Tag: ಸಾಲೂರು ಮಠ

  • ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಲಿಂಗೈಕ್ಯ

    ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಲಿಂಗೈಕ್ಯ

    ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ (Salur Mutt) ಹಿರಿಯ ಶ್ರೀ ಗುರುಸ್ವಾಮೀಜಿ (70) ಲಿಂಗೈಕ್ಯರಾಗಿದ್ದಾರೆ.

    ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಸ್ವಾಮೀಜಿ (Sri Guru Swamiji) ಸಾಲೂರು ಮಠದಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಸ್ವಾಮೀಜಿ ಇಂದು ಕೊನೆಯುಸಿರೆಳೆದಿದ್ದಾರೆ. ಸಂಜೆ 5:30 ಕ್ಕೆ ಸಾಲೂರು ಮಠದಲ್ಲಿ ಅಂತ್ಯಕ್ರಿಯೆ ನೆರವೇರಿತು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ; ಕುಮಟಾ-ಸಿದ್ದಾಪುರ ರಸ್ತೆ ಜಲಾವೃತ

    ಅಂತ್ಯಕ್ರಿಯೆಗೂ ಮುನ್ನ ಮಹದೇಶ್ವರ ಬೆಟ್ಟದಲ್ಲಿ ಸ್ವಾಮೀಜಿಯ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಅಪಾರ ಭಕ್ತ ವೃಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಸ್ವಾಮೀಜಿಗಳಿಗೆ ನಮಿಸಿತು.

    ಕಾಡಂಚಿನ ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದವರು ಶ್ರೀ ಗುರುಸ್ವಾಮೀಜಿ. ಸಾಲೂರು ಮಠದ 17ನೇ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ್ದರು. ಕಾಡಂಚಿನ ಮಕ್ಕಳನ್ನು ಸಾಲೂರು ಮಠಕ್ಕೆ ಕರೆತಂದು ಶಿಕ್ಷಣ ನೀಡಿದ್ದರು. ಇದನ್ನೂ ಓದಿ: ದರ್ಶನ್ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ ನಿಧನ- ಭಾವುಕ ಪೋಸ್ಟ್ ಹಂಚಿಕೊಂಡ ದಚ್ಚು

    ಸುತ್ತಮುತ್ತಲ ಗ್ರಾಮಗಳಲ್ಲಿ ಭಿಕ್ಷೆ ಮಾಡಿ ಮಕ್ಕಳಿಗೆ ಉಚಿತ ಊಟ, ವಸತಿ ವ್ಯವಸ್ಥೆ ಮಾಡಿಸಿದ್ದರು. ಗುಡ್ಡಗಾಡು ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪೊನ್ನಾಚಿ ಗ್ರಾಮದಲ್ಲಿ ಪ್ರೌಢಶಾಲೆ ತೆರೆದಿದ್ದರು.

  • ಮಹದೇವ ಸ್ವಾಮೀಜಿ ನೋಡಿಕೊಳ್ತಿದ್ದ ಆಸ್ತಿ ಯಾರ ಪಾಲು?

    ಮಹದೇವ ಸ್ವಾಮೀಜಿ ನೋಡಿಕೊಳ್ತಿದ್ದ ಆಸ್ತಿ ಯಾರ ಪಾಲು?

    -ಸುಳ್ವಾಡಿ ದುರಂತಕ್ಕೂ ಸಾಲೂರು ಮಠಕ್ಕೂ ಸಂಬಂಧವಿಲ್ಲ-ಹಿರಿಯ ಶ್ರೀಗಳು

    ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇವಸ್ಥಾನ ದುರಂತ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವ ಸ್ವಾಮೀಜಿ ನೋಡಿಕೊಳ್ಳುತ್ತಿದ್ದ ಆಸ್ತಿ ಇದೀಗ ಏನ್ ಆಗುತ್ತೆ ಅನ್ನೋದು ಭಕ್ತರ ಪ್ರಶ್ನೆಯಾಗಿತ್ತು. ಇದೀಗ ಆ ಪ್ರಶ್ನೆಗೆ ಮಠದ ಹಿರಿಯ ಶ್ರೀಗಳು ಸ್ಪಷ್ಟೀಕರಣ ನೀಡಿದ್ದಾರೆ.

