Tag: ಸಾರ್ವಜನಿಕ

  • ಸಾರ್ವಜನಿಕವಾಗಿ ಮೂತ್ರವಿರ್ಸನೆ- ಆಕ್ಷೇಪಿಸಿದ ವ್ಯಕ್ತಿಯನ್ನು ಕೊಂದ ನಾಲ್ವರು

    ಸಾರ್ವಜನಿಕವಾಗಿ ಮೂತ್ರವಿರ್ಸನೆ- ಆಕ್ಷೇಪಿಸಿದ ವ್ಯಕ್ತಿಯನ್ನು ಕೊಂದ ನಾಲ್ವರು

    ಮುಂಬೈ: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಆಕ್ಷೇಪಿಸಿದ ವ್ಯಕ್ತಿಯನ್ನು ನಾಲ್ವರು ಸೇರಿ ಹೊಡೆದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಹಲ್ಲೆಗೊಳಗಾದ ವ್ಯಕ್ತಿಯನ್ನು ಸಚಿನ್ ಪಾಟೀಲ್(35) ಎಂದು ಗುರುತಿಸಲಾಗಿದೆ. ಈತ ಸಾರ್ವಜನಿಕವಾಗಿ ಮೂತ್ರ ಮಾಡುತ್ತಿದ್ದವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಆಗ ಕೋಪಗೊಂಡ ಯುವಕರು ಹಲ್ಲೆ ಮಾಡಿದ್ದಾರೆ.

    ನಾಲ್ವರು ಸಾರ್ವಜನಿಕರಿದ್ದಂತೆ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ಪಾಟೀಲ್ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಬಾರದು ಎಂದು ಹೇಳಿದ್ದಾರೆ. ಆಗ ಆಕಾಶ್ ಗಾಯಕ್‍ವಾಡ್ ಮತ್ತು ಸ್ನೇಹಿತರು ಈತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಸಾಥೆ ನಗರದಲ್ಲಿ ನಡೆದಿದೆ. ಗಾಯಕ್‍ವಾಡ್ ಮತ್ತು ಅವರ ಮೂವರು ಸ್ನೇಹಿತರು ನಂತರ ಪಾಟೀಲ್ ಮೇಲೆ ಹಲ್ಲೆ ನಡೆಸಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದು, ಪಾಟೀಲ್‍ನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ರಬಲೆ ಎಂಐಡಿಸಿ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.

    ಹಲ್ಲೆ ಮಾಡಿದ ಗಯಾಕ್‍ವಾಡ್ ಮತ್ತು ಗ್ಯಾಂಗ್‍ನವರು ಸಾಥೆ ನಗರದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ನಾಲ್ವರನ್ನು ಬಂಧಿಸಲಾಗಿದೆ. ಈ ನಾಲ್ವರ ಮೇಲೆ ಕೊಲೆ ಆರೋಪ ಪ್ರಕರಣ ದಾಖಲಿಸಲಾಗಿದೆ. ಜನವರಿ 5 ರವರೆಗೆ ನಾವು ಕಸ್ಟಡಿಗೆ ಪಡೆದುಕೊಂಡಿದ್ದೇವೆ. ತನಿಖೆಯನ್ನು ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಮಕ್ಕಳ ಕಳ್ಳ ಎಂದು ಭಾವಿಸಿ ಥಳಿತ- ನಡು ರಸ್ತೆಯಲ್ಲೇ ಯುವಕ ದುರ್ಮರಣ!

    ಬೆಂಗಳೂರು: ಮಕ್ಕಳ ಕಳ್ಳ ಅಂತ ಭಾವಿಸಿ ವ್ಯಕ್ತಿಯೋರ್ವನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ, ದೊಣ್ಣೆಯಿಂದ ಹೊಡೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಗಂಭೀರವಾಗಿ ಗಾಯಗೊಂಡ ವ್ಯಕ್ತಿ ನಡುರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಮೃತ ಕಾಲುರಾಮ್ ಅಲಿಯಾಸ್ ಬಚ್ಚನ್‍ರಾಮ್ ರಾಜಸ್ಥಾನ ಮೂಲದವನು ಅಂತ ತಿಳಿದುಬಂದಿದೆ.

    ಕಾಟನ್ ಪೇಟೆ ಬಳಿಯ ಬಕ್ಷಿಗಾರ್ಡನ್‍ಗೆ ಈತ ಹೋಗಿದ್ದಾನೆ. ಈ ವೇಳೆ ಮಕ್ಕಳ ಕಳ್ಳ ಎಂದು ಶಂಕಿಸಿ ಈತನನ್ನು ಹಿಡಿದ ಸಾರ್ವಜನಿಕರು ಹೊಡೆದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪೆಟ್ಟು ತಿಂದ ಕಾಲುರಾಮ್‍ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ರು. ಆದ್ರೆ ಅದಾಗಲೇ ಆತ ಮೃತಪಟ್ಟಿದ್ದಾನೆ.

    ಇದಕ್ಕೆಲ್ಲಾ ಕಾರಣ ವಾಟ್ಸಾಪ್‍ಗಳಲ್ಲಿ ಹರಿದಾಡ್ತಿರುವ ಒಂದು ಆಡಿಯೋ ಕ್ಲಿಪ್ ಎನ್ನಲಾಗಿದೆ. ಮಕ್ಕಳ ಕಳ್ಳರ ಬಗ್ಗೆ ಎಚ್ಚರಿಕೆ ನೀಡುವ ಈ ಆಡಿಯೋ ಕ್ಲಿಪ್ ಸುಳ್ಳು ವದಂತಿಯಷ್ಟೇ ಅಂತ ಚಿಕ್ಕಬಳ್ಳಬಳ್ಳಾಪುರ ಎಸ್‍ಪಿ ಸ್ಪಷ್ಟನೆ ಕೂಡಾ ಕೊಟ್ಟಿದ್ರು.

