Tag: ಸಾಯಿ ಬಾಬಾ

  • ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ವೈಭವದ ಗುರುಪೂರ್ಣಿಮೆ ಆಚರಣೆ – ಹೂವು, ಹಣ್ಣುಗಳಿಂದ ಅದ್ಧೂರಿ ಅಲಂಕಾರ!

    ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ವೈಭವದ ಗುರುಪೂರ್ಣಿಮೆ ಆಚರಣೆ – ಹೂವು, ಹಣ್ಣುಗಳಿಂದ ಅದ್ಧೂರಿ ಅಲಂಕಾರ!

    ಬೆಂಗಳೂರು: ವಿಶೇಷ ಅಲಂಕಾರಕ್ಕೆ ಹಾಗೂ ಪೂಜೆಗೆ ಪ್ರಸಿದ್ಧಿಯಾಗಿರುವ ಬೆಂಗಳೂರು ಜೆ.ಪಿ ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ (Satya Ganapathi Shiradi Sai Trust) ವಿಶೇಷವಾಗಿ ಗುರುಪೂರ್ಣಿಮೆ ಆಚರಿಸಲಾಯಿತು.

    ಸಾಯಿ ಬಾಬಾರ (Sai Baba) ಮೂರ್ತಿಯನ್ನು ಹೂವು ಹಾಗೂ ಹಣ್ಣಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಜೊತೆಗೆ ಬೆಳಿಗ್ಗೆ 7 ಗಂಟೆಯಿಂದ ವಿಶೇಷ ಪೂಜೆ ಮತ್ತು ಹೋಮಗಳನ್ನು ನಡೆಸಲಾಯಿತು. ಇದನ್ನೂಓದಿ: ಜೀವನದ ರಿಯಲ್ ಹೀರೋಯಿನ್ ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾದ ‘ಕಾಟೇರ’ ಡೈರೆಕ್ಟರ್

    ಪ್ರತಿವರ್ಷದಂತೆ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸಲಾಯಿತು, ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾಬಾರ ʻಸಬ್ ಕಾ ಮಾಲೀಕ್ ಏಕ್ ಹೇʼ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಹಣ್ಣುಗಳು, ವಿಶೇಷ ಹೂವುಗಳಿಂದ ದೇವಸ್ಥಾನವನ್ನು ಆಲಂಕರಿಸಲಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

    ಅಭಿಷೇಕ, ಅಲಂಕಾರ, ಸಾಯಿ ಮಂತ್ರ ಹೋಮ, ಸುದರ್ಶನ ಹೋಮ, ದತ್ತಾತ್ರೇಯ ಹೋಮ ಸೇರಿದಂತೆ ಇನ್ನಿತರ ಪೂಜೆಗಳನ್ನು ಆಯೋಜಿಸಲಾಗಿತ್ತು, ಸಾವಿರಾರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಇದನ್ನೂಓದಿ: ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು

    ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ಕಳೆದ ವರ್ಷವೂ ಶಿರಡಿ ಬಾಬಾರಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ಗುರುಪೂರ್ಣಿಮೆ ಆಚರಿಸಲಾಗಿತ್ತು. 20 ಸಾವಿರ ತೆಂಗಿನಕಾಯಿ, 2,500 ಪರಂಗಿ, ಹಲಸಿನ ಹಣ್ಣು, 5 ಸಾವಿರ ಬೆಲ್ಲ, 25 ಸಾವಿರಕ್ಕೂ ಹೆಚ್ಚು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳ ಮೂಲಕ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೇ ಕಳೆದ ವರ್ಷ ಗಣೇಶ ಚುತುರ್ಥಿಯಲ್ಲಿ ನೋಟುಗಳ ಮೂಲಕ ದೇವಸ್ಥಾನ ಅಲಂಕರಿಸಿ ಗಮನ ಸೆಳೆದಿತ್ತು. ಇದನ್ನೂಓದಿ: ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 2 ಅಡಿಯಷ್ಟೇ ಬಾಕಿ

  • ಜೆಪಿ ನಗರದಲ್ಲಿ ಸಾಯಿ ಟ್ರಸ್ಟ್‌ನಿಂದ ಗುರುಪೂರ್ಣಿಮೆ – 20 ಸಾವಿರ ತೆಂಗಿನಕಾಯಿಯಿಂದ ವಿಶೇಷ ಅಲಂಕಾರ

    ಜೆಪಿ ನಗರದಲ್ಲಿ ಸಾಯಿ ಟ್ರಸ್ಟ್‌ನಿಂದ ಗುರುಪೂರ್ಣಿಮೆ – 20 ಸಾವಿರ ತೆಂಗಿನಕಾಯಿಯಿಂದ ವಿಶೇಷ ಅಲಂಕಾರ

    ಬೆಂಗಳೂರು: ಜೆಪಿ ನಗರದ ಶ್ರೀ ಸತ್ಯಗಣಪತಿ (Satya Ganapathi Temple) ಶಿರಡಿ ಸಾಯಿ ಟ್ರಸ್ಟ್ ನಿಂದ ವಿಶೇಷವಾಗಿ ಗುರುಪೂರ್ಣಿಮೆ (Guru Purnima) ಆಚರಿಸಲಾಗಿದ್ದು, ಶಿರಡಿ ಸಾಯಿ ಬಾಬಾರಿಗೆ ವಿಶೇಷ ಅಲಂಕಾರ, ವೈಭವದ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿತ್ತು.

    ‍ಶಿರಡಿ ಬಾಬಾರನ್ನು 20 ಸಾವಿರ ತೆಂಗಿನಕಾಯಿ, 2,500 ಪರಂಗಿ, ಹಲಸಿನ ಹಣ್ಣು, 5 ಸಾವಿರ ಬೆಲ್ಲ, 25 ಸಾವಿರಕ್ಕೂ ಹೆಚ್ಚು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳ ಮೂಲಕ ವಿಶೇಷ ಅಲಂಕಾರ ಮಾಡಲಾಗಿದ್ದು, ಗುರುಪೂರ್ಣಿಗೆ ಬಾಬಾ ಹಿಂದೆಂದಿಗಿಂತಲೂ ಈ ಬಾರಿ ವಿಶೇಷವಾಗಿ ಕಂಗೊಳಿಸುತ್ತಿದ್ದಾರೆ. ಕೆಂದು ಬಣ್ಣದ ಎಳನೀರಿನಿಂದಲೂ ವಿಶೇಷ ಅಲಂಕಾರ ಮಾಡಲಾಗಿದೆ ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್‌ ರಾಜ್‌ ತಿಳಿಸಿದ್ದಾರೆ.

    ಸಾಯಿ ಬಾಬಾ (Sai Baba) ಅವರಿಗೆ ಅಲಂಕಾರ ಮಾಡಿದ ಎಲ್ಲಾ ವಸ್ತುಗಳನ್ನು ಮರಳಿ ಭಕ್ತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಹಣ್ಣಾದ ಪರಂಗಿ, ಹಲಸು ಮತ್ತಿತರ ಆಹಾರ ವಸ್ತುಗಳನ್ನು ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಸಮರ್ಪಿಸಲಾಗುತ್ತಿದೆ. ಕಳೆದ ವರ್ಷ ಕ್ರೀಡಾ ಪರಿಕರಗಳಿಂದ ಬಾಬಾ ಅವರನ್ನು ಸಿಂಗರಿಸಲಾಗಿತ್ತು. ನಂತರ 500 ಶಾಲೆಗಳಿಗೆ ಈ ವಸ್ತುಗಳನ್ನು ವಿತರಣೆ ಮಾಡಲಾಗಿತ್ತು ಎಂದು ರಾಮಮೋಹನ್‌ ರಾಜ್‌ ತಿಳಿಸಿದರು. ಇದನ್ನೂ ಓದಿ: ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ಳು – ಪತ್ನಿ ಸೇರಿ ಐವರು ಅರೆಸ್ಟ್

    ಗುರು ಪೂರ್ಣಿಮೆ ಅಂಗವಾಗಿ ಗುರು ಶಿರಡಿ ಬಾಬಾರಿಗೆ ಅಭಿಷೇಕ, ಹೋಮ, ಪ್ರಸಾದ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ ಒಳಗೊಂಡಂತೆ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.

     

    ಪ್ರತಿವರ್ಷ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸುತ್ತಿದ್ದು, ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾಬಾರ ‘’ಸಬ್ ಕಾ ಮಾಲೀಕ್ ಏಕ್ ಹೇ’’ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಯಿ ಬಾಬಾ ಭಕ್ತೆಯಾದ ರಷ್ಯಾ ಮಹಿಳೆ- ಪಂಥದ ಮುಖ್ಯಸ್ಥೆ ನೀಡಿದ ಉಪವಾಸದ ಸವಾಲು ಪೂರೈಸಲು ಹೋಗಿ ಸಾವು

    ಸಾಯಿ ಬಾಬಾ ಭಕ್ತೆಯಾದ ರಷ್ಯಾ ಮಹಿಳೆ- ಪಂಥದ ಮುಖ್ಯಸ್ಥೆ ನೀಡಿದ ಉಪವಾಸದ ಸವಾಲು ಪೂರೈಸಲು ಹೋಗಿ ಸಾವು

    ಮಾಸ್ಕೋ: ಸಾಯಿ ಬಾಬಾ ಪಂಥದ ಭಕ್ತೆಯಾಗಿದ್ದ ರಷ್ಯಾ ಮಹಿಳೆಯೊಬ್ಬರು ಉಪವಾಸದ ಸವಾಲು ಪೂರೈಸಲು ಹೋಗಿ ಸಾವನ್ನಪ್ಪಿದ್ದಾರೆ.

    ಒಳಾಂಗಣ ವಿನ್ಯಾಸಕಿ ಎಲೆನಾ ಸ್ಮೊರೊಡಿನೋವಾ(35) ತನ್ನ ಪತಿಯೊಂದಿಗೆ ವಿಚ್ಛೇದನವಾದ ಬಳಿಕ ಸಾಯಿ ಬಾಬಾ ಭಕ್ತೆಯಾಗಿದ್ದರು. ದಕ್ಷಿಣ ಕೇಂದ್ರ ರಷ್ಯಾದ ನೋವೋಸಿಬಿಸ್ರ್ಕ್ ನಗರದಲ್ಲಿ 2 ವರ್ಷಗಳ ಹಿಂದೆ ಎಲೆನಾ ಸಾಯಿ ಬಾಬಾ ಅನುಯಾಯಿಯಾದ ನಂತರ ಆಕೆ ನಮ್ಮೆಲ್ಲರಿಂದ ದೂರವಿದ್ದಳು ಎಂದು ಸಂಬಂಧಿಕರು ಹಾಗೂ ಸ್ನೇಹಿತರು ಹೇಳಿದ್ದಾರೆ.

    ಸೈಬೀರಿಯಾದವರಾದ ಎಲೆನಾ ತುಂಬಾ ಉತ್ಸಾಹ ಹಾಗೂ ಸಂತೋಷದಿಂದ ಇರುತ್ತಿದ್ದ ವ್ಯಕ್ತಿಯಾಗಿದ್ದರು. ಆದ್ರೆ ಪಂಥ ಸೇರಿದ ನಂತರ ಸಂಪೂರ್ಣ ಬದಲಾಗಿದ್ದರು. ಈ ಪಂಥವನ್ನ ಮಾಜಿ ಫ್ಯಾಶನ್ ಡಿಸೈನರ್ ಹಾಗೂ ಮನಶಾಸ್ತ್ರಜ್ಞೆ ಲೋಲಾ ಮುನ್ನಡೆಸುತ್ತಿದ್ದಳು. ಲೋಲಾ ತಾನು 2011 ರಲ್ಲಿ ವಿಧಿವಶರಾದ ಸತ್ಯ ಸಾಯಿ ಬಾಬಾ ಪ್ರತಿನಿಧಿ ಎಂದು ಹೇಳಿಕೊಂಡಿದ್ದಳು.

    ಲೋಲಾ ಎಲೆನಾಗೆ ದೀರ್ಘ ಉಪವಾಸ ಮಾಡುವ ಸವಾಲು ನೀಡುತ್ತಿದ್ದಳು. ಹಾಗೂ ತನ್ನ ಸ್ನೇಹಿತರ ಸಂಪರ್ಕದಿಂದ ದೂರವಿರಲು ಹೇಳುತ್ತಿದ್ದಳು ಎಂದು ಎಲೆನಾ ಸ್ನೇಹಿತರೊಬ್ಬರು ಹೇಳಿದ್ದಾರೆ.

    ಲೋಲಾ ನೀಡಿದ್ದ ಹಲವಾರು ಉಪವಾಸದ ಸವಾಲುಗಳನ್ನ ಎಲೆನಾ ಪೂರೈಸಿದ್ದರು. ಆದ್ರೆ ಕೊನೆಯ ಹಾಗೂ ಕಠಿಣ ಸವಾಲಾಗಿ ಮೂರು ವಾರಗಳ ಉಪವಾಸ ಮಾಡಲು ಹೇಳಿ ಮೊದಲೆರಡು ವಾರ ನೀರು ಕೂಡ ಸೇವಿಸದಂತೆ ಹೇಳಿದ್ದಳು. ಎಲೆನಾ ತಾನು ಈ ಸವಾಲನ್ನ ಕೈಬಿಡುತ್ತೇನೆ ಎಂದು ಲೋಲಾ ಗೆ ಹೇಳಿದ್ದರು. ಆದ್ರೆ ಅಪೌಷ್ಟಿಕತೆ ಹಾಗೂ ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಲೋಲಾ ಬೇಕೆಂತಲೇ ಎಲೆನಾಗೆ ತೊಂದರೆ ಮಾಡಲು ಹೀಗೆ ಮಾಡಿದ್ದಾಳೆ ಎಂದು ಎಲೆನಾ ಸ್ನೇಹಿತರು ಹೇಳಿದ್ದಾರೆ. ಸಂಪರ್ಕದ ಮೇಲೆ ನಿಷೇಧವಿದ್ದರೂ ಎಲೆನಾ ಬಾಯ್‍ಫ್ರೆಂಡ್ ಆಕೆಗೆ ಮೆಸೇಜ್ ಮಾಡಲು ಇಷ್ಟಪಡುತ್ತಿದ್ದ. ಇದರಿಂದ ಲೋಲಾಗೆ ಹೊಟ್ಟೆಉರಿ ಇತ್ತು ಎಂದು ಎಲೆನಾ ಸ್ನೇಹಿತರು ಅನುಮಾನಿಸಿದ್ದಾರೆ.

     

    ಎಲೆನಾ ಸಾವಿನ ನಂತರ ಲೋಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ಎದುರಿಸುವ ಸಾಧ್ಯತೆಯಿರೋದ್ರಿಂದ ಸದ್ಯ ತಲೆಮರೆಸಿಕೊಂಡಿದ್ದಾಳೆ.

  • ಬಾಬಾ ಭಕ್ತರೇ ಶಿರಡಿ ಪ್ರಸಾದ ತಿನ್ನೋ ಮುನ್ನ ಎಚ್ಚರ- ಈ ಸುದ್ದಿ ಓದಿ

    ಬಾಬಾ ಭಕ್ತರೇ ಶಿರಡಿ ಪ್ರಸಾದ ತಿನ್ನೋ ಮುನ್ನ ಎಚ್ಚರ- ಈ ಸುದ್ದಿ ಓದಿ

    ಬೆಂಗಳೂರು: ಶಿರಡಿ ಸಾಯಿಬಾಬಾನನ್ನು ನಂಬದ ಜೀವಗಳಿಲ್ಲ. ಬಾಬಾ ದರ್ಶನಕ್ಕೆ, ಅಲ್ಲಿನ ಪ್ರಸಾದ ತಿಂದರೆ ಬದುಕು ಪಾವನ ಅನ್ನೋ ನಂಬಿಕೆ ಕೋಟಿ ಭಕ್ತರದ್ದು. ಆದ್ರೇ ಈಗ ನಂಬಿಕೆಯ ಬುಡವೊಂದು ಅಲ್ಲಾಡುತ್ತಿದೆ. ಕೋಟಿ ಭಕ್ತರು ಬಾಬಾ ಪ್ರಸಾದ ಕಂಡ್ರೆ ಮಾರು ದೂರು ಓಡೋ ಪ್ರಮಾದವೊಂದು ನಡೆದು ಹೋಗಿದೆ.

    ಬಾಬಾ ಭಕ್ತರಾಗಿರುವ ಬೆಂಗಳೂರಿನ ಸದಾಶಿವನಗರದ ನಿವಾಸಿ ಪರಶುರಾಮ್ ಶಿರಡಿಗೆ ತೆರಳಿ ಅಲ್ಲಿಂದ ಮೂವತ್ತು ಪ್ಯಾಕೆಟ್ ಪ್ರಸಾದದ ಪೇಡಾವನ್ನು ಸನ್ನಿಧಿಯಿಂದ ಕಳೆದ ತಿಂಗಳು ತಂದಿದ್ದಾರೆ. ಬಾಬಾ ಪ್ರಸಾದ ತಿಂದ ತಕ್ಷಣ ಅವ್ರಿಗೆ ವಾಂತಿ, ಭೇದಿ, ಹೊಟ್ಟೆನೋವು ಶುರುವಾಗಿದೆ. ಕೂಡಲೇ ಪ್ರಸಾದವನ್ನ ಪರಿಶೀಲಿಸಿ ನೋಡಿದಾಗ ಪೇಡಾದಲ್ಲಿ ಕಪ್ಪು ಮೆಟಲ್‍ನಂತಹ ವಸ್ತು ಪತ್ತೆಯಾಗಿದೆ. ಸುಟ್ಟಾಗ ವಿಚಿತ್ರ ಪ್ಲಾಸ್ಟಿಕ್ ವಾಸನೆ ಬಂದಿದೆ. ಕೂಡಲೇ ಇದನ್ನು ರಾಮಯ್ಯ ಆಸ್ಪತ್ರೆಯ ಲ್ಯಾಬ್‍ಗೆ ತೆಗೆದುಕೊಂಡು ಹೋಗಿ ಪರೀಕ್ಷೆಗೆ ನೀಡಿದ್ದಾರೆ. ಈಗ ಲ್ಯಾಬ್‍ನಿಂದ ಊಹಿಸಲಾರದ ಬಾಬಾ ಪ್ರಸಾದದ ಅಸಲಿಯತ್ತು ಬಯಲಾಗಿದೆ.

