Tag: ಸಿಂಗ

  • ‘ಸಿಂಗಂ’ ರೀತಿಯ ಸಿನಿಮಾಗಳು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತವೆ: ಹೈಕೋರ್ಟ್‌ ನ್ಯಾಯಮೂರ್ತಿ

    ‘ಸಿಂಗಂ’ ರೀತಿಯ ಸಿನಿಮಾಗಳು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತವೆ: ಹೈಕೋರ್ಟ್‌ ನ್ಯಾಯಮೂರ್ತಿ

    ಮುಂಬೈ: ಸಿಂಗಂ ತರಹದ ಸಿನಿಮಾಗಳು ಸಮಾಜಕ್ಕೆ ಕೆಟ್ಟ ಸಂದೇಶ ಸಾರುತ್ತವೆ ಎಂದು ಬಾಂಬೆ ಹೈಕೋರ್ಟ್‌ (Bombay High Court) ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದೆ.

    “ಸಿಂಗಂ” ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ತೋರಿಸಿರುವಂತೆ ಕಾನೂನಿನ ಪ್ರಕ್ರಿಯೆಯ ಬಗ್ಗೆ ತಲೆ ತ್ವರಿತ ಹೀರೋ ಪೊಲೀಸ್‌ ಪಾತ್ರದಲ್ಲಿ ನ್ಯಾಯವನ್ನು ನೀಡುವ ಸಿನಿಮೀಯ ಚಿತ್ರವು ತುಂಬಾ ಹಾನಿಕಾರಕ ಸಂದೇಶವನ್ನು ರವಾನಿಸುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಗೌತಮ್ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಟರ್ಪಾಲ್ ಶೆಡ್‍ನಲ್ಲಿ ವಾಸಿಸುವ ಒಂಟಿ ಮಹಿಳೆಗೆ ನೋಟಿಸ್

    ಇಂಡಿಯನ್ ಪೊಲೀಸ್ ಫೌಂಡೇಶನ್ ತನ್ನ ವಾರ್ಷಿಕ ದಿನ ಮತ್ತು ಪೊಲೀಸ್ ಸುಧಾರಣಾ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಪೊಲೀಸ್ ಸುಧಾರಣೆಗಳ ಕುರಿತು ಮಾತನಾಡಿದ ಅವರು, ನಮ್ಮನ್ನು ನಾವು ಸುಧಾರಿಸಿಕೊಳ್ಳದ ಹೊರತು ಕಾನೂನು ಜಾರಿ ಯಂತ್ರವನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪೋಲೀಸರು ಬೆದರಿಸುವವರು, ಭ್ರಷ್ಟರು ಮತ್ತು ಹೊಣೆಗಾರಿಕೆ ಇಲ್ಲದವರು ಎಂಬ ಭಾವನೆ ಜನರಲ್ಲಿ ಮೂಡಿದೆ. ಸಾರ್ವಜನಿಕ ಜೀವನದಲ್ಲಿರುವ ನ್ಯಾಯಾಧೀಶರು, ರಾಜಕಾರಣಿಗಳು ಮತ್ತು ಪತ್ರಕರ್ತರ ಬಗ್ಗೆಯೂ ಇದೇ ಅಭಿಪ್ರಾಯ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

    ಚಲನಚಿತ್ರಗಳಲ್ಲಿ ಪೊಲೀಸರು ದಪ್ಪ ಕನ್ನಡಕ ಹಾಕುತ್ತಾರೆ. ನ್ಯಾಯಾಧೀಶರ ವಿರುದ್ಧವೇ ಪೊಲೀಸರು ಕಾಣಿಸಿಕೊಳ್ಳುತ್ತಾರೆ. ತಪ್ಪಿತಸ್ಥರನ್ನು ಹೋಗಲು ಬಿಡುತ್ತಾರೆ ಅಂತ ನ್ಯಾಯಾಲಯಗಳನ್ನು ಪೊಲೀಸರು ದೂಷಿಸುತ್ತಾರೆ. ಕೊನೆಗೆ ನಾಯಕನ ಪಾತ್ರ ಮಾಡುವ ಪೊಲೀಸ್‌ ಏಕಾಂಗಿಯಾಗಿ ನ್ಯಾಯ ಒದಗಿಸುತ್ತಾನೆ ಎನ್ನುವ ಸಾರಾಂಶ ಇರುತ್ತದೆ ಎಂದು ಸಿನಿಮಾಗಳ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ವಿಧಿವಶ

    ‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ವಿಧಿವಶ

    ರಾಠಿ ಚಿತ್ರರಂಗದ ಹಿರಿಯ ನಟ ಜಯಂತ್ ಸಾವರ್ಕರ್ (Jayant Savarkar) ಅವರು 87ನೇ ವಯಸ್ಸಿಗೆ ನಿಧನರಾಗಿದ್ದಾರೆ. ತಂದೆ ಜಯಂತ್ ನಿಧನದ ಕುರಿತು ಕೌಸ್ತುಭ್ ಸಾವರ್ಕರ್ ಖಚಿತಪಡಿಸಿದ್ದಾರೆ. ಮರಾಠಿ- ಹಿಂದಿ ಸಿನಿಮಾರಂಗದಲ್ಲಿ ಕಳೆದ ಆರು ದಶಕಗಳಿಂದ ಜಯಂತ್ ನಟನೆಯ ಮೂಲಕ ರಂಜಿಸಿದ್ದರು.

    ತಂದೆಯವರಿಗೆ 15 ದಿನಗಳ ಹಿಂದೆ ಕಡಿಮೆ ರಕ್ತದೊತ್ತಡ ಉಂಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಆದರೆ, ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ ಎಂದು ಪುತ್ರ ಕೌಸ್ತುಭ್ ಅವರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಟ ಜಯಂತ್ ಅವರಿಗೆ ಪತ್ನಿ, ಓರ್ವ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇಂದು (ಜುಲೈ 25) ಅವರ ಅಂತ್ಯಸಂಸ್ಕಾರ ನಡೆಯಲಿದೆ. ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ‌’ಬುದ್ಧಿವಂತ 2′ ಬಿಗ್ ಅಪ್‌ಡೇಟ್

    ಜಯಂತ್ ಸಾವರ್ಕರ್ ಅವರು ಮರಾಠಿ, ಹಿಂದಿ, ರಂಗಭೂಮಿ ಹಾಗೂ ದೂರದರ್ಶನದಲ್ಲಿ ನಟಿಸಿದ್ದಾರೆ. ಅವರು ಆರು ದಶಕಗಳು ನಟನೆಯಲ್ಲಿ ತೊಡಗಿಕೊಂಡಿದ್ದರು.

