Tag: ಸಿಡಿ ಕೇಸ್

  • ಡಿ.ಕೆ.ಶಿವಕುಮಾರ್ ಒಳ್ಳೆಯವರು, ರಾಜೀನಾಮೆ ನೀಡಬಾರದು: ರಮೇಶ್ ಜಾರಕಿಹೊಳಿ

    ಡಿ.ಕೆ.ಶಿವಕುಮಾರ್ ಒಳ್ಳೆಯವರು, ರಾಜೀನಾಮೆ ನೀಡಬಾರದು: ರಮೇಶ್ ಜಾರಕಿಹೊಳಿ

    – ನಾಳೆ ಸಂಜೆ ಇನ್ನೂ ದೊಡ್ಡದು ಹೊರ ಬರುತ್ತೆ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ಹಳೆಯ ಗೆಳೆಯ, ಇನ್ನು ಮುಂದೆ ನೋಡೋಣ. ನನ್ನಂತೆ ಅವರಿಗೆ ಅನ್ಯಾಯವಾಗುವುದು ಬೇಡ, ಅವರು ಒಳ್ಳೆಯವರು, ರಾಜೀನಾಮೆ ನೀಡಬಾರದು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಡಿಕೆಶಿ ಮೇಲೆ ಅನುಕಂಪ ತೋರಿಸಿದ್ದಾರೆ.

    ಸಿಡಿ ಲೇಡಿಯವರದ್ದು ಎನ್ನಲಾದ ಫೋನ್ ಕಾಲ್ ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿದ್ದು, ಇದರಿಂದಾಗಿ ಸಿಡಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಂತಾಗಿದೆ. ಈ ಬಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ, ಡಿಕೆಶಿ ನನ್ನ ಹಳೆಯ ಗೆಳೆಯ, ಇನ್ನು ಮುಂದೆ ನೋಡೋಣ, ಅವನಿಗೆ ತೊಂದರೆಬಾರದು ಎಂದು ಹೇಳಿದ್ದಾರೆ.

    ಫೋನ್ ಕಾಲ್ ಆಡಿಯೋದಲ್ಲಿ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದನ್ನು ಮಾಧ್ಯಮಗಳಲ್ಲಿ ನೋಡಿದೆ. ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ, ಅವರಿಗೆ ಅನ್ಯಾಯ ಆಗೋದು ಬೇಡ. ನನ್ನಂತೆ  ರಾಜಿನಾಮೆ ಕೊಡುವುದು ಬೇಡ, ಅವರು ಚೆನ್ನಾಗಿರಲಿ. ನನ್ನ ಹಳೆಯ ಸ್ನೇಹಿತರು, ಕಷ್ಟದಲ್ಲಿ ನನ್ನ ಜೊತೆಗಿದ್ದರು. ಅವರು ರಾಜ್ಯ ಸುತ್ತಬೇಕು, ರಾಜೀನಾಮೆ ನೀಡುವುದು ಬೇಡ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

    ದೊಡ್ಡ ಸುದ್ದಿ ಬಹಿರಂಗ
    ನಾಳೆ ಸಂಜೆವರೆಗೂ ಕಾದು ನೋಡಿ, ಇನ್ನು ದೊಡ್ಡ ಪ್ರಮಾಣದಲ್ಲಿ ಎಲ್ಲ ರಿಲೀಸ್ ಆಗಲಿದೆ. ನಾಳೆ 4 ರಿಂದ 6 ಗಂಟೆಗೆ ದೊಡ್ಡ ವಿಷಯ ಬಹಿರಂಗ ಮಾಡುತ್ತೇನೆ. ನಾಳೆ ಇನ್ನು ದೊಡ್ಡದು ಹೊರಗೆ ಬರುತ್ತೆ. ಇಂದು ರಿಲೀಸ್ ಆಗಿರುವ ಆಡಿಯೋಗೂ ನಮಗೂ ಸಂಬಂಧವಿಲ್ಲ. ನಾಳೆವರೆಗೂ ಮಾತನಾಡಬೇಡಿ ಎಂದು ವಕೀಲರು ಹೇಳಿದ್ದಾರೆ. ನಾಳೆ 4-6 ಗಂಟೆಗೆ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಕಾದು ನೋಡಿ ಎಂದು ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

    302 ಕೇಸ್ ದಾಖಲಿಸಲಿ ನಾನು ಹೆದರುವುದಿಲ್ಲ. ಎಫ್‍ಐಆರ್ ಹಾಕಿದ ತಕ್ಷಣ ಆರೋಪಿ ಅಲ್ಲ. ನಾನು ಯಾವುದೇ ಕಾರಣಕ್ಕೂ ಜಾಮೀನು ಪಡೆಯುವುದಿಲ್ಲ. ನನ್ನ ಎಫ್‍ಐಆರ್ ಮೊದಲು ತನಿಖೆ ಆಗಬೇಕು, ನನ್ನ ತಪ್ಪಿದ್ದರೆ ನನಗೆ ಶಿಕ್ಷೆ ಆಗಲಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

  • ನಾನು ಡಿ.ಕೆ.ಶಿವಕುಮಾರ್ ಮನೆ ಬಳಿಯೇ ಇದ್ದೇನೆ, ಯಾವುದೇ ಕಾರಣಕ್ಕೂ ಹೆದರಬೇಡಿ- ಯುವತಿಯ ಫೋನ್‌ ಕಾಲ್‌ ಲೀಕ್‌

    ನಾನು ಡಿ.ಕೆ.ಶಿವಕುಮಾರ್ ಮನೆ ಬಳಿಯೇ ಇದ್ದೇನೆ, ಯಾವುದೇ ಕಾರಣಕ್ಕೂ ಹೆದರಬೇಡಿ- ಯುವತಿಯ ಫೋನ್‌ ಕಾಲ್‌ ಲೀಕ್‌

    ಬೆಂಗಳೂರು: ತೀವ್ರ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕ್ಷಣಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಸಿಡಿ ಲೇಡಿ ಫೋನ್ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಆ ಮಹಾ ನಾಯಕ ಡಿಕೆಶಿ ನಾ ಎಂಬ ಪ್ರಶ್ನೆ ಎದ್ದಿದೆ.

    ಸಿಡಿ ಲೇಡಿ ಸಹೋದರ ಹಾಗೂ ತಾಯಿ ಜೊತೆ ಮಾತನಾಡಿದ್ದು, ಈ ಫೋನ್ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು 3 ಕಡೆಗಳಲ್ಲಿ ಪ್ರಸ್ತಾಪ ಮಾಡಲಾಗಿದೆ. ನಾನು ಡಿ.ಕೆ.ಶಿವಕುಮಾರ್ ಮನೆಯ ಬಳಿ ಇದ್ದೇನೆ ಯಾವುದೇ ಕಾರಣಕ್ಕೂ ಹೆದರಬೇಡಿ ಎಂದು ಮನೆಯವರಿಗೆ ಸಿಡಿ ಲೇಡಿ ಹೇಳಿದ್ದಾರೆ. ಅಲ್ಲದೆ ವೀಡಿಯೋದಲ್ಲಿರುವುದು ನಾನಲ್ಲ ಅದು ಗ್ರಾಫಿಕ್ಸ್, ನಿನ್ನ ಮೇಲೆ, ದೇವರ ಮೇಲೆ ಆಣೆ ವೀಡಿಯೋದಲ್ಲಿರುವುದು ನಾನಲ್ಲ ಎಂದು ಯುವತಿ ತನ್ನ ತಾಯಿಗೆ ಹೇಳಿದ್ದಾರೆ.

