ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ನಾಳೆ ಕರ್ಫ್ಯೂವನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದೆ.
ಭಾನುವಾರ ರಾಜ್ಯದಲ್ಲಿ ಯಾವುದೇ ಸಂಪೂರ್ಣ ಲಾಕ್ಡೌನ್ ಇಲ್ಲ. ಎಂದಿನಂತೆ ಎಲ್ಲಾ ಚಟವಟಿಕೆಗಳು ಇರಲಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತವಾಗಿ ಘೋಷಣೆಯಾಗಿದೆ.
ಪ್ರತಿ ದಿನದಂತೆ ಭಾನುವಾರ ಬಸ್ ಸಂಚಾರ ಇರುತ್ತೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಎಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಂಚಾರ ಮಾಡಲಿದೆ. ಅಲ್ಲದೇ ಅಂತರ ರಾಜ್ಯ ಸಂಚಾರ ಕೂಡ ಇರುತ್ತದೆ. ಜೊತೆಗೆ ಆಟೋ, ಕ್ಯಾಬ್ ಎಲ್ಲ ಸಂಚಾರ ವ್ಯವಸ್ಥೆ ಕೂಡ ಇರುತ್ತದೆ.
ಹೋಟೆಲ್, ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಅದೇ ರೀತಿ ಹೋಟೆಲ್ನಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೂ ಪಾರ್ಕ್ ತೆರೆದಿರುತ್ತದೆ. ಜೊತೆಗೆ ಮದ್ಯದಂಗಡಿ ಕೂಡ ಓಪನ್ ಆಗುತ್ತದೆ.
– ಕಾನೂನು ಚೌಕಟ್ಟನ್ನ ಬಿಟ್ಟು ನಿರ್ಧಾರ ತೆಗೆದುಕೊಂಡ್ರೆ ಸಹಿಸಲ್ಲ
– ಆಡಳಿತದಿಂದ ಕುಟುಂಬವನ್ನು ದೂರವಿಡಿ
ಬೆಂಗಳೂರು: ಕಾನೂನು ಚೌಕಟ್ಟನ್ನು ಬಿಟ್ಟು ನಿರ್ಧಾರ ತೆಗೆದುಕೊಂಡರೆ ಸಹಿಸಲ್ಲ ಎಂದು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವರಿಗೆ ಫೋನ್ ಕರೆ ಮಾಡಿ ಆರು ನಿಮಿಷ ಮಾತನಾಡಿದ್ದಾರೆ. ಈ ವೇಳೆ ಯಡಿಯೂರಪ್ಪನವರಿಗೆ ಮೂರು ಷರತ್ತು ಹಾಕಿದ್ದಾರೆ. ಜೊತೆಗೆ ಅಕ್ಟೋಬರ್ ತಿಂಗಳಾಂತ್ಯದವರೆಗೂ ಗಡುವು ನೀಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆ ಬ್ಯುಸಿಯಲ್ಲೂ ಅಮಿತ್ ಶಾ ಕರ್ನಾಟಕದ ಚಿಂತೆ ಮಾಡುತ್ತಿದ್ದಾರಂತೆ. ಹೀಗಾಗಿ ರಾಜ್ಯ ವಿಧಾನಸಭೆ ಅಧಿವೇಶನಕ್ಕೂ ಮೊದಲು ಅವರು ಸಿಎಂ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಈ ವೇಳೆ ಅಮಿತ್ ಶಾ, ಮುಖ್ಯಮಂತ್ರಿಯಾಗಿ ಕಾನೂನಿನ ಚೌಕಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಡ್ಡಿಪಡಿಸುವುದಿಲ್ಲ. ಆದರೆ ಚೌಕಟ್ಟನ್ನು ಮೀರಿ ನಿರ್ಧಾರಗಳನ್ನ ತೆಗೆದುಕೊಂಡರೆ ನಾವು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಷರತ್ತು ಏನು?
ಸಾಲು ಸಾಲು ವರ್ಗಾವಣೆ ಬಂದ್ ಮಾಡಿ, ಈ ಬಗ್ಗೆಯೇ ಹೆಚ್ಚು ಆರೋಪಗಳು ಕೇಳಿ ಬರುತ್ತಿವೆ. ಈಗ ಮಾಡಿದ್ದು ಸಾಕು, ಅಗತ್ಯ ಬಿಟ್ಟು ವರ್ಗಾವಣೆ ಮಾಡಬೇಡಿ. ಆಯಾ ಇಲಾಖೆಗಳ ಸಚಿವರಿಗೂ ಇದನ್ನೇ ಹೇಳಿಬಿಡಿ ಎಂದು ಶಾ ಮೊದಲ ಕಂಡೀಷನ್ ಹಾಕಿದ್ದಾರಂತೆ.
