Tag: ಸಹ ನಟಿ

  • ಮನೆಯಲ್ಲೇ ತಾಳಿ ಕಟ್ಟಿ ಸಹ ನಟಿ ಜೊತೆ ಮದುವೆ ನಾಟಕ, ಒಡವೆ ಎಗರಿಸಿ ಎಸ್ಕೇಪ್

    ಮನೆಯಲ್ಲೇ ತಾಳಿ ಕಟ್ಟಿ ಸಹ ನಟಿ ಜೊತೆ ಮದುವೆ ನಾಟಕ, ಒಡವೆ ಎಗರಿಸಿ ಎಸ್ಕೇಪ್

    – ಕುಣಿಗಲ್ ಗಿರಿಯ ಸಹೋದರನಿಂದ 180 ಗ್ರಾಂ. ಚಿನ್ನ ಕಳವು

    ಬೆಂಗಳೂರು: ಮನೆಯಲ್ಲೇ ತಾಳಿ ಕಟ್ಟಿ ಮದುವೆ ಆದಂತೆ ನಟಿಸಿ ಹಣ, ಒಡವೆ ಎಗರಿಸಿ ಖತರ್ನಾಕ್ ಕಳ್ಳ ಎಸ್ಕೇಪ್ ಆಗಿದ್ದಾನೆ. ಕುಖ್ಯಾತ ರೌಡಿಶೀಟರ್ ಕಂ ರಾಬರ್ ಕುಣಿಗಲ್ ಗಿರಿ ಅಣ್ಣ ಹರೀಶ್ ನಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.

    26 ವರ್ಷದ ಸ್ಯಾಂಡಲ್‍ವುಡ್ ಸಹ ಕಲಾವಿದೆಗೆ ವಂಚನೆ ಮಾಡಲಾಗಿದೆ. ರಾಜಗೋಪಾಲನಗರ ನಿವಾಸಿಯಾಗಿರುವ ಯುವತಿಗೆ ಪ್ರೀತಿ ಹೆಸರಲ್ಲಿ ಹರೀಶ್ ಹಿಂದೆ ಬಿದ್ದಿದ್ದ. ಬಳಿಕ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ್ದ. ನಂತರ ಯುವತಿ ಬಳಿಯಿದ್ದ 180 ಗ್ರಾಂ. ಚಿನ್ನಾಭರಣ, 2.5 ಲಕ್ಷ ನಗದು ಹಣ ದೋಚಿ ಎಸ್ಕೇಪ್ ಆಗಿದ್ದ.

    ಕೃತ್ಯದ ನಂತರ ಆರೋಪಿಯನ್ನು ಸಂಪರ್ಕಿಸಿದರೆ ಯುವತಿಗೆ ಅವಾಜ್ ಹಾಕಿದ್ದಾನಂತೆ. ನನ್ನ ತಮ್ಮ ಕುಣಿಗಲ್ ಗಿರಿ, ಕೊಟ್ಟಿರುವ ಕೇಸ್ ವಾಪಸ್ ತಗೋಂಡ್ರೆ ಸರಿ ಇಲ್ಲ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಒಡವೆ ಕೇಳಲು ಹರೀಶ್ ಮನೆ ಬಳಿ ಹೋದರೆ ಹರೀಶ್ ಪತ್ನಿ ಮತ್ತು ಅತ್ತೆ ಇಬ್ಬರೂ ಸೇರಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    ನನ್ನ ಮೈದುನ ಕುಣಿಗಲ್ ಗಿರಿ ಗೊತ್ತಲ್ಲಾ ಎಂದು ಅವಾಜ್ ಬೇರೆ ಹಾಕಿದ್ದಾರೆ. ಬಳಿಕ ಜೈಲಿನಿಂದ ಕರೆಮಾಡಿ ದೂರು ವಾಪಸ್ ತೆಗೆದುಕೊಳ್ಳುವಂತೆ ಕುಣಿಗಲ್ ಗಿರಿ ಧಮ್ಕಿ ಕೂಡ ಹಾಕಿದ್ದಾನಂತೆ. ಮೋಸ ಹೋದ ಯುವತಿಯಿಂದ ಕುಣಿಗಲ್ ಗಿರಿ ಹಾಗೂ ಆತನ ಅಣ್ಣ ಹರೀಶ್ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನ್ಯಾಯವಾಗಿರುವ ನನಗೆ ನ್ಯಾಯ ಕೊಡಿಸಬೇಕು. ನನ್ನ ಒಡವೆ ವಾಪಸ್ ಕೊಡಿಸಿ ಎಂದು ಮಹಿಳೆ ಅಂಗಲಾಚುತ್ತಿದ್ದಾರೆ.

  • ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಮೋಸ

    ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಮೋಸ

    ಬೆಂಗಳೂರು: ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಸಹ ನಿರ್ದೇಶಕನೊಬ್ಬ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಪ್ರಭು ಮೋಸ ಮಾಡಿದ ಸಹನಿರ್ದೇಶಕ. ಮೋಸ ಹೋದ ಯುವತಿ ಧಾರಾವಾಹಿಗಳಲ್ಲಿ ಸಹ ನಟಿಯಾಗಿ ನಟನೆ ಮಾಡಿಕೊಂಡಿದ್ದಳು. ಧಾರಾವಾಹಿ ನಟನೆ ಮಾಡುವಾಗ ಸಹ ನಿರ್ದೇಶಕನಾಗಿ ಪ್ರಭು ಪರಿಚಯನಾಗಿದ್ದು, ಆತನೇ ಯುವತಿಗೆ ಮೋಸ ಮಾಡಿ ತಲೆಮರಿಸಿಕೊಂಡಿದ್ದಾನೆ.

    ಧಾರವಾಹಿಗಳಲ್ಲಿ ಸಹನಟಿಯಾಗಿ ನಟಿಸುತ್ತಿದ್ದ ಯುವತಿಗೆ, ಸ್ಯಾಂಡಲ್‍ವುಡ್‍ನ ಮೇರು ನಟಿಯಾಗಿ ಮಾಡುತ್ತೀನಿ. ಕಡಿಮೆ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡೋದಕ್ಕೆ ಅವಕಾಶ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಜೊತೆಗೆ ಒಳ್ಳೆಯ ಸಿನಿಮಾಗಳಲ್ಲಿ ಅವಕಾಶ ಮಾಡಿಕೊಡುತ್ತೀನಿ ನಂಬಿ ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿ ಸಹ ನಿರ್ದೇಶಕ ಪ್ರಭು ಎಸ್ಕೇಪ್ ಆಗಿದ್ದಾನೆ. ಪ್ರಭು ನನ್ನ ರೀತಿಯಲ್ಲಿ ಹಲವರಿಗೆ ಅಮಿಷಗಳ್ನೊಡ್ಡಿ ಮೋಸ ಮಾಡಿದ್ದಾನೆಂದು ಸಹನಟಿ ಆರೋಪಿಸಿದ್ದಾಳೆ.

    ಯುವತಿ ಜೋಕಾಲಿ, ತಂಗಾಳಿ, ಸೇರಿ ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾಳೆ. ತನಗಾದ ಅನ್ಯಾಯ ಹಾಗೂ ವಂಚನೆ ಬಗ್ಗೆ ಯುವತಿ ಸಹ ನಿರ್ದೇಶಕನೆಂದು ನಂಬಿಸಿದ್ದ ಪ್ರಭು ವಿರುದ್ಧ ಯುವತಿ ಕೋತ್ತನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಪೊಲೀಸರು ವಂಚಕ ಪ್ರಭುವನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ. ಮೇರು ನಟಿ ಆಗುವಾಸೆಗೆ ಯುವತಿ ತನ್ನ ಬಳಿ ಇದ್ದ ಒಡವೆ ಹಾಗೂ ಹಣವನ್ನು ಕೊಟ್ಟು ಕೈ ಸುಟ್ಟಿಕೊಂಡಿದ್ದು ಕಳೆದುಕೊಂಡ ಹಣ ಒಡವೆಗಾಗಿ ಪರಿತಪಿಸುತ್ತಿದ್ದಾಳೆ.