    ವೀಡಿಯೋದಲ್ಲಿರುವುದು ನಾನಲ್ಲ ಅದು ಗ್ರಾಫಿಕ್ಸ್, ನೀನಾದರೂ ನಂಬು ಎಂದು ಸಹೋದರನಿಗೆ ತಿಳಿಸಿದ್ದಾರೆ. ಅಲ್ಲದೆ ನಾನು ಡಿ.ಕೆ.ಶಿವಕುಮಾರ್ ಮನೆ ಬಳಿಯೇ ಇದ್ದೇನೆ ಯಾವುದೇ ಕಾರಣಕ್ಕೂ ಹೆದರಬೇಡಿ. ಎಲ್ಲವೂ ಸರಿ ಮಾಡ್ತಾರೆ, ಎಲ್ಲವನ್ನೂ ಸರಿ ಮಾಡಿಕೊಂಡು ಮನೆಗೆ ಬರುತ್ತೇನೆ ಎಂದು ಸಹೋದರ ಹಾಗೂ ತಾಯಿಗೆ ಯುವತಿ ಧೈರ್ಯ ಹೇಳಿದ್ದಾರೆ.

    ಜಾರಕಿಹೊಳಿ ವಿರುದ್ಧ ಎಫ್‍ಐಆರ್
    ಇಂದು ಬೆಳಗ್ಗೆ ಸಿಡಿ ಲೇಡಿ ವೀಡಿಯೋ ಬಿಡುಗಡೆ ಮಾಡಿ, ಬಳಿಕ ವಕೀಲರ ಮೂಲಕ ದೂರನ್ನೂ ಸಲ್ಲಿಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‍ಐಆರ್ ಸಹ ದಾಖಲಾಗಿದೆ. ಸಿಡಿ ಯುವತಿಯ ಪರವಾಗಿ ವಕೀಲ ಜಗದೀಶ್ ದೂರು ನೀಡಿದ ಬೆನ್ನಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ.

    ಐಪಿಸಿ ಸೆಕ್ಷನ್ 376 ಸಿ (ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ) 417(ವಂಚನೆ) ಅಡಿ ಅಲ್ಲದೇ ವಿಡಿಯೋ ಹೊರ ಹಾಕಿದ್ದಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ. ರೇಪ್ ಆರೋಪ ಸಾಬೀತಾದರೆ 6-10 ವರ್ಷ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

    ಸಿಡಿ ಲೇಡಿ ಮಾಡಿರುವ ಆರೋಪ ಏನು?
    ಕೆಲಸ ಕೊಡಿಸುವುದಾಗಿ ವಂಚನೆ, ಜಾರಕಿಹೊಳಿಯಿಂದಲೇ ಸಿಡಿ ಬಿಡುಗಡೆ, ತನ್ನನ್ನು ಬಳಸಿಕೊಂಡಿರುವ ಆರೋಪ, ದೆಹಲಿಯಿಂದ ವಿಡಿಯೋ ಕಾಲ್ ಮಾಡಿ ಅಶ್ಲೀಲ ಮಾತು, ಕೆಲಸ ಕೇಳಿದ್ದಕ್ಕೆ ಜೀವ ಬೆದರಿಕೆ, ನನ್ನ ತಂದೆ-ತಾಯಿಗೂ ಬೆದರಿಕೆ, ಇದು ಅಸಲಿ ಸಿಡಿಯಾಗಿದ್ದು ಸಾರ್ವಜನಿಕ ಹುದ್ದೆಯಲ್ಲಿದ್ದು ಕೆಲಸ ಕೊಡಿಸುವುದಾಗಿ ವಂಚಿಸಿದ್ದಾರೆ.

    ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಎಸ್‍ಐಟಿ ಪೊಲೀಸರು ವಕೀಲರ ಮೂಲಕ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ದೂರು ನೀಡಿದ್ದಾರೆ.

  • ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬರ್ತಾರೆ: ವಕೀಲ ಜಗದೀಶ್

    ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬರ್ತಾರೆ: ವಕೀಲ ಜಗದೀಶ್

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇಂದು ಸಿಡಿ ಲೇಡಿ ಮತ್ತೊಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ವಕೀಲರ ಮೂಲಕ ದೂರನ್ನೂ ಸಹ ಸಲ್ಲಿಸಿದ್ದಾರೆ. ಈ ಬಗ್ಗೆ ಸಿಡಿ ಲೇಡಿ ಪರ ವಕೀಲ ಜಗದೀಶ್ ಮಹಾದೇವನ್ ಮಾತನಾಡಿದ್ದು, ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಬರುತ್ತಾರೆ ಎಂದು ತಿಳಿಸಿದ್ದಾರೆ.

    ಈ ಕರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಆಕೆಯ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದರೆ ಸಾಕು ಇನ್ನೆರಡು ದಿನಗಳಲ್ಲಿ ಸಿಡಿ ಲೇಡಿ ಹೊರಗೆ ಬರುತ್ತಾರೆ. ಆದರೆ ಇಂದು ಪೊಲೀಸ್ ಆಯುಕ್ತರು ಭರವಸೆ ನೀಡಬೇಕು. ಯುವತಿ ಎರಡ್ಮೂರು ವೀಡಿಯೋಗಳನ್ನು ಬಿಡುಗಡೆ ಮಾಡಿದರೂ ಗೃಹ ಇಲಾಖೆ, ಎಸ್‍ಐಟಿ, ಪೊಲೀಸರು ಅವರ ಕುಟುಂಬಕ್ಕೆ ರಕ್ಷಣೆ ನೀಡಿಲ್ಲ. ಸಿಡಿ ಪ್ರಕರಣದ ಸಂಪೂರ್ಣ ವಿವರಗಳನ್ನು ಯುವತಿ ನೀಡಿದ್ದಾರೆ. ಅಲ್ಲದೆ ಎರಡು ಪುಟದ ದೂರನ್ನು ಸಹ ಕೈಯ್ಯಲ್ಲಿ ಬರೆದು ಕೊಟ್ಟಿದ್ದಾರೆ. ಇಂದು ನಮ್ಮ ವಕೀಲರ ತಂಡ ಅದನ್ನು ಕಬ್ಬನ್ ಪಾರ್ಕ್ ಪೊಲೀಸರಿಗೆ ನೀಡಲಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ರೇಪ್ ಕೇಸ್ ಹಾಕಿದರೂ ಎದುರಿಸಲು ಸಿದ್ಧ: ರಮೇಶ್ ಜಾರಕಿಹೊಳಿ

    ಎರಡು ಪುಟಗಳ ದೂರು ನೀಡಿದ್ದು, ಇದರಲ್ಲಿ ಜಾರಕಿಹೊಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅನ್ನಿಸುತ್ತದೆ. ಭದ್ರತೆ ದೃಷ್ಟಿಯಿಂದ ಯುವತಿ ನನ್ನನ್ನು ಸಂಪರ್ಕಿಸಿ ಮಾತನಾಡಿದ್ದಾರೋ ಇಲ್ಲವೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ ಆಕೆಯ ದೂರು ಸ್ಟ್ರಾಂಗ್ ಆಗಿದೆ. ಅತ್ಯಾಚಾರ ಕೇಸ್ ದಾಖಲಾಗುತ್ತೋ ಕಾದು ನೋಡಬೇಕಿದೆ. ಅಧಿಕಾರ ದುರ್ಬಳಕೆ ಪ್ರಕರಣವಂತೂ ದಾಖಲಾಗುತ್ತದೆ. ಯಾವ ರೀತಿಯ ಪ್ರಕರಣ ದಾಖಲಾಗುತ್ತೆ ಎಂದು ಈಗ ಹೇಳಲು ಸಾಧ್ಯವಿಲ್ಲ ಎಂದು ಜಗದೀಶ್ ವಿವರಿಸಿದರು.