ಮುಖ್ಯಮಂತ್ರಿ ಕಚೇರಿ ಸ್ವಚ್ಛವಾಗಿಲ್ಲ, ಅದನ್ನು ನೀವು ಮಾಡಲೇಬೇಕು. ಸಿಎಂ ಕಚೇರಿ ಸುತ್ತ ಕ್ಲೀನ್ ಆಗಬೇಕು ಅಂತ ಹೇಳಿದ್ವಿ. ಆದರೆ 15 ದಿನಗಳು ಕಳೆದರೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಅಕ್ಟೋಬರ್ ಅಂತ್ಯದ ವೇಳೆಗೆ ಇದು ಸರಿ ಹೋಗಬೇಕು. ಜೊತೆಗೆ ದಕ್ಷ ಐಎಎಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳಬೇಕು ಎಂದು ಶಾ ಸೂಚನೆ ನೀಡಿದ್ದಾರೆ.
ಆಡಳಿತದಲ್ಲಿ ಮಾತ್ರ ಕುಟುಂಬ ದೂರ ಇಡಿ. ನಿಮ್ಮ ಕುಟುಂಬದ ಜತೆ ನೀವು ಇರಲು ಅಭ್ಯಂತರವಿಲ್ಲ. ಆದರೆ ವಿಧಾನಸಭೆ, ಗೃಹ ಕಚೇರಿ ಕೃಷ್ಣಾದಲ್ಲಿ ಕುಟುಂಬ ದೂರ ಇಡಿ. ಆಡಳಿದ ವಿಚಾರದಲ್ಲೂ ಕೂಡ ಕುಟುಂಬ ಸದಸ್ಯರು ಹಸ್ತಕ್ಷೇಪ ಮಾಡಬಾರದು. ಪರೋಕ್ಷವಾಗಿ, ನೇರವಾಗಿ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಗೃಹ ಸಚಿವ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ವಾರ್ನಿಂಗ್ ಬೆನ್ನಲ್ಲೇ ಸಿಎಂ ಈಗ ಕ್ಲೀನ್ ಆಂಡ್ ಡೈನಾಮಿಕ್ ಐಎಎಸ್ ಅಧಿಕಾರಿಗಳ ತಲಾಶ್ಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಕಚೇರಿಯ ನಾಲ್ವರು ಐಎಎಸ್ ಅಧಿಕಾರಿಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದಾಗಿ ಹಾಲಿ ಇರುವ ನಾಲ್ವರು ಅಧಿಕಾರಿಗಳ ತಲೆದಂಡ ಸಾಧ್ಯತೆ ಹೆಚ್ಚು ಎಂಬ ಮಾತು ಕೇಳಿ ಬರುತ್ತಿವೆ.
ಈ ಹಿಂದೆ ಓರ್ವ ಐಎಎಸ್ ಅಧಿಕಾರಿಯನ್ನು ಮಾತ್ರ ಮುಖ್ಯಮಂತ್ರಿ ಕಚೇರಿಯಿಂದ ಎತ್ತಂಗಡಿ ಮಾಡಲಾಗಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಸಿಎಂ ಕಚೇರಿ ಆಪರೇಷನ್ ಕ್ಲೀನ್ಗೆ ಹೈಕಮಾಂಡ್ ಸೂಚಿಸಿದೆ.
ಬೆಂಗಳೂರು: ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರು ಮಹಿಳೆ ಮೇಲೆ ನಡೆಸಿದ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಸಿಎಂ ಕಚೇರಿ ಸಿಬ್ಬಂದಿ, ಮಹಿಳೆಯ ನೆರವಿಗೆ ಧಾವಿಸಿದೆ.
ಇಂದು ಬೆಳಗ್ಗೆ ಮೀಟರ್ ಬಡ್ಡಿ ದಂಧೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕೃತ್ಯವನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬಗ್ಗೆ ಸಿಎಂ ಕಚೇರಿ ಸಿಬ್ಬಂದಿ ಪಬ್ಲಿಕ್ ಟಿವಿಗೆ ಕರೆ ಮಾಡಿ ಮಹಿಳೆಯ ಮೊಬೈಲ್ ಪಡೆದಿದ್ದಾರೆ. ಕೂಡಲೇ ಮಹಿಳೆಗೆ ಕರೆ ಮಾಡಿ ನಾವಿದ್ದೀವಿ ಎಂದು ಧೈರ್ಯ ತುಂಬಿದ್ದಾರೆ. ಅಲ್ಲದೇ 11 ಗಂಟೆಗೆ ಸಿಎಂ ಗೃಹ ಕಚೇರಿಗೆ ಬರುವಂತೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಅಂತ ಹೇಳಿದ್ದಾರೆ.
ಅಲೋಕ್ ಕುಮಾರ್ ಸಮ್ಮುಖದಲ್ಲಿ ನ್ಯಾಯ ಕೊಡಿಸುವ ಭರವಸೆ ನೀಡಿರುವ ಸಿಎಂ ಕುಮಾರಸ್ವಾಮಿ ಅವರು ಬಡ್ಡಿ ದಂಧೆ ಕೋರರ ವಿರುದ್ಧ ಕ್ರಮಕೈಗೊಳ್ಳುವ ಸೂಚನೆ ನೀಡಿದ್ದಾರೆ. ಖುದ್ದು ಕುಮಾರಸ್ವಾಮಿ ಅವರೇ ಮಹಿಳೆಯ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ನಡೆದಿದ್ದೇನು?
ಮೀಟರ್ ಬಡ್ಡಿ ಗ್ಯಾಂಗ್ ಬಡ್ಡಿ ದುಡ್ಡುಕೊಡಲಿಲ್ಲ ಅಂತ ಮಹಿಳೆಯನ್ನು ಮನೆಯಲ್ಲಿಯೇ ಕೂಡಿ ಹಾಕಿ ತಂದೆ ಮುಂದೆನೇ ಲೈಂಗಿಕ ಕಿರುಕುಳ ನೀಡಿದ್ದರು. ಮತ್ತಿಕೆರೆ ನಿವಾಸಿ ಮಹಿಳೆಯೊಬ್ಬರು ಕಳೆದ ಜನವರಿಯಲ್ಲಿ ಅದೇ ಏರಿಯಾದ ಪ್ರಕಾಶ್ ಮತ್ತು ವೇದಾಂತ್ ಬಳಿಯಿಂದ 1 ಲಕ್ಷ ರೂ. ಹಣವನ್ನು ಪಡೆದಿದ್ದರು. ಹಾಗೆಯೇ ಲಟ್ಟೆ ಗೊಲ್ಲಹಳ್ಳಿ ನಿವಾಸಿ ನಾರಾಯಣಪ್ಪ ಎಂಬವರಿಂದ 2 ಲಕ್ಷ ರೂ. ಹಣ ಪಡೆದಿದ್ದರು. ತಿಂಗಳ ಬಡ್ಡಿಕೂಡ ಕೊಡುತ್ತಿದ್ದರು. ಪ್ರಕಾಶ್ ಮತ್ತು ವೇದಾಂತ್ ಬಳಿ ಪಡೆದ ಹಣಕ್ಕೆ ತಿಂಗಳು ಕಳೆದಂತೆ 30 % ಬಡ್ಡಿ ಜಾಸ್ತಿ ಮಾಡುತ್ತಾ ಹೋಗಿದ್ದಾರೆ. ಪರಿಣಾಮ 1 ಲಕ್ಷ ಹಣಕ್ಕೆ ಎಂಟು ತಿಂಗಳ ಬಡ್ಡಿಯೆಲ್ಲಾ ಸೇರಿಸಿ 12 ಲಕ್ಷ ರೂ. ಆಗಿದೆ. ಅಷ್ಟೇ ಅಲ್ಲದೇ ನಾರಾಯಣಪ್ಪ ಬಳಿ ಪಡೆದ 1 ಲಕ್ಷ ಹಣಕ್ಕೆ 8 ತಿಂಗಳಿಗೆ ಲೆಕ್ಕ ಇಲ್ಲದೇ 28 ಲಕ್ಷ ಆಗಿದೆ ಕೊಡಿ ಅಂತ ಲಟ್ಟೆಗೊಲ್ಲಹಳ್ಳಿಯ ಮನೆವೊಂದರಲ್ಲಿ ಮಹಿಳೆಯನ್ನ ಕೂಡಿ ಹಾಕಿ ತಂದೆಯ ಮುಂದೆನೇ ಸೀರೆ ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದರು.
ಇತ್ತ ಪ್ರಕಾಶ್ ಮತ್ತು ವೇದಾಂತ್, ಮಗನನ್ನ ಕಿಡ್ನಾಪ್ ಮಾಡ್ತೀವಿ ಅಂತ ಮೊಬೈಲಿನಲ್ಲಿ ಮೆಸೇಜ್ ಹಾಕಿ ಮನಬಂದಂತೆ ಏಕ ವಚನದಲ್ಲಿ ಬೈದಿದ್ದರು. ಮಗ ದೀಪಕ್ ಯಾವ ಕಾಲೇಜಿಗೆ ಹೋಗುವುದು ಗೊತ್ತು. ಸುಮ್ಮನೆ ಅವನ ಭವಿಷ್ಯ ಹಾಳುಮಾಡಬೇಡಿ ಮರ್ಯಾದೆಯಿಂದ ಸೆಟ್ಲ್ಮೆಂಟ್ ಮಾಡಿ. ನೀವು ಎಲ್ಲಿದ್ದರೂ ಬಿಡಲ್ಲ ನಮ್ಮದು 12 ಲಕ್ಷ ರೂ. ಕೊಡಬೇಕು ಎಂದಿದ್ದರು. ಅಲ್ಲದೇ ಪ್ರಕಾಶ್ ಮತ್ತು ವೇದಾಂತ್, ನನ್ನ ಪತಿಗೆ ಕಾಲ್ ಮಾಡಿ ಕೆಟ್ಟದಾಗಿ ಬೈದಿದ್ದಾರೆ ಎಂದು ನೊಂದ ಮಹಿಳೆ ದೂರಿದ್ದರು.
ವೇದಾಂತ್ ಹಾಗೂ ಪ್ರಕಾಶ್ ವಿರುದ್ಧ ನೊಂದ ಮಹಿಳೆ ಮತ್ತು ಪತಿ ಸೋಲದೇವನಹಳ್ಳಿ ಮತ್ತು ಕೊಡಿಗೇಹಳ್ಳಿ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದರು.