Tag: ಸಾ.ರಾ.ಗೋವಿಂದು

  • ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸದಿದ್ರೆ ಆಹೋರಾತ್ರಿ ಧರಣಿ: ಭಾ.ಮ.ಹರೀಶ್

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರ ಅಧಿಕಾರಾವಧಿ ಮುಗಿದು 9 ತಿಂಗಳಾದರೂ ಇನ್ನೂ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ನಿರ್ಮಾಪಕ ಭಾ.ಮ.ಹರೀಶ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ಮೇ 25ರ ಒಳಗಡೆ ಚುನಾವಣೆ ಪ್ರಕ್ರಿಯೆ ಆರಂಭಿಸದಿದ್ದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂಗಳದಲ್ಲಿ ಕುರಿತು ಹೋರಾಟ ಮಾಡುವುದಾಗಿ ಭಾ.ಮ.ಹರೀಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ಕುರಿತು ಕನ್ನಡ ಚಿತ್ರರಂಗದ ನಿರ್ಮಾಪಕರು ಮತ್ತು ನಿರ್ದೇಶಕರ ಜೊತೆ ಮಾತು-ಕಥೆ ನಡೆಸಿದ್ದು ಹಲವರ ಬೆಂಬಲ ಕೂಡ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

    ಈ ವಿಚಾರವಾಗಿ ಚಿತ್ರ ಮಂಡಳಿ ಫೇಸ್‍ಬುಕ್ ಪೇಜ್ ನಲ್ಲಿ ಪೋಸ್ಟ್ ಪ್ರಕಟವಾಗಿದ್ದು, ಅದರ ಯಥಾವತ್ ಕಾಪಿಯನ್ನು ಇಲ್ಲಿ ನೀಡಲಾಗಿದೆ

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸುವಂತೆ ಆಗ್ರಹಿಸಿ ಮಂಡಳಿ ಮಾಜಿ ಕಾರ್ಯದರ್ಶಿ ಭಾ.ಮ.ಹರೀಶ್ ನೇತೃತ್ವದ ಬಣ ಆಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿದೆ.

    ಕಳೆದ ಸೆಪ್ಟೆಂಬರ್ ನಲ್ಲಿ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸಬೇಕಿತ್ತು .ಆದರೆ ಯಾವುದೋ ನೆಪವೊಡ್ಡಿ ಪ್ರಸ್ತುತ ವಾಣಿಜ್ಯಮಂಡಳಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದು ಅವರು ಚುನಾವಣೆಯನ್ನು ಆರು ತಿಂಗಳುಗಳ ಕಾಲ ಮುಂದೂಡಿದ್ದರು. ಈಗ ಇದೇ ಜೂನ್ ನಲ್ಲಿ ನಡೆಯಬೇಕಿರುವ ಚುನಾವಣೆಯನ್ನೂ ಕೂಡ ಅವರು ಮುಂದೂಡುವ ಯತ್ನದಲ್ಲಿದ್ದಾರೆ. ಹಾಗಾಗಿ ಚುನಾವಣೆ ನಡೆಸುವ ಪ್ರಕ್ರಿಯೆ ನಡೆಯಬೇಕು ಎಂದು ಭಾ.ಮ.ಹರೀಶ್ ನೇತೃತ್ವದ ನಿರ್ಮಾಪಕರ ತಂಡ ಒತ್ತಾಯಿಸಿದೆ.

    ಜಯಸಿಂಹ ಮುಸುರಿ, ದಿನೇಶ್ ಗಾಂಧಿ, ನಂಧಿಹಾಳ್, ರಾಜೇಶ್ ಬ್ರಹಾವರ್, ಬಿ.ಆರ್.ಕೇಶವ ಸೇರಿದಂತೆ ಇತರ ನಿರ್ಮಾಪಕರ ತಂಡವು ಇದೇ ತಿಂಗಳ 25 ರಿಂದ ವಾಣಿಜ್ಯ ಮಂಡಳಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಭಾ.ಮ.ಹರೀಶ್ ನೇತೃತ್ವದ ನಿರ್ಮಾಪಕರ ತಂಡ ತಿಳಿಸಿದೆ.

    https://www.youtube.com/watch?v=uX36lAxExv4

  • ಮಾಧ್ಯಮಗಳಲ್ಲಿ ಕ್ಷಮೆ ಕೇಳಿದ ಹುಚ್ಚ ವೆಂಕಟ್

    ಮಾಧ್ಯಮಗಳಲ್ಲಿ ಕ್ಷಮೆ ಕೇಳಿದ ಹುಚ್ಚ ವೆಂಕಟ್

    ಬೆಂಗಳೂರು: ಇಂದು ಫಿಲ್ಮ್ ಚೇಂಬರ್‍ನಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಟ ಹುಚ್ಚವೆಂಕಟ್ ಮಾಧ್ಯಮಗಳ ಜೊತೆ ಕ್ಷಮೆ ಕೇಳಿದ್ದಾರೆ.

    ಶುಕ್ರವಾರ ಹುಚ್ಚವೆಂಕಟ್ ಅಭಿನಯದ ‘ಪೊರ್ಕಿ ಹುಚ್ಚವೆಂಕಟ್’ ಸಿನಿಮಾ ಬಿಡುಗಡೆಯಾಗಿತ್ತು. ಪತ್ರಿಕೆಯೊಂದು ಸಿನಿಮಾ ವಿಮರ್ಷೆಯನ್ನು ಪ್ರಕಟಿಸಿತ್ತು. ಈ ವಿಮರ್ಷೆಗೆ ಹುಚ್ಚ ವೆಂಕಟ್ ಕಿಡಿಕಾರಿದ್ದರು.

    ಈ ವಿಚಾರದ ಬಗ್ಗೆ ಫಿಲ್ಮ್ ಚೇಂಬರ್‍ನಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹುಚ್ಚವೆಂಕಟ್ ಮಾಧ್ಯಮಗಗಳ ಜೊತೆ ವಾಗ್ವಾದಕ್ಕಿಳಿದರು. ಹುಚ್ಚ ವೆಂಕಟ್ ಮತ್ತು ಮಾಧ್ಯಮದವರ ನಡುವೆ ಮಾತಿನ ಚಕಮಕಿ ನಡೆದು ಹುಚ್ಚ ವೆಂಕಟ್ ಆವೇಶಭರಿತರಾಗಿ ವಿಮರ್ಶೆ ಮಾಡಲು ನಿವ್ಯಾರು, ವಿಮರ್ಶೆ ಮಾಡಲು ನಿಮಗೆ ಅಧಿಕಾರ ಕೊಟ್ಟವರ್ಯಾರು, ಅದನ್ನು ಜನರು ತಿರ್ಮಾನ ಮಾಡುತ್ತಾರೆ ಎಂದು ಮಾಧ್ಯಮದವರ ಮೇಲೆಯೇ ಸಿಟ್ಟಾದರು.

    ಇದನ್ನೂ ಓದಿ: ಪ್ಲೀಸ್ ಒಂದು ದಿನ ಹೌಸ್‍ಫುಲ್ ಮಾಡಿ: ಗಳಗಳನೇ ಅಳುತ್ತಾ ಕನ್ನಡಿಗರನ್ನು ಬೇಡಿಕೊಂಡ ಹುಚ್ಚ ವೆಂಕಟ್

    ರಾಜ್ಯದ ಮುಖ್ಯಮಂತ್ರಿಗಳು 50 ಸಾವಿರ ರೂ. ಖರ್ಚು ಮಾಡಿ ತೆಲಗು ಸಿನಿಮಾ ನೋಡುತ್ತಾರೆ. ಕನ್ನಡ ಚಿತ್ರಗಳನ್ನು ನೋಡಲಿ. ನನ್ನಿಂದ ತಪ್ಪಾಗಿದಲ್ಲಿ ಕ್ಷಮೆ ಇರಲಿ. ನಿಮಗೆ ಬರೆಯೋ ಅಧಿಕಾರ ಇದೆ. ಆದರೆ ವಿಮರ್ಷೆ ಮಾಡೋ ಆಗಿಲ್ಲ. ಸಿನಿಮಾ ಇಷ್ಟ ಇಲ್ಲ ಅಂದ್ರೆ ಸಿನಿಮಾ ನೋಡಲು ಬರಬೇಡಿ ಎಂದು ವೆಂಕಟ್ ಮಾಧ್ಯಮಗಳಿಗೆ ಹೇಳಿದರು.

    ಈ ಸಮಸ್ಯೆಗಳನ್ನ ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ ವೆಂಕಟ್ ಹತ್ರ ಮಾತಾಡಿ ಕೊನೆ ಮಾಡುವಂತೆ ಹೇಳಿದ್ದೇನೆ. ಅದಕ್ಕೂ ಅವರೂ ಒಪ್ಪಿ ಬಂದಿದ್ದಾರೆ ಎಂದು ಸಾ.ರಾ.ಗೋವಿಂದು ಮಾಧ್ಯಮಗಳಿಗೆ ತಿಳಿಸಿದರು.

     ಇದನ್ನೂ ಓದಿ: 200 ರೂ. ಫಿಕ್ಸ್ ಮಾಡಿ 1050 ರೂ. ತೆತ್ತು ಬಾಹುಬಲಿ ವೀಕ್ಷಿಸಿದ ಸಿಎಂ: ವಿಡಿಯೋ ನೋಡಿ