    ಹಿಂದಿಯಲ್ಲಿ 2011ರಲ್ಲಿ ರಿಲೀಸ್ ಆದ ಅಜಯ್‌ ದೇವಗನ್‌ ನಟನೆಯ ‘ಸಿಂಗಂ’ (Singham) ಸಿನಿಮಾದಲ್ಲಿ ಕಮಲಾಕಾಂತ್ ಭೋಸ್ಲೆ ಪಾತ್ರ ಮಾಡಿದ್ದರು. ನಾಯಕಿ ಕಾಜಲ್ ಅಗರ್‌ವಾಲ್(Kajal Aggarwal) ಅವರ ಅಜ್ಜನ ಪಾತ್ರ ಇದಾಗಿತ್ತು. ರಾಕಿ ಹ್ಯಾಂಡ್ಸಮ್, ವಾಸ್ತವ್, ದಿ ರಿಯಾಲಿಟಿ ಮೊದಲಾದ ಚಿತ್ರಗಳಲ್ಲಿ ಜಯಂತ್ ಬಣ್ಣ ಹಚ್ಚಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಂಬೈನ ಕಾಪ್ ರಾಕೇಶ್ ಮಾರಿಯಾ ಹಿಂದೆ ಬಿದ್ದ `ಚೆನ್ನೈ ಎಕ್ಸ್‌ಪ್ರೆಸ್’ ನಿರ್ಮಾಪಕ

    ಮುಂಬೈನ ಕಾಪ್ ರಾಕೇಶ್ ಮಾರಿಯಾ ಹಿಂದೆ ಬಿದ್ದ `ಚೆನ್ನೈ ಎಕ್ಸ್‌ಪ್ರೆಸ್’ ನಿರ್ಮಾಪಕ

    `ಸಿಂಗಂ’ ಮತ್ತು `ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರಗಳನ್ನು ನಿರ್ದೇಶನ ಮಾಡುವುದರ ಮೂಲಕ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿರೋ ನಿರ್ದೇಶಕ ಕಮ್ ನಿರ್ಮಾಪಕ ರೋಹಿತ್ ಶೆಟ್ಟಿ ಮುಂಬೈ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ಅವರ ಬಯೋಪಿಕ್ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ.

    ಬಿಟೌನ್‌ನಲ್ಲಿ ಸಾಕಷ್ಟು ಚಿತ್ರಗಳನ್ನ ನಿರ್ದೇಶನ ಮತ್ತು ನಿರ್ಮಾಣ ಮಾಡುವುದರ ಮೂಲಕ ಗಮನ ಸೆಳೆದಿರೋ ರೋಹಿತ್ ಶೆಟ್ಟಿ ಈ ಬಾರಿ ಖಡಕ್ ಪೊಲೀಸ್ ಆಫೀಸರ್ ಕಥೆಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಮುಂಬೈನ ಮಾಜಿ ಕಾಪ್ ರಾಕೇಶ್ ಮಾರಿಯಾ ಜೀವನ ಚರಿತ್ರೆಯನ್ನ ರಿಲಯನ್ಸ್ ಎಂಟರ್‌ಟೈನ್ಮೆಂಟ್‌ನೊಂದಿಗೆ ಈ ಚಿತ್ರ ನಿರ್ಮಾಣ ಮಾಡಲು ಸಾಥ್ ನೀಡಿದ್ದಾರೆ.

    ರಾಕೇಶ್ ಮಾರಿಯಾ ಮುಂಬೈನ ಖಡಕ್ ಪೊಲೀಸ್ ಆಧಿಕಾರಿಯಾಗಿದ್ರು. 36 ವರ್ಷಗಳ ಕಾಲ ಭಯೋತ್ಪಾದನೆಯ ಮುಖವನ್ನು ಹತ್ತಿರದಿಂದ ನೋಡಿದರು. ಮುಂಬೈನಲ್ಲಿ ಸಾಕಷ್ಟು ಮೇಜರ್ ಸನ್ನಿವೇಷಗಳ ಕುರಿತು ಸಿನಿಮಾ ಮಾಡಲಾಗುತ್ತಿದೆ. 2020ರ ರಾಕೇಶ್ ಮಾರಿಯಾ ಅವರ ಜೀವನ ಚರಿತ್ರೆಯನ್ನ `ಲೆಟ್ ಮಿ ಸೇ ಇಟ್ ನೌ’ ಪುಸ್ತಕದ ಮೂಲಕ ಅನಾವರಣ ಮಾಡಲಾಗಿತ್ತು. ಇದೀಗ ಇದೇ ಬಯೋಗ್ರಫಿ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಇದನ್ನೂ ಓದಿ: ಸಾನಿಯಾ ಮಿರ್ಜಾ ಮಗನ ರೇಟು ರೂ.500 ಎಂದ ನಿರ್ದೇಶಕಿ ಫರಾ ಖಾನ್

    ಇತ್ತೀಚೆಗಷ್ಟೆ ನಿರ್ಮಾಪಕ ರಾಕೇಶ್ ಮಾರಿಯಾ ಅವರನ್ನ ಭೇಟಿಯಾಗಿ ಅವರ ಬಯೋಪಿಕ್ ಕುರಿತು ಮಾತಾನಾಡಿದ್ದಾರೆ. ಈ ಸುದ್ದಿ ಕೇಳಿ ಮಾಜಿ ಪೊಲೀಸ್ ಅಧಿಕಾರಿ ರಾಕೇಶ್ ಕೂಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಖಡಕ್ ಪೊಲೀಸ್ ಅಧಿಕಾರಿಯಾಗಿ ಅದ್ಯಾವ ಬಿಟೌನ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಅಂತಾ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಕೆರಳಿಸಿದೆ.

  • ‘ಸಿಂಗಂ’ಅಂತೆ ಆಗಬೇಡಿ- ಯುವ ಐಪಿಎಸ್ ಅಧಿಕಾರಿಗಳಿಗೆ ಮೋದಿ ಸಂದೇಶ

    ‘ಸಿಂಗಂ’ಅಂತೆ ಆಗಬೇಡಿ- ಯುವ ಐಪಿಎಸ್ ಅಧಿಕಾರಿಗಳಿಗೆ ಮೋದಿ ಸಂದೇಶ

    ಹೈದರಾಬಾದ್: ‘ಸಿಂಗಂ’ ನಂತಹ ಸಿನಿಮಾಗಳನ್ನು ನೋಡಿ ನಾವು ಎಲ್ಲರಿಗಿಂತ ಹೆಚ್ಚು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಡಿ ಎಂದು ಯುವ ಐಪಿಎಸ್ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

    ಹೈದರಾಬಾದ್‍ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಐಪಿಎಸ್ ಪ್ರೊಬೆಷನರ್ ಗಳ ‘ದೀಕ್ಷಾಂತ್ ಪೆರೇಡ್’ ಸಂದರ್ಭದಲ್ಲಿ ಪಿಎಂ ಮೋದಿ ಯುವ ಐಪಿಎಸ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

    ಯುವ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಜನರ ನಂಬಿಕೆಯನ್ನು ಗೆಲ್ಲುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನು ನೀಡಿದರು.

    ಪೊಲೀಸ್ ಅಧಿಕಾರಿಗಳು ಮೊದಲು ತಾವು ಕರ್ತವ್ಯದಲ್ಲಿ ಸೇರ್ಪಡೆಯಾದ ಸಂದರ್ಭದಲ್ಲಿ ಎಲ್ಲರೂ ತಮಗೆ ಭಯ ಪಡೆಬೇಕು ಎಂದುಕೊಳ್ಳುತ್ತಾರೆ. ಪ್ರಮುಖವಾಗಿ ಗ್ಯಾಂಗ್‍ಸ್ಟಾರ್, ಕಾನೂನು ಬಾಹಿರ ಕೃತ್ಯ ನಡೆಸುವವರು ತಮ್ಮನ್ನು ನೋಡಿ ಭಯ ಪಡೆಬೇಕು ಎಂದು ಭಾವಿಸುತ್ತಾರೆ. ಇದರಿಂದ ಅತ್ಯುತ್ತಮ ಕೆಲಸಗಳನ್ನು ನಿರ್ಲಕ್ಷಿಸುವ ಅವಕಾಶವಿದೆ. ಇದರಿಂದ ಜನರ ಮನಸ್ಸಿನಲ್ಲಿ ಪೊಲೀಸ್ ಪಡೆಯ ಬಗ್ಗೆ ನಕಾರಾತ್ಮಕ ಚಿತ್ರಣವನ್ನು ಸೃಷ್ಟಿಸುತ್ತದೆ ಎಂದು ಮೋದಿ ಎಚ್ಚರಿಕೆಯ ಸಲಹೆಯನ್ನು ನೀಡಿದರು.

    ನಿಮ್ಮ ಸಮವಸ್ತ್ರ ನೋಡಿದರೆ ನಿಮಗೆ ಹೆಮ್ಮೆ ಎನಿಸಬೇಕೆ ವಿನಾಃ ಆ ಸಮವಸ್ತ್ರಕ್ಕಿರುವ ಅಧಿಕಾರವನ್ನು ನೋಡಿ ಅಲ್ಲ. ಖಾಕಿ ಸಮವಸ್ತ್ರಕ್ಕಿರುವ ಹೆಮ್ಮೆಯನ್ನು ಎಂದು ಕಳೆದುಕೊಳ್ಳಬಾರದು. ಯುವ ಅಧಿಕಾರಿಗಳು ಸಾಮಾನ್ಯ ಜನರ ದೃಷ್ಟಿಯಲ್ಲಿ ಪೊಲೀಸರ ಚಿತ್ರಣ ಬದಲಾಗುವಂತೆ ನೋಡಿಕೊಳ್ಳಬೇಕು. ಜನರು ಪೊಲೀಸ್ ಇಲಾಖೆಯ ಮಾನವ ಮುಖವನ್ನು ನೋಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

    ಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಗೌರವವನ್ನು ಆಧರಿಸಿ ಸಂಬಂಧವನ್ನು ಬೆಳೆಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜನರೊಂದಿಗೆ ಪ್ರೀತಿಯ ಸೇತುವೆಯನ್ನು ನಿರ್ಮಿಸಿ. ನೀವು ನಿವೃತ್ತಿಯಾದ ಬಳಿಕವೂ ಜನರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. ನಮ್ಮ ಸಮಯದಲ್ಲಿ ಅತ್ಯುತ್ತಮ ಅಧಿಕಾರಿಯೊಬ್ಬರು ಹೇಳುತ್ತಾರೆ. ಒಮ್ಮೆ ನೀವು ಜನರ ಮನಸ್ಸನ್ನು ಗೆದ್ದರೆ ಎಲ್ಲವೂ ಬದಲಾಗುತ್ತದೆ ಎಂದು ತಿಳಿಸಿದರು.

  • ನವರಸಗಳಿಂದ ಶೃಂಗಾರಗೊಂಡ ಸಿಂಗ!

    ನವರಸಗಳಿಂದ ಶೃಂಗಾರಗೊಂಡ ಸಿಂಗ!

    ಸಾಮಾನ್ಯವಾಗಿ ಒಂದೊಂದು ವರ್ಗದ ಪ್ರೇಕ್ಷಕರ ನಿರೀಕ್ಷೆಗಳೂ ಒಂದೊಂದು ತೆರನಾಗಿರುತ್ತವೆ. ಕೆಲವರಿಗೆ ಡ್ಯಾನ್ಸು, ಫೈಟು ಇಷ್ಟವಾದರೆ ಮತ್ತೆ ಕೆಲ ಮಂದಿ ಸೆಂಟಿಮೆಂಟ್, ಪ್ರೀತಿ, ಹಾಸ್ಯಗಳಿಗೆ ಹಾತೊರೆಯುತ್ತಾರೆ. ಆದರೆ ಅದೆಲ್ಲದರ ಜೊತೆಗೇ ಭರ್ಜರಿ ಮನೋರಂಜನೆಯನ್ನಂತೂ ಪ್ರತಿ ಪ್ರೇಕ್ಷಕರೂ ಬಯಸುತ್ತಾರೆ. ಇಂಥಾ ಎಲ್ಲಾ ಅಂಶಗಳನ್ನೂ ಚಿತ್ರವೊಂದು ತುಂಬಿಕೊಂಡು ತೆರೆ ಕಂಡರೆ ಖಂಡಿತಾ ಎಲ್ಲ ವರ್ಗದ ಪ್ರೇಕ್ಷಕರೂ ಸಂತುಷ್ಟರಾಗುತ್ತಾರೆ. ಅಂಥಾ ಎಲ್ಲ ಗುಣಗಳಿಂದ ಸಂಪನ್ನವಾಗಿರೋ ಸಿಂಗ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

    ಒಂದರ್ಥದಲ್ಲಿ ಸಿಂಗ ನವರಸಗಳನ್ನೂ ಮೈತುಂಬಿಕೊಂಡಿರೋ ಚಿತ್ರ. ಈಗ ಬಿಡುಗಡೆಯಾಗಿರೋ ಟ್ರೈಲರ್ ಮೂಲಕ ಇದೊಂದು ಮಾಸ್ ಚಿತ್ರ ಎಂಬ ವಿಚಾರ ಪ್ರೇಕ್ಷಕರಿಗೆ ಮನದಟ್ಟಾಗಿದೆ. ಆದರೆ ಈ ಸಿನಿಮಾದೊಳಗೆ ಸಾಹಸ, ಹಾಸ್ಯ, ಪ್ರೀತಿ, ಸೆಂಟಿಮೆಂಟ್ ಸೇರಿದಂತೆ ಸಕಲ ಅಂಶಗಳೂ ಇವೆ. ನಿರ್ದೇಶಕ ವಿಜಯ್ ಕಿರಣ್ ವರ್ಷಗಳ ಕಾಲ ಶ್ರಮ ವಹಿಸಿ ಅಷ್ಟೊಂದು ರುಚಿಕಟ್ಟಾಗಿರುವಂತೆ ಈ ಚಿತ್ರವನ್ನು ರೂಪಿಸಿದ್ದಾರಂತೆ.