    ಕಿಂಗ್ ಪಿನ್, ಹನಿಟ್ರ್ಯಾಪ್, ದುಡ್ಡು ಹರಿದಾಟದ ಬಗ್ಗೆ ಪ್ರಸ್ತಾವನೆಯಾದರೆ ರಮೇಶ್ ಜಾರಕಿಹೊಳಿ ಇದಕ್ಕೆಲ್ಲ ಸ್ಪಷ್ಟನೆ ಕೊಡಲಿ. ಅಷ್ಟು ದುಡ್ಡು ಹೇಗೆ ಬಂತು ಎನ್ನುವುದರ ಬಗ್ಗೆ ಕೂಡ ಹೇಳಲಿ. ಸರ್ಕಾರ ಮಾಜಿ ಸಚಿವರ ರಕ್ಷಣೆಗೆ ನಿಂತಿದೆ ಅನ್ನೋದು ಸ್ಪಷ್ಟ ಎಂದು ಅವರು ತಿಳಿಸಿದರು.

  • ರಮೇಶ್ ಜಾರಕಿಹೊಳಿ ಮಹಾನಾಯಕನ ಹೆಸರು ಬಿಚ್ಚಿಡಲಿ: ಸಿದ್ದರಾಮಯ್ಯ

    ರಮೇಶ್ ಜಾರಕಿಹೊಳಿ ಮಹಾನಾಯಕನ ಹೆಸರು ಬಿಚ್ಚಿಡಲಿ: ಸಿದ್ದರಾಮಯ್ಯ

    – ರಾಜ್ಯದಲ್ಲಿ ಹಲವಾರು ಮಂದಿ ಮಹಾನಾಯಕರು ಇದ್ದಾರೆ
    – ಮಹಾನಾಯಕರ ಜೊತೆಗೆ ಮಹಾನಾಯಕಿರೂ ಇದ್ದಾರೆ

    ಬೆಂಗಳೂರು: ಸಿಡಿ ವಿಚಾರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳುವ ಮಹಾ ನಾಯಕ ಯಾರು ಎಂದು ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಮಹಾ ನಾಯಕರು ಬಹಳಷ್ಟು ಜನ ಇದ್ದಾರೆ. ಬಿಜೆಪಿಯಲ್ಲೂ ಇದ್ದಾರೆ. ನಮ್ಮ ಪಕ್ಷದಲ್ಲೂ ಬಹಳ ನಾಯಕರುಗಳು ಇದ್ದಾರೆ. ಇವರೊಂದಿಗೆ ಮಹಾ ನಾಯಕಿನೂ ಇದ್ದಾರೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ರಕ್ಷಣೆ ಕೊಡಿಸಬೇಕು ಎಂದಿದ್ದಾಳೆ. ಹಾಗಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ನಾನು ನಿನ್ನೆ ಸಂಜೆ ಮಾತಾಡಿದ್ದೇನೆ. ಆ ಯುವತಿಗೆ ರಕ್ಷಣೆ ಕೊಡಿ ಎಂದಿದ್ದೇನೆ. ಯಾರೇ ನಮ್ಮ ಬಳಿ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರೂ ರಕ್ಷಣೆ ಕೊಡಲೇಬೇಕು. ಸಂತ್ರಸ್ತೆ ಅವಳ ತಂದೆ-ತಾಯಿಗೂ ರಕ್ಷಣೆ ಕೇಳಿದ್ದಾಳೆ. ಹೀಗಾಗಿ ಅವರಿಗೂ ರಕ್ಷಣೆ ಕೊಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

    ಆ ಸಂತ್ರಸ್ತೆ ಮರೆಯಾಗಿದ್ದು, ವೀಡಿಯೋ ಸ್ಟೆಟ್ ಮೆಂಟ್ ಕೊಡೋ ಬದಲು ಎಸ್ ಐಟಿ ಮುಂದೆ ಬರಲಿ ಎನ್ನೋದು ನನ್ನ ಸಲಹೆ. ಅಜ್ಞಾತವಾಸದಲ್ಲಿ ಇರುವ ಬದಲು ನಡೆದಿದ್ದು ಏನು? ಸತ್ಯ ಏನು ಎನ್ನುದನ್ನು ಹೇಳಲಿ. ತನಿಖೆಗೆ ಸಹಕರಿಸಲಿ ಎಂದರು.

    ನನ್ನನ್ನು ಬಳಸಿಕೊಂಡಿದ್ದಾರೆ, ಉದ್ಯೋಗ ಕೇಳಿದ್ದಕ್ಕೆ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಳು. ನಾನು ಸಂತ್ರಸ್ತೆ ವೀಡಿಯೋ ಆಧಾರದ ಮೇಲೆ ರಮೇಶ್ ಜಾರಕಿಹೊಳಿ ಮೇಲೆ ರೇಪ್ ಕೇಸ್ ಹಾಕಬೇಕು ಎಂದು ಒತ್ತಾಯ ಮಾಡಿದ್ದೆ. ನನಗೆ ರಮೇಶ್ ಜಾರಕಿಹೊಳಿ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ರಮೇಶ್ ಜಾರಕಿಹೊಳಿ ನನ್ನ ಒಳ್ಳೆ ಸ್ನೇಹಿತ ಎಂದು ಅಭಿಪ್ರಾಯಪಟ್ಟರು.

    ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆತ್ತಿಮೇಲೆ ಕತ್ತಿ ತೂಗಾಡುತ್ತಿದೆ. ಯಡಿಯೂರಪ್ಪ ಅವರು ನನ್ನ ಜೊತೆಗೆ ಎಲ್ಲಾ ಎಂಎಲ್‍ಎಗಳು ಇದ್ದಾರೆ ಎಂದು ತೋರಿಸಿಕೊಳ್ಳುವುದಕ್ಕೆ ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಆದರೆ ಹಾಗಿಲ್ಲ ಅಂತ ಯತ್ನಾಳ್ ಪದೇ ಪದೇ ಹೇಳುತ್ತಿದ್ದಾರೆ. ಈ ಮೊದಲು ಸಿಎಂ ಬದಲಾವಣೆ ಆಗುತ್ತಾರೆ ಎಂದು ಮಾಹಿತಿ ಇತ್ತು ಆಗ ಆಗಲಿಲ್ಲ ಈಗ ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

    ರೈತ ನಾಯಕ ರಾಕೇಶ್ ಟಿಕಾಯತ್ ಮೇಲೆ ಕೇಸು ಹಾಕಿದ್ದು ಖಂಡನೀಯ. ಅವರು ಬೆಂಗಳೂರು ಸೀಜ್ ಮಾಡಿ ಎಂದಿದ್ದರು. ಸೀಜ್ ಮಾಡಿ ಎಂದರೆ ಮುತ್ತಿಗೆ ಹಾಕಿ ಎಂದು ಅರ್ಥ. ಅದು ಪ್ರಚೋದನಾ ಕಾರಿ ಭಾಷಣ ಅಲ್ಲಾ ಎಂದು ಸಮರ್ಥಿಸಿಕೊಂಡರು.

    ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನಾಳೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದು, ತಳಿ, ಡೆಂಕಣಿಕೋಟ, ಹೊಸೂರು, ಬಾಗಲೂರು, ಬೇರಿಗೆ, ಸೂಲಗಿರಿ ಹಾಗೂ ವೇಪನಪಲ್ಲಿಯಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಸಿದ್ದರಾಮಯ್ಯ ಅವರು ಮಾತನಾಡಲಿದ್ದಾರೆ.

  • ರೇಪ್ ಕೇಸ್ ಹಾಕಿದರೂ ಎದುರಿಸಲು ಸಿದ್ಧ: ರಮೇಶ್ ಜಾರಕಿಹೊಳಿ

    ರೇಪ್ ಕೇಸ್ ಹಾಕಿದರೂ ಎದುರಿಸಲು ಸಿದ್ಧ: ರಮೇಶ್ ಜಾರಕಿಹೊಳಿ

    ಬೆಂಗಳೂರು: ನನ್ನ ವಿರುದ್ಧ ರೇಪ್ ಕೇಸ್ ಹಾಕಿದ್ರೂ ಎದುರಿಸಲು ಸಿದ್ಧ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ವೀಡಿಯೋ ಬಿಡುಗಡೆ ಮಾಡಿದ ಬೆನ್ನಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ನೂ ಹತ್ತು ವೀಡಿಯೋ ಬರಲಿ ನಾನು ಹೇದರಲ್ಲ, ರೇಪ್ ಕೇಸ್ ಹಾಕಿದರು ಕೂಡ ನಾನು ಎದುರಿಸಲು ಸಿದ್ಧನಿರುವುದಾಗಿ ಗುಡುಗಿದ್ದಾರೆ.

    ಸಿಡಿ ವಿಚಾರವಾಗಿ ನಾನು ಮೆಂಟಲಿ ರೆಡಿಯಾಗಿದ್ದೇನೆ. ಕಾನೂನು ಹೋರಾಟಕ್ಕೂ ಸಿದ್ಧವಾಗಿದ್ದೇನೆ. ಇದು ದೊಡ್ಡ ಸಮಸ್ಯೆಯಲ್ಲ ಎಂದು ತಿಳಿಸಿದ್ದಾರೆ.

    ಸಂತ್ರಸ್ತೆ ವಕೀಲರ ಮೂಲಕ ದೂರು ಕೊಡಲು ಬರಲಿ, ನನ್ನ ಬಳಿಯೂ ವಕೀಲರಿದ್ದಾರೆ. ನಾನು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಿಲ್ಲ. ರೇಪ್ ಕೇಸ್ ಹಾಕುವುದಾದರೆ ಹಾಕಲಿ ನಾನು ಅದನ್ನು ಎದುರಿಸಲು ಕೂಡ ರೆಡಿಯಾಗಿದ್ದೇನೆ. ಸಂತ್ರಸ್ತೆ ದೂರು ಅಂದೇ ಕೊಡಬೇಕಾಗಿತ್ತು ಆದರೆ ಕೊಟ್ಟಿರಲಿಲ್ಲ. ಇದು ಮಹಾಷಡ್ಯಂತ್ರ ಎಂದು ಹೇಳಿದ್ದೆ. ನಾನು ಜಾಮೀನು ತೆಗೆದುಕೊಳ್ಳುವುದಿಲ್ಲ ಮುಂದೆ ಏನಾಗುತ್ತದೆ ನೋಡೋಣ ಎಂದರು.

    ಇಂದು ಮೂರನೇ ವೀಡಿಯೋ ಹೇಳಿಕೆ ಬಿಡುಡಗೆ ಮಾಡಿರುವ ಸಿಡಿ ಲೇಡಿ, ಕರ್ನಾಟಕದ ಜನತೆ, ತಂದೆ-ತಾಯಿಯರ ಆಶೀರ್ವಾದ, ಎಲ್ಲಾ ಪಕ್ಷದ ನಾಯಕರು ಹಾಗೂ ಎಲ್ಲಾ ಸಂಘಟನೆಯವರಿಂದ ನನಗೆ ತುಂಬಾನೇ ಬೆಂಬಲ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

    24 ದಿನದಿಂದ ನಾನು ಜೀವ ಭಯದಲ್ಲಿ ಬೆದರಿಕೆಗಳಿಂದ ಭಯ ಭಯದಲ್ಲಿ ಬದುಕ್ತಾ ಇದ್ದೇನೆ. ಆದರೆ ಇಂದು ಎಲ್ಲೋ ಕಡೆಯಿಂದ ಒಂದು ಧೈರ್ಯ ಬಂದಿದೆ. ಆ ಧೈರ್ಯ ಬಂದಿರೋದಕ್ಕೆ ಹಾಗೂ ನನ್ನನ್ನು ಎಲ್ಲರೂ ಬೆಂಬಲಿಸುತ್ತಾ ಇದ್ದೀರಾ ಅನ್ನೋ ಕಾರಣಕ್ಕೆ ಇಂದು ನಾನು ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುತ್ತಿದ್ದೇನೆ ಎಂದು ಸಿಡಿ ಲೇಡಿ ಹೇಳಿದ್ದಾರೆ.

  • ಸಿಡಿ ಸಂತ್ರಸ್ತೆಯ ಜೀವ, ಮಾನ ರಕ್ಷಣೆಗೆ ಬದ್ಧನಾಗಿದ್ದೇನೆ -ರಮೇಶ್ ಕುಮಾರ್

    ಸಿಡಿ ಸಂತ್ರಸ್ತೆಯ ಜೀವ, ಮಾನ ರಕ್ಷಣೆಗೆ ಬದ್ಧನಾಗಿದ್ದೇನೆ -ರಮೇಶ್ ಕುಮಾರ್

    ಬೆಂಗಳೂರು: ಸಿಡಿ ಸಂತ್ರಸ್ತೆಯ ಮನವಿಯ ಬೆನ್ನಲ್ಲೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಯುವತಿಯ ಜೀವ ಹಾಗೂ ಮಾನ ರಕ್ಷಣೆಗೆ ಬದ್ಧನಾಗಿರುವುದಾಗಿ ಹೇಳಿಕೆ ನೀಡಿದ್ದಾರೆ.

    ಯುವತಿ ಎರಡನೇ ವೀಡಿಯೋ ಮೂಲಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಮತ್ತು ಮಹಿಳಾ ಸಂಘಟನೆಗಳು ನಮ್ಮ ತಂದೆ ತಾಯಿಗೆ ರಕ್ಷಣೆ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದರು.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಕುಮಾರ್, ಸದನದಲ್ಲಿ ನಾನು ಸರ್ಕಾರಕ್ಕೆ, ಸಂತ್ರಸ್ತೆಯನ್ನು ಹುಡುಕಾಟ ನಡೆಸಿದ್ದೀರ, ಆಕೆ ಎಲ್ಲಿದ್ದಾಳೆಂದು ಪ್ರಶ್ನೆ ಮಾಡಿದ್ದೆ. ಆಕೆ ಮನವಿ ಕೇಳಿದ ತಕ್ಷಣ ಆಕೆ ಸಂತ್ರಸ್ತೆ ಆಗುತ್ತಾಳೆ ಆಕೆಯ ಜೀವ ಮತ್ತು ಆಕೆಯ ಕುಟುಂಬದ ರಕ್ಷಣೆ ಸರ್ಕಾರದ ಕರ್ತವ್ಯ. ಆದರೆ ಆಕೆ ನಮಗೆ ಮನವಿ ಮಾಡಿಕೊಂಡಿದ್ದಾಳೆ. ನಾನು ಒಬ್ಬ ಹೆಣ್ಣು ಮಗಳ ತಂದೆಯಾಗಿ ಆಕೆ ಮತ್ತು ಆಕೆಯ ಕುಟುಂಬದ ರಕ್ಷಣೆಗೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಇದೊಂದು ಮಾನವೀಯ ಸಂಬಂಧ ವಿಚಾರವಾಗಿರುವುದರಿಂದ ನಮ್ಮ ಶಕ್ತಿಮೀರಿ ಆಕೆಗೆ ರಕ್ಷಣೆ ಕೊಡುತ್ತೇವೆ ಎಂದರು.

    ಆಕೆಯ ಜೀವ ಮತ್ತು ಪ್ರಾಣದ ರಕ್ಷಣೆಗಾಗಿ ನಾನು ನಮ್ಮ ನಾಯಕರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ನಾನು ಈ ವಿಷಯವಾಗಿ ಅಸಹಾಯಕನಲ್ಲ, ನಮ್ಮ ನಾಯಕರು ಮತ್ತು ಪಕ್ಷದ ಹಿರಿಯರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಸಂತ್ರಸ್ತೆಯ ರಕ್ಷಣೆಗೆ ಮಾತ್ರ ನಾವು ಸದಾ ಸಿದ್ಧರಾಗಿರುವುದಾಗಿ ಭರವಸೆ ನೀಡಿದರು.

  • ಸುಧಾಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಅಸ್ತ್ರ ಬಳಕೆಗೆ ಕಾಂಗ್ರೆಸ್ ನಿರ್ಧಾರ

    ಸುಧಾಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಅಸ್ತ್ರ ಬಳಕೆಗೆ ಕಾಂಗ್ರೆಸ್ ನಿರ್ಧಾರ

    – ಸಿಡಿ ಕೇಸ್, ಸುಧಾಕರ್ ವಿರುದ್ಧ ಕೇಸ್ ದಾಖಲಿಸುತ್ತೇವೆಂದ ಸಿದ್ದರಾಮಯ್ಯ

    ಬೆಂಗಳೂರು: ನೀವು ಏಕ ಪತ್ನಿ ವ್ರತಸ್ಥರಾ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೇಳಿದ್ದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದ್ದು, ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.

    ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ನಿಂದ ಮಾನನಷ್ಟ ಮೊಕದ್ದಮೆ ಅಸ್ತ್ರ ಬಳಕೆಗೆ ನಿರ್ಧರಿಸಲಾಗಿದ್ದು, ಎಲ್ಲ ಕಾಂಗ್ರೆಸ್ ಶಾಸಕರುಗಳು ಅವರವರ ಕ್ಷೇತ್ರದಲ್ಲಿ ಸುಧಾಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಕಾನೂನು ತಜ್ಞರ ಅಂತಿಮ ಅಭಿಪ್ರಾಯ ಪಡೆದು. ಪ್ರತಿಯೊಬ್ಬ ಶಾಸಕರು ಅವರವರ ಕ್ಷೇತ್ರದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

    ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಲ್ಲರೂ ಏಕ ಪತ್ನಿ ವ್ರತಸ್ಥರೆ. ಹಿಂದೂ ಮ್ಯಾರೇಜ್ ಆಕ್ಟ್ ನಲ್ಲಿ ಒಬ್ಬರನ್ನೇ ಮದುವೆ ಆಗೋಕೆ ಅವಕಾಶ ಇರೋದು. ಎರಡೆರಡು ಆಗೋಕೆ ಅವಕಾಶ ಇಲ್ಲ. ಸುಧಾಕರ್ ಬಹಳ ಉದ್ಧಟತನದ ಹೇಳಿಕೆ ಕೊಟ್ಟಿದ್ದಾರೆ. 225 ಎಂದರೆ ಸ್ವತಃ ಅವರು, ಸ್ಪೀಕರ್ ಹಾಗೂ ಸಿಎಂ ರನ್ನು ಒಳಗೊಂಡಂತೆ ಎಲ್ಲರಿಗೂ ಅನ್ವಯವಾಗುತ್ತೆ. ಮನೆಯವರು ಅನುಮಾನದಿಂದ ನೋಡುತ್ತಿದ್ದಾರೆ. ಇದು ಬೇಜವಬ್ದಾರಿ ಹೇಳಿಕೆ, ಪ್ರಿವಿಲೇಜ್ ಆಗುತ್ತೆ. ಸದನದ ಹೊರಗೆ ಮಾತನಾಡಿದರೂ, ಹೌಸ್ ನಡೆಯುವಾಗ ಮಾತನಾಡಿದ್ದಾರೆ. ಎಲ್ಲ 225 ಜನರ ಮೇಲೂ ಹೇಳಿದ್ದಾರೆ. ಮಹಿಳಾ ಶಾಸಕಿಯರೂ ಇದ್ದಾರೆ, ಅವರು ಹೊರಗಡೆ ಏನು ಹೇಳಬೇಕು, ಇದು ಸ್ಟುಪಿಡ್ ಹೇಳಿಕೆ. ಸುಧಾಕರ್ ತಾನು ಕಳ್ಳ, ಪರರನ್ನು ನಂಬ ಎಂಬಂತಾಗಿದೆ. ಅವರದ್ದೆಲ್ಲ ಸಿಡಿ ಇದೆ, ಅದಕ್ಕೆ ವಿಲಿ ವಿಲಿ ಒದ್ದಾಡುತ್ತಿದ್ದಾರೆ. ಹೀಗಾಗಿಯೇ 6 ಜನ ಕೋರ್ಟ್ ಗೆ ಹೋಗಿದ್ದಾರೆ. ನಿಮ್ಮದು ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದೇ ಹೆಚ್ಚಾಗಿದೆ ಎಂದು ಹರಿಹಾಯ್ದರು.