  • ಸ್ಪೋರ್ಟ್ಸ್ ಸೈಕಲ್ ಕಳ್ಳನಿಗೆ ಗೂಸಾ- ಮುಖ ಮೂತಿ ನೋಡದೆ ಧರ್ಮದೇಟು ಕೊಟ್ರು ಜನ

    ಸ್ಪೋರ್ಟ್ಸ್ ಸೈಕಲ್ ಕಳ್ಳನಿಗೆ ಗೂಸಾ- ಮುಖ ಮೂತಿ ನೋಡದೆ ಧರ್ಮದೇಟು ಕೊಟ್ರು ಜನ

    ಬೆಂಗಳೂರು: ನಗರದಲ್ಲಿ ಸೈಕಲ್ ಕದಿಯಲು ಬಂದ ಕಳ್ಳನಿಗೆ ಸಾರ್ವಜನಿಕರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.

    ಇವತ್ತಿನ ರೇಟ್ ನಲ್ಲಿ ಇಂತಹ ಒಂದ್ ಸೈಕಲ್ ಬೆಲೆ ಏನಿಲ್ಲವೆಂದರು ಹದಿನೈದರಿಂದ ಇಪ್ಪತ್ತು ಸಾವಿರ ರೂ. ಇರುತ್ತದೆ. ತಿಂಗಳಿಗೆ ಮೂರು ಸೈಕಲ್ ಕದ್ದರೆ ಜೀವನ ನಡೆದೋಗುತ್ತೆ ಎನ್ನುವ ಕಳ್ಳರಿದ್ದಾರೆ. ಹೀಗೆ ಸೈಕಲ್ ಕದ್ದು ಹೊಟ್ಟೆ ಹೊರೀತಿದ್ದ ಕಳ್ಳನಿಗೆ ಸಖತ್ ಗೂಸಾ ಬಿದ್ದಿವೆ.

    ಕಳೆದ ಭಾನುವಾರ ಬಾಡೂಟ ತಿಂದು ಮನೆ ಮಂದಿಯೆಲ್ಲ ಟಿವಿ ನೋಡ್ಕೊಂಡು ಕೂತಿದ್ದರು. ಸಂಜೆ 6 ಗಂಟೆ ವೇಳೆಗೆ ಬೆಂಗಳೂರಿನ ಸುಬ್ರಮಣ್ಯನಗರಕ್ಕೆ ಎಂಟ್ರಿ ಕೊಟ್ಟ ಕಳ್ಳ ಯಾರ್ಯಾರ ಕಾಂಪೌಂಡ್‍ನಲ್ಲಿ ಸೈಕಲ್‍ಗಳಿವೆ ಎಂದು ಕಣ್ಣಾಡಿಸಿದ್ದ. ಆ ಕಡೆ ಈ ಕಡೆ ಓಡಾಡಿದವನೇ ವೆಂಕಟೇಶ್ ಎನ್ನುವರ ಮನೆಯ ಕಾಂಪೌಡ್ ಒಳಗೆ ನುಗ್ಗಿ ಡೊಡ್ಡ ಕಟರ್ ನಿಂದ ಲಾಕ್ ಮುರಿದು ಸೈಕಲ್ ಕದಿಯೋಕೆ ಪ್ರಯತ್ನಿಸಿದ್ದಾನೆ.

    ಇವನ ಕೃತ್ಯ ಗಮನಿಸಿದ ಮಾಲೀಕರು ಕೆಳಗೆ ಓಡಿ ಬಂದಿದ್ದಾರೆ. ಆಗ ಕಳ್ಳ ಅಯ್ಯೋ ಕೆಟ್ನಲ್ಲಾ ಎಂದು ಓಡೋಕೆ ಶುರು ಮಾಡಿದ್ದಾನೆ. ಯಾವಾಗ ಕಳ್ಳ ಕಳ್ಳ ಹಿಡಿಯಿರಿ ಹಿಡಿಯಿರಿ ಎಂದು ಕೂಗಿಕೊಂಡರೋ ಕಾರ್‍ವೊಂದರ ಕೆಳಗೆ ಅವಿತು ಕುಳಿತುಕೊಂಡಿದ್ದಾನೆ. ಏರಿಯಾ ಜನರೆಲ್ಲಾ ಹುಡುಕಾಡುತ್ತಿದ್ದಾಗ ಕಾರ್ ಕೆಳಗೆ ಬಚ್ಚಿಟ್ಟುಕೊಂಡಿರೋದನ್ನ ಗಮನಿಸಿ ಹೊರಗೆ ಎಳೆದು ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ಏನು ನಿನ್ನ ಹೆಸರು ಎಂದರೆ ಮಲ್ಲೇಶ, ಕಲ್ಲೇಶ ಎಂದು ಎರಡು ಮೂರು ಹೆಸರು ಹೇಳಿದ್ದಾನೆ. ಕೊನೆಗೆ ಪೊಲೀಸರನ್ನು ಕರೆಸಿ ಕಳ್ಳನನ್ನ ಅವರ ಸುಪರ್ದಿಗೆ ಒಪ್ಪಿಸಿದ್ದಾರೆ.