    ಅದರಲ್ಲಿಯೂ ವಿಶೇಷವಾಗಿ ಸಂಸಾರ ಸಮೇತರಾಗಿ ಕೂತು ನೋಡುವಂಥಾ ಚಿತ್ರವಾಗಿಯೂ ಸಿಂಗ ಮೂಡಿ ಬಂದಿದೆಯಂತೆ. ಹಳ್ಳಿ ಹಿನ್ನೆಲೆಯಲ್ಲಿ ಅರಳಿಕೊಳ್ಳೋ ಕಥೆ ಹೊಂದಿರೋ ಸಿಂಗ ಮೂಲಕ ಚಿರಂಜೀವಿ ಸರ್ಜಾ ಕೂಡಾ ಸಂಪೂರ್ಣ ಬೇರೆಯದ್ದೇ ಲುಕ್ಕಿನಲ್ಲಿ ಲಕಲಕಿಸಿದ್ದಾರೆ. ಅವರಿಗೆ ಹಳ್ಳಿ ಹುಡುಗಿಯಾಗಿ ಅದಿತಿ ಪ್ರಭುದೇವ ಸಾಥ್ ಕೊಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಕೂಡಾ ಚಿತ್ರದುದ್ದಕ್ಕೂ ಇರುವ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

    ಮಾಸ್ ಅಂಶ ಸಿಂಗ ಚಿತ್ರದ ಪ್ರಧಾನ ಲಕ್ಷಣ. ಆದರೆ ಅದರ ಹಿನ್ನೆಲೆಯಲ್ಲಿ ಎಲ್ಲರನ್ನೂ ಕಾಡುವಂಥಾ ಹಳ್ಳಿ ಸೀಮೆಯ ಕಥೆಯಿದೆ. ಅದೆಲ್ಲವನ್ನೂ ವಿಜಯ್ ಕಿರಣ್ ವಿರಳ ಲೊಕೇಷನ್ನುಗಳಲ್ಲಿ ಸೆರೆ ಹಿಡಿದಿದ್ದಾರೆ. ಈಗ ಜಾಹೀರಾಗಿರೋ ಟ್ರೈಲರ್ ಮತ್ತು ಪೋಸ್ಟರ್‍ಗಳ ಆಧಾರದಲ್ಲಿ ಸಿಂಗ ಹೀಗೆಯೇ ಇರಬಹುದೆಂಬ ಕಲ್ಪನೆ ಬಹುತೇಕರಲ್ಲಿ ಇರಬಹುದು. ಆದರೆ ಅದನ್ನು ಮೀರಿಸುವಂಥಾ ಮರ್ಮಗಳನ್ನು ಸಿಂಗ ತನ್ನೊಳಗಿಟ್ಟುಕೊಂಡಿದೆ. ಅದೇನೆಂಬುದು ಇದೇ ತಿಂಗಳ ಹತ್ತೊಂಬತ್ತನೇ ತಾರೀಕಿನಂದು ಅನಾವರಣಗೊಳ್ಳಲಿದೆ.

  • ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

    ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

    ಬೆಂಗಳೂರು: ಕನ್ನಡ ಚಿತ್ರರಂಗವನ್ನು ತನ್ನ ಅಗಾಧ ಪ್ರತಿಭೆಯ ಮೂಲಕವೇ ಆವರಿಸಿಕೊಂಡಿರುವ ಖ್ಯಾತ ಖಳನಟ ರವಿಶಂಕರ್. ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಮೂಲಕ ಖಳನಾಗಿ ಅಬ್ಬರಿಸಲಾರಂಭಿಸಿದ್ದ ರವಿಶಂಕರ್ ಆ ನಂತರ ತಿರುಗಿ ನೋಡಿದ್ದೇ ಇಲ್ಲ. ಈ ಹಾದಿಯಲ್ಲಿ ವೈವಿಧ್ಯಮಯ ಪಾತ್ರಗಳ ರೂವಾರಿಯಾಗಿ ಸಾಗಿ ಬಂದಿರೋ ಅವರು ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರೋ ಸಿಂಗ ಚಿತ್ರದಲ್ಲಿಯೂ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರ ಪಾತ್ರ ಈ ಚಿತ್ರದಲ್ಲಿ ಖಂಡಿತಾ ನೀವಂದುಕೊಂಡಂತೆ ಇರೋದಿಲ್ಲ!

    ರವಿಶಂಕರ್ ಅಂದರೆ ಎಂಥವರೂ ಅದುರಿ ಹೋಗುವಂಥಾ ಅಬ್ಬರದ ನಟನಾ ಶಕ್ತಿ ಹೊಂದಿರೋ ಕಲಾವಿದ. ಹೀಗಿರೋದರಿಂದಲೇ ಅವರ ಹೆಸರು ಕೇಳಿದರೇನೇ ವಿಲನ್ ಪಾತ್ರಗಳು ಕಣ್ಮುಂದೆ ತೇಲಿ ಹೋಗುತ್ತವೆ. ಇನ್ನು ಪಕ್ಕಾ ಮಾಸ್ ಶೈಲಿಯ ಸಿಂಗ ಚಿತ್ರದಲ್ಲಿ ರವಿಶಂಕರ್ ನಟಿಸಿದ್ದಾರೆಂದ ಮೇಲೆ ಹೀರೋ ಚಿರುಗೆ ಟಕ್ಕರ್ ಕೊಡೋ ಪಾತ್ರದಲ್ಲಿಯೇ ನಟಿಸಿದ್ದಾರೆ ಅಂತಲೇ ಅರ್ಥ. ಇದಕ್ಕೆ ಪೂರಕವಾದ ದೃಶ್ಯಾವಳಿಗಳೇ ಟ್ರೈಲರ್‍ನಲ್ಲಿಯೂ ಸರಿದು ಹೋಗಿವೆ.

    ಆದರೆ ಈ ಚಿತ್ರದಲ್ಲಿ ರವಿಶಂಕರ್ ಪಾತ್ರ ಅಷ್ಟು ಸಲೀಸಾಗಿ ಊಹಿಸುವಂಥಾದ್ದಲ್ಲ. ಬಹುಶಃ ಇದುವರೆಗೂ ಕಾಣಿಸಿಕೊಳ್ಳದ ಪಾತ್ರದ ಮೂಲಕ ಸಿಂಗನ ಜೊತೆಗೆ ಅವರು ಪ್ರೇಕ್ಷಕರನ್ನು ತಲುಪಲಿದ್ದಾರೆ. ಕಥೆ ರೆಡಿ ಮಾಡುವ ಕ್ಷಣದಲ್ಲಿಯೇ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ಕೊಡಬೇಕೆಂಬ ಉದ್ದೇಶದಿಂದ ವಿಜಯ್ ಕಿರಣ್ ಈ ಪಾತ್ರವನ್ನು ಸೃಷ್ಟಿಸಿದ್ದರಂತೆ. ಇದು ಹೀಗೆಯೇ ಬರಬೇಕೆಂಬ ಕಲ್ಪನೆಯೊಂದು ನಿರ್ದೇಶಕರಲ್ಲಿತ್ತಲ್ಲಾ? ಅದನ್ನು ಮೀರಿಸುವಂತೆ ರವಿಶಂಕರ್ ಈ ಪಾತ್ರವನ್ನು ಮಿರುಗಿಸಿದ್ದಾರಂತೆ. ಅಷ್ಟಕ್ಕೂ ರವಿಶಂಕರ್ ಆ ಥರದ ಯಾವ ಪಾತ್ರವನ್ನು ನಿರ್ವಹಿಸಿದ್ದಾರೆಂಬ ಕುತೂಹಲ ನಿಮ್ಮಲ್ಲಿದ್ದರೆ, ಇದೇ ತಿಂಗಳ ಹತ್ತೊಂಬತ್ತರಂದು ಅದಕ್ಕೆ ನಿಖರ ಉತ್ತರ ಸಿಗಲಿದೆ.

  • ‘ಸಿಂಗ’ನಿಗೆ ಸಾಥ್ ಕೊಟ್ಟ ತಾರಾ ಪಾತ್ರ ಹೇಗಿದೆ ಗೊತ್ತಾ?

    ‘ಸಿಂಗ’ನಿಗೆ ಸಾಥ್ ಕೊಟ್ಟ ತಾರಾ ಪಾತ್ರ ಹೇಗಿದೆ ಗೊತ್ತಾ?

    ಬೆಂಗಳೂರು: ಉದಯ್ ಮೆಹ್ತಾ ನಿರ್ಮಾಣದ ಸಿಂಗ ತೆರೆಗಾಣಲು ದಿನಗಣನೆ ಶುರುವಾಗಿದೆ. ಎಲ್ಲ ದಿಕ್ಕುಗಳಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಈ ಸಿನಿಮಾ ಅದ್ಧೂರಿ ತಾರಾಗಣದೊಂದಿಗೆ, ಅಚ್ಚರಿದಾಯಕ ಪಾತ್ರಗಳೊಂದಿಗೆ, ಮಜವಾದೊಂದು ಹಳ್ಳಿ ಹಿನ್ನೆಲೆಯ ಕಥೆಯೊಂದಿಗೆ ಇದೇ ತಿಂಗಳ ಹತ್ತೊಂಬತ್ತರಂದು ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ.

    ಈ ಹಿಂದೆ ರಾಮ್ ಲೀಲಾ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ಅವರ ಎರಡನೇ ಕನಸಿನಂಥಾ ಚಿತ್ರ ಸಿಂಗ. ಈ ಮೂಲಕ ಚಿರಂಜೀವಿ ಸರ್ಜಾ ಹಳ್ಳಿ ಶೇಡಿನ ಪಾತ್ರದ ಜೊತೆ ಜೊತೆಗೇ ಮಾಸ್ ಲುಕ್ಕಿನಲ್ಲಿ ಅಬ್ಬರಿಸಿದ್ದಾರೆ. ಹಿರಿಯ ನಟಿ ತಾರಾ ಒಂದು ಅದ್ಭುತವಾದ ಪಾತ್ರದ ಮೂಲಕ ಸಿಂಗನಿಗೆ ಸಾಥ್ ಕೊಟ್ಟಿದ್ದಾರೆ. ಅವರು ಇಡೀ ಸಿನಿಮಾದಲ್ಲಿ ತೊಡಗಿಕೊಂಡಿರೋ ರೀತಿ, ತಮ್ಮ ಪಾತ್ರಕ್ಕೆ ಜೀವ ತುಂಬಿರೋ ಪರಿ ಕಂಡು ಒಂದಿಡೀ ಚಿತ್ರ ತಂಡ ಥ್ರಿಲ್ ಆಗಿದೆ. ಅಂಥಾದ್ದೇ ಭಾವ ಪ್ರೇಕ್ಷಕರನ್ನೂ ಕಾಡುವುದು ಖಚಿತ ಎಂಬ ಭರವಸೆ ನಿರ್ದೇಶಕ ವಿಜಯ್ ಕಿರಣ್ ಅವರಲ್ಲಿಯೂ ಇದೆ.

    ತಾರಾ ಎಂಥಾದ್ದೇ ಪಾತ್ರಕ್ಕಾದರೂ ಭಾವ ತುಂಬಿ ಅಭಿನಯಿಸೋ ಕಲಾವಿದೆ. ಒಂದು ಕಾಲಕ್ಕೆ ಬೆಳ್ಳಿ ತೆರೆಯಲ್ಲಿ ನಾಯಕಿಯಾಗಿ ಮಿಂಚಿದ್ದ ಅವರು ಆ ನಂತರದಲ್ಲಿ ಪೋಷಕ ಪಾತ್ರಗಳ ಮೂಲಕ ಮತ್ತಷ್ಟು ಆಪ್ತವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಣ್ಣದ ಬದುಕಿನ ತುಂಬಾ ಥರ ಥರದ ಪಾತ್ರಗಳ ಚಿತ್ತಾರವಿದೆ. ಅದರಲ್ಲಿ ಮತ್ತೊಂದು ಮಹತ್ವದ ಚಿತ್ರವಾಗಿ ಸಿಂಗ ದಾಖಲಾಗೋ ಎಲ್ಲ ಲಕ್ಷಣಗಳೂ ಇವೆ. ಸಿಂಗ ಚಿತ್ರದಲ್ಲಿ ತಾರಾ ನಟಿಸಿರೋ ಪಾತ್ರವೇ ಅಂಥಾದ್ದಿದೆ.

    ಈ ಪಾತ್ರವನ್ನು ವಿಜಯ್ ಕಿರಣ್ ವಿವರಿಸಿದಾಗಲೇ ತಾರಾ ಖುಷಿಗೊಂಡಿದ್ದರಂತೆ. ಆ ನಂತರದಲ್ಲಿ ಆ ಪಾತ್ರವನ್ನು ಆವಾಹಿಸಿಕೊಳ್ಳೋದರ ಜೊತೆಗೇ ಚಿತ್ರೀಕರಣದ ಹಂತದಲ್ಲಿ ಸದಾ ಜೊತೆಯಾಗಿದ್ದ, ಚರ್ಚೆ ನಡೆಸಿ, ಸಲಹೆಗಳನ್ನೂ ನೀಡುತ್ತಾ ಚಿತ್ರತಂಡದಲ್ಲೊಂದು ಬೆರಗನ್ನು ತಾರಾ ಮೂಡಿಸಿದ್ದರಂತೆ. ಖುದ್ದು ಅವರಿಗೇ ಈ ಸಿನಿಮಾ ಸೂಪರ್ ಸಕ್ಸಸ್ ಕಾಣುತ್ತದೆ ಎಂಬ ಭರವಸೆಯಿದೆ. ಈವರೆಗೂ ಅದೆಷ್ಟೋ ಹಿಟ್ ಚಿತ್ರಗಳ ಭಾಗವಾಗಿರುವವರು ತಾರಾ. ಅಂಥವರೇ ಮೆಚ್ಚಿಕೊಂಡಾದ ಮೇಲೆ ಸಿಂಗ ತೀರಾ ಸ್ಪೆಷಲ್ ಆಗಿರೋ ಚಿತ್ರ ಅನ್ನೋದರಲ್ಲಿ ಯಾವ ಸಂಶಯವೂ ಉಳಿದಿಲ್ಲ.

  • ಲಂಗ ದಾವಣಿಯಲ್ಲಿ ‘ಸಿಂಗ’ನ ಸಖಿಯಾದ ನಾಗಿಣಿ!

    ಲಂಗ ದಾವಣಿಯಲ್ಲಿ ‘ಸಿಂಗ’ನ ಸಖಿಯಾದ ನಾಗಿಣಿ!

    ಬೆಂಗಳೂರು: ಚಿರಂಜೀವಿ ಸರ್ಜಾ ಸಿನಿ ಯಾನದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗುವ ಭರವಸೆ ಬಿತ್ತಿರೋ ಚಿತ್ರ ಸಿಂಗ. ವಿಜಯ್ ಕಿರಣ್ ನಿರ್ದೇಶನದ, ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಸಿಂಗ ಇದೇ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಅದಾಗಲೇ ಪ್ರೇಕ್ಷಕ ವಲಯದಲ್ಲಿ ನೋಡಲೇ ಬೇಕೆಂಬಂಥಾ ತಹ ತಹವನ್ನು ಹುಟ್ಟು ಹಾಕಿರೋ ಈ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಹೊಸತನದ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ತಾಕಲು ಅಣಿಯಾಗಿದ್ದಾರೆ. ಅವರಿಗಿಲ್ಲಿ ನಾಗಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿದ್ದಾರೆ.

    ಅದಿತಿ ಪ್ರಭುದೇವ ಕಿರುತೆರೆ ಧಾರಾವಾಹಿಯ ಮೂಲಕವೇ ನಟಿಯಾಗಿ ಪರಿಚಯವಾಗಿ ಇದೀಗ ಹಿರಿತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿರುವವರು. ಅದಾಗಲೇ ಅವರು ನಾಯಕಿಯಾಗಿರೋ ಮೂರ್ನಾಲಕ್ಕು ಚಿತ್ರಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಲು ಸರದಿಯಲ್ಲಿ ನಿಂತಿವೆ. ಏಕತಾನತೆಯನ್ನು ಮೀರಿಕೊಂಡು ಥರ ಥರದ ಪಾತ್ರಗಳಲ್ಲಿ ನಟಿಸೋ ಆಸೆ ಹೊಂದಿರೋ ಅದಿತಿಗೆ ಈವರೆಗೂ ಅಂಥಾದ್ದೇ ಪಾತ್ರಗಳು ಸಿಕ್ಕಿವೆ. ಸಿಂಗ ಚಿತ್ರದಲ್ಲಿ ಅವರಿಗೆ ಸಿಕ್ಕಿರೋ ಪಾತ್ರವೂ ಅಷ್ಟೇ ಭಿನ್ನವಾದದ್ದು.

    ನಟಿಯಾಗಿ ಮಿಂಚುತ್ತಿದ್ದರೂ ತನ್ನದೇ ಪುಟ್ಟ ಖಾಸಗಿ ಪ್ರಪಂಚವನ್ನು ಧೇನಿಸುವ ಮನಸ್ಥಿತಿ ಹೊಂದಿರುವವರು ಅದಿತಿ ಪ್ರಭುದೇವ. ಅವರು ಈವರೆಗೂ ಬಯಸಿದ್ದಂಥಾ ಪಾತ್ರವೇ ಸಿಂಗ ಚಿತ್ರದಲ್ಲಿ ಸಿಕ್ಕಿದೆಯಂತೆ. ಇಲ್ಲಿ ಅವರು ಲಂಗ ದಾವಣಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸವಾಲಿನ ಗುಣಲಕ್ಷಣಗಳನ್ನು ಹೊಂದಿರೋ ಈ ಪಾತ್ರವನ್ನು ಅದಿತಿ ಸಲೀಸಾಗಿಯೇ ನಿರ್ವಹಿಸಿದ್ದಾರಂತೆ. ಈಗಾಗಲೇ ಶ್ಯಾನೇ ಟಾಪಾಗವ್ಳೇ ಹಾಡಿನ ಮೂಲಕ ಅದಿತಿಯ ಗೆಟಪ್ಪಿನ ಝಲಕ್ ಜಾಹೀರಾಗಿದೆ. ಅಂತೂ ಈ ಸಿನಿಮಾ ಮೂಲಕ ಅದಿತಿಯ ಸಿನಿ ಯಾನ ಮತ್ತಷ್ಟು ವೇಗ ಪಡೆದುಕೊಳ್ಳೋ ಸಾಧ್ಯತೆಗಳೇ ದಟ್ಟವಾಗಿವೆ.

  • ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಶ್ಯಾನೆ ಟಾಪಾಗಿದೆಯಂತೆ ಸಿಂಗನ ಕಥೆ!

    ಬೆಂಗಳೂರು: ಚಿರಂಜೀವಿ ಸರ್ಜಾ `ಸಿಂಗ’ ಚಿತ್ರ ಇದೇ ತಿಂಗಳ ಹತ್ತೊಂಬತ್ತರಂದು ಬಿಡುಗಡೆಗೆ ರೆಡಿಯಾಗಿದೆ. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಎಲ್ಲದರಲ್ಲಿಯೂ ಹೊಸ ಕಳೆ ತುಂಬಿಕೊಂಡಿರೋ ಈ ಚಿತ್ರಕ್ಕೆ ಪಾಸಿಟಿವ್ ಟಾಕ್‍ನ ಒಡ್ಡೋಲಗ ಭರ್ಜರಿ ಸಾಥ್ ನೀಡುತ್ತಿದೆ. ಟ್ರೈಲರ್ ಮುಂತಾದ ಬಿಡುಗಡೆ ಪೂರ್ವ ಚಟುವಟಿಕೆಗಳ ಮೂಲಕ ಚರ್ಚೆಗೆ ಕಾರಣವಾಗೋ ಚಿತ್ರಗಳು ಗೆಲುವು ಕಂಡ ಅದೆಷ್ಟೋ ಉದಾಹರಣೆಗಳಿವೆ. ಈ ಫಾರ್ಮುಲಾ ಆಧರಿಸಿ ಹೇಳೋದಾದರೆ ಸಿಂಗ ಚಿತ್ರದ ಗೆಲುವು ನಿಚ್ಚಳವಾದಂತಿದೆ!

    ಅದೇನೇ ಹೈಪು ಸೃಷ್ಟಿಯಾದರೂ ಚಿತ್ರವೊಂದು ಗೆಲ್ಲೋದರಲ್ಲಿ ಗಟ್ಟಿ ಕಥೆಯದ್ದು ಸಿಂಹಪಾಲು. ಸಿಂಗ ಚಿತ್ರದ ಕಥೆಯೂ ಅಷ್ಟೇ ಅದ್ಭುತವಾಗಿದೆಯಂತೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ವಿಶಿಷ್ಟವಾದ ಟೇಸ್ಟ್ ಹೊಂದಿರುವವರು ಚಿರಂಜೀವಿ ಸರ್ಜಾ. ಅವರೇ ಈ ಕಥೆ ಕೇಳಿ ಆರಂಭದಲ್ಲಿಯೇ ಥ್ರಿಲ್ ಆಗಿದ್ದರಂತೆ. ಮಾಸ್ ಸೇರಿದಂತೆ ಎಲ್ಲ ಅಂಶಗಳಿಂದ ಮೈ ಕೈ ತುಂಬಿಕೊಂಡಿರೋ ಈ ಕಥೆಯ ಸೊಗಸು ಕಂಡೇ ವಿಶೇಷ ಆಸಕ್ತಿ ವಹಿಸಿ ಚಿರು ಈ ಚಿತ್ರವನ್ನು ಪೂರ್ಣಗೊಳಿಸಿಕೊಂಡಿದ್ದಾರೆ. ಸಿಂಗ ತಮ್ಮ ವೃತ್ತಿ ಬದುಕಿಗೆ ಹೊಸ ದಿಕ್ಕಾಗಲಿದೆ ಎಂಬ ಗಾಢ ವಿಶ್ವಾಸವೂ ಅವರಲ್ಲಿದೆ.

    ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಸಿನಿಮಾದ ಶ್ಯಾನೆ ಟಾಪಗೌಳೆ ಎಂಬ ಹಾಡೊಂದು ಭಾರೀ ಫೇಮಸ್ ಆಗಿ ಟ್ರೆಂಡ್ ಸೆಟ್ ಮಾಡಿದೆ. ಈ ಹಾಡಿನ ಅದ್ಧೂರಿತನ ಇಡೀ ಚಿತ್ರದಲ್ಲಿಯೂ ತುಂಬಿಕೊಂಡಿದೆಯಂತೆ. ನಿರ್ದೇಶಕರಾದ ವಿಜಯ್ ಕಿರಣ್ ಅಷ್ಟೊಂದು ಕಾಳಜಿಯಿಂದ, ಎಲ್ಲ ಪ್ರೇಕ್ಷಕ ವರ್ಗವನ್ನೂ ಸಂತುಷ್ಟಗೊಳಿಸುವ ಇರಾದೆಯಿಂದಲೇ ಸಿಂಗನನ್ನು ಶೃಂಗರಿಸಿದ್ದಾರೆ. ಯಶಸ್ವಿ ನಿರ್ಮಾಪಕ ಉದಯ್ ಕೆ ಮೆಹ್ತಾ ಅಂಥಾದ್ದೇ ಕಾಳಜಿಯಿಂದ ಪ್ರತಿ ಹೆಜ್ಜೆಯಲ್ಲಿಯೂ ಸಿಂಗನನ್ನು ಪೊರೆದಿದ್ದಾರೆ. ಇಂಥಾ ಪ್ರೀತಿಯಿಂದಲೇ ಪೊಗದಸ್ತಾಗಿ ಮೂಡಿ ಬಂದಿರೋ ಈ ಚಿತ್ರ ಇದೇ ಹತ್ತೊಂಬತ್ತರಂದು ನಿಮ್ಮ ಮುಂದೆ ಬರಲಿದೆ.

  • ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!

    ಸಿಂಗ: ನಿರ್ಮಾಪಕ ಉದಯ್ ಮೆಹ್ತಾರ ಡೈಮಂಡ್‍ನಂಥಾ ಕನಸು!

    ಬೆಂಗಳೂರು: ಸಿನಿಮಾ ನಿರ್ಮಾಣವೆಂಬುದು ವ್ಯವಹಾರ. ಆದರೆ ನಿರ್ಮಾಪಕ ಅದನ್ನು ಬರೀ ಬ್ಯುಸಿನೆಸ್ ಅಂತಷ್ಟೇ ಪರಿಗಣಿಸಿದರೆ ಬಹುಶಃ ಅದ್ಭುತ ದೃಶ್ಯ ಕಾವ್ಯಗಳು ಹುಟ್ಟಲು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ, ಯಶಸ್ವಿ ಸಿನಿಮಾಗಳ ಹಿಂದೆ ಇಂಥಾ ವ್ಯಾವಹಾರಿಕ ಉದ್ದೇಶದಾಚೆಯ ಉತ್ಕಟ ಕಲಾ ಪ್ರೇಮವಿರುತ್ತದೆ. ನಿರ್ದೇಶಕರ ಕನಸಿಗೆ ಪ್ರತೀ ಹೆಜ್ಜೆಯಲ್ಲೂ ಸಾಥ್ ಕೊಡುತ್ತಾ, ಎಂಥಾ ಸವಾಲುಗಳು ಬಂದರೂ ಎದೆಕೊಡುತ್ತಾ ನಿರ್ಮಾಪಕ ಸಾಗಿ ಬಂದರೇನೇ ಸಿನಿಮಾವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತೆ. ಹೀಗೆ ಸ್ವತಃ ದೊಡ್ಡ ಮಟ್ಟದ ವ್ಯಾಪಾರ ಉದ್ಯಮದ ವಾರಸುದಾರರಾಗಿದ್ದರೂ ಸಿನಿಮಾವನ್ನು ಆರಾಧಿಸುವ ಸ್ವಭಾವದ ಉದಯ್ ಮೆಹ್ತಾರ ಏಳನೇ ಕನಸು ‘ಸಿಂಗ’!

    ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಮೂಲಕ ದೊಡ್ಡ ಮಟ್ಟದಲ್ಲಿಯೇ ಸಂಚಲನ ಸೃಷ್ಟಿಸಿರೋ ಈ ಚಿತ್ರವನ್ನು ಈ ಹಿಂದೆ ರಾಮ್ ಲೀಲಾ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯ್ ಕಿರಣ್ ರೂಪಿಸಿದ್ದಾರೆ. ಯಾವುದೇ ಚಿತ್ರ ಬಿಡುಗಡೆ ಪೂರ್ವದಲ್ಲಿ ಈ ಥರದ ಟಾಕ್ ಕ್ರಿಯೇಟ್ ಮಾಡಿದರೆ ಗೆಲುವು ಗ್ಯಾರಂಟಿ. ಅಂಥಾದ್ದೊಂದು ಸಕಾರಾತ್ಮಕ ವಾತಾವರಣದೊಂದಿಗೆ ಥೇಟರಿನ ಹಾದಿಯಲ್ಲಿರೋ ಸಿಂಗನನ್ನು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡಲು ಒಪ್ಪಿಕೊಂಡಿರೋದೇ ಕಥೆಯ ಕಾರಣದಿಂದ.

