Tag: ಸಾರ್ವಜನಿಕರು

  • ಕೆರೆಗಾಗಿ ಜೋಳಿಗೆ ಹಿಡಿದ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಶ್ರೀಗಳು!

    ಕೆರೆಗಾಗಿ ಜೋಳಿಗೆ ಹಿಡಿದ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಶ್ರೀಗಳು!

    ತುಮಕೂರು: ಕೆರೆಗಳನ್ನು ಹೂಳೆತ್ತಲು ಸ್ವಾಮೀಜಿಯೊಬ್ಬರು ಜೋಳಿಗೆ ಹಿಡಿದು ಜನರ ಸಹಕಾರ ಕೇಳಿದ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.

    ಕೊರಟಗೆರೆ ತಾಲೂಕಿನ ಕೆರೆಗಳ ಪುನಶ್ಚೇತನಕ್ಕಾಗಿ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಶ್ರೀಗಳು ಈ ಹೆಜ್ಜೆಯಿಟ್ಟಿದ್ದಾರೆ. ಕೆರೆ ಹೂಳೆತ್ತುವುದಕ್ಕಾಗಿ ಪಣತೊಟ್ಟ ಶ್ರೀಗಳು ಹಣ ಸಂಗ್ರಹಿಸಲು ಜೋಳಿಗೆ ಹಿಡಿದು ಊರೂರು ಸುತ್ತುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮಿ ಜಲತರು ಸಂವರ್ಧನಾ ಸಮಿತಿ ಮೂಲಕ ಕೆರೆಗಳ ಉಳಿವಿಗಾಗಿ ಈ ರೀತಿಯ ಹೋರಾಟ ಆರಂಭಿಸಿದ್ದಾರೆ.

    ಒಂದು ಕೆರೆ ಹೂಳೆತ್ತಲು ಸರಿಸುಮಾರು 2 ಕೋಟಿ ರೂ. ಬೇಕಾಗುತ್ತದೆ. ಹೀಗೆ ತಾಲೂಕಿನ 134 ಕೆರೆ ಹೂಳೆತ್ತಲು ಸರಿಸುಮಾರು 300 ಕೋಟಿ ರೂ. ಗಳ ಅವಶ್ಯಕತೆ ಇದೆ. ಭಕ್ತಾಧಿಗಳು ಕೂಡಾ ಸಾಧ್ಯವಾದಷ್ಟು ಧನಸಹಾಯ ಮಾಡುತ್ತಿದ್ದಾರೆ.

    ಈಗಾಗಲೇ ಜಿಲ್ಲೆಯ ಮಣುವಿನಕುರಿಕೆ ಗ್ರಾಮದ ಕೆರೆ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಸುಮಾರು 180 ಎಕರೆ ಪ್ರದೇಶದಲ್ಲಿರುವ ಈ ಕೆರೆ ಅರ್ಧದಷ್ಟು ಹೂಳೆತ್ತಲಾಗಿದೆ. ಊರಿನ ಜನರು ಕೂಡಾ ಶ್ರೀಗಳಿಗೆ ಹಣಕಾಸಿನ ನೆರವಿನ ಜೊತೆಗೆ ಹೂಳೆತ್ತಲೂ ಸಹಾಯ ಮಾಡುತ್ತಿದ್ದಾರೆ. ತಮ್ಮ ಟ್ರಾಕ್ಟರ್, ಎತ್ತಿನ ಗಾಡಿ ತಂದು ಮಣ್ಣು ಸಾಗಿಸುತ್ತಿದ್ದಾರೆ. ಕೆರೆಗಳನ್ನು ಉಳಿಸುವ ದೃಷ್ಟಿಯಿಂದ ಶ್ರೀಗಳು ಕೈಗೊಂಡಿರುವ ಈ ಕಾರ್ಯವನ್ನು ಸಾರ್ವಜನಿಕರು ಮುಕ್ತವಾಗಿ ಸ್ವಾಗತಿಸಿದ್ದಾರೆ.

  • ನಾಯಿ ಜೊತೆ ಕಬ್ಬನ್ ಪಾರ್ಕ್ ಬರೋ ಜನರಿಗೊಂದು ಸೂಚನೆ

    ನಾಯಿ ಜೊತೆ ಕಬ್ಬನ್ ಪಾರ್ಕ್ ಬರೋ ಜನರಿಗೊಂದು ಸೂಚನೆ

    ಬೆಂಗಳೂರು: ಕಬ್ಬನ್ ಪಾರ್ಕ್ ಗೆ ವಾಕ್ ಬರುವ ಸಾರ್ವಜನಿಕರು ಜೊತೆಗೆ ಇರಲಿ ಅಂತಾ ನಾಯಿಗಳನ್ನು ಕರ್ಕೊಂಡು ಬರೋದು ಕಾಮನ್. ನಾಯಿಗಳನ್ನು ಕೈಯಲ್ಲೇ ಇಟ್ಕೊಂಡ್ರೇ ಓಕೆ. ಕೊಂಚ ಪಾರ್ಕ್‍ನಲ್ಲಿ ಸುತ್ತಾಡ್ಲಿ ಅಂತಾ ಬಿಟ್ರೋ ಪೊಲೀಸ್ ಕೇಸ್ ಹಾಕ್ತಾರೆ ಜೋಕೆ.

    ನಿಮ್ಮ ಮುಂದಿನ ನಾಯಿ ಕತ್ತಿಗೆ ಬೆಲ್ಟ್ ಕಟ್ಟಿ ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ರೆ ಯಾರು ಕೇಳುವದಿಲ್ಲ. ಆದ್ರೆ ನಾಯಿ ಸ್ವಲ್ಪ ರಿಲ್ಯಾಕ್ಸ್ ಆಗಿ ಓಡಾಡಲಿ ಅಂತಾ ಬೆಲ್ಟ್ ಕೈ ಬಿಟ್ರೆ ನಿಮ್ಮ ಮೇಲೆ ದೂರು ದಾಖಲಾಗೋದು ಗ್ಯಾರೆಂಟಿ. ಕಬ್ಬನ್ ಪಾರ್ಕ್ ನಲ್ಲಿ ವಾಕಿಂಗ್‍ಗೆ ನಾಯಿಗಳನ್ನು ಕರೆದುಕೊಂಡು ಬರೋರು ಫ್ರೀಯಾಗಿ ಸುತ್ತಾಡಲಿ ಅಂತಾ ಬಿಟ್ಟು ಬಿಡ್ತಾರೆ. ಸಾಕಷ್ಟು ನಾಯಿಗಳು ವಿಹಾರಿಗಳ ಮೇಲೆ ಎರಗಿ ಕಚ್ಚಿ ಹಾನಿ ಮಾಡಿವೆ.

    ಸಾಕು ನಾಯಿಗಳಿಂದ ಹಾವಳಿಯಿಂದ ಎಚ್ಚೆತ್ತ ತೋಟಗಾರಿಕ ಇಲಾಖೆ ಈಗ ಹೀಗೆ ನಾಯಿ ಬಿಟ್ಟವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ನಿರ್ಧರಿಸಿದ್ದಾರೆ. ಈಗಾಗಲೇ ಇಬ್ಬರ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಸಂಪೂರ್ಣವಾಗಿ ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳನ್ನು ಕರೆದುಕೊಂಡು ಬರೋದು ನಿಷೇಧ ಮಾಡುವ ಬಗ್ಗೆಯೂ ಇಲಾಖೆ ಚಿಂತನೆ ನಡೆಸಿದೆ. ಆದ್ರೆ ಇದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದು, ಚಿಂತನೆಯನ್ನು ಸದ್ಯ ಕೈ ಬಿಡಲಾಗಿದೆ.

  • ಕಾಮದಾಹ ತೀರಿಸಿಕೊಳ್ಳಲು ಮನೆಗೆ ಬರುವಂತೆ ಯುವತಿಗೆ ಸನ್ನೆಯಲ್ಲೇ ಬಲವಂತ ಮಾಡಿದ ನಾಲ್ವರು ಕಾಮುಕರು!

    ಕಾಮದಾಹ ತೀರಿಸಿಕೊಳ್ಳಲು ಮನೆಗೆ ಬರುವಂತೆ ಯುವತಿಗೆ ಸನ್ನೆಯಲ್ಲೇ ಬಲವಂತ ಮಾಡಿದ ನಾಲ್ವರು ಕಾಮುಕರು!

