Tag: ಸುನಿಲ್ ಕುಮಾರ್ ದೇಸಾಯಿ

  • ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    – ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಉದ್ಘಾಟನೆ

    ಶಿವಮೊಗ್ಗ: ಶಿವಮೊಗ್ಗದ  ನಾಡಹಬ್ಬ ದಸರಾಗೆ (Shivamogga Dasara) ಚಾಲನೆ ಸಿಕ್ಕಿದೆ. ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವಕ್ಕೆ ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ (Sunil Kumar Desai) ಚಾಲನೆ ನೀಡಿದರು.

    ಉದ್ಘಾಟನೆ ಬಳಿಕ ಮಾತನಾಡಿದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ಹಬ್ಬದ ಆಚರಣೆಗಳ ಹಿಂದೆ ಉತ್ತಮ ಉದ್ದೇಶ ಇದೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ಇದೆ. ಕೆಟ್ಟದ್ದನ್ನು ನಾಶ ಮಾಡಬೇಕು ಎಂಬುದು ಈ ಆಚರಣೆಗಳ ಉದ್ದೇಶ. ರಾವಣ ಅತ್ಯಂತ ಪ್ರಚಂಡ, ಉತ್ತಮ ಆಡಳಿತಗಾರ, ಶಿವಭಕ್ತ. ಆದರೆ ಆತನಿಗೆ ಅಹಂಕಾರವಿತ್ತು. ಒಂಭತ್ತು ಒಳ್ಳೆಯ ಗುಣವಿದ್ದರೂ ಅಹಂಕಾರ ಇದ್ದರೆ ಪ್ರಯೋಜನವಿಲ್ಲ. ರಾಮನಿಂದ ರಾವಣನ ನಾಶವಾಗುತ್ತದೆ. ರಾವಣನ ದಹನ ಕೆಟ್ಟದ್ದರ ನಾಶದ ಸಂಕೇತವಾಗಿದೆ ಎಂದರು. ಇದನ್ನೂ ಓದಿ: ಸಿಎಂ ಕೇಸ್‌ನಲ್ಲಿ ಅವರೇ ಜಡ್ಜ್, ಅವರೇ ಲಾಯರ್- ಸಿ.ಟಿ ರವಿ

    ಪಾಲಿಕೆ ಆವರಣದಿಂದ ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದವರಗೆ ನಾಡ ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭ ಪಾಲಿಕೆಯ ಅಧಿಕಾರಿಗಳು, ಮಾಜಿ ಸದಸ್ಯರು ವಾದ್ಯಗಳಿಗೆ ನೃತ್ಯ ಮಾಡಿದರು. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

    ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇಗುಲದ ಮುಂಭಾಗ ಮೆರವಣಿಗೆ ಪೂರ್ಣಗೊಳ್ಳುತ್ತಿದ್ದಂತೆ ಚಾಮುಂಡೇಶ್ವರಿ ದೇವಿಗೆ ಮಂಗಳಾರತಿ ಬೆಳಗಲಾಯಿತು. ಸಂಸದ ರಾಘವೇಂದ್ರ, ಶಾಸಕ ಎಸ್‌ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಸೇರಿ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: Breaking | ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್

  • ದೇಸಾಯಿ ಕಟೌಟ್ ನೋಡಿ!

    ದೇಸಾಯಿ ಕಟೌಟ್ ನೋಡಿ!

    ಸಿನಿಮಾಗಳು ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಹೀರೋಗಳ ಕಟೌಟ್ ಕೆಲವೊಮ್ಮೆ ನಾಯಕಿಯ ಕಟೌಟ್ ನಿಲ್ಲಿಸಿ ಅದಕ್ಕೆ ಸ್ಟಾರ್ ಕಟ್ಟಿ, ಹಾರ ಹಾಕೋದು ವಾಡಿಕೆ. ಆದರೆ ಉದ್ಘರ್ಷ ಸಿನಿಮಾ ಬಿಡುಗಡೆಯಾಗಿರುವ ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರವಾದ ಸಂತೋಷ್ ಥಿಯೇಟರ್ ಮುಂದೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಕಟೌಟ್ ನಿಲ್ಲಿಸಿದ್ದಾರೆ.

    ಒಂದು ಕಡೆ ಯಜಮಾನ ದರ್ಶನ್, ಈ ಕಡೆ ಕೆಜಿಎಫ್ ಯಶ್ ನಡುವೆ ದೇಸಾಯಿಯವರ ಎತ್ತರದ ಕಟೌಟ್ ರಾರಾಜಿಸುತ್ತಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಇವತ್ತಿನ ಘಟಾನುಘಟಿ ನಟರೆಲ್ಲಾ ಪಾತ್ರವಹಿಸಿದ್ದಾರೆ. ಆದರೂ ಅವರ ಕೈ ಕಾಲುಗಳನ್ನು ಬಿಟ್ಟು ಪೋಸ್ಟರ್ ಗಳಲ್ಲಿ ಮುಖವನ್ನೂ ಹಾಕಿಲ್ಲ.

    ಇದು ದೇಸಾಯಿ ಸ್ಟೈಲ್. ಈಗ ಥೇಟರ್ ಮುಂದೆ ನಿರ್ದೇಶಕರ ಕಟೌಟ್ ನಿಂತಿದೆ. ನಿಜ ದೇಸಾಯಿ ಸ್ಟಾರ್ ಗಳನ್ನು ಹುಟ್ಟುಹಾಕಿದ ಡೈರೆಕ್ಟರ್. ಒಂದು ಕಾಲಕ್ಕೆ ಸ್ಟಾರ್ ನಿರ್ದೇಶಕ ಅನಿಸಿಕೊಂಡಿದ್ದವರು. ಉದ್ಘರ್ಷ ಮೂಲಕ ಮತ್ತೆ ಅವರು ಹಳೇ ಛಾರ್ಮಿಗೆ ಮರಳುವಂತಾಗಬೇಕಿದೆ. ಆಗ ಥಿಯೇಟರ್ ಮುಂದೆ ನಿಂತ ಕಟೌಟಿಗೂ ಬೆಲೆ ಬರುತ್ತದೆ. ಅಲ್ಲವೆ?

  • ಉದ್ಘರ್ಷ ಟ್ರೇಲರ್ ಗೆ ಶಿವಣ್ಣ ಫಿದಾ, ದೇಸಾಯಿ ಬಗ್ಗೆ ಸೆಂಚುರಿ ಸ್ಟಾರ್ ಹೇಳಿದ್ದೇನು?

    ಉದ್ಘರ್ಷ ಟ್ರೇಲರ್ ಗೆ ಶಿವಣ್ಣ ಫಿದಾ, ದೇಸಾಯಿ ಬಗ್ಗೆ ಸೆಂಚುರಿ ಸ್ಟಾರ್ ಹೇಳಿದ್ದೇನು?

    ಬೆಂಗಳೂರು: ಉದ್ಘರ್ಷ.. ಉದ್ಘರ್ಷ.. ಉದ್ಘರ್ಷ.. ಇನ್ನೇನು ಇದೇ ಶುಕ್ರುವಾರ ಬಿಡುಗಡೆಯಾಗಲಿರೋ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್ ಗಳು ಸಹ ಉದ್ಘರ್ಷ ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

    ಬಹಳ ದಿನಗಳ ನಂತರ ಮತ್ತೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ದೇಸಾಯಿ ನಿರ್ದೇಶಿಸುತ್ತಿದ್ದಾರೆ ಅನ್ನೋ ಸುದ್ದಿ ಹೊರ ಬಿದ್ದಾಗಿನಿಂದಲೇ ಉದ್ಘರ್ಷ ಚಿತ್ರದ ಬಗ್ಗೆ ಇನ್ನಿಲ್ಲದ ಕುತೂಹಲ ಮನೆ ಮಾಡಿತ್ತು. ಅಲ್ಲದೇ ರಕ್ತ ಸಿಕ್ತ ಹುಡುಗಿಯ ಕಾಲಿನ ಫಸ್ಟ್ ಲುಕ್ ಬಿಡುಗಡೆ ಮಾಡುವುದರ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ದೇಸಾಯಿ, ಉದ್ಘರ್ಷ ಚಿತ್ರದ ಟ್ರೈಲರ್ ಗೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಬಳಿ ಧ್ವನಿ ಕೊಡಿಸಿ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದರು. ನಂತರ ಆ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದು ಮತ್ತೊಂದು ಕಿಕ್ ಕೊಟ್ಟಿತ್ತು.

    ಈಗ ವಿಶೇಷ ಅಂದ್ರೆ ಟ್ರೇಲರ್ ನೋಡಿ ಫುಲ್ ಫಿದಾ ಆಗಿರೋ ಸೆಂಚುರಿ ಸ್ಟಾರ್ ಶಿವಣ್ಣ, ದೇಸಾಯಿ ಅವರ ಕೆಲಸವನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ, ದೇಸಾಯಿಯವರ ನಮ್ಮೂರ ಮಂದಾರ ಹೂವೆ ಹಾಗೂ ಪ್ರೇಮರಾಗ ಹಾಡು ಗೆಳತಿ ಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಂಡಿರೋ ಶಿವಣ್ಣ, ಉದ್ಘರ್ಷ ಮೂಲಕ ದೇಸಾಯಿ ಈಸ್ ಬ್ಯಾಕ್ ಅಂತಾ ಹೇಳಿದ್ದಾರೆ.

  • ದರ್ಶನ್ ಅಭಿಮಾನಿಯಂತೆ ಉದ್ಘರ್ಷ ಹೀರೋ ಅನೂಪ್!

    ದರ್ಶನ್ ಅಭಿಮಾನಿಯಂತೆ ಉದ್ಘರ್ಷ ಹೀರೋ ಅನೂಪ್!

    ಬೆಂಗಳೂರು: ವಿಭಿನ್ನ ಪೋಸ್ಟರ್ ಮೂಲಕವೇ ಚಂದನವನದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಉದ್ಘರ್ಷ ಸಿನಿಮಾ ಹೊಸ ಆಲೋಚನೆಗಳನ್ನು ಪ್ರೇಕ್ಷಕರಲ್ಲಿ ಹುಟ್ಟು ಹಾಕಿತ್ತು. ಈ ಕುತೂಹಲಗಳನ್ನು ಮತ್ತಷ್ಟು ಹೆಚ್ಚು ಮಾಡಿ ಮೊದಲ ಬಾರಿಗೆ ಚಿತ್ರದ ತಂಡ ಮಾಧ್ಯಮಗಳ ಮುಂದೇ ಬಂದಿತ್ತು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸುನಿಲ್ ದೇಸಾಯಿ ಅವರು, ಚಿತ್ರದ ಬಗ್ಗೆ ಈ ಸಂದರ್ಭದಲ್ಲಿ ಕಡಿಮೆ ಮಾತನಾಡುತ್ತೇನೆ. ಏಕೆಂದರೆ ಚಿತ್ರದ ನಾಯಕ ನಟ ಠಾಕೂರ್ ಅನೂಪ್ ಸಿಂಗ್ ಪರಿಚಯ ಮಾಡಬೇಕಿದೆ. ಅಲ್ಲದೇ ಚಿತ್ರಕ್ಕಾಗಿ ನಾನು ಅನೂಪ್ ಸಿಂಗ್ ಆಯ್ಕೆ ಮಾಡಿದ ಕುರಿತು ಹೇಳಬೇಕಿದೆ ಎಂದು ಮಾತು ಆರಂಭಿಸಿದರು.

    ಚಿತ್ರ ಕಥೆ ಸಿದ್ಧಗೊಂಡ ಬಳಿಕ ನಾಯಕನ ಹುಡುಕಾಟದಲ್ಲಿದ್ದೆ. ಆಕಸ್ಮಿಕವಾಗಿ ಠಾಕೂರ್ ಅನೂಪ್ ಸಿಂಗ್ ನಾನು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡೆವು. ಒಂದೇ ನೋಟದಲ್ಲಿ ನನ್ನ ಕಥೆಯ ನಾಯಕ ಅವರಲ್ಲಿ ಕಾಣಿಸಿದರು. ನನ್ನ ಸಿನಿಮಾಗೆ ನೀವು ನಾಯಕನಟರಾಗ ಬೇಕು ಎಂದು ಹೇಳುತ್ತಿದಂತೆ ಅನೂಪ್ ಅಚ್ಚರಿಗೊಳಗಾದರು. ಆದರೆ ಚಿತ್ರದ ಕಥೆ ಕೇಳಿದ ಮರುಕ್ಷಣದಲ್ಲಿ ಒಪ್ಪಿಕೊಂಡರು ಎಂದು ಚಿತ್ರ ನಾಯಕ ನಟನ ಹುಡುಕಾಟದ ಹಿಂದಿನ ಕುತೂಹಲ ಕಥೆ ಬಿಚ್ಚಿಟ್ಟರು.

