Tag: ಸಾರ್ವಜನಿಕ ಟಿವಿ

  • 62ರ ಅಜ್ಜಿಯನ್ನ ವರಿಸಿದ 26ರ ಯುವಕ – ಫೇಸ್‍ಬುಕ್ ಮೂಲಕ ಲವ್

    62ರ ಅಜ್ಜಿಯನ್ನ ವರಿಸಿದ 26ರ ಯುವಕ – ಫೇಸ್‍ಬುಕ್ ಮೂಲಕ ಲವ್

    – ಆಕಸ್ಮಿಕವಾಗಿ ಫೇಸ್‍ಬುಕ್ ಮೂಲಕ ಪರಿಚಯ, ಸ್ನೇಹ
    – ಮೂವರು ಗಂಡಂದಿರನ್ನ ಕಳ್ಕೊಂಡಿರೋ ಅಜ್ಜಿ

    ಟುನಿಸ್: 62 ವರ್ಷದ ಅಜ್ಜಿಯೊಬ್ಬರು ತನಗಿಂತ ಕಿರಿಯ 26 ವರ್ಷದ ಯುವಕನ ಜೊತೆ ಮದುವೆಯಾಗಿರುವ ಘಟನೆ ಉತ್ತರ ಆಫ್ರಿಕಾದಲ್ಲಿ ನಡೆದಿದೆ.

    62 ವರ್ಷದ ಇಸಾಬೆಲ್ ಡಿಬಲ್ ಮತ್ತು 26 ವರ್ಷದ ಬೇರಾಮ್ ಬೌಸಾಡಾ ಮದುವೆಯಾಗಿದ್ದಾರೆ. ಇಸಾಬೆಲ್ ಡಿಬಲ್ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ವಿಮಾನ ನಿಲ್ದಾಣದ ಬರಿಸ್ತಾ ಕಾಫಿ ಸೆಂಟರ್ ಗಾಗಿ ಆನ್‍ಲೈನ್‍ನಲ್ಲಿ ಹುಡುಕುತ್ತಿದ್ದರು. ಇದೇ ವೇಳೆ ಬೇರಾಮ್ ಪರಿಚಯವಾಗಿದ್ದು ಆತ ಬರಿಸ್ತಾಕ್ಕೆ ಕರೆದಿದ್ದ. ಆದರೆ ಅಜ್ಜಿ ಆತನ ಮನವಿಯನ್ನು ನಿರಾಕರಿಸಿದ್ದರು.

    ಕೆಲವು ತಿಂಗಳ ಬಳಿಕ ಇಸಾಬೆಲ್ ಡಿಬಲ್ ತಾನು ಮಾಡಿದ್ದು ತಪ್ಪು ಎಂದು ಬೇರಾಮ್‍ಗೆ ಫೇಸ್‍ಬುಕ್‍ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಆದರೆ ಅದು ಬೇರಾಮ್ ಬೌಸಾಡಾಗೆ ಹೋಗಿದೆ. ಆಗ ಬೇರಾಮ್ ಅಜ್ಜಿಯ ಮನವಿಯನ್ನು ಸ್ವೀಕರಿಸಿ ಇಬ್ಬರು ಸ್ನೇಹಿತರಾಗಿದ್ದರು. ದಿನ ಕಳೆದಂತೆ ಇಬ್ಬರು ಮೆಸೇಜ್ ಮಾಡುತ್ತಿದ್ದು, ವಿಡಿಯೋ ಕಾಲ್ ಮಾಡುವ ಮೂಲಕ ಮಾತನಾಡುತ್ತಿದ್ದರು.

    ಕೊನೆಗೆ ಇಬ್ಬರು ಭೇಟಿಯಾಗಿ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವ ನಿರ್ಧಾರವನ್ನು ಮಾಡಿದ್ದಾರೆ. ಅದರಂತೆಯೇ ಜನವರಿಯಲ್ಲಿ ಟುನೀಶಿಯಾದಲ್ಲಿ ವಿವಾಹವಾದರು. ಈಗಾಗಲೇ ಇಸಾಬೆಲ್ ಡಿಬಲ್ ಮೂವರು ಗಂಡಂದಿರನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದಾರೆ.

