಲಿ ಕಳೆದು ಹೋಗುವಂತಿದ್ದ ಸುನೀಲ್ ಆಚಾರ್ಯರನ್ನು ಕೈ ಹಿಡಿದು ಕರೆತಂದಿರೋದು ಸಿನಿಮಾ ಎಂಬ ಮಾಯೆಯೇ. ಆಷ್ಟಕ್ಕೂ ಅವರನ್ನು ಆರಂಭಿಕವಾಗಿ ಸೆಳೆದುಕೊಂಡಿದ್ದು ಬರವಣಿಗೆಯ ಹುಚ್ಚು. ಅದರ ಸೆಳೆತಕ್ಕೆ ಬಿದ್ದ ಅವರು ಒಂದು ಕಾದಂಬರಿ ಬರೆಯಲು ಆರಂಭಿಸಿದ್ದರು. ಹಾಗೆ ಒಂದಿಡೀ ಕಾದಂಬರಿ ಬರೆದು ಮುಗಿಸಿದ್ದ ಸುನೀಲ್ ಅದನ್ನು ಗೆಳೆಯರಿಗೆ ತೋರಿಸಿದಾಗ ಇದನ್ನು ಸಿನಿಮಾ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಒಂದಷ್ಟು ಕಾಲ ಆಲೋಚಿಸಿದ ನಂತರ ಸುನೀಲ್ ಅದಕ್ಕಾಗಿ ತಯಾರಿ ಆರಂಭಿಸಿದ್ದರು.

    ಸಿನಿಮಾ ನೋಡೋ ಆಸಕ್ತಿಯ ಹೊರತಾಗಿ ಆ ಕ್ಷಣದಲ್ಲಿ ಸುನೀಲ್‍ಗೆ ಯಾವ ಅನುಭವವೂ ಇರಲಿಲ್ಲ. ಆದರೆ, ಒಂದೊಳ್ಳೆ ಸಿನಿಮಾ ಮಾಡಲು ಬೇಕಾದ ರೂಪುರೇಷೆಗಳು ರೆಡಿಯಿದ್ದವು. ತಿಂಗಳುಗಟ್ಟಲೆ ಸ್ಕ್ರಿಪ್ಟ್ ವರ್ಕ್ ಮಾಡಿದ ಸುನೀಲ್ ಅವರಿಗೆ ಮಡದಿ, ತಂಗಿಯೂ ಬೆಂಬಲಕ್ಕೆ ನಿಂತಿದ್ದರು. ಗೆಳೆಯರೂ ಕೂಡಾ ಒಂದಷ್ಟು ಸಲಹೆಗಳೊಂದಿಗೆ ಒಪ್ಪ ಓರಣ ಮಾಡಲು ಸಹಾಯ ಮಾಡಿದ್ದರು. ಇಂಥಾ ಶ್ರದ್ಧೆಯಿಂದಲೇ ರಾಂಧವ ಸುನೀಲ್ ಅವರ ಮೊದಲ ಚಿತ್ರವೆಂದರೆ ನಂಬಲಾಗದಷ್ಟು ಅಚ್ಚುಕಟ್ಟಾಗಿ ಮೂಡಿ ಬಂದಿದೆಯಂತೆ.

  • ಅವಹೇಳನ ಮಾಡಿದ ತಮಿಳನಿಗೆ ಸೆಡ್ಡು ಹೊಡೆದ ರಾಜ ರಾಂಧವ!

    ಅವಹೇಳನ ಮಾಡಿದ ತಮಿಳನಿಗೆ ಸೆಡ್ಡು ಹೊಡೆದ ರಾಜ ರಾಂಧವ!