    ಅಷ್ಟಕ್ಕೂ ಎಲ್ಲ ದಿಕ್ಕಿನಿಂದಲೂ ಕಥೆ ಒಪ್ಪಿಗೆಯಾಗದೇ ಇದ್ದರೆ ಉದಯ್ ಮೆಹ್ತಾ ನಿರ್ಮಾಣಕ್ಕಿಳಿಯುವವರೇ ಅಲ್ಲ. ಅವರು ಎಂಥಾ ಟೇಸ್ಟು ಹೊಂದಿದ್ದಾರೆ, ಗುಣಮಟ್ಟವನ್ನು ಹೇಗೆಲ್ಲ ಬಯಸುತ್ತಾರೆಂಬುದಕ್ಕೆ ಅವರೇ ನಿರ್ಮಾಣ ಮಾಡಿರೋ ಆರು ಚಿತ್ರಗಳೇ ಸಾಕ್ಷಿಗಿವೆ. ವಿಜಯ್ ಕಿರಣ್ ಆರಂಭದಲ್ಲಿ ಈ ಕಥೆ ಹೇಳಿದಾಗ ಒಂದೇ ಗುಕ್ಕಿಗದು ಮೆಹ್ತಾರಿಗೆ ಹಿಡಿಸಿತ್ತಂತೆ.

     

    ಪಕ್ಕಾ ಕಮರ್ಶಿಯಲ್ ಶೈಲಿಯ ಈ ಕಥೆ ಎಲ್ಲ ಅಂಶಗಳನ್ನೂ ಒಳಗೊಂಡು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಿರೋದರಿಂದಲೇ ಮೆಹ್ತಾ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಇದೀಗ ಒಟ್ಟಾರೆಯಾಗಿ ಸಿಂಗ ಮೂಡಿ ಬಂದಿರೋ ರೀತಿಯ ಬಗ್ಗೆಯೂ ಅವರಲ್ಲೊಂದು ತೃಪ್ತಿಯಿದೆ.

    ಉದಯ್ ಮೆಹ್ತಾ ಮೂಲತಃ ಬೆಂಗಳೂರಿನವರೇ. ಆರಂಭ ಕಾಲದಿಂದಲೂ ಅವರಿಗೆ ಸಿನಿಮಾಗಳ ಮೇಲೆ ವಿಪರೀತ ಸೆಳೆತ. ಇಂಥಾ ಸಿನಿಮಾ ಒಲವನ್ನು ಕಾಪಾಡಿಕೊಂಡೇ ಮುಂದುವರೆದರೂ ಬದುಕಿನ ಅನಿವಾರ್ಯತೆ ಅವರನ್ನು ಡೈಮಂಡ್ ಮರ್ಚೆಂಟ್ ಆಗಿ ರೂಪಿಸಿತ್ತು. ಈ ಉದ್ಯಮದಲ್ಲಿ ಬಲು ಆಸ್ಥೆಯಿಂದ ತೊಡಗಿಸಿಕೊಂಡು ಯಶಸ್ವಿಯಾದ ಮೆಹ್ತಾ ಈಗ್ಗೆ ದಶಕಗಳ ಹಿಂದೆಯೇ ನಿರ್ಮಾಪಕರಾಗುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಹೀಗೆ ಒಂದೊಳ್ಳೆ ಪ್ರಾಜೆಕ್ಟಿಗೆ ಹುಡುಕುತ್ತಿದ್ದಾಗ 2009ರಲ್ಲಿ ಲೂಸ್ ಮಾದ ಯೋಗಿ ಅಭಿನಯದ ರಾವಣ ಎಂಬ ಚಿತ್ರದ ಮೂಲಕ ಅದಕ್ಕೆ ಅವಕಾಶ ಒದಗಿ ಬಂದಿತ್ತು.

    ಆ ಚಿತ್ರ ಯಶ ಕಾಣುತ್ತಲೇ ನಿರ್ಮಾಪಕರಾಗಿ ಕಾಲೂರಿ ನಿಂತ ಉದಯ್ ಮೆಹ್ತಾ, ಕೃಷ್ಣನ್ ಲವ್ ಸ್ಟೋರಿ, ಕಿಚ್ಚ ಸುದೀಪ್ ಅಭಿನಯದ ಬಚ್ಚನ್, ನೀನಾಸಂ ಸತೀಶ್ ಅಭಿನಯದ ಲವ್ ಇನ್ ಮಂಡ್ಯ, ಶರಣ್ ಅಭಿನಯದ ರಾಜ ರಾಜೇಂದ್ರ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಸಿಂಗ ಅವರ ಏಳನೇ ಚಿತ್ರ. ಈ ಚಿತ್ರ ಬಿಡುಗಡೆಯ ಹಾದಿಯಲ್ಲಿರುವಾಗಲೇ ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಚಿತ್ರವನ್ನೂ ಮೆಹ್ತಾ ಆರಂಭಿಸಿದ್ದಾರೆ. ಅದಾಗಲೇ ಧೃವ ಸರ್ಜಾರ ಚಿತ್ರವೊಂದನ್ನು ನಿರ್ಮಾಣ ಮಾಡಲು ತಯಾರಿಯನ್ನೂ ಆರಂಭಿಸಿದ್ದಾರೆ.

    ಹೀಗೆ ಸಾಗಿ ಬಂದಿರುವ ಉದಯ್ ಮೆಹ್ತಾ ಈಗ ಕನ್ನಡದ ಸ್ಟಾರ್ ನಿರ್ಮಾಪಕರಾಗಿ ಹೊರ ಹೊಮ್ಮಿದ್ದಾರೆ. ಅವರೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆಂದರೆ ಗಾಂಧಿನಗರ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಅದಕ್ಕೆ ಕಾರಣ ಕಥೆಯನ್ನು ಆರಿಸಿಕೊಳ್ಳೋದರಲ್ಲಿ ಅವರಿಗಿರುವ ಜಾಣ್ಮೆ. ಸಿಂಗ ಕಥೆಯನ್ನೂ ಕೂಡಾ ಅವರು ಅದೇ ಮಾನದಂಡಗಳನ್ನು ಪ್ರಯೋಗಿಸಿ ಆರಿಸಿಕೊಂಡಿದ್ದಾರೆ. ಈ ಸಿನಿಮಾ ದೊಡ್ಡ ಗೆಲುವು ಕಾಣೋದರೊಂದಿಗೆ ತಮ್ಮ ಸಿನಿಮಾ ಬದುಕಿನ ಮಹತ್ವದ ಚಿತ್ರವಾಗಿ ದಾಖಲಾಗುತ್ತದೆ ಎಂಬ ಭರವಸೆ ಉದಯ್ ಮೆಹ್ತಾ ಅವರಲ್ಲಿದೆ. ಈಗ ಪ್ರೇಕ್ಷಕರ ವಲಯದಲ್ಲಿ ಸಿಂಗ ಪಸರಿಸಿರೋ ಕ್ರೇಜ್ ಮೆಹ್ತಾರ ನಂಬಿಕೆಗೆ ಮತ್ತಷ್ಟು ಇಂಬು ಕೊಡುವಂತಿದೆ.