    ಸುಳ್ವಾಡಿ ವಿಷ ದುರಂತ ನಡೆದು ಇವತ್ತಿಗೆ 12ನೇ ದಿನ. ವಿಷ ಪ್ರಸಾದ ತಿಂದು ಇದುವರೆಗೂ ಬರೋಬ್ಬರಿ 17 ಜನರು ಸಾವ್ನಪ್ಪಿದ್ದಾರೆ. ಅಸ್ವಸ್ಥರಾದವ್ರು ದಿನ ಬಿಟ್ಟು ದಿನ ಒಬ್ಬೊಬ್ಬರು ಸಾವನ್ನಪ್ಪುತ್ತಿದ್ದಾರೆ. ವಿಷವಿಕ್ಕಿದ ನಾಲ್ವರು ಪೊಲೀಸ್ ಅತಿಥಿಯಾಗಿದ್ದಾರೆ. ಇದರ ನಡುವೆ ಮಲೆಮಹದೇಶ್ವರ ಬೆಟ್ಟದಲ್ಲಿರುವ ಪ್ರತಿಷ್ಠಿತ ಸಾಲೂರು ಮಠದಲ್ಲೀಗ ನೀರವ ಮೌನ ಆವರಿಸಿದೆ.

    ಸಾಲೂರು ಮಠದ ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮ, ವಸತಿ ನಿಲಯಗಳು, ಅನಾಥಾಶ್ರಮ, ತೋಟ ಸೇರಿದಂತೆ ಇನ್ನಿತರ ಆಸ್ತಿಗಳು ಮಠದ ಹೆಸರಿನಲ್ಲಿ ಇವೆ. ಈ ಆಸ್ತಿಯನ್ನು, ಸಾಲೂರು ಮಠದ ಬಹುತೇಕ ವ್ಯವಹಾರವನ್ನು ಇಮ್ಮಡಿ ಮಹದೇವ ಸ್ವಾಮೀಜಿ ಇಷ್ಟು ದಿನ ನೋಡಿಕೊಳ್ತಿದ್ರು. ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಇಮ್ಮಡಿ ಮಹದೇವಸ್ವಾಮೀಜಿ ನಂತರ ಇದನ್ನ ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿದೆ.

    ಇನ್ನೊಂದೆಡೆ ಸುಳ್ವಾಡಿ ದುರಂತಕ್ಕೂ ಸಾಲೂರು ಮಠಕ್ಕೂ ಯಾವುದೇ ಸಂಬಂಧವಿಲ್ಲ. ಇಮ್ಮಡಿ ಮಹದೇವ ಸ್ವಾಮೀಜಿ ಅಲ್ಲಿ ಟ್ರಸ್ಟ್‍ನ ಅಧ್ಯಕ್ಷರಾಗಿ ಈ ಕೃತ್ಯ ಎಸಗಿ ಜೈಲಿಗೆ ಹೋಗಿದ್ದಾರೆ. ಇಷ್ಟು ದಿನ ಮಠದ ವ್ಯವಹಾರವನ್ನು ಅವರು ನೋಡಿಕೊಳ್ಳುತ್ತಿದ್ದರು. ಇದೀಗ ಈ ಬಗ್ಗೆ ಸಭೆ ಸೇರಿ ನಿರ್ಣಯ ಕೈಗೊಳ್ಳಲಾಗುವುದು. ಮಾದಪ್ಪನೇ ಇಮ್ಮಡಿ ಮಹದೇವ ಸ್ವಾಮೀಜಿಗೆ ದಾರಿ ತೋರಿಸಿದ್ದಾನೆ ಎಂದು ಹಿರಿಯ ಶ್ರೀಗಳು ಹೇಳಿದ್ದಾರೆ.

    ಒಟ್ಟಾರೆ ತನ್ನ ಸ್ವಾರ್ಥಕ್ಕೆ ನರರೂಪದ ರಾಕ್ಷಸನಾಗಿದ್ದ ಸ್ವಾಮೀಜಿಯಿಂದಾಗಿ ಇಡೀ ಮಠಕ್ಕೆ ಕಳಂಕ ಬಂದಿದ್ದು, ಮಠದ ಆಸ್ತಿ ವಿಚಾರದಲ್ಲೂ ಕೂಡ ಭಕ್ತರಲ್ಲಿ ಗೊಂದಲ ನಿರ್ಮಾಣವಾಗಿದೆ. ಆದ್ರೆ ಹಿರಿಯ ಸ್ವಾಮೀಜಿ ಮಠದ ಆಡಳಿತವನ್ನು ತಾವೇ ಸಮರ್ಥವಾಗಿ ನಡೆಸುತ್ತೇನೆ ಎಂದಿರೊದು ಭಕ್ತರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv