Tag: ಸಾರ್ವಜನಿಕರಿಗೆ ಸುವರ್ಣಾವಕಾಶ

  • ಬದುಕಿಗೆ ಹತ್ತಿರಾಗೋ ನಗೆಬುಗ್ಗೆಯ ಸುವರ್ಣಾವಕಾಶ!

    ಬದುಕಿಗೆ ಹತ್ತಿರಾಗೋ ನಗೆಬುಗ್ಗೆಯ ಸುವರ್ಣಾವಕಾಶ!

    ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾರುಕಟ್ಟೆ ವಲಯದಲ್ಲಿ ಸಾರ್ವಜನಿಕರಿಗೆ ಸುವರ್ಣಾವಕಾಶವೆಂಬ ಸ್ಲೋಗನ್ನು ಚಿರಪರಿಚಿತ. ಹೀಗೆ ಸಾರ್ವಜನಿಕರಿಗೆ ಸುವರ್ಣಾವಕಾಶದ ಆಮಿಷವೊಡ್ಡುತ್ತಲೇ ಆಸೆಯ ಬಲೂನಿನ ಮೈಗೆ ಬ್ಲೇಡು ಗೀರುವಂಥಾ ಘಟನಾವಳಿಗಳೂ ಯಥೇಚ್ಛವಾಗಿಯೇ ನಡೆಯುತ್ತಿರುತ್ತವೆ. ಹಾಗಾದರೆ ಸಾರ್ವಜನಿಕರಿಗೆ ಸುವರ್ಣಾವಕಾಶ ಎಂದೇ ಶೀರ್ಷಿಕೆ ಇಟ್ಟುಕೊಂಡಿರುವ ಈ ಚಿತ್ರದಲ್ಲಿ ಯಾವ ಥರದ ಕಥೆಯಿದೆ ಎಂಬಂಥ ಕುತೂಹಲ ಹುಟ್ಟಲು ಕಾರಣವಾಗಿದ್ದದ್ದು ಸಹ ಅಂಥಾ ವಾತಾವರಣವೇ. ಇದೀಗ ಈ ಸಿನಿಮಾ ತೆರೆ ಕಂಡಿದೆ. ಬದುಕಿಗೆ ಹತ್ತಿರಾದ ಕಥೆಯನ್ನು ನಗೆಬುಗ್ಗೆಗಳೊಂದಿಗೆ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಪ್ರೇಕ್ಷಕರಿಗೆಲ್ಲ ಲಭಿಸಿದೆ.

    ಒಂದು ಸಾದಾ ಸೀದಾ ಕಥಾ ಎಳೆಯನ್ನು ಸಾಧ್ಯಂತವಾಗಿ ಪ್ರೇಕ್ಷಕರನ್ನು ಖುಷಿಗೊಳಿಸುವಂತೆ ರೂಪಿಸಿರುವುದೇ ಈ ಚಿತ್ರದ ಪ್ಲಸ್ ಪಾಯಿಂಟ್. ಪ್ರೇಕ್ಷಕರು ಎಂತೆಂಥಾ ನಿರೀಕ್ಷೆಗಳನ್ನಿಟ್ಟುಕೊಂಡು ಸಿನಿಮಾ ನೋಡಲು ಹೋಗುತ್ತಾರೆಣಂಬ ಸೂಕ್ಷ್ಮವನ್ನು ಅರಿತುಕೊಂಡೇ ನಿರ್ದೇಶಕ ಅನೂಪ್ ರಾಮಸ್ವಾಮಿ ದೃಷ್ಯ ಕಟ್ಟಿದ್ದಾರೆ. ಇಡೀ ಸಿನಿಮಾ ಪ್ರೇಕ್ಷಕರನ್ನು ತೃಪ್ತಗೊಳಿಸುವಂಥಾ ಅಂಶಗಳೊಂದಿಗೆ ನಳನಲೀಸುವಂತೆ ಮೂಡಿ ಬಂದಿರೋದೇ ಆ ಕಾರಣಗಳಿಂದ. ನಾಯಕನಾಗಿ ನಟಿಸಿರುವ ರಿಷಿ ತಾನೊಬ್ಬ ಸಮರ್ಥ ನಟ ಅನ್ನೋದನ್ನು ಪ್ರತೀ ಫ್ರೇಮಿನಲ್ಲಿಯೂ ಸಾಬೀತುಗೊಳಿಸುವಂತೆ ಕಾಣಿಸಿಕೊಂಡಿದ್ದಾರೆ. ಒಂದಕ್ಕೊಂದು ಪೂರಕವಾದ ಪಾತ್ರಗಳು ಮತ್ತು ಕ್ಷಣ ಕ್ಷಣವೂ ಟ್ವಸ್ಟುಗಳೊಂದಿಗೆ ನಗುವಿನ ಜೊತೆ ಜೊತೆಗೇ ಸಾಗುವ ದೃಷ್ಯಾವಳಿಗಳಿಂದ ಈ ಸಿನಿಮಾ ಸಮೃದ್ಧವಾಗಿದೆ.

