Tag: ಸಿಟಿ ರೌಂಡ್ಸ್

  • ಕೋಟೆನಾಡಲ್ಲಿ ತಡರಾತ್ರಿ ಅಶೋಕ್ ಸಿಟಿರೌಂಡ್ಸ್

    ಕೋಟೆನಾಡಲ್ಲಿ ತಡರಾತ್ರಿ ಅಶೋಕ್ ಸಿಟಿರೌಂಡ್ಸ್

    – ಕಲ್ಲಿನ ಕೋಟೆ ಹಾಡು ಹೇಳಿದ ಸಚಿವ

    ಚಿತ್ರದುರ್ಗ: ಕೋಟೆನಾಡಿನಲ್ಲಿ ಕಂದಾಯ ಸಚಿವ ಆರ್.ಆಶೋಕ್ ತಡರಾತ್ರಿ ಸಿಟಿ ರೌಂಡ್ಸ್ ಹಾಕಿದರು. ಫೋಟೋಗೆ ಪೋಸ್ ನೀಡಿ, ಬಳಿಕ ಓಬವ್ವ ಪ್ರತಿಮೆ ಬಳಿ ಕಲ್ಲಿನ ಕೋಟೆ ಹಾಡು ಹೇಳಿ ಸಹ ಸಂಭ್ರಮಿಸಿದ್ದಾರೆ.

    ಜಿಲ್ಲೆಯ ಹೊಸದುರ್ಗದ ನಗರಲ್ಲಿಂದು ಮಿನಿ ವಿಧಾನಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿರುವ ಆರ್.ಅಶೋಕ್ ಅವರು ನಿನ್ನೆ ರಾತ್ರಿ 11:30ರ ಸಮಯದಲ್ಲಿ ನಗರದ ಒನಕೆ ಓಬವ್ವ ವೃತ್ತದ ಬಳಿ ರೌಂಡ್ಸ್ ಹಾಕಿದರು. ಇದೇ ವೇಳೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು. ಒನಕೆ ಓಬವ್ವ ಪ್ರತಿಮೆ ಬಳಿ ಚಿತ್ರದುರ್ಗದ ಕಲ್ಲಿನ ಕೋಟೆ ಎಂದು ಒಂದು ಸಾಲು ಹಾಡು ಹೇಳಿ ಸಂಭ್ರಮಿಸಿದರು. ಇದನ್ನೂ ಓದಿ: ಜಿ.ಟಿ.ದೇವೇಗೌಡ ಪಕ್ಷ ತೊರೆದರೆ ಜೆಡಿಎಸ್‍ಗೆ ನಷ್ಟ : ವೈ.ಎಸ್.ವಿ.ದತ್ತ

    ಬಳಿಕ ನೈಟ್ ವಾಕ್ ನಡೆಸಿದ ಸಚಿವರು, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಚಿತ್ರದುರ್ಗ ಜಿಲ್ಲಾಡಳಿತ ಕಟ್ಟಡ ವೀಕ್ಷಿಸಿದರು. ಈ ಕಟ್ಟಡಗಳು ಎಷ್ಟು ಗಟ್ಟಿಯಾಗಿವೆ ಎಂದು ಶಾಸಕ ಗೂಳಿ ಹಟ್ಟಿಶೇಖರ್ ಅವರೊಂದಿಗೆ ಚರ್ಚಿಸಿ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಡಿಸಿ ಕಚೇರಿ ಕಟ್ಟಡದಲ್ಲಿರುವ ಕಚೇರಿಗಳ ಬಗ್ಗೆ ಶಾಸಕರಿಂದ ಮಾಹಿತಿ ಪಡೆದರು. ಆಹಾರ ಇಲಾಖೆ, ಎಸಿ ಕಚೇರಿ ಹಾಗೂ ಎಡಿಸಿ ಕಚೇರಿಗಳು ಸಹ ಇಲ್ಲಿವೆ ಎಂದು ಶಾಸಕ ಶೇಖರ್ ತಿಳಿಸಿದರು.