    ಮೊದಲಿಗೆ ಇಬ್ಬರ ಮದುವೆಗೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ಇಸಾಬೆಲ್ ಮಕ್ಕಳು ಕೂಡ ಈ ವಯಸ್ಸಿನಲ್ಲಿ ಮದುವೆ ಬೇಡ ಎಂದು ಬೇಸರ ವ್ಯಕ್ತಪಡಿಸಿದ್ದರು. ಕೊನೆಗೆ ಎರಡು ಕುಟುಂಬದವರು ಒಪ್ಪಿ ಮದುವೆ ಮಾಡಿದ್ದಾರೆ. ಈಗಾಗಲೇ ಈ ಜೋಡಿ ಹನಿಮೂನ್ ಕೂಡ ಮುಗಿಸಿದ್ದಾರೆ. ಬೇರಾಮ್ ತಮ್ಮ ಪತ್ನಿಯನ್ನು ಪ್ರೀತಿಯಿಂದ ‘ನನ್ನ ಆತ್ಮ’ ಎಂದು ಕರೆಯುತ್ತಾರೆ.

    ಈ ಬಗ್ಗೆ ಮಾತನಾಡಿದ ಇಸಾಬೆಲ್, ನಮ್ಮಿಬ್ಬರ ನಡುವೆ ವಯಸ್ಸಿನ ಅಂತರ ತುಂಬಾ ಇದೆ ಅಂತ ನನಗೆ ಗೊತ್ತು. ಆದರೆ ನಮ್ಮ ವಯಸ್ಸು ಮನಸ್ಸಿನ ಪ್ರೀತಿಗೆ ಅಡ್ಡಿಯಾಗುವುದಿಲ್ಲ. ನನ್ನ ಪತಿ ಬೇರಾಮ್‍ಗೂ ಈ ಬಗ್ಗೆ ಚಿಂತೆಯಿಲ್ಲ. ಈಗ ನಾನು ಬೇರಾಮ್ ಪ್ರೀತಿಯ ನೆರಳಿನಲ್ಲಿದ್ದೇನೆ ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

    ಇಸಾಬೆಲ್ ಈಗಾಗಲೇ ಮೂವರ ಪತಿಯರನ್ನು ಕಳೆದುಕೊಂಡಿದ್ದ ನೋವಿನಲ್ಲಿದ್ದಾರೆ. ಇಂತಹ ಮಹಿಳೆಯರ ಬಗ್ಗೆ ನಾನು ಓದಿ ತಿಳಿದುಕೊಂಡಿದ್ದೇನೆ. ಅವರಿಗೆ ಪ್ರೀತಿಯ ಆಸರೆ ಬೇಕಾಗುತ್ತದೆ. ಹೀಗಾಗಿ ನಾನು ಇಸಾಬೆಲ್ ಜೊತೆ ಮದುವೆಯಾಗಿದ್ದೇನೆ. ಆದರೆ ಆಕೆಯ ಹಣ, ಆಸ್ತಿ ಯಾವುದರ ಮೇಲೂ ನನಗೆ ಇಷ್ಟ ಇಲ್ಲ. ಪ್ರೀತಿಯಿಂದ ವಿವಾಹವಾಗಿರುವುದಾಗಿ ಬೇರಾಮ್ ಹೇಳಿದ್ದಾರೆ.

  • ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

    ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

    ವಾಷಿಂಗ್ಟನ್: ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಪತ್ತೆ ಹಚ್ಚಿದೆ. ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಫೋಟೋವನ್ನು ನಾಸಾ ಹಂಚಿಕೊಂಡಿದೆ.

    ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‌ಆರ್‌ಒ) ಮೂಲಕ ತೆಗೆದ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದು ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನು ಪತ್ತೆಮಾಡಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹರಡಿಕೊಂಡಿವೆ ಎಂದು ತಿಳಿಸಿದೆ.

    ಸೆ. 26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಮಣ್ಯಂ ಎಲ್‌ಆರ್‌ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಮೀ. ದೂರದಲ್ಲಿ ಅದರ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿದೆ.

    3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಸೆಪ್ಟೆಂಬರ್ 7ರ ಬೆಳಗಿನ ಜಾವ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.

  • ಜಮೀನಿಗಾಗಿ ದಾಯಾದಿಗಳ ಕಲಹ – ಕೊಡಲಿಯಿಂದ ಕೊಚ್ಚಿ ಮೂವರ ಬರ್ಬರ ಕೊಲೆ

    ಜಮೀನಿಗಾಗಿ ದಾಯಾದಿಗಳ ಕಲಹ – ಕೊಡಲಿಯಿಂದ ಕೊಚ್ಚಿ ಮೂವರ ಬರ್ಬರ ಕೊಲೆ

    ಕಲಬುರಗಿ: ಜಮೀನಿಗಾಗಿ ದಾಯಾದಿಗಳ ನಡುವೆ ನಡೆದ ಕಲಹ ಮೂವರ ಬರ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಸೇಡಂ ತಾಲೂಕಿನ ಮೆದಕ್ ಗ್ರಾಮದ ಮಲ್ಕಪ್ಪ ಹಾಗೂ ಆತನ ಇಬ್ಬರು ಮಕ್ಕಳಾದ ಚಿನ್ನಯ್ಯ ಮತ್ತು ಶಂಕ್ರಪ್ಪ ಎಂಬುವವರನ್ನು ಕೊಡಲಿಯಿಂದ ಹೊಡೆದು ಅವರ ಜಮೀನಿನಲ್ಲೇ ಕೊಲೆ ಮಾಡಲಾಗಿದೆ.

    ಮಲ್ಕಪ್ಪ ಸಹೋದರರಾದ ಆಶಪ್ಪ ಹಾಗೂ ಶರಣಪ್ಪ ಅವರ ಮಧ್ಯೆ ಜಮೀನಿನ ವಿಚಾರದಲ್ಲಿ ಜಗಳ ನಡೆಯುತಿತ್ತು. ಅದ್ದರಿಂದ ಆಶಪ್ಪ ಹಾಗು ಶರಣಪ್ಪ ತಮ್ಮ ಕುಟುಂದವರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.

    ಈ ಸಂಬಂಧ ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಂಪಿ ಉತ್ಸವದಲ್ಲಿ ಮಹಿಳೆಯ ಪಕ್ಕ ಮಲಗಿದ್ದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಹಂಪಿ ಉತ್ಸವದಲ್ಲಿ ಮಹಿಳೆಯ ಪಕ್ಕ ಮಲಗಿದ್ದ ಕಾಮುಕನಿಗೆ ಸ್ಥಳೀಯರಿಂದ ಥಳಿತ

    ಬಳ್ಳಾರಿ: ಹಂಪಿಯ ಸಾಂಸ್ಕೃತಿಕ ಉತ್ಸವದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಕಳೆದಿನ ಅಷ್ಟೇ ಪೂಜಾರಿ ವಿದೇಶಿ ಹೊಡುಗಿಯ ಜೊತೆ ಸೆಕ್ಸ್ ಮಾಡುತ್ತಿದ್ದಾಗ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ. ಈಗ ಮತ್ತೆ ಕಾಮುಕನೊಬ್ಬ ಮಹಿಳೆಯ ಪಕ್ಕ ಮಲಗಿ ಕಾಮಚೇಷ್ಟೆ ಮಾಡಿದ್ದು, ಸ್ಥಳೀಯರಿಂದ ಹಿಗ್ಗಾಮುಗ್ಗಾ ಏಟು ತಿಂದಿರುವ ಘಟನೆ ನಡೆದಿದೆ.

    ಮೂಲತಃ ಬೆಳಗಾವಿಯ ಸಚಿನ್ ಎಂಬಾತ ಸ್ಥಳೀಯರಿಂದ ಏಟು ತಿಂದ ಕಾಮುಕ. ಹಂಪಿಯ ಸಾಂಸ್ಕøತಿಕ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಹಿಳೆಯು ಪ್ರದರ್ಶನ ಮುಗಿದ ಮೇಲೆ ರಾತ್ರಿ ಅಲ್ಲಿಯೇ ಮಲಗಿ ಕೊಂಡಿದ್ದಾರೆ. ಈ ವೇಳೆ ಮಧ್ಯರಾತ್ರಿ ಮಹಿಳೆಯು ಮಲಗಿದ್ದ ಸ್ಥಳಕ್ಕೆ ಬಂದ ಸಚಿನ್ ತನ್ನ ಕಾಮಚೇಷ್ಟೆಗಳನ್ನು ಪ್ರದರ್ಶಿಸಿದ್ದಾನೆ. ಇದನ್ನು ಕಂಡು ಆತಂಕಗೊಂಡ ಮಹಿಳೆಯು ಕೂಗಿಕೊಂಡಿದ್ದಾರೆ. ತಕ್ಷಣ ಸಮೀಪದಲ್ಲಿದ್ದ ಸ್ಥಳೀಯ ವ್ಯಾಪಾರಿಗಳು ಸಚಿನ್‍ನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಸಚಿನ್ ಶನಿವಾರ ಉತ್ಸವದಲ್ಲಿ ವಿದೇಶಿ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತನೆ ಮಾಡಿದ್ದ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೇ ಹಂಪಿ ಉತ್ಸವದಲ್ಲಿ ಕಾಮುಕರ ಉಪಟಳ ಹೆಚ್ಚಳವಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಪೊಲೀಸರು ಗಸ್ತು ತಿರುಗಬೇಕು ಎಂದು ಆಗ್ರಹಿಸಿದ್ದಾರೆ.