Tag: ಸಿಮ್ ಕಾರ್ಡ್

  • ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ?

    ಬಿಎಸ್‌ಎನ್‌ಎಲ್‌ 4ಜಿಯಿಂದ 5ಜಿ ಸಿಮ್‌ ಕಾರ್ಡ್‌ಗೆ ಆನ್‌ಲೈನಿನಲ್ಲಿ ಅಪ್‌ಗ್ರೇಡ್‌ ಮಾಡೋದು ಹೇಗೆ?

    ಬಿಎಸ್‌ಎನ್‌ಎಲ್‌ (BSNL) ಇತ್ತೀಚಿಗೆ 5ಜಿ ಸೇವೆಯನ್ನು (5G) ಆರಂಭಿಸಿದೆ. ಈಗಾಗಲೇ ಹೈದರಾಬಾದ್‌ (Hyderabad) ಮತ್ತು ದೆಹಲಿಯಲ್ಲಿ ಸೇವೆ ಆರಂಭಿಸಿದ್ದು ಶೀಘ್ರವೇ ಉಳಿದ ನಗರಗಳಲ್ಲಿ ಈ ಸೇವೆ ಆರಂಭವಾಗಲಿದೆ. ಹೀಗಾಗಿ ಇಲ್ಲಿ  3ಜಿಯಿಂದ 4ಜಿ,  4ಜಿ ಯಿಂದ  5ಜಿಗೆ ಅಪ್‌ಗ್ರೇಡ್‌ ಮಾಡುವ ವಿಧಾನವನ್ನು ತಿಳಿಸಲಾಗಿದೆ.

    ಗ್ರಾಹಕರು ಆಫ್‌ಲೈನ್‌ ಅಥವಾ ಆನ್‌ಲೈನ್‌ (Online) ಮೂಲಕ ತಮ್ಮ ಸಿಮ್‌ ಕಾರ್ಡ್‌ (Sim Card) ಅನ್ನು 5ಜಿಗೆ ಅಪ್‌ಗ್ರೇಡ್‌ ಮಾಡಬಹುದು.

    ಆಫ್‌ಲೈನ್‌ ಹೇಗೆ?
    1. ನಿಮ್ಮ ಹತ್ತಿರದ ಬಿಎಸ್‌ಎನ್‌ಎಲ್‌ ಕಚೇರಿಗೆ ಹೋಗಿ.
    2.ಕಚೇರಿಗೆ ಹೋಗುವಾಗ ಆಧಾರ್‌ ಕಾರ್ಡ್‌ ಅಥವಾ ಸರ್ಕಾರಿ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
    3. ಗ್ರಾಹಕ ಸೇವಾ ಸಿಬ್ಬಂದಿಗೆ ಅಗತ್ಯ ಕೆವೈಸಿ ಮಾಹಿತಿಗಳನ್ನು ನೀಡಿ.
    4. ನೀವು ನೀಡಿದ ವಿವರಗಳು ಹಳೆಯ ಸಿಮ್‌ ಕಾರ್ಡ್‌ಗೆ ನೀಡಿದ ವಿವರಗಳಿಗೆ ತಾಳೆಯಾದರೆ ನಿಮಗೆ ಹೊಸ ಬಿಎಸ್‌ಎನ್‌ಎಲ್‌ 5ಜಿ ಸಿಮ್‌ ಸಿಗುತ್ತದೆ.

    ಬಹಳಷ್ಟು ಗ್ರಾಹಕರು ಬಿಎಸ್‌ಎನ್‌ಎಲ್‌ ಕಚೇರಿಗೆ ಭೇಟಿ ನೀಡುತ್ತಿರುವ ಕಾರಣ ಜನಸಂದಣಿ ಹೆಚ್ಚಾಗುತ್ತಿದೆ. ಹೀಗಾಗಿ ನೀವು ಮನೆಯಲ್ಲೇ ಕುಳಿತು ನಿಮ್ಮ ಸಿಮ್‌ ಕಾರ್ಡ್‌ ಅನ್ನು 5ಜಿಗೆ ಅಪ್‌ಗ್ರೇಡ್‌ ಮಾಡಬಹುದು. ಇದನ್ನೂ ಓದಿ: ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಬೆಲೆ ದಿಢೀರ್ಭಾರೀ ಇಳಿಕೆ

    ಆನ್‌ಲೈನಿನಲ್ಲಿ ಹೇಗೆ?
    1. ಬಿಎಸ್‌ಎನ್‌ಎಲ್‌ ವೆಬ್‌ಸೈಟ್‌ಗೆ ಭೇಟಿ ನೀಡಿ – ಲಿಂಕ್‌
    2. ಇಲ್ಲಿ ಎಲ್ಲಾ ವಿವರಗಳನ್ನು ತುಂಬಿಸಿ. ಮುಖ್ಯವಾಗಿ ನಿಮಗೆ ಪ್ರಿ ಪೇಯ್ಡ್‌ ಬೇಕೋ ಪೋಸ್ಟ್‌ ಪೇಯ್ಡ್‌ ಬೇಕೋ ಎಂಬುದನ್ನು ಆರಿಸಿಕೊಳ್ಳಿ.
    3. ಪರ್ಯಾಯ ಮೊಬೈಲ್‌ ನಂಬರ್‌ ನೀಡಿದ ಬಳಿ ಅದು ಯಾರದ್ದು ಎಂಬುದನ್ನು ಆಯ್ಕೆ ಮಾಡಿ.
    4.ಎಲ್ಲಾ ವಿವರಗಳನ್ನು ನೀಡಿದ ಮೇಲೆ ಸೆಂಡ್‌ ಒಟಿಪಿ ಬಟನ್‌ ಕ್ಲಿಕ್‌ ಮಾಡಿ.
    5. ಒಟಿಪಿ ಸೇರಿದಂತೆ ವಿವರಗಳನ್ನು ಟೈಪ್‌ ಮಾಡಿದ ನಂತರ ನೀವು ನೀಡಿದ ವಿಳಾಸಕ್ಕೆ ಕೆಲವೇ ದಿನಗಳಲ್ಲಿ 5ಜಿ ಸಿಮ್‌ ಕಾರ್ಡ್‌ ಬರುತ್ತದೆ.

  • ಇನ್ನು ಮುಂದೆ ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?

    ಇನ್ನು ಮುಂದೆ ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?

    ನವದೆಹಲಿ: ನೀವು ಹೊಸ ಸಿಮ್‌ ಕಾರ್ಡ್‌ (Sim Card) ಖರೀದಿ ಮಾಡುತ್ತೀರಾ? ಹಾಗಾದ್ರೆ ಡಿ.1 ರಿಂದ ಕೆಲ ಕಠಿಣ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರು ಮಾತ್ರವಲ್ಲ ಸಿಮ್‌ ವಿತರಿಸುವ ಡೀಲರ್‌ಗಳು ಸಹ ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದಲ್ಲಿ ಜೈಲು (Jail) ಶಿಕ್ಷೆಯನ್ನು ವಿಧಿಸಲಾಗುತ್ತದೆ.

    ಬಹುತೇಕ ಸೈಬರ್ ಅಪರಾಧಗಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು (Mobile Sim) ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಂಡಿದೆ.

    ಹೊಸ ನಿಯಮಗಳು ಏನು?
    ವ್ಯಾಪಾರಸ್ಥರು/ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಬಹುದು.

    ಸಿಮ್‌ ಕಾರ್ಡ್‌ ರದ್ದು/ ನಿಷ್ಕ್ರಿಯಗೊಳಿಸಿದ 90 ದಿನಗಳ ನಂತರ ಆ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ನೀಡಲಾಗುತ್ತದೆ.

    ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ (Aadhar Card) ಮತ್ತು ಜನಸಂಖ್ಯಾ ಡೇಟಾವನ್ನು (Demographic Data Collection) ಸಲ್ಲಿಸಬೇಕಾಗುತ್ತದೆ.

    ನೋಂದಾಯಿಸದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ ಹೊಸ ನಿಯಮಗಳ ಪ್ರಕಾರ ಟೆಲಿಕಾಂ ಆಪರೇಟರ್‌ಗಳಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

    ಎಲ್ಲಾ ಸಿಮ್‌ ಕಾರ್ಡ್‌ ಡೀಲರ್‌ಗಳು ಕಡ್ಡಾಯವಾಗಿ ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಸಿಮ್‌ ಕಾರ್ಡ್‌ ಡೀಲರ್‌ಗಳು ಅಥವಾ ಚಿಲ್ಲರೆ ವ್ಯಾಪಾರಿಯು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಸಂಖ್ಯೆ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಅಥವಾ ಪಾಸ್‌ಪೋರ್ಟ್, ಪಾನ್‌, ಸರಕು ಮತ್ತು ಸೇವಾ ತೆರಿಗೆ ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.

    ಸಿಮ್‌ ಡೀಲರ್‌ಗಳು ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಟೆಲಿಕಾಂ ಆಪರೇಟರ್‌ಗಳು ಅವರ ಐಡಿಯನ್ನು ನಿರ್ಬಂಧಿಸಬೇಕು. ಅಷ್ಟೇ ಅಲ್ಲದೇ ಸಿಮ್‌ ಡೀಲರ್‌ನಿಂದ ಯಾರಿಗೆಲ್ಲ ಸಿಮ್‌ ಕಾರ್ಡ್‌ ವಿತರಣೆಯಾಗಿದೆಯೋ ಆ ಎಲ್ಲಾ ಗ್ರಾಹಕರು ಸಿಮ್‌ ಪಡೆಯಲು ನೀಡಿದ ದಾಖಲೆಗಳನ್ನು ಮರು ಪರಿಶೀಲಿಸಬೇಕಾಗುತ್ತದೆ.  ಇದನ್ನೂ ಓದಿ: ಭಾರತದಲ್ಲಿ ಐಫೋನ್‌ ಉತ್ಪಾದನೆ ವಿಸ್ತರಿಸಲು 13,337 ಕೋಟಿ ಹೂಡಿಕೆಗೆ ಫಾಕ್ಸ್‌ಕಾನ್‌ ಯೋಜನೆ 

    ನವೆಂಬರ್ 30 ರೊಳಗೆ ನೋಂದಾಯಿಸದೇ ಉಳಿಯುವ ಸಿಮ್ ಕಾರ್ಡ್ ಮಾರಾಟಗಾರರು 10 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

     

    ಅಶ್ವಿನಿ ವೈಷ್ಣವ್‌ ಹೇಳಿದ್ದೇನು?
    ಹಿಂದೆ ಸಿಮ್‌ ಕಾರ್ಡ್‌ ಬಲ್ಕ್‌ ಆಗಿ ಖರೀದಿಸಲು ಅವಕಾಶವಿತ್ತು. ಇನ್ನು ಮುಂದೆ ಇದನ್ನು ಕೊನೆಗೊಳಿಸಿ ಸರಿಯಾದ ವ್ಯಾಪಾರ ಸಂಪರ್ಕದ ನಿಬಂಧನೆಯನ್ನು ತರುತ್ತೇವೆ. ಇದರಿಂದಾಗಿ ಮೋಸದ ಕರೆಗಳನ್ನು ನಿಲ್ಲಿಸಲು ಸಹಾಯವಾಗಲಿದೆ. ದೇಶದಲ್ಲಿ 10 ಲಕ್ಷ ಸಿಮ್ ಡೀಲರ್‌ಗಳಿದ್ದು, ಅವರಿಗೆ ಪೊಲೀಸ್ ಪರಿಶೀಲನೆಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಆಗಸ್ಟ್‌ನಲ್ಲಿ ತಿಳಿಸಿದ್ದರು.

    ಈ ವರ್ಷದ ಮೇ ತಿಂಗಳಲ್ಲಿ, ಪಂಜಾಬ್ ಪೊಲೀಸರು (Punjab Police) ನಕಲಿ ಗುರುತಿನ ಮೂಲಕ ಸಕ್ರಿಯಗೊಂಡ 1.8 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿದ್ದರು. ಈ ಸಿಮ್ ಕಾರ್ಡ್‌ಗಳನ್ನು ನೀಡಿದ್ದಕ್ಕಾಗಿ 17 ಜನರನ್ನು ಬಂಧಿಸಿದ್ದರು.

  • ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ಕೊಟ್ರೆ ಬೀಳುತ್ತೆ 50 ಸಾವಿರ ದಂಡ,1 ವರ್ಷ ಜೈಲು

    ಸಿಮ್ ಕಾರ್ಡ್, ಒಟಿಟಿ ಸೇವೆಗೆ ನಕಲಿ ದಾಖಲೆ ಕೊಟ್ರೆ ಬೀಳುತ್ತೆ 50 ಸಾವಿರ ದಂಡ,1 ವರ್ಷ ಜೈಲು

    ನವದೆಹಲಿ: ಮೊಬೈಲ್ ಸಿಮ್ ಕಾರ್ಡ್ (SIM Card) ಅನ್ನು ಪಡೆಯಲು ಹಾಗೂ ವಾಟ್ಸಪ್, ಟೆಲಿಗ್ರಾಮ್, ಸಿಗ್ನಲ್‌ಗಳಂತಹ ಒಟಿಟಿ ಪ್ಲಾಟ್‌ಪಾರ್ಮ್‌ಗಳಲ್ಲಿ (OTT Platform) ಸೇವೆಯನ್ನು ಪಡೆಯಲು ನಕಲಿ ದಾಖಲೆಗಳನ್ನು ಒದಗಿಸಿದರೆ ಅಂತಹವರಿಗೆ 1 ವರ್ಷದ ಜೈಲು ಹಾಗೂ 50,000 ರೂ. ದಂಡ ವಿಧಿಸುವ ಸಾಧ್ಯತೆ ಇದೆ.

    ಹೌದು, ಟೆಲಿಕಾಂ (Telecom) ಬಳಕೆದಾರರನ್ನು ಆನ್‌ಲೈನ್ ವಂಚನೆ (Online fraud) ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಂದ ರಕ್ಷಿಸುವ ಸಲುವಾಗಿ ಕಠಿಣ ಕ್ರಮಗಳನ್ನು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

    ಸೈಬರ್ ವಂಚಕರು ಅಪರಾಧವನ್ನು ಮಾಡಲು ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್‌ಗಳನ್ನು ಖರೀದಿಸುತ್ತಾರೆ. ಈ ಮೂಲಕ ಒಟಿಟಿ ಅಪ್ಲಿಕೇಶನ್‌ಗಳಲ್ಲಿ ತಮ್ಮ ಗುರುತನ್ನು ಮರೆ ಮಾಡಿ, ಜನರನ್ನು ವಂಚಿಸುತ್ತಾರೆ. ಇಂತಹ ವಂಚನೆಗಳಿಂದ ರಕ್ಷಿಸಲು ಭಾರತೀಯ ದೂರಸಂಪರ್ಕ ಮಸೂದೆ, 2022ರ ಕರಡು ಭಾಗವಾಗಿ ಭದ್ರತಾ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ದೂರಸಂಪರ್ಕ ಇಲಾಖೆ ಈಗ ಕರಡು ಮಸೂದೆಯನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಿದೆ‌. ಇದನ್ನೂ ಓದಿ: ದೇಶದ ಮೊದಲ 5G ಸೇವೆ ಲಭ್ಯವಿರುವ ವಿಮಾನ ನಿಲ್ದಾಣ ಯಾವುದು ಗೊತ್ತಾ?

    ಕರಡು ಮಸೂದೆಯ ಸೆಕ್ಷನ್ 4ರ ಅಡಿಯಲ್ಲಿ ಉಪ-ವಿಭಾಗ 7ರ ಪ್ರಕಾರ, ತಪ್ಪು ಗುರುತು ನೀಡುವುದರಿಂದ 1 ವರ್ಷದ ಜೈಲು, 50,000 ರೂ. ವರೆಗೆ ದಂಡ ಹಾಗೂ ದೂರಸಂಪರ್ಕ ಸೇವೆಗಳಿಂದ ಅಮಾನತಾಗಬಹುದು. ಈ ಅಪರಾಧ ಎಸಗಿದವರನ್ನು ಪೊಲೀಸರು ಯಾವುದೇ ವಾರಂಟ್ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೇ ಬಂಧಿಸಬಹುದಾಗಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    Live Tv
    [brid partner=56869869 player=32851 video=960834 autoplay=true]

  • ಉರ್ಫಿಗೆ  ಸಂಕಷ್ಟ: ಸಿಮ್ ಕಾರ್ಡ್ ಕಾಸ್ಟ್ಯೂಮ್ ಕಂಡು ಮನೆಗೆ ಬಂದ ಪೊಲೀಸ್

    ಉರ್ಫಿಗೆ ಸಂಕಷ್ಟ: ಸಿಮ್ ಕಾರ್ಡ್ ಕಾಸ್ಟ್ಯೂಮ್ ಕಂಡು ಮನೆಗೆ ಬಂದ ಪೊಲೀಸ್

    ವಿವಿಧ ಬಗೆಯ ಕಾಸ್ಟ್ಯೂಮ್ ನಿಂದಾಗಿಯೇ ಗಮನ ಸೆಳೆಯುವ ಬಾಲಿವುಡ್ (Bollywood) ನಟಿ ಉರ್ಫಿ ಜಾವೇದ್ (Urfi Javed), ಇದೀಗ ಮತ್ತೊಂದು ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ಆದರೆ, ಈ ಬಟ್ಟೆಯನ್ನು ಹಾಕುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ವಿಚಾರಣೆಯನ್ನೂ ಎದುರಿಸಬೇಕಾದ ಸಂದರ್ಭ ಬಂದಿದೆ. ಉರ್ಫಿ ಬಟ್ಟೆ ನೋಡಿ ತಲೆ ಕೆಡಿಸಿಕೊಂಡಿರುವ ಪೊಲೀಸರು, ಬಟ್ಟೆ ಮೂಲದ ಜಾಡನ್ನು ಹಿಡಿದು ಹೊರಟಿದ್ದಾರೆ.

    ಈ ಬಾರಿ ಉರ್ಫಿ ಸಿಮ್ ಕಾರ್ಡಿನಲ್ಲಿ ನೇಯ್ದ ಬಟ್ಟೆಯಿಂದ ತಯಾರಾದ ಕಾಸ್ಟ್ಯೂಮ್ ಹಾಕಿದ್ದು, ಈ ಕಾಸ್ಟ್ಯೂಮ್ ಗಾಗಿ ನೂರಾರು ಸಿಮ್ ಕಾರ್ಡ್ ಗಳನ್ನು (Sim Card) ಬಳಕೆ ಮಾಡಿದ್ದಾರೆ. ಈ ಪ್ರಮಾಣದ ಸಿಮ್ ಕಾರ್ಡ್ ಈಕೆಯ ಬಳಿ ಎಲ್ಲಿಂದ ಬಂದವು ಎನ್ನುವ ಮೂಲವನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈ ಸಿಮ್ ಕಾರ್ಡ್ ಗಾಗಿ ಆಕೆ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿದ್ದು, ಇಷ್ಟೊಂದು ಸಿಮ್ ಕಾರ್ಡ್ ಕೊಟ್ಟವರನ್ನು ಪತ್ತೆ ಮಾಡಲಾಗುತ್ತಿದೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಈ ಹಿಂದೆ ಗೋಣಿ ಚೀಲ, ಪ್ಲ್ಯಾಸ್ಟಿಕ್, ಹೂವುಗಳು, ಚಿಟ್ಟೆ ಹೀಗೆ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಉರ್ಫಿಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅಲ್ಲದೇ, ಈಗೆ ಧರಿಸುವ ಬಟ್ಟೆಗಳು ಕೂಡ ಒಂದೊಂದು ಬಾರಿ ಟ್ರೆಂಡ್ ಆಗುತ್ತವೆ. ಅಲ್ಲದೇ, ಯಾವಾಗಲೂ ಕ್ಯಾಮೆರಾಗಳು ಈಕೆಯನ್ನೇ ಕಾಯುತ್ತಿರುತ್ತವೆ. ಹಾಗಾಗಿಯೇ ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉರ್ಫಿ ಧರಿಸುತ್ತಾರೆ. ಅದನ್ನು ಡಿಸೈನ್ ಮಾಡಿಸಲು ತಲೆ ಕೆಡಿಸಿಕೊಳ್ಳುತ್ತಾರೆ.

    ಉರ್ಫಿ ಧರಿಸುವ ಬಟ್ಟೆಯನ್ನು ತಯಾರಿಸುವ ಕಾಸ್ಟ್ಯೂಮ್ (Costume) ಡಿಸೈನರ್ ಯಾರು ಎನ್ನುವ ಕುತೂಹಲ ಕೂಡ ಹಲವರಲ್ಲಿದೆ. ಕೆಲವು ಸಲ ಆಕೆಯೇ ಡಿಸೈನ್ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಈ ಸೀಮ್ ಐಡ್ಯಾ ಕೊಟ್ಟವರು ಯಾರು ಎನ್ನುವುದು ಸದ್ಯಕ್ಕಿರುವ ಕುತೂಹಲ. ಈಗಾಗಲೇ ಉರ್ಫಿ ಮನೆಗೆ ಪೊಲೀಸ್ (Police) ಬಂದಾಗಿದೆ. ಮುಂದಿನ ಕ್ರಮ ಏನು ಅನ್ನುವುದು ಸದ್ಯಕ್ಕಿರುವ ಪ್ರಶ್ನೆ.

    Live Tv
    [brid partner=56869869 player=32851 video=960834 autoplay=true]

  • ಸಿಮ್ ಕಾರ್ಡ್‍ನಲ್ಲಿ ಸೋನು ಸೂದ್ – ಅಭಿಮಾನಿ ಪ್ರೀತಿಗೆ ರಿಯಲ್ ಹೀರೋ ಹೇಳಿದ್ದೇನು ಗೊತ್ತಾ?

    ಸಿಮ್ ಕಾರ್ಡ್‍ನಲ್ಲಿ ಸೋನು ಸೂದ್ – ಅಭಿಮಾನಿ ಪ್ರೀತಿಗೆ ರಿಯಲ್ ಹೀರೋ ಹೇಳಿದ್ದೇನು ಗೊತ್ತಾ?

    ಮುಂಬೈ: ಬಾಲಿವುಡ್ ನಟ ಸೋನುಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಜನರ ಹೃದಯದಲ್ಲಿ ವಿಶೇಷವಾದ ಸ್ಥಾನ ಪಡೆದುಕೊಂಡಿದ್ದಾರೆ. ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಭಾರೀ ಸದ್ದು ಮಾಡುತ್ತಿರುವ ಸೋನು ಸೋದ್ ಅವರಿಗೆ ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಆಗಾಗ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ.

    ಸದ್ಯ ಅಭಿಮಾನಿಯೊಬ್ಬರು ಸೋನ್ ಸೂದ್ ಮುಖವನ್ನು ಸಿಮ್‍ಕಾರ್ಡ್ ಮೇಲೆ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಸೋಮಿನ್ ಎಂಬವರು ಇತ್ತೀಚೆಗೆ ಸೋನು ಸೂದ್ ಅವರ ಮುಖವನ್ನು ಸಿಮ್ ಕಾರ್ಡ್‍ನಲ್ಲಿ ಚಿತ್ರಿಸಿದ್ದಾರೆ. ನಂತರ ಇದರ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಶೀರ್ಷಿಕೆಯಲ್ಲಿ ಸಿಮ್ ಕಾರ್ಡ್ ಮೇಲೆ ಪೇಂಟಿಂಗ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಳ್ತೇನೆ – ಐಟಿ ಅಧಿಕಾರಿಗಳಿಗೆ ಹೇಳಿದ್ರಂತೆ ಸೋನು ಸೂದ್

    ವಿಶೇಷವೆಂದರೆ ಅಭಿಮಾನಿಯ ಪೋಸ್ಟ್‌ ಗೆ ಸೋನು ಸೂದ್ ಪ್ರತಿಕ್ರಿಯಿಸಿದ್ದು, ಫ್ರೀ 10 ಜಿ ನೆಟ್‍ವರ್ಕ್ ಎಂದು ಸ್ಮೈಲಿ ಎಮೋಜಿ ಕಳುಹಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 6,000ಕ್ಕೂ ಅಧಿಕ ಲೈಕ್ಸ್ ಬಂದಿದ್ದು, 340 ರೀ ಟ್ವೀಟ್ ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಇದನ್ನೂ ಓದಿ: ಪರ್ವತ ಹತ್ತಿ ಸಾಧನೆಗೈದು, ಸೋನು ಸೂದ್‍ಗೆ ಅರ್ಪಣೆ

    ಇತ್ತೀಚೆಗಷ್ಟೇ ಸೋನು ಸೂದ್ ಅವರ ಮನೆ, ಕಚೇರಿ ಸೇರಿದಂತೆ ಅವರಿಗೆ ಸಂಬಂಧಿಸಿದ ಅನೇಕ ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸೋನಿ ಸೂದ್ ಸುಮಾರು 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ: 20 ಕೋಟಿಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಸೋನು ಸೂದ್: ಆದಾಯ ತೆರಿಗೆ ಇಲಾಖೆ

    ನಂತರ, ಈ ಕುರಿತಂತೆ ಸೋನು ಸೂದ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್‌ವೊಂದನ್ನು ಮಾಡಿ, ನಿಮ್ಮ ಕಥೆಯನ್ನು ನೀವು ಯಾವಾಗಲೂ ಹೇಳಬೇಕಾಗಿಲ್ಲ. ಅದಕ್ಕೆ ಸಮಯ ಬರುತ್ತದೆ. ನಾನು ನನ್ನ ಸಂಪೂರ್ಣ ಶಕ್ತಿ ಹಾಗೂ ಹೃದಯದಿಂದ ಭಾರತದ ಜನರ ಸೇವೆ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ನನ್ನ ಫೌಂಡೇಶನ್‍ನಲ್ಲಿರು ಪ್ರತಿ ಒಂದು ರೂಪಾಯಿಯನ್ನು ಅಮೂಲ್ಯವಾದಂತಹ ಜೀವವನ್ನು ಉಳಿಸಲು ಮತ್ತು ಅಗತ್ಯವಿರುವವರಿಗೆ ತಲುಪಿಸಲು ಕಾಯುತ್ತಿದ್ದೇನೆ. ಅನೇಕ ವೇಳೆ ಮಾನವೀಯ ಕಾರ್ಯಗಳಿಗೆ ಹಣ ದಾನ ಮಾಡಲು ಬ್ರ್ಯಾಂಡ್‍ಗಳಿಗೆ ಜಾಹೀರಾತು ನೀಡುವ ಮೂಲಕ ಪ್ರೋತ್ಸಾಹಿಸಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನೀವು ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

    https://www.youtube.com/watch?v=Jl6BkwSQhG4

  • 3Gಯಿಂದ 4Gಗೆ ಸಿಮ್ ಅಪ್‍ಡೇಟ್ ಮಾಡಲು ಹೋಗಿ 9.5 ಲಕ್ಷ ಕಳ್ಕೊಂಡ ಮಹಿಳೆ

    3Gಯಿಂದ 4Gಗೆ ಸಿಮ್ ಅಪ್‍ಡೇಟ್ ಮಾಡಲು ಹೋಗಿ 9.5 ಲಕ್ಷ ಕಳ್ಕೊಂಡ ಮಹಿಳೆ

    ಲಕ್ನೋ: ಮಹಿಳೆಯೊಬ್ಬರು ತನ್ನ ಸಿಮ್ ಕಾರ್ಡ್ ಅನ್ನು 3ಜಿ ಯಿಂದ 4ಜಿಗೆ ಅಪ್‍ಡೇಟ್ ಮಾಡಲು ಹೋಗಿ ಬರೋಬ್ಬರಿ 9.5 ಲಕ್ಷ ಹಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ನೋಯ್ಡಾ ಮೂಲದ ವರ್ಷಾ ಅಗರ್ವಾಲ್ ಹಣ ಕಳೆದುಕೊಂಡಿರುವ ಮಹಿಳೆ. ಸಿಮ್ ಕಾರ್ಡ್ ಅಪ್‍ಡೇಟ್ ಮಾಡುವ ನೆಪದಲ್ಲಿ ನಕಲಿ ಗ್ರಾಹಕ ಸೇವಾ ಕಾರ್ಯನಿರ್ವಾಹಕ 9.5 ಲಕ್ಷ ರೂ. ಹಣವನ್ನು ವಂಚನೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ವರ್ಷಾ ಅಗರ್ವಾಲ್ ನೋಯ್ಡಾದ ಸೆಕ್ಟರ್ 108ರ ನಿವಾಸಿಯಾಗಿದ್ದು, ಮೇ 7 ರಂದು ವರ್ಷಾಗೆ ಕರೆ ಬಂದಿದೆ. ಈ ವೇಳೆ ಮೊಬೈಲ್ ನೆಟ್‍ವರ್ಕ್ ಕಂಪನಿಯ ಗ್ರಾಹಕ ಸೇವಾ ವಿಭಾಗದಿಂದ ಎಂದು ಹೇಳಿ ಮಾತು ಆರಂಭಿಸಿದ್ದಾನೆ. ಈ ವೇಳೆ ಅಗರ್ವಾಲ್‍ಗೆ ನಿಮ್ಮ 3ಜಿ ಸಿಮ್ ಕಾರ್ಡ್ ಶೀಘ್ರದಲ್ಲೇ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಎಂದು ಹೇಳಿದ್ದಾನೆ. ಒಂದು ವೇಳೆ ತಮ್ಮ ಸಿಮ್ ಕಾರ್ಡ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲು ಬಯಸಿದರೆ 3ಜಿಯಿಂದ 4ಜಿಗೆ ಅಪ್‍ಟೇಡ್ ಮಾಡಬೇಕು ಎಂದು ತಿಳಿಸಿದ್ದಾನೆ.

    ಫೋನ್ ಮಾಡಿದವನ ಉದ್ದೇಶದ ಅರಿವಿಲ್ಲದ ಅಗರ್ವಾಲ್ ತನ್ನ ಸಿಮ್ ಅನ್ನು ಅಪ್‍ಡೇಟ್ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ ಸೈಬರ್ ವಂಚಕರು ಸಿಮ್ ಸ್ವಾಪ್ ಮುಖಾಂತರ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ.

    ಅದೇ ರೀತಿ ಸಿಮ್ ಅಪ್‍ಡೇಟ್ ಪ್ರಕ್ರಿಯೆ ಶುರುವಾದ ನಂತರ 72 ಗಂಟೆಗಳ ಕಾಲ ತಮ್ಮ ಸಿಮ್ ಕಾರ್ಡ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ಫೋನ್ ಮಾಡಿದ್ದ ವಂಚಕ ತಿಳಿಸಿದ್ದಾನೆ. ಆದರೆ ಆರು ದಿನಗಳ ನಂತರವೂ ಅಗರ್ವಾಲ್ ಸಿಮ್ ಕಾರ್ಡ್ ಅಪ್‍ಡೇಟ್ ಆಗದಿದ್ದಾಗ ಅನುಮಾನ ಮೂಡಿದೆ. ನಂತರ ಅಗರ್ವಾಲ್ ಬ್ಯಾಂಕಿಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಆಗ ಉಳಿತಾಯ ಖಾತೆಯಲ್ಲಿ ಮೇ 8 ಮತ್ತು 11 ರ ನಡುವೆ 22 ವ್ಯವಹಾರ ನಡೆದಿದ್ದು, ಒಟ್ಟು 9.52 ಲಕ್ಷ ರೂಗಳನ್ನು ಜಾರ್ಖಂಡ್‍ನಿಂದ ಬೇರೆ ಖಾತೆಗೆ ವರ್ಗಾಯಿಸಲಾಗಿದೆ.

    ಮಹಿಳೆಯ ಸಿಮ್ ಕಾರ್ಡ್ ಬದಲಾಯಿಸಿದ ನಂತರ ಆರೋಪಿಗಳು ಹಣವನ್ನು ಕದ್ದಿದ್ದಾರೆ. ನಾವು ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ. ಈ ಕುರಿತು ಸೈಬರ್ ಸೆಲ್ ಐಟಿ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ನೋಯ್ಡಾದ ಸೈಬರ್ ಸೆಲ್‍ನ ಉಸ್ತುವಾರಿ ಬಲ್ಜೀತ್ ಸಿಂಗ್ ತಿಳಿಸಿದ್ದಾರೆ.

    ಏನಿದು ಸಿಮ್ ಸ್ವಾಪ್?
    ಸೈಬರ್ ವಂಚಕರು ಹಣ ಕಬಳಿಸಲು ಬಳಸಿರುವ ನೂತನ ದಾರಿಯೇ ಸಿಮ್ ಸ್ವಾಪ್ ಆಗಿದೆ. ಹೆಸರಾಂತ ಕಂಪೆನಿಗಳ ಮೂಲಕ ಗ್ರಾಹಕರಿಗೆ ಕರೆ ಮಾಡುವ ವಂಚಕರು ಕ್ಷಣಮಾತ್ರದಲ್ಲಿ ನಮ್ಮ ಸಿಮ್ ಮಾಹಿತಿಯನ್ನು ತಮ್ಮ ಸರ್ವರ್ ಗಳಲ್ಲಿ ಸೇವ್ ಮಾಡಿಕೊಳ್ಳುತ್ತಾರೆ. ನಂತರ ಗ್ರಾಹಕರು ಸಿಮ್ ಕಾರ್ಡ್‍ಗಳನ್ನು ಹ್ಯಾಕ್ ಮಾಡಿ ಹಣದೋಚುವ ಹಾಗೂ ಕಾನೂನು ಬಾಹಿರ ಕೃತ್ಯಕ್ಕೆ ಬಳಸುತ್ತಾರೆ.

  • ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

    ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

    – ಪತ್ನಿ, ಮಕ್ಕಳನ್ನು ಸಾಕುವುದು ಯಾರು ಎಂದು ಮದ್ವೆಯಾಗದ ಆರೋಪಿ
    – ಲ್ಯಾಪ್‍ಟಾಪ್ ಕದಿಯುವುದನ್ನು ಹವ್ಯಾಸ ಮಾಡ್ಕೊಂಡಿದ್ದ

    ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಬಂಧನಕ್ಕೊಳಗಾದ ಆದಿತ್ಯ ರಾವ್ ಭರ್ತಿ ನಾಲ್ಕು ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದನು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.

    ಮೆಕ್ಯಾನಿಕಲ್ ಎಂಜಿನಿಯರ್, ಎಂಬಿಎ ಪದವಿ ಓದಿದ್ದ ಆದಿತ್ಯ ಬೆಂಗಳೂರಿನ ಮಹಾತ್ಮ ಗಾಂಧಿ(ಎಂಜಿ) ರಸ್ತೆಯಲ್ಲಿರುವ ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಕಚೇರಿಯಲ್ಲಿ ಹೆಚ್ಚು ಎಸಿ ಹಾಕುತ್ತಾರೆ ಎಂದು ಕೆಲಸ ಬಿಟ್ಟಿದ್ದ.  ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್

    ನೋಡುವುದಕ್ಕೆ ಸಭ್ಯಸ್ಥನಾಗಿ ಹೈಫೈ ಇಂಗ್ಲಿಷ್ ಮಾತನಾಡುತ್ತಿದ್ದ ಆದಿತ್ಯ ಕಳ್ಳತನವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದ. ಈ ಹಿಂದೆ ಪೇಯಿಂಗ್ ಗೆಸ್ಟ್ ನಲ್ಲಿದ್ದಾಗ ರೂಮೇಟ್‍ನ ಲ್ಯಾಪ್ ಟಾಪ್ ಹಾಗೂ 2013ರಲ್ಲಿ ಬೆಂಗಳೂರಿನ ವಿಮಾ ಕಂಪನಿಯಲ್ಲಿ ಕೆಲಸ ಮಾಡಿದ್ದಾಗ ಸಹದ್ಯೋಗಿ ಲ್ಯಾಪ್ ಟಾಪ್ ಕೂಡ ಕದ್ದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಅಲ್ಲದೆ ಈ ಬಗ್ಗೆ ಸದ್ದಗುಂಟೆ ಹಾಗೂ ಜಯನಗರ ಠಾಣೆಯಲ್ಲೂ ದೂರು ದಾಖಲಾಗಿತ್ತು. ಇದನ್ನೂ ಓದಿ: ಮಾನಸಿಕ ರೋಗಿಯಂತಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ: ಆದಿತ್ಯ ಸಹದ್ಯೋಗಿ

    ಸದಾ ಮೌನಿ ಆಗಿರುತ್ತಿದ್ದ ಆದಿತ್ಯ ಬಳಿ ಉತ್ತಮ ಸಂಬಳ ಬರುತ್ತಿದ್ದ ಬ್ಯಾಂಕ್ ಕೆಲಸವನ್ನು ತೊರೆದಿದ್ದು ಯಾಕೆ ಎಂದು ಕೇಳಿದ್ದಕ್ಕೆ, ಸಂಬಳ ಉತ್ತಮವಾಗಿ ಬರುತ್ತಿತ್ತು. ಆದರೆ ನನಗೆ ಎಸಿ ಆಗುವುದಿಲ್ಲ. ನೈಸರ್ಗಿಕ ಗಾಳಿ ಬೇಕು. ಈ ಕಾರಣಕ್ಕೆ ನಾನು ಉದ್ಯೋಗ ತೊರೆದೆ ಎಂದು ಹೇಳಿದ್ದ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ

    ಈಗ 40 ವರ್ಷವಾಗಿದ್ದು, ಮದುವೆ ಯಾಕೆ ಆಗಿಲ್ಲ ಎಂದು ಕೇಳಿದಾಗ, ನನ್ನನ್ನೇ ನಾನು ಸಾಕಿಕೊಳ್ಳೋದು ಕಷ್ಟ. ಇನ್ನು ಮದುವೆಯಾದರೆ ಪತ್ನಿ, ಮಕ್ಕಳನ್ನು ಸಾಕುವುದು ಯಾರು ಎಂದು ಪ್ರಶ್ನಿಸುತ್ತಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ – ಮುಂಬೈನಿಂದ ಗೋವಾಗೆ ಓಡಿಹೋದ ಕಂಪ್ಲಿ ಎಂಎಲ್‍ಎ

    ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ – ಮುಂಬೈನಿಂದ ಗೋವಾಗೆ ಓಡಿಹೋದ ಕಂಪ್ಲಿ ಎಂಎಲ್‍ಎ

    ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಅವರು ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ ಮಾಡ್ತಿದ್ದಾರೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ದಿನಕ್ಕೊಂದು ಸಿಮ್ ಕಾರ್ಡ್ ಬಳಕೆ ಮಾಡ್ತಿರೋ ರೌಡಿ ಗಣೇಶ್, ಪೊಲೀಸರು ಫೋನ್ ಟ್ರ್ಯಾಪ್ ಮಾಡುವಷ್ಟರಲ್ಲಿ ಸ್ವಿಚ್ಛ್ ಆಫ್ ಮಾಡುತ್ತಾರಂತೆ. ಅಲ್ಲದೇ ಪದೇ ಪದೇ ಫೋನ್ ನಂಬರ್ ಬದಲಿಸ್ತಿದ್ದಾರಂತೆ. ಈ ಮೂಲಕ ಪೊಲೀಸರಿಗೆ ಸಿಗದಂತೆ ಗಣೇಶ್ ಓಡಾಡುತ್ತಿದ್ದಾರೆ.

    ಮುಂಬೈನ ಖಾಸಗಿ ಹೊಟೇಲ್ ನಲ್ಲಿದ್ದ ಗಣೇಶ್ ಅತೃಪ್ತ ಕಾಂಗ್ರೆಸ್ ಶಾಸಕರ ಜೊತೆ ಸಂಪರ್ಕ ಹೊಂದಿದ್ದರು. ಮುಂಬೈನ ಹೋಟೆಲ್ ನಲ್ಲಿ ಇದ್ದ ಬಗ್ಗೆ ಖಚಿತ ಮಾಹಿತಿ ಪಡೆದ ರಾಮನಗರ ಪೊಲೀಸರು ಮುಂಬೈ ಪೊಲೀಸರ ಸಹಾಯದಿಂದ ಗಣೇಶ್ ಬಂಧನಕ್ಕೆ ಮುಂದಾಗಿದ್ರು. ಆದ್ರೆ ಈ ವೇಳೆ ಗಣೇಶ್ ಹೋಟೆಲ್ ನಿಂದ ಗೋವಾಕ್ಕೆ ಎಸ್ಕೇಪ್ ಆಗಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಗೋವಾದಲ್ಲಿ ಶೋಧಕಾರ್ಯ ನಡೆಸಿದ್ದಾರೆ.

    ಒಂದೆಡೆ ಕೈ ನಾಯಕರಿಂದ ರಾಜೀ ಸಂಧಾನದ ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ ಕಮಲ ನಾಯಕರು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೋಮವಾರ ನಿರೀಕ್ಷಣಾ ಜಾಮೀನಿಗೆ ಗಣೇಶ್ ಪರ ವಕೀಲರು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ.

    ಜನವರಿ 20 ರಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಶಾಸಕ ಗಣೇಶ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=zFS05gjT06E

    https://www.youtube.com/watch?v=G6pvtwbmf3g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಮನಿಸಿ, ಈಗಾಗಲೇ ಆಧಾರ್ ಲಿಂಕ್ ಆಗಿರೋ ಸಿಮ್ ನಿಷ್ಕ್ರಿಯವಾಗಲ್ಲ

    ಗಮನಿಸಿ, ಈಗಾಗಲೇ ಆಧಾರ್ ಲಿಂಕ್ ಆಗಿರೋ ಸಿಮ್ ನಿಷ್ಕ್ರಿಯವಾಗಲ್ಲ

    ನವದೆಹಲಿ:  ಆಧಾರ್‌ನಿಂದ ಪಡೆದ ಸಿಮ್ ಕಾರ್ಡ್‌ಗಳು ಸುಪ್ರಿಂ ಕೋರ್ಟ್ ತೀರ್ಪಿನಿಂದ ನಿಷ್ಕ್ರಿಯಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

    ಆಧಾರ್ ಕಾರ್ಡ್ ಅನ್ನು ಸಿಮ್ ಕಾರ್ಡ್‌ಗಳಿಗೆ ಜೋಡನೆ ಮಾಡುವುದರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಸೋರಿಕೆ ಆಗುತ್ತಿರುವುದನ್ನ ತಡೆಯಲು ಸುಪ್ರಿಂ ಕೋರ್ಟ್ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಲು(ಕೆವೈಸಿ) ಆಧಾರ್ ಜೋಡನೆಯನ್ನು ನಿಲ್ಲಿಸಲು ಹೇಳಿತ್ತು. ಇದರಿಂದಾಗಿ ಗ್ರಾಹಕರಿಗೆ ಈ ಹಿಂದೆ ಆಧಾರ್ ನಿಂದ ಪಡೆದ ಸಿಮ್ ಕಾರ್ಡ್‌ಗಳ ಸೇವೆಯನ್ನ ನಿಷ್ಕ್ರಿಯಗೊಳಿಸುವ ಭಯ ಎದುರಾಗಿತ್ತು.

    ಟಿಲಿಕಾಂ ಸಚಿವಾಲಯ ಮತ್ತು ಆಧಾರ್ ಪ್ರಾಧಿಕಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿ, ಸುಪ್ರಿಂ ಕೋರ್ಟ್ ಆಧಾರ್ ಮೂಲಕ ಹೊಸ ಸಿಮ್ ಕಾರ್ಡ್‌ಗಳನ್ನ ಪಡೆಯುವುದನ್ನ ನಿಷೇಧಿಸಿದೆ. ಆದರೆ ಈ ಹಿಂದೆ ಆಧಾರ್ ಮೂಲಕ ಪಡೆದ ಸಿಮ್ ಕಾರ್ಡ್‌ಗಳನ್ನ ನಿಷ್ಕ್ರಿಯಗೊಳಿಸಿಲು ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

    ಗ್ರಾಹಕರು ತಮ್ಮ ಆಧಾರ್ ದಾಖಲೆಗಳನ್ನ ಬದಲಾಯಿಸಲು ಇಚ್ಛಿಸುವವರು ಸರ್ಕಾರಿಂದ ಗುರುತಿಸ್ಪಟ್ಟ ಗುರುತಿನ ಚೀಟಿ ಅಥವಾ ವಿಳಾಸವನ್ನ ಸ್ವಯಂಪ್ರೇರಿತವಾಗಿ ಸಲ್ಲಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದೆ.

    ಆಧಾರ್ ಮೇಲೆ ನಿರ್ಬಂಧ ಹೇರಿದೆಯೇ ಹೊರತು ಟೆಲಿಕಾಂ ಕಂಪನಿಗಳ ಮೇಲೆ ಹೇರಿಲ್ಲ. ಹೀಗಾಗಿ ಟೆಲಿಕಾಂ ಕಂಪನಿಗಳು ಆಧಾರ್ ಮೂಲಕ ಸಂಗ್ರಹಿಸಿಕೊಂಡಿರುವ ಗ್ರಾಹಕರ ಮಾಹಿತಿಗಳನ್ನು ಡಿಲೀಟ್ ಮಾಡುವ ಅಗತ್ಯವಿಲ್ಲ ಎನ್ನುವ ವಿಚಾರ ಹೇಳಿಕೆಯಲ್ಲಿದೆ.

    ದೇಶದ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸುಪ್ರಿಂ ಕೋರ್ಟ್ ಅಕ್ಟೋಬರ್ 15 ಒಳಗೆ ಆಧಾರ್ ವೆರಿಫಿಕೇಶನ್ ಅನ್ನು ನಿಲ್ಲಿಸಲು ಹೇಳಿತ್ತು. ಆದರೆ ಗ್ರಾಹಕರಿಗೆ ತಾವು ಈ ಹಿಂದೆ ಆಧಾರ್ ನಿಂದ ಪಡೆದ ಸಿಮ್ ಕಾರ್ಡ್‌ಗಳ ಸೇವೆಯನ್ನ ಕಡಿತಗೊಳಿಸಲಾಗುವುದು ಎಂಬ ಆತಂಕ ಮೂಡಿತ್ತು. ಆದರೆ ಈಗ ಆ ಎಲ್ಲಾ ಅನುಮಾನ ಮತ್ತು ಆತಂಕಗಳಿಗೆ ಬ್ರೇಕ್ ಸಿಕ್ಕಂತೆ ಆಗಿದೆ.

    ಆಧಾರ್ ಮೇಲಿನ ದಾಳಿ ಸಂವಿಧಾನದ ಮೇಲೆ ದಾಳಿ ನಡೆಸಿದಂತೆ ಆಗುತ್ತದೆ. ಆಧಾರ್ ವಿಶಿಷ್ಟವಾಗಿರುವುದೇ ಉತ್ತಮವಾಗಿದ್ದು, ಈಗಾಗಲೇ ಆಧಾರ್ ಜನ ಸಾಮನ್ಯ ಬಳಿ ತಲುಪಿದ್ದು, ಅದು ದೇಶದ ಗುರುತಿನ ಪತ್ರವಾಗಿದೆ. ಈಗ ಆಧಾರ್ ವಿರೋಧಿಸಿದರೆ ಕೈಯಲ್ಲಿರುವ ಮಗುವನ್ನ ಎಸೆದಂತೆ. ಆಧಾರ್ ವಿರೋಧಿಸಿದ್ರೆ ಸಂವಿಧಾನ ವಿರೋಧಿಸಿದಂತೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಆಧಾರ್‌ಗೆ ಸಾಂವಿಧಾನಿಕಾ ಮಾನ್ಯತೆಯನ್ನು ಕೋರ್ಟ್ ನೀಡಿದ್ದರೂ ಸಿಮ್ ಖರೀದಿಗೆ ಕಡ್ಡಾಯ ಮಾಡಕೂಡದು ಎಂದು ಹೇಳಿತ್ತು.

    ಆಧಾರ್ ಯಾವುದಕ್ಕೆ ಬೇಕು?
    ಸರ್ಕಾರಿ ಸೌಲಭ್ಯ, ಪ್ಯಾನ್, ಆದಾಯ ತೆರಿಗೆ (ಐಟಿ ರಿಟನ್ರ್ಸ್), ಆಸ್ತಿ ಖರೀದಿ, ಪ್ಯಾನ್ ನಂಬರ್, ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಿಗೆ ಆಧಾರ್ ಕಡ್ಡಾಯಗೊಳಿಸಲಾಗಿದೆ.

    ಆಧಾರ್ ಯಾವುದಕ್ಕೆ ಬೇಡ?
    1. ಖಾಸಗಿ ಸಂಸ್ಥೆಗಳು ಆಧಾರ್ ಕೇಳುವಂತಿಲ್ಲ
    2. ಆಧಾರ್ ಮಾಹಿತಿ ಅಥವಾ ದತ್ತಾಂಶವನ್ನು 6 ತಿಂಗಳಕ್ಕೂ ಹೆಚ್ಚಿನ ಕಾಲ ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ.
    3. ಎಲ್ಲ ಬ್ಯಾಂಕ್‍ಗಳಿಗೆ ಆಧಾರ್ ಮಾಹಿತಿ ಕೊಡುವಂತಿಲ್ಲ.
    4. ಸೆಕ್ಷನ್ 7ರ ಪ್ರಕಾರ ಶಾಲೆಗಳ ಪ್ರವೇಶಾತಿ ವೇಳೆ ಆಧಾರ್ ಕೊಡುವ ಅಗತ್ಯವಿಲ್ಲ.
    5. ಸಿಬಿಎಸ್‍ಸಿ, ಯುಜಿಸಿ, ನೀಟ್ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ.
    6. ಸಿಮ್ ಖರೀದಿ, ಪೇಟಿಎಂ, ಫೋನ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಆ್ಯಯಪ್ ಗಳಿಗೆ ಕಡ್ಡಾಯವಲ್ಲ.
    7. ಸೆಕ್ಷನ್ 2(ಬಿ) ಅಕ್ರಮ ವಲಸಿಗರಿಗೆ ಆಧಾರ್ ಕೊಡುವಂತಿಲ್ಲ.
    8. ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆಯಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • 13 ಡಿಜಿಟ್‍ಗೆ ಮೊಬೈಲ್ ನಂಬರ್ ಬದಲಾಗಲ್ಲ – ದಯವಿಟ್ಟು ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    13 ಡಿಜಿಟ್‍ಗೆ ಮೊಬೈಲ್ ನಂಬರ್ ಬದಲಾಗಲ್ಲ – ದಯವಿಟ್ಟು ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ನವದೆಹಲಿ: “ಜುಲೈ 1ರಿಂದ 10 ಸಂಖ್ಯೆಯ ಮೊಬೈಲ್ ನಂಬರ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಬೇಕು. 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಎಲ್ಲ ಟೆಲಿಕಾಂ ಕಂಪೆನಿಗಳಿಗೆ ದೂರ ಸಂಪರ್ಕ ಸಚಿವಾಲಯ ಇಲಾಖೆ ಆದೇಶ ನೀಡಿದೆ”

    ಈ ಮೇಲಿನ ವಾಕ್ಯಗಳಿರುವ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ, ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ದಯವಿಟ್ಟು ಯಾರು ಈ ಸಂದೇಶವನ್ನು ಶೇರ್ ಮಾಡಬೇಡಿ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರೂ ಗಾಬರಿಯಾಗಿ ಗೊಂದಲಕ್ಕೆ ಬೀಳಬೇಡಿ. ಮೊಬೈಲ್ ಸಂಖ್ಯೆಗಳು ಈಗ ಹೇಗೆ 10 ಸಂಖ್ಯೆಗಳು ಇದೆಯೋ ಅದು ಹಾಗೆಯೇ ಮುಂದುವರಿಯುತ್ತದೆ.

    ಸರಿ ಹಾಗಾದ್ರೆ ಯಾವುದಕ್ಕೆ 13 ನಂಬರ್?
    ದೂರಸಂಪರ್ಕ ಇಲಾಖೆಯ (ಡಿಓಟಿ) ಆದೇಶ ಮೆಷಿನ್ ಟು ಮೆಷಿನ್(ಎಂ2ಎಂ) ಸಿಮ್ ಗಳಿಗೆ ಮಾತ್ರ ಸೀಮಿತವಾಗಿದ್ದು ಪೀರ್ ಟು ಪೀರ್(ಪಿ2ಪಿ) ಸಿಮ್ ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಸುಳ್ಳು ಸುದ್ದಿ ಪ್ರಕಟವಾಗುತ್ತಿದ್ದಂತೆ ಟೆಲಿಕಾಂ ಕಂಪೆನಿಗಳಾದ ಏರ್‍ಟೆಲ್, ರಿಲಯನ್ಸ್ ಜಿಯೋ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಯಾವುದೇ ಕಾರಣಕ್ಕೂ ಗ್ರಾಹಕರ ನಂಬರ್ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದೆ.

    ಏನಿದು ಎಂ2ಎಂ?
    ಸುಲಭವಾಗಿ ಸರಳವಾಗಿ ಹೇಳುವುದಾದರೆ ದೂರದಲ್ಲಿರುವ ಯಂತ್ರಗಳನ್ನು ನಿಮ್ಮ ಮೊಬೈಲ್ ಮೂಲಕವೇ ನಿಯಂತ್ರಿಸಬಹುದಾದ ವ್ಯವಸ್ಥೆ. ವೈರ್‌ಲೆಸ್‌ ಮೂಲಕ ಎರಡು ಸಾಧನಗಳನ್ನು ಪರಸ್ಪರ ಕೆಲಸಕ್ಕಾಗಿ ಜೋಡಿಸುವ ಹೊಸ ಪೀಳಿಗೆಯ ತಂತ್ರಜ್ಞಾನವೇ ಎಂ2ಎಂ. ಕಾರುಗಳು, ವಿದ್ಯುತ್ ಮೀಟರ್, ಸ್ವೈಪಿಂಗ್ ಯಂತ್ರಗಳಿಗೆ ಎಂ2ಎಂ ಸಂಖ್ಯೆಗಳಿರುವ ಸಿಮ್ ಗಳನ್ನು ನೀಡಲಾಗುತ್ತದೆ.

    ಡಿಓಟಿ ಆದೇಶದಲ್ಲಿ ಏನಿದೆ?
    ಪ್ರಸ್ತುತ ಇರುವ 10 ಅಂಕಿಗಳ ಸಂಖ್ಯೆಯಿಂದ 13 ಅಂಕಿಗಳ ಸಂಖ್ಯೆಗೆ ಬದಲಾವಣೆ ಪ್ರಕ್ರಿಯೆ 2018ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳಬೇಕಿದೆ. 2018ರ ಜುಲೈ 1ರಿಂದ ವಿತರಣೆಯಾಗಲಿರುವ ಎಲ್ಲ ಹೊಸ ಎಂ2ಎಂ ಸಂಖ್ಯೆಗಳು 13 ಅಂಕಿಗಳದ್ದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

    ಸುಳ್ಳು ಸುದ್ದಿ ಪ್ರಸಾರ ಆಗಿದ್ದು ಹೇಗೆ?
    ಮೆಷಿನ್ ಟು ಮೆಷಿನ್(ಎಂ2ಎಂ)ಗಳಿಗೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದ್ದರೂ ಇದೂ ಪೀರ್ ಟು ಪೀರ್(ಪಿ2ಪಿ) ಗ್ರಾಹಕರಿಗೂ ಅನ್ವಯವಾಗುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಪ್ರಕಟಿಸಿದ್ದರಿಂದ ಸುಳ್ಳು ಸುದ್ದಿ ಈಗ ಸೃಷ್ಟಿಯಾಗಿದೆ.

    ಎಂ2ಎಂ ತಂತ್ರಜ್ಞಾನ ಹೇಗೆ ಭಿನ್ನ?
    ಈಗ ನೀವು ನಿಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಹಾಕಿದ್ದೀರಿ ಎಂದು ಭಾವಿಸಿಕೊಳ್ಳಿ. ಕ್ಯಾಮೆರಾ ತನ್ನ ಮುಂದುಗಡೆ ಏನು ನಡೆಯುತ್ತಿರುತ್ತದೋ ಆ ಎಲ್ಲ ದೃಶ್ಯಗಳನ್ನು ಮಾತ್ರ ಸೆರೆಹಿಡಿಯುತ್ತದೆ. ಅಂದರೆ ಸಿಸಿ ಕ್ಯಾಮೆರಾ ನಿಮ್ಮ ಮನೆಗೆ ನುಗ್ಗಿದ ಕಳ್ಳನ ಚಲನವಲನಗಳನ್ನು ಸೆರೆ ಹಿಡಿಯಬಹುದೇ ವಿನಾಃ ಕಳ್ಳತನವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಎಂ2ಎ ತಂತ್ರಜ್ಞಾನದಲ್ಲಿ ಕಳ್ಳತನವನ್ನು ತಡೆಯಬಹುದು. ಹೌದು. ಎಂ2ಎಂ ಅಪ್ಲಿಕೇಶನ್ ಆಧಾರಿತ ಕ್ಷೇತ್ರದಲ್ಲಿ ಮೊಬೈಲ್ ಫೋನ್‍ ನಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿ ದೂರದಲ್ಲಿರುವ ಯಂತ್ರಗಳನ್ನು ನಿಯಂತ್ರಿಸಿ ಕಳ್ಳತನವನ್ನು ತಡೆಯಬಹುದು.

    ವೈರ್‌ಲೆಸ್‌ ಕ್ಯಾಮೆರಾಗಳನ್ನು ಮನೆಯಲ್ಲಿ ನಿಮಗೆ ಎಲ್ಲಿ ಬೇಕೋ ಅಲ್ಲಿ ಅಳವಡಿಸಿದರೆ ಆಯ್ತು. ಈ ಸ್ಮಾರ್ಟ್ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯವನ್ನು ಮೊಬೈಲ್ ಮೂಲಕವೇ ವೀಕ್ಷಿಸಬಹುದು. ಕ್ಯಾಮೆರಾವನ್ನು ಯಾವ ಕಡೆಗೂ ಬೇಕಾದರೂ ತಿರುಗಿಸಿ ಝೂಮ್ ಮಾಡಬಹುದು. ಯಾರಾದರೂ ಪ್ರವೇಶಿಸಿದ್ದಲ್ಲಿ ಎಂ2ಎಂ ಅಪ್ಲಿಕೇಶನ್ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಲು ಸಾಧ್ಯವಿದೆ. ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಎಂ2ಎಂ ಸಿಮ್ ಯಾರು ಕೊಡ್ತಾರೆ?
    ವಿದೇಶದಲ್ಲಿ ಈ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದ್ದರೂ ಭಾರತದಲ್ಲಿ ಈಗಷ್ಟೇ ಹೆಚ್ಚು ಬಳಕೆಯಾಗುತ್ತಿದೆ. ಸ್ವೈಪಿಂಗ್ ಯಂತ್ರಗಳಲ್ಲಿ ಈ ತಂತ್ರಜ್ಞಾನವೇ ಬಳಕೆ ಆಗುತ್ತಿದೆ. ಬಿಎಸ್‍ಎನ್‍ಎಲ್, ಏರ್‍ಟೆಲ್, ವೊಡಾಫೋನ್, ಆರ್ ಕಾಂ ಕಂಪೆನಿಗಳು ಎಂ2ಎಂ ಸಿಮ್ ನೀಡುತ್ತಿವೆ. ಏರ್‍ಟೆಲ್ ಸ್ಮಾರ್ಟ್ ಮೀಟರ್, ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ ನಂತಹ ಸೌಲಭ್ಯಗಳನ್ನು ನೀಡುತ್ತಿದೆ.  ಇದನ್ನೂ ಓದಿ: ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