  • ಉಪ ವಿಭಾಗ ದಂಡಾಧಿಕಾರಿ, ಟೀಮ್ ದುರ್ಗಾ ಕಾಲ್ನಡಿಗೆ- ಸಾರ್ವಜನಿಕರಲ್ಲಿ ಜಾಗೃತಿ

    ಉಪ ವಿಭಾಗ ದಂಡಾಧಿಕಾರಿ, ಟೀಮ್ ದುರ್ಗಾ ಕಾಲ್ನಡಿಗೆ- ಸಾರ್ವಜನಿಕರಲ್ಲಿ ಜಾಗೃತಿ

    – ಲಾಠಿ ಬೀಸುವ ಬದಲು ಪೊಲೀಸರಿಂದ ಜಾಗೃತಿ

    ಬಳ್ಳಾರಿ: ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದು, ಆದರೂ ಕೆಲವರು ತಮ್ಮ ವಾಹನಗಳ ಮೂಲಕ ರಸ್ತೆಗಿಳಿಯುತ್ತಿದ್ದಾರೆ. ಹೀಗಾಗಿ ಬಳ್ಳಾರಿಯಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡ ಟೀಮ್ ದುರ್ಗಾ ಜೊತೆಗೆ ಉಪವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಹಾಗೂ ಡಿವೈಎಸ್ಪಿ ವಿ.ರಘುಕುಮಾರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ಅನಗತ್ಯವಾಗಿ ಓಡಾಡುವ ಜನರಿಗೆ ಕೊರೊನಾ ವೈರಸ್ ಕುರಿತು ತಿಳುವಳಿಕೆ ನೀಡುತ್ತ ಕಾಲ್ನಡಿಗೆ ಮೂಲಕ ಸಿಟಿ ರೌಂಡ್ಸ್ ಹಾಕಿದರು.

    ಹೊಸಪೇಟೆ ನಗರದಲ್ಲಿ ಭಾನುವಾರ ರಾತ್ರಿ ಶೇಖ್ ತನ್ವೀರ್ ಅಸೀಫ್ ಅವರು ಮೇನ್ ಬಜಾರ್, ವಾಲ್ಮೀಕಿ ವೃತ್ತ, ಡ್ಯಾಂ ರಸ್ತೆ, ವಿಜಯನಗರ ಕಾಲೇಜ್ ರಸ್ತೆ, ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ವಿವಿಧೆಡೆ ಕಾಲ್ನಡಿಗೆಯಲ್ಲಿ ವೀಕ್ಷಣೆ ಮಾಡಿದರು.

    ಕೊರೊನಾ ವೈರಸ್ ಹೇಗೆ ಹರಡುತ್ತದೆ, ಮುಂಜಾಗೃತಾ ಕ್ರಮ ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಎಸಿ ಅವರು ಸಾರ್ವಜನಿಕರಗೆ ತಿಳಿಸಿದರು. ಅಲ್ಲದೆ ಸೆಕ್ಷನ್ 144 ಜಾರಿಯಲ್ಲಿದೆ ಯಾರು ತಿರುಗಾಡುವಂತಿಲ್ಲ. ನಿಮ್ಮ ಮನೆಯಲ್ಲೇ ಇರಬೇಕು. ತರಕಾರಿ, ಹಾಲು, ಔಷಧಿ, ಆಸ್ಪತ್ರೆ, ದಿನಸಿ ಅಂಗಡಿಗಳು ತೆಗೆದಿರುತ್ತವೆ. ಅವಶ್ಯಕತೆ ಇದ್ದವರು ಕುಟುಂಬದ ಯಾರಾದರು ಒಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ತೆಗದುಕೊಂಡು ಹೋಗಬಹುದು ಎಂದು ವಿವರಿಸಿದರು.

    ನಾವೆಲ್ಲ ಇರುವುದು ನಿಮಗಾಗಿ, ಸರ್ಕಾರ ಇದರ ಬಗ್ಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಯಾರೂ ಆತಂಕ ಪಡುವುದು ಬೇಡ. ಮನೆ ಬಿಟ್ಟು ಬರಬಾರದು ಎಂದು ಮನವಿ ಮಾಡಿದರು. ಪೊಲೀಸ್ ಇಲಾಖೆಯ ಟೀಮ್ ದುರ್ಗಾ ಎಸಿ ಅವರಿಗೆ ಸಾಥ್ ನೀಡಿತು. ನಗರದ ಬಹುತೇಕ ಬಡಾವಣೆಗಳಿಗೆ ಅವರೊಂದಿಗೆ ಸಂಚರಿಸಿತು.

  • ಅಧಿಕಾರವಹಿಸಿಕೊಳ್ತಿದ್ದಂತೆ ಮೇಯರ್, ಉಪಮೇಯರ್ ರಿಂದ ದಿಢೀರ್ ಸಿಟಿರೌಂಡ್ಸ್

    ಅಧಿಕಾರವಹಿಸಿಕೊಳ್ತಿದ್ದಂತೆ ಮೇಯರ್, ಉಪಮೇಯರ್ ರಿಂದ ದಿಢೀರ್ ಸಿಟಿರೌಂಡ್ಸ್

    – ಪಾಲಿಕೆ ಸದಸ್ಯರ ಬೆವರಿಳಿಸಿದ ಗಂಗಾಂಬಿಕೆ

    ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಹಾಗೂ ಉಪಮೇಯರ್ ಆಗಿ ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಮಂಗಳವಾರ ರಾತ್ರಿ ದಿಢೀರ್ ನಗರ ಪ್ರದಕ್ಷಿಣೆ ಮಾಡಿದ್ದಾರೆ.

    ಮೇಯರ್ ಗಂಗಾಬಿಕೆ ಹಾಗೂ ಉಪಮೇಯರ್ ರಮೀಳ ಬೈಕ್‍ಗಳಲ್ಲಿ ಸಿಟಿ ರೌಂಡ್ಸ್ ಮಾಡಿದ್ದಾರೆ. ನಗರ ಪ್ರದಕ್ಷಿಣೆ ವೇಳೆ ಮೇಯರ್ ಗಂಗಾಬಿಕೆ ಅವರು ಪಾಲಿಕೆ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡಿದ್ದು, ಈಸ್ಟ್ ಜೋನ್ ಎಕ್ಸಿಕ್ಸ್ಯೂಟಿವ್ ಎಂಜಿನಿಯರ್ ಶಿವಪ್ರಕಾಶ್ ಬೆವರಿಳಿಸಿದ್ದಾರೆ. ಇದನ್ನೂ ಓದಿ: ಕುರ್ಚಿ ಮೇಲೆ ಬಸವಣ್ಣನ ಫೋಟೋ ಇಟ್ಟು, ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡ ನೂತನ ಮೇಯರ್

    ರಾತ್ರಿ ಈಸ್ಟ್ ಜೋನ್ ನ ಕಸ್ತೂರಿ ಬಾ ರಸ್ತೆ, ಜಯಮಾಹಲ್, ಕನ್ನಿಂಗ್ ಹ್ಯಾಂ ರಸ್ತೆ ಮತ್ತು ಹೆಬ್ಬಾಳ ಸೇರಿ ಹಲವೆಡೆ ತಪಾಸಣೆ ಮಾಡಿದ್ದಾರೆ. ನಗರದ ಜಯಮಹಾಲ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆಗುಂಡಿಗಳನ್ನ ಮುಚ್ಚಿದ್ದ ಗುತ್ತಿಗೆದಾರನಿಗೆ 1 ಲಕ್ಷ ರೂ. ದಂಡ ಹಾಕಿದ್ದಾರೆ. ಅಷ್ಟೇ ಅಲ್ಲದೇ ಇಂದು ಸಂಜೆಯೊಳಗಡೆ ಜಯಮಹಲ್ ರಸ್ತೆಗುಂಡಿಗಳನ್ನ ವೈಜ್ಞಾನಿಕವಾಗಿ ಮುಚ್ಚಿಸಿ ವರದಿ ನೀಡಬೇಕು ಅಂತ ಖಡಕ್ ಆಗಿ ಆದೇಶಿಸಿದ್ದಾರೆ.

    ಒಂದು ವೇಳೆ ಈ ಬಗ್ಗೆ ಅಸಡ್ಡೆ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠೀಣ ಕ್ರಮ ಜರಗಿಸುವುದಾಗಿ ಖಡಕ್ ವಾರ್ನ್ ಕೂಡ ಮಾಡಿದ್ದಾರೆ. ಮೇಯರ್ ಸಿಟಿ ರೌಂಡ್ಸ್ ವೇಳೆ ನಗರದಲ್ಲಿ ಅಕ್ರಮವಾಗಿ ಹೋಲ್ಡಿಂಗ್ಸ್ ಗಳನ್ನ ತೆರವು ಮಾಡಿಸಿದ್ದಾರೆ.

    ಸೆಪ್ಟೆಂಬರ್ 28 ರಂದು ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ರಣರಂಗದ ಆಟದಲ್ಲಿ ಕಾಂಗ್ರೆಸ್ಸಿನ ಗಂಗಾಂಬಿಕೆ ಮೇಯರ್ ಆಗಿ ಆಯ್ಕೆಯಾಗಿದ್ದರೆ, ಉಪಮೇಯರ್ ಆಗಿ ಜೆಡಿಎಸ್ ನ ರಮೀಳಾ ಆಯ್ಕೆಯಾಗಿದ್ದರು. ಇವರಿಬ್ಬರೂ ಸೋಮವಾರ ಅಧಿಕಾರ ವಹಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=K3IuXehQ3sw

  • ಅರ್ಧಕ್ಕೆ ಮುಕ್ತಾಯಗೊಳಿಸಿ ಕಾಟಾಚಾರಕ್ಕೆ ಬೆಂಗ್ಳೂರು ರೌಂಡ್ಸ್ ಹೊಡೆದ ಸಿಎಂ!

    ಅರ್ಧಕ್ಕೆ ಮುಕ್ತಾಯಗೊಳಿಸಿ ಕಾಟಾಚಾರಕ್ಕೆ ಬೆಂಗ್ಳೂರು ರೌಂಡ್ಸ್ ಹೊಡೆದ ಸಿಎಂ!

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕೊನೆಗೂ ಎಚ್ಚೆತ್ತುಕೊಂಡು ಸತತ ಮಳೆಯಿಂದ ತತ್ತರಿಸಿದ್ದ ಬೆಂಗಳೂರಿನ ಹಲವೆಡೆ ಇವತ್ತು ಕಾಟಾಚಾರಕ್ಕೆ ಎಂಬಂತೆ ರೌಂಡ್ಸ್ ಹೊಡೆದಿದ್ದಾರೆ. ಕೊನೆಗೆ ಅರ್ಧದಲ್ಲೇ ಸಿಟಿ ರೌಂಡ್ಸ್ ಮುಗಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದಾರೆ.

    ಮಧ್ಯಾಹ್ನ 2.30ರ ವೇಳೆಗೆ ನಗರದ ಗೃಹ ಕಚೇರಿ ಕೃಷ್ಣಾದಿಂದ ಎರಡು ವೋಲ್ವೋ ಬಸ್ಸಿನಲ್ಲಿ ಸಿಟಿ ರೌಂಡ್ಸ್ ಆರಂಭಿಸಿದರು. ಸಚಿವ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗರೆಡ್ಡಿ, ಮೇಯರ್ ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್, ನಗರದ ಶಾಸಕರುಗಳು ಹಾಗೂ ಅಧಿಕಾರಿಗಳು ಸಿಎಂಗೆ ಸಾಥ್ ನೀಡಿದರು. ಆರಂಭದಲ್ಲಿ ಜೆಸಿ ರಸ್ತೆಯ ಕುಂಬಾರ್ ಗುಂಡಿ ಪ್ರದೇಶದಲ್ಲಿ ಕಾಮಗಾರಿ ವೀಕ್ಷಿಸಿ, ರಾಜಕಾಲುವೆ ಭೇಟಿ ಪರಿಶೀಲನೆ ನಡೆಸಿದರು.

    ಈ ವೇಳೆ ಕೆಎ- 57 ಎಫ್- 1348 ವೋಲ್ವೋದಲ್ಲಿ ಎಸಿ ಕಡಿಮೆ ಇದೆ ಎನ್ನುವ ಕಾರಣಕ್ಕೆ ಸಿಎಂ ಅವರು ಪ್ರಯಾಣಿಸುತ್ತಿದ್ದ ಬಸ್ಸನ್ನು ಬದಲಿಸಲು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ಮುಂದಾದರು. ಈ ಬಸ್ಸಿನಲ್ಲಿ ಎಸಿ ಕಡಿಮೆ ಇದೆ ಸರ್, ಜಾಸ್ತಿ ಎಸಿ ಇರುವ ಬಸ್ಸಿಗೆ ಬನ್ನಿ ಎಂದು ನಾಗರಾಜ್ ಯಾದವ್ ಒತ್ತಾಯ ಮಾಡಿದರು. ಇದಕ್ಕೆ ಒಪ್ಪದ ಸಿಎಂ ಮೊದಲು ಬಂದ ಬಸ್ಸಿನಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿ ಪ್ರಯಾಣ ಮುಂದುವರಿಸಿದರು.

    ನಂತರ ಭಾರೀ ಮಳೆಗೆ ನೀರು ತುಂಬಿ ಮುಳುಗಡೆಯಾಗಿದ್ದ ಬಿಎಂಟಿಸಿ ವರ್ಕ್ ಶಾಪ್‍ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನೀರು ಯಾಕೆ ನಿಲ್ಲುತ್ತಿದೆ ಎಂದು ಪ್ರಶ್ನಿಸಿದ ಸಿಎಂ ಜಾಸ್ತಿ ಮಳೆ ಬಂದಾಗ ಏನು ಮಾಡುವುದು ಎಂದು ತಲೆಯಲ್ಲಿ ಇಟ್ಟುಕೊಂಡು ಪ್ಲಾನ್ ಮಾಡಿ ಎಂದು ಹೇಳಿ ಎಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡರು.

    ಬೇರೆ ಬಸ್: ಎಸಿ ಕೈಕೊಟ್ಟ ಹಿನ್ನೆಲೆಯಲ್ಲಿ ಶಾಂತಿನಗರ ಡಿಪೋದಲ್ಲಿ ಸಿಎಂ ಬಸ್ ಬದಲಾಯಿಸಿದರು. ಈ ವೇಳೆ ಶಾಸಕ ಬೈರತಿ ಬಸವರಾಜ್, ಉತ್ತಮ ಬಸ್ ವ್ಯವಸ್ಥೆ ಯಾಕೆ ಮಾಡಲಿಲ್ಲ. ಸಿಎಂ ಅಂದ್ರೆ ಎಂಥ ಬಸ್ಸು ಮಾಡ್ಬೇಕು ಅಂಥ ಗೊತ್ತಾಗಲ್ವಾ? ಎದುರು ಮಾತಾಡಿದ್ರೆ ನೋಡು ಅಂಥ ಬಿಎಂಟಿಸಿ ಸಿಬ್ಬಂದಿಗೆ ಏಕವಚನದಲ್ಲೇ ಗರಂ ಆಗಿ ತರಾಟೆಗೆ ತೆಗೆದುಕೊಂಡರು.

    ಟ್ರಾಫಿಕ್ ಜಾಮ್: ಶಾಂತಿನಗರದಿಂದ ಎಚ್‍ಎಸ್‍ಆರ್ ಲೇಔಟ್ ಕಡೆಗೆ ತೆರಳುತ್ತಿದ್ದಾಗ ವಿಲ್ಸನ್ ಗಾರ್ಡನ್ ಟ್ರಾಫಿಕ್ ನಲ್ಲಿ ಸಿಎಂ ಸಿಕ್ಕಿಹಾಕಿಕೊಂಡರು. ಟ್ರಾಫಿಕ್ ಜಾಮ್‍ನಲ್ಲಿ ಮೂರು ಅಂಬುಲೆನ್ಸ್ ಗಳು ಸಿಕ್ಕಿಹಾಕಿಕೊಂಡಿತ್ತು. ಸುಮಾರು ಕಿಲೋ ಮೀಟರ್‍ವರೆಗೂ ಟ್ರಾಫಿಕ್ ಜಾಮ್ ಆಗಿತ್ತು.

     

    ನಿಮಾನ್ಸ್ ರಸ್ತೆಯಲ್ಲಿ ಸಿಎಂ ಹೋಗುವ ದಾರಿಯಲ್ಲಿ ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದರಿಂದ ಸುಮಾರು 20 ನಿಮಿಷ ಟ್ರಾಫಿಕ್ ನಲ್ಲಿ ಸಿಎಂ ಸಿಲುಕಿದ್ದರು. ಎಚ್‍ಎಸ್‍ಆರ್ ಲೇಔಟ್ ಗೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ, ಹಿಂದೆ ಇದ್ದವರು ಯಾರೂ ಏನು ಮಾಡಲಿಲ್ಲ. ಮಾಡಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ. ತೊಂದರೆ ಆಗಿದ್ದಕ್ಕೆ ವಿಷಾಧಿಸುತ್ತೇವೆ ಎಂದು ಹೇಳಿದರು. ಈ ವೇಳೆ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.

    ಫುಲ್ ಟ್ರಾಫಿಕ್ ಜಾಮ್: ಸಿಎಂ ಸಿಟಿ ರೌಂಡ್ಸ್ ನಿಂದಾಗಿ ಇಬ್ಬಲೂರು ಜಂಕ್ಷನ್‍ನಿಂದ ಅಗರ ಕೆರೆ ಬಳಿಯ ರಸ್ತೆವರೆಗೆ ಟ್ರಾಫಿಕ್ ಜಾಂ ಆಗಿತ್ತು. ಝೀರೋ ಟ್ರಾಫಿಕ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಟೀಂ ತೆರಳುತ್ತಿರುವ ಹಿನ್ನಲೆ ಸಂಚಾರ ದಟ್ಟಣೆಯಲ್ಲಿ ವಾಹನ ಸವಾರರು ಸಿಲುಕಿಕೊಂಡರು. ಮಾರತ್ ಹಳ್ಳಿ ಔಟರ್ ರಿಂಗ್ ರೋಡ್ ಫುಲ್ ಟ್ರಾಫಿಕ್ ಜಾಮ್ ಆಗಿ ಕಿಲೋಮೀಟರ್‍ಗಟ್ಟಲೇ ವಾಹನಗಳು ಸಾಲು ಸಾಲಾಗಿ ನಿಂತುಕೊಂಡಿತ್ತು.

    ಕೈ ಕೊಟ್ಟ ಬಸ್: ರಾಮಮೂರ್ತಿನಗರದ ಅಂಬೇಡ್ಕರ್ ನಗರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು. ವೀಕ್ಷಣೆ ಮುಗಿಸಿದ ಬಳಿಕ ಸಿಎಂ ಹತ್ತಿದರೂ ಬಸ್ ಸ್ಟಾರ್ಟ್ ಮಾತ್ರ ಆಗುತ್ತಿರಲಿಲ್ಲ. ಇಲ್ಲಿಗೆ ಸಿಟಿ ರೌಂಡ್ಸ್ ಮುಕ್ತಾಯಗೊಳಿಸಿ ಅಧಿಕಾರಿಗಳಿಗೆ ಮಧ್ಯದಲ್ಲೇ ಕೈ ಕೊಟ್ಟು ಸಂಜೆ 6.45ಕ್ಕೆ ಆಪ್ತ ಹಾಗು ಶಾಸಕ ಎಂ.ಟಿ.ಬಿ.ನಾಗರಾಜ್ ನೂತನ ಶಾಲೆ ಉದ್ಘಾಟನೆಗೆ ಸಿಎಂ ತೆರಳಿದರು.

    ಚಾಲಕನಿಗೆ ನೋಟಿಸ್: ಸಿಎಂ ಸಿಟಿ ರೌಂಡ್ಸ್ ವೇಳೆ ಬಸ್ಸಿನಲ್ಲಿ ಎಸಿ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿಯಿಂದ ಚಾಲಕ ಸೈಯದ್ ನೂರುಲ್ಲ ಗೆ ನೋಟಿಸ್ ಜಾರಿಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    https://youtu.be/MvBZ-ntaK7A