Tag: ಸುತ್ತೂರು ಶ್ರೀಗಳು

  • ಆದೇಶ ಪಾಲನೆ ನಮ್ಮ ದೌರ್ಬಲ್ಯ ಅಲ್ಲ: ಸುತ್ತೂರು ಶ್ರೀ

    ಆದೇಶ ಪಾಲನೆ ನಮ್ಮ ದೌರ್ಬಲ್ಯ ಅಲ್ಲ: ಸುತ್ತೂರು ಶ್ರೀ

    ಮೈಸೂರು: ಕಾವೇರಿ ನೀರಿನ (Cauvery Water) ವಿಚಾರದಲ್ಲಿ ಕೊನೆಗೂ ಮೌನ ಮುರಿದ ಸುತ್ತೂರು ಶ್ರೀಗಳು (Suttur Shree) ಪತ್ರಿಕಾ ಪ್ರಕಟಣೆ ಮೂಲಕ ಕಾವೇರಿ ವಿಚಾರದಲ್ಲಿ ತಮ್ಮ ಧ್ವನಿ ಎತ್ತಿದ್ದಾರೆ.

    ಪತ್ರದ ವಿವರ: ಕಾವೇರಿ ನೀರಿನ ಸಮಸ್ಯೆ ಮತ್ತೊಮ್ಮೆ ಉಲ್ಬಣಿಸಿದೆ. ಪ್ರತಿವರ್ಷವೂ ಈ ಸಮಸ್ಯೆ ಉಂಟಾಗುತ್ತಲೇ ಇದೆ. ಶತಮಾನಗಳಿಂದ ಇದೊಂದು ಜ್ವಲಂತ ಸಮಸ್ಯೆಯಾಗಿದೆ. ಪ್ರಾರಂಭದ ದಿನಗಳಿಂದಲೂ ತಮಿಳುನಾಡು ತನಗೆ ಅಗತ್ಯವಾದುದಕ್ಕಿಂತ ಹೆಚ್ಚಿನ ನೀರನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಲೇ ಇದೆ. ಕರ್ನಾಟಕದ ಕಾವೇರಿ ನದಿ ಪಾತ್ರದ ರೈತರು ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ.

    ಮೈಸೂರು- ಬೆಂಗಳೂರು ಇತರೆಡೆಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ. ಇದಕ್ಕೆ ಅಂತಿಮ ಪರಿಹಾರ ಯಾವಾಗ ಎಂಬುದೇ ಪ್ರಶ್ನಾರ್ಥಕವಾಗಿದೆ. ಕರ್ನಾಟಕ ಸರ್ಕಾರವು ಎಲ್ಲ ಸಂದರ್ಭಗಳಲ್ಲಿಯೂ ನೆರೆರಾಜ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಲೇ ಬಂದಿದೆ. ತನಗೆ ಎಷ್ಟೇ ತೊಂದರೆಗಳಾದರು ನ್ಯಾಯಾಧೀಕರಣ ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಜನಾಭಿಪ್ರಾಯದ ಕಡು ವಿರೋಧದ ನಡುವೆಯೂ ಗೌರವಿಸಿ ಪಾಲಿಸುತ್ತ ಬಂದಿದೆ. ಇದನ್ನು ತಮಿಳುನಾಡಾಗಲಿ ಅಥವಾ ಸಂಬಂಧಪಟ್ಟವರು ಯಾರೇ ಆಗಲಿ ದೌರ್ಬಲ್ಯವೆಂದು ಭಾವಿಸಬಾರದು.

    ಈ ಸಮಸ್ಯೆಗೆ ಅಂತಿಮ ಪರಿಹಾರದ ಅಗತ್ಯವಿದೆ. ಮಳೆಯನ್ನು ಆಧರಿಸಿ ನೀರಿನ ಸಂಗ್ರಹದ ಆಧಾರದ ಮೇಲೆ ನೀರು ಹಂಚಿಕೆಯ ಬಗೆಗೆ ಪ್ರತಿವರ್ಷವೂ ಕ್ರಮ ತೆಗೆದುಕೊಳ್ಳಬೇಕಾದುದು ಅಗತ್ಯ. ಪ್ರತಿವರ್ಷ ಆಯಾ ಕಾಲಕ್ಕೆ ಸರಿಯಾಗಿ ಮಳೆಯಾದರೆ ಈ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಅನಾವೃಷ್ಟಿಯಾದಾಗಲೆಲ್ಲ ಈ ಸಮಸ್ಯೆ ಸಹಜವಾಗಿ ಉಂಟಾಗುತ್ತಲೇ ಇರುತ್ತದೆ. ಇದನ್ನೂ ಓದಿ: ನಡ್ಡಾ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‍ನಲ್ಲಿ ಅಗ್ನಿ ದುರಂತ – ಪವಾಡದಂತೆ ಸುರಿದ ಮಳೆಯಿಂದ ತಪ್ಪಿದ ಅನಾಹುತ

    ಇದೀಗ ಉಲ್ಬಣಿಸಿರುವ ಸಮಸ್ಯೆಗೆ ಭಾರತ ಸರ್ಕಾರ, ಸರ್ವೋಚ್ಚ ನ್ಯಾಯಾಲಯ ಮತ್ತು ನ್ಯಾಯಾಧೀಕರಣಗಳು ಸಮಾಲೋಚಿಸಿ ಕರ್ನಾಟಕ-ತಮಿಳುನಾಡು ಹೊರತಾದ ಹೊರ ರಾಜ್ಯಗಳ ನೀರಾವರಿ ತಜ್ಞರ ಸಮಿತಿ ರಚಿಸಿ, ನೀರಿನ ಸಂಗ್ರಹಣೆಯ ವಾಸ್ತವಾಂಶವನ್ನು ಅಧ್ಯಯನ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

    ಕರ್ನಾಟಕದ ಜನರ ಕುಡಿಯುವ ನೀರಿಗೆ, ರೈತರ ಬೆಳೆಗಳಿಗೆ ಹಾಗೂ ಜಾನುವಾರುಗಳಿಗೆ ಅಗತ್ಯವಾಗುವ ನೀರನ್ನು ಬಳಸಿಕೊಂಡು ನಂತರ ಹೆಚ್ಚಿನ ನೀರನ್ನು ತಮಿಳುನಾಡಿಗೂ ಅನುಕೂಲವಾಗುವಂತೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರೆಲ್ಲರು ಮುಂದಾಗಬೇಕೆಂದು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ – ಸುತ್ತೂರು ಶ್ರೀಗಳ, ಮೋದಿ ಫೋಟೋ ಬಳಕೆ

    ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ – ಸುತ್ತೂರು ಶ್ರೀಗಳ, ಮೋದಿ ಫೋಟೋ ಬಳಕೆ

    ಮೈಸೂರು: ಊಟಿ ಮುಖ್ಯ ರಸ್ತೆಯಲ್ಲಿನ ವಿವಾದಿತ ಬಸ್ ನಿಲ್ದಾಣಕ್ಕೆ ರಾತ್ರೋರಾತ್ರಿ ನಾಮಫಲಕ ಅಳವಡಿಕೆಯಾಗಿದೆ.

    ಮೈಸೂರಿನ (Mysuru) ಊಟಿ ಮುಖ್ಯ ರಸ್ತೆಯಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಈ ಬಸ್ ನಿಲ್ದಾಣಕ್ಕೆ ರಾತ್ರೋ, ರಾತ್ರಿ ಜೆಎಸ್‍ಎಸ್ (JSS) ಕಾಲೇಜ್ ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಸಲಾಗಿದೆ. ಅಲ್ಲದೇ ಫಲಕದ ಒಂದು ಬದಿಯಲ್ಲಿ ಸುತ್ತೂರು ಆದಿ ಜಗದ್ಗುರುಗಳ ಹಾಗೂ ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿಗಳ ಫೋಟೋ ಹಾಕಲಾಗಿದ್ದು, ಮತ್ತೊಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (BasavrajBommai) ಫೋಟೋವನ್ನು ಹಾಕಲಾಗಿದೆ.

    ಬಸ್ ನಿಲ್ದಾಣ ತೆರವಿಗೆ ಸಂಸದ ಪ್ರತಾಪ್ ಸಿಂಹ  (Pratap Simha) ಕೊಟ್ಟ ಡೆಡ್ ಲೈನ್ ಇವತ್ತು ಮುಕ್ತಾಯವಾಗುವ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಈ ಬದಲಾವಣೆ ನಡೆದಿದೆ. ಇದನ್ನೂ ಓದಿ: ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ: ಪ್ರತಾಪ್ ಸಿಂಹ

    ಸೋಮವಾರ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದ ಪ್ರತಾಪ್ ಸಿಂಹ ಅವರು, ಮೈಸೂರಿನ ಊಟಿ ರಸ್ತೆಯ ಬಸ್ ನಿಲ್ದಾಣದ ಮೇಲೆ ಗುಂಬಜ್‍ಗಳು ಇರುವುದನ್ನು ಗಮನಿಸಿದ್ದೇನೆ. ಮಧ್ಯದಲ್ಲಿ ದೊಡ್ಡ ಗುಂಬಜ್ ಅಕ್ಕ ಪಕ್ಕ ಚಿಕ್ಕ ಗುಂಬಜ್‍ಗಳಿದ್ದರೆ ಅದು ಮಸೀದಿನೇ. ಕೆಆರ್ ಐಡಿಎಲ್ ಇಂಜಿನಿಯರ್‌ಗಳಿಗೆ ಹೇಳಿದ್ದೇನೆ. ಮೂರು, ನಾಲ್ಕು ದಿನ ಟೈಮ್ ಕೊಟ್ಟಿದ್ದೇನೆ. ಇಲ್ಲವಾದರೆ ಜೆಸಿಬಿ ತಂದು ನಾನೇ ಒಡೆದು ಹಾಕುತ್ತೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಪಾರಂಪರಿಕವಾಗಿ ಗುಂಬಜ್ ನಿರ್ಮಾಣ – ತಜ್ಞರನ್ನು ಕಳಿಸಲು ಸರ್ಕಾರಕ್ಕೆ ರಾಮದಾಸ್ ಪತ್ರ

    Live Tv
    [brid partner=56869869 player=32851 video=960834 autoplay=true]

  • ಮೈಸೂರು ಡಿಸಿ ವರ್ಸಸ್ ಪಾಲಿಕೆ ಆಯುಕ್ತೆ – ಸುತ್ತೂರು ಶ್ರೀಗಳ ಮನವೊಲಿಕೆ ಯಶಸ್ವಿ!?

    ಮೈಸೂರು ಡಿಸಿ ವರ್ಸಸ್ ಪಾಲಿಕೆ ಆಯುಕ್ತೆ – ಸುತ್ತೂರು ಶ್ರೀಗಳ ಮನವೊಲಿಕೆ ಯಶಸ್ವಿ!?

    ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದು ಗುರುವಾರ ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸಂಚಲನ ಸೃಷ್ಟಿಸಿದ್ದರು. ರಾಜೀನಾಮೆ ಘೋಷಣೆಯನ್ನು ಮಾಡಿದ್ದ ಆಯುಕ್ತೆ ಸರ್ಕಾರಿ ವಾಹನ ಬಿಟ್ಟು ಅಜ್ಞಾತ ಸ್ಥಳಕ್ಕೆ ತೆರಳಿದ್ದರು, ಶುಕ್ರವಾರ ಬೆಳಗ್ಗೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲೂ ಭಾಗಿಯಾಗಿರಲಿಲ್ಲ. ಆದರೆ ಮಧ್ಯಾಹ್ನದ ವೇಳೆಗೆ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡರು.

    ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳು, ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ತನ್ವೀರ್ ಸೇಠ್ ಸಮ್ಮುಖದಲ್ಲಿ ಶಿಲ್ಪನಾಗ್‍ರನ್ನು ಕೂರಿಸಿಕೊಂಡು ಪ್ರತ್ಯೇಕ ಸಭೆ ನಡೆಸಿದರು. ಏನಮ್ಮ ಸಮಸ್ಯೆ ಎಂದು ಶ್ರೀಗಳು ಕೇಳಿದಾಗ, ಇಡೀ ವೃತ್ತಾಂತವನ್ನು ಶಿಲ್ಪಾ ನಾಗ್ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ರೋಹಿಣಿ ಸಿಂಧೂರಿ ವಿನಾ ಕಾರಣ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ದಿನಕ್ಕೊಂದು ರಿಪೋರ್ಟ್ ಕೇಳುತ್ತಾರೆ. ಅಧಿಕಾರಿಗಳಲ್ಲಿ ಭಯ ಮೂಡಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

    ಕೋವಿಡ್ ನಿಯಂತ್ರಣ ವಿಚಾರದಲ್ಲಿ ಜಿಲ್ಲಾಡಳಿತದಲ್ಲಿ ಸಾಕಷ್ಟು ಲೋಪ ಇತ್ತು. ಸಿಎಸ್‍ಆರ್ ಫಂಡ್ ಬಗ್ಗೆ ಯಾರು ಜವಾಬ್ದಾರಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ನಾನೇ ಇದರ ಜವಾಬ್ದಾರಿ ತೆಗೆದುಕೊಂಡೆ ಅಷ್ಟೇ. ನನಗೆ ಈಗೋ ಇಲ್ಲ, ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ ಆಗಿತ್ತು. ಯಾರಿಗೂ ಈಗೋ ಇಷ್ಟು ದೊಡ್ಡದಾಗಿ ಇರಬಾರದು. ಎಲ್ಲವನ್ನು ಎಲ್ಲರನ್ನು ಸಮನಾಗಿ ನೋಡಬೇಕು. ಆದರೆ ಒಬ್ಬ ಅಧಿಕಾರಿಯ ಅಹಂನಿಂದ ಇಷ್ಟೆಲ್ಲ ಆಗ್ತಿದೆ. ರಾಜೀನಾಮೆ ನನ್ನ ದುಡುಕಿನ ನಿರ್ಧಾರ ಅಲ್ಲ ಎಂದು ಶಿಲ್ಪಾ ನಾಗ್ ಸ್ಪಷ್ಟನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಶಿಲ್ಪಾ ನಾಗ್ ರಾಜೀನಾಮೆ ಬೆನ್ನಲ್ಲೇ ಹೊಸ ಟೆನ್ಶನ್ -ಕಠಿಣ ನಿರ್ಧಾರಕ್ಕೆ ಬಂದ್ರಾ ಜಿಲ್ಲಾ ಉಸ್ತುವಾರಿ ಸಚಿವ?

    ರಾಜೀನಾಮೆ ವಾಪಸ್ ಪಡೆಯಿರಿ, ನೀವು ದುಡುಕಬಾರದು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಮೊದಲು ನೀವು ನಿಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಾಸ್ ಪಡೆಯಿರಿ. ನಿಮ್ಮ ಸೇವೆ ಮೈಸೂರಿಗೆ, ರಾಜ್ಯಕ್ಕೆ ಬೇಕಿದೆ ಎಂದು ಸುತ್ತೂರು ಶ್ರೀಗಳು ಶಿಲ್ಪಾ ನಾಗ್ ಅವರಿಗೆ ಹಿತವಚನ ನೀಡಿದ್ದಾರೆ ಎನ್ನಲಾಗಿದೆ. ಸುತ್ತೂರು ಸ್ವಾಮೀಜಿಗಳ ಈ ಮಾತಿಗೆ ಧ್ವನಿಗೂಡಿಸಿದ ಸಚಿವ ಎಸ್.ಟಿ. ಸೋಮಶೇಖರ್, ನಾವು ರಾಜೀನಾಮೆ ಅಂಗೀಕಾರಕ್ಕೆ ಬಿಡಲ್ಲ. ನಿಮ್ಮ ಮನಸ್ಸಿನ ನೋವು ನಮಗೆ ಅರ್ಥವಾಗಿದೆ. ನೀವು ಸ್ವಾಮೀಜಿ ಅವರು ಹೇಳಿದಂತೆ ರಾಜೀನಾಮೆ ವಾಪಾಸ್ ಪಡೆದು ಕೆಲಸಕ್ಕೆ ಹಾಜರಾಗಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಧಿಕಾರಿಗಳ ಮಧ್ಯೆ ಸಂಘರ್ಷ – ಎಲ್ಲವನ್ನೂ ಚಾಮುಂಡಿ ತಾಯಿ ನೋಡುತ್ತಿದ್ದಾಳೆ ಎಂದ ಎಸ್‍ಟಿಎಸ್

    ಎಲ್ಲರ ಮಾತು ಕೇಳಿದ ಬಳಿಕ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಸ್ವಾಮೀಜಿಗಳ ಆದೇಶ ಮೀರುವಷ್ಟು ದೊಡ್ಡವಳಲ್ಲ ನಾನು. ಆದರೆ ನನಗೆ ಮಾನಸಿಕವಾಗಿ ತುಂಬಾ ನೋವಾಗಿದೆ. ಬಹಳ ನೊಂದು ನೊಂದು ಈ ತೀರ್ಮಾನಕ್ಕೆ ಬಂದಿದ್ದೇನೆ. ದಿಢೀರನೆ ತೀರ್ಮಾನ ಬದಲಾಯಿಸುವ ಸ್ಥಿತಿಯಲ್ಲಿ ಇಲ್ಲ. ನನಗೆ ಸ್ವಲ್ಪ ಸಮಯ ಕೊಡಿ. ಮನಸ್ಸು ತಿಳಿಯಾದ ಮೇಲೆ ನಿರ್ಧಾರ ಮರುಪರಿಶೀಲಿಸುವ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: 12 ಕೋಟಿ ಸಿಎಸ್‍ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ

    ರಾಜೀನಾಮೆ ವಾಪಾಸ್ ಪಡೆಯುವ ವಿಚಾರದಲ್ಲಿ ಶಿಲ್ಪನಾಗ್ ಒಂದು ಹೆಜ್ಜೆ ಮುಂದೆ ಬಂದಿರುವುದು ಸ್ಪಷ್ಟ. ಸ್ವಾಮೀಜಿಗಳ ಮಾತು, ಸಚಿವರು ಮತ್ತು ಹಿರಿಯ ಶಾಸಕರ ಮಾತಿಗೆ ಶಿಲ್ಪನಾಗ್ ಬೆಲೆ ಕೊಟ್ಟು ರಾಜೀನಾಮೆ ವಾಪಾಸ್ ಪಡೆಯುವ ಬಗ್ಗೆ ಯೋಚನೆ ಆರಂಭಿಸಿದ್ದಾರೆ. ಈ ಮಟ್ಟಿಗೆ ಈ ಸಭೆ ಫಲ ಕೊಟ್ಟಂತೆ ಆಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

  • ಕಾರ್ಡ್ ಇಲ್ಲದ ಮಂದಿಗೂ ಪಡಿತರ ಕಿಟ್ – ಯಾವುದೇ ತರಕಾರಿ ತಗೆದುಕೊಂಡ್ರು ಕೆಜಿಗೆ 10 ರೂ. ಮಾತ್ರ

    ಕಾರ್ಡ್ ಇಲ್ಲದ ಮಂದಿಗೂ ಪಡಿತರ ಕಿಟ್ – ಯಾವುದೇ ತರಕಾರಿ ತಗೆದುಕೊಂಡ್ರು ಕೆಜಿಗೆ 10 ರೂ. ಮಾತ್ರ

    ಮೈಸೂರು: ಪಡಿತರ ಕಾರ್ಡ್ ಇರೋರಿಗೆ ಪಡಿತರ ಕೊಡ್ತಾರೆ ಆದರೆ ಕಾರ್ಡ್ ಇಲ್ಲದೆ ಇರೋರ ಗತಿ ಏನೂ ಎಂದು ಬಹಳಷ್ಟು ಜನ ಪ್ರಶ್ನಿಸಿದ್ದರು. ಈಗ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆ ಪ್ರಶ್ನೆಗೆ ಸ್ಥಳೀಯ ಶಾಸಕ ಜಿ.ಟಿ ದೇವೇಗೌಡ ಉತ್ತರ ನೀಡಿದ್ದು, ಡಿಸಿಸಿ ಬ್ಯಾಂಕ್ ಜೊತೆಗೂಡಿ ಪಡಿತರ ಕಾರ್ಡ್ ಇಲ್ಲದವರ ನೆರವಿಗೆ ಧಾವಿಸಿದ್ದಾರೆ.

    ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಟ್ಟು 5 ಸಾವಿರ ಜನರ ಬಳಿ ಯಾವುದೇ ಪಡಿತರ ಕಾರ್ಡ್ ಇಲ್ಲ. ಹೀಗಾಗಿ ಇವರಿಗೆ 10 ಕೆಜಿ ಅಕ್ಕಿ, 1 ಕೆಜಿ ಗೋಧಿ ಹಿಟ್ಟು, 1 ಕೆಜಿ ಉಪ್ಪು, 1 ಕೆಜಿ ಬೇಳೆ ಹಾಗೂ 1 ಲೀಟರ್ ಅಡುಗೆ ಎಣ್ಣೆಯನ್ನು ತಲುಪಿಸುವ ಕಾರ್ಯ ಶುರುವಾಗಿದೆ.

    10 ರೂ.ಗೆ 1 ಕೆಜಿ ತರಕಾರಿ, 20 ರೂ.ಗೆ ಅಕ್ಕಿ :
    ಮೈಸೂರಿನಲ್ಲಿ ಎಸ್‍ಎಂಪಿ ಫೌಂಡೇಶನ್ ಜನರಿಗೆ ಕಡಿಮೆ ಬೆಲೆಗೆ ತರಕಾರಿ ಹಾಗೂ ಅಕ್ಕಿಯನ್ನು ನೀಡುತ್ತಿದೆ. ಯಾವುದೇ ತರಕಾರಿ ಖರೀದಿ ಮಾಡಿ ಕೆಜಿಗೆ 10 ರೂಪಾಯಿ, ಗುಣಮಟ್ಟದ ಅಕ್ಕಿ ಕೆಜಿಗೆ 20 ರೂಪಾಯಿಯಂತೆ ಮಾರಾಟ ಮಾಡುತ್ತಿದೆ. ಅಲ್ಲದೆ ಜನರ ಮನೆ ಬಾಗಿಲಿಗೆ ಇವುಗಳನ್ನು ಸರಬರಾಜು ಮಾಡುತ್ತಿದೆ. ಲಾಕ್‍ಡೌನ್ ಮುಗಿಯೋವರೆಗೆ ಈ ರೀತಿ ಮನೆ ಮನೆಗೆ ಕಡಮೆ ದರದಲ್ಲಿ ತರಕಾರಿ ಹಾಗೂ ಅಕ್ಕಿ ತಲುಪಿಸೋ ಕಾರ್ಯ ನಡೆಸಲಾಗುತ್ತದೆ ಎಂದು ಎಸ್‍ಎಂಪಿ ಫೌಂಡೇಶನ್ ತಿಳಿಸಿದೆ.

    ಸುತ್ತೂರು ಶ್ರೀಗಳಿಂದ ಪಡಿತರ ವಿತರಣೆ:
    ಮೈಸೂರು ನಾಗರೀಕ ವೇದಿಕೆಯಿಂದ 3 ಸಾವಿರ ದಿನಸಿ ಪೊಟ್ಟಣಗಳನ್ನು ವಿತರಿಸಲಾಯಿತು. ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಈ ಪದಾರ್ಥಗಳನ್ನು ಜನರಿಗೆ ವಿತರಿಸಿದರು. 5 ಕೆಜಿ ಅಕ್ಕಿ, 1 ಕೆಜಿ ಸಕ್ಕರೆ, 1 ಕೆಜಿ ಬೆಳೆ, ಕಾಲ್ಕೇಜಿ ಟೀ ಪುಡಿ, ಅರ್ಧ ಲೀಟರ್ ಅಡಿಗೆ ಎಣ್ಣೆ ಪಾಕೇಟ್ ಅನ್ನು ಮೈಸೂರಿನ ಗಿರಿಯಾಭೋವಿಪಾಳ್ಯದ ಜೆಎಸ್‍ಎಸ್ ಪ್ರೌಡ ಶಾಲೆ ಆವರಣದಲ್ಲಿ ವಿತರಿಸಲಾಯಿತು. ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ, ಉದ್ಯಮಿಗಳಾದ ವಾಸುದೇವ ಭಟ್, ಬಾಲಸುಬ್ರಹ್ಮಣ್ಯಂ, ಗಿರಿ ಸೇರಿದಂತೆ ಪ್ರಮುಖರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

  • ಭಾರೀ ಅವಘಡದಿಂದ ಸುತ್ತೂರು ಶ್ರೀಗಳು ಪಾರು!

    ಭಾರೀ ಅವಘಡದಿಂದ ಸುತ್ತೂರು ಶ್ರೀಗಳು ಪಾರು!

    ಮೈಸೂರು: ಸುತ್ತೂರು ಜಾತ್ರೆಯ ಕುಸ್ತಿ ಪಂದ್ಯಾವಳಿ ಉದ್ಘಾಟನೆ ವೇಳೆ ಭಾರೀ ಅವಘಡದಿಂದ ಸುತ್ತೂರು ಶ್ರೀಗಳು ಪಾರಾಗಿದ್ದಾರೆ.

    ಸುತ್ತೂರು ಜಾತ್ರಾ ಮಹೋತ್ಸವದ ನಿಮಿತ್ತ ಇಂದು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯನ್ನು ನೈಟ್ರೋಜನ್ ತುಂಬಿದ್ದ ಬಲೂನ್ ಹಾರಿಬಿಡುವ ಮೂಲಕ ಸುತ್ತೂರು ಶ್ರೀಗಳು ಉದ್ಘಾಟನೆ ಮಾಡುತ್ತಿದ್ದರು. ಈ ವೇಳೆ ಬಲೂನ್‍ಗೆ ಬೆಂಕಿ ತಗುಲಿದ ಪರಿಣಾಮ ಬಲೂನ್‍ಗಳ ಸ್ಫೋಟಗೊಂಡು ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

    ಸ್ಥಳದಲ್ಲಿ ಕುಸ್ತಿಪಟುಗಳು ಹಾಗೂ ಸುತ್ತೂರು ಶ್ರೀಗಳು ಕೂಡ ಇದ್ದರು. ಅದೃಷ್ಟವಶಾತ್ ಶ್ರೀಗಳು ಪಾರಾಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಲ್ಲಿ ಒಬ್ಬರ ಮುಖದ ಮೇಲೆ ಸುಟ್ಟ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • `100’ರ ಸಂಭ್ರಮದಲ್ಲಿ ಪಬ್ಲಿಕ್ ಟಿವಿಯ `ಬೆಳಕು’

    `100’ರ ಸಂಭ್ರಮದಲ್ಲಿ ಪಬ್ಲಿಕ್ ಟಿವಿಯ `ಬೆಳಕು’

    ಬೆಂಗಳೂರು: ಇಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ನೂರರ ಸಂಭ್ರಮ. ಬೆಳಕು ಎಂಬ ಶೀರ್ಷಿಕೆಯಡಿಯಲ್ಲಿ ಆರಂಭವಾಗ ಬೆಳಕು ಇಂದು ನೂರರ ಸಂಭ್ರಮದಲ್ಲಿದೆ. ಇಂದು ಈ ಕಾರ್ಯಕ್ರಮದ ಮುಲಕ ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ. ಬೆಳಕು ನೊಂದವರ ಪಾಲಿಗೆ ಬೆಳಕಾಗುವದೋಸ್ಕರ, ಬಡಪ್ರತಿಭಾವಂತರಿಗೆ ನೆರವಾಗುವ ಉದ್ದೇಶದಿಂದ ಆರಂಭವಾದ ಕಾರ್ಯಕ್ರಮ.

    ರಾಕ್‍ಲೈನ್ ವೆಂಕಟೇಶ್, ಲಹರಿ ಆಡಿಯೋ ಕಂಪನಿಯ ಮುಖ್ಯಸ್ಥರು ಮನೋಹರ್ ನಾಯ್ಡು, ನಟ ಯಶ್, ಸುತ್ತೂರು ಶ್ರೀಗಳು, ಕಣ್ವಾ ಮಾರ್ಟ್ ಮುಖ್ಯಸ್ಥ ನಂಜುಡಯ್ಯ ಮುಂತಾದ ಗಣ್ಯಾತೀಗಣ್ಯರು ಬೆಳಕು 100ರ ಸಂಚಿಕೆಗೆ ಸಾಕ್ಷಿಯಾದ್ರು.

    ಬೆಳಕು 100ರ ಸಂಚಿಕೆಯ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧಡೆಯಿಂದ ಜನರು ಆಗಮಿಸಿದ್ದರು. ಇನ್ನೂ ಬೆಳಕು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜೀವನದಲ್ಲಿ ಬೆಳಕನ್ನು ಕಂಡಿರೋ ಅನೇಕರು ಆಗಮಿಸಿದ್ದರು.

     

    ಮೊದಲ ಸಂಚಿಕೆ: ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ದಾಬಸ್‍ಪೇಟೆ ಬಳಿಯ ಪ್ರವೀಣ್ ಬೆಳಕು ಕಾರ್ಯಕ್ರಮದ ಮೊದಲನೇ ಸಂಚಿಕೆಗೆ ಬಂದಿದ್ದರು. ಆಟ ಆಡುವಾಗ ಪ್ರವೀಣ್ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿಸದ್ದರಿಂದ ತನ್ನ ಬಲಗೈಯನ್ನು ಕಳೆದುಕೊಂಡಿದ್ದನು. ಸರ್ಕಾರ ಪ್ರವೀಣನಿಗೆ 5000 ರೂ. ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತು.

    ಬಲಗೈ ಕಳೆದುಕೊಂಡ್ರೂ ಪ್ರವೀಣ್ ಎಡಗೈ ಮೂಲಕ ಬರೆಯುವಲ್ಲಿ ಯಶಸ್ವಿಯಾಗಿದ್ದಾನೆ. ಇಂದು ಪ್ರವೀಣ್‍ನ ಶಿಕ್ಷಣ ವೆಚ್ಚವನ್ನು ಪಬ್ಲಿಕ್ ಟಿವಿ ನೀಡುತ್ತಿದೆ.

    ಚಿತ್ರದುರ್ಗದಿಂದ ಬಂದಂತಹ ಕಥೆಯಿದು ಹೃದಯ ಮಿಡಿಯುವ ಸ್ಟೋರಿ. ಪತಿಯಿಂದ ದೂರವಾದ ತಾಯಿ ಕೋರ್ಟ್ ಆವರಣದಲ್ಲಿ ಕಸ ಗುಡಿಸುವ ಮೂಲಕ ಸ್ವಾಭಿಮಾನ ಜೀವನ ಕಟ್ಟಿಕೊಂಡಿದ್ದರು. ಆದರೆ ಜೊತೆಯಲ್ಲಿದ್ದ ಕಂದನಿಗೆ ಹೃದಯದಲ್ಲಿ ರಂಧ್ರವಿದೆ ಎಂದು ತಿಳಿದಾಗ ತಾಯಿಗೆ ದಿಕ್ಕುತೋಚದಂತಾಗಿತ್ತು. ಕೊನೆಗೆ ತಾಯಿ ಪಬ್ಲಿಕ್ ಟಿವಿಗೆ ಬಂದು ತಮ್ಮ ನೋವನ್ನು ತೋಡಿಕೊಂಡಿದ್ದರು.

    ಪಬ್ಲಿಕ್ ಟಿವಿ ಮನವಿಯಂತೆ ನಗರದ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್ ಅವರು ಮಗುವಿನ ಶಸ್ತ್ರ ಚಿಕಿತ್ಸೆಗೆ ಕೈ ಜೋಡಿಸಿದರು. ಇಂದು ಪುಟ್ಟ ಪೋರನ ಮುಖದಲ್ಲಿ ನಗು ಬಂದಿದೆ.

    ಕಾರ್ಯಕ್ರಮದ ಕೊನೆಗೆ ಸುತ್ತೂರು ಶ್ರೀಗಳು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬೆಳಕು ಕಾರ್ಯಕ್ರಮದ ಸಹಾಯದ ಮೂಲಕ ವಿದ್ಯಾವಂತರಾಗಿ, ಸಹಾಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ. ಮುಂದೆ ನಾವು ಜೀವನದಲ್ಲಿ ಕಷ್ಟದಲ್ಲಿರುವರೆಗೂ ಸಹಾಯ ಮಾಡ್ತೇವೆ ಎಂದು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.

    ಕಾರ್ಯಕ್ರಮ ಅಂತಿಮ ಘಟ್ಟದಲ್ಲಿ ಬೆಳಕು 100ನೇ ಸಂಚಿಕೆ ಆಗಮಿಸಿದ್ದ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಪಬ್ಲಿಕ್ ಟಿವಿಯಿಂದ ಗೌರವಿಸಲಾಯಿತು.