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ನಟಿಸಿರೋ ರಾಂಧವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎರಡು ತಲೆಮಾರುಗಳ ರೋಚಕ ಕಥೆ ಹೊಂದಿರೋ ಈ ಚಿತ್ರದಲ್ಲಿ ಭುವನ್ ಮಹಾ ಪರಾಕ್ರಮಿ ರಾಜನಾಗಿಯೂ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಭಿನ್ನಾತಿಭಿನ್ನವಾದ ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರೋ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ನೀಡಲು ರಾಂಧವ ಚಿತ್ರ ತಂಡ ತಯಾರಾಗಿದೆ.

    ನಿರ್ದೇಶಕ ಸುನೀಲ್ ಆಚಾರ್ಯ ನಾಳೆ ಸಂಜೆ ಆರು ಘಂಟೆಗೆ ರಾಂಧವನ ಅಚ್ಚರಿದಾಯಕ ವೀಡಿಯೋ ಒಂದನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ತೀರ್ಮಾನಿಸಿದ್ದಾರೆ. ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಬರಡು ಭೂಮಿಗೆ ಹೋಲಿಸಿದ್ದ ತಮಿಳನೊಬ್ಬನಿಗೆ ರಾಜ ರಾಂಧವ ಮಾಡಿದ್ದೇನೆಂಬುದರ ವಿವರ ಆ ವೀಡಿಯೋದಲ್ಲಿ ಜಾಹೀರಾಗಲಿದೆಯಂತೆ. ಕನ್ನಡತನವನ್ನು ಅವಹೇಳನ ಮಾಡಿದ ತಮಿಳನಿಗೆ ರಾಜ ರಾಂಧವ ಮಾಡಿದ್ದೇನೆಂಬ ಕುತೂಹಲ ನಾಳೆ ಸಂಜೆ ಆರು ಘಂಟೆಗೆ ತಣಿಯಲಿದೆ.

    ಈ ವೀಡಿಯೋ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಮೂಲಕವೇ ರಾಂಧವನಾಗಿ ಭುವನ್ ಅಬ್ಬರಿಸಿರೋ ರೀತಿ ಮತ್ತು ಇಡೀ ಕಥೆಯ ಸ್ಪೆಷಾಲಿಟಿಯೂ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆಯಂತೆ. ಅಷ್ಟಕ್ಕೂ ಈ ಚಿತ್ರದ ಹಿಂದೆ ಅಖಂಡ ಎರಡು ವರ್ಷಗಳ ಕಾಲದ ಅಗಾಧ ಪರಿಶ್ರಮವಿದೆ. ಇದಕ್ಕಾಗಿ ನಿರ್ದೇಶಕ ಸುನೀಲ್ ಆಚಾರ್ಯ ಸೇರಿದಂತೆ ಇಡೀ ಚಿತ್ರ ತಂಡ ನಿರಂತರವಾಗಿ ಶ್ರಮ ವಹಿಸಿದೆ.

    ಇನ್ನು ಭುವನ್ ಅವರಂತೂ ಈ ಚಿತ್ರಕ್ಕಾಗಿ ಎರಡು ವರ್ಷಗಳನ್ನೂ ಪಣವಾಗಿಟ್ಟಿದ್ದಾರೆ. ಇದರಲ್ಲಿನ ಪಾತ್ರ ಪಳಗಿದ ನಟರಿಗೂ ಕಷ್ಟವಾಗುವಂಥಾದ್ದು. ಇಲ್ಲಿ ಅವರಿಗೆ ಒಂದಷ್ಟು ಶೇಡಿನ ಪಾತ್ರಗಳಿವೆ. ಅದನ್ನು ಭುವನ್ ಯಾವ ರೀತಿಯಲ್ಲಿ ನಿರ್ವಹಿಸಿದ್ದಾರೆಂಬುದಕ್ಕೆ ನಾಳೆ ಹೊರ ಬರೋ ವೀಡಿಯೋದಲ್ಲಿ ಸಾಕ್ಷಿಗಳು ಸಿಗಲಿವೆ.

    https://www.youtube.com/watch?v=eRpnWE0j_mQ