    ಚಿತ್ರದ ಕಥೆಗೆ ಅಭಿನಯ ಮಾತ್ರವಲ್ಲದೇ ವಿಲನ್ ಲುಕ್ ಕೂಡ ಬೇಕಾಗಿದ್ದರಿಂದ ಅವರನ್ನೇ ಆಯ್ಕೆ ಮಾಡಲಾಯಿತು. ಚಿತ್ರದ ಕುರಿತು ಬಹಳ ಆತ್ಮವಿಶ್ವಾಸ ಇದ್ದು, ಸಿನಿ ರಸಿಕರು ನಮಗೇ ಬೆಂಬಲ ನೀಡುತ್ತಾರೆ. ಅನುಪ್ ಕೂಡ ನಾನು ಬಯಸಿದ್ದ ಅಂಶಗಳಿಗಿಂತ ಹೆಚ್ಚಿನದನ್ನು ಚಿತ್ರಕ್ಕೆ ನೀಡಿದ್ದಾರೆ. ಅವರ ಈ ಕೆಲಸ ಶೈಲಿ ಹಾಗೂ ಅವರಿಗೆ ಕೆಲಸ ಮಾಡಲು ಇರುವ ಹಠ ಎಲ್ಲರಿಗೂ ಇಷ್ಟವಾಗುತ್ತದೆ. ಚಿತ್ರೀಕರಣ ವೇಳೆ ಅವರು ಹಲವು ಬಾರಿ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳನ್ನು ನಡೆಸಿದ್ದಾರೆ. ಸಿನಿಮಾ ನೋಡಿದಾಗ ಅವರ ಶ್ರಮ ನಿಜವಾಗಿ ಅರಿವಾಗುತ್ತದೆ ಎಂದರು.

    ಇದೇ ವೇಳೆ ದರ್ಶನ್ ಬಗ್ಗೆ ಹಾಡಿ ಹೊಗಳಿದ ನಾಯಕ ಠಾಕೂರ್ ಅನೂಪ್ ಸಿಂಗ್, ನಾನು ದರ್ಶನ್ ಅವರ ದೊಡ್ಡ ಅಭಿಮಾನಿ. ಅವರ ಜೊತೆ ಯಜಮಾನ ಚಿತ್ರದಲ್ಲಿ ಅಭಿನಯಿಸಿದ್ದು ತುಂಬಾ ಖುಷಿ ತಂದಿದೆ. ಅವರು ಚಿತ್ರೀಕರಣಕ್ಕೆ ರಾಜನ ಹಾಗೆಯೇ ಬರುತ್ತಾರೆ, ರಾಜನ ಹಾಗೆಯೇ ಹೋಗುತ್ತಾರೆ. ಬಾಲಿವುಡ್‍ನ ಸಲ್ಮಾನ್ ಖಾನ್ ರೀತಿ, ಬಾದ್ ಷಾ ಅವರು. ನನ್ನ ಚಿತ್ರವನ್ನು ನೋಡಿ ಎಂದಿದ್ದಕ್ಕೆ, ತಮ್ಮ ಮೊಬೈಲ್ ನಂಬರ್ ಕೊಟ್ಟು ನಿನಗಾಗಿ ಬರುತ್ತೇನೆ ಎಂದು ಹೇಳಿದರು. ಅವರ ಸರಳ ವ್ಯಕ್ತಿತ್ವ ಕಂಡು ನನಗೆ ಹೆಮ್ಮೆಯಾಯಿತು ಎಂದು ಹೇಳಿದರು.

    ಉದ್ಘರ್ಷ ಚಿತ್ರ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ಅದ್ದರಿಂದಲೇ ನಾಲ್ಕು ಭಾಷೆಗಳಲ್ಲಿ ನಟಿಸಿರುವ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನೂಪ್ ಈಗಾಗಲೇ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಿತರಾಗಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಡೆಸಿದ್ದಾರೆ. ಕಬಾಲಿ ಚಿತ್ರದಲ್ಲಿ ರಜಿನಿಕಾಂತ್ ಪಕ್ಕ ಮಿಂಚಿದ್ದ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್ ಹಾಗೂ ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಪಾತ್ರದಲ್ಲಿ ನಟಿಸಿದ್ದ ಪ್ರಭಾಕರ್, ಶ್ರದ್ಧಾ ದಾಸ್ ಮುಂತಾದ ನಟರ ಬಹುದೊಡ್ಡ ಪಟ್ಟಿಯೇ ಈ ಚಿತ್ರದಲ್ಲಿ ಇದೆ.

    ಉಳಿದಂತೆ ಉದ್ಘರ್ಷ ಚಿತ್ರದಲ್ಲಿ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಮಂಜುನಾಥ್, ತಿರುಮಲೈ, ರಾಜೇಂದ್ರ ಕುಮಾರ್ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಸಂಜೋಯ್ ಚೌಧರಿ ಸಂಗೀತ, ವಿಷ್ಣು ವರ್ಧನ್ ಛಾಯಾಗ್ರಹಣ, ಕೆಂಪರಾಜು ಸಂಕಲನ ಹಾಗೂ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಸಾಹಸ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉದ್ಘರ್ಷ ಹೀರೋ ನಾನೇ ಅಂದಾಗ ಶಾಕ್ ಆಯ್ತು!: ಅನೂಪ್ ಸಿಂಗ್

    ಉದ್ಘರ್ಷ ಹೀರೋ ನಾನೇ ಅಂದಾಗ ಶಾಕ್ ಆಯ್ತು!: ಅನೂಪ್ ಸಿಂಗ್

    ಬೆಂಗಳೂರು: ಖ್ಯಾತ ಚಿತ್ರ ನಿರ್ದೇಶಕ ಸುನಿಲ್ ದೇಸಾಯಿ ಅವರ ಉದ್ಘರ್ಷ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ಯಾಂಡಲ್‍ವುಡ್ ನಾಯಕನಟರಾಗಿ ಎಂಟ್ರಿ ಪಡೆಯುತ್ತಿದ್ದಾರೆ ನಟ ಠಾಕೂರ್ ಅನೂಪ್ ಸಿಂಗ್. ಬೆಂಗಳೂರಿನಲ್ಲಿ ಚಿತ್ರ ತಂಡ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ, ಕನ್ನಡಗಿರ ಪ್ರೀತಿ ಮತ್ತು ಆಶೀರ್ವಾದ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮೂಲತಃ ಮರಾಠಿ ಚಿತ್ರೋದ್ಯಮದ ಅನೂಪ್ ಕನ್ನಡಕ್ಕೆ ಹೊಸ ಮುಖವೇನು ಅಲ್ಲ. ಅನೂಪ್ ಸಿನಿ ಜರ್ನಿಯ ಹಿಂದಿನ ಕೆಲ ವಿಶೇಷ ಅಂಶಗಳನ್ನು ಅವರೇ ಹಂಚಿಕೊಂಡರು. ಹಿಂದಿ ಖಾಸಗಿ ವಾಹಿನಿಯ `ಮಹಾಭಾರತ’ ಧಾರಾವಾಹಿ ಬಳಿಕ ನನ್ನ ಜೀವನವೇ ಬದಲಾಯ್ತು. ಆ ಧಾರಾವಾಹಿಯಿಂದಲೇ ಜನರು ಇಂದು ನನ್ನನ್ನು ಗುರುತಿಸುತ್ತಾರೆ. ಧಾರಾವಾಹಿಯಲ್ಲಿಯ ಪಾತ್ರ ನನ್ನಲ್ಲಿ ಹಲವು ಬದಲಾವಣೆಗಳನ್ನು ತಂದಿದೆ ಎಂದು ಸಿನಿ ಬದುಕಿನ ಆರಂಭದ ಕುರಿತು ವಿವರಿಸಿದರು.

    ಅನೂಪ್ ಎಲ್ಲರ ಗಮನ ಸೆಳೆಯುವುದು ಅವರ ಸಿಕ್ ಪ್ಯಾಕ್ ದೇಹದಿಂದ. ಸಿನಿಮಾಗಾಗಿಯೇ ದೇಹದ ಕಸರತ್ತು ಆರಂಭಿಸಿದ ಅವರು 2015 ಮಿಸ್ಟರ್ ಇಂಡಿಯಾ ಸ್ಥಾನ ಪಡೆದು ಕೊಂಡಿದ್ದಾರೆ. ಅಲ್ಲದೇ ಮಿಸ್ಟರ್ ಏಷ್ಯಾದಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದಿದ್ದಾರೆ. ಈಗಾಗಲೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು, ತಮಿಳಿನ ಸೂರ್ಯ ಮತ್ತು ತೆಲುಗು ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನನಗೆ ಪ್ರೇರಣೆಯಾಗಿದ್ದು. ಮುಂದೊಂದು ದಿನ ಹೀರೋ ಆದರೆ ಇವರಂತೆ ಆಗಬೇಕು ಅಂತಾ ಅನ್ನಿಸುತ್ತಿತ್ತು. ಆದರೆ ರಾಷ್ಟ್ರ ಪ್ರಶಸ್ತಿ ಪಡೆದ ಸುನಿಲ್ ಕುಮಾರ್ ದೇಸಾಯಿ ಅವರ ಚಿತ್ರದಲ್ಲಿ ನಟಿಸುತ್ತೇನೆ ಎಂದು ನಾನು ಯೋಚಿಸಿರಲಿಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ ಅಫರ್ ಬಂದಿದ್ದು ಶಾಕ್: ಹೈದರಾಬಾದ್ ನಲ್ಲಿದ್ದಾಗ ಸುನಿಲ್ ಕುಮಾರ್ ಬಂದು ಚಿತ್ರದ ಕಥೆ ಹೇಳಿದ್ರು. ಅದ್ಭುತವಾದ ಸ್ಟೋರಿ ಕೇಳಿದ ಮೇಲೆ ಚಿತ್ರ ಹೀರೋ ಯಾರು ಅಂತಾ ಕೇಳಿದಾಗ ಅವರು ನೀವೇ ಅಂತಾ ಹೇಳಿದಾಗ ನನಗೆ ಶಾಕ್ ಆಗಿತ್ತು. ವಿಲನ್ ಪಾತ್ರಗಳಿಗೆ ನಾನು ಸೂಟ್ ಆಗ್ತೇನೆ ಅಂತಾ ಹೇಳುತ್ತಾರೆ. ಆದ್ರೆ ಸುನಿಲ್ ಸರ್ ನನ್ನಲ್ಲಿ ಒಬ್ಬ ಹೀರೋನನ್ನು ನೋಡಿದ್ದಾರೆ. ವಿಶೇಷ ಎಂದರೆ ಹೀರೋ ಅಂದ ಮೇಲೆ ನಾನೇನಾದರು ಲುಕ್, ಹೇರ್ ಸ್ಟೈಲ್ ಚೇಂಜ್ ಮಾಡ್ಬೇಕಾ ಅಂತಾ ಭಯದಿಂದ ಕೇಳಿದೆ. ನನ್ನ ಸಿನಿಮಾಗೆ ನಿನ್ನಂತಹ ವ್ಯಕ್ತಿಯೇ ಬೇಕೆಂದು ಹೇಳಿದರು. ಅವರಿಗೆ ನನ್ನ ಧನ್ಯವಾದ ಎಂದರು.

    ಇದುವರೆಗೂ ನಾನು ಮಾಡಿದ ಪಾತ್ರಗಳಿಗಿಂತೂ ಇದು ತುಂಬಾ ವಿಭಿನ್ನವಾಗಿದೆ. ಕೊಡಗು ಜಿಲ್ಲೆಯಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಅತಿವೃಷ್ಠಿಯಿಂದಾಗಿ ಕೊಡಗಿನ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಕೊಡಗಿನಲ್ಲಿ ಕೆಲವು ಸೀನ್ ಗಳ ಮರು ಚಿತ್ರೀಕರಣ ನಡೆಯಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಚಿತ್ರತಂಡದೊಂದಿಗೆ ಶೂಟಿಂಗ್ ಮಾಡುವಾಗ ಎಲ್ಲರೂ ಸಹಾಯ ಮಾಡಿದ್ದಾರೆ. ನನ್ನ ಪಾತ್ರಕ್ಕೆ ಸಾಧ್ಯವಾದಷ್ಟು ನ್ಯಾಯ ಒದಗಿಸಿದ್ದೇನೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮತ್ತೆ ದೇಸಾಯಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಹರ್ಷಿಕಾ ಪೂಣಚ್ಚ!

    ಮತ್ತೆ ದೇಸಾಯಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಹರ್ಷಿಕಾ ಪೂಣಚ್ಚ!

    ಬೆಂಗಳೂರು: ವರ್ಷಾಂತರಗಳ ಹಿಂದೆ ತೆರೆ ಕಂಡಿದ್ದ ರೇ ಚಿತ್ರದ ನಂತರ ಖ್ಯಾತ ನಿರ್ದೇಶಕರಾದ ಸುನಿಲ್ ಕುಮಾರ್ ದೇಸಾಯಿ ಸ್ವಲ್ಪ ವಿರಾಮ ತೆಗೆದುಕೊಂಡಂತಿದ್ದರು. ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಹರ್ಷಿಕಾ ಪೂಣಚ್ಚ ಕೂಡಾ ಹಾಗೆಯೇ ಕಣ್ಮರೆಯಾದಂತಿದ್ದರು. ಆದರೀಗ ಹರ್ಷಿಕಾ ಸುನಿಲ್ ಕುಮಾರ್ ದೇಸಾಯಿ ಅವರ ಚಿತ್ರದ ಮೂಲಕವೇ ಮತ್ತೆ ಮರಳಿದ್ದಾರೆ.

    ಕನ್ನಡ ಚಿತ್ರ ರಂಗದ ಪಾಲಿಗೆ ಮೈಲಿಗಲ್ಲಿನಂಥಾ ಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕವೇ ಹೆಸರಾಗಿರುವವರು ಸುನಿಲ್ ಕುಮಾರ್ ದೇಸಾಯಿ. ಅವರು ದಶಕಗಳ ಹಿಂದೆ ನಿರ್ದೇಶನ ಮಾಡಿದ್ದ ಉತ್ಕರ್ಷ ಚಿತ್ರದ ಹೆಸರಿನಲ್ಲಿಯೇ ಈಗ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದರಲ್ಲಿನ ಮುಖ್ಯ ಪಾತ್ರದಲ್ಲಿ ಹರ್ಷಿಕಾ ನಟಿಸುತ್ತಿದ್ದಾರೆ.

    ವರ್ಷದ ಹಿಂದೆ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿದ್ದ ರೇ ಚಿತ್ರ ಒಂದಷ್ಟು ಸದ್ದು ಮಾಡಿತ್ತಲ್ಲಾ? ಆ ಚಿತ್ರದಲ್ಲಿ ಹರ್ಷಿಕಾ ಕೂಡಾ ನಟಿಸಿದ್ದರು. ಈಗ ಮತ್ತೆ ಒಂದು ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಉತ್ಕರ್ಷ ಚಿತ್ರದಲ್ಲಿಯೂ ಹರ್ಷಿಕಾ ನಟಿಸಿದ್ದಾರಂತೆ. ಸದ್ದಿಲ್ಲದೇ ಸುನಿಲ್ ಕುಮಾರ್ ದೇಸಾಯಿ ಅವರು ಮೈಸೂರು ಸುತ್ತಮುತ್ತಲ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣವನ್ನೂ ನಡೆಸಿದ್ದಾರಂತೆ. ಇದರಲ್ಲಿ ಹರ್ಷಿಕಾ ಪಾತ್ರವೇನೆಂಬುದು ನಿಗೂಢವಾಗಿದೆಯಾದರೂ ಈ ಮೂಲಕವೇ ತನಗೆ ಬ್ರೇಕ್ ಸಿಗಲಿದೆ ಎಂಬ ನಿರೀಕ್ಷೆ ಹರ್ಷಿಕಾಗಿದೆ.