Tag: ಸೀಟ್

  • ಬಸ್‍ನಲ್ಲಿ ಪತ್ನಿಗೆ ಸೀಟ್ ಕೇಳಿದ ಮಾಜಿ ಸೈನಿಕನ ಮೇಲೆ ಯುವಕರಿಂದ ಹಲ್ಲೆ

    ಬಸ್‍ನಲ್ಲಿ ಪತ್ನಿಗೆ ಸೀಟ್ ಕೇಳಿದ ಮಾಜಿ ಸೈನಿಕನ ಮೇಲೆ ಯುವಕರಿಂದ ಹಲ್ಲೆ

    ಹಾವೇರಿ: ಬಸ್‍ನಲ್ಲಿ ಪತ್ನಿಗೆ ಸೀಟ್ ಬಿಟ್ಟುಕೊಡಿ ಎಂದು ಕೇಳಿದ ಮಾಜಿ ಯೋಧನ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಈ ಪೈಕಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬ್ಯಾಡಗಿ ತಾಲೂಕಿನ ಕುಮ್ಮೂರು ಗ್ರಾಮದ ಪರಮೇಶಪ್ಪ ಬಾರಂಗಿ (38) ಹಲ್ಲೆಗೊಳಗಾದ ಮಾಜಿ ಯೋಧ. ಹಾವೇರಿ ನಿವಾಸಿಗಳಾದ ಅಲ್ಲಾವುದ್ದಿನ್ ಕಮಲಾಪುರ್ (29), ಕುತ್ಬುದ್ದಿನ್ (28), ಮೈನೂದ್ದಿನ್ (34) ಬಂಧಿತ ಆರೋಪಿಗಳು.

    ಆಗಿದ್ದೇನು?:
    ಪರಮೇಶಪ್ಪ ಅವರ ಸುಮಾರು ಒಂದು ವರ್ಷದ ಮಗಳಿಗೆ ಭೇದಿ ಕಾಣಿಸಿಕೊಂಡಿತ್ತು. ಹೀಗಾಗಿ ಮಗಳನ್ನು ಹಾವೇರಿಯ ಪಂಡಿತ್ ಆಸ್ಪತ್ರೆಗೆ ದಾಖಲಿಸಿ, ಕಳೆದ ಮೂರು ದಿನಗಳಿಂದ ಚಿಕಿತ್ಸೆ ಕೊಡಿಸಿಸಿದ್ದರು. ಮಗಳು ಚೇತರಿಸಿಕೊಂಡಿದ್ದರಿಂದ ವೈದ್ಯರು ಇಂದು ಡಿಸ್ಚಾರ್ಜ್ ಮಾಡಿದ್ದರು. ಪರಮೇಶಪ್ಪ ಅವರು ಪತ್ನಿ ಹಾಗೂ ಮಗಳ ಜೊತೆಗೆ ಇಂದು ಸಂಜೆ ಬಸ್‍ನಲ್ಲಿ ಗ್ರಾಮಕ್ಕೆ ಮರಳುತ್ತಿದ್ದರು. ಈ ವೇಳೆ ಅಲ್ಲಾವುದ್ದಿನ್ ಕಮಲಾಪುರ್ ಸೇರಿದಂತೆ ಕೆಲವರು ತಮ್ಮ ಸಂಬಂಧಿಕರಿಗೆ ಸೀಟ್ ಹಿಡಿದಿದ್ದರು. ಅವರ ಪಕ್ಕದಲ್ಲಿಯೇ ಪರಮೇಶಪ್ಪ ಕೂಡ ಬ್ಯಾಗ್ ಇಟ್ಟಿದ್ದರು. ನಾವು ನಿಮಗಿಂತ ಮೊದಲೇ ಸೀಟ್ ಹಿಡಿದಿದ್ದೇವೆ. ಹೀಗಾಗಿ ಸೀಟ್ ಬಿಟ್ಟುಕೊಡಲ್ಲ ಎಂದು ಅಲ್ಲಾವುದ್ದಿನ್ ಸಂಬಂಧಿಕರು ಗಲಾಟೆ ಮಾಡಿದ್ದಾರೆ.