    ಏನೇನಿದೆ ಪ್ರಸಾದದಲ್ಲಿ?: ಬಾಬಾ ಪ್ರಸಾದದಲ್ಲಿ ರಾಶಿರಾಶಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಅತ್ಯಂತ ಅಪಾಯಕಾರಿಯಾದ ಸ್ಟೆಪಿಲೋಕಾಕಯ್ ಹಾಗೂ ಸೂಡಾಮೋನಸ್ ಅನ್ನುವ ಬ್ಯಾಡ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸಾಮಾನ್ಯವಾಗಿ ಸೂಡಾಮೋನಸ್ ಗಾಯವಾಗಿರುವ, ಕೀವಾಗಿರುವ ಅಥವಾ ಹುಣ್ಣಾಗಿದ್ರೆ ಈ ಬ್ಯಾಕ್ಟೀರಿಯಾ ಇರುತ್ತೆ. ಇದು ಪ್ರಸಾದದಲ್ಲಿ ಕಂಡುಬಂದಿದೆ ಅಂದ್ರೆ ಪ್ರಸಾದ ತಯಾರಿಸುವ ವ್ಯಕ್ತಿ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ. ಅದ್ರಿಂದ ಪ್ರಸಾದವೇ ವಿಷವಾಗಿ ಮಾರ್ಪಾಡಾಗಿದೆ ಅನ್ನೋ ಶಾಕಿಂಗ್ ಸುದ್ದಿ ಲ್ಯಾಬ್ ರಿಪೋರ್ಟ್‍ನಲ್ಲಿ ಬಯಲಾಗಿದೆ. ಇದರ ಜೊತೆಗೆ ಪಾಲ್ಮೇಟಿಕ್ ಆ್ಯಸಿಡ್ ಅಂಶವೂ ಇದೆ. ಪೇಡಾಗೆ ಹಾಲು ಮಿಕ್ಸ್ ಮಾಡೋ ಬದಲು ವನಸ್ಪತಿ ಎಣ್ಣೆ ಬಳಕೆ ಮಾಡಿದ್ದು ಇನ್ನೊಂದು ಅನಾಹುತಕ್ಕೆ ಕಾರಣವಾಗಿದೆ.

    ಈ ಪ್ರಸಾದ ತಿಂದ್ರೆ ಏನಾಗುತ್ತೆ?: ಈ ವಿಷಯುಕ್ತ, ಕಲಬೆರೆಕೆ ಪ್ರಸಾದ ತಿಂದ್ರೆ ಹೊಟ್ಟೆನೋವು, ವಾಂತಿ-ಬೇಧಿ, ಜ್ವರ ಬಾಯಿಯ ಹುಣ್ಣು ಸೇರಿದಂತೆ ಟೈಫಾಯ್ಡ್, ಜಾಂಡೀಸ್‍ನಂತಹ ಕಾಯಿಲೆ ಬರಲಿದೆ. ಇಲ್ಲಿ ಸಂಪೂರ್ಣವಾಗಿ ಆಹಾರ ಸುರಕ್ಷತೆ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗಿದೆ ಅಂತಾ ವೈದ್ಯರು ಹೇಳ್ತಾರೆ. ಇನ್ನು ಲ್ಯಾಬ್ ಟೆಸ್ಟ್‍ಗೆ ಕೊಟ್ಟ ಸಾಯಿ ಭಕ್ತರಂತೂ ಈ ರಿಪೋರ್ಟ್‍ನಿಂದ ಕಂಗಾಲಾಗಿದ್ದಾರೆ.