Tag: ಸಿಟಿ ಬಸ್ ನಿಲ್ದಾಣ

  • ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ ಬರ್ಬರ ಹತ್ಯೆ

    ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ ಬರ್ಬರ ಹತ್ಯೆ

    ಕಲಬುರಗಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ (Driver) ಬರ್ಬರ ಹತ್ಯೆಗೈದ (Murder) ಘಟನೆ ಕಲಬುರಗಿ (Kalaburagi) ನಗರದ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಡಿಪೋ ನಂಬರ್ 3ರ ಚಾಲಕ ನಾಗಯ್ಯ ಸ್ವಾಮಿ (45) ಹತ್ಯೆಯಾದ ವ್ಯಕ್ತಿ. ಬಸ್ ನಿಲ್ದಾಣದಲ್ಲಿ ಬಸ್ ತಂದು ನಿಲ್ಲಿಸಿದ ವೇಳೆ ಘಟನೆ ನಡೆದಿದ್ದು, 3 ಜನ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ನೂರಾರು ಜನರ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಹಳೇ ವೈಷಮ್ಯ ಹಿನ್ನೆಲೆ ಈ ಕೃತ್ಯ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ:ಇಂಡ್ಲವಾಡಿಯಲ್ಲಿ ಭೀಕರ ಅಪಘಾತ – ಬೈಕ್ ಮೇಲೆಯೇ ಹರಿದ ಟಿಪ್ಪರ್ ಲಾರಿ

    ಘಟನಾ ಸ್ಥಳಕ್ಕೆ ಬ್ರಹ್ಮಪುರ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಮಿಥುನ್ ರೈ ಕಾರ್ ಮೇಲೆ ಕಲ್ಲು ತೂರಾಟ

  • ಉಡುಪಿ ಬಸ್ ನಿಲ್ದಾಣದಲ್ಲಿ ಕೊರೊನಾ ಜಾಗೃತಿ – 4 ನಲ್ಲಿಯ ಬೇಸಿನ್ ಅಳವಡಿಸಿದ ನಗರಸಭೆ

    ಉಡುಪಿ ಬಸ್ ನಿಲ್ದಾಣದಲ್ಲಿ ಕೊರೊನಾ ಜಾಗೃತಿ – 4 ನಲ್ಲಿಯ ಬೇಸಿನ್ ಅಳವಡಿಸಿದ ನಗರಸಭೆ

    ಉಡುಪಿ: ಸ್ವಚ್ಛತೆಯ ವಿಚಾರದಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನದಲ್ಲಿರುವ ಉಡುಪಿ ನಗರಸಭೆ ಕೊರೊನಾ ವೈರಸ್ ವಿರುದ್ಧ ಸಾರ್ವಜನಿಕರಲ್ಲಿ ಜನಜಾಗೃತಿ ಮಾಡಿಸುತ್ತಿದ್ದು, ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ವಾಶ್ ಬೇಸಿನ್ ಅಳವಡಿಸಿದೆ.

    ಸಿಟಿ ಬಸ್ ನಿಲ್ದಾಣದಲ್ಲಿ ನಾಲ್ಕು ನಲ್ಲಿಯಿರುವ ವಾಶ್ ಬೇಸಿನನ್ನು ನಗರಸಭೆ ಅಳವಡಿಸಿದೆ. ಬಸ್ ಆಟೋದಲ್ಲಿ ಪ್ರಯಾಣಿಸುವವರು ಆಗಾಗ ತಮ್ಮ ಕೈಯನ್ನು ಶುದ್ಧೀಕರಿಸಲು ಎಲ್ಲ ವ್ಯವಸ್ಥೆಗಳನ್ನು ನಗರಸಭೆ ಮಾಡಿಕೊಟ್ಟಿದೆ. ಈ ನಲ್ಲಿಗಳಿಗೆ 1 ಸಾವಿರ ಲೀಟರ್ ನೀರಿನ್ನು ಸಂಗ್ರಸುವ ಸಿಂಟೆಕ್ಸ್ ಅನ್ನು ಅಳವಡಿಸಿದ್ದು, ಸಾರ್ವಜನಿಕರು ಕೈಯನ್ನು ಶುಚಿಗೊಳಿಕೊಳ್ಳಲು ವಾಶ್ ಬೇಸಿನ್ ಪಕ್ಕದಲ್ಲೇ ನಮೂದಿಸಲಾಗಿದೆ. ಕೋವಿಡ್-19 ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನರಿಗೆ ವಿವರಿಸಿರುವ ನಗರಸಭೆ ಕೊರೊನಾ ಬಗ್ಗೆ ಇರತರಲ್ಲೂ ಜಾಗೃತಿ ಮೂಡಿಸಿ ಎಂದು ಕರೆನೀಡಿದೆ.

    ಅಷ್ಟೇ ಅಲ್ಲದೇ ವಾಶ್ ಬೇಸಿನ್ ಆಗಾಗ ಶುಚಿಗೊಳಿಸಲು ಒಬ್ಬ ನಗರಸಭೆಯ ಕಾರ್ಮಿಕನನ್ನು ನೇಮಕ ಮಾಡಲಾಗಿದೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ, ಸಾರ್ವಜನಿಕರಲ್ಲಿ ಎಚ್ಚರಿಕೆ ಇರಲಿ ಎಂದು ನಗರಸಭೆ ಬ್ಯಾನರ್‍ನಲ್ಲಿ ಉಲ್ಲೇಖಿಸಿದೆ. ಭಾನುವಾರದಿಂದ ಹ್ಯಾಂಡ್ ವಾಶ್, ಸೋಪ್ ಅನ್ನು ವಾಶ್ ಬೇಸಿನ್ ಬಳಿ ಇರಿಸುತ್ತೇವೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

    ಇತ್ತ ಉಡುಪಿ ನಗರಸಭೆ ಜನಪರವಾದ ಕೆಲಸ ಮಾಡಿದೆ ನಾವು ನಮ್ಮ ಶುಚಿತ್ವವನ್ನು ಕಾಪಾಡಿಕೊಳ್ಳುತ್ತೇವೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಸಾರ್ವಜನಿಕ ವಾಶ್ ಬೇಸಿನ್ ಅಳವಡಿಸಿದ ಕೂಡಲೇ ಸಾರ್ವಜನಿಕರು ತಮ್ಮ ಕೈ, ಮುಖವನ್ನು ತೊಳೆದುಕೊಂಡು ನಗರಸಭೆ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.