Tag: ಸಿದ್ದು ನಿಜಕನಸುಗಳು

  • ಸ್ಯಾಂಟ್ರೋ ರವಿಗೆ ಕುಮಾರಕೃಪಾ ಹೊಸದಲ್ಲ – ಬಿ.ಸಿ ನಾಗೇಶ್

    ಸ್ಯಾಂಟ್ರೋ ರವಿಗೆ ಕುಮಾರಕೃಪಾ ಹೊಸದಲ್ಲ – ಬಿ.ಸಿ ನಾಗೇಶ್

    ಹಾಸನ: ಸ್ಯಾಂಟ್ರೋ ರವಿಗೆ (Santro Ravi) ವಿಧಾನಸೌಧ (Vidhana Soudha), ಕುಮಾರಕೃಪಾ, ಮಿನಿಸ್ಟರ್‌ಗಳು ಯಾವುದೂ ಹೊಸದಲ್ಲ. ಯಾರೂ ಮಿನಿಸ್ಟರ್ ಆಗ್ತಾರೋ, ಯಾವ ಪಕ್ಷದವರು ಆಗ್ತಾರೋ ಅವರ ಜೊತೆ ಇದ್ದಾನೆ. ಈ ಮಾಹಿತಿಯನ್ನ ಪೊಲೀಸರೇ ಹೇಳಿರುವುದಾಗಿ ಸಚಿವ ಬಿ.ಡಿ ನಾಗೇಶ್ (BC Nagesh) ತಿಳಿಸಿದ್ದಾರೆ.

    ಹಾಸನದಲ್ಲಿ (Hassan) ಸ್ಯಾಂಟ್ರೋ ರವಿ ಜೊತೆ ಬಿಜೆಪಿ (BJP) ಸಚಿವರ ಸಂಪರ್ಕ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಇವತ್ತು ವಿಧಾನಸೌಧಕ್ಕೆ ಬಂದವನಲ್ಲ. ಮೊದಲ ಬಾರಿಗೆ ಕೇಸ್ ದಾಖಲಾಗಿದೆ. ಅವನು ಯಾರು? ಅವನ ಇತಿಹಾಸ ಏನು ನನಗೆ ಗೊತ್ತಿಲ್ಲ. ಸಿಎಂ ಪೂರ್ಣ ವಿವರಗಳನ್ನ ತೆಗೆದುಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ. ಎಫ್‌ಐರ್‌ಆರ್ ದಾಖಲಾಗಿದೆ. ನಮ್ಮ ಸರ್ಕಾರ ಯಾವುದೇ ಆರೋಪಿಯನ್ನು ರಕ್ಷಣೆ ಮಾಡುವ ಸರ್ಕಾರ ಅಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೈವ ಶಕ್ತಿಯಿದ್ದವರಿಗೆ ಕ್ಯಾನ್ಸರ್ ಗೆಲ್ಲುವ ಶಕ್ತಿಯಿದೆ: ಬೊಮ್ಮಾಯಿ

    ಹೆಚ್‌ಡಿಕೆ (HD Kumaraswamy) ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಗೃಹ ಸಚಿವರ ಜೊತೆ ನಿಂತು ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಎಲ್ಲವೂ ಗೊತ್ತಿದೆ. ಈಗ ಸಾರ್ವಜನಿಕ ಜೀವನದಲ್ಲಿ ಮೊಬೈಲ್ ಬಂದ್ಮೇಲೆ ಯಾರ ಫೋಟೋ ಯಾರು ತೆಗೆದುಕೊಂಡಿರ್ತಾರೆ ಯಾರಿಗೂ ಗೊತ್ತಾಗಲ್ಲ. ಕುಮಾರಸ್ವಾಮಿ ಅವರೂ ಸಾಕ್ಷ್ಯಾಧಾರಗಳಿಲ್ಲದೇ ಆರೋಪ ಮಾಡ್ತಾರೆ. ಅದಕ್ಕೆ ಬೆಲೆಯಿಲ್ಲ. ಎಲೆಕ್ಷನ್ ಟೈಮಲ್ಲಿ ವೋಟು ತೆಗೆದುಕೊಳ್ಳುವುದಕ್ಕೋಸ್ಕರ ಮಾತನಾಡುವ ಮಾತಿಗೆ ಬೆಲೆ ಇಲ್ಲ. ತನಿಖೆಯಲ್ಲಿ ಯಾರು ಬಲಿಪಶು ಆಗಿದ್ದಾರೆ ಅನ್ನೋದು ಗೊತ್ತಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ಕೋಪಿಸಿಕೊಂಡಿದ್ದಾಳೆ, ಸಮಾಧಾನ ಮಾಡ್ಬೇಕು ರಜೆ ಕೊಡಿ- ಅರ್ಜಿ ಬರೆದ ಕಾನ್ಸ್‌ಟೇಬಲ್

    `ಸಿದ್ದು ನಿಜಕನಸುಗಳು’  (Siddu NijaKanasugalu) ಕೃತಿಗೆ ತಡೆಯಾಜ್ಞೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಜಾಪ್ರಭುತ್ವವಾದಿ ನಾಯಕ. ಅವರ ಕಡೆಯವರು ಪುಸ್ತಕದಲ್ಲಿ ಏನಿದೆ ಅಂತಾ ನೋಡದೆ ತಡೆಯಾಜ್ಞೆ ತರ್ತಾರೆ ಅಂದ್ರೆ ನಮಗೇನು ಅರ್ಥ ಆಗ್ತಿಲ್ಲ. ನಮ್ಮ ಸರಸ್ವತಿ ಬಗ್ಗೆ ಕೆಟ್ಟದಾಗಿ ಬರೆದಾಗ, ಗಣೇಶ ಮೂರ್ತಿ ಬಗ್ಗೆ ಕೆಟ್ಟದಾಗಿ ಬರೆದಾಗ ಅವರಿಗೆ ಸ್ವಾತಂತ್ರ್ಯವಿದೆ. ಹೇಗೆ ಬೇಕಾದ್ರೂ ಬರೆದುಕೊಳ್ಳಬಹುದು ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಈಗ ಪುಸ್ತಕ ಬಿಡುಗಡೆ ಆಗೋದಕ್ಕೂ ಮುನ್ನವೇ ತಡೆಯಾಜ್ಞೆ ತಂದಿರೋದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟಿಪ್ಪು ನಿಜಕನಸುಗಳು ಮಾದರಿಯಲ್ಲಿ ಸಿದ್ದು ನಿಜಕನಸುಗಳು ಪುಸ್ತಕ ಇಂದು ಬಿಡುಗಡೆ

    ಟಿಪ್ಪು ನಿಜಕನಸುಗಳು ಮಾದರಿಯಲ್ಲಿ ಸಿದ್ದು ನಿಜಕನಸುಗಳು ಪುಸ್ತಕ ಇಂದು ಬಿಡುಗಡೆ

    ಬೆಂಗಳೂರು: ರಂಗಾಯಣದ ಅಡ್ಡಂಡ ಕಾರ್ಯಪ್ಪನವರ ಟಿಪ್ಪು (Tipp Nija Kanasugalu) ನಿಜ ಕನಸುಗಳು ಪುಸ್ತಕ (Book) ಕರ್ನಾಟಕದಲ್ಲಿ ವಿವಾದವನ್ನು ಸೃಷ್ಟಿಸಿತ್ತು. ಈಗ ಅದೇ ಮಾದರಿಯಲ್ಲಿ ಸಿದ್ದು ನಿಜಕನಸುಗಳು (Siddu Nija Kanasugalu) ಪುಸ್ತಕ ಸೋಮವಾರ ಲೋಕಾರ್ಪಣೆಗೊಳ್ಳಲಿದೆ.

    ಸಚಿವ ಅಶ್ವಥ್ ನಾರಾಯಣ (Dr. Ashwathnarayan) ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಚಿಂತಕ ರೋಹಿತ್ ಚಕ್ರತೀರ್ಥ, ಪತ್ರಕರ್ತ ಸಂತೋಷ್ ತಮ್ಮಯ್ಯ, ಸಂವಾದದ ಸಂಪಾದಕ ವೃಷಾಂಕ್ ಭಟ್, ಬರಹಗಾರ ರಾಕೇಶ್ ಶೆಟ್ಟಿ ಉಪಸ್ಥಿತಿ ಇರಲಿದ್ದು, ಪರಿಷತ್ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಜೊತೆ ಪ್ರಾಮಿಸ್ ಪಾಲಿಟಿಕ್ಸ್

    ಚುನಾವಣಾ ಹೊಸ್ತಿಲಲ್ಲಿ ಟಿಪ್ಪುವಿಗೆ ಹೋಲಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತಾದ ಪುಸ್ತಕ ಹೊರಬರುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಟಿಪ್ಪು ನಿಜಕನಸುಗಳು ಪುಸ್ತಕದಲ್ಲಿ ಈಗಾಗಲೇ ಟಿಪ್ಪು ಮತಾಂಧ, ಕ್ರೂರಿ ಅಂತಾ ಬಿಂಬಿಸಲಾಗಿದ್ದು ಅದೇ ಟಿಪ್ಪುವನ್ನು ಸಿದ್ದುವಿಗೆ ಹೋಲಿಸಿ ಸಿದ್ದರಾಮಯ್ಯ ಹಿಂದೂ ವಿರೋಧಿ ಧೋರಣೆ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಮವಾರ ಸಂಜೆ ಮೂರು ಗಂಟೆಗೆ ಟೌನ್ ಹಾಲ್‍ನಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಇದನ್ನೂ ಓದಿ: ದೇವೇಗೌಡರ ಫೋಟೋ ಹಿಡಿದು ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಅಭಿಮಾನಿಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k