    ಹೆಣ್ಣು ಮಕ್ಕಳನ್ನೂ ಸೇರಿ ಹೇಳಿದ್ದಾರೆ, ಅವರು ಏನು ಮಾಡಬೇಕು. ಹಳ್ಳಿಯಲ್ಲಿ ಏನೋ ಗಂಡಸರು ಬಿಡ್ರಪ್ಪ ಅಂತಾರೆ. ಆದರೆ ಹೆಣ್ಣು ಮಕ್ಕಳ ವಿಚಾರದಲ್ಲಿ ಒಪ್ಕೋತಾರಾ? ಮಹಿಳಾ ಶಾಸಕಿಯರು ಏನು ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ಸಿಡಿ, 6 ಜನ ಕೋರ್ಟ್ ಗೆ ಹೋಗಿರುವುದು, ಸಚಿವ ಸುಧಾಕರ್ ಹೇಳಿದ್ದು ಸೇರಿ ಎಲ್ಲವನ್ನೂ ಎಸ್‍ಐಟಿಗೆ ನೀಡಿ, ಚೀಫ್ ಜಸ್ಟಿಸ್ ಕಣ್ಗಾವಲಿನಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತೇವೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹೋಗಲು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇವೆ, ಕಾನೂನು ಹೋರಾಟ ಮಾಡುತ್ತೇವೆ. ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ನಿಗಾದಲ್ಲಿ ತನಿಖೆಯಾಗಬೇಕು. ಸಿಎಂ ಹಾಗೂ ಸ್ಪೀಕರ್ ಗೆ ಪತ್ರವನ್ನೂ ಕೊಡುತ್ತೇವೆ ಎಂದು ತಿಳಿಸಿದರು.

    ಇದು ಹೇಡಿ ಸರ್ಕಾರ
    ಚರ್ಚೆ ನಡೆಯದೆ ಸಿಎಂ ಭಾಷಣ ಓದಿದ್ದಾರೆ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾದರೆ ರೆವಿನ್ಯೂ ಡಿಫಿಸಿಟ್(ಆದಾಯ ಕೊರತೆ) ಎನ್ನಲಾಗುತ್ತದೆ. ಇದನ್ನು ತುಂಬಲು ಸಾಲ ಮಾಡಬೇಕು. ಈ ವರ್ಷ 70 ಸಾವಿರ ಕೋಟಿ ಸಾಲ ತೆಗೆದುಕೊಂಡಿದ್ದಾರೆ. ಕೇಂದ್ರದಿಂದ ತಮ್ಮ ಪಾಲು ಕೇಳಲು ಇವರಿಗೆ ಧೈರ್ಯವಿಲ್ಲ, ಹೇಡಿ ಸರ್ಕಾರ ಇದು. 2.5 ಲಕ್ಷ ಕೋಟಿ ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತದೆ. ಅದರಲ್ಲಿ 34,900 ಕೋಟಿ ಮಾತ್ರ ರಾಜ್ಯಕ್ಕೆ ಬಂದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

    ಕರೊನಾಗೆ 5 ಸಾವಿರ ಕೋಟಿ ಖರ್ಚು ಮಾಡಿದ್ದೇನೆ ಎನ್ನುತ್ತಾರೆ. ಅದೇ ಕೇಂದ್ರದಿಂದ ಪಡೆದಿದ್ದರೆ ಇಲ್ಲಿ ಕರೊನಾಗೆ ಖರ್ಚು ಮಾಡಬಹುದಿತ್ತು. ಈಗ ಬೇರೆ ಅಭಿವೃದ್ಧಿ ಕೆಲಸ ಆಗಿಲ್ಲ, ಇದಕ್ಕೆ ಕಾರಣ ಕರೊನಾ ಎಂದು ಕೈ ತೋರಿಸುತ್ತಾರೆ ಎಂದು ಕಿಡಿಕಾರಿದರು.

    ಪ್ರತಿ ಇಲಾಖೆ ಸೇರಿ 6 ಸೆಕ್ಟರ್ ಮಾಡಿಕೊಂಡಿದ್ದಾರೆ. ಎಷ್ಟು ಖರ್ಚು ಆಯಿತು ಎನ್ನುವ ಮಾಹಿತಿ ಇಲ್ಲ. ಜೂನ್ 2022ರಿಂದ ಜಿಎಸ್ ಟಿ ಕಾಂಪಾನ್ಸೆಷನ್ ನಿಲ್ಲುತ್ತೆ, ನಮ್ಮ ಪಾಲನ್ನೂ ಕಡಿಮೆ ಮಾಡಿದ್ದಾರೆ. ಇವರ ಕೈಯಲ್ಲಿ ರಾಜ್ಯ ಸರ್ಕಾರ ಇದ್ದರೆ ಸುರಕ್ಷಿತವಾಗಿ ಇರುತ್ತಾ? ರಾಜ್ಯ ಸರ್ಕಾರ ದಿವಾಳಿಯತ್ತ ಹೋಗುತ್ತೆ. ಇವರ ಕೈಯಲ್ಲಿ ನಿಯಂತ್ರಣ ಮಾಡುವುದಕ್ಕೆ ಆಗುತ್ತಾ? ನೀವು ತುಪ್ಪನಾದ್ರೂ ತಿನ್ನಿ, ಬೆಣ್ಣೆನಾದ್ರು ತಿನ್ನಿ, ಮಜ್ಜಿಗೆನಾದರೂ ಕುಡಿರಿ. ಸಾಲ ಸಿಗುತ್ತೆ ಅಂತ ಸಾಲ ಮಾಡೊದಲ್ಲ, ಸಾಲ ತೀರಿಸುವುದಕ್ಕೆ ನಮಗೆ ಶಕ್ತಿ ಇದ್ಯಾ ನೋಡಿಕೊಳ್ಳಬೇಕು. ಯಡಿಯೂರಪ್ಪ ಅವರ ಮನೆಗೆ ಖರ್ಚು ಮಾಡಿದರು ಎಂದು ನಾನು ಹೇಳುತ್ತಿಲ್ಲ. ಸಾಲ ಮಾಡಿ ಎಂದಾದರೂ ಸಂಬಳ ಕೊಟ್ಟಿದ್ದಿರಾ ಯಡಿಯೂರಪ್ಪ ಎಂದು ಪ್ರಶ್ನಿಸಿದರು.