    ಶಿವಮೊಗ್ಗ: ಯುವಕರು ಮನೆಗೆ ಹೋಗುತ್ತಿದ್ದ ಯುವತಿಯನ್ನು ಕಿಚಾಯಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸನಿಹದ ತೀರ್ಥಮತ್ತೂರು ಗ್ರಾಮದ ರಾಮಚಂದ್ರಾಪುರ ಸರ್ಕಲ್ ಬಳಿ ನಡೆದಿದೆ.

    ನಾಲ್ವರು ಯುವಕರು ಮನೆಗೆ ಹೋಗುತ್ತಿದ್ದ ಯುವತಿಯನ್ನು ಕಿಚಾಯಿಸಿದಲ್ಲದೇ ಕಾಮದಾಹ ತೀರಿಸಿಕೊಳ್ಳಲು ಮನೆಗೆ ಬರುವಂತೆ ಸನ್ನೆಯಲ್ಲೇ ಬಲವಂತ ಮಾಡಿದ್ದಾರೆ. ಇದ್ದರಿಂದ ಕೋಪಗೊಂಡ ಸಾರ್ವಜನಿಕರಿಂದ ಯುವಕರಿಗೆ ಥಳಿಸಿದ್ದಾರೆ.

    ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸಾರ್ವಜನಿಕರು ವಾಹನಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ತೀರ್ಥಹಳ್ಳಿ ಇನ್ಸ್ ಪೆಕ್ಟರ್ ಸುರೇಶ್ ನೇತೃತ್ವದ ತಂಡ ಪರಿಸ್ಥಿತಿ ತಹಬದಿಗೆ ತಂದಿತ್ತು.

    ಪೊಲಿಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿದ್ದಾರೆ.

  • ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಯುವಕನಿಗೆ ಸಾರ್ವಜನಿಕರಿಂದ ಗೂಸಾ

    ಪೆಟ್ರೋಲ್ ಕಳ್ಳತನ ಮಾಡ್ತಿದ್ದ ಯುವಕನಿಗೆ ಸಾರ್ವಜನಿಕರಿಂದ ಗೂಸಾ

    ಗದಗ: ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಗದಗ್ ನಲ್ಲಿ ನಡೆದಿದೆ.

    ಗದಗ ನಗರ ತೋಂಟದಾರ್ಯ ಮಠದ ಬಳಿ ಸ್ಟೇಷನ್ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಥಳಿತಕ್ಕೊಳಗಾದ ಯುವಕನನ್ನು ಕರಿಯಪ್ಪ ಎಂದು ಗುರುತಿಸಲಾಗಿದೆ.

    ಕರಿಯಪ್ಪ ರಾತ್ರಿ ಮನೆಯ ಹೊರಗೆ ಹಾಗೂ ರಸ್ತೆ ಪಕ್ಕ ನಿಲ್ಲಿಸಿದ ಬೈಕ್ ಗಳನ್ನೇ ಗುರಿಯಾಗಿಸಿಕೊಂಡು ಪೆಟ್ರೋಲ್ ಕದಿಯುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕರಿಯಪ್ಪನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.

    ಸದ್ಯ ಪೆಟ್ರೋಲ್ ಕಳ್ಳನನ್ನು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕುಡಿದ ಅಮಲಿನಲ್ಲಿ ಅನುಚಿತ ವರ್ತನೆ- ಪೇದೆಗೆ ಸಾರ್ವಜನಿಕರಿಂದ ಗೂಸಾ

    ಕುಡಿದ ಅಮಲಿನಲ್ಲಿ ಅನುಚಿತ ವರ್ತನೆ- ಪೇದೆಗೆ ಸಾರ್ವಜನಿಕರಿಂದ ಗೂಸಾ

    ಗದಗ: ಅನುಚಿತ ವರ್ತನೆ ಆರೋಪದ ಹಿನ್ನಲೆಯಲ್ಲಿ ಡಿ.ಆರ್ ಪೊಲೀಸ್ ಪೇದೆಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

    ಗದಗ ಸಶಸ್ತ್ರ ಮೀಸಲು ಪಡೆ ಪೇದೆ ಚಂದ್ರು ಲಮಾಣಿಗೆ ಸಾರ್ವಜನಿಕರೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಚಂದ್ರು ಕುಡಿದ ಅಮಲಿನಲ್ಲಿ ಸಾರ್ವಜನಿಕರೊಂದಿಗೆ ಮನಬಂದಂತೆ ಮಾತನಾಡುತ್ತಿದ್ದ ಹಾಗೂ ಮಹಿಳೆಯರ ಎದುರು ಅನುಚಿತ ವರ್ತನೆ ತೋರುತ್ತಿದ್ದ ಎಂದು ಆರೋಪಿಸಲಾಗಿದೆ.

    ಇವನ ವರ್ತನೆ ನೋಡಿ ಸ್ಥಳೀಯರು ಪೊಲೀಸಪ್ಪನಿಗೆ ಒಂದಿಷ್ಟು ಕೈ ರುಚಿ ತೋರಿಸಿದ್ದಾರೆ. ಒಂದು ವಾರದ ಹಿಂದೆ ನಗರದ ಮುಳಗುಂದ ನಾಕಾದಲ್ಲಿ ಈ ಘಟನೆ ನಡೆದಿದೆ. ಡಿ. ಆರ್ ಪೇದೆಗೆ ಧರ್ಮದೇಟು ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಾರ್ವಜನಿಕರಿಂದ ಧರ್ಮದೇಟು ತಿಂದ ಡಿ.ಆರ್ ಪೇದೆ ಚಂದ್ರು ಲಮಾಣಿ ಇದೀಗ ನಾಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ.

  • ಮೈಸೂರಿನಲ್ಲಿ ದಸರಾ ಪ್ರಯುಕ್ತ ವಿದ್ಯಾರ್ಥಿಗಳಿಂದ ಪಾರಂಪರಿಕ ನಡಿಗೆ

    ಮೈಸೂರಿನಲ್ಲಿ ದಸರಾ ಪ್ರಯುಕ್ತ ವಿದ್ಯಾರ್ಥಿಗಳಿಂದ ಪಾರಂಪರಿಕ ನಡಿಗೆ

    ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ಮೈಸೂರಿನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ಜನಿಕರಿಗೆ ಪರಂಪರೆಯನ್ನು ತಿಳಿಸುವ ಕಾರ್ಯಕ್ರಮವಾಗಿ ಪಾರಂಪರಿಕ ನಡಿಗೆಗೆ ಇಂದು ಚಾಲನೆ ದೊರಕಿದೆ.

    ಮೈಸೂರಿನ ದಿವಾನ್ ರಂಗಾಚಾರ್ಲು ಪುರಭವನದ ಮುಂಭಾಗ ಜಿಲ್ಲಾಧಿಕಾರಿ ಟಿ.ಯೋಗಶ್ ಅವರು ಈ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು. ಈ ನಡಿಗೆಯಲ್ಲಿ ಪುರಭವನ, ದೊಡ್ಡಗಡಿಯಾರ, ಫ್ರೀ ಮೇಸನ್ಸ್ ಕ್ಲಬ್, ಚಾಮರಾಜೇಂದ್ರ ವೃತ್ತ, ಅಂಬಾ ವಿಲಾಸ ಅರಮನೆ, ಕೆ.ಆರ್.ವೃತ್ತ, ದೇವರಾಜ ಮಾರುಕಟ್ಟೆ ಸೇರಿದಂತೆ ಮೈಸೂರಿನ ವಿವಿಧ ಐತಿಹಾಸಿಕ ಕಟ್ಟಗಳು ಹಾಗೂ ಸ್ಥಳಗಳ ಸಂಪನ್ಮೂಲ ವ್ಯಕ್ತಿಗಳು ನಡಿಗೆಯ ಮೂಲಕ ಮೈಸೂರಿನ ಪರಂಪರೆ, ಸಂಸ್ಥಾನ ಬೆಳೆದು ಬಂದ ದಾರಿ, ರಾಜರ ಕೊಡುಗೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಿದರು.

    ಈ ಪಾರಂಪರಿಕ ನಡಿಗೆ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಮೈಸೂರಿನ ವಿವಿಧೆಡೆ ಸಂಚರಿಸಿ ರಾಜ ಪರಂಪರೆಯನ್ನು ಸಾರಲಿದೆ.

  • ಸರ್ಕಾರಿ ಆಂಬುಲೆನ್ಸ್ ನಲ್ಲಿ ಮನೆ ಸಾಮಾಗ್ರಿ ಸಾಗಿಸಿದ ವೈದ್ಯ!

    ಸರ್ಕಾರಿ ಆಂಬುಲೆನ್ಸ್ ನಲ್ಲಿ ಮನೆ ಸಾಮಾಗ್ರಿ ಸಾಗಿಸಿದ ವೈದ್ಯ!

    ವಿಜಯಪುರ: ಸರ್ಕಾರಿ ಆಂಬುಲೆನ್ಸ್ ನಲ್ಲಿ ವೈದ್ಯ ತನ್ನ ಮನೆ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸಾರ್ಜಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರವಿ ಕಟ್ಟಿಮನಿ ಎಂಬಾತ ವಿಜಯಪುರದಿಂದ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ನಲ್ಲಿ ತನ್ನ ಮನೆಯ ಸಾಗ್ರಿಗಳನ್ನು ಕೊಂಡೊಯ್ಯುತ್ತಿದ್ದ. ಈ ವೇಳೆ ವಿಜಯಪುರದ ಹೊರವಲಯದಲ್ಲಿ ಸಾರ್ವಜನಿಕರ ಕೈಗೆ ವೈದ್ಯ ಮತ್ತು ಆಂಬುಲೆನ್ಸ್ ಚಾಲಕ ಸಿಕ್ಕಿ ಬಿದ್ದಿದ್ದಾರೆ.

    ಆಂಬುಲೆನ್ಸ್ ನಲ್ಲಿ ಮನೆಯ ಸಾಮಗ್ರಿಗಳನ್ನು ನೋಡಿ ಜನರು ವೈದ್ಯನಿಗೆ ಛೀಮಾರಿ ಹಾಕಿದರು.

    https://youtu.be/eVyBwDKejJI

  • ಆಕಳ ಕರುವನ್ನ ಕದ್ದು ಕೊಂದ ಯುವಕರಿಗೆ ಸಾರ್ವಜನಿಕರಿಂದ ಧರ್ಮದೇಟು

    ಆಕಳ ಕರುವನ್ನ ಕದ್ದು ಕೊಂದ ಯುವಕರಿಗೆ ಸಾರ್ವಜನಿಕರಿಂದ ಧರ್ಮದೇಟು

    ರಾಯಚೂರು: ನಗರದ ನಂದೀಶ್ವರ ದೇವಾಲಯದ ಬಳಿ ಆಕಳ ಕರುವನ್ನು ಕೊಂದು ಹೊತ್ತೊಯ್ಯುತ್ತಿದ್ದ ಯುವಕರನ್ನ ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

    ನಗರದ ತಿಮ್ಮಾಪುರಪೇಟೆಯ ಸಾಧಿಕ್ ಹಾಗೂ ಖಲಂದರ್ ಆಕಳ ಕರುವನ್ನ ಕದ್ದು ಕೊಂದಿದ್ದಾರೆ. ಸಂಗಮೇಶಸ್ವಾಮಿ ಎಂಬವರ ಆಕಳು ಇತ್ತೀಚಗಷ್ಟೇ ಗಂಡು ಕರುವಿಗೆ ಜನ್ಮ ನೀಡಿತ್ತು. ದೇವಸ್ಥಾನದ ಬಳಿ ಹುಲ್ಲು ಮೇಯುತ್ತಿದ್ದ ಕರುವನ್ನ ಕದ್ದು ಕೊಂದಿದ್ದಾರೆ.

    ನಂತರ ಚೀಲದಲ್ಲಿ ಎತ್ತಿಕೊಂಡು ಹೋಗುವಾಗ ಸಾರ್ವಜನಿಕರಿಗೆ ಅನುಮಾನ ಬಂದು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಯುವಕರು ಈ ಕರುವನ್ನು ಮಾಂಸದಂಗಡಿಗೆ ಕರುವನ್ನ ಮಾರಾಟ ಮಾಡಲು ಒಯ್ಯುತ್ತಿದ್ದರು ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.