    ಮಗುವಿಗೆ ಹುಷಾರಿಲ್ಲ. ತಾಯಿ ಮಗು ಕುಳಿತುಕೊಳ್ಳಲು ಜಾಗ ಕೊಡಿ ಎಂದು ಪರಮೇಶಪ್ಪ ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಅಲ್ಲಾವುದ್ದಿನ್, ಕುತ್ಬುದ್ದಿನ್, ಮೈನೂದ್ದಿನ್ ಸೇರಿದಂತೆ ಅವರ ಸಂಬಂಧಿಕರು ಪರಮೇಶಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪರಮೇಶಪ್ಪ ಅವರ ಪತ್ನಿಯ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಗಲಾಟೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

    ಪರಮೇಶಪ್ಪ ಅಸ್ವಸ್ತಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಳಿದ ಕೆಲವರು ಪಾರಾರಿಯಾಗಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

    ಈ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಾಜಿ ಯೋಧನ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು. ಎಲ್ಲರನ್ನೂ ಬಂಧಿಸಬೇಕು ಎಂದು ಸ್ಥಳೀಯರು ಠಾಣೆಯ ಮುಂದೆ ನಿಂತು ಪೊಲೀಸರಿಗೆ ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಮಾನದಲ್ಲಿ ಪ್ರಯಾಣಿಸ್ತಿದ್ದಾಗ ಮಹಿಳೆ ಪಕ್ಕದಲ್ಲೇ ಸೂಸು ಮಾಡ್ದ!

    ವಿಮಾನದಲ್ಲಿ ಪ್ರಯಾಣಿಸ್ತಿದ್ದಾಗ ಮಹಿಳೆ ಪಕ್ಕದಲ್ಲೇ ಸೂಸು ಮಾಡ್ದ!

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮಹಿಳೆಯ ಪಕ್ಕದಲ್ಲೇ ಸೂಸು ಮಾಡಿದ ಘಟನೆ ನಡೆದಿದೆ.

    ಏರ್ ಇಂಡಿಯಾ ವಿಮಾನವು ನ್ಯೂಯಾರ್ಕ್ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಮಹಿಳೆಯ ಮಗಳು ಈ ಬಗ್ಗೆ ಈ ಟ್ವೀಟ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಟ್ವೀಟ್ ನಲ್ಲೇನಿತ್ತು?:
    ವಿಮಾನದಲ್ಲಿ ಪ್ರಯಾಣಿಸಿದ ಮಹಿಳೆಯ ಮಗಳು ಇಂದ್ರಾಣಿ ಘೋಷ್, `ಶುಕ್ರವಾರ AI 102  ಏರ್ ಇಂಡಿಯಾದಲ್ಲಿ ಚಲಿಸುತ್ತಿದ್ದಾಗ ಪ್ರಯಾಣಿಕನೊಬ್ಬ ಪ್ಯಾಂಟ್ ಜಾರಿಸಿ ಅಮ್ಮ ಕುಳಿತಿದ್ದ ಸೀಟ್ ಪಕ್ಕದಲ್ಲೇ ಸೂಸು ಮಾಡಿದ್ದಾನೆ. ಇದರಿಂದಾಗಿ ಒಬ್ಬರೇ ಪ್ರಯಾಣಿಸುತ್ತಿದ್ದ ನನ್ನ ಅಮ್ಮ ಗಾಬರಿಯಿಂದ ಆಘಾತಕ್ಕೊಳಗಾಗಿದ್ದಾರೆ’ ಅಂತ ಬರೆದುಕೊಂಡಿದ್ದಾರೆ.

    ಇಂದ್ರಾಣಿ ಟ್ವೀಟ್ ಗಮನಿಸಿದ ಕೇಂದ್ರ ವಿಮಾನಯಾನ ಖಾತೆಯ ಸಚಿವ ಜಯಂತ್ ಸಿನ್ಹಾ ತಕ್ಷಣವೇ ಪ್ರತಿಕ್ರಿಯಿಸಿದ್ದು, ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಏರ್ ಇಂಡಿಯಾಗೆ ಸೂಚಿಸಿದ್ದಾರೆ. ಅಲ್ಲದೇ ಈ ಪ್ರಕರಣದ ವರದಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಥವಾ ಇಲಾಖೆಗೆ ಸಲ್ಲಿಸಬೇಕು ಅಂತ ಹೇಳಿದ್ದಾರೆ.

    ಇದೇ ವೇಳೆ ನಿಮ್ಮ ಅಮ್ಮ ಇಂತಹ ಕೆಟ್ಟ ಸನ್ನಿವೇಶದಲ್ಲಿ ಒಬ್ಬರೇ ಪ್ರಯಾಣ ಬೆಳೆಸಿದ್ದು ದುರದೃಷ್ಟಕರ ಅಂತ ಹೇಳಿ ಕ್ಷಮೆಯಾಚಿಸಿದ್ದಾರೆ. ವಿಷಾದವೆಂದರೆ ಈ ಬಗ್ಗೆ ಇದೂವರೆಗೂ ಏರ್ ಇಂಡಿಯಾ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸರಗೊಂಡ ಇಂದ್ರಾಣಿ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದಾರೆ. ಆ ಬಳಿಕ ಎಚ್ಚೆತ್ತ ಏರ್ ಇಂಡಿಯಾ ತನಿಖೆ ನಡೆಸಲು ಮುಂದೆ ಬಂದಿದೆ.

    ಇದೇ ವೇಳೆ ಇಂದ್ರಾಣಿ ಇಂತಹ ಅಸಹ್ಯಕರ ಘಟನೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ವಿಮಾನಯಾನ ಕಂಪೆನಿಗಳಿಗೆ ಆಗ್ರಹಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಏರ್‍ಇಂಡಿಯಾವನ್ನು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೀಟ್ ಕಾಯ್ದಿರಿಸಲು ಯತ್ನಿಸಿದ್ದ ವಿದ್ಯಾರ್ಥಿ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವು

    ಸೀಟ್ ಕಾಯ್ದಿರಿಸಲು ಯತ್ನಿಸಿದ್ದ ವಿದ್ಯಾರ್ಥಿ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವು

    ಚಿಕ್ಕಬಳ್ಳಾಪುರ: ಬಸ್ಸಿನ ಕಿಟಕಿ ಮೂಲಕ ಸೀಟಿಗೆ ಬ್ಯಾಗ್ ಹಾಕಿ, ಸೀಟ್ ಕಾಯ್ದಿರಿಸಲು ಯತ್ನಿಸಿದ್ದ ವಿದ್ಯಾರ್ಥಿಯೊಬ್ಬ ಆಯತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಅಡಿ ಸಿಲುಕಿ ಮೃತಪಟ್ಟ ಘಟನೆ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಗೌರಿಬಿದನೂರು ತಾಲೂಕಿನ ಬಿ.ಬೊಮ್ಮಸಂದ್ರ ನಿವಾಸಿ ಚರಣ್ ಕುಮಾರ್ (18) ಮೃತ ವಿದ್ಯಾರ್ಥಿ. ಚರಣ್ ಕುಮಾರ್ ಚಿಕ್ಕಬಳ್ಳಾಪುರ ಬಿಜೆಎಎಸ್ ಪಾಲಿಟೆಕ್ನಿಕ್ ಕಾಲೇಜಿನ ವ್ಯಾಸಾಂಗ ಮಾಡುತ್ತಿದ್ದ. ಇಂದು ಕಾಲೇಜಿನಿಂದ ಬಂದ ಆತನು ತನ್ನ ಗ್ರಾಮಕ್ಕೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದ.

    ನಿಲ್ದಾಣಕ್ಕೆ ಕೆಎ 40 ಎಫ್ 712 ಕೆಎಸ್‌ಆರ್‌ಟಿಸಿ ಬಸ್ ಬರುತ್ತಿದ್ದಂತೆ, ಸೀಟ್ ಕಾಯ್ದಿರಿಸಲು ಕಿಟಕಿಯ ಮೂಲಕ ಬ್ಯಾಗ್ ಹಾಕಲು ಯತ್ನಿಸಿದ್ದಾನೆ. ಆಗ ಆಯತಪ್ಪಿ ಬಿದ್ದ ಚರಣ್ ಕುಮಾರ್ ಕತ್ತಿನ ಮೇಲೆ ಬಸ್ ಹರಿದುಹೋಗಿದೆ. ಪರಿಣಾಮ ಅತಿಯಾದ ರಕ್ತಸ್ರಾವದಿಂದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿತ್ರಮಂದಿರದಲ್ಲಿ ಸೀಟ್ ಅಡಿ ತಲೆ ಸಿಲುಕಿ ವ್ಯಕ್ತಿ ಸಾವು

    ಚಿತ್ರಮಂದಿರದಲ್ಲಿ ಸೀಟ್ ಅಡಿ ತಲೆ ಸಿಲುಕಿ ವ್ಯಕ್ತಿ ಸಾವು

    ಲಂಡನ್: ಸಿನಿಮಾ ವೀಕ್ಷಿಸಲು ಹೋದ ವ್ಯಕ್ತಿಯೊಬ್ಬರು ಸೀಟಿನ ಕೆಳಗೆ ಬಿದ್ದಿದ್ದ ಮೊಬೈಲ್ ಫೋನ್ ತೆಗೆಯಲು ಹೋಗಿ ಅವರ ತಲೆ ಸೀಟಿನ ಅಡಿ ಸಿಲುಕಿಕೊಂಡ ಪರಿಣಾಮ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಇಂಗ್ಲೆಂಡ್‍ನ ಬರ್ಮಿಂಗ್‍ಹಾಮ್‍ನಲ್ಲಿ ನಡೆದಿದೆ.

    ಮಾರ್ಚ್ 9ರಂದು ವ್ಯಕ್ತಿ ಸ್ಟಾರ್ ಸಿಟಿ ಮನೊರಂಜನೆ ಮಳಿಗೆಯ ವಿಯು ಚಿತ್ರಮಂದಿರಕ್ಕೆ ಸಿನಿಮಾ ವೀಕ್ಷಿಸಲು ಬಂದಿದ್ದರು. ಎರಡು ಗೋಲ್ಡ್ ಕ್ಲಾಸ್ ಸೀಟುಗಳ ಮಧ್ಯೆ ತನ್ನ ಮೊಬೈಲ್ ಫೋನ್ ಬೀಳಿಸಿಕೊಂಡಿದ್ದರಿಂದ ಸೀಟಿನ ಅಡಿ ಹುಡುಕಲು ಹೋದಾಗ ಎಲೆಕ್ಟ್ರಾನಿಕ್ ಫುಟ್‍ರೆಸ್ಟ್ ತಲೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಅವರು ನೆಲಕ್ಕುರುಳಿದ್ದರು.

    ಚಿತ್ರಮಂದಿರದ ಸಿಬ್ಬಂದಿಗಳು ಸೀಟ್‍ನ ಅಡಿ ಸಿಲುಕಿಕೊಂಡ ವ್ಯಕ್ತಿಯನ್ನ ಹೊರ ತೆಗೆಯಲು ಸಾಕಷ್ಟು ಪ್ರಯತ್ನ ಮಾಡಿದರು. ಕೊನೆಯಲ್ಲಿ ಆ ಸೀಟಿನ ಎಲೆಕ್ಟ್ರಾನಿಕ್ ಫುಟ್‍ರೆಸ್ಟ್ ಮುರಿದು ವ್ಯಕ್ತಿಯನ್ನ ಹೊರತರಲಾಗಿದೆ.