    ಸಿಎಂ ತಾರಾತುರಿನಲ್ಲಿ ಭಾಷಣ ಮಾಡಿದ್ದಾರೆ. ಇನ್ನೂ ಸಂಪೂರ್ಣ ಬಜೆಟ್ ಮೇಲೆ ಚರ್ಚೆ ಆಗಿಲ್ಲ. 24 ಪುಟಗಳನ್ನು ಓದಿದ್ದಾರೆ. ಸಂತೆಯಲ್ಲಿ ಮಾನ ಹೋಗುವ ವ್ಯಕ್ತಿ ಸೊಪ್ಪು, ಸೆದೆಯಿಂದ ಮಾನ ಮುಚ್ಚಿಕೊಂಡ ಹಾಗೆ ಓದಿ ಮುಗಿಸಿದ್ದಾರೆ. ಈ ವರ್ಷ ರೆವಿನ್ಯೂ ಡಿಫಿಸಿಟ್ (ಆದಾಯ ಕೊರತೆ) 19,485 ಕೋಟಿ ಹೆಚ್ಚುತ್ತದೆ. 143 ಕೋಟಿ ರೆವಿನ್ಯೂ ಸರ್ಪಲಸ್ ಹೆಚ್ಚಾಗುತ್ತೆ ಎಂದಿದ್ದರು. ಈ ವರ್ಷ 20 ಸಾವಿರ ಕೋಟಿ ರೆವಿನ್ಯೂ ಡಿಫಿಸಿಟ್ ಆಗುತ್ತೆ. ಮುಂದಿನ ವರ್ಷ 20 ಸಾವಿರ ಕೋಟಿಗಿಂತ ಹೆಚ್ಚಾಗುತ್ತದೆ ಎಂದಿದ್ದರು. ಆದರೆ ನಾವು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ. ರಾಜ್ಯ ಆರ್ಥಿಕ ದಿವಾಳಿಯತ್ತ ಹೋಗುತ್ತಿದೆ, ಅದಕ್ಕೆ ಉತ್ತರ ನೀಡಿಲ್ಲ. ಅವರೇ ಹೇಳಿರುವ ಪ್ರಕಾರ ರೆವಿನ್ಯೂ ಡಿಫಿಸಿಟ್ ಪ್ರತಿ ವರ್ಷ ಹೆಚ್ಚಾಗುತ್ತಾ ಹೋಗುತ್ತೆ. ಈ ವರ್ಷ 70 ಸಾವಿರ ಕೋಟಿ ಸಾಲ ತಗೊಂಡಿದ್ದಾರೆ. ಅದರಲ್ಲಿ 20 ಸಾವಿರ ಕೋಟಿ ಎಲ್ಲಿ ಹೋಯಿತು? ರಾಜ್ಯ ದಿವಾಳಿ ಆಗುವುದಿಲ್ಲವೇ? ರಾಜ್ಯ ಇವರ ಕೈಯಲ್ಲಿ ಇದ್ದರೆ ಆರ್ಥಿಕವಾಗಿ ಸರಿ ಮಾಡುವುದಕ್ಕೆ ಆಗುತ್ತಾ? 13 ಬಜೆಟ್ ನಲ್ಲಿ ನಾನು ಫಿಸಿಕಲ್ ಡಿಫಿಸಿಟ್ ನಿರ್ವಹಿಸಿದ್ದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

  • ರೇಪ್ ಪದ ಬಳಸೋದು ಸಿದ್ದರಾಮಯ್ಯಗೆ ಶೋಭೆ ತರಲ್ಲ: ಬಾಲಚಂದ್ರ ಜಾರಕಿಹೊಳಿ

    ರೇಪ್ ಪದ ಬಳಸೋದು ಸಿದ್ದರಾಮಯ್ಯಗೆ ಶೋಭೆ ತರಲ್ಲ: ಬಾಲಚಂದ್ರ ಜಾರಕಿಹೊಳಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೇಪ್ ಪದ ಬಳಕೆ ಮಾಡಿರುವುದು ಸರಿಯಲ್ಲ. ಈ ಪದ ಬಳಕೆ ಅವರಿಗೆ ಶೋಭೆ ತರಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಗರಂ ಆಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಲ್ಲ. ಸಿದ್ದರಾಮಯ್ಯ ರೇಪ್ ಕೇಸ್ ಮಾಡಬೇಕು ಅಂತ ಹೇಳೋದು ಸರಿಯಲ್ಲ. ಸಿದ್ದರಾಮಯ್ಯ ರೇಪ್ ಪದ ಬಳಸಬಾರದು. ಇದು ನಿಮಗೆ ಶೋಭೆ ತರೋದಿಲ್ಲ ಎಂದು ತಿಳಿಸಿದ್ದಾರೆ.

    ಸೋಮವಾರ ಸಿಡಿ ವಿಚಾರ ಚರ್ಚೆಯಾದಾಗ ನಾನು ಸದನದಲ್ಲಿದ್ದೆ. ಕೆಲವರು ಮಾತನಾಡದಂತೆ ಸಲಹೆ ಕೊಟ್ರು. ಯುವತಿ ವೀಡಿಯೋ ಮನಸಾರೆ ಮಾಡಿದ್ದಾರೋ ಒತ್ತಾಯಕ್ಕೆ ಮಾಡಿದ್ದಾರೋ ಗೊತ್ತಿಲ್ಲ. ವೀಡಿಯೋ ಸಾಕ್ಷಿಯಾಗಿ ಇಟ್ಟುಕೊಂಡು ಕೇಸ್ ಮಾಡಬಾರದು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇನ್ವೆಸ್ಟಿಗೇಷನ್ ವರದಿ ಬರಬೇಕು. ಎಲ್ಲವೂ ಲ್ಯಾಬ್‍ಗೆ ಹೋಗಿದೆ. ಈ ಸಿಡಿ ವಿಚಾರ ಇಟ್ಟುಕೊಂಡ ಸದನ ವ್ಯರ್ಥ ಮಾಡಬಾರದು. ಎಸ್.ಐ.ಟಿ ಟೀಮ್ ತನಿಖೆ ಮಾಡುತ್ತಿದೆ ಎಂದು ಹೇಳಿದ್ದಾರೆ.

    ಗೃಹ ಸಚಿವ ಬಸವರಾಜ್ ಬೊಮ್ಮಯಿ ಅವರು ಮಹಿಳೆಗೆ ರಕ್ಷಣೆ ಕೊಡೋದಾಗಿ ಹೇಳಿದ್ದಾರೆ. ಅವರು ಒಂದು ವೀಡಿಯೋ ಬಿಟ್ರು, ಅದಾದ ಬಳಿಕ ಏನಾಗಿದೆ ಯಾರಿಗೂ ಗೊತ್ತಿಲ್ಲ. ಅವರು ಅಷ್ಟು ಕಾನ್ಫಿಡೆಂಟ್ ಆಗಿದ್ರೆ ಮುಂದೆ ಬರಲಿ. ದಿನೇಶ್ ಕಲ್ಲಳ್ಳಿ ದೂರು ಕೊಟ್ಟು ವಾಪಸ್ ಪಡೆದ್ರು. ಅನ್ಯಾಯ ಆಗಿದೆ ಅಂತ ಯುವತಿ ಬಂದು ಹೇಳಬೇಕು, ಇವರಲ್ಲ ಎಂದು ಕಿಡಿಕಾರಿದರು.

    ಮುಂದೆ ಉಪಚುನಾವಣೆ ಬರ್ತಿರೋದ್ರಿಂದ ಈ ರೀತಿ ಕಾಂಗ್ರೆಸ್ ಆರೋಪ ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಬಗ್ಗೆ ತನಿಖೆಯಾಗಲಿ, ಆರೋಪ ಮುಕ್ತರಾಗಿ ಬರ್ತಾರೆ. ಯುವತಿ ಮನೆಯವರು ಬೆಳಗಾವಿ ಎಪಿಎಂಸಿ ಬಾಡಿಗೆ ಮನೆಯಲ್ಲಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಮಗೂ ಸಂಶಯ ಇದೆ, ಯುವತಿಯನ್ನ ಒಂದು ತಂಡ ಹಿಡಿದಿಟ್ಟುಕೊಂಡಿದೆ. ಅದರ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಲಿ, ಆದಷ್ಟು ಬೇಗ ವರದಿ ಬರಲಿ ಎಂದು ಚಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

  • ಎಸ್‍ಐಟಿ ಮುಂದೆ ಸಿಡಿ ಯುವತಿ ಪೋಷಕರ ಸ್ಫೋಟಕ ಹೇಳಿಕೆ

    ಎಸ್‍ಐಟಿ ಮುಂದೆ ಸಿಡಿ ಯುವತಿ ಪೋಷಕರ ಸ್ಫೋಟಕ ಹೇಳಿಕೆ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡ ಎನ್ನಲಾದ ಯುವತಿಯ ಪೋಷಕರನ್ನ ಎಸ್‍ಐಟಿ ಪತ್ತೆ ಮಾಡಿದೆ. ಸೋಮವಾರ ಯುವತಿ ಪೋಷಕರನ್ನ ಪತ್ತೆ ಎಸ್‍ಐಟಿ ಅವರ ಹೇಳಿಕೆಯನ್ನ ದಾಖಲಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯಲ್ಲಿ ದೂರು ದಾಖಲಿಸಿದ ಬಳಿಕ ವೀಡಿಯೋ ಹೇಳಿಕೆ ಬಿಡುಗಡೆಗೊಳಿಸಿ ಅಜ್ಞಾತ ಸ್ಥಳದಲ್ಲಿದ್ದರು.

    ಪೋಷಕರು ಹೇಳಿದ್ದೇನು?: ನಮ್ಮ ಮಗಳು ಅಪಾಯದಲ್ಲಿದ್ದು, ಬಲವಂತವಾಗಿ ವೀಡಿಯೋ ಮಾಡಿಸಲಾಗಿದೆ. ಸದ್ಯ ಆಕೆ ಎಲ್ಲಿದ್ದಾಳೆ ಅನ್ನೋದು ನಮಗೂ ಗೊತ್ತಿಲ್ಲ. ಮಾರ್ಚ್ 5ರಿಂದ ಮಗಳು ನಮ್ಮ ಮಗಳು ಸಂಪರ್ಕದಲ್ಲಿಲ್ಲ. ಅಪಾಯದಲ್ಲಿರುವ ಮಗಳನ್ನ ಪತ್ತೆ ಮಾಡಿ ಎಂದು ಪೋಷಕರು ಹೇಳಿದ್ದಾರೆ ಎನ್ನಲಾಗಿದೆ.

    ವಿಚಾರಣೆಗೆ ಹಾಜರಾಗದ ಹಿನ್ನೆಲೆ ಯುವತಿಗೆ ಎಸ್‍ಐಟಿ ಐದನೇ ಬಾರಿ ನೋಟಿಸ್ ನೀಡಿದೆ. ಯುವತಿಯ ವಾಟ್ಸಪ್, ಇಮೇಲ್ ಮೂಲಕ ಸಹ ನೋಟಿಸ್ ನೀಡಲಾಗಿದೆ. ಆದ್ರೆ ಯುವತಿ ಯಾವುದೇ ನೋಟಿಸ್ ಗೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ. ಸಿಡಿ ಪ್ರಕರಣದಲ್ಲಿ ಕೇಳಿ ಬಂದ ಇನ್ನುಳಿದವರು ಸಹ ಎಸ್‍ಐಟಿ ವಿಚಾರಣೆಗೆ ಹಾಜರಾಗಿಲ್ಲ. ಸಿಡಿ ಗ್ಯಾಂಗ್ ಸದಸ್ಯರು ಒಂದೊಂದು ದಿನ ಒಂದು ಸ್ಥಳದಲ್ಲಿ ವಾಸ್ತವ್ಯ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • ಸದನದೊಳಗೆ ಸಿಡಿ ಪ್ರದರ್ಶಿಸಿ ಕಾಂಗ್ರೆಸ್ ನಾಯಕರ ಧರಣಿ

    ಸದನದೊಳಗೆ ಸಿಡಿ ಪ್ರದರ್ಶಿಸಿ ಕಾಂಗ್ರೆಸ್ ನಾಯಕರ ಧರಣಿ

    – ಸದನದಲ್ಲಿ ಸಿಡಿ ಕೋಲಾಹಲ

    ಬೆಂಗಳೂರು: ಇಂದು ಸದನ ಆರಂಭವಾಗುತ್ತಿದ್ದಂತೆ ಸಿಡಿ ಪ್ರದರ್ಶಿಸಿ ಕಾಂಗ್ರೆಸ್ ನಾಯಕರು, ಆರು ಸಚಿವರ ರಾಜೀನಾಮೆಗೆ ಆಗ್ರಹಿಸಿ ಧರಣಿ ನಡೆಸಿದರು. ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸದನ ಪ್ರವೇಶಕ್ಕೂ ಮುನ್ನವೇ ಸಿಡಿ ಪ್ರದರ್ಶಿಸಿ ಒಳ ಹೋಗಿದ್ದರು.

    ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ವಿಚಾರಣೆ ಮಾಡಿ ವರದಿ ನೀಡುವಂತೆ ಹೇಳಿದೆ. ತನಿಖೆ ಮಾಡಿ ವರದಿ ಕೊಡೋಕೆ ಹೇಳಿಲ್ಲ. ಅದಕ್ಕೆ ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿ ಸದನದ ಬಾವಿಗೆ ಇಳಿದು ಧರಣಣಿ ಆರಂಭಿಸಿದರು. ಇತರ ಕಾಂಗ್ರೆಸ್ ನಾಯಕರು ಸಿಡಿ ಪ್ರದರ್ಶಿಸಿ,ಲ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಇದನ್ನೂ ಓದಿ:  ನಾವೇನು ತಪ್ಪು ಮಾಡಿದ್ದೇವೆ? ರೇಪ್ ಮಾಡಿದ್ದೀವಾ? – ಸುಧಾಕರ್ ಗರಂ‌

    ನಿನ್ನೆಯೇ ಪ್ರಕರಣ ಸಂಬಂಧ ಸರ್ಕಾರ ಉತ್ತರ ಕೊಟ್ಟಿದೆ. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಕೊಡಿ. ಪ್ರಕರಣದಲ್ಲಿ ತನಿಖೆ ನಡೆಯುತ್ತಿದ್ದು, ಸದನದ ಸಮಯ ವ್ಯರ್ಥ ಮಾಡಬೇಡಿ ಎಂದು ಬೊಮ್ಮಾಯಿ ಹೇಳಿದರು. ಸದನದಲ್ಲಿ ಕಾಂಗ್ರೆಸ್ ಸಿಡಿ ಸರ್ಕಾರಕ್ಕೆ ದಿಕ್ಕಾರ ಅಂತ ಕೂಗಿದರು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ಹೆಚ್ಚಾಗುತ್ತಲೇ ಸ್ಪೀಕರ್ ಸದನವನ್ನ 10 ನಿಮಿಷ ಮುಂದೂಡಿದರು. ಇದನ್ನೂ ಓದಿ: ಸಿಡಿ ಪ್ರಕರಣದ ಹೆಣ್ಮಗಳು ಸಿಕ್ಕಿದ್ದರೆ ಪ್ರಕರಣಕ್ಕೆ ಅಂತ್ಯ ದೊರೆಯಲಿದೆ: ಬಿಎಸ್‍ವೈ