    ರಿಷಿ ಎಲ್ಲರಿಂದಲೂ ವೇದ್ ಅಂತ ಕರೆಸಿಕೊಳ್ಳೋ ವೇದಾಂತ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಅದು ಮಧ್ಯಮ ವರ್ಗದ ಬದುಕಿನ ಖುಷಿ, ಕಸಿವಿಸಿಗಳನ್ನು ಆವಾಹಿಸಿಕೊಂಡಂತಿರುವ ಪಾತ್ರ. ವೇದ ಇಲ್ಲಿ ಯಾವುದೋ ಒಂದು ಸಮಸ್ಯೆಯ ಬೆನ್ನತ್ತಿ ಹೊರಡುತ್ತಾನೆ. ಒಂದು ಕನಸಿಟ್ಟುಕೊಂಡು ಆ ಹಾದಿಯಲ್ಲಿದುರಾಗೋ ಸವಾಲುಗಳನ್ನು ಎದುರಿಸುತ್ತಾ ಸಾಗುತ್ತಾನೆ. ಹೀಗೆ ಆತ ತನ್ನ ಕನಸನ್ನು ನನಸು ಮಾಡಿಕೊಳ್ಳೋದಕ್ಕಾಗಿ ಸಾರ್ವಜನಿಕರಿಗೊಂದು ಸುವರ್ಣಾವಕಾಶವನ್ನು ಕಲ್ಪಿಸುತ್ತಾನೆ. ಅದೇನೆಂಬುದು ಸಿನಿಮಾದ ಪ್ರಧಾನ ಅಂಶ. ಅದನ್ನು ಚಿತ್ರ ಮಂದಿರಗಳಲ್ಲಿಯೇ ಕಣ್ತುಂಬಿಕೊಳ್ಳೋದು ಉತ್ತಮ.

    ಹೀಗೆ ಯಾವುದೋ ಸಮಸ್ಯೆಯ ಬೆಂಬಿದ್ದು ಮತ್ಯಾವುದೋ ಕನಸು ಕಟ್ಟಿಕೊಂಡು ಮುಂದುವರೆಯೋ ವೇದಾಂತನ ಯಾನದ ತುಂಬಾ ನಗುವಿದೆ. ಭಾವುಕಗೊಳಿಸುವಂಥಾ ಸನ್ನಿವೇಷಗಳಿವೆ. ಸಂಬಂಧಗಳ ಮಹತ್ವ ಸಾರುವಂಥಾ ಅಂಶಗಳೊಂದಿಗೆ ಮುದ್ದಾದೊಂದು ಪ್ರೇಮ ಕಥಾನಕವೂ ಇದೆ. ಇದೆಲ್ಲ ಯಾವ್ಯಾವ ತಿರುವು ಪಡೆದುಕೊಂಡರೂ ಕೂಡಾ ಇಲ್ಲಿ ನಗೆಬುಗ್ಗೆಗಳು ಸದಾ ನಳನಳಿಸುತ್ತಿರುತ್ತವೆ. ನಾಯಕನಾಗಿ ರಿಷಿ ಭರ್ಜರಿಯಾಗಿ ನಟಿಸುತ್ತಾ ಆಕ್ಷನ್ ಸನ್ನಿವೇಷಗಳಲ್ಲಿಯೂ ಮಿಂಚಿದ್ದಾರೆ. ಪ್ರೇಮಿಯಾಗಿಯೂ ಆಪ್ತಚವಾಗುತ್ತಾರೆ. ಧನ್ಯಾ ಬಾಲಕೃಷ್ಣ ಜಾನು ಎಂಬ ಮಹತ್ವಪೂಣವಾದ ಪಾತ್ರದೊಂದಿಗೆ ರಿಷಿಗೆ ಜೋಡಿಯಾಗಿದ್ದಾರೆ.