    ಕುರ್ಚಿಯಿಂದ ಹೊರ ಬಂದ ವ್ಯಕ್ತಿಯು ನಿತ್ರಾಣವಾಗಿ ಹೃದಯಾಘಾತ ಸಂಭವಿಸಿದ್ದರಿಂದ ಅವರನ್ನ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಮಾರ್ಚ್ 16 ರಂದು ಮೃತಪಟ್ಟಿದ್ದಾರೆ.

    ವಿಯು ಚಿತ್ರಮಂದಿರವು ವ್ಯಕ್ತಿಯ ಸಾವನ್ನ ಖಚಿತಪಡಿಸಿದ್ದು, ಮಾರ್ಚ್ 9ರಂದು ಘಟನೆ ನಡೆದ ಕೂಡಲೇ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಶುಕ್ರವಾರ ಮೃತಪಟ್ಟಿರುವುದು ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

  • ರಶ್ ಆಗಿದ್ದ ರೈಲಿನಲ್ಲಿ ಸೀಟ್ ಪಡೆಯೋಕೆ ಏನು ಮಾಡಿದ ನೋಡಿ

    ರಶ್ ಆಗಿದ್ದ ರೈಲಿನಲ್ಲಿ ಸೀಟ್ ಪಡೆಯೋಕೆ ಏನು ಮಾಡಿದ ನೋಡಿ

    ಬೀಜಿಂಗ್: ರಶ್ ಆಗಿರೋ ಬಸ್ ಅಥವಾ ಮೆಟ್ರೋದಲ್ಲಿ ಪ್ರಯಾಣಿಸುವಾಗ ಒಂದು ಸೀಟ್ ಸಿಕ್ಕರೆ ಅದೇ ಪುಣ್ಯ ಅನ್ಕೋತೀವಿ. ಆದ್ರೆ ಇಲ್ಲೊಬ್ಬ ಸೀಟ್ ಪಡೆಯೋಕೆ ಏನು ಮಾಡಿದ ಅಂತ ನೋಡಿದ್ರೆ ಅಯ್ಯೋ ಇವ್ನಾ… ಏನ್ ನಾಟಕ ಮಾಡ್ತಾನ್ರೀ! ಅಂತೀರ.

    ಕಿಕ್ಕಿರಿದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸೀಟ್ ಸಿಗದೆ ಬೇಸತ್ತು ನೆಲದ ಮೇಲೆ ಬಿದ್ದು ಫಿಟ್ಸ್(ಅಪಸ್ಮಾರ) ಬಂದವನಂತೆ ಒದ್ದಾಡಿದ್ದಾನೆ. ಆದ್ರೆ ಆತನಿಗೆ ಸಹಾಯ ಮಡೋ ಬದಲು ಸೀಟ್‍ನಲ್ಲಿ ಕುಳಿತಿದ್ದವರು ಥಟ್ಟಂತ ಮೇಲೆದ್ದು ದೂರ ಹೋಗಿದ್ದಾರೆ.

     

    ಈತ ನಾಟಕ ಮಾಡ್ತಿದ್ದಾನೆ ಅಂತ ಗೊತ್ತಿಲ್ಲದೆ ಇನ್ನೂ ಕೆಲವು ಪ್ರಯಾಣಿಕರು, ಅಯ್ಯೋ ಏನಾಯ್ತಪ್ಪಾ… ಅಂತ ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ನಂತರ ಕೆಳಗೆ ಬಿದ್ದ ವ್ಯಕ್ತಿ ಮೇಲೆದ್ದು, ಖಾಲಿಯಾಗಿದ್ದ ಸೀಟ್ ಮೇಲೆ ಕುಳಿತು ಪಕ್ಕದಲ್ಲಿದ್ದವರಿಗೆ ನಗು ಬೀರಿದ್ದಾನೆ.

    ಈ ಘಟನೆ ಚೀನಾದಲ್ಲಿ ನಡೆದಿದೆ ಅಂತ ಹೇಳಲಾಗಿದೆ. ಆದ್ರೆ ನಿರ್ದಿಷ್ಟವಾಗಿ ಯಾವಾಗ, ಯಾವ ಪ್ರದೇಶದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ವಿಡಿಯೋ ಮೊದಲು ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದು, ಚೀನಾದ ರೈಲುಗಳಲ್ಲಿ ಸೀಟ್ ಪಡೆಯಬೇಕಾದ್ರೆ ಏನು ಮಾಡ್ಬೇಕು ಅನ್ನೋ ಶೀರ್ಷಿಕೆ ನೀಡಲಾಗಿತ್ತು. ಅಂದಿನಿಂದ ಈ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=60xj8KjaEsw

  • ಲೇಡಿಸ್ ಸೀಟ್‍ನಲ್ಲಿ ಕುಳಿತಿದ್ದ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಮಹಿಳೆ

    ಲೇಡಿಸ್ ಸೀಟ್‍ನಲ್ಲಿ ಕುಳಿತಿದ್ದ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಮಹಿಳೆ

    ಮಂಗಳೂರು: ಮಹಿಳೆಯೊಬ್ಬರು ಲೇಡಿಸ್ ಸೀಟ್‍ನಲ್ಲಿ ಕುತಿರೋದಕ್ಕೆ ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ತುಂಬಿದ ಸರ್ಕಾರಿ ಬಸ್ ನಲ್ಲಿ ಈ ಹೈಡ್ರಾಮ ನಡೆದಿದ್ದು, ಯುವಕನೋಬ್ಬ ಸೀಟ್ ಇಲ್ಲದೆ ಮಹಿಳೆಯರಿಗೆ ಮೀಸಲಾಗಿದ್ದ ಸೀಟ್ ನಲ್ಲಿ ಕೂತಿದ್ದ. ಬಸ್‍ಗೆ ಹತ್ತಿದ ಮಹಿಳೆಯರು ನಿಂತುಕೊಂಡೇ ಇದ್ದರೂ ಯುವಕ ಮಾತ್ರ ಸೀಟ್ ಬಿಟ್ಟು ಎದ್ದೇಳಿಲ್ಲ.

    ಇದನ್ನು ಕಂಡ ಮಹಿಳೆಯೊಬ್ಬರು ಯುವಕನ ವಿರುದ್ಧ ಆರ್ಭಟಿಸಿ ಸೀಟು ಬಿಟ್ಟು ಕೊಡುವಂತೆ ಏಕಾಏಕಿಯಾಗಿ ರೌದ್ರಾವತರ ತಾಳಿ ಕೂಗಾಡಿದ್ದಾರೆ. ಆದರೆ ನಾನೇನು ಕಡಿಮೆ ಎನ್ನುವಂತೆ ಮಹಿಳೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಇಬ್ಬರ ನಡುವೆ ಬಸ್ ಒಳಗಡೆಯೇ ಕಚ್ಚಾಟ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ಇಬ್ಬರ ರಂಪಾಟವನ್ನು ನೋಡಿದ್ದಾರೆ.

    ಮಹಿಳೆ ಕೊನೆಗೆ ಯುವಕನ ಕುತ್ತಿಗೆಪಟ್ಟಿ ಹಿಡಿದು ಸೀಟಿನಿಂದ ಎಬ್ಬಿಸಿದ್ದಾರೆ. ಮಹಿಳೆಯ ವರ್ತನೆ ಕಂಡು ದಂಗಾದ ಯುವಕ ಕೊನೆಗೆ ಗತಿಯಿಲ್ಲದೆ ಸೀಟು ಬಿಟ್ಟು ಎದ್ದು ಹೋಗಿದ್ದಾನೆ. ಆದರೆ ಈ ಜಗಳವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ಆ ವಿಡಿಯೋ ಸಖತ್ ವೈರಲ್ ಆಗಿದೆ.

    ವಿಡಿಯೋ ನೋಡಿ : 

    https://www.youtube.com/watch?v=7-dobyD0k0Q