    ಇಲ್ಲಿ ಪಾತ್ರ ಪೋಷಣೆಯೇ ಇಡೀ ಸಿನಿಮಾದ ಜೀವಾಳವಾಗಿ ಕಾಣಿಸುತ್ತದೆ. ರಿಷಿ ಮತ್ತು ಧನ್ಯಾ ರಾಮಕೃಷ್ಣ ಮುದ್ದಾಗಿ ನಟಿಸಿದ್ದಾರೆ. ದತ್ತಣ್ಣನ ಪಾತ್ರ ಆಹ್ಲಾದ ತುಂಬಿಸುತ್ತಲೇ ಭಾವುಕರನ್ನಾಗಿಸುತ್ತದೆ. ರಂಗಾಯಣ ರಘು, ಮಿತ್ರಾ ಪಾತ್ರಗಳೂ ಕೂಡಾ ಕಾಡುವಂತೆ ಮೂಡಿ ಬಂದಿದೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಸಾರ್ವಜನಿಕರಿಗೆ ಭರ್ಜರಿ ಸುವರ್ಣಾವಕಾಶವನ್ನೇ ನಿರ್ಮಾಣ ಮಾಡಿದ್ದಾರೆ. ಅನೂಪ್ ರಾಮಸ್ವಾಮಿ ಮೊದಲ ಹೆಜ್ಜೆಯಲ್ಲಿಯೇ ನಿರ್ದೇಶಕರಾಗಿ ಭರವಸೆ ಹುಟ್ಟಿಸಿದ್ದಾರೆ.

    ರೇಟಿಂಗ್ : 3.5 / 5

  • ರಿಷಿಗೆ ಜೋಡಿಯಾಗಿ ಕನ್ನಡಕ್ಕಾಗಮಿಸಿದ ಧನ್ಯಾ ಅಪ್ಪಟ ಕನ್ನಡತಿ!

    ರಿಷಿಗೆ ಜೋಡಿಯಾಗಿ ಕನ್ನಡಕ್ಕಾಗಮಿಸಿದ ಧನ್ಯಾ ಅಪ್ಪಟ ಕನ್ನಡತಿ!

    ನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈಗಾಗಲೇ ಟ್ರೇಲರ್, ಹಾಡುಗಳೊಂದಿಗೆ ವ್ಯಾಪಕ ನಿರೀಕ್ಷೆ ಮತ್ತು ಕುತೂಹಲಕ್ಕೆ ಕಾರಣವಾಗಿರುವ ಈ ಸಿನಿಮಾದಲ್ಲಿ ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ಚಹರೆಗಳು ಟ್ರೇಲರ್‍ನಲ್ಲಿ ಕಾಣಿಸಿವೆ. ಹಾಗೆ ಕಂಡಿದ್ದಕ್ಕಿಂತಲೂ ಭಿನ್ನವಾದ ಗುಣ ಲಕ್ಷಣಗಳಿರುವ ಸವಾಲಿನಂಥಾ ಪಾತ್ರದಲ್ಲಿ ಕಾಣಿಸಿಕೊಂಡಿರೋ ಧನ್ಯಾ ಪಾತ್ರ ಕೂಡ ಸಾರ್ವಜನಿಕರಿಗೆ ವಿನಂತಿ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಒಂದೆಂಬುದು ಚಿತ್ರ ತಂಡದ ಭರವಸೆ.

    ಧನ್ಯಾ ಬಾಲಕೃಷ್ಣ ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವವರು. ಆ ಎರಡೂ ಭಾಷೆಗಳ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಧನ್ಯಾ ಈಗಲೂ ಅಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಮೂಲಕವೇ ಕನ್ನಡಕ್ಕೆ ಆಗಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವರ್ಷಕ್ಕೆ ಹಲವಾರು ಪರಭಾಷಾ ನಟಿಯರ ಆಗಮನವಾಗೋದರಿಂದ ಧನ್ಯಾ ಕೂಡ ಆ ಸಾಲಿಗೇ ಸೇರಿಕೊಳ್ಳುತ್ತಾರೆಂದು ಅನೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಅದು ಶುದ್ಧ ಸುಳ್ಳು.

    ಈಗಾಗಲೇ ಧನ್ಯಾ ಪರಭಾಷಾ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಬಹುಭಾಷಾ ನಟಿಯಾಗಿದ್ದರೂ ಕೂಡ ಅವರು ಅಪ್ಪಟ ಕನ್ನಡತಿ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರೋ ಧನ್ಯಾ ತುಂಬಾನೇ ಸ್ಫುಟವಾಗಿ ಕನ್ನಡ ಮಾತಾಡುತ್ತಾರೆ. ಆರಂಭದಿಂದಲೂ ನಟಿಯಾಗಬೇಕೆಂಬ ಆಕಾಂಕ್ಷೆ ಹೊಂದಿದ್ದ ಧನ್ಯಾಗೆ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿದ್ದು ಪರಭಾಷೆಯಲ್ಲಿ. ಮೊದಲು ಕನ್ನಡ ಸಿನಿಮಾದಲ್ಲಿಯೇ ನಟಿಸಬೇಕೆಂಬಂಥಾ ಆಕಾಂಕ್ಷೆಯಾಚೆಗೂ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಧನ್ಯಾ ಇಲ್ಲಿ ಮೆಡಿಕಲ್ ಸ್ಟೂಡೆಂಟ್ ಆಗಿ, ಒಂದು ಗಂಭೀರ ಕಾಯಿಲೆಯಿರೋ ಹುಡುಗಿಯಾಗಿ, ರಿಷಿಯ ಸಖಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ತಮ್ಮ ತವರು ನೆಲದಲ್ಲಿಯೇ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ನಿರೀಕ್ಷೆಯೂ ಧನ್ಯಾರಲ್ಲಿದೆ.

  • ಮಸ್ತ್ ಮನರಂಜನೆ ಪಡೆಯಲು ಸುವರ್ಣಾವಕಾಶ!

    ಮಸ್ತ್ ಮನರಂಜನೆ ಪಡೆಯಲು ಸುವರ್ಣಾವಕಾಶ!

    ಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದ ಪ್ರತಿಭಾವಂತ ನಟ ರಿಷಿ. ಅದೊಂದೇ ಒಂದು ಚಿತ್ರದ ಪಾತ್ರ ಮತ್ತು ಅದರಲ್ಲಿ ನಟಿಸಿದ ರೀತಿಯಿಂದಲೇ ಆ ನಂತರದಲ್ಲಿ ಓರ್ವ ನಟನಾಗಿ ಸುವರ್ಣಾವಕಾಶಗಳನ್ನೇ ಪಡೆದುಕೊಳ್ಳುತ್ತಾ ಸಾಗಿ ಬಂದಿರುವ ಅವರೀಗ ಸಾರ್ವಜನಿಕರಿಗೆ ಸುವರ್ಣಾವಕಾಶ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮುಹೂರ್ತ ಕಂಡ ದಿನದಿಂದಲೇ ಪರಿಚಿತವಾದ, ವಿಶೇಷವಾದ ಈ ಟೈಟಲ್ಲಿನ ಕಾರಣದಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.

    ಇದು ಅನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಇದನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ವರ್ಗಗಳಿಗೆ ಸೀಮಿತವಾದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲು ಏದುಸಿರು ಬಿಡಬೇಕಾಗುತ್ತದೆ. ಪ್ರೇಕ್ಷಕರು ಯಾವ ಕಾರಣಕ್ಕಾಗಿ ಸಿನಿಮಾ ನೋಡಲು ಬರುತ್ತಾರೆಂಬ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇಟ್ಟುಕೊಂಡು ಎಲ್ಲ ವರ್ಗದವರಿಗೂ ಸಲ್ಲುವಂತೆ ನಿರ್ಮಾಣಗೊಂಡ ಚಿತ್ರಗಳ ಪಾಲಿಗೆ ಗೆಲುವೆಂಬುದು ಸಲೀಸಾಗುತ್ತದೆ. ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವೂ ಸಹ ಅಂಥಾದ್ದೇ ಬಗೆಯಲ್ಲಿ ರೂಪುಗೊಂಡಿದೆ.

    ಪ್ರತೀ ಪ್ರೇಕ್ಷಕರ ಅಭಿರುಚಿಗಳು ಏನೇ ಇದ್ದರೂ ಅವರೆಲ್ಲರ ಪ್ರಧಾನ ಆಸಕ್ತಿ ಮನೋರಂಜನೆಯೇ ಆಗಿರುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಚಿತ್ರದಲ್ಲಿ ಭರಪೂರವಾದ ಮನೋರಂಜನಾತ್ಮಕ ಅಂಶಗಳಿವೆ. ಇಲ್ಲಿ ಬಹುತೇಕ ಭಾಗವನ್ನು ಕಾಮಿಡಿ ಕಚಗುಳಿ ಇಡುವಂತೆ ರೂಪಿಸಲಾಗಿದೆಯಂತೆ. ಯಾವುದೇ ಪಾತ್ರಗಳಿಗಾದರೂ ಒಗ್ಗಿಕೊಳ್ಳುವ ಛಾತಿಯ ರಿಷಿ ಇಲ್ಲಿ ನಾನಾ ಶೇಡುಗಳ ಪಾತ್ರದ ಮೂಲಕ ಪ್ರೇಕ್ಷಕರನ್ನು ಮೋಡಿಗೀಡು ಮಾಡಲಿದ್ದಾರೆ. ಧನ್ಯಾ ಬಾಲಕೃಷ್ಣ ಕೂಡಾ ನಾಯಕಿಯಾಗಿ ಅಂಥಾದ್ದೇ ವಿಶೇಷತೆ ಹೊಂದಿರುವ ಪಾತ್ರದಲ್ಲಿ ನಟಿಸಿದ್ದಾರಂತೆ. ದತ್ತಣ್ಣ, ರಂಗಾಯಣ ರಘು, ಮಿತ್ರಾ ಮುಂತಾದವರು ಇಷ್ಟೇ ವಿಶೇಷವಾದ ಪಾತ್ರಗಳಲ್ಲಿ ನೋಡುಗರನ್ನು ತಾಕಲು ತಯಾರಾಗಿದ್ದಾರೆ.

  • ಈ ವಾರ ವಿಶಿಷ್ಟ ಪಾತ್ರಗಳನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ!

    ಈ ವಾರ ವಿಶಿಷ್ಟ ಪಾತ್ರಗಳನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ!

    ನ್ನಡ ಚಿತ್ರರಣಂಗದಲ್ಲೀಗ ಯಾವ ಸಿನಿಮಾ ರೂಪುಗೊಂಡರೂ ಅದರ ಮೂಲ ಮಂತ್ರ ಹೊಸತನವೇ ಆಗಿರುತ್ತದೆಯೆಂಬಂಥಾ ವಾತಾವರಣವಿದೆ. ಶೀರ್ಷಿಕೆಯಲ್ಲಿಯೇ ಆರಂಭಿಕವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡುವಂಥಾ ಪೈಪೋಟಿಯೂ ಚಾಲ್ತಿಯಲ್ಲಿದೆ. ಇದೇ ಹಾದಿಯಲ್ಲಿ ಹೊಸ ಬಗೆಯ ನಿರೂಪಣೆ, ತೀರಾ ಹೊಸತಾದ ಕಥೆಯೊಂದಿಗೆ ಈ ವಾರ ತೆರೆಗಾಣಲು ರೆಡಿಯಾಗಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಅನೂಪ್ ರಾಮಸ್ವಾಮಿ ನಿರ್ದೇಶನದ ಈ ಸಿನಿಮಾ ಅದೆಷ್ಟು ಸೊಗಸಾಗಿ ಮೂಡಿ ಬಂದಿದೆಯೆಂಬ ವಿಚಾರ ಈಗಾಗಲೇ ಟ್ರೇಲರ್‌ನೊಂದಿಗೆ ಅನಾವರಣವಾಗಿದೆ. ಅದರಲ್ಲಿ ಈ ಸಿನಿಮಾದಲ್ಲಿರೋ ಪಾತ್ರಗಳ ಪರಿಚಯವಾಗಿದ್ದರಿಂದಲೇ ಪ್ರೇಕ್ಷಕರು ಮತ್ತಷ್ಟು ತೀವ್ರವಾದ ಕುತೂಹಲದೊಂದಿಗೆ ಈ ಚಿತ್ರ ತೆರೆಗಾಣೋದನ್ನು ಎದುರು ನೋಡುವಂತಾಗಿದೆ.

    ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಬಲು ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ನಿರ್ದೇಶಕ ಅನೂಪ್ ರಾಮಸ್ವಾಮಿ ಇಲ್ಲಿ ಪ್ರತಿಯೊಂದು ಪಾತ್ರಗಳನ್ನೂ ಕೂಡಾ ಪ್ರೇಕ್ಷಕರು ಸಿನಿಮಾ ಮಂದಿರಗಳಿದ ಹೊರ ಬಂದಾದ ಮೇಲು ಮನಸಲ್ಲೇ ಕೂತು ಕಾಡುವಂತೆ ರೂಪಿಸಿದ್ದಾರಂತೆ. ನಾಯಕ ರಿಷಿಯಂತೂ ಈವರೆಗಿನ ಎಲ್ಲ ಪಾತ್ರಗಳಿಗಿಂತಲೂ ಬೇರೆಯದ್ದೇ ಸ್ವರೂಪದ ಪಾತ್ರದ ಮೂಲಕ ಪ್ರೇಕ್ಷಕರನ್ನು ತಲುಪಿಕೊಳ್ಳಲಿದ್ದಾರೆ. ನಾಯಕಿ ಧನ್ಯಾ ಪಾತ್ರವೂ ಅದೇ ಹಾದಿಯಲ್ಲಿದೆ. ಇತರೆ ಪಾತ್ರಗಳೂ ಕೂಡಾ ಅಂಥಾದ್ದೇ ಗುಣ ಲಕ್ಷಣಗಳನ್ನು ಹೊಂದಿವೆಯಂತೆ.

    ಈ ಚಿತ್ರದಲ್ಲಿ ರಿಷಿ ಮತ್ತು ಧನ್ಯಾ ಬಾಲಕೃಷ್ಣಗೆ ಹಿರಿಯ ನಟ ದತ್ತಣ್ಣ, ರಂಗಾಯಣ ರಘು ಮತ್ತು ಮಿತ್ರಾ ಮುಖ್ಯವಾದ ಪಾತ್ರಗಳ ಮೂಲಕ ಸಾಥ್ ನೀಡಿದ್ದಾರೆ. ಅವರ ಪಾತ್ರಗಳ ಸ್ಪಷ್ಟ ಚಹರೆಗಳನ್ನು ಟ್ರೇಲರ್‍ನಲ್ಲಿ ಕಾಣಿಸಿರುವ ಚಿತ್ರತಂಡ ಅವುಗಳ ಮೂಲಕವೇ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಮೂಡಿಕೊಳ್ಳುವಂತೆ ಮಾಡಿದ್ದಾರೆ. ಈ ಮೂವರೂ ನಟರನ್ನು ಪ್ರೇಕ್ಷಕರು ಇದುವರೆಗೂ ಹತ್ತಾರು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈ ಹಿಂದೆ ಎಲ್ಲಿಯೂ ನಿರ್ವಹಿಸದಂಥಾ ಪಾತ್ರಗಳು ಅವರಿಗಾಗಿ ಸೃಷ್ಟಿಯಾಗಿವೆಯಂತೆ. ದತ್ತಣ್ಣನ ಪಾತ್ರವಂತೂ ನಗಿಸುತ್ತಲೇ ಪ್ರೇಕ್ಷಕರ ಕಣ್ಣಾಲಿಗಳು ತುಂಬಿ ಬರುವಂತೆಯೂ ಮಾಡಲಿವೆಯಂತೆ. ಇದೆಲ್ಲದರ ಅಸಲಿ ಮೋದ ಈ ವಾರವೇ ನಿಮ್ಮೆದುರು ಅನಾವರಣಗೊಳ್ಳಲಿದೆ.

  • ಸಾರ್ವಜನಿಕರಿಗೆ ಮಜವಾದ ಟ್ರೇಲರ್ ನೋಡೋ ಸುವರ್ಣಾವಕಾಶ!

    ಸಾರ್ವಜನಿಕರಿಗೆ ಮಜವಾದ ಟ್ರೇಲರ್ ನೋಡೋ ಸುವರ್ಣಾವಕಾಶ!

    ಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಿನ್ನಾತಿ ಭಿನ್ನ ಶೀರ್ಷಿಕೆಗಳ ಜಮಾನವೊಂದು ಶುರುವಾಗಿದೆಯಲ್ಲಾ? ಅದನ್ನು ಮತ್ತಷ್ಟು ಮಿರುಗಿಸುವಂಥಾ ಗುಣ ಲಕ್ಷಣಗಳನ್ನು ಈ ಚಿತ್ರ ದಟ್ಟವಾಗಿಯೇ ಹೊಮ್ಮಿಸುತ್ತಿದೆ. ಈಗಾಗಲೇ ಎಲ್ಲಾ ರೀತಿಯಿಂದಲೂ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ತಂಡ ಇದೀಗ ಟ್ರೇಲರ್ ಲಾಂಚ್ ಮಾಡಿದೆ. ಈ ಮೂಲಕ ಮಜವಾದ ಟ್ರೇಲರ್ ಒಂದನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಸಾರ್ವಜನಿಕರಿಗೆ ಸಿಕ್ಕಂತಾಗಿದೆ.

    ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿರೋ ಈ ಸಿನಿಮಾದ ಟ್ರೇಲರ್ ನಿಜಕ್ಕೂ ಮಜವಾಗಿದೆ. ಅದಕ್ಕೆ ತಕ್ಕುದಾದ ಕಥಾ ಹಂದರದ ಸುಳಿವಿನೊಂದಿಗೆ ಪ್ರೇಕ್ಷಕರನ್ನೆಲ್ಲ ಖುಷಿಗೊಳಿಸಿದೆ. ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಮತ್ತು ಖದರ್ ಹೊಂದಿರುವಂಥಾ ಮಾಸ್ ಸನ್ನಿವೇಶ. ಇಷ್ಟಿದ್ದು ಬಿಟ್ಟರೆ ಯಾವುದೇ ಸಿನಿಮಾವಾದರೂ ಪ್ರೇಕ್ಷಕರಿಗೆ ಇಷ್ಟವಾಗಲು ಮತ್ತೇನು ಬೇಕಿದ್ದೀತು? ಈಗ ಹೊರ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಟ್ರೇಲರಿನಲ್ಲಿ ಅಷ್ಟೆಲ್ಲ ಅಂಶಗಳಿವೆ. ಈ ಕಾರಣದಿಂದಲೇ ಅದು ಪ್ರೇಕ್ಷಕರಿಗೆಲ್ಲ ಇಷ್ಟವಾಗಿದೆ.

    ಈ ಚಿತ್ರವನ್ನು ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿದ್ದಾರೆ. ಇದನ್ನು ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಇದು ಹೊಸ ಅಲೆಯ ಚಿತ್ರಗಳ ಸಾಲಿನಲ್ಲಿಯೇ ಹೊಸಾ ಛಾಪು ಮೂಡಿಸುವಂಥಾ ಗುಣಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ಆರಂಭದಿಂದಲೇ ಸುದ್ದಿ ಮಾಡುತ್ತಾ ಬಂದಿದ್ದ ಈ ಸಿನಿಮಾದತ್ತ ಈಗಂತೂ ಎಲ್ಲರೂ ಆಕರ್ಷಿತರಾಗಿದ್ದಾರೆ. ಈ ಟ್ರೇಲರ್ ನೋಡಿದ ಮೇಲಂತೂ ಯಾರಿಗೇ ಆದರೂ ಆದಷ್ಟು ಬೇಗನೆ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕಾತರ ಮೂಡಿಕೊಳ್ಳದಿರುವುದಿಲ್ಲ. ಪ್ರೇಕ್ಷಕರಲ್ಲಿಯೂ ಕೂಡಾ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ. ದತ್ತಣ್ಣ, ರಿಷಿ, ರಂಗಾಯಣ ರಘು, ಮಿತ್ರಾ ಸೇರಿದಂತೆ ಹಲವರ ಪಾತ್ರ ಪರಿಚಯ ಮಾಡಿಸುತ್ತಲೇ ಈ ಟ್ರೇಲರ್ ಸಖತ್ ಕ್ರೇಜ್ ಹುಟ್ಟುಹಾಕಿದೆ.

  • ಸಾರ್ವಜನಿಕರಿಗೆ ಅಪ್ಪು ಹಾಡಿದ ಉಪ್ಪಿನ ಸಾಂಗು ಕೇಳೋ ಸುವರ್ಣಾವಕಾಶ!

    ಸಾರ್ವಜನಿಕರಿಗೆ ಅಪ್ಪು ಹಾಡಿದ ಉಪ್ಪಿನ ಸಾಂಗು ಕೇಳೋ ಸುವರ್ಣಾವಕಾಶ!

    ಬೆಂಗಳೂರು: ಕನ್ನಡ ಚಿತ್ರರಂಗದ ಪಾಲಿಗೆ ಹೊಸ ಅಲೆಯ ಚಿತ್ರಗಳ ಹಬ್ಬದಂಥಾ ಕಾಲ. ಈ ಸಾಲಿನಲ್ಲಿಯೇ ಮೂಡಿ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವೀಗ ನಾನಾ ಥರದಲ್ಲಿ ಸುದ್ದಿ ಕೇಂದ್ರದಲ್ಲಿದೆ. ಇದೀಗ ಚಿತ್ರತಂಡ ಸಾರ್ವಜನಿಕರಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಡಿರುವ ಮಜವಾದ ಹಾಡೊಂದನ್ನು ಕೇಳೋ ಸುವರ್ಣಾವಕಾಶ ಕಲ್ಪಿಸಿದೆ. ಪ್ರೀತಿಯಲ್ಲಿ ಏಟು ತಿಂದ ಪಡ್ಡೆಗಳ ತಲೆಯಲ್ಲಿ ವಾಸ್ತವದ ವೇದಾಂತ ಗಿರಕಿ ಹೊಡೆಯುತ್ತದಲ್ಲಾ? ಅಂಥಾ ಭಾವಗಳನ್ನೇ ಬಸಿದುಕೊಂಡಂತಿರೋ ಸಾಹಿತ್ಯವಿರುವ ಈ ಹಾಡು ಇದೀಗ ಬಿಡುಗಡೆಯಾಗಿದೆ. ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಾ ಮುಂದುವರೆಯುತ್ತಿರೋ ಈ ಹಾಡು ಇಷ್ಟರಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಲಕ್ಷಣಗಳೂ ದಟ್ಟವಾಗಿವೆ.

    ಏನು ಸ್ವಾಮಿ ಮಾಡೋಣ ಆಗಿಹೋಯ್ತು ಅದ್ವಾನ ಹಾಕಿ ಬಿಟ್ಲು ಕಿಟಕಿ ಬಾಗ್ಲನ್ನ ಅಂತ ಶುರುವಾಗೋ ಮಜವಾದ ಈ ಹಾಡು ಆ ನಂತರದಲ್ಲಿ ಬದುಕಿನ ವಾಸ್ತವವನ್ನು ಕೂಡಾ ಅಷ್ಟೇ ಮಜವಾಗಿ ತೆರೆದಿಡುತ್ತದೆ. ಮಿದುನ್ ಮುಕುಂದನ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಮೆಲೋಡಿ ಹಾಡುಗಳ ಮೂಲಕವೇ ಮನಗೆದ್ದಿರೋ ನಾಗೇಂದ್ರ ಪ್ರಸಾದರ ಪಾಂಡಿತ್ಯದ ಮತ್ತೊಂದು ಮಜಲು ಈ ಹಾಡಿನ ಮೂಲಕ ಅನಾವರಣಗೊಂಡಿದೆ. ಈ ಹಾಡು ಪನೀತ್ ರಾಜ್‍ಕುಮಾರ್ ಕಂಠಸಿರಿಯಲ್ಲಿ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆ.

    ಈ ಹಾಡಿನಲ್ಲಿ ನಾಯಕ ರಿಷಿಯಂತೂ ಪಡ್ಡೆ ಹುಡುಗರ ಭಾವಾವೇಷವನ್ನು ಆವಾಹಿಸಿಕೊಂಡವರಂತೆ ಹೆಜ್ಜೆ ಹಾಕಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ಸಿದ್ದು ಮೂಲಿಮನಿ, ರಂಗಾಯಣ ರಘು, ದತ್ತಣ್ಣ ಪ್ರಧಾನ ಪಾತ್ರಗಳನ್ನು ನಿರ್ವಹಿಸಿರೋ ಈ ಸಿನಿಮಾದಲ್ಲಿ ಧನ್ಯಾ ರಿಷಿಗೆ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆ ಕವಲು ದಾರಿ ಎಂಬ ಸಿನಿಮಾದಲ್ಲಿಯೂ ರಿಷಿಗೆ ಸಾಥ್ ಕೊಟ್ಟಿದ್ದ ಪುನೀತ್ ರಾಜ್ ಕುಮಾರ್ ಈ ಸಿನಿಮಾಗೆ ಹಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಸಂಪೂರ್ಣವಾಗಿ ಭಿನ್ನ ಕಥಾನಕ ಹೊಂದಿರೋ ಈ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ.